Author: editor.udayarashmi@gmail.com

ಮತದಾನ ದಿನ ಮತ್ತು ಮತದಾನದ ಪೂರ್ವ ದಿನ ಮುದ್ರಣ ಮಾಧ್ಯಮದ ಜಾಹಿರಾತಿಗೆ ನಿಯಮ ವಿಜಯಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮೇ ೬ ಹಾಗೂ ೭ ರಂದು ಯಾವುದೇ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಸಂಸ್ಥೆಗಳು ಅಥವಾ ಏಜೆಂಟರು ದಿನಪತ್ರಿಕೆಗಳಲ್ಲಿ ಯಾವುದೇ ರೀತಿಯ ಚುನಾವಣಾ ಜಾಹಿರಾತು ಪ್ರಕಟಿಸಲು ಪೂರ್ವಾನುಮತಿ ಕಡ್ಡಾಯವಾಗಿರುತ್ತದೆ ಎಂದು ಭಾರತ ಚುನಾವಣಾ ಆಯೋಗ ತಿಳಿಸಿದೆ.ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ಜಾಹಿರಾತುಗಳನ್ನು ಸ್ಥಳೀಯ, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ದಿನಪತ್ರಿಕೆಗಳಲ್ಲಿ ಪ್ರಕಟಿಸಲು ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣಿಕರಣ ಹಾಗೂ ಮಾಧ್ಯಮ ಕಣ್ಗಾವಲು ಸಮಿತಿ (ಎಂಸಿಎಂಸಿ) ಯಿಂದ ಪೂರ್ವಾನುಮತಿ ಪಡೆಯವುದು ಕಡ್ಡಾಯವಾಗಿರುತ್ತದೆ..ಚುನಾವಣಾ ಜಾಹಿರಾತು ಪ್ರಕಟಣೆ ಮಾಡ ಬಯಸುವ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಸಂಸ್ಥೆಗಳು ಅಥವಾ ಏಜೆಂಟರು ಮೇ ೬ ಹಾಗೂ ೭ ರಂದು ಮುದ್ರಣ ಮಾಧ್ಯಮಗಳಲ್ಲಿ ಜಾಹಿರಾತು ಪ್ರಕಟಿಸಬೇಕೆಂದಲ್ಲಿ ಅಂತಹ ಜಾಹಿರಾತಿನ ಎರಡು ಸ್ವ-ದೃಡಿಕೃತ ಪ್ರತಿಗಳೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಮೇ ೪ ರೊಳಗೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣಿಕರಣ ಹಾಗೂ ಮಾಧ್ಯಮ…

Read More

ವಿಜಯಪುರ: ಜಿಲ್ಲೆಯು ಸೈಕ್ಲಿಂಗ್ ಕ್ಷೇತ್ರಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿನ ಕ್ರೀಡಾಪಟುಗಳ ಸ್ಪರ್ಧಾ ಮನೋಭಾವ ಹೆಮ್ಮರದಂತೆ ಇದೆ. ಅದರಂತೆ ಲೋಕಸಭೆ ಚುನಾವಣಾಯಲ್ಲೂ ಸ್ಪರ್ಧೇಯೊಡ್ಡಿದವರಂತೆ ನೂರಕ್ಕೆ ನೂರರಷ್ಟು ಮತದಾನ ಮಾಡುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು.ಅವರು ಲೋಕಸಭಾ ಚುನಾವಣೆ ೨೦೨೪ರ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡ ಬೃಹತ್ ಸೈಕಲ್ ಜಾಥಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಇಲ್ಲಿನ ಸೈಕ್ಲಿಂಗ್ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟಿçಯ ಮಟ್ಟದಲ್ಲಿ ತಮ್ಮ ಸಾಧನೆಯನ್ನು ಬಿಂಬಿಸಿ ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ನಾವು ದಿನನಿತ್ಯದ ಬಿಡುವಿನಲ್ಲಿ ಸೈಕ್ಲಿಂಗ್ ನಂತಹ ಚಟುವಟಿಕೆಯಲ್ಲಿ ತೊಡಗಿದರೆ ನಮ್ಮ ಆರೋಗ್ಯ ಹಾಗೂ ಮನಸು ಲವಲವಿಕೆ ಯಿಂದ ಕೂಡಿರುತ್ತದೆ. ಸದೃಢ ಮನಸ್ಸು ಹಾಗೂ ದೇಹವು ಉತ್ತಮ ವಿಚಾರಧಾರೆಗೆ ಪೂರಕವಾಗಿ ಗುಣಮಟ್ಟದ ಜೀವನ ನಡೆಸಲು ಸಹಕಾರಿ ಆಗುತ್ತದೆ. ಅದೇ ರೀತಿ ಮತದಾನ ಮಾಡುವದರಿಂದ ದೇಶದ ಭವಿಷ್ಯಕ್ಕೆ ಸಹಕಾರಿಯಾಗುವುದ…

Read More

ದೇವರಹಿಪ್ಪರಗಿ: ಪಟ್ಟಣಕ್ಕೆ ಚುನಾವಣಾ ವೀಕ್ಷಕರಾದ ರತನಕುಮಾರಿ ಕನ್ವರ್ ಭೇಟಿ ನೀಡಿ, ಚುನಾವಣಾ ರಥಕ್ಕೆ ಚಾಲನೆ ನೀಡಿ, ಸೆಕ್ಟರ್ ಅಧಿಕಾರಿಗಳ ಸಭೆ ನಡೆಸಿದರು.ಪಟ್ಟಣಕ್ಕೆ ಗುರುವಾರ ಬೆಳಿಗ್ಗೆ ಚುನಾವಣಾ ವೀಕ್ಷಕರು ಆಗಮಿಸುತ್ತಿದ್ದಂತೆಯೇ ಸಹಾಯಕ ಚುನಾವಣಾ ಅಧಿಕಾರಿ ಪ್ರವೀಣ ಜೈನ್ ಹಾಗೂ ತಹಶೀಲ್ದಾರ ಪ್ರಕಾಶ ಸಿಂದಗಿ ಸ್ವಾಗತಿಸಿದರು. ನಂತರ ಬಿಎಲ್‌ಡಿಇ ಸಂಸ್ಥೆಯ ದಿ.ಎ.ಬಿ.ಸಾಲಕ್ಕಿ ಕಾಲೇಜಿನಲ್ಲಿಯ ಮತಕ್ಷೇತ್ರದ ಭದ್ರತಾ ಕೊಠಡಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಡಾ.ಅಂಬೇಡ್ಕರ್ ವೃತ್ತದಲ್ಲಿ ಚುನಾವಣಾ ರಥಕ್ಕೆ ಚಾಲನೆ ನೀಡಿದರು. ತದನಂತರ ತಹಶೀಲ್ದಾರ ಕಚೇರಿಗೆ ತೆರಳಿ ಮತಕ್ಷೇತ್ರದ ಸೆಕ್ಟರ್ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ನಿರ್ದೆಶನಗಳನ್ನು ನೀಡಿ ಮಾತನಾಡಿದರು. ಕೊನೆಯಲ್ಲಿ ಸಖಿ ಮತಗಟ್ಟೆ ಸೇರಿದಂತೆ ಸಂಖ್ಯೆ ೨೮, ೨೯,೩೦,೩೧, ೩೬, ೩೯, ೪೦, ೪೧ ಗಳಿಗೆ ಭೇಟಿ ನೀಡಿ ಪೂರ್ವಸಿದ್ಧತೆ ಹಾಗೂ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದರು.ತಾಲ್ಲೂಕು ಪಂಚಾಯಿತಿ ಇಓ ಸಂಜೀವ ಜುನ್ನೂರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಪಿಎಸ್‌ಐ ಬಸವರಾಜ ತಿಪ್ಪಾರೆಡ್ಡಿ, ಬಿ.ಬಿ.ಕೊಳ್ಳಿ, ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ಅನೀಲಕುಮಾರ ರಾಠೋಡ ಸೇರಿದಂತೆ…

Read More

ಬ್ರಹ್ಮದೇವನಮಡು: ಸಿಂದಗಿ ತಾಲೂಕು ಸುಕ್ಷೇತ್ರ ಹೊನ್ನಳ್ಳಿ – ಬ್ರಹ್ಮದೇವನಮಡು ಗ್ರಾಮದಲ್ಲಿ ಕಲ್ಶಾಣದೇಶ್ವರ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಮಹಾಸಾದ್ವಿ ಶಿವಶರಣಿ ಹೇಮರಡ್ಡಿ ಮಲ್ಲಮ್ಮನವರ ಮಹಾ ಪುರಾಣ ಕಾಯ೯ಕ್ರಮದಲ್ಲಿ ಮೆ.೩ರಂದು ರಾತ್ರಿ ೮ಗಂಟೆಗೆ ಶ್ರೀದೇವಿ ಹಾಗೂ ಮುತೈದೆಯರ ಉಡಿ ತುಂಬುವ ಕಾಯ೯ಕ್ರಮ ನಡೆಯಲಿದೆ. ಸಾಸನೂರ ತುಂಬಗಿ ಮಡಿವಾಳೇಶ್ವರ ಮಠದ ಮಹಾಂತಲಿಂಗ ಶಿವಾಚಾಯ೯ರು ದಿವ್ಶ ಸಾನಿಧ್ಶ ವಹಿಸುವರು. ನಿವೃತ್ತ ಕೃಷಿ ಅಧಿಕಾರಿ ಶಿವಾನಂದ ಹಿರೇಮಠ ಸಮ್ಮುಖ ವಹಿಸುವರು. ಸಚಿವ ಶರಣಬಸಪ್ಪ ದಶ೯ನಾಪೂರ ಪತ್ನಿ ಭಾರತಿ ದಶ೯ನಾಪೂರ, ಸಿಂದಗಿ ಶಾಸಕ ಅಶೋಕ ಮನಗೂಳಿ ಪತ್ನಿ ನಾಗರತ್ನಾ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ ಪತ್ನಿ ಲಲಿತಾ ಭೂಸನೂರ, ಜೇವಗಿ೯ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಪತ್ನಿ ನಾಗವೇಣಿ ಪಾಟೀಲ, ಶಶಿಕಲಾ ದಂಡಪ್ಪ ಸಾಹು ಮುಖ್ಶಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಮಠದ ಒಡೆಯ ಕಲ್ಶಾಣದಯ್ಶ ವೀರಘಂಟಯ್ಶ ಸ್ವಾಮೀಜಿ ತಿಳಿಸಿದ್ದಾರೆ.

Read More

ಸಿಂದಗಿ: ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರಿಗೆ ಮತ ನೀಡಿ ಎಂದು ನಾಗರತ್ನ ಮನಗೂಳಿ ಮನವಿ ಮಾಡಿಕೊಂಡರು.ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ ಮನೆ ಮನೆಗೂ ತೆರಳಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ೨೦೨೪ರ ಲೋಕಸಭಾ ಚುನಾವಣೆಯಲ್ಲಿ ರಾಜು ಆಲಗೂರ ಅವರ ಗೆಲುವು ನಿಶ್ಚಿತ. ಕಾಂಗ್ರೆಸ್ ಪಕ್ಷ ಎಲ್ಲ ಗ್ಯಾರಂಟಿಗಳನ್ನು ನೀಡುವ ಮೂಲಕ ನುಡಿದಂತೆ ನಡೆದಿದೆ ಎಂದರು.ಈ ವೇಳೆ ಸುನಂದಾ ಯಂಪುರೆ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Read More

ಇಂಡಿ: ಪಟ್ಟಣದಲ್ಲಿ ಮನೆ ನಿರ್ಮಿಸಬೇಕಾದರೆ ಕಟ್ಟಡ ಪರವಾನಿಗೆಗೆ ಅನುಮತಿ ಕೇಳಿದರೆ ಆರು ತಿಂಗಳಾದರೂ ಅನುಮತಿ ಸಿಗದ ದುಸ್ಥಿತಿ ಇಲ್ಲಿಯ ಪುರಸಭೆಯಲ್ಲಿದ್ದು ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.ಪುರಸಭೆಯಲ್ಲಿ ಅನುಮತಿ ಪಡೆದು ಕಟ್ಟಡ ಕಟ್ಟಬೇಕಾದರೆ ಸಂಬಂಧಪಟ್ಟ ಇಂಜಿನಿಯರ್ ಹತ್ತಿರ ಕಟ್ಟಡದ ನೀಲ ನಕ್ಷೆ ಹಾಗೂ ಅಂದಾಜು ಮೊತ್ತದ ಪ್ರತಿ ಸೇರಿದಂತೆ ಕಟ್ಟಡ ಪರವಾನಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.ಆರು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿದರೂ ಸಹ ಅನುಮತಿ ಸಿಗುತ್ತಿಲ್ಲ. ಹೀಗಾಗಿ ಇಂಡಿ ಪಟ್ಟಣದಲ್ಲಿ ಮನೆ ಕಟ್ಟಲು ಅನುಮತಿಗಾಗಿ ಜನ ಹರಸಾಹಸದ ಪಡುತ್ತಿರುವ ಘಟನೆ ನಡೆಯುತ್ತಿದೆ.ಪುರಸಭೆಯವರನ್ನು ಕೇಳಿದರೆ ನಾವು ವಿಜಯಪುರದ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರಕ್ಕೆ ಅರ್ಜಿ ಕಳುಹಿಸಿದ್ದೇವೆ. ಅವರು ಅಪ್ರುವಲ್ ನೀಡಿದ ನಂತರ ನಮಗೆ ಮುಂದಿನ ಕ್ರಮ ಕೈಗೊಳ್ಳಲು ಬರುತ್ತದೆ ಅಲ್ಲಿಯವರೆಗೂ ನಾವೇನು ಮಾಡೋಕೆ ಆಗೋಲ್ಲ ಅಂತಾರೆ ಪುರಸಭೆ ಸಿಬ್ಬಂದಿ.ಒಟ್ಟಿನಲ್ಲಿ ಈ ಅಧಿಕಾರಿಗಳ ತಿಕ್ಕಾಟದ ಮಧ್ಯ ಮನೆ ಕಟ್ಟುವ ಕನಸು ಹೊತ್ತಿರುವ ಜನರ ಪರಿಪಾಟಲು ಹೇಳತೀರದಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ…

Read More

ದೇವರಹಿಪ್ಪರಗಿ: ದಿ: ೦೩ ರಂದು(ಇಂದು) ೩೩ ಕೆ.ವ್ಹಿ ಕಡ್ಲೇವಾಡ ಪಿಸಿಎಚ್ ನಲ್ಲಿ ಲೈನ್ ಕ್ರಾಸಿಂಗ್ ಇರುವುದರಿಂದ ಸದರಿ ವಿದ್ಯುತ್ ಕೇಂದ್ರಗಳಲ್ಲಿ ಬೆಳಿಗ್ಗೆ ೯.೦೦ ಗಂಟೆಯಿಂದ ಮಧ್ಯಾನ್ಹ ೧೨.೦೦ ಗಂಟೆಯವರೆಗೆ ೩೩/೧೧ ಕೆ.ವ್ಹಿ ಕಡ್ಲೇವಾಡ ವಿದ್ಯುತ್ ಉಪ ಕೇಂದ್ರದ ಎಲ್ಲಾ ೧೧ ಕೆವ್ಹಿ ಫಿಡರ್‌ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕಾರಣ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಹೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ದೇವರಹಿಪ್ಪರಗಿ ಇವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Read More

ಸಿಂದಗಿ: ೨೦೨೪ರ ಲೋಕಸಭಾ ಚುನಾವಣೆಯ ಪ್ರಚಾರಾರ್ಥವಾಗಿ ಸಿಂದಗಿ ನಗರಕ್ಕೆ ಮೇ.೦೩ರಂದು ಸಾಯಂಕಾಲ ೪ಗಂಟೆಗೆ ಸಚಿವ ಬೈರತಿ ಸುರೇಶ ಆಗಮಿಸಿ ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಹಾಲುಮತ ಸಮಾಜದ ಮುಖಂಡರ ಸಭೆ ನಡೆಸಲಿದ್ದಾರೆ.ಕಾರಣ ಸಮಾಜದ ಎಲ್ಲ ಯುವಕರು, ಹಿರಿಯರು, ಮುಖಂಡರು ಮತ್ತು ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ತಾಲೂಕಾಧ್ಯಕ್ಷ ಸುರೇಶ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ನಿಡಗುಂದಿ: ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಘಟನೆ ತಾಲ್ಲೂಕಿನ ಬಸವನಬಾಗೇವಾಡಿ ಕ್ರಾಸ್ ಬಳಿ ಬುಧವಾರ ಸಂಜೆ ಜರುಗಿದೆ.ಮೃತ ವ್ಯಕ್ತಿ ಬೇನಾಳ ಎನ್ ಎಚ್ ಗ್ರಾಮದ ಯಲಗೂರದಪ್ಪಗೌಡ ಗುರುಪಾದಪ್ಪಗೌಡ ಪಾಟೀಲ (65).ಆಸ್ತಿ ವಿವಾದ ಸೇರಿದಂತೆ ನಾನಾ ಕಾರಣಗಳಿಂದ ಅದೇ ಗ್ರಾಮದ ಕಿರಣಕುಮಾರ ವಿಠ್ಠಲ ಬೋರಣ್ಣವರ (23) ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ನಿಡಗುಂದಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ನಿಡಗುಂದಿ ಪೊಲೀಸರು ತಿಳಿಸಿದ್ದಾರೆ.ಬುಧವಾರ ಸಂಜೆ ಡಾಬಾವೊಂದರಲ್ಲಿ ಊಟಕ್ಕೆ ಕುಳಿತಿದ್ದ ಯಲಗೂರದಪ್ಪಗೌಡನ ಮೇಲೆ ಕಿರಣಕುಮಾರ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ ಎನ್ನಲಾಗಿದೆ.ತೀವ್ರ ಗಾಯಗೊಂಡ ಯಲಗೂರದಪ್ಪನನ್ನು ಚಿಕಿತ್ಸೆಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಬುಧವಾರ ರಾತ್ರಿಯೇ ಯಲಗೂರದಪ್ಪಗೌಡ ಮೃತಪಟ್ಟ ಎಂದು ನಿಡಗುಂದಿ ಪೊಲೀಸರು ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ವಿಜಯಪುರ ಎಸ್ ಪಿ ಋಷಿಕೇಷ ಸೋನಾವಾಲೆ, ಹೆಚ್ಚುವರಿ ಎಸ್ ಪಿ ಶಂಕರ ಮಾರಿಹಾಳ, ಸಿ.ಪಿ. ಐ. ಶರಣಗೌಡ ಗೌಡರ ಭೇಟಿ ನೀಡಿದರು. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Read More

ವಿಜಯಪುರ ಜಿಲ್ಲಾ ಬಂಜಾರಾ ಸ್ವಾಭಿಮಾನ ಸಮಾವೇಶ | ಎಂಎಲ್ಸಿ ಪ್ರಕಾಶ ರಾಠೋಡ ಗಂಭೀರ ಆರೋಪ ವಿಜಯಪುರ: ಕಾಂಗ್ರೆಸ್ ನಮಗೆ ಎಸ್ಸಿ ಮೀಸಲಾತಿ ನೀಡಿದ್ದರಿಂದ ನಾವು ಶಿಕ್ಷಣ, ಉದ್ಯೋಗ ಸೇರಿದಂತೆ ಸರ್ವ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗಿದೆ. ಬಿಜೆಪಿಯವರು ವಿಶೇಷವಾಗಿ ರಮೇಶ ಜಿಗಜಿಣಗಿ ಹಾಗೂ ಗೋವಿಂದ ಕಾರಜೋಳ ಸದಾಶಿವ ಆಯೋಗದ ಹೆಸರಿನಲ್ಲಿ ಬಂಜಾರಾ ಸಮಾಜದ ಮೀಸಲಾತಿಯನ್ನು ಕಸಿಯಲು ಹೊರಟಿದ್ದರು. ನಮ್ಮ ಸಮುದಾಯವನ್ನು ಅತ್ಯಂತ ಕೀಳಾಗಿ ಕಂಡಿರುವ ಇವರಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕಿ ಗೆಲ್ಲಿಸಿ ಸ್ವಾಭಿಮಾನ ತೋರಿಸೋಣ ಎಂದು ವಿಧಾನ ಪರಿಷತ್ ಶಾಸಕ ಪ್ರಕಾಶ ರಾಠೋಡ ಹೇಳಿದ್ದಾರೆ.ಗುರುವಾರ ನಗರದಲ್ಲಿ ನಡೆದ ವಿಜಯಪುರ ಜಿಲ್ಲಾ ಬಂಜಾರಾ ಸ್ವಾಭಿಮಾನ ಸಮಾವೇಶದಲ್ಲಿ ಮಾತನಾಡಿದರು.ಇದು ಸ್ವಾಭಿಮಾನದ ಚುನಾವಣೆ. ನಮ್ಮ ಸಮುದಾಯದ ಮತ ಬೇಡ ಎಂದು ಹೇಳಿರುವ ಸಂಸದ ರಮೇಶ ಜಿಗಜಿಣಗಿಗೆ ಯಾಕೆ ಮತ ಹಾಕಬೇಕು? ಮುಖ್ಯಮಂತ್ರಿ ಸಿದ್ಧರಾಮಯ್ಯ ತಾಂಡಾಗಳುನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಕ್ರಮ ಕೈಗೊಂಡಿದ್ದಾರೆ. ಅಲ್ಲದೇ, ನಮ್ಮ…

Read More