Author: editor.udayarashmi@gmail.com

ವಿಜಯಪುರ: ನಗರದ ಶಿವಾಜಿ ವೃತ್ತದಲ್ಲಿ ಶ್ರೀ ಗಜಾನನ ಉತ್ಸವ ಮಹಾ ಮಂಡಳ ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ನಡೆಯಿತು.ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ ಪೂಜೆ ಮಾಡುವ ಮೂಲಕ ದಾಸೋಹಕ್ಕೆ ಚಾಲನೆ ನೀಡಿದರು.ಗಣೇಶ ಭಕ್ತರಿಗಾಗಿ 3 ಕ್ವಿಂಟಾಲ್ ಅನ್ನ, ಒಂದು ಕ್ವಿಂಟ್ವಾಲ್ ಸಜ್ಜಕ ಮಾಡಿಸಲಾಗಿತ್ತು. 3000 ಕ್ಕೂ ಅಧಿಕ ಭಕ್ತಾಧಿಗಳು ಪ್ರಸಾದ ಸೇವನೆ ಮಾಡಿದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಸವಲಿಂಗ ಸ್ವಾಮೀಜಿ, ಅನ್ನ ದಾಸೋಹ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಲಾಗಿದೆ. ವಿಜಯಪುರದ ಶಿವಾಜಿ ವ್ರತ್ತದಲ್ಲಿಯೂ ಇನ್ನು ಮುಂದೆ ಪ್ರತಿ ಸೋಮವಾರ ಅನ್ನದಾಸೋಹ ಹಮ್ಮಿಕೊಂಡದಕ್ಕೆ ಅಭಿನಂದನೆ ಸಲ್ಲಿಸಿದರು. ನಿರಂತರವಾಗಿ ಜ್ಞಾನಯೋಗಾಶ್ರಮದಲ್ಲಿ ಅನ್ನ‌ಪ್ರಸಾದ ಇರುತ್ತದೆ. ಇದೀಗ ಶಿವಾಜಿ ವೃತ್ತದಲ್ಲೂ ದಾಸೋಹ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ ಎಂದರು. ವಿಜಯಪುರ ಜಿಲ್ಲೆ ದಾಸೋಹಕ್ಕೆ ಹೆಸರುವಾಸಿಯಾಗಿದೆ. ಇಂತಹ ಜಿಲ್ಲೆಯಲ್ಲಿ ಗಜಾನನ ಉತ್ಸವ ಮಹಾಮಂಡಳ ಸಂಸ್ಥಾಪಕ ಅಧ್ಯಕ್ಷರಾದ ಮಾಜಿ ಸಚಿವರಾದ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಮಹಾ ಮಂಡಳಿಯವರು ಪ್ರತಿ ಸೋಮವಾರ ದಾಸೋಹ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು. ಭಕ್ತಾದಿಗಳು ಅನ್ನ ಪ್ರಸಾದ…

Read More

ಆಲಮಟ್ಟಿ: ಎಸ್.ವ್ಹಿ.ವ್ಹಿ. ಶಿಕ್ಷಣ ಸಂಸ್ಥೆಯ ಅಂಗಳದ ವಿವಿಧ ಶಾಲಾ ಕಾಲೇಜು ತತ್ವ ವರ್ಗಕೋಣೆಯಲ್ಲಿ ಶುಭ ಮಂಗಳವಾರದಂದು ಅಭೂತಪೂರ್ವವಾಗಿ ಕಂಡು ಬಂತು.ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಹಾಗೂ ಆಲಮಟ್ಟಿ ಶ್ರೀಮದ್ ವೀರಶೈವ ವಿದ್ಖಾಲಯ ಅಸೋಸಿಯೇಷನ್ ಶಿಕ್ಷಣ ಸಂಸ್ಥೆಗಳ ಸಿಇಓ, ನಿವೃತ್ತ ಡಿಡಿಪಿಐ ಆಯ್.ಬಿ.ಬೆನಕೋಪ್ಪ ಅವರು ಇಂದು ಇಲ್ಲಿನ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ ಮುಂಬರಲಿರುವ ಎಸ್.ಎಸ್.ಎಲ್.ಸಿ.ಹಾಗೂ ಪಿಯುಸಿ ಪರೀಕ್ಷಾ ಹಿನ್ನೆಲೆಯಲ್ಲಿ ವಿಶೇಷ ಟಿಪ್ಸ್ ಗಳನ್ನು ಮಕ್ಕಳೊಂದಿಗೆ ಹಂಚಿಕೊಂಡು ಆತ್ಮಸಾಕ್ಷಿಯ ಮನೋಬಲವನ್ನು ಹೆಚ್ಚಿಸುವಲ್ಲಿ ಮಹತ್ವರದ ಹೆಜ್ಜೆಗಳನ್ನು ಇರಿಸಿದ್ದು ಅವಿಸ್ಮರಣೀಯವಾಗಿತ್ತು.ಮಹನೀಯರೊಂದಿಗೆ ಸಂಸ್ಥೆಯ ಮುಖ್ಯಸ್ಥರು, ಎಲ್ಲ ಸಿಬ್ಬಂದಿಗಳು, ಶಿಕ್ಷಕರು, ಉಪನ್ಯಾಸ ಬಳಗದವರಿದ್ದರು .

Read More

ವಿಜಯಪುರ: ಕೆಐಡಿಬಿ ರಾಜಗುರು ಗೋಧಾಮಿನಲ್ಲಿ ಕಾರ್ಮಿಕರು ಸಿಲುಕಿದ ಘಟನೆಗೆ ಸಂಬಂಧಿಸಿದಂತೆ ಕೈಗಾರಿಕೆ ಹಾಗೂ ಮೂಲಸೌಕರ್ಯ ಸಚಿವ ಮತ್ತು ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವ ಎಂ. ಬಿ.ಪಾಟೀಲ್ ಬೆಳಗಾವಿಯಿಂದ ವಿಜಯಪುರದತ್ತ ಆಗಮಿಸುತ್ತಿದ್ದಾರೆ.ಘಟನೆ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದಿದ್ದು, ಮಾನ್ಯ ಮುಖ್ಯಮಂತ್ರಿಗಳು ಕೂಡ ಈ ಘಟನೆಯ ಮಾಹಿತಿ ನೀಡಿದ್ದಾರೆ.ಈಗಾಗಲೇ ರಕ್ಷಣಾ ಕಾರ್ಯ ನಡೆದಿದ್ದು ಸ್ವತಹ ಜಿಲ್ಲಾ ಉಸ್ತುವಾರಿ ಸಚಿವರು ಘಟನೆ ಸ್ಥಳಕ್ಕೆ ಮಧ್ಯರಾತ್ರಿ 11:30 ಗಂಟೆಗೆ ಸಚಿವ ಎಂ.ಬಿ. ಪಾಟೀಲರು ಈ ಗೋಧಾಮಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

Read More

ವಿಜಯಪುರ: ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯಪುರ ಜಿಲ್ಲೆ “ಕಪ್ಸ್ ಸಂಕಲ್ಪ ಸ್ಕೂಲ್” ವಿದ್ಯಾರ್ಥಿಗಳುವಿಶೇಷ ಹಾಗೂ ವಿಶಿಷ್ಟವಾಗಿ ಕ್ರೀಡೆಯನ್ನು ಹಮ್ಮಿಕೊಂಡಿದ್ದರು.”ಕಪ್ಸ್ ಸಂಕಲ್ಪ” ಶಾಲೆಯ ಕ್ರೀಡಾ ಚಾಲನೆಯನ್ನು ವಿಕಲಚೇತನ ಕರ್ನಾಟಕದ ಕ್ರಿಕೆಟ್ ತಂಡದ ನಾಯಕರಾದ “ಮಹೇಶ್ ತೋಟದ” ಹಾಗೂ “ಸಂಕಲ್ಪ ಶಾಲಾ ಮುಖ್ಯ ಕಾರ್ಯನಿರ್ವಾಹಕರಾದ ದೀಪಕ್ ಅಗರ್ವಾಲ್, ಯೋಗಿತಾ ಅಗರ್ವಾಲ್, ಆಡಳಿತ ಮಂಡಳಿಯವರು ಹಾಗು ಶಿಕ್ಷಕ ವೃಂದ ಚಾಲನೆಯಲ್ಲಿ ಪಾಲ್ಗೊಂಡಿದ್ದರು.”ಶಾಲಾ ವಿದ್ಯಾರ್ಥಿಗಳು “ಕಪ್ಸ್ ಸಂಕಲ್ಪ” ವಿವಿಧ ಶಾಖೆಗಳನ್ನು ಒಳಗೊಂಡ ಸುಮಾರು 600 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈ ಕ್ರೀಡೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ವಿಜಯಶಾಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.”ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿಗಳನ್ನು ಈಗಲೇ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವಲ್ಲಿ ಶಿಕ್ಷಕರು ಸಪಲರಾದರು.”ಕಪ್ಸ್ ಸಂಕಲ್ಪ” ಶಾಲೆಯ ಅಧ್ಯಕ್ಷರಾದ ಅಶೋಕ ಗರ್ವಾಲ್, ಸುನಿಲ್ ಅಗರ್ವಾಲ್, ಆಡಳಿತ ಮಂಡಳಿ ಈ ಕ್ರೀಡಾಕೂಟಕ್ಕೆ ಮಚ್ಚುಗೆ ವ್ಯಕ್ತಪಡಿಸಿದರು.

Read More

ವಿಜಯಪುರದ ರಾಜಗುರು ಇಂಡಸ್ಟ್ರೀಜ್ ಗೋದಾಮು | ಕೆಐಡಿಬಿ ವಸಾಹತು ಪ್ರದೇಶ | ಬೀಹಾರ ಮೂಲದ ಕಾರ್ಮಿಕರು ವಿಜಯಪುರ: ಮೆಕ್ಕೆಜೋಳಗಳನ್ನು ತುಂಬಿಡಲಾಗಿದ್ದ ಗೋಣಿ ಚೀಲಗಳು ಕುಸಿದ ಪರಿಣಾಮ ಸುಮಾರು ಹತ್ತಾರು ಜನರು ಸಿಲುಕಿಕೊಂಡಿರುವ ಘಟನೆ ಗುಮ್ಮಟ ನಗರಿ ವಿಜಯಪುರ ನಗರದ ಹೊರವಲಯದಲ್ಲಿರುವ ಕೆ ಐ ಡಿ ಬಿ ವಸಾಹತು ಪ್ರದೇಶದಲ್ಲಿ ನಡೆದಿದೆ.ಖ್ಯಾತ ರಾಜಗುರು ಇಂಡಸ್ಟ್ರೀಜ್ ಗೋದಾಮಿನಲ್ಲಿ ಈ ಘಟನೆ ನಡೆದಿದ್ದು, ಸುಮಾರು 10ಕ್ಕೂ ಹೆಚ್ಚು ಜನ ಸಿಲುಕಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.ರಾಜಗುರು ಫುಡ್ ಪ್ರೊಸೆಸಿಂಗ್ ಯುನಿಟ್ ನಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಸಂಗ್ರಹಿಸಿ ಇಡಲಾಗಿದ್ದ ಮೆಕ್ಕೆಜೋಳದ ಚೀಲಗಳ ಮೇಲೆ ಬೃಹತ್ ಯಂತ್ರ ಬಿದ್ದಿದೆ. ಆಗ ಈ ಚೀಲಗಳು ಕುಸಿದು ಬಿದ್ದ ಪರಿಣಾಮ ಅಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕರು ಅದರ ಕೆಳಗಡೆ ಸಿಲುಕಿದ್ದಾರೆ.ಕಳೆದ ಹಲವು ವರ್ಷಗಳಿಂದ ಈ ಇಂಡಸ್ಟ್ರೀಜ್ ನಲ್ಲಿ ನಾನಾ ಕಡೆಗಳಿಂದ ಆಗಮಿಸಿರುವ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸಂಜೆ ವೇಳೆ ಏಕಾಏಕಿ ನಡೆದ ಘಟನೆಯಿಂದಾಗಿ ಈ ಪ್ರದೇಶದಲ್ಲಿ…

Read More

ತಾರಕಕ್ಕೇರಿದ ಶಾಸಕ ಯತ್ನಾಳ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಬಿರಾದಾರ ವೈಮನಸ್ಸು ವಿಜಯಪುರ: ಇತ್ತೀಚೆಗೆ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವಾಚ್ಯ ಶಬ್ದದಿಂದ ತಮ್ಮನ್ನು ನಿಂದಿಸಿದ ಶಾಸಕ ಬಸನಗೌಡ ಯತ್ನಾಳ ಮೆದುಳು ನಾಲಿಗೆಗೆ ಸಂಪರ್ಕವಿಲ್ಲದ ಓರ್ವ ಅನಾಗರಿಕ ವ್ಯಕ್ತಿ ಎಂದು ಬಿಜೆಪಿ ಜಿಲ್ಲಾ ಉಪಾದ್ಯಕ್ಷ ಮತ್ತು ವಕ್ತಾರ ಸುರೇಶ ಬಿರಾದಾರ ಕುಟುಕಿದರು.ಸೋಮವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯುದ್ದಕ್ಕೂ ಶಾಸಕ ಯತ್ನಾಳರ ವಿರುದ್ಧ ಅವರು ಏಕವಚನದಲ್ಲಿಯೇ ತೀವ್ರ ವಾಗ್ದಾಳಿ ನಡೆಸಿದರು.ಇವರನ್ನು ಶಾಸಕರನ್ನಾಗಿ ಮಾಡಿದ್ದೇ ನಾವು. ನನ್ನನ್ನೇ ಯತ್ನಾಳ ಅವರು ನಗರದ ದಾನಮ್ಮ ದೇವಿಯ ಕಾರ್ಯಕ್ರಮದಲ್ಲಿ ಲೋಫರ್, ಎಂದು ಬೈದಿದ್ದಾರೆ. ಗಜ್ಜ ಇಡತೀನಿ ಎಂದಿದ್ದಾರೆ. ಚುನಾವಣೆಯಲ್ಲಿ ಇವರ ಸೋಲಿಗಾಗಿ ಹಣ ಹಂಚುತ್ತಿದ್ದೆ ಎಂದು ಸುಳ್ಳು ಆರೋಪ ಮಾಡಿದ ಇವರು ಇದನ್ನು ರುಜುವಾತು ಪಡಿಸಿದರೆ ತಾವು ರಾಜಕೀಯದಿಂದಲೇ ನಿವೃತ್ತಿಯಾಗುವುದಾಗಿ ಬಿರಾದಾರ ಸವಾಲು ಹಾಕಿದರು.ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನೂ ಸಹ ಬಿಜೆಪಿ ಟಿಕೆಟ್ ಕೇಳಿದ್ದರಿಂದ ಯತ್ನಾಳರು ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದರು.ಕೇವಲ ಆರು ಸಾವಿರ ಮತಗಳಿಂದ…

Read More

ರಂಗಭೂಮಿ ಭೀಷ್ಮ ದಿ.ಶ್ರೀನಿವಾಸ ತಾವರಗಿರಿ ಸ್ಮರಣೆ | ಐದು ವಿಭಿನ್ನ ನಾಟಕಗಳ ಪ್ರದರ್ಶನ ವಿಜಯಪುರ: ರಂಗಭೂಮಿ ಭೀಷ್ಮ ದಿ. ಶ್ರೀನಿವಾಸ ತಾವರಗಿರಿ ಸ್ಮರಣೆಯ ಅಂಗವಾಗಿ ತಾವರಗಿರಿ ಅವರ ಪರಿವಾರ ಹಾಗೂ ಅಭಿಮಾನಿ ಬಳಗದ ಸಹಯೋಗದಲ್ಲಿ ಇದೇ ಡಿಸೆಂಬರ 6 ರಿಂದ 10 ರ ವರೆಗೆ ನಗರದ ಮರಾಠಿ ವಿದ್ಯಾಲಯದಲ್ಲಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ.ದಿ.ಶ್ರೀನಿವಾಸ ತಾವರಗಿರಿ ಅವರ ಪಾರಿಜಾತ ಹವ್ಯಾಸಿ ರಂಗ ತಂಡ ಅರ್ಪಿಸುವ ಈ ನಾಟಕೋತ್ಸವದ ಕುರಿತು ಶಶಿ ತಾವರಗಿರಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು.ಐದು ದಿನಗಳ ಕಾಲ ನಡೆಯುವ ಈ ನಾಟಕೋತ್ಸವದಲ್ಲಿ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಐದು ವಿಭಿನ್ನ ನಾಟಕಗಳ ಪ್ರದರ್ಶನ ನಡೆಯಲಿದೆ. ಪ್ರತಿದಿನ ಸಂಜೆ 7 ಗಂಟೆಗೆ ನಾಟಕ ಪ್ರದರ್ಶನ ಪ್ರಾರಂಭವಾಗುತ್ತಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ ಎಂದು ಅವರು ತಿಳಿಸಿದರು.ಡಿ.6 ರಂದು ಮಂಡ್ಯ ರಮೇಶ ನಿರ್ದೇಶನದಲ್ಲಿ ಮೈಸೂರು ನಟನ ತಂಡದವರಿಂದ ಚೋರ ಚರಣದಾಸ ನಾಟಕ ಪ್ರದರ್ಶನಗೊಳ್ಳುವುದು. ಹಿರಿಯ ವಿದುಷಿ ಲತಾ ಜಹಾಗೀರದಾರ ಅವರು ನಾಟಕೋತ್ಸವ ಉದ್ಘಾಟಿಸುವರು.…

Read More

ವಿಜಯಪುರ: ಮಕ್ಕಳಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆ ಅಗತ್ಯವಾಗಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎನ್.ಎಚ್.ನಾಗೂರ ಹೇಳಿದರು.ನಗರದ ಮರಾಠಾ ವಿಧ್ಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ, ಕರ್ನಾಟಕ ರಾಜ್ಯ ವಿಧ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರ, ಜಿಲ್ಲಾ ಪಂಚಾಯತಿ ವಿಜಯಪುರ, ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರಿಗಾಗಿ ನಡೆದ ಜಿಲ್ಲಾ ಮಟ್ಟದ 2023-24ನೇ ಸಾಲಿನ ಸಹಪಠ್ಯ ಚಟುವಟಿಕೆ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕರು ಪಠ್ಯ ಬೋಧನೆ ಜೊತೆಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಮೂಲಕ ಕಲಿಸುವದರಿಂದ ಪರಿಣಾಮಕಾರಿ ಕಲಿಕೆಯಾಗುವದು. ಶಿಕ್ಷಕರ ವಿಶೇಷ ಪ್ರತಿಭೆ ಹಾಗೂ ಕೌಶಲ್ಯ ಹೊರಹಾಕಲು ಈ ಸಹಪಠ್ಯ ಚಟುವಟಿಕೆ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಪಠ್ಯೇತರ ಚಟುವಟಿಕೆ ಏರ್ಪಡಿಸುವದರಿಂದ ಶಿಕ್ಷಕರಿಗೆ ಅನೂಕೂಲ ಎಂದರು.ಕರ್ನಾಟಕ ರಾಜ್ಯ ರಾಜ್ಯ ಸರ್ಕಾರಿ…

Read More

ಕೊಲ್ಹಾರ: ಕೂಡಗಿ ಭಾಗದಲ್ಲಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ಎನ್‌ಟಿಪಿಸಿಗೆ ಜಮೀನು ಕಳೆದುಕೊಂಡಿದ್ದ ಈ ಭಾಗದ ಸಂತ್ರಸ್ತ ರೈತರು ಮತ್ತೊಮ್ಮೆ ಧರಣಿಯತ್ತ ಮುಖ ಮಾಡುವ ಸಾಧ್ಯತೆ ದಟ್ಟವಾಗಿದೆ. ತಾಲೂಕಿನ ತೆಲಗಿಯ ಸದ್ಗುರು ಸದಾನಂದ ಆಶ್ರಮದಲ್ಲಿ ಶನಿವಾರ ಸಭೆ ನಡೆಸಿದ ಸಂತ್ರಸ್ತ ರೈತರು ಈ ಕುರಿತು ಚಿಂತನ-ಮಂಥನ ನಡೆಸಿದರು.ಈಗಾಗಲೇ ನ.೬ ರಂದು ಎನ್‌ಟಿಪಿಸಿ ಎಚ್‌ಆರ್ ಸಭಾಂಗಣದಲ್ಲಿ ನಡೆದ ಗ್ರಾಮಾಭಿವೃದ್ಧಿ ಸಲಹಾ ಸಮಿತಿ (ವಿಡಿಎಸಿ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಗಮನಕ್ಕೆ ರೈತರ ಅಹವಾಲನ್ನು ಸಲ್ಲಿಸಲಾಗಿತ್ತು. ಸಭೆ ಮುಗಿದು ಮತ್ತೆ ತಿಂಗಳಾಗುತ್ತ ಬಂದರೂ ಇದುವರೆಗೂ ಏನೊಂದೂ ಪ್ರತಿಕ್ರಿಯೆ ಜಿಲ್ಲಾಧಿಕಾರಿಗಳಿಂದಾಗಲಿ, ಎನ್‌ಟಿಪಿಸಿ ಅಧಿಕಾರಿಗಳಿಂದಾಗಲಿ ಬಂದಿಲ್ಲ. ಹೀಗಾಗಿ ಡಿ.೪ ರಂದು ಮತ್ತೊಂದು ಬಾರಿ ಜಿಲ್ಲಾಧಿಕಾರಿ ಜತೆಗೆ ಮಾತನಾಡಿ ಸಂತ್ರಸ್ತ ರೈತರ ಬೇಡಿಕೆಗಳ ಕುರಿತು ಮನವರಿಕೆ ಮಾಡಲಾಗುವುದು. ಅದಾಗ್ಯೂ ಯಾವುದೇ ಸ್ಪಂದನೆ ದೊರಕದಿದ್ದರೆ ಎನ್‌ಟಿಪಿಸಿ ಮುಖ್ಯ ಪ್ರವೇಶ ದ್ವಾರದ ಎದುರು ಶಾಂತಿಯುತ ಪ್ರತಿಭಟನೆಗೆ ಮುಂದಾಗುವುದು ಅನಿವಾರ್ಯವಾದೀತೆಂದು ಸಂತ್ರಸ್ತ ರೈತ ಮುಖಂಡರಾದ ಮಲ್ಲಿಕಾರ್ಜುನ ವೀರಣ್ಣವರ, ದಯಾನಂದ ಹೆಬ್ಬಾಳ ಸಭೆಗೆ…

Read More