ವಿಜಯಪುರ: ಮಕ್ಕಳ ಕುತೂಹಲ, ಆಸಕ್ತಿ, ಬುದ್ಧಿಮತ್ತೆ, ಸೃಜನಶೀಲತೆಗೆ ಈ ವಸ್ತು ಪ್ರದರ್ಶನ ಕನ್ನಡಿಯಾಗಿತ್ತು. ಮಕ್ಕಳ ಕಲಿಕೆಯಲ್ಲಿ ಉತ್ಸಾಹ-ಹುಮ್ಮಸ್ಸು, ಕುತೂಹಲ ಬೆಳೆಸುವಲ್ಲಿ ಇಂತಹ ವಸ್ತು ಪ್ರದರ್ಶನಗಳು ಪುಷ್ಟಿ ನೀಡುತ್ತವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ನಗರದ ಪದ್ಮಾoಜಲಿ ಸ್ಕೂಲ್ಸ್ ವತಿಯಿಂದ ಹಮ್ಮಿಕೊಂಡ ‘ಜ್ಞಾನ ಅನ್ವೇಷಣೆ ಪ್ರದರ್ಶನ’ ಶೀರ್ಷಿಕೆಯಡಿಯಲ್ಲಿ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿ ಚಿಂತನೆ-ಆಲೋಚನೆ ಕೌಶಲ್ಯ ಬೆಳೆಯುತ್ತದೆ.ಅವರ ಕಲ್ಪನೆಗಳಿಗೆ ಮೂರ್ತರೂಪ ಸಿಗುತ್ತದೆ. ರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣ ಪಡೆಯುವಲ್ಲಿ ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ. ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸುವಲ್ಲಿ ಈ ವಸ್ತು ಪ್ರದರ್ಶನ ಪರಿಪೂರ್ಣವಾಗಿದೆ ಎಂದು ಹೇಳಿದರು.
ನಿರ್ಣಾಯಕಿ ಸುಜಾತಾ ಮಮದಾಪುರ ಮಾತನಾಡಿದರು.
ಶಾಲಾ ಮುಖ್ಯ ಶಿಕ್ಷಕಿ ಆರ್ ಆರ್ ಕೋರೆ ಮಾತನಾಡಿದರು.
ನಿರ್ಣಾಯಕರಾಗಿ ಜಯಶ್ರೀ ಪಾಟೀಲ, ವಿ ಆರ್ ಕಟ್ಟಿ ಕಾರ್ಯ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ಅನಿತಾ ಸೊನ್ನಗಿ,
ಶಿಕ್ಷಕರಾದ ಅನಿಲಕುಮಾರ ನಾಯಿಕ, ಅಶ್ವಿನಿ ಬಿರಾದಾರ, ಪ್ರಮೋದಾ ಬಿರಾದಾರ, ಶ್ವೇತಾ ಆಕಳವಾಡಿ,
ಶೋಭಾ ನಿಂಬರಗಿ, ಮಧು ಪೂಜಾರಿ,ಸಂಗಮ, ಸುಶ್ಮಾ,ತೈಸಿನ್,ಪಾರಿಜಾತ ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕರು, ಸಿಬ್ಬಂದಿ ವರ್ಗ, ಪಾಲಕರು, ಮಕ್ಕಳು ಪಾಲ್ಗೊಂಡಿದ್ದರು.
ಸೌರಶಕ್ತಿ ಚಾಲಿತ ನೀರಾವರಿ, ಜನಸಂಖ್ಯೆ ಹೆಚ್ಚಳ ಪರಿಣಾಮ, ವಾಯು ಮಾಲಿನ್ಯ ಜಾಗೃತಿ, ಜ್ವಾಲಾಮುಖಿ, ಚಂದ್ರಯಾನ-3, ಸಾವಯವ ಕೃಷಿ, ರಾಷ್ಟ್ರೀಯ ಚಿಹ್ನೆಗಳು, ಆಮ್ಲ ಮಳೆ, ಜಲ ಸಂರಕ್ಷಣೆ, ಹರಪ್ಪ ನಾಗರಿಕತೆ, ಭೂಮಿ ಸಂರಕ್ಷಣೆ, ಸುಪ್ರೀಂ ಕೋರ್ಟ್,ಹೈಕೋರ್ಟ್, ಜಿಲ್ಲಾ ಕೋರ್ಟ್ ಸೇರಿದಂತೆ ಅನೇಕ ವಿಷಯಗಳ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ವಸ್ತು ಪ್ರದರ್ಶನದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

