ಮುದ್ದೇಬಿಹಾಳ: ತಾಲೂಕಿನಲ್ಲಿ ಸಾಹಿತ್ಯ ಕ್ಷೇತ್ರ ಬಡವಾಗಬಾರದು. ಸಾಹಿತ್ಯ ಕ್ಷೇತ್ರಕ್ಕೆ ನೆಲೆ ನೀಡುವ ಶತಪ್ರಯತ್ನವನ್ನು ತಾಲೂಕಿನ ಎಲ್ಲ ಹಿರಿಯ ಸಾಹಿತಿಗಳ ಮತ್ತು ಕನ್ನಡಾಭಿಮಾನಿಗಳ ಆಶೀರ್ವಾದದಿಂದ ಮಾಡುವೆ ಎಂದು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.
ಪಟ್ಟಣದ ಮಾರುತಿ ನಗರದಲ್ಲಿರುವ ಕಾಶಿ ವಿಶ್ವನಾಥ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾಗಿದ್ದ ಶರಣಯೋಗಿ ಹಡಪದ ಅಪ್ಪಣ್ಣನವರ ಮತ್ತು ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡದ ತೇರನ್ನು ಎಳೆಯುವ ಅವಕಾಶ ಸಿಕ್ಕಿರೋದು ನನ್ನ ಸೌಭಾಗ್ಯ. ಈ ಹುದ್ದೆಗೆ ನಾನು ಯಾವತ್ತೂ ಧಕ್ಕೆ ಬಾರದ ರೀತಿಯಲ್ಲಿ ಸಾಗುವೆ. ಇನ್ನು ಮೇಲಿಂದ ಮೇಲೆ ಕನ್ನಡದ ಕಾರ್ಯಕ್ರಮಗಳು ಜರುಗಲಿವೆ. ಅದಕ್ಕೆ ಎಲ್ಲ ಸಾಹಿತಿಗಳ ಸಹಾಯ ಸಹಕಾರ ಕೋರುವೆ ಎಂದರು.
ಈ ವೇಳೆ ಹಿರಿಯ ಸಾಹಿತಿ ಬಿ.ಎಂ.ಹಿರೇಮಠರು ಮಾತನಾಡಿ, ಕ್ರಿಯಾಶೀಲ ಅಧ್ಯಕ್ಷರು ಭುವನೇಶ್ವರಿ ತಾಯಿಯ ತೇರನ್ನು ಎಳೆಯಲು ಎಲ್ಲ ಸಾಹಿತಿಗಳು, ಕನ್ನಡಾಭಿಮಾನಿಗಳು ಅದ್ಭುತ ಸಹಾಯ ಸಹಕಾರ ನೀಡೋಣ ಎಂದರು.
ಮಹಾದೇಶ ಶಾಸ್ತ್ರಿಗಳು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ ಮಾತನಾಡಿದರು.
ಸಾಹಿತಿ ಪರಶುರಾಮ ಚೌಡಕೇರ ಮತ್ತು ಗ್ರಾಮ ಆಡಳಿತ ಅಧಿಕಾರಿ ಸಚೀನ ಗೌಡರ ವಿಶೇಶ ಉಪನ್ಯಾಸ ನೀಡಿದರು. ಶೋಭಾತಾಯಿ ಶರಣಮ್ಮನವರು ಸಾನಿಧ್ಯವಹಿಸಿದ್ದರು. ಪು.ಸದಸ್ಯರುಗಳಾದ ಮಹೆಬೂಬ ಗೊಳಸಂಗಿ, ಭಾರತಿ ಪಾಟೀಲ, ಸದಾಶಿವ ಮಾಗಿ, ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಶಂಕ್ರಪ್ಪಣ್ಣ ಹಡಪದ ಮತ್ತೀತರರು ವೇದಿಕೆಯಲ್ಲಿದ್ದರು.
ಹಿರಿಯ ಸಾಹಿತಿಗಳಾದ ಅಶೋಕ ಮಣಿ, ರುದ್ರೇಶ ಕಿತ್ತೂರ, ಶಿವಪುತ್ರಪ್ಪ ಅಜಮನಿ, ಜೆ.ಡಿ.ಮುಲ್ಲಾ, ಸದಾಶಿವ ಮಠ, ಬಸಲಿಂಗಪ್ಪಣ್ಣ ರಕ್ಕಸಗಿ, ಹುಸೇನ ಮುಲ್ಲಾ, ಸಂಗಣ್ಣ ಮೇಲಿನಮನಿ, ರವಿ ಅಮರಣ್ಣವರ ಸೇರಿದಂತೆ ಮತ್ತೀತರರು ಇದ್ದರು. ಸಂಗಮೆಶ ಶಿವಣಗಿ ತಂಡ ನಡಗೀತೆ ಹಾಡಿದರು. ಸಾಹಿತಿ ಸಿದ್ದನಗೌಡ ಬಿಜ್ಜೂರ ಕಾರ್ಯಕ್ರಮ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
ಕನ್ನಡದ ತೇರು ಎಳೆವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ :ಕಾಮರಾಜ
Related Posts
Add A Comment

