Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಭಾರತದ ಸಂವಿಧಾನ: ಮಹಿಳಾಪರ ಚಿಂತನೆ
ವಿಶೇಷ ಲೇಖನ

ಭಾರತದ ಸಂವಿಧಾನ: ಮಹಿಳಾಪರ ಚಿಂತನೆ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಡಾ.ಪೂರ್ಣಿಮಾ ಧಾಮಣ್ಣವರ ಕನ್ನಡ ಉಪನ್ಯಾಸಕರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಡಾ. ಫ, ಗು ಹಳಕಟ್ಟಿ ಸ್ನಾತಕೋತ್ತರ ಕೇಂದ್ರ, ವಿಜಯಪುರ

ಮಾರ್ಚ ೮ ಅಂತರಾಷ್ಟ್ರೀಯ ಮಹಿಳಾ ದಿನಚಾರಣೆಯ ಶುಭಾಶಯಗಳನ್ನ ತಿಳಿಸುತ್ತಾ ಮಹಿಳಾಪರ ಚಿಂತನೆ ಕುರಿತು ಅವಳ ಪರವಾದ ನಿಲುವುಗಳ ಕುರಿತಾಗಿ ಹಾಗೂ ಅವಳ ಹಕ್ಕು ಬಾದ್ಯತೆಗಳ ಕುರಿತು ಅವಳೆಷ್ಟು ತಿಳಕೊಂಡಿದ್ದಾಳೆ. ಅವು ಸಂವಿಧಾನದಲ್ಲಿ ಉಲ್ಲೇಖಕೊಂಡಿರುವುದರ ಬಗ್ಗೆ ಮಹಿಳೆಯರಿಗೆ ಸೂಕ್ಷ್ಮವಾಗಿ ತಿಳಿಸುವ ಪ್ರಯತ್ನವೇ ಈ ಲೇಖನದ ಮುಖ್ಯ ಉದ್ದೇಶವಾಗಿದೆ.
೧೯೫೦ ಜನವರಿ ೨೬ರಂದು ಭಾರತ ದೇಶಕ್ಕೆ ಸಂವಿಧಾನ ಜಾರಿಗೆ ಬಂತು. ಅವತ್ತಿನಿಂದ ಮಹಿಳೆಯರ ಸ್ಥಿತಿಗತಿಗಳ ಕುರಿತು ಹೇಳುವುದಾದರೆ ಆಕೆಯ ಮೇಲೆ  ದೌರ್ಜನ್ಯಗಳನ್ನು, ಶೋಷಣೆಗಳು ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ಹಿತದೃಷ್ಟಿಯಿಂದಲೂ ಸಂವಿಧಾನದ ಮೂಲಕ ಹಲವು ವಿಧಿಗಳ ಆಕೆಗಾಗಿಯೇ ಮೀಸಲಿಟ್ಟಿವೆ. ಹೀಗಾಗಿ ಸ್ತ್ರೀ ಪುರುಷರು ಸಮಾನರಾಗಿ ಬದುಕಲು ದಾರಿ ಸಹ ಮಾಡಿಕೊಟ್ಟಿದೆ.
ಸ್ತ್ರೀ – ಪುರುಷರಷ್ಟೆ ಸಮಾನಳು. ಶಿಕ್ಷಣ ಪಡೆಯಲು, ವಿವಿಧ ಹುದ್ದೆಗಳ ಪಡೆಯಲು, ಸಂವಿಧಾನವು ಪ್ರಮುಖ ಪಾತ್ರವನ್ನು ವಹಿಸಿದೆ. ಇದರಿಂದ ನಮ್ಮ ದೇಶದ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಜಗತ್ಪ್ರಸಿದ್ದರಾಗಲೂ ಸಾಧ್ಯವಾಗಿದೆ.

ತಂದೆ ಆಸ್ತಿಯಲ್ಲಿ ಆಸ್ತಿಯ ಹಕ್ಕು, ಹಿಂದೂ ಕೋಡ್ ಬಿಲ್ ಜಾರಿಗೆ ತರುವಲ್ಲಿ ಶ್ರಮಿಸಿದವರು ಡಾ. ಅಂಬೇಡ್ಕರ ಅವರು. ಇವು ಜಾರಿಗೆ ಬರದೆ ಕಾರಣ ತಮ್ಮ ಕಾನೂನು ಮಂತ್ರಿಗೆ ರಾಜೀನಾಮೆ ನೀಡಿದ ಏಕೈಕ ವ್ಯಕ್ತಿ  ಡಾ. ಅಂಬೇಡ್ಕರ. ಇದಕ್ಕೆ ಸೂಕ್ಷ್ಮವಾಗಿ ಗಮನಿಸದ ಡಾ. ಅಂಬೇಡ್ಕರ ಅವರು ಕಾರಣ ಹುಡಕಿದಾಗ ಮನುಸ್ಮೃತಿ ಗ್ರಂಥದ ಮೇಲೆ ನಮ್ಮ ದಿವ್ಯ ಭಾರತ ನಿಂತಿದೆ ಎಂಬುವುದನ್ನ ಅರಿತು ಅವರು ಆ ಗ್ರಂಥವನ್ನು ಸುಟ್ಟು ಹಾಕುತ್ತಾರೆ. ನಂತರ ಅವರು ಪ್ರತಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಹಕ್ಕು, ಮತದಾನದ ಹಕ್ಕು, ಆಸ್ತಿಯ ಹಕ್ಕು. ಕೈಗಾರಿಕೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ರಜೆಯ ಹಕ್ಕು ಹೀಗೆ ಸಾಲುಸಾಲು ಹಕ್ಕುಗಳ ನೀಡುವುದರ ಮೂಲಕ ಅವಳನ್ನ ಈ ಜಗತ್ತಿನಲ್ಲಿ ದ್ವಿತೀಯ ದರ್ಜೆಯಲ್ಲ ಅವಳು ಮನುಷ್ಯಳೆಂದು ಸಾರಿ ಸಾರಿ ಹೇಳುವಂತೆ ಮಾಡಿದ್ದು ಡಾ. ಅಂಬೇಡ್ಕರ ಅವರು.

ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರು:

ನಮ್ಮ ಸಂವಿಧಾನ ಸ್ತ್ರೀ – ಪುರುಷರಿಗೆಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿತು. ಸಂವಿಧಾನ ರಚನಾ ಸಭೆಯಲ್ಲಿ ೧೫ ಮಂದಿ ಮಹಿಳೆಯರು ಇದ್ದರು. ಕೇಂದ್ರ ಹಾಗೂ ಪ್ರಾಂತ ಶಾಸನ ಸಭೆಗಳಿಗೆ ಚುನಾಯಿತರಾದ ೨೭೨ ಜನಪ್ರತಿನಿಧಿಗಳು ಸಂವಿಧಾನ ರಚನಾ ಸಭೆಗೆ ಆಯ್ಕೆಯಾದರೆ ಅದರಲ್ಲಿ ೧೫ ಜನ ಮಹಿಳೆಯರಲ್ಲಿ ಸ್ವತಂತ್ರ ಹೋರಾಟಗಾರ್ತಿಯರು, ಸಾಮಾಜಿಕ ಕಾರ್ಯಕರ್ತಿಯರು, ವಕೀಲೆಯರಿದ್ದರು. ಇವರು ಕೂಡ ಸಂವಿಧಾನ ಅಂಗೀಕರಿಸುವ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ ಅಮ್ಮು ಸ್ವಾಮಿನಾಥ, ಬೇಗಂ ಇಝಾಜ್ ರಸೂಲ್, ದ್ರಾಕ್ಷಾಯಿಣಿ ವೇಲಾಯುಧನ್, ಆ್ಯನಿ ಮಸ್ಕರೇನ, ದುರ್ಗಾಬಾಯಿ ದೇಶಮುಖ, ಹನ್ಸ್ ಜೀವರಾಜ್, ಪೂರ್ಣಿಮಾ ಬ್ಯಾನರ್ಜಿ, ಕಮಲಾ ಚೌಧರಿ, ಅಮೃತ ಕೌರ, ರೇಣುಕಾ ರೇ, ಸರೋಜನಿ ನಾಯ್ಡು, ಸಚೀತಾ ಕೃಪಲಾನಿ ಹಾಗೂ ವಿಜಯಲಕ್ಷ್ಮಿ ಪಂಡಿತ ಹೀಗೆ ಅನೇಕ ಮಹಿಳೆಯರು ರಚನಾ ಸಭೆಯಲ್ಲಿ ಪಲ್ಗೊಂಡಿದ್ದು ಇತಿಹಾಸವೇ ಸೃಷ್ಟಿಯಾದಂತಿದೆ.
ಹಾಗಾದರೆ ಸಂವಿಧಾನದಲ್ಲಿ ಕೊಡ ಮಾಡುವ ಮಹಿಳಾ ಪರ ಚಿಂತನೆಯ ಸವಲತ್ತುಗಳು ಏನಿವೇ ಅಂತ ಗಮನಿಸಿದಾಗ ಹಲವಾರು ವಿಧಿಗಳ ಆಕೆಯ ಪರವಾಗಿ ನಿಂತಿವೆ. ಅವು
೧೪ನೇ ವಿಧಿ ಪ್ರಕಾರ ಕಾನೂನುನಿನ ಮುಂದೆ ಎಲ್ಲರು ಸಮಾನರು
೧೬ನೇ ವಿಧಿ ಪ್ರಕಾರ ಸಾರ್ವಜನಿಕ ಹುದ್ದೆಗಳನ್ನು ಹೊಂದಲು ಅವಕಾಶ ಕಲ್ಲಿಸಿದೆ
೩೯ನೇ ವಿಧಿ ಪ್ರಕಾರ ಸ್ತ್ರೀ- ಪುರುಷ ಎಂಬ ಭೇದಭಾವವಿಲ್ಲದೆ ಜೀವನಕ್ಕೆ ಅವಶ್ಯವಾದ    
ಸಾಧನಗಳನ್ನು ಒದಗಿಸುವ ನೀತಿ ಜಾರಿಗೆ ಬಂತು
೧೯೬೧ರಲ್ಲಿ ಮೇಟರ ನೀತಿ ಬೆನಿಪಿಟ್ ಕಾಯ್ದೆ ಜಾರಿಗೆ ಬಂತು
೧೯೬೧ರಲ್ಲಿ ಹಿಂದೂ ವಿವಾಹ  ಅಧಿನಿಯಮ ಕಾಯ್ದೆ ಜಾರಿಗೆ ಜೊತೆಗೆ ವಿಚ್ಛೇಧ ವಿಷಯವನ್ನು ಇದರಲ್ಲಿ ಸೇರಿಸಲಾಗಿತ್ತು.
೧೯೫೫ರಲ್ಲಿ ವಿವಾಹ ನೊಂದಾಯಿತ ಕಾಯ್ದೆ ಜಾರಿಗೆ ಬಂತು
೧೯೫೬ರಲ್ಲಿ ಹಿಂದೂ ವಾರಸಾ ಅಧಿನಿಯಮ ಕಾಯ್ದೆ ಜಾರಿಗೆ ತವರ ಮನೆಯ ಆಸ್ತಿಯ ಹಕ್ಕನ್ನ ಪಡೆಯುವುದನ್ನ ಜಾರಿಗೆ ತರಲಾಯಿತು.
೧೯೬೧ರಲ್ಲಿ ಪ್ರಸ್ತೂತಿ ಸೌಲಭ್ಯ ಕಾಯ್ದೆ ಜಾರಿಗೆ ತರಲಾಯಿತು
೧೯೭೬ರಲ್ಲಿ ಸಮಾನ ವೇತನ ಕಾಯ್ದೆ ಜಾರಿಗೆ ತರಲಾಯಿತು
೧೯೬೧ರಲ್ಲಿ ವರದಕ್ಷಿಣೆ ನಿಷೇದ ಕಾಯ್ದೆ ಜಾರಿಗೆ ಬಂತು
೧೯೫೬ರಲ್ಲಿ ಹಿಂದೂ ದತ್ತ ಜೀವನಾಂಶಗಳ ಕಾಯ್ದೆ ಜಾರಿಗೆ ಬಂದವು
ಇಷ್ಟೇಲ್ಲ ಕಾಯ್ದೆಗಳು ಇದ್ದರೂ ಭಾರತ ದೇಶದಲ್ಲಿ ನಿರಂತರವಾಗಿ ಹೆಣ್ಣು ಮಕ್ಕಳ ಮೇಲೆ ಆಗುವ ದೌರ್ಜನೆ ನಡೆಯುವುದು ಮಾತ್ರ ತಪ್ಪಲಿಲ್ಲ. ಇವತ್ತಿನ ಸಂದರ್ಭದಲ್ಲಿಯೂ ಅವಳಿಗೆ ರಕ್ಷಣೆಯಿಲ್ಲ. ಅತ್ಯಾಚಾರ ಬಲತ್ಕಾರ, ಲೈಂಗಿಕ ಕಿರುಕುಳ ಕೊಟ್ಟವರ ಮೇಲೆ ಎಷ್ಟೆ ಕೇಸಗಳು ಎಫ್ ಐ ಆರ್ ಆಗದೆ ಇರುವುದು. ಆದರೂ ಅವರಿಗೆ ಶಿಕ್ಷೆ ಆಗದೆ ಹೊರ ಬಂದು ರಾಜಾರೋಷವಾಗಿರುವ ತಿರುಗಾಡುವ ಪುರುಷರನ್ನು ಇವತ್ತು ನಾವು ನೋಡುತ್ತೇವೆ. ಇನ್ನಾದರೂ  ನಮ್ಮ ಸಮಾಜವು ಮುಂದೆ ಈ ರೀತಿ ಆಗದೇ ಅವಳಿಗೆ ಗೌರವ ಕೊಡುವುದರ ಮೂಲಕ ಅವಳಿಗೆ ಕೆಲವೊಂದು ಸೌಲಭ್ಯವನ್ನು ಒದಗಿಸಿಕೊಡುವಲ್ಲಿ ಮುಂದಾಗಬೇಕು. ಆಗ ಈ ಅಂತರಾಷ್ಟ್ರೀಯ ಮಹಿಳಾ ದಿನಕ್ಕೆ ಒಂದು ಮೌಲ್ಯ ಬರುತ್ತದೆ. ಅದು ಮಾಡಬೇಕಾಗಿದ್ದು ಈ ಪುರುಷಪ್ರಧಾನ ಸಮಾಜ ಅದು ನಿಮ್ಮಕೈಯಲ್ಲಿದೆ. ಈ ಲೇಖನದ ಮೂಲಕ ನಿಮ್ಮಗೆ ತಿಳಿಸುವುದು ಏನೆಂದರೆ ಮಹಿಳೆ ದ್ವಿತೀಯ ದರ್ಜೆಯಲ್ಲ, ಅವಳು ಕೂಡ ನಿಮಂತೆ ಮನುಷ್ಯಳು ಅಂತ ತಿಳಕೊಂಡು ಅವಳ ಮೇಲೆ ಯಾವ ರೀತಿಯ ದೌರ್ಜನ್ಯ ಮಾಡದೆ ಮುಕ್ತವಾಗಿ ಜೀವಿಸಲು ಅವಕಾಶ ಕೊಡಿ.

*– ಡಾ.ಪೂರ್ಣಿಮಾ ಧಾಮಣ್ಣವರ*
ಕನ್ನಡ ಉಪನ್ಯಾಸಕರು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ
ಡಾ. ಫ, ಗು ಹಳಕಟ್ಟಿ ಸ್ನಾತಕೋತ್ತರ ಕೇಂದ್ರ, ವಿಜಯಪುರ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ
    In (ರಾಜ್ಯ ) ಜಿಲ್ಲೆ
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ
    In (ರಾಜ್ಯ ) ಜಿಲ್ಲೆ
  • ಶನಿವಾರ ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.