Author: editor.udayarashmi@gmail.com

ಕೊಲ್ಹಾರ: ತಾಲೂಕಿನ ಸುಕ್ಷೇತ್ರ ಹಣಮಾಪೂರ(ಗೂಗಿಹಾಳ) ಗ್ರಾಮದಲ್ಲಿ ಪ್ರತಿ ೩ ವರ್ಷಕ್ಕೊಮ್ಮೆ ಜರಗುವ ದುರ್ಗಾದೇವಿ ಹಾಗೂ ಚಂದ್ರಾದೇವಿ ೮ ನೇ ವರ್ಷದ ಅಗ್ನಿ ಪ್ರವೇಶ ಹಾಗೂ ಜಾತ್ರಾ ಮಹೋತ್ಸವವು ಮೇ.೨೦ ರಿಂದ ೨೨ ರವರೆಗೆ ಮೂರು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಜರಗುವದು ಎಂದು ಜಾತ್ರಾ ಕಮಿಟಿ ತಿಳಿಸಿದೆ.ಮೇ.೨೦ ರಂದು ಸೋಮವಾರ ಸಾಯಂಕಾಲ ೪ ಗಂಟೆಗೆ ಸಕಲ ವಾದ್ಯ ವೈಭವಗಳೊಂದಿಗೆ ಅಪಾರ ಭಕ್ತರ ಸಮ್ಮುಖದಲ್ಲಿ ಗ್ರಾಮಕ್ಕೆ ದೇವಿಯನ್ನು ಬರಮಾಡಿಕೊಳ್ಳುವುದು.ರಾತ್ರಿ ೭ ಗಂಟೆಗೆ ಮನಮೋಹಕ ಆಕಾಶ ಚಿತ್ತಾರದ ಬಿರಿಸು ಬಾಣಿನ ವರ್ಣರಂಜಿತ ಚಿತ್ರ-ವಿಚಿತ್ರ ಮದ್ದು ಸುಡುವ ಕಾರ್ಯಕ್ರಮ ಜರಗುವದು. ಅದೇ ದಿನ ರಾತ್ರಿ:೧೦ ಗಂಟೆಗೆ ಮುಕ್ತ ಕಬಡ್ಡಿ ಪಂದ್ಯಾವಳಿಗಳು ಜರಗುವವು.ಮೇ.೨೧ ರಂದು ಮಂಗಳವಾರ ಬೆಳಿಗ್ಗೆ:೮ ಗಂಟೆಗೆ ಶಾಸ್ತ್ರೋಕ್ತವಾಗಿ ಹಲವು ಪೂಜಾ ಕಂಕೈರ್ಯಗಳ ಮೂಲಕ ದುರ್ಗಾದೇವಿ ಹಾಗೂ ಚಂದ್ರಾದೇವಿಯ ಉಡಿ ತುಂಬುವ ಕಾರ್ಯಕ್ರಮ ಜರಗುವದು.ಮದ್ಯಾಹ್ನ ೧೨ ಗಂಟೆಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ದೆ ಜರಗುವದು. ನಂತರ ಮದ್ಯಾಹ್ನ ೨ ಗಂಟೆಗೆ ೬೦ ಕೆ.ಜಿ ತೂಕದ ಚೀಲ ಹೊತ್ತೋಡುವ…

Read More

ವಿಜಯಪುರ: ವೈದ್ಯಕೀಯ ಕ್ಷೇತ್ರದಲ್ಲಿ ಮಾನವೀಯ ಮೌಲ್ಯ ಸೇವಾ ಮನೋಭಾವವನ್ನು ಗುರುತಿಸುವ ಹಾಗೂ ಗೌರವಿಸುವ ಫ್ಲೋರೆನ್ಸ್ ನೈಟಿಂಗ್ ಗೇಲ್ ಅವರ ಜನ್ಮದಿನಾಚರಣೆಯನ್ನು ವಿಶ್ವದ್ಯಂತ ದಾದಿಯರ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತದೆ ಎಂದು ಐ ಎಂ ಎ ರಾಜ್ಯ ಶಾಖೆಯ ಏಎಂಎಸ್ ದ ಕಾರ್ಯದರ್ಶಿ ಡಾ. ಸುರೇಶ ಕಾಗಲ್ಕರ್ ಹೇಳಿದರು.ನಗರದ ಕಿಡ್ನಿ ಕೇರ್ ಆಸ್ಪತ್ರೆಯಲ್ಲಿ ಇತ್ತೀಚಿಗೆ ಅಂತರಾಷ್ಟ್ರೀಯ ದಾದಿಯರ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕೋವಿಡ್ ಸಮಯದಲ್ಲಿ ಯೋಧರಂತೆ ಜೀವನವನ್ನೇ ಮುಡುಪಾಗಿಟ್ಟು ರೋಗಿಯನ್ನು ರಕ್ಷಿಸುವ ಕಾಯಕದಲ್ಲಿ ಹಗಲು ರಾತ್ರಿ ಎನ್ನದೆ ದುಡಿದಿದ್ದಾರೆ. ದಾದಿಯರು ನಗುಮುಖದಿಂದ ಶಿವ ನಿರ್ವಹಣೆಯನ್ನು ಮಾಡುವರು, ನೋವಿನಲ್ಲಿ ಧೈರ್ಯ ತುಂಬುವುದು ಕಷ್ಟದಲ್ಲಿ ಸಹಾಯ ಮಾಡುವ ಏಕೈಕ ಗುಣ ಇರುವುದು ಅದು ದಾದಿಯರ ಕರ್ತವ್ಯದಲ್ಲಿ ಇರುತ್ತದೆ ಅವರು ತಾಯಿಯ ರೂಪದಲ್ಲಿ ಅಕ್ಕ ತಂಗಿಯರ ರೂಪದಲ್ಲಿ ನಾವು ಕಾಣಬಹುದಾಗಿದೆ ಅವರ ಸೇವೆಗೆ ಬೆಲೆ ಕಟ್ಟಲಾಗದು ಎಂದು ಹೇಳಿದರುಸಮಾರಂಭದಲ್ಲಿ ವಿಜಯ್ ಬಡಿಗೇರ, ಬಸ್ಸು ಶಾಸ್ತ್ರಿ, ವಿಜಯ್, ಶಬನಾ, ಸಂತೋಷ್, ಪವಿತ್ರ, ಮುಜಬ್ ಮುಂತಾದವರು ಭಾಗವಹಿಸಿದ್ದರು…

Read More

ಚಡಚಣ: ರಕ್ತಹೀನತೆ ಮತ್ತು ಅಪೌಷ್ಠಿಕ ಕಾರಣದಿಂದ ಬಳಲಿದಂತೆ ಕಾಣುವ ಮಕ್ಕಳಲ್ಲಿ ಜಂತು ಹುಳು ಸಾಧ್ಯತೆ ಇರುತ್ತದೆ. ಈ ಸಮಸ್ಯೆ ಇದ್ದವರಿಗೆ ಸೇವಿಸುವ ಆಹಾರದ ಶೇ.೩೦ರಿಂದ ೪೦ರಷ್ಟು ಭಾಗ ಜಂತು ಹುಳುಗಳ ಪಾಲಾಗುತ್ತದೆ. ಹೀಗಾಗಿ ರಕ್ತಹೀನತೆ, ದೇಹದ ತೂಕ ಹಾಗೂ ನೆನಪಿನ ಶಕ್ತಿ ಕಡಿಮೆಯಾಗುವುದರ ಜತೆಗೆ ನಾನಾ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಮಾತ್ರೆಗಳ ವಿತರಣೆ ಅಗತ್ಯವಿದೆ. ಮಕ್ಕಳಲ್ಲಿ ಕಂಡು ಬರುವ ಜಂತುಹುಳು ಸಮಸ್ಯೆ ಬಗ್ಗೆ ನಿರ್ಲಕ್ಷಿಸದಿರಿ…! ಎಂದು ರೇವತಗಾಂವ ಸಮುದಾಯ ಆರೋಗ್ಯಾಧಿಕಾರಿ ಶ್ರೀಧರ ಬಂಡಗರರವರು ಹೇಳಿದರು.ರೇವತಗಾಂವ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಕೋಚಿಂಗ್ ಕ್ಲಾಸ್‌ನಲ್ಲಿ ಬುಧವಾರದಂದು ‘ರಾಷ್ಟ್ರೀಯ ಜಂತುಹುಳು ನಿರ್ಮೂಲನಾ’ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಜಂತುಹುಳು ಮಾತ್ರೆಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು. ಜಂತುಹುಳು ಎಂದರೆ ಮಾನವನ ಕರುಳಿನಿಂದ ಪೋಷಕಾಂಶಗಳನ್ನು ಹೀರಿಕೊಂಡು ಜೀವಿಸುವ ಪರಾವಲಂಬಿಗಳು. ಅಲ್ಲದೆ ಜಂತುಹುಳುವಿನ ಸೋಂಕಿನಿAದಾಗಿ ಮಕ್ಕಳ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ತಿಳಿಸಿದರು.ಈ ವೇಳೆಯಲ್ಲಿ ಕೋಚಿಂಗ್ ಕ್ಲಾಸ್‌ನ ಸಂಚಾಲಕರಾದ ಮಲ್ಲು ಮಾನೆಯವರು ಮಾತನಾಡುತ್ತ. ಮಕ್ಕಳಲ್ಲಿ ಜಂತು ಹುಳುಗಳ…

Read More

ವಿಜಯಪುರ: ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಜಂಬಗಿ ಕೆರೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಜಂಬಗಿ, ಆಹೇರಿ, ಅಂಕಲಗಿ, ಹುಣಶ್ಯಾಳ, ಮಾದಾಳ ಗ್ರಾಮದನೂರಾರು ರೈತರು ಗುರುವಾರ ಟೆಂಟ್ ಹಾಕಿ ಹಸಿರು ಧ್ವಜ ಹಿಡಿದು ಜಿಲ್ಲಾಧಿಕಾರಿ ಹಾಗೂ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತಾ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು.ಜಂಬಗಿ ಗ್ರಾಮದ ಮಾಜಿ ಗ್ರಾ.ಪಂ ಸದಸ್ಯ ಸಂಗಮೆಶ ಗುದಳೆ ಅವರು ಮಾತನಾಡುತ್ತಾ, ಜಂಬಗಿ ಕೆರೆ ಜಿಲ್ಲೆಯಲ್ಲಿಯೇ ೨ನೇ ಅತಿದೊಡ್ಡ ಕೆರೆಯಾಗಿದ್ದು, ಹಾಗೂ ಹುಣಶ್ಯಾಳ (ಮಾದಾಳ) ಕೆರೆಗಳಲ್ಲಿ ನೀರು ತುಂಬಿದರೆ ಸುತ್ತಮುತ್ತಲಿನ ೫-೬ ಹಳ್ಳಿಗಳ ರೈತರಿಗೆ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಅನುಕೂಲವಾಗುವುದು ಮಾತ್ರವಲ್ಲದೇ, ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಮೂಲಗಳು ಅಭಿವೃದ್ಧಿ ಹೊಂದುತ್ತವೆ. ಈಗ ಕೆರೆ ನೀರು ಖಾಲಿಯಾಗಿ ಜಾನುವಾರುಗಳಿಗೂ ಕುಡಿಯಲು ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಕೂಡಲೇ ಈ ಎಲ್ಲಾ ಕೆರೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ ಅವರು ಮಾತನಾಡುತ್ತಾ, ಜಿಲ್ಲೆಯ…

Read More

ಮೋರಟಗಿ: ೨೦೨೪ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗ್ರಾಮದ ಐಡಿಎಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ೧೫ ವಿದ್ಯಾರ್ಥಿಗಳಲ್ಲಿ ೧೪ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅತ್ಯುತ್ತಮ ಶ್ರೇಣಿ ೨ ಪ್ರಥಮ ಶ್ರೇಣಿ ೧೨ ವಿದ್ಯಾರ್ಥಿಗಳು ಪಾಸಾಗಿದ್ದು ಶಾಲಾ ಫಲಿತಾಂಶ ಶೇ ೯೩.೩೦% ರಸ್ಟಾಗಿದೆ.೧) ಬಸವರಾಜ ದಂಡಿನ ೫೫೩(೮೮.೪೮%) ೨) ಮಾಯಿನಕುಬ್ರ ಮುಲ್ಲಾ, ೫೪೮(೮೭.೬೮%)೩) ಕಾರ್ತಿಕ್ ಬಳಗುಂಪಿ ೫೩೦(೮೪.೮೦%)೪) ಹುಸೇನ್ ಮುಳ್ಳೋಳ್ಳಿ ೫೧೮(೮೨.೮೮)೫)ಅಂಜುಮ ಬಾಗವಾನ ೫೦೮(೮೧.೨೮) ಅಂಕಗಳನ್ನು ಪಡೆದು ಐಡಿಎಲ್ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.ಉತ್ತಮ ಸಾದನೆ ಮಾಡಿ ಶಾಲೆಯ ಕೀರ್ತಿ ಹೆಚ್ಚಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಯ ಸಂಸ್ಥಾಪಕ ಅಧ್ಯಕ್ಷರು ಆಡಳಿತ ಮಂಡಳಿ ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿ ವಿದ್ಯಾರ್ಥಿಗಳ ಜೀವನ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದ್ದಾರೆ.

Read More

ವಿಜಯಪುರ: ಲಾಲ್ ಬಹಾದ್ದೂರ ಶಾಸ್ತ್ರಿ ಜಲಾಶಯದ ವ್ಯಾಪ್ತಿಗೆ ಬರುವ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಗೆ ಸಂಬಂಧಿಸಿದ ಎಲ್ಲ ಕಾಲುವೆಗಳ ಕ್ಲೋಜರ್ ಕಾಮಗಾರಿಗಳನ್ನು ನಡೆಸಲು ರಾಜ್ಯ ಸರ್ಕಾರ ಕೂಡಲೇ ಅನುದಾನ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕ್ಲೋಜರ್ ಕಾಮಗಾರಿ ನಡೆಸಲು (ಹೂಳು ಹಾಗೂ ಗಿಡಗಂಟಿಗಳ ತೆರವುಗೊಳಿಸುವ ಕಾರ್ಯ) ಅನುದಾನ ಇಲ್ಲದ ಕಾರಣ ಕಾಲುವೆಗಳನ್ನು ತುಂಬಿರುವ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ ವರ್ಷವೂ ಕೂಡ ಕ್ಲೋಜರ್ ಕಾಮಗಾರಿ ನಡೆಸಲಿಲ್ಲ ಇದಿರಂದ ಎಲ್ಲ ಕಾಲುವೆಗಳಲ್ಲಿ ಮಣ್ಣು ತುಂಬಿ ಗಿಡಗಂಟಿಗಳು ಬೆಳೆದಿವೆ. ಕಾಲುವೆಗಳಿಗೆ ನೀರು ಹರಿಸಿದ ಸಂದರ್ಭದಲ್ಲಿ ನೀರು ಮುಂದೆ ಸಾಗದೆ ಹೊಲಗಳಲ್ಲಿ ನೀರು ನುಗ್ಗಿ ಬೆಳೆ ಹಾಳಾಗಿ ಮಣ್ಣು ಕೂಡ ಕೊಚ್ಚಿ ಹೋಗುತ್ತಿದೆ. ಅದು ಅಲ್ಲದೇ ಕಾಲುವೆ ಕೊನೆ ಅಂಚಿನವರೆಗೆ ನೀರು…

Read More

ಮುದ್ದೇಬಿಹಾಳ: ಸಕಾರಣವಿಲ್ಲದೇ ಬಂದ ಮಾಡಲಾದ ಬಸ್ ಸೇವೆಗಳನ್ನು ಪುನರ್ ಆರಂಭಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಮರ್ಚೆಂಟ್ ಅಸೋಸಿಯೇಶನ್, ನಗರಾಭಿವೃದ್ಧಿ ಹೋರಾಟ ವೇದಿಕೆ ಸೇರಿದಂತೆ ವಿವಿದ ಪ್ರಗತಿಪರ ಸಂಘಟನೆಗಳು ಮೇ.೧೭ ರಂದು ಸಂಜೆ ೪ಗಂಟೆಗೆ ಪಟ್ಟಣದ ಗ್ರಾಮದೇವತೆ ದೇವಸ್ಥಾನದಿಂದ ಪ್ರತಿಭಟನೆ ನಡೆಸುವ ಮೂಲಕ ಕೆಎಸ್‌ಆರ್‌ಟಿಸಿ ಘಟಕಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿವೆ.ಈ ಕುರಿತು ಮಾಹಿತಿ ನೀಡಿದ ಹೋರಾಟಗಾರ ಬಸವರಾಜ ನಂದಿಕೇಶ್ವರಮಠ, ಈ ಹಿಂದೆ ಆಲಮಟ್ಟಿ ರೇಲ್ವೆ ಸ್ಟೇಷನ್, ಮುಂಬೈ, ನಾಸಿಕ, ರತ್ನಾಗಿರಿ, ವಾಸ್ಕೋ, ಪುಣೆ, ಹಾಸನ, ಕಾಗಿನೆಲೆ ಹೀಗೆ ಹಲವು ಬಸ್‌ಗಳನ್ನು ಮುದ್ದೇಬಿಹಾಳದಿಂದ ಓಡಿಸಲಾಗಿತ್ತಿತ್ತು. ಆದರೆ ದಿಢೀರನೆ ಈ ಬಸ್ಸುಗಳ ಒಡಾಟವನ್ನು ಬಂದ್ ಮಾಡಿದ್ದು ಸಾರ್ವಜನಿಕರು ಪರದಾಡುವಂತಾಗಿದೆ. ಕಾರಣ ಈ ಎಲ್ಲ ಬಸ್‌ಗಳು ಸೇರಿದಂತೆ ಎಲ್ಲ ಬಂದ್ ಮಾಡಲಾದ ಬಸ್‌ಗಳನ್ನು ಪುನರ್ ಆರಂಭಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗುತ್ತಿದೆ. ಎಲ್ಲರೂ ಭಾಗಿಯಾಗುವಂತೆ ಮನವಿ ಮಾಡಿಕೊಂಡಿದ್ದಾರೆ.

Read More

ಮುದ್ದೇಬಿಹಾಳ: ಏನೂ ಅರಿಯದ ಕಂದಮ್ಮನನ್ನ ಚರಂಡಿಯಲ್ಲಿ ಎಸೆದ ಹೃದಯ ವಿದ್ರಾವಕ ಘಟನೆ ತಾಲೂಕಿನ ಆಲಕೊಪ್ಪರ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.ಆಗ ತಾನೇ ಜನಿಸಿದ ಗಂಡು ಮಗುವನ್ನ ಕರುಳು ಬಳ್ಳಿಯ ಸಮೇತ ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಬಸ್ ನಿಲ್ದಾಣದ ಬಳಿ ಇರುವ ಮುಖ್ಯ ಚರಂಡಿಯಲ್ಲಿ ಎಸೆಯಲಾಗಿದೆ.ಮಗುವನ್ನ ಕಂಡ ಸ್ಥಳೀಯರು ಸಲಿಕೆಯ ಸಹಾಯದಿಂದ ಆಚೆ ತೆಗೆದು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪಿಎಸ್‌ಐ ಸಂಜೀವ ತಿಪರೆಡ್ಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.

Read More

ದೇವರಹಿಪ್ಪರಗಿ: ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನೀಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿ ಶಾಲೆಗೆ ಕೀರ್ತಿ ತಂದಿದ್ದಾರೆ.ಶಾಲೆಯ ವಿಧ್ಯಾರ್ಥಿನೀಯರಲ್ಲಿ ಸದಾಫ್ನಜ್ ಚೌಧರಿ ಪ್ರಥಮ ಭಾಷೆ ಉರ್ದುವಿನಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದು ಶೇ ೯೨.೪೮ ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದರೆ, ಅಲ್ಪೀಯಾ ಬಾಗಬಾನ ಶೇ ೮೭.೮೪, ಸಮ್ರೀನ್ ಮಂಡೆ ಶೇ ೮೫.೯೨ ಅಂಕ ಪಡೆದಿದ್ದಾರೆ. ವಿದ್ಯಾರ್ಥಿನೀಯರ ಈ ಸಾಧನೆಗೆ ಉರ್ದು ಭಾಷೆ ಶಿಕ್ಷಕ ಯಾಸೀನ್ ಗರಡಿಮನಿ ಸೇರಿದಂತೆ ಶಿಕ್ಷಕ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

Read More

ದೇವರಹಿಪ್ಪರಗಿ: ಗ್ರಾಮದ ಪಂಚಾಯಿತಿ, ದೇವಾಲಯ ಸಂಪರ್ಕ ರಸ್ತೆಯನ್ನು ಕೆಸರು ಹಾಗೂ ತ್ಯಾಜ್ಯ ನೀರಿನಿಂದ ಮುಕ್ತಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಗ್ರಾಮದ ಪ್ರಮುಖರು ಆಗ್ರಹಿಸಿದ್ದಾರೆ.ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ನೂತನ ಸೇತುವೆಯ ಮೂಲಕ ಗ್ರಾಮ ಪಂಚಾಯಿತಿ ಹಾಗೂ ದೇವಾಲಯವನ್ನು ಸಂಪರ್ಕಿಸುವ ಮುಖ್ಯ ರಸ್ತೆ ಸೇರಿದಂತೆ ಅಂಬಿಗರ ಚೌಡಯ್ಯ ವೃತ್ತ ಗಲೀಜು ನೀರಿನಿಂದ ಆವೃತ್ತವಾಗಿದ್ದು, ರಸ್ತೆ ನಡೆಯಲು ಬಾರದಂತಾ ಸಾರ್ವಜನಿಕರು, ಬೈಕ್ ಸವಾರರು ಪರದಾಡುವಂತಾಗಿದೆ.ಈ ಕುರಿತು ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಿಂಗನಗೌಡ ಖಾನಾಪೂರ ಮಾತನಾಡಿ, ಗ್ರಾಮದ ಚರಂಡಿಗಳು ಚಿಕ್ಕದಾದ ಪರಿಣಾಮ ಮಲೀನ ಹಾಗೂ ತ್ಯಾಜ್ಯ ನೀರು ಅಲ್ಲಿಯೇ ನಿಂತು ಇಡೀ ರಸ್ತೆ ನಡೆಯಲು ಬಾರದಂತಾಗಿದೆ. ಬೇಸಿಗೆಯ ಸಮಯದಲ್ಲಿಯೇ ರಸ್ತೆ ಹಾಗೂ ಚರಂಡಿಗಳ ಸ್ಥಿತಿ ಈ ರೀತಿಯಾದರೆ ಮುಂದೆ ಬರುವ ಮಳೆಗಾಲದಲ್ಲಿ ರಸ್ತೆಯ ಪರಿಸ್ಥಿತಿ ಹೇಗಾಗುತ್ತದೆ ಎಂದು ಊಹಿಸುವುದು ಕಷ್ಟ. ಆದ್ದರಿಂದ ಮಳೆಗಾಲ ಆರಂಭಗೊಳ್ಳುವ ಮುಂಚೆ ನೀರು ಸರಾಗವಾಗಿ ಸಾಗಲು ಸ್ಥಳೀಯ ಗ್ರಾಮ ಪಂಚಾಯಿತಿ ಕೂಡಲೇ ಕ್ರಮ ವಹಿಸಬೇಕು ಎಂದರು.ಮಳೆಗಾಲದಲ್ಲಿ ಮಳೆನೀರು,…

Read More