Author: editor.udayarashmi@gmail.com

ಆಲಮಟ್ಟಿ: ತಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿಕೃಷ್ಣಾ ತೀರ ಗುತ್ತಿಗೆದಾರರ ಸಂಘ ಮಂಗಳವಾರ ಪ್ರತಿಭಟನೆ ನಡೆಸಿದರು.ಕಳೆದ ಒಂದು ವರ್ಷದಿಂದ ಮುಳುಗಡೆ ಹಾಗೂ ಅಚ್ಚುಕಟ್ಟು ಪ್ರದೇಶದ ನೂರಾರು ಗುತ್ತಿಗೆದಾರರು ಹಲವಾರು ಕಾಮಗಾರಿಗಳನ್ನು ನಿರ್ವಹಿಸಿ ಪೂರ್ಣಗೊಳಿಸಿ ಬಿಲ್ ಸಲ್ಲಿಸಲಾಗಿದ್ದು, ಈ ವರೆಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಇದರಿಂದಾಗಿ ಹಲವಾರು ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಆಗ್ರಹಿಸಿದರು.ಹಲವಾರು ಗುತ್ತಿಗೆದಾರು ಕಾಮಗಾರಿಗಳನ್ನು ಪೂರ್ಣಗೊಳಿಸಿ ಕಾಮಗಾರಿಗಳನ್ನು ಬಿಲ್ ಸಂದಾಯ ಮಾಡಿ ಒಂದು ವರ್ಷ ಗತಿಸುತ್ತಾ ಬಂದರೂ ಇದುವರೆಗೆ ಹಣ ಬಿಡುಗಡೆ ಯಾಗಿಲ್ಲ. ಈ ಕಾಮಗಾರಿಗಳಿಗೆ ಶೀಘ್ರವಾಗಿ ಹಣ ಬಿಡುಗಡೆಯಾಗಬೇಕು.2022/23 ರ ಆರ್ಥಿಕ ವರ್ಷದ ಕಾಮಗಾರಿಗಳನ್ನು ಟೆಂಡರ ಕರೆದು ಒಂದು ವರ್ಷ ಗತಿಸುತ್ತಾ ಬಂದರೂ ಕೂಡಾ ಇನ್ನೂ ಟೆಂಡರ್ ಪ್ರಕ್ರಿಯೆ ಮುಗಿದಿಲ್ಲ, ಪಾರದರ್ಶಕ ಕಾಯ್ದೆ ಅಡಿಯಲ್ಲಿರುವ ನಿಯಮಾವಳಿಗಳ ಪ್ರಕಾರ ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣ ಗೊಳಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಗುತ್ತಿಗೆದಾರ ಮುಂಗಡ ಹಣ ಅವರ ಖಾತೆಗೆ ಜಮಾ ಮಾಡಬೇಕು ಎಂದು ಗುತ್ತಿಗೆದಾರರು ಆಗ್ರಹಿಸಿದರು.ಆಲಮಟ್ಟಿ ವಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಲುವೆಗಳ…

Read More

ಮಕ್ಕಳ ಸಾಹಿತಿ ಪ. ಗು.ಸಿದ್ದಾಪುರ ಅವರಿಗೆ ಸನ್ಮಾನಿಸಿದ ಕೆಪಿಸಿಸಿ ಪ್ರಚಾರ ಸಮೀತಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಅಭಿಮತ ವಿಜಯಪುರ: ನಾಡಿನ ಹಿರಿಯ ಮಕ್ಕಳ ಸಾಹಿತಿ, ಚಿಂತಕ, ಆದರ್ಶ ಶಿಕ್ಷಕ ಪ. ಗು.ಸಿದ್ದಾಪುರ ಅವರನ್ನು ಕೆಪಿಸಿಸಿ ಪ್ರಚಾರ ಸಮೀತಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಅವರು ಮುಳವಾಡ ಗ್ರಾಮದ ಅವರ ಸ್ವಗ್ರಹದಲ್ಲಿ ಭೇಟಿಯಾಗಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಗಮೇಶ ಬಬಲೇಶ್ವರ ಅವರು, ಪ.ಗು.ಸಿದ್ದಾಪೂರ ಅವರಿಗೆ ಬಹಳ ಹಿಂದೆಯೇ ದೊರೆಯಬೇಕಿದ್ದ ರಾಜೋತ್ಸವ ಪ್ರಶಸ್ತಿ ತಡವಾಗಿಯಾದರೂ ಅವರ ಮುಡಿಗೇರಿರುವುದು ಅತ್ಯಂತ ಸಂತೋಷದ ಸಂಗತಿ. ಶ್ರೇಷ್ಠ ಸಾಹಿತಿಗೆ ದೊರೆತ ಶ್ರೇಷ್ಠ ಗೌರವ ಇದಾಗಿದೆ. ಸಿದ್ದಾಪುರ ಗುರುಗಳು ಪ್ರಶಸ್ತಿಯಿಂದ ದೊಡ್ಡವರಾದವರಲ್ಲ. ತಮ್ಮ ಸಾತ್ವಿಕ ಚಿಂತನೆಗಳು, ಆದರ್ಶ ಜೀವನದ ಮೂಲಕ ನಮ್ಮೆಲ್ಲರಿಗೂ ಮಾದರಿಯಾದವರು. ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪ್ರಶಸ್ತಿಯ ಗೌರವವನ್ನು ಹೆಚ್ಚು ಮಾಡಿದೆ ಎನ್ನುವುದು ನನ್ನ ಭಾವನೆ. ಅರ್ಹರಿಗೆ ಪ್ರಶಸ್ತಿ ದೊರೆತಾಗ ಆ ಪ್ರಶಸ್ತಿಯ ಮೌಲ್ಯ ಆ ವ್ಯಕ್ತಿಯ ವ್ಯಕ್ತಿತ್ವದಿಂದಾಗಿ ಹೆಚ್ಚಾಗುತ್ತದೆ. ಅಂತಹ ಶ್ರೇಷ್ಠ ವ್ಯಕ್ತಿತ್ವದ…

Read More

ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಯ 15 ಕೃತಿಗಳ ಲೋಕಾರ್ಪಣೆ ಬೆಳಗಾವಿ: ಅಬ್ಬಿಗೇರಿ ದಂಪತಿಗಳು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಸೇವೆ ಅನನ್ಯ. ಈ ಸೇವೆ ನಿತ್ಯ ನಿರಂತರವಾಗಿರಲಿ ಎಂದು ಬೆಳಗಾವಿ ಜಿಲ್ಲಾ ವಿಶ್ರಾಂತ ಪ್ರಾಚಾರ್ಯ,ಹಿರಿಯ ಸಾಹಿತಿಗಳಾದ ಬಿ. ಎಸ್ ಗವಿಮಠ ಅವರು ಹೇಳಿದರು.ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಹಾಗೂ ಲೋಕವಿದ್ಯಾ ಪ್ರಕಾಶನ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಉಪನ್ಯಾಸಕಿ,ಲೇಖಕಿ, ಅಂಕಣಕಾರ್ತಿ, ಚಿಂತಕಿ, ವಾಗ್ಮಿ ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ 15 ಕೃತಿಗಳ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಸ್ತುತ ದಿನಮಾನಗಳಲ್ಲಿ ಸಾಹಿತ್ಯ ಓದುಗರ ಸಂಖ್ಯೆ ತುಂಬಾ ಕ್ಷೀಣಿಸಿದ. ಇಂತಹ ಸಮಯದಲ್ಲಿ ವೃತ್ತಿ ಬದುಕಿನೊಂದಿಗೆ ಸಾಹಿತ್ಯ ಕೃತಿಗಳನ್ನು ರಚಿಸಿ ಪ್ರಕಟಿಸುವುದು ತುಂಬಾ ಅಭಿನಂದನಾರ್ಹ ಕಾರ್ಯವಾಗಿದೆ. ಈ ಕಾರ್ಯಕ್ರಮದಲ್ಲಿ 15 ಕೃತಿಗಳು ಬಿಡುಗಡೆಯಾಗಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಇಷ್ಟೊಂದು ಕೃತಿಗಳು ಬಿಡುಗಡೆಯಾಗಿದ್ದು ಅಭಿಮಾನದ ಸಂಗತಿ ಎಂದರು.ಕೃತಿ ಪರಿಚಯ ಮಾಡಿದ ಇಂಗ್ಲಿಷ್ ಅಧ್ಯಾಪಕಿ ಗುರುದೇವಿ ಹುಲಪ್ಪನವರಮಠ,…

Read More

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,- ವಿವೇಕಾನಂದ ಎಚ್ ಕೆ, ಬೆಂಗಳೂರು ನಟನೆ, ಖ್ಯಾತಿ, ಕೃಷಿ, ಮಗನ ಮೇಲಿನ ಮಮತೆ, ಪ್ರಾಣಿ ಪ್ರೀತಿ, ಒಂದಷ್ಟು ಸಮಾಜ ಸೇವೆ ಎಲ್ಲವೂ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.‌ ಆದರೆ ಇದನ್ನು ಮೀರಿ ಬಹಳಷ್ಟು ಮಧ್ಯಮವರ್ಗದ ಸಿನಿ ಪ್ರೇಮಿಗಳ ಮನಸ್ಸಿನಲ್ಲಿ ಒಂದು ಕೆಟ್ಟ ಕುತೂಹಲ ಹಾಗೇ ಉಳಿದಿದೆ. ಕೆಲವರು ಆ ಬಗ್ಗೆ ಪುಸ್ತಕಗಳು, ಟಿವಿ ಸಂದರ್ಶನಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರು ಇನ್ನೂ ಕೆಲವರಿಗೆ ಮತ್ತೇನೋ ತಿಳಿಯುವ ಆಸೆ.. ರಾಜ್ ಲೀಲಾ ವಿನೋದ ಎಂಬ ರವಿ ಬೆಳೆಗೆರೆಯವರ ಹಸಿ ಅನಿಸಿಕೆಗಳ ಪುಸ್ತಕವೂ ಜನಪ್ರಿಯವಾಗಿದೆ. ಸಾಕಷ್ಟು ಹಿರಿಯ ಪತ್ರಕರ್ತರು ಇದರ ಬಗ್ಗೆ ಖಾಸಗಿಯಾಗಿ ಮಾತನಾಡುತ್ತಾರೆ. ಸಿನಿಮಾ ಕ್ಷೇತ್ರದ ಅನುಭವಿಗಳು ತಮ್ಮದೇ ಅಭಿಪ್ರಾಯ ಪಡುತ್ತಾರೆ. ಅವರ ಒಡನಾಡಿಗಳು ಮತ್ತಷ್ಟು ಹೇಳುತ್ತಾರೆ. ಆದರೆ ಒಟ್ಟಾರೆ ‌ತುಂಬಾ ಸ್ಪಷ್ಟತೆ ಏನು ದೊರೆಯುವುದಿಲ್ಲ. ಕಾರಣ.. ಈ ವಿಷಯ ಅತ್ಯಂತ ಖಾಸಗಿಯಾದದ್ದು.‌ ಬಹಳ ಹಳೆಯದು. ಸರಿಯಾದ ಸಂಪರ್ಕ ಸಾಧನಗಳು ಇಲ್ಲದ ಸಮಯದಲ್ಲಿ ನಡೆದಿರಬಹುದಾದ ಘಟನೆ. ಸಿನಿಮಾ ರಂಗದಲ್ಲಿ ಹೆಚ್ಚು…

Read More

ವಿಜಯಪುರ: ವಿವಿಧ ಗ್ರಾಮ ಪಂಚಾಯತಗಳ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಗ್ರಾಮ ಪಂಚಾಯತ ಸದಸ್ಯರ ಮಹಾ ಒಕ್ಕೂಟದಿಂದ ಮುಖ್ಯ ಕಾರ್ಯನಿರ್ವಾಹಕ ರಾಹುಲ ಸಿಂದೆ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಮ್.ಎಚ್. ಪಠಾಣ ಮಾತನಾಡಿ, ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಗಳ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿಗಳ ಬರಗಾಲ, ಕಾಮಗಾರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಸಲುವಾಗಿ ಸಮನ್ವಯ ಸಭೆ ಕರೆಯಬೇಕು. ಪ್ರತಿ ಪಂಚಾಯತಿಗೆ ಒಬ್ಬರಂತೆ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಬೇಕು. (ಸದ್ಯ ಒಬ್ಬರೆ ಎರಡು ಮೂರ ಪಂಚಾಯತಿಗೆ ಇರುವವರು), ಅಭಿವೃದ್ಧಿಯಲ್ಲಿ ಹಿಂದುಳಿದ ಗ್ರಾಮ ಪಂಚಾಯತಗಳಿಗೆ ೧೫ ನೇ ಹಣಕಾಸ, ಕ್ರಿಯಾಯೋಜನೆ ಹಾಗೂ ಕಾಮಗಾರಿ, ನರೇಗಾ ಕ್ರಿಯಾ ಯೋಜನೆ ಕಾಮಗಾರಿ ಆಗದ ಗ್ರಾಮ ಪಂಚಾಯತಿಗಳಿಗೆ ತಮ್ಮ ನಿರ್ದೇಶನ ನೀಡುವುದು. ಗೌರವಧನವನ್ನು ಬಿಡುಗಡೆ ಆದ ತಕ್ಷಣ ತ್ವರಿತ ಗತಿಯಲ್ಲಿ ಬಟವಡೆ ಮಾಡುವಂತೆ ಅಭಿವೃದ್ಧೀ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರದೀಪ ಚ. ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ವಾಲಿ,…

Read More

ಆಲಮಟ್ಟಿ: ಇಲ್ಲಿ ಶಾಸ್ತ್ರಿ ಜಲಾಶಯ ನಿರ್ಮಿಸಿ ಎರಡು ದಶಕಗಳಿಂದ ನೀರು ಸಂಗ್ರಹಿಸುತ್ತಿದ್ದರೂ ಜಿಲ್ಲೆಯನ್ನು ಸಮಗ್ರ ನೀರಾವರಿ ಏಕೆ ಮಾಡುತ್ತಿಲ್ಲ? ಈ ಭಾಗದ ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಇಟಗಿಯ ಗುರುಶಾಂತವೀರ ಸ್ವಾಮೀಜಿ ಹೇಳಿದರು.ಸೋಮವಾರ ಆಲಮಟ್ಟಿಯ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರರ ಕಚೇರಿಯ ಆವರಣದಲ್ಲಿ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ವಾಸುದೇವ ಮೇಟಿ ಬಣ) ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಆಲಮಟ್ಟಿ ಘಟಕದವತಿಯಿಂದ ಆಲಮಟ್ಟಿ ಜಲಾಶಯ ೫೧೯.೬ಮೀ.ದಿಂದ ೫೨೪.೨೫೬ಮೀ.ಗೆ ಎತ್ತರಿಸಿ ಜಿಲ್ಲೆಯನ್ನು ಸಮಗ್ರ ನೀರಾವರಿಗೊಳಪಡಿಸಿ ಎಂದು ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಆಮರಣ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು.ಜಿಲ್ಲೆಗೆ ನೀರು ಕೊಡಬೇಕಾದರೆ ಸ್ಕೀಂ.ಗಳನ್ನು ಹೇಳುತ್ತಿದ್ದೀರಿ, ಅನ್ಯ ಜಿಲ್ಲೆಗಳಿಗೆ ನೀರು ಕೊಡಲು ಸ್ಕೀಂ.ಗಳಿಲ್ಲವೇ? ಜಿಲ್ಲೆಯಲ್ಲಿನ್ನು ಸಮರ್ಪಕವಾಗಿ ಕಾಲುವೆ ಜಾಲಗಳನ್ನೂ ನಿರ್ಮಿಸುತ್ತಿಲ್ಲವೇಕೆ? ಜಿಲ್ಲೆಗೆ ನೀರು ಕೊಡಬೇಕಾದರೆ ಜಲಾಶಯ ಎತ್ತರದ ಸಬೂಬು ಹೇಳುತ್ತಿದ್ದೀರಿ, ಹಾಗಿದ್ದರೆ ಜಲಾಶಯವನ್ನು ತ್ವರಿತವಾಗಿ ಎತ್ತರಿಸಲು ಅಗತ್ಯಕ್ರಮಕೈಗೊಳ್ಳಬೇಕಾಗಿರುವುದು ಸರ್ಕಾರಗಳ ಕೆಲಸ. ಇದರ ಶಾಸಕರು,…

Read More

ಹೊನವಾಡ: ದಿನಾಲೂ ಉಸಿರಾಡಲು ಇಷ್ಟು ಆಮ್ಲಜನಕ ಕೊಟ್ಟಿರುವ ಪ್ರಕೃತಿಗೆ ನಾವೇನಾದರೂ ಕೊಡುಗೆ ಕೊಡಲೇಬೇಕು, ಇಂದೇನಾದರೂ ಈ ಕೆರೆಯ ಅಂದ ಸೊಬಗು ಹೆಚ್ಚುತ್ತಿದೆ ಎಂದರೆ ಅದಕ್ಕೆ ನಮ್ಮ ಭಾಗದ ಹಿಂದಿನ ಜಲ ಸಂಪನ್ಮೂಲ ಸಚಿವರು ಇಂದಿನ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲರು ಕಾರಣ. ಅವರನ್ನು ನಾವು ಬಹಳಷ್ಟು ಸ್ಮರಿಸಬೇಕಾಗಿದೆ. ಪರಿಸರ ದಿನದಂದು ಮಾತ್ರ ಉಸಿರಾಡುವುದಿಲ್ಲ , ಪ್ರತೀ ದಿನ ನಮಗೆ ಆಮ್ಲಜನಕ ಪೂರೈಕೆ ಆಗಬೇಕು. ಪ್ರಸ್ತುತ ಆಮ್ಲಜನಕದ ಮಹತ್ವ ನಮಗೆ ಅರಿವಾಗುವ ಕಾಲಬಂದಿದೆ. ಇಂದು ಆಮ್ಲಜನಕಕ್ಕಾಗಿ ಹಣ ನೀಡುತ್ತೇವೆ. ಆದರೆ ಪರಿಸರದಲ್ಲಿ ಅದೆಷ್ಟೋ ವರ್ಷಗಳಿಂದ ಬೇರೂರಿ ಉಚಿತ ಗಾಳಿ, ತಂಪು, ಹಣ್ಣು, ಹೂ ನೀಡುವ ಮರವನ್ನು ಕ್ಷಣಮಾತ್ರದಲ್ಲಿ ಧರೆಗುರುಳಿಸಿ ಬಿಡುತ್ತೇವೆ. ಇಂದು ನಮ್ಮ ಸ್ವಾರ್ಥಕ್ಕೆ ತಕ್ಕ ಪಾಠ ಪ್ರಕೃತಿಯೇ ಕಲಿಸಿದಂತಿದೆ. ಎಂದು ಬಾಬುರಾವ್ ಮಹಾರಾಜರು ಹೇಳಿದರು.ಕೆರೆಯ ಆವರಣದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಕೆರೆಯನ್ನು ಸ್ವಚ್ಛಗೊಳಿಸಿ ವಿಜಯಪುರ ತರಬೇತಿ ಸಂಸ್ಥೆಯ ಪ್ರಾಚಾರ್ಯ…

Read More

ಕರವಿನಾಳದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ ಬ್ರಹ್ಮದೇವನಮಡು: ಸಿಂದಗಿ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸುವೆ. ರಸ್ತೆ, ಶಿಕ್ಷಣ, ಆರೋಗ್ಶ, ಉದ್ಶೋಗ ಕ್ಷೇತ್ರದತ್ತ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ತಾಲೂಕಿನ ಕರವಿನಾಳ ಗ್ರಾಮದಲ್ಲಿ ಸಮಾಜ ಕಲ್ಶಾಣ ಇಲಾಖೆಯ ಕೆ.ಆರ್.ಐ.ಡಿ.ಎಲ್ ಸನ್ ೨೦೨೧-೨೨ ನೇ ಸಾಲಿನ ಪ್ರಧಾನಮಂತ್ರಿ ಆದಶ೯ ಗ್ರಾಮ ಯೋಜನೆಯಡಿಯಲ್ಲಿ ೨೦ ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸವ೯ರ ಏಳ್ಗೆಗೆ ಶ್ರಮಿಸಿ, ಸಮಾಜದಲ್ಲಿ ಶಾಂತಿ – ನೆಮ್ಮದಿ ನೆಲೆಸುವ ಕೆಲಸ ಮಾಡುವೆ. ನಮ್ಮ ತಂದೆ ದಿ.ಶಾಸಕ ಎಂ.ಸಿ.ಮನಗೂಳಿ ಅವರ ಅವಧಿಯಲ್ಲಿ ನೆನೆಗುದಿಗೆ ಬಿದ್ದ ಕಾಮಗಾರಿಗೆ ಮರುಜೀವ ಕೊಡಲಾಗುವುದು. ಶೈಕ್ಷಣಿಕ ಪ್ರಗತಿಗಾಗಿ ಹೆಚ್ಚಿನ ಆದ್ಶತೆ ನೀಡುವೆ. ಸಂಕಷ್ಟದಲ್ಲಿರುವ ಜನರ ನೋವಿಗೆ ಸ್ಪಂದಿಸುವ ಉದ್ದೇಶದಿಂದಲೇ ನಮ್ಮ ಸಕಾ೯ರ ಗ್ಶಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳ ಮೂಲಕ ಕಾಂಗ್ರೆಸ್ ಸಕಾ೯ರ…

Read More

ಯಶಸ್ವಿಯಾಗಿ ಜರುಗಿದ ವಿಜ್ಞಾನ ವಿಷಯದ ಫೋನ್ ಇನ್ ಕಾರ್ಯಕ್ರಮ ವಿಜಯಪುರ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ವಿಜ್ಞಾನ ವಿಷಯದ ಪೋನ್ ಇನ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದ್ದು, ಈ ಕಾರ್ಯಕ್ರಮದಲ್ಲಿ ವಿಷಯ ತಜ್ಞರಿಂದ ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಕುರಿತ ಕಲಿಕಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ ಎಂದು ೨೯೩ ವಿದ್ಯಾರ್ಥಿಗಳಿಂದ ಕೇಳಲಾದ ೪೮೩ ಪ್ರಶ್ನೆಗಳಿಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರ ಅವರು ತಿಳಿಸಿದ್ದಾರೆ.ಜಿಲ್ಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಷಯದ ಡಿ.೮ರಂದು ವಿಜಯಪುರದ ಉರ್ದು ಶಿಕ್ಷಕರ ತರಬೇತಿ ಸಂಸ್ಥೆಯ ಸಭಾಭವನದಲ್ಲಿ ಸಂಜೆ ೬ ರಿಂದ ರಾತ್ರಿ ೯ ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಕಲಿಕಾ ಸಮಸ್ಯೆಗಳು, ಪರೀಕ್ಷಾ ವಿಷಯದ ಗೊಂದಲಗಳಿಗೆ ವಿಷಯ ತಜ್ಞ ಶಿಕ್ಷಕರಿಂದ ಪ್ರಶ್ನೆ ಕೇಳಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡರು.ಬಗಲೂರು ವಿ.ಎಸ್.ಎಂ.ಪ್ರೌಢ ಶಾಲೆಯ ರಕ್ಷಿತಾ ತೇಲಿ ಬೆಳಕಿನ ವಕ್ರೀಭವನ ಕ್ರಿಯೆ ಹೇಗೆ ನಡೆಯುತ್ತದೆ, ಕೊಂಡಗುಳಿಯ…

Read More