Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಜೂನ್ ೮ರಂದು ಆಲಮಟ್ಟಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ರೈತಸಂಘ ನಿರ್ಧಾರ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ೨೦೧೮ರಲ್ಲಿ ಆರಂಭಗೊಂಡ ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟ ಏತ ನೀರಾವರಿ ಯೋಜನೆಯನ್ನು ಕೂಡಲೇ ಪೂರ್ಣಗೊಳಿಸುವಂತೆ ಆಗ್ರಹಿಸಿ ಜೂನ್ ೮ರಂದು ಆಲಮಟ್ಟಿಯಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಿಳಿಸಿದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳಾದ ಶಾಂತಗೌಡ ಪಾಟೀಲ (ನಡಹಳ್ಳಿ), ಸಂಗಮೇಶ ಸಗರ, ಕಲ್ಲು ಸೊನ್ನದ, ಸೀತಪ್ಪ ಗಣಿ ಅವರು, “ಜೂನ್ ೮ರಂದು ಆಲಮಟ್ಟಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ. ನಾಗರಬೆಟ್ಟ ಯೋಜನೆಯ ೧೪ ಫಲಾನುಭವಿ ಗ್ರಾಮಗಳ ರೈತರು, ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚೂನ್ನಪ್ಪ ಪೂಜೇರಿ, ಶಶಿಕಾಂತ ಗುರೂಜಿ ಸೇರಿದಂತೆ ಹಲವು ಹೋರಾಟಗಾರರು ಭಾಗವಹಿಸಲಿದ್ದಾರೆ” ಎಂದರು.೯ ವರ್ಷ ಕಳೆದರೂ ಕಾಮಗಾರಿ ಅಪೂರ್ಣ:೩೨೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಈ ಯೋಜನೆಯ ಮುಖ್ಯ ಕಾಲುವೆ ಕಾಮಗಾರಿ ಆರಂಭವಾಗಿ ೯ ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಯೋಜನೆಗೆ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಅರಣ್ಯ ಇಲಾಖೆಯಿಂದ ಐವತ್ತಮೂರು ಸಾವಿರ ಸಸಿ ವಿತರಣೆ ಮಾಡಲಾಗುವದೆಂದು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಎಸ್.ಜಿ.ಸಂಗಾಲಕ ಮತ್ತು ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಮಂಜುನಾಥ ಧುಳೆ ತಿಳಿಸಿದ್ದಾರೆ.ಅದರಲ್ಲಿ ಪ್ರಾದೇಶಿಕ ವಲಯದಲ್ಲಿ ೩೪ ಸಾವಿರ ಮತ್ತು ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ೧೯ ಸಾವಿರ ಅಗಿಗಳು ಲಭ್ಯ ಇವೆ.ಅಗಿಗಳನ್ನು ಇದೇ ಜೂನ ೧ ರಿಂದ ವಿತರಿಸಲಾಗುತ್ತದೆ. ಒಬ್ಬ ರೈತನಿಗೆ ಒಂದು ಎಕರೆ ಜಮೀನಿಗೆ ೧೬೦ ಸಸಿ ವಿತರಣೆ ಮಾಡಲಾಗುತ್ತದೆ.ರೈತರು ಸಸಿ ಪಡೆಯಲು ಬರುವಾಗ ಆಧಾರ ಕಾರ್ಡು ಮತ್ತು ಜಮೀನು ಉತಾರೆ ತರಬೇಕು ಎಂದರು.ಪ್ರಾದೇಶಿಕ ವಲಯದಲ್ಲಿ ೮೧೨ ಮಹಾಗನಿ, ಹೆಬ್ಬೆವು, ಸೀತಾಫಲ, ಶ್ರೀಗಂಧ ರಕ್ತ ಚಂದನ ಇಪ್ಪತ್ತು ಸಾವಿರ ಅಗಿಗಳಿದ್ದು ಪ್ರತಿ ಅಗಿಗೆ ರೂ ೬ ರಂತೆ ಮತ್ತು ೬೯ ನಿಂಬೆ, ನುಗ್ಗೆ, ಸೀತಾಫಲ, ಬಾರೆ ಸಾಗವಾನಿ ಪೇರು ಅಗಿಗಳಿದ್ದು ಅವು ಪ್ರತಿ ಒಂದಕ್ಕೆ ರೂ ಮೂರು ರೂ ದಂತೆ ನೀಡಲಾಗುವದು.ಸಾಮಾಜಿಕ ವಲಯದಲ್ಲಿ ೮೧೨ ಹದಿನಾಲ್ಕು ಸಾವಿರ ಅಗಿಗಳಿದ್ದು ಪ್ರತಿಯೊಂದಕ್ಕೆ…
ಇಂದು (ಮೇ ೩೧, ರವಿವಾರ) “ವಿಶ್ವ ತಂಬಾಕು ರಹಿತ ದಿನ” ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಅಲೆನ್ ಕ್ಯರ್ಸ್ ಅವರು, “Puಣ iಣ ouಣ, beಜಿoಡಿe iಣ ಠಿuಣs ಥಿou ಜoತಿಟಿ” ಎಂದು ಹೇಳಿದ್ದಾರೆ. ಟಿ.ವ್ಹಿ. ಮುಂದೆ ಕುಳಿತು ಧಾರವಾಹಿ ಮತ್ತು ಚಲನಚಿತ್ರ ನೋಡುವಾಗಿ ಮಧ್ಯದಲ್ಲಿ ಬರುತವ ಆರೋಗ್ಯಕರ ಎಚ್ಚರಿಕೆ ನೀಡುವ “ಧೂಮಪಾನ ಆರೋಗ್ಯಕ್ಕೆ ಹಾನಿಕರ” ಎಂಬ ಈ ಜಾಹೀರಾತಿನಲ್ಲಿ ತಂಬಾಕು ಮತ್ತು ಧೂಮಪಾನದಂತಹ ದುಶ್ಚಟಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡವರ ಮತ್ತು ಜೀವನವನ್ನು ಹಾಳು ಮಾಡಿಕೊಂಡವರ ದೃಶ್ಯವನ್ನು ನಾವೆಲ್ಲರೂ ದಿನನಿತ್ಯ ನೋಡುತ್ತೇವೆ. ಈ ಜಾಹೀರಾತು ಕೇವಲ ಓದುವದಕ್ಕಷ್ಟೇ ಮಾತ್ರ ಸೀಮಿತ ಎಂಬಂತೆ ಅನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಆಧುನಿಕತೆ ಮತ್ತು ಪಾಶ್ಚಾತ್ಯೀಕರಣದ ಪ್ರಭಾವದಿಂದ ನಮ್ಮ ಯುವ ಜನಾಂಗದ ತಂಬಾಕು, ಬಿಡಿ-ಸಿಗರೇಟ್ ಮತ್ತು ಇನ್ನಿತರ ತಂಬಾಕಿನ ಉತ್ಪನ್ನಗಳಾದ ಗುಟಕಾ, ಮಾವಾ ಅಗೆಯುವಂತಹ ದುಶ್ಚಟಗಳ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.ವಿಶ್ವ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿ.ಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನನ್ನ ಪ್ರೀತಿಯ ಮುದ್ದು!ಎಂದಿಗಿಂತ ಅಂದು ತುಂಬಾ ಸುಂದರವಾಗಿ ಕಾಣುತ್ತಿದ್ದೆ. ದೇವಲೋಕದ ಅಪ್ಸರೆಯಂತೆ ಸೆಳೆಯುತ್ತಿದ್ದೆ. ಗಾಢ ನೀಲಿ ಬಾರ್ಡರ್ ಇರೋ ತಿಳಿ ಗುಲಾಬಿ ರಂಗಿನ ಮೈಸೂರು ಸಿಲ್ಕ್ ಸೀರೆಯುಟ್ಟು ಅದಕೊಪ್ಪುವ ಬೋಟ್ ನೆಕ್ ಬ್ಲೌಸ್ ತೊಟ್ಟಿದ್ದೆ. ಅದು ನಿನಗೆ ಎಲಿಗೆಂಟ್ ಲುಕ್ ನೀಡಿತ್ತು. ಮುಗ್ಧ ಮನೋಹರವಾಗಿ ನಗುತ್ತಿದ್ದ ನಿನ್ನ ನೋಡಿ ನನ್ನನ್ನೇ ನಾನು ಮರೆತುಬಿಟ್ಟೆ. ನನ್ನ ಹೆಸರನ್ನು ಮೂರು ನಾಲ್ಕು ಸಲ ಆಪ್ತ ಗೆಳೆಯ ಕೂಗಿದ ಮೇಲೆ ವಾಸ್ತವಕ್ಕೆ ಬಂದೆ, ಗೆಳೆಯರೆಲ್ಲ ಕರಿತಾ ಇದ್ದಾರೆ ಬಾ ಎಂದು ಕೈಹಿಡಿದು ಕರೆದುಕೊಂಡು ಹೋದ. ನಿನ್ನ ನೆನಪಿನಲ್ಲಿ ಅಂದು ರಾತ್ರಿ ಕಣ್ರೆಪ್ಪೆಗಳು ಒಂದಕ್ಕೊಂದು ಅಂಟಿಕೊಳ್ಳಲೇ ಇಲ್ಲ.ಮರುದಿನ ರವಿವಾರ ಹೀಗಾಗಿ ನಿನ್ನನ್ನು ಕಾಣದ ಕಂಗಳು ಮತ್ತೆ ಉಪವಾಸ ಅನುಭವಿಸಿದವು. ಸೋಮವಾರ ನಿನ್ನನ್ನು ನೋಡಲೇಬೇಕೆಂದು ಕಾಲೇಜಿನ ಪಾರ್ಕಿನಲ್ಲಿ ಕಾಯುತ್ತಿದ್ದೆ. ಏ ಪೆದ್ದು ಪೆದ್ದು ಅನ್ನೋ ಮಧುರ ದನಿಗೆ ಹಿಂತಿರುಗಿ ನೋಡಿದೆ. ನಿಧಾನವಾಗಿ ತಲೆಯೆತ್ತಿದೆ ನೆನೆದವರ ಮನದಲ್ಲಿ ಅನ್ನೋ ತರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಥಣಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಹಿರಿಯ ಮುತ್ಸದ್ದಿ ನಾಯಕರಾದ ಶಾಸಕ ಲಕ್ಷ್ಮಣ್ ಸವದಿ ಅವರಿಗೆ ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಸಿಂದಗಿ ತಾಲ್ಲೂಕು ಗಾಣಿಗ ಸಮಾಜದ ಮಾಜಿ ಅಧ್ಯಕ್ಷ ಮಲ್ಲಣ್ಣ ಮನಗೂಳಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, “ಶ್ರೀ ಲಕ್ಷ್ಮಣ್ ಸವದಿ ಅವರು ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಧೀಮಂತ ನಾಯಕರಾಗಿದ್ದಾರೆ. ಈ ಹಿಂದೆ ಸಚಿವರಾಗಿ ಹಾಗೂ ಉಪಮುಖ್ಯಮಂತ್ರಿಗಳಾಗಿ ಅವರು ನೀಡಿದ ಆಡಳಿತಾತ್ಮಕ ಕೊಡುಗೆ ಅಪಾರ. ಅಥಣಿ ಕ್ಷೇತ್ರದ ಜನತೆ ಅವರ ನಾಯಕತ್ವವನ್ನು ಮೆಚ್ಚಿ ಭಾರಿ ಬಹುಮತದಿಂದ ಆರಿಸಿ ಕಳುಹಿಸಿದ್ದಾರೆ. ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗದ ಅವರು, ಇಡೀ ಉತ್ತರ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಯ ಧ್ವನಿಯಾಗಿದ್ದಾರೆ” ಎಂದು ತಿಳಿಸಿದ್ದಾರೆ.ಗಾಣಿಗ ಸಮಾಜ ಸೇರಿದಂತೆ ಹಿಂದುಳಿದ ವರ್ಗಗಳ ಮತ್ತು ಇಡೀ ಉತ್ತರ ಕರ್ನಾಟಕದ ನೀರಾವರಿ, ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ವೇಗ ಸಿಗಬೇಕಾದರೆ ಸವದಿ ಅವರಂತಹ…
ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಬಾಳೆ ಹಣ್ಣು ದೇಶದ ಅತ್ಯಂತ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಇದರ ಉತ್ಪಾದಕತೆಯನ್ನು ಹೆಚ್ಚಿಸಲು ಸಾಂಪ್ರದಾಯಿಕ ಬಾಳೆ ಕಂದುಗಳ ಬದಲಿಗೆ ವೈಜ್ಞಾನಿಕ ತಂತ್ರಜ್ಞಾನದ ಅಂಗಾಂಶ ಕೃಷಿ (Tissue Culture) ಬಾಳೆ ಸಸಿಗಳನ್ನು ಬಳಸುವಂತೆ ತೋಟಗಾರಿಕೆ ಇಲಾಖೆ ರೈತರಲ್ಲಿ ವಿನಂತಿಸಿದೆ.ಭಾರತದಲ್ಲಿ ವಾರ್ಷಿಕವಾಗಿ 9.00 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 383.00 ಲಕ್ಷ ಮೆಟ್ರಿಕ್ ಟನ್ ಬಾಳೆ ಉತ್ಪಾದನೆಯಾಗುತ್ತಿದ್ದು, ಪ್ರತಿ ಹೆಕ್ಟೇರ್ಗೆ 42.00 ಮೆಟ್ರಿಕ್ ಟನ್ ಉತ್ಪಾದಕತೆ ಇದೆ. ಆದರೆ, ಕರ್ನಾಟಕದಲ್ಲಿ 46.00 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೇವಲ 12.00 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದ್ದು, ಪ್ರತಿ ಹೆಕ್ಟೇರ್ಗೆ ಉತ್ಪಾದಕತೆ ಕೇವಲ 26.00 ಮೆಟ್ರಿಕ್ ಟನ್ಗಳಷ್ಟಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಗಣನೀಯವಾಗಿ ಕಡಿಮೆಯಾಗಿದೆ. ರೈತರಲ್ಲಿ ಸಮರ್ಪಕ ಮಾಹಿತಿಯ ಕೊರತೆಯಿಂದಾಗಿ ಇಂದಿಗೂ ಹಳೆಯ ಹಾಗೂ ಸಾಂಪ್ರದಾಯಿಕ ಬಾಳೆ ಕಂದುಗಳನ್ನು ನಾಟಿ ಮಾಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.ರಾಜ್ಯದಲ್ಲಿ ಬಾಳೆ ಇಳುವರಿಯನ್ನು ಹೆಚ್ಚಿಸಲು ತೋಟಗಾರಿಕೆ ಇಲಾಖೆಯು ರೈತರಿಗೆ ಸುಧಾರಿತ ತಂತ್ರಜ್ಞಾನದ ಅಂಗಾಂಶ ಕೃಷಿ…
ಉದಯರಶ್ಮಿ ದಿನಪತ್ರಿಕೆ ಕನ್ನಡ ನಾಡು ನುಡಿ ರಕ್ಷಣೆಗಾಗಿ ಕಲೆ, ಸಾಹಿತ್ಯ, ಸಂಗೀತ, ಬೆಳವಣೆಗಾಗಿ, ಕಲಾವಿದರ ಕ್ಷೇಮಾಭಿವೃದ್ದಿಯ ಸಂಕಲ್ಪದೊಂದಿಗೆ ಕನ್ನಡ ಫಿಲಂ ಚೇಂಬರ್ (ರಿ ) ರಾಜ್ಯವ್ಯಾಪ್ತಿ ವಿಸ್ತರಿಸುವ ಸದಾಶಯದೊಂದಿಗೆ ಜಿಲ್ಲಾ, /ತಾಲೂಕು ಘಟಕಗಳನ್ನು ರಚಿಸುವ ಕಾರ್ಯವು ಕೈಗೆತ್ತಿಕೊಂಡಿದ್ದು. ಅದರ ಒಂದು ಭಾಗವಾಗಿ ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ, ಯುವ ಸಾಹಿತಿ, ಕಲಾವಿದ, ಸಂಘಟಕರಾದ, ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ. ಮತ್ತು ಗೌರವಾಧ್ಯಕ್ಷರಾಗಿ ಹೆಸರಾಂತ ಸಾಹಿತಿಗಳು, ಚಿತ್ರನಟರು, ಕಲಬುರ್ಗಿ ಮಾಜಿ ಕಸಾಪ ಜಿಲ್ಲಾದ್ಯಕ್ಷರಾಗಿದ್ದ ಮಹಿಪಾಲರಡ್ಡಿ ಮುನ್ನೂರ ಅವರನ್ನು ರಾಜ್ಯ ಸಮಿತಿಯು ಆಯ್ಕೆ ಮಾಡಿದೆ.ಇನ್ನುಳಿದ ಪದಾಧಿಕಾರಿಗಳಾಗಿ ಉಪಾಧ್ಯಕ್ಷರು:ಅಮೃತ ದೊಡಮನಿ, ಪ್ರಧಾನ ಕಾರ್ಯದರ್ಶಿಗಳು:ಖಾಜಅಜ್ಮಿರ ( ಕೆ. ಕೆ. ದೇಸಾಯಿ), ಖಜಾಂಚಿ:ಚಿಂತನಗೌಡ ಪಾಟೀಲ, ನಿರ್ದೇಶಕರು: ಕು. ಭಾಗಮ್ಮ ಸಿ ಸುಂಬಡ, ವೀರೇಶ ಎಸ್ ಕುಂಬಾರ, ರಮೇಶ ಎಂ ತುಪ್ಪದ, ಕರಲಿಂಗ( ಕರೆಪ್ಪ )ಹೊಸಮನಿ, ಗೊಲ್ಲಾಳಪ್ಪ ಗೊಂದಳಿ, ಶಿವಶರಣಪ್ಪ ಶಾಖಾಪುರ, ನಿಂಗರಾಜ್ ತಳಗೇರ, ಮಲ್ಲಪ್ಪ ಹೊಸಮನಿ, ದೇವೇಂದ್ರ ಗೊಂದಳಿ ಅವರನ್ನು ಕಲಬುರ್ಗಿ ಜಿಲ್ಲಾ ಘಟಕ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ…
ರಾಜ್ಯ ರಾಜಕಾರಣದ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ರಮೇಶ ಜಿಗಜಿಣಗಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಂದ ಹಿಡಿದು ಇಲ್ಲಿಯವರೆಗೂ ದಲಿತ ನಾಯಕರನ್ನು ಮೂಲೆಗುಂಪು ಮಾಡುವ ಪರಂಪರೆ ಮುಂದುವರೆಸಿಕೊಂಡು ಬಂದಿದೆ, ದಲಿತರನ್ನು ಕೇವಲ ವೋಟ್ ಬ್ಯಾಂಕ್ ಬಳಸಿಕೊಳ್ಳುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ರಾಜ್ಯ ರಾಜಕಾರಣದ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕಳೆದು 70 ವರ್ಷಗಳಿಂದ ದಲಿತ ವಿರೋಧಿ ಧೋರಣೆಯನ್ನು ಕಾಂಗ್ರೆಸ್ ಮುಂದುವರೆಸಿದೆ.ಇವತ್ತಿಗೂ ದಲಿತ ಶಾಸಕರು ಹಾಗೂ ಸಂಸದರು ಮೂಲೆಗುಂಪು ಮಾಡಿ ಕೇವಲ ಒಂದು ವೋಟ್ ಬ್ಯಾಂಕ್ ಆಗಿ ಪರಿಗಣಿಸಿ ಅವರನ್ನು ಯಾವುದೇ ಸ್ಥಾನಮಾನ ಕೊಡದೆ ಕೇವಲ ಉಪಯೋಗಿಸುವ ಒಂದು ವಸ್ತುವನ್ನಾಗಿ ಮಾಡಿರುವ ಕಾಂಗ್ರೆಸ್ ಪಕ್ಷ ದಲಿತ ವಿರೋಧಿ ಪಕ್ಷ ಎಂದು ಅವರು ಟೀಕಿಸಿದ್ದಾರೆ.70 ವರ್ಷಗಳಿಂದ ದಲಿತರಿಗೆ ಒಂದು ಸಾರಿನೂ ಸಿಎಂ ಸ್ಥಾನ ಕೊಡದೆ ಇದ್ದಂತ ಕಾಂಗ್ರೆಸ್ ಸರ್ಕಾರಕ್ಕೆಬರುವಂತ ದಿನಗಳಲ್ಲಿ ಕಾಂಗ್ರೆಸ್ಸಿನ ದಲಿತ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯದ ಪರೀಕ್ಷೆಗಳನ್ನು (ಒಡಿಎಲ್ ಮತ್ತು ಆನ್ ಲೈನ್ ಮೋಡ್, ಟಿಇಇ ಜೂನ್ ೨೦೨೬) ಜೂ.೧ರಿಂದ ಜು.೨೧ ವರೆಗೆ ನಡೆಸಲಾಗುವುದು.ವಿಜಯಪುರ ಪ್ರಾದೇಶಿಕ ಕೇಂದ್ರದಡಿ ೫ ಇಗ್ನೋ ಪರೀಕ್ಷಾ ಕೇಂದ್ರಗಳಲ್ಲಿ ವಿಜಯಪುರ, ಧಾರವಾಡ, ಬೆಳಗಾವಿ, ಕಲಬುರಗಿ ಮತ್ತು ಸೋಲಾಪುರ ಪರೀಕ್ಷೆ ನಡೆಸಲಾಗುವುದು. ನೋಂದಾಯಿಸಿದ ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನುhttps://ignou.samarth.edu.in/index.php/site/login ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ :೦೮೩೫೨-೨೫೨೦೦೬ ಇಮೇಲ್:ಡಿಛಿbiರಿಚಿಠಿuಡಿ@igಟಿou.ಚಿಛಿ.iಟಿ ಸಂಪರ್ಕಿಸಬಹುದಾಗಿದೆ ಎಂದು ಇಗ್ನೋ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಡಾ.ಬಿ.ಎನ್.ದೇವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕೊಲ್ಹಾರ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜಾಗುವ ಪ್ರದೇಶಗಳಿಗೆ ಮೇ.೩೦ ಹಾಗೂ ೩೧ ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೊಲ್ಹಾರ ಮೂಲ ಸ್ಥಾವರದಿಂದ ಜಲನಗರ ಪಂಪಿನ ಮನೆಯವರೆಗೆ ಅಳವಡಿಸಿರುವ ೯೬೫/೯೦೦ಎಂ.ಎA ವ್ಯಾಸದ ಎಂ.ಎಸ್/ಪಿ.ಎಸ್.ಸಿ ಮುಖ್ಯ ಏರು ಕೊಳವೆ ಮಾರ್ಗದ ಕೊಲ್ಹಾರ ಜಾಕವೆಲ್, ಕೊಲ್ಲಾರ ಡಬ್ಲ್ಯೂ.ಟಿ.ಪಿ, ಚೈನೇಜ್ ೧.೯೦೭ಕಿ.ಮೀ ಹೊನ್ಯಾಳ ಕೆರೆ,ಚೈನೇಜ್ ೨.೪೦೬ ಕಿ.ಮೀ ಈರಣ್ಣ ಗುಡಿ, ಚೈನೇಜ್ ೬.೨೦೦ಕಿ.ಮೀ ಗರಸಂಗಿ ಹಳ್ಳದ ಹತ್ತಿರ, ಚೈನೇಜ್ ೯.೯೬೦ಕಿ.ಮೀ, ಚೈನೇಜ್ ೧೧.೯೦೦ಕಿ.ಮೀ ಜಗದಾಳ ತೋಟದ ಹತ್ತಿರ, ಸಾಯಿಬಾಬಾ ಗುಡಿ ಹತ್ತಿರ ೪ ಸ್ಥಳಗಳಲ್ಲಿ, ಜಿಯೋ ಪೆಟ್ರೋಲ್ ಪಂಪ್ ಹತ್ತಿರ, ಇಂಡಿಯನ್ ಆಯಿಲ್ ಪಂಪ್ ಹತ್ತಿರ,ಪ್ರಾರ್ಥನಾ ಶಾಲೆ ಹತ್ತಿರ, ಜುಮನಾಳ ಕ್ರಾಸ್ ಹತ್ತಿರ,ಸುತಳಿ ತೋಟ ಕರ್ಮಾ ಕೆಫೆ ಹತ್ತಿರ, ಕರ್ಮಾ ಕೆಫೆ ಮಸೀದಿ…
