ಲೇಖನ
– ಅವಿನಾಶ ಸೆರೆಮನಿ
ಬೈಲಹೊಂಗಲ
ಬೆಳಗಾವಿ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಸ್ನೇಹ ಎಂಬರೆಡಕ್ಷರ ಅಪಾರವಾದ ಅರ್ಥವನ್ನು ಹೊಂದಿದೆ. ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು
ಪರಸ್ಪರ ಪರಿಚಯವಾಗುತ ನಂಬಿಕೆಯ ಸೇತುವೆಯಡಿ
ಜನ್ಮ ತಾಳುವುದೇ ಸ್ನೇಹ. ದೇಹಗಳೆರದಾದರೂ ಜೀವಗಳು ಒಂದೇ. ಪ್ರೀತಿ ವಿಶ್ವಾಸಗಳೇ ಸ್ನೇಹದ ಉಸಿರು
ಮಾತಲ್ಲೇ ಆರಂಭವಾಗುತ ಗೆಳೆತನ ದಿನಗಳು ಕಳೆದಂತೆ ಆತ್ಮೀಯತೆಯನು ಬೆಸೆದು ಒಬ್ಬರಿಗೊಬ್ಬರು ಹಚ್ಚಿಕೊಂಡು ಬಿಟ್ಟಿರಲಾಗದಷ್ಟು ನಂಟು ಬೆಳೆಯುತ್ತದೆ.
ಜಾತಿಯ ಅರಿವಿಲ್ಲ. ಬಡವ ಶ್ರೀಮಂತನೆಂಬ ಬೇಧವಿಲ್ಲದೆ ಮನಸು ಮನಸುಗಳ ನಡುವೆ ಮಾತನಾಡುತಲೆ ಅಂತರಂಗದಿ ಕುಡಿಯೊಡೆಯುವ ಸ್ನೇಹ ಬಂಧನ. ಎಲ್ಲ ಬಂಧವನ್ನು ಮೀರಿದ ಅಗಣಿತ ಭಾವನೆಗಳ ಸಂಗಮದ ಬಾಂಧವ್ಯದ ಗಣಿಯಿದು. ಅರಿವಿನ ಆಲಯದಿ ಒಬ್ಬರಿಗೊಬ್ಬರನ್ನು ಬಿಟ್ಟುಕೊಡದೆ ರಹಸ್ಯವಾದ ಸುಖ ದುಃಖಗಳನ್ನು ಹಂಚಿಕೊಳ್ಳುತ ಸಾಂತ್ವನ ಹೇಳುತ್ತಾ ಕುಟುಂಬದವರಂತೆ ಬೆರೆಯತ ಸದಾ ಜೊತೆಗಿರುವರು.
ಸನ್ನಿವೇಶಗಳು, ಮನುಜರ ನಡುವೆ ಬಂಧನ ಬೆಸೆಯುತ ಸ್ನೇಹದ ಪರಿಧಿಯನ್ನು ಚಾಚುವುದು. ಸಣ್ಣ ಸಣ್ಣ ವಿಷಯಗಳನ್ನು ಮಾತನಾಡುತ ಸಲುಗೆಯಲ್ಲೇ ಮನದ ಭಾವಗಳನ್ನು ಹೊಸೆಯುತ್ತಾ ,ಅಭಿರುಚಿಗಳ ಅರಿಯುತ್ತಾ ಒಂದಾಗಿ ನಲಿಯುತ ಎಲ್ಲ ಸಮಯದಲ್ಲಿ ಪರಸ್ಪರ ನೋವು ನಲಿವುಗಳಲ್ಲಿ ಭಾಗಿಯಾಗುತ ಒಂದೇ ಕುಟುಂಬದವರಂತೆ ಜೊತೆಯಾಗಿ ಇರುವ ಬಂಧವೆ ಸ್ನೇಹ ಬಂಧನ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಅರಿತು ಬೆರೆಯುವೆವು ಒಂದೇ ಮನೆಯವರಂತೆ ಸದಾ ಜೊತೆಗಿರುತ.
ಆಗಾಗ ಚೇಷ್ಟೆ ತರ್ಲೆಗಳ ಮಾಡುತ ಜಗಳವಾಡುತ, ಕಾಡುತ ಮತ್ತೆ ಮೊದಲಿನಂತೆ ಸದಾ ಮಮತೆ ಕಾಳಜಿ ವಹಿಸುತ ಸದಾ ಹಸಿರಿನಂತೆ ನಳನಳಿಸುತ ಬೇರಿನಂತೆ ಗಟ್ಟಿಯಾಗುತ ಹೋಗುವುದು.ಕೋಪ ತಾಪಗಳನ್ನು ಸಹಿಸುತ್ತ ಪ್ರೀತಿಯಿಂದ ಮಾತನಾಡುತ ಏನನ್ನು ಬಯಸದೆ ಇರುವ ನಿಷ್ಕಲ್ಮಶವಾದ ಬಂಧನವೇ ಸ್ನೇಹ.ಆಗಾಗ ಮಾತಿನಲ್ಲಿ ಏರುಪೇರಾದಾಗ ಜಗಳ ಆಗುವುದು ಸಹಜ ಹಾಗಂತ ಸ್ನೇಹವನ್ನೇ ಕಳಚಬಾರದು ಕ್ಷಮೆ ಕೇಳುತ ಮತ್ತೆ ಮೊದಲಿನಂತೆ ಸ್ನೇಹಿತರಾಗಿರಬೇಕು.
ಗೆಳೆತನದ ಮಹತ್ವ

ಗೆಳೆತನದ ಮಹತ್ವ ಅಗಾಧ ಅನುಪಮ ಪದಗಳಲ್ಲಿ ಬಣ್ಣಿಸಲು ಅಸದಳ ಆದರೂ ಕೆಲವೊಂದನ್ನು ಹೇಳಲು ಇಚ್ಛಿಸುವೆ.
1.ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸುವಲ್ಲಿ ಸದಾ ಜೊತೆಗಿರುತ್ತಾರೆ.
2.ಯಾವುದೇ ಕಾರ್ಯಕ್ಕೂ ಮುಂದಾದರೂ ಪ್ರೋತ್ಸಾಹ ನೀಡುತ ಯಶಸ್ವಿನತ್ತ ಸಾಗಲು ಪ್ರೇರೇಪಿಸುತ್ತಾರೆ
3.ಏಕಾಂತವನ್ನು ದೂರ ಮಾಡಿ ನಮ್ಮೊಂದಿಗೆ ಸಮಯ ಕಳೆಯುವರು
4.ಪ್ರತಿ ಹಂತದಲ್ಲಿ ಆತ್ಮವಿಶ್ವಾಸವನ್ನು ತುಂಬುತ ಸಾಧಿಸಲು ಭರವಸೆಯ ತುಂಬುವರು
5.ಗುರುವಂತೆ ಮಾರ್ಗದರ್ಶನ ಮಾಡುತ ಸಲಹೆಗಳನ್ನು ಸೂಕ್ತ ರೀತಿಯಲ್ಲಿ ನೀಡುತ್ತಾರೆ
6.ಸ್ನೇಹದಿಂದ ಮನಸನು ಹಗುರಾಗಿಸಿ ಹೊಸದತ್ತ
ಸಾಗಲು ಉತ್ತೇಜಿಸುತ್ತಾರೆ.
7.ತಂದೆಯಂತೆ ಪ್ರೀತಿ ತೋರುತ ಅಮ್ಮನಂತೆ ಮಮತೆ ತೋರುವರು
8.ಎಂತಹ ಸಂದರ್ಭದಲ್ಲಿ ಜೊತೆಗಿರುತ ಧೈರ್ಯ ತುಂಬುವರು
9.ಪರಸ್ಪರ ಭಾವನೆಗಳನು ಅರಿತು ಅರ್ಥಮಾಡಿಕೊಳ್ಳುವರು
ಏನೇ ಆದರೂ ದೂರ ಹೋಗದೆ ಎಷ್ಟೇ ಕೋಪಿಸಿಕೊಂಡರು ಮತ್ತೆ ಕ್ಷಮೆ ಕೇಳುತ್ತಾ ಒಂದುಗೂಡುತ ಸಾಗುತ ಯಾವುದೇ ಸ್ವಾರ್ಥವನ್ನು ಇಟ್ಟುಕೊಳ್ಳದೆ ಎರಡು ದೇಹ ಒಂದೇ ಜೀವ ಎಂಬಂತೆ ಬದುಕುವ ಸ್ನೇಹ ಎಂದೆಂದಿಗೂ ಅಮರ.ಜೀವನವು ಸಂತಸದಿ ಸಾಗುತಿರುತ್ತದೆ.ಉಸಿರು ಹೋದರು. ಸ್ನೇಹ ಅಜರಾಮರ. ಸ್ನೇಹವು ಜೀವನಕೆ ಉಸಿರಾಗಲಿ ಚೈತನ್ಯದ ಚಿಲುಮೆಯಾಗಲಿ


