Subscribe to Updates
Get the latest creative news from FooBar about art, design and business.
Author: editor.udayarashmi@gmail.com
ನಾನು ಯಾವತ್ತೂ ಬಸವಾದಿ ಶರಣರ ಅನುಯಾಯಿ | ಸಿದ್ದೇಶ್ವರ ಶ್ರೀ ಆಶಯದಂತೆ ಬದುಕೋಣ | ಸಿಎಂ ಬಣ್ಣನೆ ವಿಜಯಪುರ: ಸಿದ್ದೇಶ್ವರ ಸ್ವಾಮೀಜಿಗಳ ಬದುಕೇ ನಮಗೆ ಆದರ್ಶ. ಅವರ ಜೀವನದ ಆಶಯದಂತೆ ಬದುಕುವುದೇ ಅವರಿಗೆ ಸಲ್ಲಿಸುವ ದೊಡ್ಡ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ದೇಶ್ವರ ಸ್ವಾಮೀಜಿಗಳಿಗೆ ಗುರುನಮನ ಸಲ್ಲಿಸಿದರು.ಮಂಗಳವಾರ ನಗರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಮಹಾ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾನು ಇವತ್ತಿಗೂ-ಯಾವತ್ತಿಗೂ ಬಸವಾದಿ ಶರಣರ ಅನುಯಾಯಿ. ಸಿದ್ದೇಶ್ವರ ಸ್ವಾಮೀಜಿ ಬಸವಣ್ಣನವರ ರೀತಿಯಲ್ಲೇ ಜಾತಿ ಮತ್ತು ವರ್ಗರಹಿತ ಸಮ ಸಮಾಜಕ್ಕಾಗಿ ಶ್ರಮಿಸಿದವರು. ಸಿದ್ದೇಶ್ವರ ಸ್ವಾಮಿಗಳು ಜ್ಞಾನ ಸಂಪಾದಿಸಿದರು. ಆ ಜ್ಞಾನವನ್ನು ಜನಮಾನಸಕ್ಕೆ ಹಂಚಿದರು. ದ್ವೇಷ, ಅಹಂಕಾರದಿಂದ ಬಿಡುಗಡೆ ಹೊಂದಿದ ಅತ್ಯುನ್ನತ ಮನುಷ್ಯತ್ವದ ಸೃಷ್ಟಿಗೆ ಶ್ರಮಿಸಿದವರು. ಇವರ ಬದುಕು ಮತ್ತು ಸಾಧನೆಯನ್ನು ವರ್ಣಿಸಲು ಪದಗಳೇ ಇಲ್ಲ. ಅಷ್ಟು ಸರಳತೆ ಅವರ ಬದುಕು ಮತ್ತು ವ್ಯಕ್ತಿತ್ವದಲ್ಲಿ ಬೆರೆತಿತ್ತು ಎಂದು ಹೇಳಿದರು.ಪರಸ್ಪರ ದ್ವೇಷವನ್ನು ಮಾಡಬಾರದು. ಹೇಗೆ ತಾಯಿ ಮಕ್ಕಳನ್ನು ಪ್ರೀತಿಸುತ್ತಾಳೆ, ಹಾಗೆ ನಾವು ಜನರನ್ನು…
ಬ್ರಹ್ಮದೇವನಮಡು: ಸಮೀಪದ ಕಡಕೋಳ ಮಡಿವಾಳೇಶ್ವರ ಅನುಭವ ಜಾತ್ರಾ ಮಹೋತ್ಸವ ಅಂಗವಾಗಿ ಜ.೩ರಂದು ಸಂಜೆ ೭ ಗಂಟೆಗೆ ಮಹಾ ಪ್ರಸಾದ (ಖಾಂಡ) ರಾತ್ರಿ ೮ ಗಂಟೆಗೆ ಧಮ೯ಸಭೆ ನಡೆಯಲಿದೆ. ಚಿಣಮಗೇರಿಯ ಸಿದ್ದರಾಮ ಶಿವಾಚಾಯ೯ರು, ನೀರಗುಡಿಯ ಹವಾಮಲ್ಲಿನಾಥ ಮಹಾರಾಜರು ಸಾನ್ನಿಧ್ಶವಹಿಸುವರು. ಶ್ರೀಮಠದ ಡಾ.ರುದ್ರಮುನಿ ಶಿವಾಚಾಯ೯ರು ಅಧ್ಶಕ್ಷತೆವಹಿಸುವರು. ಶಿರಶ್ಶಾಡದ ಅಭಿನವ ಮುರಘೇಂದ್ರ ಶಿವಾಚಾಯ೯ರು ನೇತೃತ್ವ, ಆಲಮೇಲದ ಚಂದ್ರಶೇಖರ ಶಿವಾಚಾಯ೯ರು, ಗಡಿಗೌಡಗೌಂವದ ಡಾ.ಶಾಂತವೀರ ಶಿವಾಚಾಯ೯ರು, ಯಡ್ರಾಮಿಯ ಸಿದ್ದಲಿಂಗ ಸ್ವಾಮೀಜಿ, ಕುಕನೂರದ ಚನ್ನಮಲ್ಲದೇವರು ಹಿರೇಮಠ, ಹೋತಪೇಟಿಯ ಶಿವಲಿಂಗ ಶರಣರು, ಅರಳಗುಂಡಗಿಯ ಬಲವಂತ ಶರಣರು, ಇಟಗಿಯ ಚಂದ್ರಶೇಖರ ದೇವರು ವೀರಗೋಟಾದ ಅಡವಿಲಿಂಗ ಮಹಾರಾಜರು ಪಾಲ್ಗೊಳ್ಳುವರು. ಚಬನೂರದ ಜ್ಶೋತಿಷ್ಶರತ್ನ ರಾಮಲಿಂಗಯ್ಶ ಹಿರೇಮಠ ಧಮ೯ಸಭೆ ಉದ್ಘಾಟಿಸುವರು. ಸಂಸದ ಉಮೇಶ ಜಾಧವ ಅಧ್ಶಕ್ಷತೆ, ಡಾ.ಅಜಯಸಿಂಗ್ ಕ್ಶಾಲೆಂಡರ್ ಬಿಡುಗಡೆ ಮಾಡುವರು. ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ.ಪಾಟೀಲ, ಸಿಂದಗಿ ಶಾಸಕ ಅಶೋಕ ಮನಗೂಳಿ, ರಾಜುಗೌಡ ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಪ್ರೊ.ಡಾ.ಮೀನಾಕ್ಷಿ ಬ್ಶಾಳಿ ಸೇರಿದಂತೆ ಮಠಾಧೀಶರು, ವಿವಿಧ ರಾಜಕೀಯ ಮುಖಂಡರು, ಗಣ್ಶರು ಪಾಲ್ಗೊಳ್ಳಲಿದ್ದಾರೆ.ಜ. ೪ ರಂದು ಬೆಳಗ್ಗೆ ೧೦ಕ್ಕೆ…
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಗೋಲಗೇರಿಯ ಗ್ರಾಮಸ್ತರು ಹಾಗೂ ಗೆಳೆಯರ ಬಳಗದಿಂದ ಸಿದ್ದೇಶ್ವರ ಶ್ರೀಗಳ ಪುಣ್ಶಾರಾಧನೆ ಅಂಗವಾಗಿ ಪುಷ್ಪಾಚ೯ನೆ ಮಾಡಿ ಪೂಜೆ ಸಲ್ಲಿಸಿದರು.ಈ ವೇಳೆ ಶಾಂತಪ್ಪ ಕೇಶಟ್ಟಿ, ಮಲ್ಲಾರೀ ಜೋಶಿ, ಬಸವರಾಜ ನಾವಿ, ಶಿವು ಹುರಕಡ್ಲಿ, ಪ್ರಶಾಂತ ಪಟ್ಟಣಶೆಟ್ಟಿ, ಬಸವರಾಜ ಕೇಶಟ್ಟಿ, ಮಡಿವಾಳ ನಾಯ್ಕೋಡಿ, ರಾಜು ಕುಲಕರ್ಣಿ, ಗುರುರಾಜ ಹುರಕಡ್ಲಿ, ವೇಂಕಟೇಶ ಜೋಶಿ, ನಾನಾಗೌಡ ಪಾಟೀಲ, ಮಹಾಂತೇಶ ನಾಯ್ಕೋಡಿ ಹಾಗೂ ಕಿವುಡ ಮತ್ತು ಮೂಕ ಮಕ್ಕಳ ಶಾಲೆ, ಗುರು ಕುಲ ವಿದ್ಶಾ ಮಂದಿರ ಮಕ್ಕಳು, ಸಿದ್ದಸಿರಿ ಬ್ಯಾಂಕಿನ ಸಿಬ್ಬಂದಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಮೋರಟಗಿ: ದಿನದಿಂದ ದಿನಕ್ಕೆ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದಂತೆ ಸಂಸ್ಕೃತಿಕ ಕಾರ್ಯಕ್ರಮಗಳು ಮುಳುಗುತ್ತಿವೆ. ಸಂಗೀತದಲ್ಲಿ ಶಾಂತಿ ಅಡಗಿದೆ. ಸಾಂಸಾರಿಕ ನಾಟಕಗಳು ರಸ ಮಂಜರಿ ಹಾಗೂ ಸಂಸ್ಕೃತಿಕ ಕಾರ್ಯಕ್ರಮ ಗ್ರಾಮೀಣ ಬಾಗದಲ್ಲಿ ಮಾತ್ರ ಜೀವಂತವಿವೆ ಸಂಗೀತ ಕೇಳುವುದರಿಂದ ಶಾಂತಿ ಪ್ರಾಪ್ತಿವಾಗುತ್ತದೆ ಎಂದು ಬಗಲೂರು ಗ್ರಾ. ಪಂ. ಅಧ್ಯಕ್ಷ ಲವಕುಶ ಮೋರಟಗಿ ಹೇಳಿದರು.ಸಮೀಪದ ಕುಳೇಕುಮಟಗಿ ಗ್ರಾಮದಲ್ಲಿ ಶ್ರೀ ಅಮೋಘಸಿದ್ದೇಶ್ವರ ಸಂಸ್ಕೃತಿಕ ಕಲಾ ಸಂಘ ಮೋರಟಗಿ ವತಿಯಿಂದ ಮಂಗಳವಾರ ಹಮ್ಮಿಕೊಂಡ ವಚನ ಗಾಯನ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ನಮ್ಮ ಹಿರಿಯರಲ್ಲಿ ಅಕ್ಷರ ಜ್ಞಾನ ಇರಲಿಲ್ಲ. ಆ ಸಮಯದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೂಡಾ ಕೊಡುತ್ತಿರಲಿಲ್ಲ. ವ್ಯವಸಾಯಕ್ಕೆ ಹೆಚ್ಚಿನ ಆದ್ಯತೆ ನೀಡುತಿದ್ದರು. ಶಿಕ್ಷಣ ಪಡೆಯದಿದ್ದರೂ ಕೂಡಾ ನಾಟಕ ಬಯಲಾಟ ಮತ್ತು ಸಂಗೀತಗಳಲ್ಲಿ ಭಾಗವಹಿಸಿ ಪಾತ್ರ ನಿರ್ವಹಿಸಿ ಅಕ್ಷರ ಮುಟ್ಟಿ ಮಾತನಾಡುತಿದ್ದರು ಎಂದರು.ಕಾರ್ಯಕ್ರಮದಲ್ಲಿ ರಾಮಸ್ವಾಮಿ ಮಯೂರ, ಲಕ್ಶ್ಮಣ ಕಟ್ಟಿಮನಿ, ಸಿದ್ದು ಅಗಸರ, ಸಿದ್ದಣ್ಣ ನಾರಾಯಣಪುರ, ಮಲ್ಲಿಕಾರ್ಜುನ ಅಗಸರ, ಅಂಬರೀಷ್ ಕಟ್ಟಿಮನಿ, ಮಹಾಂತಪ್ಪ ಮಂದೇವಾಲಿ, ಎಸ್ ಬಿ ಘತ್ತರಗಿ, ಆರ್…
ದೇವರಹಿಪ್ಪರಗಿ ಪಪಂ ಸದಸ್ಯರಿಂದ ತಹಶೀಲ್ದಾರ ಮೂಲಕ ಇಂಡಿ ಉಪ ವಿಭಾಗಾಧಿಕಾರಿಗೆ ಮನವಿ ದೇವರಹಿಪ್ಪರಗಿ: ದೇವರಹಿಪ್ಪರಗಿ ತಾಲ್ಲೂಕನ್ನು ವಿಜಯಪುರ ಜಿಲ್ಲೆಯಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ಪಟ್ಟಣಪಂಚಾಯಿತಿ ಸದಸ್ಯರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರ ಮೂಲಕ ಇಂಡಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಚೇರಿಗೆ ಮಂಗಳವಾರ ಆಗಮಿಸಿದ ಪಟ್ಟಣ ಪಂಚಾಯಿತಿ ಸದಸ್ಯರು ಇಂಡಿ ತಾಲ್ಲೂಕನ್ನು ಜಿಲ್ಲಾ ಕೇಂದ್ರವಾಗಿ ಸೃಜಿಸುತ್ತಿರುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ದೇವರ ಹಿಪ್ಪರಗಿ ತಾಲ್ಲೂಕನ್ನು ನೂತನ ಜಿಲ್ಲೆಗೆ ಪರಿಗಣಿಸದೇ ಮೂಲ ಜಿಲ್ಲೆಯಾದ ವಿಜಯಪುರದಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಮಸಬಿನಾಳ ಹಾಗೂ ಪ್ರಕಾಶ ಮಲ್ಲಾರಿ ಮಾತನಾಡಿ, ದೇವರಹಿಪ್ಪರಗಿ ತಾಲ್ಲೂಕು, ಜಿಲ್ಲಾ ಕೇಂದ್ರ ವಿಜಯಪುರಕ್ಕೆ ೩೦ ಕಿ.ಮೀಗಳ ಸನಿಹದಲ್ಲಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿ-೫೦ರ ಮೂಲಕ ನೇರಸಂಪರ್ಕ ಹೊಂದಿದ್ದು, ಎಲ್ಲ ವಾಣಿಜ್ಯ, ವ್ಯಾಪಾರ ಸೇರಿದಂತೆ ದೈನಂದಿನ ವಹಿವಾಟುಗಳನ್ನು ಅವಲಂಬಿಸಿದೆ. ಆದ್ದರಿಂದ ವಿಜಯಪುರ ಜಿಲ್ಲೆಯೇ ತಾಲ್ಲೂಕಿನ ಜನತೆಯ ಆದ್ಯತೆಯಾಗಿದೆ ಎಂದರು.ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಶಾಂತಯ್ಯ ಜಡಿಮಠ, ಕಾಶೀನಾಥ ಬಜಂತ್ರಿ, ಉಮೇಶ ರೂಗಿ,…
ಬಸವನಬಾಗೇವಾಡಿ: ಪಟ್ಟಣದ ಗಣಪತಿ ವೃತ್ತದಲ್ಲಿ ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿಯವರ ಪ್ರಥಮ ಪುಣ್ಯಸ್ಮರಣೆಯಂಗವಾಗಿ ಮಂಗಳವಾರ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗುರು ನಮನ ಸಲ್ಲಿಸಲಾಯಿತು.ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದ ಅವರು, ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಆಧ್ಯಾತ್ಮಿಕ ಜ್ಙಾನವನ್ನು ಎಲ್ಲರಿಗೂ ತಲುಪಿಸಿದ್ದಾರೆ. ಅವರ ಸರಳ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ. ಬಸವನಬಾಗೇವಾಡಿಯಲ್ಲಿ ೨೦೧೫ ರ ನವೆಂಬರ್ ತಿಂಗಳಲ್ಲಿ ನಿರಂತರವಾಗಿ ಒಂದು ತಿಂಗಳ ಕಾಲ ಅವರು ನಡೆಸಿದ ಪ್ರವಚನ ನಾವೆಂದು ಮರೆಯುವಂತಿಲ್ಲ. ಅವರ ಪ್ರವಚನ ಕಾಲದಲ್ಲಿ ಬಸವನಬಾಗೇವಾಡಿಯನ್ನು ಸದಾ ಸ್ಮರಿಸುತ್ತಿದ್ದರು. ಅವರು ನೀಡಿರುವ ಜೀವನ ಸಂದೇಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಅಶೋಕ ಬಾಗೇವಾಡಿ, ಮಹಾಂತೇಶ ಹಂಜಗಿ, ಅಶೋಕ ಗುಳೇದ, ಅನಿಲ ಮುಳವಾಡ ಶ್ರೀಶೈಲ ಮುಳವಾಡ, ರೇವಣಸಿದ್ದ ಜಾಡರ, ಪ್ರಭಾಕರ ಖೇಡದ, ಸದಾಶಿವ ಬೇವನೂರ, ಶ್ರೀಶೈಲ ಬೇವನೂರ, ಮುದುಕಣ್ಣ ನಾಗೂರ, ಮಹಾದೇವ ಹಂಜಗಿ ಇತರರು ಇದ್ದರು.…
ಬಸವನಬಾಗೇವಾಡಿ: ಅಖಂಡ ಬಸವನಬಾಗೇವಾಡಿ ತಾಲೂಕಿನ ಕೊಡಗಾನೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕ ಸಿದ್ದಪ್ಪ ಎಸ್.ಬೂದಿಗೋಳಿ ಅವರು ವಯೋನಿವೃತ್ತಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಶಾಲೆಯಲ್ಲಿ ಎಸ್ಡಿಎಂಸಿ ಸದಸ್ಯರು, ಶಿಕ್ಷಕರು, ವಿವಿಧ ಬಾಂಧವರು ಸನ್ಮಾನಿಸಿ ಶುಭಕೋರಿದರು.ಇವರು ಶಿಕ್ಷಣ ಇಲಾಖೆಯಲ್ಲಿ 30 ವರ್ಷ, 4 ತಿಂಗಳು ಸೇವೆ ಸಲ್ಲಿಸಿದ್ದರು.ಈ ಸಂದರ್ಭದಲ್ಲಿ ಶಿಕ್ಷಕರಾದ ಜಿ.ಡಿ.ಪಾಟೀಲ, ಎಚ್.ಬಿ.ಕೊಡೆಕಲ್, ಗುರು ಇಂಗಳಗಿ, ಯರಡೋಣಿ, ಬಸರಕೋಡ,ಎಸ್ಡಿಎಂಸಿ ಸದಸ್ಯರು, ಬಂಧು-ಬಾಂಧವರು ಇತರರು ಇದ್ದರು.
ಬಸವನಬಾಗೇವಾಡಿ: ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ರಾಮ ಮಂದಿರದ ಭಾವಚಿತ್ರ ಹಾಗೂ ಆಮಂತ್ರಣ ಪತ್ರಿಕೆ ವಿತರಣಾ ಕಾರ್ಯಕ್ರಮಕ್ಕೆ ಮಂಗಳವಾರ ಬಸವಜನ್ಮ ಸ್ಮಾರಕ ಮುಂಭಾಗದಲ್ಲಿ ಸಿದ್ಧಲಿಂಗ ಸ್ವಾಮೀಜಿ, ಪಂಚಾಕ್ಷರಿ ಕಾಳಹಸ್ತೇಶ್ವರಮಠ ಚಾಲನೆ ನೀಡಿದರು.ಆರ್.ಎಸ್.ಎಸ್ ಜಿಲ್ಲಾ ಘಟಕದ ಸೇವಾ ಪ್ರಮುಖ ಡಾ.ಬಸವರಾಜ ಚವ್ಹಾಣ ಮಾತನಾಡಿ, ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ರಾಮ ಮಂದಿರ ಭಾವಚಿತ್ರ ಹಾಗೂ ಮಂತ್ರಾಕ್ಷತೆ ವಿತರಣೆ ಮಾಡಲಿದ್ದಾರೆ. ವಿತರಣೆಗೆ ತೆರಳಿದಾಗ ಕಾರ್ಯಕರ್ತರು ಶುಭ್ರ ವಸ್ತ್ರ ಧರಿಸಿರಬೇಕು. ಮಂತ್ರಾಕ್ಷತೆಯ ಮಹತ್ವ ತಿಳಿಸಿಕೊಡಬೇಕು ಎಂದು ಹೇಳಿದರು.ವಿ.ಎಚ್.ಪಿ ಪ್ರಧಾನ ಕಾರ್ಯದರ್ಶಿ ಅಶ್ವಿನಿಕುಮಾರ ಪಟ್ಟಣಶೆಟ್ಟಿ, ಮುಖಂಡರಾದ ಸಂಗನಗೌಡ ಚಿಕ್ಕೊಂಡ, ಎಸ್.ಎ.ದೇಗಿನಾಳ, ವಿವೇಕಾನಂದ ಕಲ್ಯಾಣಶೆಟ್ಟಿ, ಪರಶುರಾಮ ಕುರಾಡೆ, ಬಸವರಾಜ ಬಿಜಾಪುರ, ರಾಜು ಮುಳವಾಡ, ಈಶ್ವರ ಪರಮಗೊಂಡ, ನಾಗರಾಜ ಪಟ್ಟಣಶೆಟ್ಟಿ, ವಿಠ್ಠಲ ಕುಲಕರ್ಣಿ, ರಾಜು ಮೋದಿ, ಪ್ರಭು ಪಟ್ಟಣಶೆಟ್ಟಿ, ಚನ್ನಯ್ಯ ಸಾರಂಗಮಠ, ಶ್ರೀಶೈಲ ಶಿರಗುಪ್ಪಿ, ಸ್ವರೂಪರಾಣಿ ಬಿಂಜಲಬಾವಿ, ಮಹಾದೇವಿ ಬಿರಾದಾರ, ಜಯಶ್ರೀ ಪಟ್ಟಣಶೆಟ್ಟಿ, ಮಹೇಶ ಸಾಲವಾಡಗಿ, ವಿಶ್ವನಾಥ ನೆಗಿನಾಳ ಇದ್ದರು. ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಮನೆಗಳಿಗೆ ತೆರಳಿ ಮಂತ್ರಾಕ್ಷತೆ ಹಾಗೂ ರಾಮಮಂದಿರ…
ಬಸವನ ಬಾಗೇವಾಡಿ: ಇಂದಿನ ಕಾಲದಲ್ಲಿ ಮಕ್ಕಳಿಗೆ ವಿದ್ಯೆ ಚೆನ್ನಾಗಿ ಸಿಗುತ್ತಿದೆಯಾದರೂ ಅವರಿಗೆ ಕಷ್ಟ ಗೊತ್ತಾಗದೇ ಇರುವದು ವಿಷಾದನೀಯ. ಮಕ್ಕಳು ವಿದ್ಯೆಯನ್ನು ಚೆನ್ನಾಗಿ ಕಲಿಯುವ ಜೊತೆಗೆ ಉತ್ತಮ ಸಂಸ್ಕಾರ ಕಲಿತುಕೊಳ್ಳುವಂತಾಗಬೇಕೆಂದು ಚಲನಚಿತ್ರ ಹಾಸ್ಯನಟ ವೈಜನಾಥ ಬಿರಾದಾರ ಹೇಳಿದರು.ಪಟ್ಟಣಕ್ಕೆ ಸೋಮವಾರ ಸಂಜೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಚಿಕ್ಕವರಿದ್ದಾಗ ಅಷ್ಟಾಗಿ ಹಿರಿಯರು ವಿದ್ಯೆಗೆ ಮಹತ್ವ ಕೊಡುತ್ತಿರಲಿಲ್ಲ. ನಾವು ಶಾಲೆಯಿಂದ ಬಂದ ನಂತರ ಮನೆಯಲ್ಲಿ ಹೇಳುವ ಎಲ್ಲ ಕೆಲಸಗಳನ್ನು ಮಾಡುವ ಪರಿಸ್ಥಿತಿಯಿತ್ತು. ಅಭ್ಯಾಸ ಮಾಡಲು ಅಷ್ಟಾಗಿ ಸಮಯ ಸಿಗುತ್ತಿರಲಿಲ್ಲ. ಇಂದು ಮಕ್ಕಳಿಗೆ ಹೆಚ್ಚು ಕೆಲಸಗಳನ್ನು ಹಚ್ಚದೇ ಅವರಿಗೆ ಅಭ್ಯಾಸ ಮಾಡಲು ಅವಕಾಶ ಕೊಟ್ಟರೂ ಅವರು ಅದನ್ನು ಸದುಪಯೋಗ ಪಡಿಸಿಕೊಳ್ಳದೇ ಮೊಬೈಲ್ದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಈ ಅಭ್ಯಾಸ ಹೋಗಿ ಅವರು ಉತ್ತಮ ವಿದ್ಯಾವಂತರಾಗಿ ಹೊರಹೊಮ್ಮುವಂತಾಗಬೇಕಾದ ಅಗತ್ಯವಿದೆ ಎಂದರು.ನಾನು ಇದುವರೆಗೂ ಸುಮಾರು ೫೫೦ ಚಲನಚಿತ್ರಗಳಲ್ಲಿ ನಟನೆ ಮಾಡಿದ್ದೇನೆ. ನಾನು ರಂಗಭೂಮಿಯಿಂದ ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದು. ರಂಗಭೂಮಿಯು ಕಲಾವಿದರರನ್ನು ಬೆಳೆಯಲು ಅವಕಾಶ ನೀಡುತ್ತದೆ. ನಾನು ನಟಿಸಿದ…
ಯಡ್ರಾಮಿ: ಪಟ್ಟಣದ ಆರಾಧ್ಯ ದೇವತೆ ಶ್ರೀ ಗ್ರಾಮ ದೇವತೆ ಜಾತ್ರಾ ಮಹೋತ್ಸವವು ಜ.೪ ಮತ್ತು ಜ.೫ ಎರೆಡು ದಿನಗಳ ಕಾಲ ನಡೆಯಲಿದೆ ಎಂದು ದೇವಸ್ಥಾನ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.ಗುರುವಾರ (ಜ.೪) ರಂದು ಸಾಯಂಕಾಲ ದೇವಿಯನ್ನು ಬಣ್ಣದಿಂದ ದೇವಸ್ಥಾನಕ್ಕೆ ಕರೆದುಕೊಂಡು ಬಂದು, ಅಲಂಕಾರ ಮಾಡಿದ ರಥದಲ್ಲಿ ಶ್ರೀ ದೇವಿಯು ಆಸೀನಳಾಗುವಳು. ನಂತರ ರಾತ್ರಿ ೧೧ ಗಂಟೆಗೆ ಮಂಗಳೂರು ಹುಲಿ ವೇಷದಾರಿ ಕುಣಿತ, ಡೊಳ್ಳು ಕುಣಿತ, ಕುದುರೆ ಕುಣಿತ, ಕರಡಿ ಮಜಲು ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಪಟ್ಟಣದ ಹಳೆ ಬಜಾರ್, ವಿರಕ್ತಮಠ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಮೆರವಣಿಗೆ ಹೊರಟು ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ಬ್ರಾಹ್ಮಿ ಮಹೋರ್ತದಲ್ಲಿ ಶ್ರೀ ದೇವಿಗೆ ಗಂಗಾಸ್ನಾನ ನಡೆಯುವದು. ನಂತರ ಶ್ರೀ ದೇವಿಯ ಮೆರವಣಿಗೆ ಹೊರಟು ಪಟ್ಟಣದ ನಡುಗಟ್ಟೆ ಲಕ್ಷ್ಮೀದೇವಿಯ ದೇವಸ್ಥಾನದ ಹತ್ತಿರ ತಲುಪುವದು. ಸಾಯಂಕಾಲ ೪ರ ವರೆಗೆ ಭಕ್ತರ ಹರಕೆ, ಪೂಜೆ, ನೈವೇಧ್ಯ ನೆರವೇರಲಿದ್ದು, ನಂತರ ಶ್ರೀ ದೇವಿಯ ಮೆರವಣಿಗೆ ಪ್ರಾರಂಭಗೊಂಡು…
