ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಮಕ್ಕಳಿಗೆ ಕೇವಲ ಶಿಕ್ಷಣ ನೀಡುವುದಕ್ಕಿಂತಲೂ ಉತ್ತಮ ಸಂಸ್ಕಾರಗಳನ್ನು ಬೆಳೆಸುವುದು ಪಾಲಕರು ಮತ್ತು ಶಿಕ್ಷಕರ ಪ್ರಮುಖ ಜವಾಬ್ದಾರಿ ಎಂದು ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ದೇವರು ಹೇಳಿದರು.
ಪಟ್ಟಣದ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ನಡೆದ 121ನೇ ಶಾಲಾ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಮಾತನಾಡಿ, ಈ ಕೆಜಿಎಸ್ ಶಾಲೆ ಈಗ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಪರಿವರ್ತನೆಯಾಗಿದ್ದು, ಮುಂದಿನ ದಿನಗಳಲ್ಲಿ ಹೆಮ್ಮರದಂತೆ ಬೆಳೆಯುತ್ತಾ ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಎನ್.ಎ. ಬನಸೋಡೆ ಮಾತನಾಡಿದರು. ವರದಿ ವಾಚನವನ್ನು ಆರ್.ಎಚ್. ನಾವಿ ನೆರವೇರಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ರೂಪಾ ಗಿಡ್ಡಪ್ಪಗೋಳ, ರಾಜಮಾ ನದಾಫ್, ಅಶೋಕ ಗಿಡ್ಡಪ್ಪಗೋಳ, ಲಕ್ಷ್ಮೀ ಜಿಡ್ಡಿಬಾಗಿಲ, ಕೆ.ಯು. ಗಿಡ್ಡಪ್ಪಗೋಳ, ಸುರೇಶ ಬಿರಾದಾರ, ಜಿ.ಜಿ. ಕುಲಕರ್ಣಿ, ಎಸ್.ಎಸ್. ಜಂಗಮಶೆಟ್ಟಿ, ಎಸ್.ಎನ್. ತಡಲಗಿ, ಆನಂದ ಪವಾರ, ಪುಂಡಲೀಕ ಬೆಳ್ಳುಬ್ಬಿ, ಐ.ಎಂ. ಬಾಟಿ, ಮಾರುತಿ ಪವಾರ, ಲಕ್ಷ್ಮಣ ಕುಂಬಾರ, ಜ್ಯೋತಿ ಕೊಟ್ಟಗಿ, ಮಂಜುನಾಥ ತುಂಬರಮಟ್ಟಿ, ಕಾಶೀಬಾಯಿ ಬಾಲಗೊಂಡ, ಮಂಜುನಾಥ ಲಿಂಬಿಕಾಯಿ, ಹೊನ್ನಪ್ಪ ಹಡಪದ, ಕಲ್ಲು ಬಾಲಗೊಂಡ, ನಾಮದೇವ ಚೌವ್ಹಾಣ್, ಶಕುಂತಲಾ ಚೌಡಪ್ಪನವರ ಉಪಸ್ಥಿತರಿದ್ದರು.
ನಿರೂಪಣೆಯನ್ನು ಶೋಭಾ ಬಾಟಿ ಮತ್ತು ರುದ್ರಮ್ಮ ಗಿಡ್ಡಪ್ಪಗೋಳ ನಡೆಸಿದರು. ಸ್ವಾಗತವನ್ನು ಐ.ಸಿ. ಪಾಟೀಲ ಹಾಗೂ ಜಿ.ಡಿ. ಆಸಂಗಿ ನೆರವೇರಿಸಿದರು. ಸನ್ಮಾನ ಕಾರ್ಯಕ್ರಮವನ್ನು ಪಿ.ಎಸ್. ಬಸರಕೋಡ ಮತ್ತು ಐ.ಬಿ. ಹಾದಿಮನಿ ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಸ್.ಎಂ. ಕೋರಿ ಮತ್ತು ಆರ್.ಎಸ್. ಜತ್ತಿ ಸಂಯೋಜಿಸಿದರು.

