Author: editor.udayarashmi@gmail.com

ದೇವರಹಿಪ್ಪರಗಿ: ಪಟ್ಟಣದ ಬಸ್ ನಿಲ್ದಾಣ ಹತ್ತಿರದ ದಾನಮ್ಮದೇವಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಲಾಯಿತು.ಪಟ್ಟಣದಲ್ಲಿ ದಾನಮ್ಮನ ಕಳ್ಳಿ ಎಂದೇ ಕರೆಯಲ್ಪಡುವ ದಾನಮ್ಮದೇವಿಯ ನೂತನ ದೇವಸ್ಥಾನದಲ್ಲಿ ಮಂಗಳವಾರ ಬೆಳಿಗ್ಗೆ ದ್ವಿತೀಯ ಕಾರ್ತಿಕೋತ್ಸವದ ಅಂಗವಾಗಿ ಸ್ಥಳೀಯ ಸದಯ್ಯನಮಠದ ವೀರಗಂಗಾಧರ ಶ್ರೀಗಳ ನೇತೃತ್ವದಲ್ಲಿ ಶ್ರೀಶೈಲ ಸ್ಥಾವರಮಠ ದಂಪತಿಗಳು ಅಭಿಷೇಕ ನೆರವೇರಿಸಿದರು. ನಂತರ ೨೧೧ ಸುಮಂಗಲೆಯರಿಗೆ ಉಡಿತುಂಬುವ ಕಾರ್ಯ ನೆರವೇರಿಸಲಾಯಿತು.ನಂತರ ಮಹಾಪ್ರಸಾದ ವಿತರಿಸಲಾಯಿತು. ಸಾಯಂಕಾಲ ದೇವಾಲಯದ ಆವರಣದಾದ್ಯಂತ ನೆರೆದ ಭಕ್ತರು ದೀಪ ಬೆಳಗಿಸಿ ಭಕ್ತಿಭಾವದೊಂದಿಗೆ ಕಾರ್ತಿಕೋತ್ಸವ ಆಚರಿಸಿದರು.ಕಾರ್ತಿಕೋತ್ಸವ ಸಮೀತಿಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರಿ, ಉಪಾಧ್ಯಕ್ಷ ಶಿವಾನಂದ ಅತನೂರ, ಆನಂದ ಜಡಿಮಠ, ಅಶೋಕ ನಾಯ್ಕೋಡಿ, ಸದಯ್ಯ ಸ್ಥಾವರಮಠ, ಪರಮಾನಂದ ಹಳ್ಳಿ, ರಮೇಶ ಮಶಾನವರ, ಬಸವರಾಜ ಅತನೂರ, ರಾಜು ಈಳಗೇರ, ಲಕ್ಷ್ಮಣ ಬಿರಾದಾರ, ರವಿ ಮಣೂರ, ಸುರೇಶ ಕೊಣ್ಣೂರ ಸೇರಿದಂತೆ ಮಹಿಳೆಯರು, ಮಕ್ಕಳು, ಸ್ಥಳೀಯ ವ್ಯಾಪಾರಸ್ಥರು ಭಾಗವಹಿಸಿದ್ದರು.

Read More

ಸಮಗ್ರ ಇಂಡಿ ಕ್ಷೇಮಾಭಿವೃದ್ದಿ ಸಂಘ, ಇಂಡಿ ಜಿಲ್ಲಾ ಹೋರಾಟ ಸಮಿತಿ ಮತ್ತು ಆರ್ಟಿಕಲ್ ೩೭೧ ಜೆ ಹಕ್ಕು ಒತ್ತಾಯ ಸಮಿತಿ ಪ್ರತಿಭಟನೆ ಇಂಡಿ: ಇಂಡಿ ಪ್ರತ್ಯೇಕ ಜಿಲ್ಲೆ ಘೋಷಣೆಗೆ ಆಗ್ರಹಿಸಿ ಸಮಗ್ರ ಇಂಡಿ ಕ್ಷೇಮಾಭಿವೃದ್ದಿ ಸಂಘ, ಇಂಡಿ ಜಿಲ್ಲಾ ಹೋರಾಟ ಸಮಿತಿ ಮತ್ತು ಆರ್ಟಿಕಲ್ ೩೭೧ ಜೆ ಹಕ್ಕು ಒತ್ತಾಯ ಸಮಿತಿ ವತಿಯಿಂದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು.ಈ ಸಂದರ್ಭ ಸಮಗ್ರ ಇಂಡಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ಕಾಮಗೊಂಡ ಮಾತನಾಡಿ, ಜಿಲ್ಲಾ ಕೇಂದ್ರಕ್ಕೆ ಯೋಗ್ಯವಾದ ಭೌಗೋಳಿಕ ಪ್ರದೇಶ ಮತ್ತು ಸರಕಾರಿ ಕಚೇರಿಗಳನ್ನು ಹೊಂದಿರುವ ಇಂಡಿಯನ್ನು ಜಿಲ್ಲೆಯಾಗಿಸಬೇಕು. ಜಿಲ್ಲಾ ಕೇಂದ್ರಕ್ಕೆ ಯಾವುದೇ ತ್ಯಾಗಕ್ಕೂ ಸಿದ್ಧ ಎಂದರು.ಪಾಪು ಕಿತ್ತಳಿ ಮಾತನಾಡಿ, ಸರಕಾರ ನಮ್ಮ ಮನವಿ ಪರಿಗಣಿಸಿ ಇಂಡಿ ಜಿಲ್ಲಾ ಕೇಂದ್ರ ಘೋಷಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಸೇರಿದಂತೆ ಉಗ್ರ ಹೋರಾಟ ಮಾಡಲಾಗುವುದು ಎಂದರು.ಸತೀಶ ಕುಂಬಾರ ಮಾತನಾಡಿ, ಸಧ್ಯ ಸರಕಾರದ ಆಡಳಿತ ಯಂತ್ರವೇ ಬೆಳಗಾವಿಯಲ್ಲಿದ್ದು ಅಭಿವೃದ್ಧಿ ದೃಷ್ಠಿಯಿಂದ ಇಂಡಿಗೆ ಪ್ರತ್ಯೇಕ…

Read More

ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ನಡೆದ ಹಾಲುಮತ ಸಮಾಜದ ಮುಖಂಡರ ಸಮ್ಮುಖದಲ್ಲಿ ಕನಕ ಯುವ ಸೇನೆಗೆ ಅಧ್ಶಕ್ಷ ಹಾಗೂ ಉಪಾಧ್ಶಕ್ಷರನ್ನು ಆಯ್ಕೆ ಮಾಡಲಾಯಿತು. ಅಧ್ಶಕ್ಷರಾಗಿ ಮಲ್ಲಿಕಾಜು೯ನ ಪೂಜಾರಿ ಹಾಗೂ ಉಪಾಧ್ಶಕ್ಷರಾಗಿ ಮಾಳಿಂಗರಾಯ ನಂದಗೀರಿ ಆಯ್ಕೆಯಾದರು.ಈ ವೇಳೆ ಸಮಾಜದ ಮುಖಂಡರಾದ ಕಲ್ಲಪ್ಪ ಬಿಸನಾಳ, ಜಗದೀಶ್ ಹೂನಳ್ಳಿ, ನಾಗಣ್ಣ ಮುಜಾವರ, ಶರಣಪ್ಪ ತಳಗೇರಿ, ಸಿದ್ದರಾಮ ಹಳ್ಳಿ, ಯಮನೂರ ಸುಂಬಡ, ಪೂಜಾರಿ, ಬೀರಣ್ಣ ಬಿಸನಾಳ,ರಮೇಶ ತಳಗೇರಿ, ಬಸವರಾಜ್ ಮೋರಟಗಿ ,ಕರೆಪ್ಪ ತಳಗೆರಿ, ಬೀರಣ್ಣ ಮಾಸ್ತರ, ಬೀರಪ್ಪ ಪೂಜಾರಿ ಸೇರಿದಂತೆ ಸಮಾಜದ ಬಂಧುಗಳು ಇದ್ದರು.

Read More

ಆರೋಗ್ಯ ಕೇಂದ್ರದಲ್ಲಿ ಡಾ.ಶ್ರೀಶೈಲ ಹುಕ್ಕೇರಿ ಮೇಲಿನ ಹಲ್ಲೆಗೆ ವೈದ್ಯಾಧಿಕಾರಿಗಳ ಸಂಘ ಖಂಡನೆ ವಿಜಯಪುರ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ. ಶ್ರೀಶೈಲ ಹುಕ್ಕೇರಿ ಆಡಳಿತ ವೈದ್ಯಾಧಿಕಾರಿಯ ಮೇಲೆ ಸಾರ್ವಜನಿಕರಿಂದ ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ (ರಿ) ಜಿಲ್ಲಾ ಶಾಖೆ, ವಿಜಯಪುರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿ.ಪಂ.ವಿಜಯಪುರ ಇವರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ಮನವಿಯನ್ನು ಸಲ್ಲಿಸಿ ವೈದ್ಯಾಧಿಕಾರಿಯ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಸಾಂಕೇತಿಕವಾಗಿ ಧರಣಿ ಮಾಡಲಾಯಿತು.ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮನವಿ ಸ್ವೀಕರಿ ನಮ್ಮ ಸಂಘಕ್ಕೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.ಇನ್ನು ಮುಂದೆ ವೈದ್ಯರ ಮೇಲೆ ಅಥವಾ ಸಿಬ್ಬಂದಿಯ ಮೇಲೆ ಹಲ್ಲೆಯಾದರೆ ಆಸ್ಪತ್ರೆಯನ್ನು ಬಂದ್ ಮಾಡಿ ಧರಣಿ ನಡೆಸುವುದಾಗಿ ತೀರ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಡಾ.ಕೇ.ಡಿ. ಗುಂಡಬಾವಡಿ, ಡಾ. ಎಸ್.ಎಲ್. ಲಕ್ಕಣ್ಣವರ, ಡಾ. ಶಶಿಕಾಂತ ಬಾಗೇವಾಡಿ, ಅಧ್ಯಕ್ಷರಾದ ಡಾ.ಸಿ.ಎಮ್.ತಾಳಿಕೋಟಿ ಪ್ರಾಥಮಿಕ ಆರೋಗ್ಯ ಕೇಂದ್ರ ರೋಣಿಹಾಳ, ಕಾರ್ಯದರ್ಶಿ…

Read More

ಬಸವನಬಾಗೇವಾಡಿ: ಪಟ್ಟಣದ ನ್ಯಾಯವಾದಿಗಳು ನ್ಯಾಯವಾದಿಗಳ ಮೇಲೆ ಆಗುತ್ತಿರುವ ಹಲ್ಲೆ,ಹತ್ಯೆ ಮತ್ತು ದೌರ್ಜನ್ಯಗಳಂತಹ ಕೃತ್ಯಗಳನ್ನು ಖಂಡಿಸಿ ಮತ್ತು ಸರ್ಕಾರ ಕೂಡಲೇ ನ್ಯಾಯವಾದಿಗಳ ರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಆಗ್ರಹಿಸಿ ಮಂಗಳವಾರ ನ್ಯಾಯಾಲಯದ ಕಲಾಪದಿಂದ ದೂರ ಉಳಿದು ನ್ಯಾಯವಾದಿಗಳ ಸಂಘದಿಂದ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ಸಲ್ಲಿಸಿದರು.ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ನ್ಯಾಯಾಲಯದಿಂದ ಮುದ್ದೇಬಿಹಾಳ ರಸ್ತೆಯಲ್ಲಿರುವ ಮಿನಿವಿಧಾನಸೌಧದವರೆಗೆ ನ್ಯಾಯವಾದಿಗಳು ನ್ಯಾಯಾಲಯ ಕಲಾಪದಿಂದ ಸ್ವಯಂಪ್ರೇರಿತವಾಗಿ ದೂರ ಉಳಿದು ಮೆರವಣಿಗೆ ಮೂಲಕ ತೆರಳಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ, ಸಂಘದ ಕಾರ್ಯದರ್ಶಿ ರವಿ ರಾಠೋಡ ಮಾತನಾಡಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಂ.ಎಸ್.ಬಿದರಕುಂದಿ, ನ್ಯಾಯವಾದಿಗಳಾದ ಪಿ.ಎಂ.ಕಂದಗಲ್ಲ, ಮಂಜುನಾಥ ಬಿರಾದಾರ, ಆರ್.ಎನ್.ಮ್ಯಾಗೇರಿ, ಶಿಲ್ಪಾ ಮುಚಖಂಡಿ, ಕುಮಾರ ಚವ್ಹಾಣ, ಎಂ.ಪಿ.ಪತ್ತಾರ, ಎಂ.ಬಿ.ಜಂಬಲದಿನ್ನಿ, ವೈ.ಎನ್.ಲೆಂಕನ್ನವರ, ಆರ್.ಬಿ.ಗಣಕುಮಾರ, ಎಂ.ಬಿ.ಮೇಟಿ, ಐ.ಎ.ಪರಮಗೊಂಡ, ವೈ.ಎರ್.ಬುದ್ನಿ, ಎಸ್.ಬಿ.ಪಾಟೀಲ, ಸಮೀರ ಕೊರಬು, ನದಾಫ ಎ,.ಎನ್.ಎಂ.ಸಜ್ಜನ, ಲಕ್ಷ್ಮಣ ಉಪ್ಪಾರ, ಈರಣ್ಣ ವಡವಡಗಿ, ಸುರೇಶ ಕೋಲಕಾರ, ಸುನೀಲ ರಾಠೋಡ ಇತರರು ಇದ್ದರು.

Read More

ಸಿಂದಗಿ: ಹಂದಿಗಳ ಹಾವಳಿಯಿಂದ ಸಾರ್ವಜನಿಕರು ಹಲವಾರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಹೇಳಿದರು.ಮಂಗಳವಾರದಂದು ಪಟ್ಟಣದ ಪುರಸಭೆ ಕಛೇರಿಯಲ್ಲಿ ಹಮ್ಮಿಕೊಂಡ ಹಂದಿ ಸಾಕಾಣಿಕೆ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ. ಅದರಿಂದ ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದ್ದು, ಕಾರಣ ಈ ಕೂಡಲೇ ಎಲ್ಲಾ ಹಂದಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲು ಹಂದಿ ಮಾಲಿಕರಿಗೆ ಸೂಚಿಸಿದರು.ಈ ವೇಳೆ ತಾಲೂಕು ಪಶು ವೈದ್ಯಾಧಿಕಾರಿ ಮಾರುತಿ ತಡಲಗಿ ಮಾತನಾಡಿ, ರೋಗ ಹರಡದಂತೆ ವ್ಯಾಕ್ಸಿನೇಷನ್ ವ್ಯವಸ್ಥೆ ಇದ್ದು ಅದರ ಸದುಪಯೋಗ ಪಡಿಸಿಕೊಳ್ಳಲು ಸೂಚಿಸಿದರು.ಇದೇ ಸಂದರ್ಭದಲ್ಲಿ ರಾಮು ಮೋರಟಗಿ ಮಾತನಾಡಿ, ಪುರಸಭೆ ಕಾರ್ಯಾಲಯದಲ್ಲಿ ಹಂದಿ ಹಿಡಿಯುವ ಸಲುವಾಗಿ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಬೇಕು ಎಂದರು.ಈ ವೇಳೆ ಅದಕ್ಕೆ ಉತ್ತರಿಸಿ ಮುಖ್ಯಾಧಿಕಾರಿಗಳು ಕ್ರಮ ವಹಿಸುವುದಾಗಿ ಸೂಚಿಸಿದರು.ಈ ಸಭೆಯಲ್ಲಿ ಕಿರಿಯ ಆರೋಗ್ಯ ನಿರೀಕ್ಷಕಿ ಇಂದುಮತಿ ಮಣೂರ, ಸಿದ್ದು ಅಂಗಡಿ ಸೇರಿದಂತೆ ಹಂದಿ ಸಾಕಾಣಿಕೆ ಮಾಲೀಕರು, ಪುರಸಭೆ ಸಿಬ್ಬಂದಿಗಳು ಇದ್ದರು.

Read More

ಸಿಂದಗಿ: ಸಮಾಜದ ಪ್ರತಿಯೋಬ್ಬ ವ್ಯಕ್ತಿಗೂ ಸಂಸ್ಕೃತಭಾಷೆ ಪರಿಚಯವಾಗಬೇಕು. ಸಂಸ್ಕೃತದ ಬಗ್ಗೆ ಆಸಕ್ತಿ ಮೂಡಬೇಕು. ಇದು ನಮ್ಮ ದೇಶದ ಭಾಷೆ ಎಂದು ಸಿಂದಗಿಯ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸಹ ನಿರ್ದೇಶಕ ಅಶೋಕ ವಾರದ ಹೇಳಿದರು.ಪಟ್ಟಣದ ಶ್ರೀ ಸಾತವಿರೇಶ್ವರ ಸಭಾಭವನದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಮತ್ತು ಶ್ರೀ ಪದ್ಮರಾಜ ಸಂಸ್ಕೃತ ವೇದ ಪಾಠಶಾಲೆ ಇವುಗಳ ಸಹಯೋಗದಲ್ಲಿ ಡಿ.೫-ಡಿ.೧೪ರವರೆಗೆ ಆಯೋಜಿಸಿರುವ ಸಂಸ್ಕೃತ ಪಾಠಶಾಲಾ ಶಿಕ್ಷಕರಿಗೆ ಹಮ್ಮಿಕೊಂಡಿರುವ ಪುನಶ್ಚೇತನ ಶಿಬಿರದ ಅಂಗವಾಗಿ ಸಂಸ್ಕೃತ ಭಾಷೆಯ ಅಭಿವೃದ್ದಿ ಹಾಗೂ ಪ್ರಚಾರದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.ಈ ವೇಳೆ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು ಡಾ. ಮಲ್ಲನಗೌಡ ಎಸ್. ಮಾತನಾಡಿ, ಸಂಸ್ಕೃತ ಭಾಷೆಯ ಬಳಕೆಯಿಂದ ನಮ್ಮ ಮನಸ್ಸು ಪ್ರಫುಲ್ಲವಾಗುತ್ತದೆ. ಸಂಸ್ಕಾರ ಬರುತ್ತದೆ. ಇಂದಿನ ದಿನಮಾನಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆತು ಪಾಶ್ವಾತ್ಯ ಸಂಸ್ಕೃತಿ ಕಡೆಗೆ ಯುವ ಜನಾಂಗ ಗಮನ ಹರಿಸುತ್ತಿದೆ, ಆದರೆ ವಿದೇಶಿಯರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದೆಲ್ಲವಕ್ಕೂ ನಮ್ಮ ಹಿಂದಿನ ಪರಂಪರೆಯೇ…

Read More

ವೀಣಾಂತರಂಗ – ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ whoIs the 1st engineer of your lifeನಮ್ಮ ಜೀವನದ ನಿಜವಾದ ಎಂಜಿನಿಯರ್ ಯಾರು? ನಮ್ಮ ಪಾಲಕರು. ನಾವು ಹುಟ್ಟುವ ಮುಂಚೆಯೇ ನಮ್ಮ ಜೀವನ ಹೇಗೆ ರೂಪಿಸಬೇಕು, ಹೇಗೆ ರೂಪಿಸಬಹುದು ಹೇಗೆ ರೂಪಿಸಬಲ್ಲೆವು ಎಂಬ ನೀಲನಕ್ಷೆಯನ್ನು ನಮ್ಮ ಪಾಲಕರು ತಯಾರಿಸುತ್ತಾರೆ.ಬಹುತೇಕ ಆ ತಯಾರಿಯ ಹಿಂದೆ ಸಾಕಷ್ಟು ಆಸೆ, ಆಕಾಂಕ್ಷೆ ತಾವು ಕಂಡ ಕನಸುಗಳ ನನಸು ಮಾಡುವ ತಮ್ಮ ಮಕ್ಕಳ ಕುರಿತು ಬೃಹತ್ತಾದ ಅಪೇಕ್ಷೆ ಅವರಲ್ಲಿ ಇರುತ್ತದೆ.ಕೇವಲ 4 ವರ್ಷದ ಎಂಜಿನಿಯರಿಂಗ್ ಅಭ್ಯಾಸ ಮಾಡುವವರನ್ನು ಅಭಿಯಂತರರು ಎಂದು ಕರೆಯಬಹುದಾದರೆ ನಮ್ಮ ಜೀವನ ರೂಪಿಸಲು ತಮ್ಮ ಆಸೆ, ಆಕಾಂಕ್ಷೆ, ಅನುಭವಗಳನ್ನು ಧಾರೆ ಎರೆಯುವ ತಂದೆತಾಯಿಗಳನ್ನು ಕೂಡ ಎಂಜಿನಿಯರ್ ಎಂದು ಕರೆಯಬಹುದಲ್ಲವೇ … ಇನ್ನು ಎರಡನೇ ಪ್ರಶ್ನೆ ಕೃಷ್ಣರಾಜ ಸಾಗರ ಡ್ಯಾಂ ಕಟ್ಟಿಸಿದ್ದು ಯಾರು ???ಕೃಷ್ಣರಾಜಸಾಗರ ಡ್ಯಾಮ್ ಕಟ್ಟಿಸಿದ್ದು ಮೈಸೂರಿನ ಅರಸರು. ಅದರ ಎಂಜಿನಿಯರ್ ನಮ್ಮೆಲ್ಲರ ಪ್ರೀತಿಯ ಸರ್ ಎಂ. ವಿಶ್ವೇಶ್ವರಯ್ಯನವರು. ಆದರೆ ನಿಮಗೆ ಗೊತ್ತೇ…

Read More

ವಿಜಯಪುರ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ನಾನಾ ಪದಕಗಳನ್ನು ಪಡೆದಿರುವ ಖ್ಯಾತನಾಮರು ನಗರದಲ್ಲಿ ಡಿಸೆಂಬರ್ 24 ರಂದು ನಡೆಯುವ ವೃಕ್ಷತ್ಥಾನ್ ಹೆರಿಟೇಜ್ ರನ್- 2023ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಲ ದೇಶದ ನಾನಾ ಭಾಗಗಳಿಂದ ಕ್ರೀಡಾಪಟುಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕರ್ನಾಟಕ ಮಾತ್ರವಲ್ಲ ದೇಶ, ವಿದೇಶಗಳಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಮ್ಯಾರಾಥಾನ್ ಗಳಲ್ಲಿ ಪಾಲ್ಗೋಂಡ ಹೆಸರಾಂತ ಮ್ಯಾರಾಥಾನ್ ಪಟುಗಳು ಕೂಡ ಪಾಲ್ಗೊಳ್ಳುತ್ತಿದ್ದಾರೆ.ಯವಕರು, ಮಧ್ಯ ವಯಸ್ಕರು, ಹಿರಿಯರು, ಹಿರಿಯ ಮಹಿಳೆಯರೂ ಆನಲೈನ್ ಮೂಲಕ ಹೆಸರು ನೋಂದಾಯಿಸಿ ಇತರರೂ ಪಾಲ್ಗೊಳ್ಳಲು ಸ್ಪೂರ್ತಿ ನೀಡಿದ್ದಾರೆ. 72 ವರ್ಷದ ಹಿರಿಯ ಮಹಿಳೆ, ಸಾಫ್ಟವೇರ್ ಎಂಜಿನಿಯರ್, ವೃತ್ತಿಪರ ಮ್ಯಾರಾಥಾನ್ ಓಟಗಾರರು ಸೇರಿದಂತೆ ಸಾವಿರಾರು ಜನರು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ.ವಿಜಯಪುರ ವೃಕ್ಷತ್ಥಾನ್ ಹೆರಿಟೇಜ್ ರನ್- 2023ರಲ್ಲಿ ಪಾಲ್ಗೊಳ್ಳಲಿರುವ ಖ್ಯಾತನಾಮರ ಪರಿಚಯ ಇಲ್ಲಿದೆ.*1.ಕಟಪಾಡಿ ಸುಲತಾ ಕಾಮತ*ಉಡುಪಿಯ ಕಾಪುವಿನ ಹಿರಿಯ 72 ವರ್ಷ ವಯಸ್ಸಿನ ಹಿರಿಯ ಮಹಿಳೆ ಕಟಪಾಡಿ ಸುಲತಾ ಕಾಮತ ಬರಿಗಾಲ ಓಟಗಾರ್ತಿ ಎಂದೇ ಖ್ಯಾತಿ ಪಡೆದಿದ್ದಾರೆ. ಬರಿಗಾಲಿನಲ್ಲಿ ಓಡುವ…

Read More

ವಿಜಯಪುರ: ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ 33ನೇ ರಾಜ್ಯ ಸಮ್ಮೇಳನ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಡಿಸೆಂಬರ್ 15 ರಿಂದ ಡಿಸೆಂಬರ್ 17ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಸಮ್ಮೇಳನದ ಸಂಘಟನಾ ಅಧ್ಯಕ್ಷರಾದ ಡಾ. ವಿದ್ಯಾ ಥೊಬ್ಬಿ ಮತ್ತು ಡಾ. ಶೈಲಜಾ ಬಿದರಿ ತಿಳಿಸಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸಮ್ಮೇಳನದ ಮುನ್ನಾ ದಿನ ಡಿಸೆಂಬರ್ 14 ರಂದು ಗುರುವಾರ ಬೆಳಿಗ್ಗೆ 8 ಗಂಟೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಹನುಮಂತರಾಯ ರಂಗಮಂದಿರ ವರೆಗೆ ಬೇಟಿ ಬಚಾವೋ, ಬೇಟಿ ಪಡಾವೋ ವಾಕಥಾನ್ ನಡೆಯಲಿದೆ. ಈ ವಾಕಥಾನ್‌ಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಚಾಲನೆ ನೀಡಲಿದ್ದಾರೆ. ವಿಜಯಪುರ ಎಸ್.ಪಿ ರಿಶಿಕೇಶ ಸೋನಾವಣೆ ಚಾಲನೆ ನೀಡಲಿದ್ದಾರೆ. ಬಳಿಕ 9.30 ಗಂಟೆಗೆ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸಂಘದ ರಾಜ್ಯಾಧ್ಯಕ್ಷೆ ಡಾ. ವಿದ್ಯಾ ಥೊಬ್ಬಿ, ಡಾ. ರಾಜಶ್ರೀ ಪಲಾಡಿ ಅವರು ಹೆಣ್ಣುಮಗು ಉಳಿಸಿ…

Read More