ಉದಯರಶ್ಮಿ ದಿನಪತ್ರಿಕೆ
ಚಡಚಣ: ವಿಶ್ವಕ್ಕೆ ಗುರುವಾಗಿರುವ ಹಿಂದೂ ಧರ್ಮವನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಕರ್ತವ್ಯ. ಈ ಕಾರ್ಯ ಸಂಘಟಿತ ಹಿಂದೂ ಸಮಾಜದಿಂದ ಮಾತ್ರ ಸಾಧ್ಯ. ಈ ದಿಶೆಯಲ್ಲಿ ಹಿಂದೂ ಸಮಾಜವನ್ನು ಸಂಘಟಿಸಿ ನಗರದಲ್ಲಿ ಮಾ.10 ಮಂಗಳವಾರದಂದು ಬೃಹತ್ ಹಿಂದೂ ಸಮ್ಮೇಳನಕ್ಕೆ ಪ್ರತಿಯೊಬ್ಬರು ಕೈ ಜೋಡಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಮುಖಂಡ ಶಾಂತುಗೌಡ ಬಿರಾದಾರ ಹೇಳಿದರು.
ಸ್ಥಳೀಯ ಚೌಡೇಶ್ವರಿ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಸಾಯಂಕಾಲ ನಡೆದ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಸಮಾವೇಶದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಾ.10 ರಂದು ಮದ್ಯಾಹ್ನ 3 ಗಂಟೆಗೆ ಬೃಹತ್ ಶೋಭಾಯಾತ್ರೆ ಜರುಗಲಿದೆ. ಸಮಾವೇಶದಲ್ಲಿ ಹುಕ್ಕೆರಿಯ ತಾಲೂಕಿನ ಕ್ಯಾರಗುಡ್ಡದ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮಿಗಳು, ಸ್ಥಳೀಯ ವಿರಕ್ತ ಮಠದ ಷಡಕ್ಷರ ಮಹಾಸವಾಮಿಗಳು, ಹಾವಿನಾಳ ಗ್ರಾಮದ ಚರಮೂರ್ತಿ ಮಠದ ವಿಜಯ ಮಹಾಂತೇಶ ಶಿವಾಚಾರ್ಯರು ಹಾಗೂ ಸ್ಥಳೀಯ ಓಂ ಶಾಂತಿ ಕೇಂದ್ರ ಶ್ರೀದೇವಿ ಅಕ್ಕನವರು ಸಮಾವೇಶದ ಸಾನಿಧ್ಯ ವಹಿಸಲಿದ್ದು, ಅಧ್ಯಕ್ಷತೆಯನ್ನು ಶಾಂತುಗೌಡ ಬಿರಾದಾರ ವಹಿಸಲಿದ್ದಾರೆ ಎಂದರು.
ಸಭೆಯಲ್ಲಿ ನಾನಾ (ದಶರಥ) ಸಂಗಾ, ಅರವಿಂದ ಗಡ್ಡದೇವರಮಠ, ವೀರೇಶ ಕಲ್ಯಾಣಶೆಟ್ಟಿ, ತಾ.ಪಂ. ಮಾಜಿ ಸದಸ್ಯ ರಾಜು ಝಳಕಿ, ಬಾಲಾಜಿ ಗಾಡಿವಡ್ಡರ, ಸದಾಶಿವ ಬಿರಾದಾರ, ರಾಜು ತಂಗಾ, ಸುರೇಶ ಮೊಗಲಿ, ಸುರೇಶ ಭಂಡರಕವಟೆ, ಚೇತನ ನಿರಾಳೆ, ಚೇತನ ಮಠ, ಕೇದಾರಿ ಸಾಳುಂಕೆ, ವಿಲಾಸ ಡೊಳ್ಳಿ ಅವಿನಾಶ ನಾಯಕ, ಪಾಂಡು ಮೋರೆ, ಶಿವರಾಜ ಪಾಟೀಲ, ಭೀಮಾಶಂಕರ ಬಗಲಿ, ಸೋಮುಗೌಡ ಬಿರಾದಾರ, ನಾಗೇಂದ್ರ ಪಾಟೀಲ, ಆಕಾಶ ಅಂಜುಟಗಿ ಸೇರಿದಂತೆ ಮತ್ತಿತರರು ಇದ್ದರು.

