Author: editor.udayarashmi@gmail.com

ಆಲಮಟ್ಟಿ: ರೈಲಿನಡಿ ಬಿದ್ದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಲಮಟ್ಟಿ ರೈಲು ನಿಲ್ದಾಣದ ಸಮೀಪ ಭಾನುವಾರ ರಾತ್ರಿ ಸಂಭವಿಸಿದೆ.ಮೃತ ಯುವಕ ವಿಜಯಪುರ ಬಳಿಯ ಮಖಣಾಪುರ ಗ್ರಾಮದ ನಾಗೇಶ ರಾಮು ತಳೇಕಡೆ (30) ಎಂದು ತಿಳಿದುಬಂದಿದೆ.ಆಲಮಟ್ಟಿ ರೈಲು ನಿಲ್ದಾಣದ ಸಮೀಪ ರಾತ್ರಿ ಈ ಘಟನೆ ನಡೆದಿದೆ. ವಿಜಯಪುರದ ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ವಿಜಯಪುರ: ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶರಣಬಸಪ್ಪ ದರ್ಶನಾಪೂರ ಅವರು ನವೆಂಬರ್ ೭ರ ಮಧ್ಯಾಹ್ನ ೧೨ ಗಂಟೆಗೆ ಪರಸನಹಳ್ಳಿದಿಂದ ತಾಳಿಕೋಟಿ, ಮುದ್ದೇಬಿಹಾಳ ಮಾರ್ಗವಾಗಿ ಹೊರಟು, ಮಧ್ಯಾಹ್ನ ೩ ಗಂಟೆಗೆ ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಸಭಾಂಗಣದಲ್ಲಿ ನಡೆಯುವ ಕೃಷ್ಣಾ ಮೇಲ್ದಂಡೆ ಯೋಜನೆಯ ೨೦೨೩-೨೪ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸುವರು.ಸಂಜೆ ೫:೩೦ ಗಂಟೆಗೆ ಆಲಮಟ್ಟಿಯಿಂದ ರಸ್ತೆ ಮೂಲಕ ಕಲಬುರಗಿಗೆ ಪ್ರಯಾಣ ಬೆಳೆಸುವರು ಎಂದು ಪ್ರಕಟಣೆ ತಿಳಿಸಿದೆ.

Read More

ಗ್ರಾಮ ಅಭಿವೃದ್ದಿ ಸಲಹಾ ಸಮಿತಿ ಸಭೆಯಲ್ಲಿ ಡಿಸಿ ಟಿ.ಭೂಬಾಲನ್ ಸೂಚನೆ ವಿಜಯಪುರ: ತೆರಿಗೆಯಿಂದ ಬಂದ ಹಣದಲ್ಲಿ ಮಸೂತಿ, ಕೂಡಗಿ, ತೆಲಗಿ ಮುತ್ತಗಿ & ಗೊಳಸಂಗಿಯಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವಂತೆ ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರೂ ಆದ ಬಸವನಬಾಗೇವಾಡಿ ಮತಕ್ಷೇತ್ರದ ಶಾಸಕ ಶಿವಾನಂದ ಪಾಟೀಲ ಸೂಚಿಸಿದರು.ಸೋಮವಾರ ಕೂಡಗಿ ಎನ್‌ಟಿಪಿಸಿ ಸಭಾಭವನದಲ್ಲಿ ನಡೆದ ೧೧ನೇ ಗ್ರಾಮ ಅಭಿವೃದ್ದಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಅವರು, ಇನ್ನೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತೀವ್ರವಾಗಿ ಪೂರ್ಣಗೊಳಿಸಬೇಕು ಹಾಗೂ ಬಾಕಿ ಪ್ರಾರಂಭಿಸದೇ ಇರುವ ಕಾಮಗಾರಿಗಳ ಬಗ್ಗೆ ಒಂದು ವಾರದಲ್ಲಿ ಕ್ರಮ ವಹಿಸಿ ಬಳಕೆ ಪ್ರಮಾಣ ಪತ್ರ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.ಎನ್‌ಟಿಪಿಸಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರನ್ನು ನೇಮಕಾತಿ ಮಾಡಿಕೊಳ್ಳಬೇಕು. ಸವಳು ಜವಳು ಕುರಿತು ಹೈದರಾಬಾದ್ ತಂತ್ರಜ್ಞರ ವರದಿ ಅಂಶ ಪರಿಶೀಲಿಸಿ ಕ್ರಮ ವಹಿಸಬೇಕು. ಬಾಧಿತ ಗ್ರಾಮದ ಗ್ರಾಮಸ್ಥರ ಸಮಸ್ಯೆಗಳ ಪರಿಹಾರಕ್ಕೆ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ನೇಮಿಸಬೇಕು. ಪುನರವಸತಿ ಮತ್ತು ಪುನರ್ ನಿರ್ಮಾಣದ ಅನುದಾನದಲ್ಲಿ…

Read More

ವಿಜಯಪುರ: ‌ಜಿಲ್ಲೆಯ ಮದಬಾವಿಯಲ್ಲಿ ಸೋಮವಾರ ಭಕ್ತ ಕನಕದಾಸರ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಯಿತು.ಇದಕ್ಕೂ ಮುನ್ನ ಕನಕದಾಸರ ಮೂರ್ತಿಯನ್ನು ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ತರಲಾಯಿತು. ಮಹಿಳೆಯರಿಂದ ಕುಂಬಮೇಳ ಜರುಗಿತು. ವಿವಿಧ ವಾದ್ಯ ಮತ್ತು ಗೊಂಬೆ ಕುಣಿತ, ಕೋಲಾಟ, ಡೊಳ್ಳಿನ ವಾದ್ಯದೊಂದಿಗೆ ಸಾದು ಮುತ್ಯಾನ ಕಟ್ಟೆಯಿಂದ ಯಲ್ಲಪ್ಪ ಮುತ್ಯಾನ ಗುಡಿಯವರೆಗೆ ಭಕ್ತ ಕನಕದಾಸರ ಮೂರ್ತಿಯಮೆರವಣಿಗೆ ಜರುಗಿತು. ನಂತರ ಮೂರ್ತಿಯ ಕುಂಬಾಭಿಷೇಕ ಮತ್ತು ಪುಷ್ಪಾರ್ಚನೆ ಕೂಡ ಜರುಗಿತು.ಈ ಸಂದರ್ಭದಲ್ಲಿ ಗ್ರಾಮದಹಾಲುಮತ ಸಮಾಜ ಮುಖಂಡ ನಿಂಗಪ್ಪ ಪೂಜಾರಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಇದೇ ರೀತಿ ರಾಮನಗೌಡ ಬಗಲಿ, ಔದಪ್ಪ ಪೂಜಾರಿ, ರಮೇಶ ಸಿಂದಗಿ, ಭೂತಾಳಿ ಹಿರೇಕುರುಬರ ಅವರನ್ನು ಕೂಡ ಸನ್ಮಾನಿಸಲಾಯಿತು.ಕಾರ್ಯಕ್ರಮದ ಸಾನಿದ್ಯವನ್ನು ಸಿದ್ದರಾದ ನಂದನೂರಿ ಮಹಾಸ್ವಾಮಿಗಳು ಮತ್ತು ಅತಿಥಿಗಳಾಗಿ ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಉಪಸ್ಥಿತರಿದ್ದರು.

Read More

ದೇವರಹಿಪ್ಪರಗಿ: ಹಿಟ್ಟಿನಹಳ್ಳಿ ಎಲ್.ಟಿ ಜಗದಂಬಾ ಪ್ರೌಢಶಾಲೆಯ ವಿದ್ಯಾರ್ಥಿನೀಯರು ವಿಭಾಗಮಟ್ಟದ ಪುಟ್‌ಬಾಲ್ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ತಾಲ್ಲೂಕಿನ ಹಿಟ್ಟಿನಹಳ್ಳಿ ಎಲ್.ಟಿಯ ಜಗದಂಬಾ ಪ್ರೌಢಶಾಲೆಯ ವಿದ್ಯಾರ್ಥಿನೀಯರು ವಿಜಯಪುರ ಸೈನಿಕಶಾಲೆಯಲ್ಲಿ ಜರುಗಿದ ವಿಭಾಗೀಯ ಮಟ್ಟದ ಪುಟ್‌ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ತಂಡದ ಗೆಲುವಿನಲ್ಲಿ ಆಟಗಾರ್ತಿಯರಾದ ಕವಿತಾ ರಾಠೋಡ, ಕೀರ್ತಿ ರಾಠೋಡ, ರಮ್ಯಾ ಜಾಧವ, ಕಾವೇರಿ ರಾಠೋಡ, ಶ್ರೇಯಾ ಪವಾರ, ರೇಖಾ ರಾಠೋಡ, ಅಂಜಲಿ ನಾಯಕ ರವರು ಪ್ರಮುಖ ಪಾತ್ರವಹಿಸಿದ್ದು, ಇದೇ ದಿ: ೧೮ ರಂದು ಬೆಂಗಳೂರಿನಲ್ಲಿ ಜರುಗುವ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.ತಂಡದ ಆಟಗಾರ್ತಿಯರ ಗೆಲುವಿಗೆ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ ಚವ್ಹಾಣ, ಮುಖ್ಯಗುರು ಪಿ.ಎಚ್.ಜಂಗಮಶೆಟ್ಟಿ, ಸಂಸ್ಥೆಯ ಕಾಲೇಜಿನ ಪ್ರಾಚಾರ್ಯ ಬಿ.ಎಫ್.ತಳವಾರ, ದೈಹಿಕ ಶಿಕ್ಷಕ ಸಂತೋಷ ಅಂಗಡಿ, ಅರವಿಂದ ಅಂಗಡಿ, ಎಸ್.ಕೆ.ದೊಡಮನಿ, ಪ್ರಕಾಶ ಅಂಗಡಿ ಸೇರಿದಂತೆ ಸಿಬ್ಬಂದಿ ಸನ್ಮಾನಿಸಿ, ಶುಭಹಾರೈಸಿದ್ದಾರೆ.

Read More

ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ನಿವಾಸಿ ಗಾಂಜಾ ಪ್ರಕರಣದ ಆರೋಪಿಯೊಬ್ಬನಿಗೆ ೫ವರ್ಷ ಜೈಲು ಶಿಕ್ಷೆ ವಿಧಿಸಿ ವಿಜಯಪುರ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಆದೇಶಿಸಿದ್ದಾರೆ.೨೦೧೮ ರಲ್ಲಿ ಆರೋಪಿ ಅರ್ಜುನ ಹರಣಶಿಕಾರಿ ನಿಡಗುಂದಿಯಿಂದ ತಾಲೂಕಿನ ಮಾದಿನಾಳ ಗ್ರಾಮ ಮಾರ್ಗವಾಗಿ ಬಿದರಕುಂದಿ ಗ್ರಾಮಕ್ಕೆ ಮೋಟಾರ ಸೈಕಲ್ ಮೇಲೆ ಗಾಂಜಾವನ್ನು ಚೀಲದಲ್ಲಿ ಹಾಕಿ ಕಟ್ಟಿಗೊಂಡು ಹೋಗುವಾಗ ಮುದ್ದೇಬಿಹಾಳ ಪೊಲೀಸರಿಗೆ ಅತಿಥಿಯಾಗಿದ್ದ. ಆರೋಪಿಯನ್ನ ಬಂಧಿಸಿ ಎಫ್‌ಆಯ್‌ಆರ್ ದಾಖಲಿಸಿದ್ದರು. ಸದರ ಪ್ರಕರಣ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆರೋಪಿಗೆ ೫೦ಸಾವಿರ ದಂಡ ಮತ್ತು ೫ವರ್ಷ ಜೈಲು ಶಿಕ್ಷೆ ನೀಡಿ ಆದೇಶಿಸಿದೆ.ಸದರ ಪ್ರಕರಣವನ್ನು ಭೇದಿಸಿ ದಾಳಿ ಕೈಗೊಂಡು ತನಿಖೆ ನಿರ್ವಹಿಸಿದ ಮುದ್ದೇಬಿಹಾಳ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧಿಕ್ಷರು ಶ್ಲಾಘಿಸಿದ್ದಾರೆ.

Read More

ಸಲೀಮಪಟೇಲ್ ಗೆಳೆಯರ ಬಳಗದಿಂದ ಶಾಸಕ ಅಶೋಕ ಮನಗೂಳಿ ಅವರಿಗೆ ಸನ್ಮಾನ ಸಿಂದಗಿ: ಗೆದ್ದಾಗ ಹಿಗ್ಗುವುದು, ಸೋತಾಗ ಕುಗ್ಗೊದು ಹೇಡಿತನದ ಲಕ್ಷಣ, ಸೋಲೇ ಗೆಲುವಿನ ಸೋಪಾನ. ಸೋಲು ಗೆಲುವು ಎರಡನ್ನೂ ಸಮಾನಾಗಿ ಸ್ವೀಕಾರ ಮಾಡುವವನೇ ನಿಜವಾದ ಜನನಾಯಕ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಸಲೀಮಪಟೇಲ್ ಮರ್ತೂರ್ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಉಪಚುನಾವಣೆಯಲ್ಲಿ ಸೋಲಿನ ಅನುಭವ ಪಡೆದ ನನಗೆ ಸಾಕಷ್ಟು ಮಾನಸಿಕ ಒತ್ತಡದಿಂದ ರಾಜಕೀಯ ಜೀವನವೇ ಸಾಕೆನ್ನುವಷ್ಟು ನೋವಾಗಿತ್ತು. ಆ ಸಮಯದಲ್ಲಿ ನನಗೆ ತಂದೆ ದಿ.ಎಂ.ಸಿ ಮನಗೂಳಿ ಅವರು ಹೇಳಿದ ಮಾತುಗಳು ನೆನಪಿಗೆ ಬಂದು ಬಲ ತುಂಬಿದವು. ಅವರು ತೋರಿದ ಮಾರ್ಗ ಬಿಡಬಾರದು ಎಂದು ಹಗಲು ರಾತ್ರಿಯೆನ್ನದೆ ಹಳ್ಳಿಗಳಲ್ಲಿ ಸಂಚರಿಸಿ ೨೭೦ ಭೂತಮಟ್ಟದಲ್ಲಿ ಸಂಘಟನೆ ಮಾಡಿದ ಪ್ರಯತ್ನಕ್ಕೆ ಇಂದು ಈ ಸನ್ಮಾನ ದೊರೆತಿದೆ. ಈ ಗೆಲುವು ನನ್ನದಲ್ಲ, ಸಮಸ್ತ ಕ್ಷೇತ್ರದ ಜನರ ಗೆಲುವು ಎಂದು ಹೇಳಿದರು.ನಗರದಲ್ಲಿ ವಿದ್ಯುತ್ ಕಂಬ ಹಾಗೂ ವಿದ್ಯುತ್ ಜ್ಯೋತಿ ಅಳವಡಿಕೆಗೆ…

Read More

ಆಲಮಟ್ಟಿ: ಒಂದೆಡೆ ಸ್ಥಗಿತಗೊಂಡಿರುವ ಜಲಾಶಯಗಳ ಒಳಹರಿವು, ಮತ್ತೊಂದೆಡೆ ಕಾಲುವೆಯ ನೀರಿಗಾಗಿ ಹೆಚ್ಚುತ್ತಿರುವ ರೈತರ ಬೇಡಿಕೆ, ಇವುಗಳ ಮಧ್ಯೆ ಕಾಲುವೆಗೆ ನೀರು ಹರಿಸುವ ನಿರ್ಣಯದತ್ತ ಕೃಷ್ಙಾ ಅಚ್ಚುಕಟ್ಟು ಪ್ರದೇಶದ ರೈತರ ಚಿತ್ತ ನೆಟ್ಟಿದೆ.ಇದಕ್ಕೆಲ್ಲಾ ಉತ್ತರ ಎಂಬಂತೆ ಕೃಷ್ಙಾ ಅಚ್ಚುಕಟ್ಟು ಪ್ರದೇಶದ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನ.೭ ರಂದು ಇಲ್ಲಿಯ ಕೆಬಿಜೆಎನ್ ಎಲ್ ವ್ಯವಸ್ಥಾಪಕ ನಿರ್ದೇಶಕರ ಸಭಾಂಗಣದಲ್ಲಿ ಮಧ್ಯಾಹ್ನ ೩ ಕ್ಕೆ ನಡೆಯಲಿದೆ ಎಂದು ಐಸಿಸಿ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.ಐಸಿಸಿ ಅಧ್ಯಕ್ಷರೂ ಆಗಿರುವ ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಲಿದ್ದು, ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ೫ ಜಿಲ್ಲೆಗಳ ಶಾಸಕರು, ಸಚಿವರು, ಸಂಸದರು, ಜಿಲ್ಲಾಧಿಕಾರಿಗಳು,ಕೃಷಿ ಅಧಿಕಾರಿಗಳು ಸದಸ್ಯರಿದ್ದಾರೆ. ಕಾಲುವೆಗೆ ನೀರು ಹರಿಸುವ ಅವಧಿ ಡಿ.೪ ರವರೆಗೂ ಇದ್ದು, ಇನ್ನೂ ತಿಂಗಳ ಮೊದಲೇ ಸಭೆ ಕರೆದು, ನೀರು ಕೊಡುವ ಬಗ್ಗೆ ಸ್ಪಷ್ಟ ಉತ್ತರ ಸಭೆ ನೀಡಲಿದೆ. ನಿತ್ಯವೂ ನೀರಿಗಾಗಿ ಪ್ರತಿಭಟನೆ;ಆಲಮಟ್ಟಿ, ನಾರಾಯಣಪುರ ಜಲಾಶಯಗಳ ಒಳಹರಿವು ಸ್ಥಗಿತಗೊಂಡು ಹಲವು ದಿನ ಕಂಡಿವೆ. ಆಲಮಟ್ಟಿ ಎಡದಂಡೆ…

Read More

ದೇವರಹಿಪ್ಪರಗಿ: ಪಟ್ಟಣದ ಆಯೆಶಾ ಮೈಬೂಬ್ ನಧಾಫ್ ಕರ್ನಾಟಕ ರಾಜ್ಯ ನಧಾಫ್, ಪಿಂಜಾರ ಸಂಘ ನೀಡುವ ೨೦೨೩ರ ಪ್ರತಿಭಾವಂತ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಪುರಸ್ಕಾರಕ್ಕೆ ಆಯ್ಕೆಯಾಗಿ ಸನ್ಮಾನಿತರಾದರು.ಕರ್ನಾಟಕ ರಾಜ್ಯ ನಧಾಫ್, ಪಿಂಜಾರ ಸಂಘ ಶಿವಮೊಗ್ಗಾ ಹಾಗೂ ಕೊಪ್ಪಳ ಜಿಲ್ಲಾ ಘಟಕದ ಸಹಯೋಗದಲ್ಲಿ ಶನಿವಾರ ಜರುಗಿದ ೩೧ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಮತ್ತು ಕರ್ನಾಟಕ ೫೦ ರ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ೨೦೨೩ನೇ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.೯೬ ಫಲಿತಾಂಶ ಪಡೆದ ಸಮುದಾಯದ ವಿದ್ಯಾರ್ಥಿನಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಎಚ್.ಖಲೀಲ್‌ಪಾಷಾ ಸೇರಿದಂತೆ ಪದಾಧಿಕಾರಿಗಳು ಇದ್ದರು.

Read More

ನಿಯಮಬಾಹಿರ ವೇತನ ಪಾವತಿ | ಅಪರ ಆಯುಕ್ತೆ ಜಯಶ್ರೀ ಆದೇಶ ಮುದ್ದೇಬಿಹಾಳ: ನಿಯಮ ಬಾಹಿರವಾಗಿ ವೇತನ ಪಾವತಿಸಿದ ಆರೋಪದಡಿ ಇಲ್ಲಿನ ಕ್ಷೆತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ೬ ಸಿಬ್ಬಂದಿಯನ್ನು ಅಮಾನತ್ತು ಮಾಡಿ ಶಿಕ್ಷಣ ಇಲಾಖೆಯ ಧಾರವಾಡದ ಅಪರ್ ಆಯುಕ್ತೆ ಜಯಶ್ರೀ ಶಿಂತ್ರಿ ಆದೇಶಿಸಿದ್ದಾರೆ.ಹಿಂದೆ ಇಲ್ಲಿನ ಕಚೇರಿಯಲ್ಲಿ ಸೇವೆ ಸಲ್ಲಿಸಿದ ಪತ್ರಾಂಕಿತ ವ್ಯವಸ್ಥಾಪಕ ಎ.ಎಸ್.ಹಾಲ್ಯಾಳ, ಪ್ರ.ದ.ಸ ಎಸ್.ಎಸ್.ಕಲ್ಬುರ್ಗಿ, ಪ್ರ.ದ.ಸ ಎಸ್.ಸಿ.ಮುರಗಾನವರ, ಸಧ್ಯ ಸೇವೆ ಸಲ್ಲಿಸುತ್ತಿರುವ ಅಧೀಕ್ಷಕಿ ಎನ್.ಬಿ.ರೂಡಗಿ, ದ್ವಿ.ದ.ಸ ಎಸ್.ಸಿ.ಹಿರೇಮಠ, ಮತ್ತು ಪ್ರ.ದ.ಸ ಸಿದ್ದನಗೌಡ ಪಾಟೀಲ ಅಮಾನತ್ತಾದ ಸಿಬ್ಬಂದಿಗಳು.ತಾಲೂಕು ವ್ಯಾಪ್ತಿಯಲ್ಲಿ ನಿಯಮಬಾಹಿರ ಶಿಕ್ಷಕರ ಅಮಾನತ್ತು ಹಾಗೂ ಕೆಲಸಕ್ಕೆ ಗೈರು ಉಳಿದ ಶಿಕ್ಷಕರಿಗೆ ವೇತನ ಪಾವತಿ ಮತ್ತು ನಿವೃತ್ತಿ ಹೊಂದಿದ ಶಿಕ್ಷಕರಿಗೂ ಸಹ ವೇತನ ಪಾವತಿ ಆದ ಬಗ್ಗೆ ತಪಾಸಣೆ ನಡೆಸಿದ ಬಳಿಕ ಕಚೇರಿ ಸಿಬ್ಬಂದಿ ಸರ್ಕಾರಿ ನೌಕರರ ನಡುವಳಿಕೆಗೆ ಸಲ್ಲದ ರೀತಿಯಲ್ಲಿ ನಡೆದುಕೊಂಡು ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು, ೨೦೨೧ ರ ನಿಯಮಗಳನ್ನು ಉಲ್ಲಂಘಿಸಿರುವದು ಮೇಲ್ನೋಟಕ್ಕೆ ಕಂಡು ಬಂದಿರುವದರಿಂದ ಕರ್ನಾಟಕ ನಾಗರೀಕ ಸೇವಾ…

Read More