Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ವಿದ್ಯಾರ್ಥಿಗಳು ರಾಣಿ ಚೆನ್ನಮ್ಮ ಸಂಗೊಳ್ಳಿ ರಾಯಣ್ಣನಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಂಡು ತಮ್ಮ ಜೀವನದಲ್ಲಿ ಮುಂದುವರಿಯಬೇಕು ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದರು.ಅವರು ನಗರದ ಶರಣು ವಿದ್ಯಾವರ್ಧಕ ಸಂಸ್ಥೆಯ ವೀರರಾಣಿ ಕಿತ್ತೂರು ಚೆನ್ನಮ್ಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಾಂತೇಶ್ವರ ಸಂಸ್ಕೃತ ಪಾಠ ಶಾಲೆಯ 16ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಇಂದಿನ ಯುವ ಜನಾಂಗ ಪಾಶ್ಚಿಮಾತ್ಯ ದೇಶಗಳ ಆಚರಣೆಗಳ ಬಗ್ಗೆ ಮೊರೆ ಹೋಗುತ್ತಿರುವುದು ದುರಂತ. ನಮ್ಮ ದೇಶಕ್ಕೆ ದೊಡ್ಡ ಇತಿಹಾಸವಿದೆ. ದೇಶದ ಸ್ವತಂತ್ರಕ್ಕಾಗಿ ಅಂದಾಜು ಮೂರು ಲಕ್ಷ 50,000 ಜನ ಪ್ರಾಣ ಕಳೆದುಕೊಂಡಿದ್ದಾರೆ. ಅಂತಹವರ ಪ್ರಾಣತ್ಯಾಗದ ಬಗ್ಗೆ ನಾವೆಲ್ಲಾ ಸ್ಮರಿಸಬೇಕು. ನಾವೆಲ್ಲ ವಿದೇಶಿ ಮೋಹಕ್ಕೆ ಒಳಗಾಗದೆ ಭಾರತೀಯ ಸಂಸ್ಕೃತಿಯನ್ನು ಅಪ್ಪಿಕೊಳ್ಳಬೇಕು ಎಂದರು.ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರಿನಲ್ಲಿ, ಹಿಂಡಿಯವರು ಶಾಲೆ ತೆರೆದಿದ್ದು ಸಂತಸ ತಂದಿದೆ. ಇಂಡಿ ನಾಗರಿಕರು ಅವರಿಗೆ ಸಹಕಾರ ನೀಡಬೇಕು ಎಂದು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕಿನ ಕತಕನಹಳ್ಳಿಯ ಮಾತೋಶ್ರೀ ಶಂಕ್ರೆಮ್ಮಾತಾಯಿ ಪ್ರಾಥಮಿಕ ಶಾಲೆಯ ೫ ನೇ ವರ್ಗದ ಒಟ್ಟು ೨೧ ವಿದ್ಯಾರ್ಥಿಗಳು ೨೦೨೫-೨೬ ನೇ ಶೈಕ್ಷಣಿಕ ವರ್ಷದ ಅಖಿಲ ಭಾರತೀಯ ಸೈನಿಕ ಶಾಲೆಯ ಪ್ರವೇಶ ಪೂರ್ವ ಪರೀಕ್ಷೆಗೆ ಕುಳಿತು, ಒಟ್ಟು ೧೪ ವಿದ್ಯಾರ್ಥಿಗಳು ಉತ್ತಮ ಅಂಕಗಳು ಪಡೆದು ಅಮೋಘ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ವಿದ್ಯಾರ್ಥಿಗಳಾದ ಸದಾಶಿವ ರವಿ ಬಗಲಿ (೨೪೩), ಪ್ರದೀಪ ಸೀತಾರಾಮ ವಿಧಾತೆ (೨೧೪), ಶ್ರೀನಿಧಿ ಭೀಮಾಶಂಕರ ವಾಲಿಕಾರ (೧೯೧), ಭೀಮರಾಯ ಪ್ರಕಾಶ ಬಗಲಿ (೧೮೩), ಗುರುರಾಜ ರಮೇಶ ಕೊಟ್ಯಾಳ (೧೭೨), ವಿನಾಯಕ ಯಲ್ಲಪ್ಪ ಜೈನಾಪೂರ (೧೬೩), ಈ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳು ಪಡೆದು ಸೈನಿಕ ಶಾಲೆಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ರಾಜಕೀಯ ಸೇರಿದಂತೆ ವಿಜ್ಞಾನ ತಂತ್ರಜ್ಞಾನ ಮತ್ತು ಪ್ರತಿ ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ ಎಂದು ತಡವಲಗಾ ಸರಕಾರಿ ಆಸ್ಪತ್ರೆ ವೈದ್ಯಾಥಿಕಾರಿ ಡಾ|| ಶ್ರೀಮತಿ ಕಿರಣ ಗಜಾಕೋಶ ಹೇಳಿದರು.ಇಂಡಿಯ ಸ್ಟೇಷನ್ದ ಸರಕಾರಿ ಶಾಲೆಯಲ್ಲಿ ಆಯೋಜಿಸಿದ ಕೃಷಿವಿಜ್ಞಾನ ಕೇಂದ್ರ ಮತ್ತು ಪ್ಯಾರಾದೀಪ ಪಾಸ್ಪೇಟ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು.ದಂತ ವೈದ್ಯೆ ಡಾ|| ಅರುಣಾ ಕದಮ ಮಾತನಾಡಿ ಮಹಿಳೆಯರು ಶಾಂತ ಶಕ್ತಿವಂತಳು, ಅವಳು ಪ್ರತಿ ಮನೆಯ ಬೆಳಕು, ಮಕ್ಕಳನ್ನು ಬೆಳೆಸುತ್ತಾಳೆ, ಉದ್ಯೋಗವನ್ನು ನಿರ್ವಹಿಸುತ್ತಾಳೆ, ಅವಳು ಶತಮಾನದ ಸಂಕೋಲೆಯನ್ನು ದಾಟಿ ಮುಂದೆ ಸಾಗಿದ್ದಾಳೆ ಅರ್ಥಿಕ ಸ್ವಾವಲಂಬಿ ಯಾಗಿದ್ದಾಳೆ ಎಂದರು.ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ವೀಣಾ ಚಂದಾವರಿ, ಪ್ಯಾರಾದೀಪ ಪಾಸ್ಪೇಟ್ ಸಾವಯುವ ಗೊಬ್ಬರದ ಸಂದೀಪ ಬಿರಾದಾರ, ಜೀವ ವಿಮೆಯ ಮಲ್ಲಿಕಾರ್ಜುನ ಕಂಬಳಿ, ಮುಖ್ಯ ಗುರುಗಳು ಹೊಸಮನಿ ಮತ್ತು ಜಹೀದಾ ಹುಂಡೆಕರ ಮಾತನಾಡಿದರು.ಜೀವ ವಿಮೆಯ ಪ್ರತಿನಿಧಿಗಳು, ಪಾಸ್ಪೇಟ್ ಗೊಬ್ಬರದ ಸಿಬ್ಬಂದಿ ಮತ್ತಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಮಕ್ಕಳಿಗೆ ಕೇವಲ ಶಿಕ್ಷಣ ನೀಡುವುದಕ್ಕಿಂತಲೂ ಉತ್ತಮ ಸಂಸ್ಕಾರಗಳನ್ನು ಬೆಳೆಸುವುದು ಪಾಲಕರು ಮತ್ತು ಶಿಕ್ಷಕರ ಪ್ರಮುಖ ಜವಾಬ್ದಾರಿ ಎಂದು ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ದೇವರು ಹೇಳಿದರು.ಪಟ್ಟಣದ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ನಡೆದ 121ನೇ ಶಾಲಾ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಮಾತನಾಡಿ, ಈ ಕೆಜಿಎಸ್ ಶಾಲೆ ಈಗ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಪರಿವರ್ತನೆಯಾಗಿದ್ದು, ಮುಂದಿನ ದಿನಗಳಲ್ಲಿ ಹೆಮ್ಮರದಂತೆ ಬೆಳೆಯುತ್ತಾ ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲಿದೆ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಎನ್.ಎ. ಬನಸೋಡೆ ಮಾತನಾಡಿದರು. ವರದಿ ವಾಚನವನ್ನು ಆರ್.ಎಚ್. ನಾವಿ ನೆರವೇರಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ರೂಪಾ ಗಿಡ್ಡಪ್ಪಗೋಳ, ರಾಜಮಾ ನದಾಫ್, ಅಶೋಕ ಗಿಡ್ಡಪ್ಪಗೋಳ, ಲಕ್ಷ್ಮೀ ಜಿಡ್ಡಿಬಾಗಿಲ,…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ನಾಡಿನ ಪ್ರತಿಯೊಂದು ಹಳ್ಳಿ ಪಟ್ಟಣ ನಗರ ಪ್ರದೇಶಗಳಲ್ಲಿ ಸಂಗೀತ ಲೋಕದ ಜ್ಞಾನ ಪಡೆಯಲು ಹೊಸ ಹೊಸ ಪ್ರತಿಭೆಗಳು ಉದಯಿಸಬೇಕು ಎಂದು ಕನಸು ಕಂಡಂತೆ ವಿಶ್ವಕ್ಕೆ ಗಾಯನ ಲೋಕವನ್ನಷ್ಟೆ ಅಲ್ಲದೆ ಸಂಗೀತ ಕ್ಷೇತ್ರದಲ್ಲಿ ಪ್ರತಿಭಾನ್ವಿತ ವಿವಿಧತೆಯ ಕಲಾವಿದರನ್ನು ಪರಿಚಯಿಸಿದ ಮಹಾನ್ ದೈವಿಶಕ್ತಿಯ ಪುರುಷರು ಗುರು ಪುಟ್ಟರಾಜ ಗವಾಯಿಗಳು ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.ಕೊಲ್ಹಾರ ತಾಲೂಕ ಜಾನಪದ ಪರಿಷತ್ ಹಾಗೂ ಕಲಾವಿದರ ಬಳಗದವರು ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದ ಕಂಬಿ ಮಂಟಪದ ಆವರಣದಲ್ಲಿ ಹಮ್ಮಿಕೊಂಡ ಗದುಗಿನ ವಿರೇಶ್ವರ ಪುಣ್ಯಾಶ್ರಮದ ಹಿಂದಿನ ಪೀಠಾಧಿಕಾರಿಗಳಾದ ಪಂಡಿತ ಪುಟ್ಟರಾಜ ಗವಾಯಿವರ ಜನ್ಮ ದಿನೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಆದುನಿಕ ಜಗತ್ತಿನಲ್ಲಿ ಹಿಂದಿನ ತಲೆಮಾರಿನ ಹಳೇ ಕಾಲದ ಭಜನೆ, ಕೀರ್ತನೆ, ಹರಿದಾಸ ಪುರಾಣ ಪ್ರವಚನ ಆಧುನಿಕ ಶೈಲಿಯ ಸಂಗೀತ ವಾದ್ಯಗಳ ಶಿಕ್ಷಣ ಕಲಿಯುವದರ ಜೊತೆಗೆ ಗಾಯನ ಲೋಕದಲ್ಲಿ ಮಾತ್ರವಲ್ಲದೇ ಇನ್ನೀತರ ಕಲೆಯನ್ನು ಉಳಿಸಿಕೊಂಡು ಮುಂದಿನ ಕಲೆಯನ್ನು ಆರಾಧಿಸುವ ಆಸಕ್ತ…
ಹಲಸಂಗಿ ದರೋಡೆ ಪ್ರಕರಣ ಭೇದಿಸಿದ ಪೊಲೀಸರಿಗೆ ಚಡಚಣ ಹಾಗೂ ಇಂಡಿ ಸರಾಫ್ ವ್ಯಾಪಾರಿಗಳಿಂದ ಸನ್ಮಾನ ಉದಯರಶ್ಮಿ ದಿನಪತ್ರಿಕೆ ಚಡಚಣ: ಹಲಸಂಗಿ ಗ್ರಾಮದಲ್ಲಿ ಜನೇವರಿ 26 ರಂದು ನಡೆದಿದ್ದ ಭೂಮಿಕಾ ಜ್ಯುವೆಲ್ಲರಿ ಬಂಗಾರದ ಅಂಗಡಿ ಮಾಲಿಕ ಮಹಾರುದ್ರ ಕಂಚಗಾರ ಅವರ ದರೋಡೆ ಪ್ರಕರಣವನ್ನು ಅತಿ ಕಡಿಮೆ ಸಮಯದಲ್ಲಿ ಭೇದಿಸಿ ಕಳುವಾದ ಬಂಗಾರವನ್ನು ವಶಪಡಿಸಿಕೊಂಡ ಚಡಚಣ ಹಾಗೂ ಇಂಡಿ ತಾಲೂಕಿನ ಪೊಲೀಸ್ ಇಲಾಖೆಯ ಕಾರ್ಯವನ್ನು ಸಾರ್ವಜನಿಕರು ಪ್ರಶಂಸಿಸಿದರು. ಈ ಸಂಬಂಧ ಇಬ್ಬನಿ ಹೊಟೇಲನ ಸಭಾಭವನದಲ್ಲಿ ಆಯೋಜಿಸಿದ ಶೌರ್ಯ ಮತ್ತು ಸಾಹಸ ಪುರಸ್ಕಾರ ಸನ್ಮಾನ ಸಮಾರಂಭದಲ್ಲಿ ಶ್ರೀ ವಿಶ್ವಕರ್ಮ ಚಡಚಣ ಹಾಗೂ ಇಂಡಿ ತಾಲೂಕಿನ ಪದಾಧಿಕಾರಿಗಳು ಹಾಗೂ ಎಲ್ಲ ಚಿನ್ನಾಭರಣ ವ್ಯಾಪಾರಸ್ಥರು ಪೊಲೀಸರ ಸೇವೆಯನ್ನು ಶ್ಲಾಘಿಸಿದರು.ಈ ವೇಳೆ ಶ್ರೀ ವಿಶ್ವಕರ್ಮ ಚಡಚಣ ತಾಲೂಕಾಧ್ಯಕ್ಷ ಸೋಮಶೇಖರ ಬಡಿಗೇರ ಮಾತನಾಡಿ, ಕಡಿಮೆ ಸಮಯದಲ್ಲಿ ಕಳುವಾದ ಬಂಗಾರವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿರುವುದು ಕರ್ನಾಟಕದಲ್ಲಿಯೇ ಮಾದರಿಯಾಗಿದೆ. ಪೊಲೀಸರ ಈ ಕಾರ್ಯವನ್ನು ಮರೆಯಲಿಕ್ಕಾಗುವದಿಲ್ಲ ಪೊಲೀಸ್ ಇಲಾಖೆಯವರು ಬ್ರಹ್ಮದೇವರಂತೆ ಭೂಮಿಕಾ ಜ್ಯುವೆಲ್ಲರಿ ಕುಟುಂಬಸ್ಥರಿಗೆ ಎರಡನೇ…
ಯಾವ ಧರ್ಮವೂ ಧ್ವೇಷ ಬೋಧಿಸಲ್ಲ | ಸಮಾಜದ ಬಡವರು ಮತ್ತು ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಕಾಯಕ | ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ ಮೈಸೂರು: ದೇವರು ಎಲ್ಲೆಡೆಯೂ ಇದ್ದಾನೆ ಎಂದು ನಂಬುವವನು ನಾನು. ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ, ಬದಲಾಗಿ ಪ್ರೀತಿಯನ್ನೇ ಕಲಿಸುತ್ತದೆ. ಜನರ ಆಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ ಹಾಗೂ ಸಮಾಜದ ಬಡವರು ಮತ್ತು ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಕಾಯಕ, ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಮಿಕವಾಗಿ ನುಡಿದರು.ಮೈಸೂರು ತಾಲ್ಲೂಕಿನ ಪಿಲ್ಲಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀ ಆದಿಶಕ್ತತ್ಮಕ ದಂಡಿಮಾರಮ್ಮ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಕುಂಭಕಳಶದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಅಧ್ಯಾತ್ಮ, ಸಾಮಾಜಿಕ ನ್ಯಾಯ ಮತ್ತು ತಮ್ಮ ರಾಜಕೀಯ ಜೀವನದ ಏರಿಳಿತಗಳ ಕುರಿತು ಮನಬಿಚ್ಚಿ ಮಾತನಾಡಿದರು. ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ, ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರದ ಜನತೆ ನೀಡಿದ ಬೆಂಬಲವೇ ತಮ್ಮನ್ನು ಇಂದು ಈ ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದು ಕೃತಜ್ಞತೆ ಸಲ್ಲಿಸಿದರು.ಚಾಮುಂಡೇಶ್ವರಿ ಹಾಗೂ…
ಉದಯರಶ್ಮಿ ದಿನಪತ್ರಿಕೆ ಚಡಚಣ: ವಿಶ್ವಕ್ಕೆ ಗುರುವಾಗಿರುವ ಹಿಂದೂ ಧರ್ಮವನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಕರ್ತವ್ಯ. ಈ ಕಾರ್ಯ ಸಂಘಟಿತ ಹಿಂದೂ ಸಮಾಜದಿಂದ ಮಾತ್ರ ಸಾಧ್ಯ. ಈ ದಿಶೆಯಲ್ಲಿ ಹಿಂದೂ ಸಮಾಜವನ್ನು ಸಂಘಟಿಸಿ ನಗರದಲ್ಲಿ ಮಾ.10 ಮಂಗಳವಾರದಂದು ಬೃಹತ್ ಹಿಂದೂ ಸಮ್ಮೇಳನಕ್ಕೆ ಪ್ರತಿಯೊಬ್ಬರು ಕೈ ಜೋಡಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಮುಖಂಡ ಶಾಂತುಗೌಡ ಬಿರಾದಾರ ಹೇಳಿದರು.ಸ್ಥಳೀಯ ಚೌಡೇಶ್ವರಿ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಸಾಯಂಕಾಲ ನಡೆದ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಸಮಾವೇಶದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಮಾ.10 ರಂದು ಮದ್ಯಾಹ್ನ 3 ಗಂಟೆಗೆ ಬೃಹತ್ ಶೋಭಾಯಾತ್ರೆ ಜರುಗಲಿದೆ. ಸಮಾವೇಶದಲ್ಲಿ ಹುಕ್ಕೆರಿಯ ತಾಲೂಕಿನ ಕ್ಯಾರಗುಡ್ಡದ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮಿಗಳು, ಸ್ಥಳೀಯ ವಿರಕ್ತ ಮಠದ ಷಡಕ್ಷರ ಮಹಾಸವಾಮಿಗಳು, ಹಾವಿನಾಳ ಗ್ರಾಮದ ಚರಮೂರ್ತಿ ಮಠದ ವಿಜಯ ಮಹಾಂತೇಶ ಶಿವಾಚಾರ್ಯರು ಹಾಗೂ ಸ್ಥಳೀಯ ಓಂ ಶಾಂತಿ ಕೇಂದ್ರ ಶ್ರೀದೇವಿ ಅಕ್ಕನವರು ಸಮಾವೇಶದ ಸಾನಿಧ್ಯ ವಹಿಸಲಿದ್ದು, ಅಧ್ಯಕ್ಷತೆಯನ್ನು ಶಾಂತುಗೌಡ ಬಿರಾದಾರ ವಹಿಸಲಿದ್ದಾರೆ ಎಂದರು.ಸಭೆಯಲ್ಲಿ ನಾನಾ…
ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ತಾಲೂಕಿನ ಶಿರಮಳ್ಳಿ ಜನ ನಾನು ಯಾವುದೇ ಪಕ್ಷದಲ್ಲಿ ಇದ್ದರೂ ನಾನು ಹೇಳಿದ ಪಕ್ಷಕ್ಕೆ ಮಾತ್ರ ವೋಟ್ ಮಾಡ್ತಾರೆ. ಹೀಗಾಗಿ ಶಿರಮಳ್ಳಿ ಜನರ ಮೇಲೆ ವಿಶೇಷ ಪ್ರೀತಿ, ಅಭಿಮಾನ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ತಾಲೂಕಿನ ಶಿರಮಳ್ಳಿಯಲ್ಲಿ ಶ್ರೀ ಲಕ್ಷ್ಮೀದೇವಿ ಅಮ್ಮನವರ ನೂತನ ದೇವಾಲಯ ಉದ್ಘಾಟಿಸಿ ಅವರು ಮಾತನಾಡಿದರು.ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಯಾವುದೇ ಧರ್ಮಕ್ಕೆ ಸೇರಿದ್ದರು ಮನುಷ್ಯ ಮನುಷ್ಯನನ್ನು ಪ್ರೀತಿಸಿ ಎಂದೇ ಎಲ್ಲ ಧರ್ಮಗಳು ಹೇಳುತ್ತವೆ. ಪರಸ್ಪರ ದ್ವೇಷಿಸಿ ಎಂದು ಯಾವುದೇ ಧರ್ಮ ಹೇಳುವುದಿಲ್ಲ. ಕೆಲವು ಪಟ್ಟಭದ್ರಹಿತಾಸಕ್ತಿಗಳು ಸಮಾಜದಲ್ಲಿದ್ದಾರೆ. ಬಡವರು ಬಡವರಾಗೆ ಇರಬೇಕು. ಮುನುಷ್ಯ ಮನುಷ್ಯನನ್ನು ದ್ವೇಷಿಸಬೇಕು ಎಂದು ಕೆಲವರಿದ್ದಾರೆ. ಧರ್ಮ, ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ ಪಟ್ಟಭದ್ರಹಿತಾಸಕ್ತಿ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು.ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಹೆಚ್ ಡಿ ಕೋಟೆ ತಾಲೂಕು ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿದ್ದಾರೆ. ಮೈಸೂರಿನಿಂದ ಹೆಚ್ ಡಿ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಯುವ ಬರಹಗಾರರ ಕೃತಿಗಳ ಲೋಕಾರ್ಪಣೆ ಸಮಾರಂಭವು ಮಾರ್ಚ್ 10 ರಂದು ಮಂಗಳವಾರ ಬೆಂಗಳೂರು ನಗರದ ನಯನ ರಂಗಮಂದಿರದಲ್ಲಿ ನಡೆಯಲಿದೆ.ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಯುವ ಬರಹಗಾರರ ಚೊಚ್ಚಲ ಕೃತಿಯ ಸಹಾಯಧನಕ್ಕೆ ಕೊಲ್ಹಾರ ಪಟ್ಟಣದ ಶ್ರೀಮತಿ ಕವಿತಾ ಅಜಯ್ ಮುದಕವಿಯವರ ‘ಹೂ ಮುಡಿದ ನಕ್ಷತ್ರಗಳು’ ಕವನ ಸಂಕಲನ ಆಯ್ಕೆಯಾಗಿದೆ. ಮೂಲತಃ ಇಂಗ್ಲಿಷ್ ಭಾಷಾ ಶಿಕ್ಷಕಿಯಾಗಿರುವ ಅವರು, ನಿರೂಪಕಿ, ಲೇಖಕಿ ಹಾಗೂ ಉಪನ್ಯಾಸಕಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ಕೊಲ್ಹಾರ ಪಟ್ಟಣದ ಯುವ ಪ್ರತಿಭೆಗೆ ದೊರೆತ ಈ ರಾಜ್ಯಮಟ್ಟದ ಗೌರವ ಸಾಹಿತ್ಯಾಸಕ್ತರಲ್ಲಿ ಸಂತಸ ಮೂಡಿಸಿದೆ.
