ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಯುವ ಬರಹಗಾರರ ಕೃತಿಗಳ ಲೋಕಾರ್ಪಣೆ ಸಮಾರಂಭವು ಮಾರ್ಚ್ 10 ರಂದು ಮಂಗಳವಾರ ಬೆಂಗಳೂರು ನಗರದ ನಯನ ರಂಗಮಂದಿರದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಯುವ ಬರಹಗಾರರ ಚೊಚ್ಚಲ ಕೃತಿಯ ಸಹಾಯಧನಕ್ಕೆ ಕೊಲ್ಹಾರ ಪಟ್ಟಣದ ಶ್ರೀಮತಿ ಕವಿತಾ ಅಜಯ್ ಮುದಕವಿಯವರ ‘ಹೂ ಮುಡಿದ ನಕ್ಷತ್ರಗಳು’ ಕವನ ಸಂಕಲನ ಆಯ್ಕೆಯಾಗಿದೆ. ಮೂಲತಃ ಇಂಗ್ಲಿಷ್ ಭಾಷಾ ಶಿಕ್ಷಕಿಯಾಗಿರುವ ಅವರು, ನಿರೂಪಕಿ, ಲೇಖಕಿ ಹಾಗೂ ಉಪನ್ಯಾಸಕಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಕೊಲ್ಹಾರ ಪಟ್ಟಣದ ಯುವ ಪ್ರತಿಭೆಗೆ ದೊರೆತ ಈ ರಾಜ್ಯಮಟ್ಟದ ಗೌರವ ಸಾಹಿತ್ಯಾಸಕ್ತರಲ್ಲಿ ಸಂತಸ ಮೂಡಿಸಿದೆ.

