Author: editor.udayarashmi@gmail.com

ಇಂಡಿ: ಜಗತ್ತಿನಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ , ಜಾತಿ, ಮತ, ವರ್ಣ, ವರ್ಗಗಳ ಕೀಳರಮೆಯಿಂದ ಹೊರಬನ್ನಿ, ಸತ್ಯ, ಧರ್ಮ ನಿಮ್ಮ ಉಸಿರಾಗಲಿ ಎಂದು ಸಂದೇಶ ಸಾರಿದ ಸಂತ ಸೇವಾಲಾಲರ ಸಂದೇಶಗಳು ಇಂದಿನ ಜನಾಂಗಕ್ಕೆ ಈಗಲೂ ಪ್ರಸ್ತುತ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಅವರು ಗುರುವಾರ ಪಟ್ಟಣದ ತಾಲೂಕು ಆಡಳಿತ ವತಿಯಿಂದ ಮಿನಿ ವಿಧಾನಸೌಧದಲ್ಲಿ ನಡೆದ ಸೇವಾಲಾಲ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಸರಕಾರ ಕಂದಾಯ ಗ್ರಾಮಗಳನ್ನಾಗಿ ಮಾಡಿ ಹಕ್ಕು ಪತ್ರ ವಿತರಿಸುತ್ತಿದ್ದು ಅವು ಸಮುದಾಯದವರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ತಿಳಿಸಿದರು.ತಹಸೀಲ್ದಾರ ಮಂಜುಳಾ ನಾಯಕ ಮಾತನಾಡಿ ದುಡಿದರೆ ಮಾತ್ರ ಪ್ರತಿಫಲ ಸಿಗುತ್ತದೆ. ಯಾವದೇ ಕಾಯಕವಿರಲಿ ಶೃದ್ಧೆಯಿಂದ ಮಾಡಿ ಎಂದು ಹೇಳಿದವರಲ್ಲಿ ಸೇವಾಲಾಲರು ಸಹ ಒಬ್ಬರು ಎಂದರು.ಅಖಿಲ ಭಾರತ ಬಂಜಾರಾ ಸಮಾಜದ ತಾಲೂಕಾ ಅಧ್ಯಕ್ಷ ಸಂಜು ಚವ್ಹಾಣ, ಪುರಸಭೆ ಸದಸ್ಯ ದೇವೆಂದ್ರ ಕುಂಬಾರ, ಚಂದ್ರಶೇಖರ ಹೊಸಮನಿ, ಉಪನ್ಯಾಸಕ ವಿಜಯ ರಾಠೋಡ ಸೇವಾಲಾಲರ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ಶಶಿಕಾಂತ ರಾಠೋಡ, ಲಾಲು ರಾಠೋಡ, ಪಿಂಟು ರಾಠೋಡ,…

Read More

ಮುದ್ದೇಬಿಹಾಳ: ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಸಂತ ಸೇವಾಲಾಲ ಮಹಾರಾಜರ ಜಯಂತ್ಯುತ್ಸವವನ್ನು ಆವರಿಸಲಾಯಿತು. ತಾಲೂಕು ದಂಡಾಧಿಕಾರಿ ಬಸವರಾಜ ನಾಗರಾಳ, ಬಿಇಓ ಬಸವರಾಜ ಸಾವಳಗಿ, ತಾಲೂಕು ಪಂಚಾಯತ ನ ಯೋಜನಾ ನಿರ್ದೇಶಕ ಖೂಬಾಸಿಂಗ್ ಜಾಧವ, ಕಾಂಗ್ರೇಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ಡಿಎಸ್‌ಎಸ್ ಮುಖಂಡ ಸಿ.ಜಿ.ವಿಜಯಕರ, ಬಂಜಾರಾ ಸಮಾಜದ ತಾಲೂಕು ಅಧ್ಯಕ್ಷ ನಾನಪ್ಪ ನಾಯಕ, ವಮನರಾವ ನಾಯಕ, ಗುತ್ತಿಗೆದಾರ ಬಹದ್ದೂರ ರಾಠೋಡ, ಮುಖಂಡ ರವಿ ನಾಯಕ, ರವಿ ಪವಾರ, ಕೆ.ಎಂ.ಲಮಾಣಿ, ಶಿಕ್ಷಕ ಟಿ.ಡಿ.ಲಮಾಣಿ, ಎಸ್.ಆರ್.ನಾಯಕ, ಎಸ್.ಡಿ.ಲಮಾಣಿ ಸೇರಿದಂತೆ ಮತ್ತೀತರರು ಇದ್ದರು.

Read More

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಘಟಕ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024-25ನೇ ಸಾಲಿನ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯತ್ವಕ್ಕೆ ಅರ್ಹ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಿದೆ.ರಾಜ್ಯ ಘಟಕದ ಮಾರ್ಗಸೂಚಿಯಂತೆ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯತ್ವ ನೀಡಲಾಗುವುದು.ನಿಯಮಿತವಾಗಿ ಪತ್ರಿಕೆಗಳನ್ನು ಹೊರತರುವ ಪತ್ರಕರ್ತರು ಸದಸ್ಯತ್ವ ನವೀಕರಣಕ್ಕೆ ಹಾಗೂ ಹೊಸ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಬೇಕು. ಪತ್ರಿಕೆಗಳನ್ನು ಹೊರತರದವರಿಗೆ ಸದಸ್ಯತ್ವ ನೀಡಲಾಗುವುದಿಲ್ಲ.ಈ ಮಾನದಂಡಗಳೇ ತಾಲೂಕು ಘಟಕಗಳಿಗೆ ಅನ್ವಯವಾಗುತ್ತವೆ. ಹಾಗಾಗಿ ಆಯಾ ತಾಲೂಕು ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಈ ಮಾನದಂಡಗಳಡಿಯೇ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯತ್ವಕ್ಕೆ ಅರ್ಜಿ ಸ್ವೀಕರಿಸಬೇಕು.ಅರ್ಜಿ ಶುಲ್ಕ 10 ರೂ. ಜೊತೆ 500 ರೂ. ಸದಸ್ಯತ್ವ ಶುಲ್ಕ ಪಾವತಿಸಬೇಕು. ಜೊತೆಗೆ ತಮ್ಮ ಪತ್ರಿಕೆಯ ಸಂಪಾದಕರಿಂದ ಪಡೆದ ದೃಢೀಕರಣ ಪತ್ರ ಅರ್ಜಿಗೆ ಕಡ್ಡಾಯವಾಗಿ ಲಗತ್ತಿಸಬೇಕು.ನವೀಕರಣ ಮಾಡಿಸುವವರು ಸಂಘದ ಹಳೆಯ ಕಾರ್ಡ್ ಝರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ ಝರಾಕ್ಸ್ ಲಗತ್ತಿಸಬೇಕು. ಜೊತೆಗೆ 2 ಭಾವಚಿತ್ರ ನೀಡಬೇಕು.ಯಾರ ನೇಮಕಾತಿ…

Read More

ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಒತ್ತಾಯ ಚಿತ್ರದುರ್ಗ: ಸ್ಥಳೀಯ ಮತ್ತು ಪ್ರಾದೇಶಿಕ ಪತ್ರಿಕೆಗಳ ಜಾಹೀರಾತು ದರವನ್ನು ಕೂಡಲೇ ಹೆಚ್ಚಿಸಬೇಕೆಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, 2023 ರ ಏಪ್ರಿಲ್ 1 ರಿಂದ ಜಾಹೀರಾತು ದರ ಹೆಚ್ಚಿಸಬೇಕಾಗಿತ್ತು. ಆದರೆ ಸರ್ಕಾರ ಜಾಹೀರಾತು ದರ ಹೆಚ್ಚಿಸಿಲ್ಲ. ಹೊಸ ಜಾಹೀರಾತು ನೀತಿ ಸಹ ಜಾರಿಯಾಗಿಲ್ಲ.ಹಾಗಾಗಿ ಈ ಕೂಡಲೇ ಸರ್ಕಾರ ಶೇಕಡ 12 ರಷ್ಟು ಜಾಹೀರಾತು ದರವನ್ನು ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.ಜಾಹೀರಾತುಗಳನ್ನು ಐ.ಎನ್.ಎಸ್ ಖಾಸಗಿ ಜಾಹೀರಾತು ಏಜೆನ್ಸಿಗಳ ಮೂಲಕ ಬಿಡುಗಡೆ ಮಾಡುವುದನ್ನು ದಿನಾಂಕ: 01-04-2024 ರಿಂದ ನಿಲ್ಲಿಸಬೇಕು ಎಂದು ಆಯುಕ್ತರಲ್ಲಿ ಮನವಿ ಮಾಡಲಾಗಿದೆ. ಆಯುಕ್ತರು ಅದಕ್ಕೆ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರಿ ಜಾಹೀರಾತುಗಳನ್ನು ಪತ್ರಿಕೆಗಳಿಗೆ ನೇರವಾಗಿ ಇಲಾಖೆಯೇ ನೀಡುವಂತಾಗಬೇಕು.…

Read More

ಮುದ್ದೇಬಿಹಾಳ: ಭ್ರೂಣ ಹತ್ಯೆ ಆರೋಪದಡಿ ಇಬ್ಬರು ಸರ್ಕಾರಿ ಆಸ್ಪತ್ರೆಯ ಶುಶ್ರುಷಾಧಿಕಾರಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸುಭದ್ರಾ ಭಜಂತ್ರಿ ಹಾಗೂ ಇಂಡಿ ತಾಲೂಕಿನ ಹಲಸಂಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ಸಿದ್ದಮ್ಮ ಅರಕೇರಿ ಬಂಧಿತ ಆರೋಪಿಗಳು.ತಾಲೂಕಿನ ಹುಲ್ಲೂರು ಗ್ರಾಮದ ಸುಭದ್ರಾಳ ಮನೆಯಲ್ಲಿ ಬಂಧಿತ ಆರೋಪಿಗಳು ಭ್ರೂಣ ಹತ್ಯೆ ನಡೆಸುತ್ತಿದ್ದರು ಎನ್ನಲಾಗಿದೆ. ಸಂಬಂಧಿಸದ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಔಷಧಿಗಳನ್ನು ಮತ್ತು ಗರ್ಭಪಾತಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ಇಟ್ಟುಕೊಂಡು ಗರ್ಭಪಾತಕ್ಕೆ ಪ್ರಯತ್ನ ಮಾಡುತ್ತಿರುವುದಲ್ಲದೇ ವೈದ್ಯಕೀಯ ಪದವಿಯನ್ನು ಪಡೆಯದೆ ಮತ್ತು ವೈದ್ಯಕೀಯ ಚಿಕಿತ್ಸೆ ಕುರಿತು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಸಾರ್ವಜನಿಕರಿಗೆ ತಾವು ವೈದ್ಯರೆಂದು ನಂಬಿಸಿ ಮೋಸ ಮಾಡುತ್ತಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿಪ್ರಕರಣದ ಎ೧ ಆರೋಪಿ ಸುಭದ್ರಾಳ ಮನೆಗೆ ಬುಧವಾರ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ…

Read More

ಚಿಮ್ಮಡ: ಫೆ.೨೪ ರಂದು ನಡೆಯಲಿರುವ ಗ್ರಾಮದ ದೇವಾಂಗ ಸಮಾಜದ ಆರಾದ್ಯ ದೇವತೆ ಶ್ರೀ ಬನಶಂಕರಿದೇವಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮವನ್ನು ಅಧ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.ಸ್ಥಳೀಯ ಬನಶಂಕರಿ ದೇವಸ್ಥಾನದಲ್ಲಿ ಸೋಮವಾರ ನಡೆದ ಗ್ರಾಮದ ಸರ್ವ ಸಮಾಜ ಬಾಂಧವರ ಸಭೆಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಈ ಬಾರಿ ಮುಂಬೈ ಮಾದೇಲಿ ಹಾಗೂ ಕಿಚಡಿಯನ್ನು ಮಹಾಪ್ರಸಾದರೂಪದಲ್ಲಿ ವಿತರಿಸುವ ಮೂಲಕ ಜಾತ್ರೆಯನ್ನು ಅಧ್ಧೂರಿಯಾಗಿ ಆಚರಿಸಲಾಗುವುದೆಂದು ಸಮಾಜದ ಪ್ರಮುಖರಾದ ಅಶೋಕ ಧಡೂತಿ ಸಭೆಯಲ್ಲಿ ತಿಳಿಸಿದರು.ಸಭೆಯ ಅಧ್ಯಕ್ಷತೆಯನ್ನು ಪ್ರಮುಖರಾದ ಚಂದ್ರಕಾಂತ ಜಾಡಗೌಡರ ವಹಿಸಿದ್ದರು. ಪ್ರಮುಖರಾದ ರಾಮಣ್ಣ ಮುಗಳಖೋಡ, ಬಾಳಪ್ಪಾ ಹಳಿಂಗಳಿ, ಪುಂಡಲಿಕಪ್ಪಾ ಪೂಜಾರಿ, ಅಣ್ಣಪ್ಪಗೌಡ ಪಾಟೀಲ, ಪರಪ್ಪ ಪಾಲಭಾವಿ, ಬೀರಪ್ಪ ಹಳೆಮನಿ, ಬಸವರಾಜ ಕುಂಚನೂರ, ಪರಪ್ಪಾ ಜಾಡಗೌಡರ ಸೇರಿದಂತೆ ಹಲವಾರು ಜನ ಪ್ರಮುಖರು ಆಗಮಿಸಿದ್ದರು.ಜಾತ್ರಾ ಮಹೋತ್ಸವದಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವಿಯ ಕ್ರಪೆಗೆ ಪಾತ್ರಾಗಬೇಕೆಂದು ಬನಶಂಕರಿದೇವಿ ಸೇವಾ ಸಮೀತಿಯ ಅಧ್ಯಕ್ಷ ಮನೋಜ ಹಟ್ಟಿ ತಿಳಿಸಿದ್ದಾರೆ.

Read More

ಕೊಲ್ಹಾರ: ಕೃಷ್ಣಾ ನದಿಯ ತಟದಲ್ಲಿರುವ ಕೊಲ್ಹಾರ ಪಟ್ಟಣದ ನೇಕಾರ ಬಡಾವಣೆಯಲ್ಲಿ ಬರುವ ಗ್ರಾಮದ ಆರಾದ್ಯ ದೇವತೆ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ದಿನಾಂಕ ೧೫ ಗುರುವಾರ, ೧೬ ಶುಕ್ರವಾರ, ೧೭ ಶನಿವಾರ ಮೂರು ದಿನಗಳ ಕಾಲ ಜರುಗುವದು ಎಂದು ಬನಶಂಕರಿ ದೇವಸ್ಥಾನ ಜೀರ್ಣೋದ್ದಾರ ಸಮೀತಿಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.ದಿನಾಂಕ ೧೫ ಗುರುವಾರ ದಿವಸ ಮುಂಜಾನೆ ೧೦.೩೦ ಘಂಟೆಗೆ ಶಕ್ತಿಪೀಠ ಬದಾಮಿಯ ಬನಶಂಕರಿ ದೇವಿಯ ಅರ್ಚಕರಾದ ವೇದ ಬ್ರಹ್ಮ ಚಿದಂಬರ ಭಟ್ ಇವರಿಂದ ಪಂಚಲೋಹದ ಬನಶಂಕರಿ ದೇವಿಯ ಮೂರ್ತಿಗೆ ಅಷ್ಟೋತ್ತರ ಕುಂಕುಮಾರ್ಚನೆ ಕಾರ್ಯಕ್ರಮ ಪಟ್ಟಣದ ಸರ್ವ ಜನಾಂಗದವರ ಸಮ್ಮುಖದಲ್ಲಿ ನೆರವೇರುವದು. ಸಾಯಂಕಾಲ ೬ ಘಂಟೆಗೆ ಜಾಣರ ಜಗಲಿ ಕುಟುಂಬ ನಿರ್ವಹಣೆಯಲ್ಲಿ ಹೆಣ್ಣು ಮತ್ತು ಗಂಡಿನ ಪಾತ್ರ ಕುರಿತು ಎಂಬ ನಗೆ ಹಬ್ಬ ಕಾರ್ಯಕ್ರಮ ಜರುಗುವದು.ದಿನಾಂಕ ೧೬ ಶುಕ್ರವಾರ ದಿವಸ ರಥ ಸಪ್ತಮಿಯ ಪವಿತ್ರ ದಿನದಂದು ದೇವಸ್ಥಾನದಲ್ಲಿರುವ ದೇವಿಯ ಬೆಳ್ಳಿ ಮೂರ್ತಿ ಹಾಗೂ ಶಿಲಾ ಮೂರ್ತಿಗೆ ಕೊಲ್ಹಾರ ಹಾಗೂ ಬೀದರ ಜಿಲ್ಲೆ…

Read More

ಕಲಕೇರಿ: ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಅವರ 51 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯವಾಗಿ ರೋಗಿಗಳಿಗೆ ಪಕ್ಷದ ಕಾರ್ಯಕರ್ತರು ಹಾಗೂ ರಾಜುಗೌಡರ ಅಭಿಮಾನಿ ಬಳಗದ ವತಿಯಿಂದ ಹಣ್ಣು ಹಂಪಲವನ್ನು ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಹಣಮಂತ ವಡ್ಡರ, ಸಲಿಂ ನಾಯ್ಕೊಡಿ, ಪ್ರವೀಣ ಜಗಶೇಟ್ಟಿ, ರಮೇಶ ಹೆಂಡಿ, ನವೀನ ಗುಡಗುಂಟಿ, ಉಮೇಶ ಹೆಗ್ಗಣದೊಡ್ಡಿ, ಕುತಬುದ್ದಿನ ಹೊಸಮನಿ, ಬೀಮಣ್ಣ ವಡ್ಡರ, ಆಡಳಿತ ವೈಧ್ಯಾದಿಕಾರಿ ಡಾ.ಶಶಿಕಾಂತ ಬಾಗೇವಾಡಿ, ಶಿವಾನಂದ ಜೇವೂರ, ಎಂ ಸಿ ಪಟೇಲ್, ಮಮ್ಮಧಪಾರುಖ್ ವಲ್ಲಿಬಾಯಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಇದ್ದರು.

Read More

ದೇವರಹಿಪ್ಪರಗಿ: ವಿದ್ಯುತ್ ದೀಪಗಳನ್ನೋಳಗೊಂಡ ದ್ವೀಪಥ ರಸ್ತೆ, ಚರಂಡಿ, ಪುಟ್‌ಪಾತ ಕಾಮಗಾರಿಗಳನ್ನು ಯಾವುದೇ ಒತ್ತಡಗಳಿಗೆ ಒಳಗಾಗದೇ ಗುಣಮಟ್ಟದಿಂದ ನಿರ್ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಪಟ್ಟಣದಲ್ಲಿ ಬುಧವಾರ ಈ ಕುರಿತು ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಮಸಬಿನಾಳ, ತಾಲ್ಲೂಕು ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ ಹಾಗೂ ಪ್ರಗತಿಪರ ವೇದಿಕೆಯ ನಜೀರ್ ಕಲಕೇರಿ ಮಾತನಾಡಿ, ಅಂಬೇಡ್ಕರ್ ವೃತ್ತದಿಂದ ೭೭೦ ಮೋಟರ್ ದೂರದ ಚನ್ನಮ್ಮ ವೃತ್ತದವರೆಗೆ ೨೦೨೨-೨೩ನೇ ಸಾಲಿನಲ್ಲಿ ರಸ್ತೆ ಮಧ್ಯದಲ್ಲಿ ಬೀದಿದೀಪಗಳನ್ನು ಒಳಗೊಂಡ ೩೦ ಮೀಟರ್ ಅಗಲದ ರಸ್ತೆಗೆ ಅನುದಾನ ಬಿಡುಗಡೆಗೊಂಡು ಭೂಮಿಪೂಜೆ ನೆರವೇರಿಸಲಾಗಿದೆ. ಈಗ ರಸ್ತೆ ಕಾಮಗಾರಿಗೆ ಗುತ್ತಿಗೆದಾರರು ಚಾಲನೆ ನೀಡಿದ್ದಾರೆ.ರಸ್ತೆ ನಿರ್ಮಾಣಕ್ಕೆ ಸಹಕರಿಸಿ ಎಡಬಲಗಳಲ್ಲಿ ಇರುವ ವ್ಯಾಪಾರಸ್ಥರು ತಮ್ಮ ಅಂಗಡಿ, ಮಳಿಗೆಗಳನ್ನು ಬೇರೆಡೆ ಸ್ಥಳಾಂತರಿಸಿ ಸಹಕಾರ ನೀಡಿದ್ದಾರೆ. ಲೋಕೋಪಯೋಗಿ ಇಂಜನೀಯರ್ ಹಾಗೂ ಗುತ್ತಿಗೆದಾರರು ಸಹ ನಿರ್ಮಾಣದ ಹಂತದಲ್ಲಿ ಎಲ್ಲರಿಗೂ ಅನ್ವಯವಾಗುವಂತೆ ಮಧ್ಯದಿಂದ ಎಡಬಲಗಳಲ್ಲಿ ೧೫ ಮೀಟರ್ ಅಳತೆಮಾಡಿ ಯಾವುದೇ ಕಚೇರಿ, ಕಟ್ಟಡಗಳಿದ್ದರೂ ಏಕರೂಪತೆಯಿಂದ ಅಗಲೀಕರಣಗೊಳಿಸಬೇಕು. ಈ ಸಮಯದಲ್ಲಿ ಯಾವುದೇ ನಾಯಕರ ಒತ್ತಡಗಳಿಗೆ ಒಳಗಾಗದೇ, ತಾರತಮ್ಯ…

Read More