Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರದ ಬಂಜಾರಾ ಪಿಯು ಕಾಲೇಜು ವತಿಯಿಂದ ಕುಷ್ಟ ರೋಗಿಗಳಿಗೆ ಅನ್ನಸಂತರ್ಪಣೆ ವಿಜಯಪುರ: ಬಂಜಾರಾ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಿಂದ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರು ವಿಜಯಪುರದ ಶಿವಗಿರಿಯ ಪಕ್ಕದಲ್ಲಿರುವ “ಕುಷ್ಟರೋಗಿಗಳ ಕಾಲೋನಿಗೆ ಹೋಗಿ ಕುಷ್ಟರೋಗಿಗಳಿಗೆ ಅನ್ನಸಂತರ್ಪಣೆ ಮಾಡಿಸಿ ಮಾನವೀಯತೆ ಮೆರೆದರು.ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಂ.ಎಸ್.ನಿಂಬರಗಿ ಮಾತನಾಡಿ, ಕುಷ್ಟರೋಗಿಗಳ ಆತ್ಮಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು, ಕುಷ್ಟ ರೋಗಿಗಳ ಕಾರ್ಯ ಚಟುವಟಿಕೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕು. ಕುಷ್ಟರೋಗಕ್ಕೆ ಅಂಟಿಕೊಂಡಿರುವ ಕಳಂಕ, ತಾರತಮ್ಯ ಹೋಗಲಾಡಿಸಲು ಅಧಿಕಾರಿಗಳು ಶ್ರಮಿಸಬೇಕು. ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.ಈ ವೇಳೆಯಲ್ಲಿ ಎಸ್.ಎಸ್.ತೆನಿಹಳ್ಳಿ ಮಾತನಾಡಿದರು.ಈ ಕಾರ್ಯಕ್ಕೆ ಬಿಜಾಪುರ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಎಲ್.ಚವ್ಹಾಣ್, ಕಾರ್ಯಾಧ್ಯಕ್ಷ ಕೆ.ಜಿ.ರಾಠೋಡ, ಕಾರ್ಯದರ್ಶಿ ಆರ್.ಡಿ.ಚವ್ಹಾಣ್, ಪ್ರಾಚಾರ್ಯ ಎಸ್.ಬಿ.ಪವಾರ, ಉಪನ್ಯಾಸಕ ಶಿವಕುಮಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೋರಟಗಿ ಕಲ್ಪವೃಕ್ಷ ಪದವಿ ಕಾಲೇಜಿನಲ್ಲಿ ನಡೆದ ಸಮಾರಂಭ |ಇಸ್ರೋ ವಿಜ್ಞಾನಿ ದಂಪತಿಗೆ ಸನ್ಮಾನ | ವಿದ್ಯಾರ್ಥಿಗಳೊಂದಿಗೆ ಸಂವಾದ ಮೋರಟಗಿ: ಮೊಟ್ಟ ಮೊದಲು ವಿದ್ಯಾರ್ಥಿಗಳ ಗುರಿ ಗಟ್ಟಿಯಾಗಿರಬೇಕು ಮನಸ್ಸಿಟ್ಟು ಪುಸ್ತಕ ಓದಿದರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ, ಪುಸ್ತಕವನ್ನು ತಲೆಬಾಗಿ ಓದಿದರೆ ಮುಂದೊಂದು ದಿನ ಪುಸ್ತಕ ನಿಮ್ಮನ್ನು ತಲೆ ಎತ್ತಿ ತಿರುಗಾಡುವಂತೆ ಮಾಡುತ್ತದೆ. ವಿದ್ಯಾರ್ಥಿ ಜೀವನ ಬಂಗಾರವಿದ್ದಂತೆ ಕಳೆದುಕೊಳ್ಳಬೇಡಿ ಎಂದು ಚಂದ್ರಯಾನ ರೂವಾರಿ ಇಸ್ರೋ ವಿಜ್ಞಾನಿ ಯೋಜನಾ ನಿರ್ದೇಶಕ ವಿಲಾಸ ರಾಠೋಡ್ ಹೇಳಿದರು.ಸ್ಥಳೀಯ ಕಲ್ಪವೃಕ್ಷ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡ ಸನ್ಮಾನ ಸಮಾರಂಭ ಹಾಗೂ ಇಸ್ರೋ ವಿಜ್ಞಾನಿ ಜೊತೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಮೊದಲು ಮೂಡನಂಬಿಕೆಯಿಂದ ಹೊರಬನ್ನಿ. ದೇವರು ಎಂದರೆ ಒಂದು ಭಯ ಇರಲಿ, ದೇವರ ಕೃಪಾಶಿರ್ವಾದದಿಂದ ಉತ್ತೀರ್ಣ ಆಗುತ್ತೀರಿ ಎನ್ನುವ ಭರವಸೆಯಲ್ಲಿ ಕೂಡಬೇಡಿ. ಶಿಕ್ಷಕರು ಹೇಳಿದ ಮಾರ್ಗದಲ್ಲಿ ನಡೆದು ಕಷ್ಟಪಟ್ಟು ಓದಿದರೆ ಮಾತ್ರ ನೀವು ಕಂಡ ಕನಸು ಖಂಡಿತ ಈಡೇರುತ್ತದೆ ಎಂದರು.ನಂತರ ಕೆಪಿಸಿಸಿ ರಾಜ್ಯ ಪ್ರಧಾನ…
ಇಂಡಿ: ಜಿಲ್ಲಾ ಮಾಡಬೇಕೆಂದು ಆಗ್ರಹಿಸಿ ಪಟ್ಟಣ ಮತ್ತು ತಾಲೂಕಿನ ಅಂಜುಮನ್ ಇಸ್ಲಾಂ ಸಮಿತಿಯ ಬಂಧುಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಇವರಿಗೆ ಮನವಿ ಸಲ್ಲಿಸಿದರು.ಇಂಡಿಯ ಅಂಜುಮನ್ ಇಸ್ಲಾಂ ಸಮಿತಿಯ ಅಧ್ಯಕ್ಷ ಅಫಝಲ ಹವಾಲದಾರ ಮಾತನಾಡಿ ಈಗಾಗಲೇ ಇಂಡಿಯ ಶಾಸಕರಾದಿಯಾಗಿ ಝಮೀರ್ ಅಹಮ್ಮದ ಖಾನರವರಿಗೆ ಇಂಡಿ ಜಿಲ್ಲೆ ಮಾಡುವ ಕುರಿತು ಮನವರಿಕೆ ಮಾಡಿದ್ದು ಅವರು ಸಹಕಾರ ನೀಡುವುದಾಗಿ ಒಪ್ಪಿದ್ದಾರೆ ಎಂದರು.ಉಪಾಧ್ಯಕ್ಷ ಹುಸೇನ ಬೇಪಾರಿ ಮಾತನಾಡಿದರು.ಪ್ರತಿಭಟನೆಯಲ್ಲಿ ಮೌಲಾನಾ ಝೀಯಾ ಉಲ್ ಹಕ್ ಉಮರಿ, ಬಾಗವಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸತ್ತಾರ ಬಾಗವಾನ, ಪುರಸಭೆ ಸದಸ್ಯ ಜಹಾಂಗೀರ ಸೌದಾಗರ, ಜಬ್ಬಾರ ಅಣ್ಣಾ ಅರಬ್, ಹುಸೇನ ಜಮಾದಾರ, ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಮಹಮ್ಮದ ಬಾಗವಾನ, ಅಬ್ದುಲ್ ರಹಮಾನ ಅಂತೋಲೆ, ಇಲಿಯಾಸ ಬೋರಾಮಣಿ,ಮುನ್ನಾ ಬಾಗವಾನ, ಯಾಕುಬ ಮಾಶ್ಯಾಳಕರ, ರೈಸ ಅಷ್ಟೇಕರ ಮತ್ತಿತರಿದ್ದರು.
ಮುದ್ದೇಬಿಹಾಳ: ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಡಬ್ಬಾ ಅಂಗಡಿಗಳನ್ನಿಟ್ಟುಕೊಂಡ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ತೆರವುಗೊಳಿಸದಂತೆ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.ಅಂಗಡಿಕಾರರಲ್ಲಿ ಬಹುತೇಕರು ದೈಹಿಕ ಸಾಮರ್ಥ್ಯದಿಂದ ದುಡಿಯಲು ಆಗದ ಅಂಗವಿಕಲರು, ವಿಧವೆಯರು, ಹಿಂದುಳಿದ ವರ್ಗದವರು ಇದ್ದು ಸಾಲ ಸೋಲ ಮಾಡಿಕೊಂಡಿದ್ದೇವೆ. ನಮ್ಮ ಅಂಗಡಿಗಳನ್ನು ತೆರವುಗೊಳಿಸದೇ ಇನ್ನೂ ಕೆಲವು ದಿನಗಳ ಕಾಲ ಅವಕಾಶ ನೀಡಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಬಿ.ವಿ.ಪಾಟೀಲ, ಕೆ.ಪಿ.ಲಮಾಣಿ, ಜೆ.ಎನ್.ನದಾಫ್, ಎಸ್.ಎಸ್.ಸಜ್ಜನ, ಎಸ್.ಎಲ್.ನಾಯ್ಕೋಡಿ, ಆರ್.ಪಿ.ಲಮಾಣಿ, ಆನಂದ ಬಿ.ಎಚ್, ಎಲ್.ಪಿ.ಲಮಾಣಿ, ಸಿ.ಎಸ್.ಬಿರಾದಾರ ಸೇರಿದಂತೆ ಮತ್ತೀತರರು ಸಹಿ ಮಾಡಿದ್ದಾರೆ.
ತಿಕೋಟಾ: ತಾಲ್ಲೂಕಿನ ಬಾಬಾನಗರ ಗ್ರಾಮದ ಹಿರೇಕುರುಬರ ವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ ಹಾಗೂ ಕಛೇರಿ ತಂಡವು ಭೇಟಿ ನೀಡಿ ಶಾಲೆಯ ಸಮಗ್ರ ಮೌಲ್ಯಮಾಪನ ಮಾಡಿದಾಗ ಶಾಲಾ ಶೈಕ್ಷಣಿಕ, ಭೌತಿಕ ಸೌಲಭ್ಯ, ಉತ್ತಮ ಕಲಿಕಾ ವಾತಾವರಣ ಹಾಗೂ ಮಕ್ಕಳ ಕಲಿಕೆ ಕಂಡು ಶಾಲಾ ಶಿಕ್ಷಕರನ್ನು ಪ್ರಶಂಸಿಸಿ ಅಭಿನಂದನಾ ಪತ್ರ ವಿತರಿಸಿ ಸನ್ಮಾನಿಸಿದರು.ಗ್ರಾಮದಿಂದ ಐದಾರು ಕಿಲೋಮೀಟರ್ ದೂರ ಇರುವ ವಸ್ತಿ ಶಾಲೆಯಲ್ಲಿ 127 ಮಕ್ಕಳು ದಾಖಲಾತಿ ಹೊಂದಿ ಪ್ರತಿದಿನ ನೂರಕ್ಕೆ ನೂರರಷ್ಟು ಹಾಜರಾತಿ ಹೊಂದಿ ಉತ್ತಮ ಕಲಿಕೆ ಸಾಗುತ್ತಿದೆ. ಶಾಲಾ ಸ್ವಚ್ಚತೆ, ಅಭಿವೃದ್ಧಿ, ಮಕ್ಕಳ ಸ್ಪಷ್ಟ ಓದು , ಶುದ್ದ ಬರಹ, ಗಣಿತದ ಮೂಲಕ ಕ್ರಿಯೆಗಳು, ಇಂಗ್ಲೀಷ್ ಕಲಿಕೆ ಎಲ್ಲವೂ ಅಚ್ಚುಕಟ್ಟಾಗಿ ಶಿಸ್ತುಬದ್ದ ಕಲಿಕೆ ಕಂಡು ಬಂದಿತು. ಶೇ100 ಹಾಜರಾತಿ ಹೊಂದಿದ ವಿಶೇಷ ತೋಟದ ವಸ್ತಿ ಶಾಲೆಯಾಗಿದೆ. ಸಮಗ್ರ ಶಾಲೆಯ ಅಭಿವೃದ್ಧಿಯಾಗಬೇಕಾದರೆ ಇಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಶ್ರಮ ಬಹಳಷ್ಟಿದೆ.…
ಇಂಡಿ: ತಾಲೂಕಿನ ಹಿರೇಮಸಳಿ ಗ್ರಾಮದ ವಿದ್ಯಾ ಜ್ಯೋತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ ಟಿ.ಬಿ. ಶಿರಕನಹಳ್ಳಿ, ಕಾರ್ಯದರ್ಶಿ ಪುಂಡಲಿಕ ಕಪಾಲಿ, ಶಿಕ್ಷಕಿ ಶೋಭಾ, ಲಕ್ಷ್ಮೀ ಗೋರನಾಳ, ರಾಣಿ ಹತ್ತಿ, ಅಶ್ವೀನಿ ರಜಪೂತ್, ಬಸಮ್ಮ ಶಿರಕನಹಳ್ಳಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಇಂಡಿ: ಸ್ವಾಮಿ ವಿವೇಕಾನಂದರು ಚಿಕಾಗೋ ಉಪನ್ಯಾಸದಿಂದ ಭಾರತದ ದೃಷ್ಠಿಕೋನವನ್ನು ವಿಶ್ವದ ಮುಂದೆ ವಿಶಿಷ್ಟ ರೀತಿಯಲ್ಲಿ ಪ್ರದರ್ಶಿಸಿದ್ದು, ನಮ್ಮ ದೇಶದ ಸಂಸ್ಕೃತಿ ಅನಾವರಣಗೊಳಿಸಿದ ಹಿರಿಮೆಯ ಭಾಷಣವಾಗಿತ್ತು ಎಂದು ವಿಶ್ವಭಾರತಿ ವಿದ್ಯಾಕೇಂದ್ರ ಪ್ರಾಥಮಿಕ, ಪ್ರೌಢ ಹಾಗೂ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಸಂಸ್ಥೆಯ ಸಂಸ್ಥಾಪಕ ಪಿ.ಜಿ.ಕಲ್ಮನಿ ಹೇಳಿದರು.ಶುಕ್ರವಾರ ತಾಲೂಕಿನ ಹಿರೇಬೇವನೂರ ಗ್ರಾಮದ ವಿಶ್ವ ಭಾರತಿ ವಿದ್ಯಾಕೇಂದ್ರ ಪ್ರಾಥಮಿಕ, ಪ್ರೌಢ ಹಾಗೂ ಶ್ರೀ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸ್ವಾಮಿ ವಿವೇಕಾನಂದರಂತಹ ಆದರ್ಶ ಪುರುಷರನ್ನು ನಾವು ಆದರ್ಶವಾಗಿ ಇಟ್ಟುಕೊಂಡು ನಡೆದರೆ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬಾಳಿ ಉನ್ನತ ಸಾಧನೆ ಮಾಡಲು ಸಾದ್ಯವಾಗುತ್ತದೆ ಎಂದರು.ಸಂಸ್ಥೆಯ ಅಧ್ಯಕ್ಷ ವಿ.ಜಿ. ಕಲ್ಮನಿ ಮಾತನಾಡಿದರು.ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಶ್ರೀದೇವಿ ಕಲ್ಮನಿ, ಆಂಗ್ಲ ಮಾಧ್ಯಮ ಮುಖ್ಯ ಗುರು ಸುನಿಲ್ ವಿ.ಆರ್, ಶಿಕ್ಷಕರಾದ ಪ್ರಕಾಶ್ ಕಲ್ಮನಿ, ತುಕಾರಾಮ್ ಚವ್ಹಾಣ, ಸಚೀನ್ ಅಡಿಗುಂಡಿ, ಪರಮೇಶ್ವರ ಇಂಗಳೆ, ಪ್ರವೀಣ್ ಹೊಸಗೌಡರ್, ರಾಮ್ ಚವ್ಹಾಣ, ಜಾನ್ ವಿ, ಥಾಮಸ್…
ಇಂಡಿ: ಅಯೋಧ್ಯೆಯಲಿ ಪ್ರಭು ಶ್ರೀರಾಮ ಮಂದಿರ ಉದ್ಘಾಟನೆ ಪೂರ್ವಭಾವಿಯಾಗಿ ನಮೋ ಬ್ರಿಗೇಡ್ ವತಿಯಿಂದ ನೀನೇ ಹನುಮ ರಥಯಾತ್ರೆ ಪ್ರಾರಂಭವಾಗಿದ್ದು ಶುಕ್ರವಾರ ರಥ ಯಾತ್ರೆ ತಾಲೂಕಿನ ತಡವಲಗಾ ಗ್ರಾಮಕ್ಕೆ ಬಂದಿತು.ತಾಲೂಕಿನಲ್ಲಿ ಝಳಕಿಯಿಂದ ರಥಯಾತ್ರೆ ಪ್ರಾರಂಭವಾಗಿದ್ದು ಬಳ್ಳೊಳ್ಳಿ, ತಡವಲಗ ಬೋಳೆಗಾಂವ, ಹಿರೇರೂಗಿ, ಇಂಡಿ, ಅಗರಖೇಡ ಗ್ರಾಮಗಳಿಗೆ ಆಗಮಿಸಿ ಅಲ್ಲಿನ ಸಾವಿರಾರು ಸಂಖ್ಯೆಯಲ್ಲಿನ ಹಿಂದೂ ಭಾಂಧವರು ಭಾಗವಹಿಸಿ ರಥಯಾತ್ರೆಯನ್ನು ಅದ್ದೂರಿಯಾಗಿ ಬರಮಾಡಿಕೊಂಡರು.ತಡವಲಗಾ ಗ್ರಾಮಕ್ಕೆ ರಥಯಾತ್ರೆ ಆಗಮಿಸುತ್ತಿದ್ದಂತೆ ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ ಬೈಕ್ ಯಾತ್ರೆ ಅಗರಖೇಡ ಗ್ರಾಮದಲ್ಲಿ ಮುಕ್ತಾಯವಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಅಂದು ಶ್ರೀರಾಮಮಂದಿರ ಸಲುವಾಗಿ ನಡೆದ ಹೋರಾಟ ಹಾಗೂ ಕಾರ್ಯಕರ್ತರ ಬಲಿದಾನದ ಫಲ ರಾಮ ಮಂದಿರ ನಿರ್ಮಾಣ ಆಗುತ್ತಿದ್ದು ಸಂತಸದ ವಿಷಯ. ಇಂದು ಹನುಮ, ರಾಮ ಯಾತ್ರೆ ನಮ್ಮ ನಿಮ್ಮ ಗ್ರಾಮಗಳಿಗೆ ಆಗಮಿಸಿದ್ದು ರಥಯಾತ್ರೆ ನೋಡುವುದೇ ನಮ್ಮ ನಿಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಇಂಡಿ: ಸ್ವಾಮಿ ವಿವೇಕಾನಂದರು ಯುವಶಕ್ತಿಗೆ ಮಾದರಿ ಅವರ ಆದರ್ಶ ತತ್ವಗಳನ್ನು ಯುವಕರು ರೂಡಿಸಿಕೊಳ್ಳಬೇಕು ಎಂದು ಉಪನ್ಯಾಸಕ ಶಶಿಕಾಂತ ಹವಳಗಿ ಹೇಳಿದರು.ಶುಕ್ರವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಐ.ಕ್ಯೂ.ಎ.ಸಿ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ವಿದ್ಯಾರ್ಥಿಗಳಾದ ಪೂಜಾ ಸಾರವಾಡ, ಬಸವರಾಜ ಪೂಜಾರಿ, ಬೀರಪ್ಪ ನಂದಗೊಂಡ, ಬಸವರಾಜ ಹಿರೇಕುರಬರ, ಜಯಣ್ಣ ಕುಂಬಾರ, ಚಂದನಾ ಕೆಂಗನಾಳ ಮೊದಲಾದವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಐ.ಕ್ಯೂ.ಎ.ಸಿ ವಿಭಾಗದ ಸಂಯೋಜಕ ಡಾ. ಶೀರಿನುಸುಲ್ತಾನಾ ಎಸ್, ಇನಾಮದಾರ ವಹಿಸಿಕೊಂಡಿದ್ದರು.ವೇದಿಯಲ್ಲಿ ಪ್ರೊ.ಕಿರಣ ರೇವಣಕರ, ಪ್ರೊ.ಎಸ್.ಜೆ. ಮಾಡ್ಯಾಳ, ಪ್ರೊ. ಪರಸಪ್ಪ ಎಸ್. ದೇವರ, ಡಾ.ವಿಜಯಮಹಾಂತೇಶ ದೇವರ, ಡಾ.ಸುರೇಖಾ ವಾರದ, ಪ್ರೊ.ಭಾರತಿ ಹೊನವಾಡ, ಪ್ರೊ. ಆರ್.ಬಿ.ಮುದ್ದೇಬಿಹಾಳ, ಸೋಮಲಿಂಗ ಎಸ್. ಗಂಜಿ ಇದ್ದರು.
ಇಂಡಿ: ಪಟ್ಟಣದ ಎಸ್.ಎಸ್.ವಿ.ವಿ. ಸಂಘದ ಜಿ.ಆರ್. ಗಾಂಧಿ ಕಲಾ, ವಾಯ್.ಎ. ಪಾಟೀಲ ವಾಣಿಜ್ಯ ಹಾಗೂ ಎಮ್.ಎಫ್. ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್, ಯುತ್ ರೆಡ್ಕ್ರಾಸ್ ಹಾಗೂ ಸ್ಕೌಟ್ಸ್ & ಗೈಡ್ಸ್ ಘಟಕಗಳ ಅಡಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾಂಬಾ ಗ್ರಾಮದ ಎಸ್.ಆರ್. ಮಾಳಗೆ ಕಲಾ ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕ ಶಿವಾನಂದ ವಾಲೀಕಾರ ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಮತ್ತು ವ್ಯಕ್ತಿತ್ವ ಕೋಟಿ ಕೋಟಿ ಯುವಕರಿಗೆ ಪ್ರೇರಣೆಯ ಚಿಲುಮೆಯಾಗಿದೆ. ಅವರು ಭಾರತ ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಪಸರಿಸಿದ ಧೀಮಂತ ನಾಯಕರು. ೧೮೯೩ ರಲ್ಲಿ ಚಿಕ್ಯಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ನೀಡಿದ ಭಾಷಣ ಅವಿಸ್ಮರಣೀಯವಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಸ್.ಬಿ. ಜಾಧವ ಮಾತನಾಡಿ, ಸ್ವಾಮಿ ವಿವೇಕಾನಂದ ಭಾರತದ ಏಳಿಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ. ಒಬ್ಬರು ಆಧ್ಯಾತ್ಮದ ಮಾರ್ಗ ಅನುಸರಿಸಿದರು. ಅವರ ಉದ್ದೇಶವು ಭಾರತದ ಏಳಿಗೆ ಆಗಿತ್ತು…
