Author: editor.udayarashmi@gmail.com

ವಿಜಯಪುರ: ರಾಜಕೀಯ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ಉಪ್ಪಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಕಾರ್ಯದರ್ಶಿ ಮಹಾಲಿಂಗ ಉಪ್ಪಾರ ಒತ್ತಾಯಿಸಿದ್ದಾರೆ.ಉಪ್ಪಾರ ಸಮುದಾಯ ಏಕೈಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಿಲ್ಲ.ಜತೆಗೆ ಮೇಲ್ಮನೆಯಲ್ಲಿ ಒಬ್ಬರು ಸದಸ್ಯರಿಲ್ಲ. ಆದ್ದರಿಂದ ಧ್ವನಿಯಿಲ್ಲದ ಸಮಾಜಕ್ಕೆ ರಾಜಕೀಯ ಶಕ್ತಿ ತುಂಬಲು ವಿಧಾನ ಪರಿಷತ್ ಸ್ಥಾನ ನೀಡುವಂತೆ ಕೊರಿದ್ದಾರೆ.

Read More

ಚಡಚಣ: ಸಮುದಾಯ ಆರೋಗ್ಯ ಕೇಂದ್ರ ಚಡಚಣ ಇವರ ಸಂಯುಕ್ತ ಆಶ್ರಯದಲ್ಲಿ ಚಡಚಣದ 15ನೇ ನಂಬರ ಅಂಗನವಾಡಿ ಕೇಂದ್ರದಲ್ಲಿ ಇಂದು ವಿಶ್ವ ಋತುಚಕ್ರ ನೈರ್ಮಲ್ಯ ದಿನ ಆಚರಣೆ ಮಾಡಲಾಯಿತು.ಆರೋಗ್ಯ ಆಪ್ತ ಸಮಾಲೋಚಕರಾದ ಶ್ರೀ ಪ್ರಶಾಂತ ಸಾಳುಂಕೆ ಮಾತನಾಡಿ, ಋತುಸ್ರಾವದಲ್ಲಿ ಸ್ವಚ್ಚತೆ ಜೊತೆ ಕಬ್ಬಿಣದ ಅಂಶದ ಆಹಾರ ಸೇವನೆ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಆರೋಗ್ಯ ಮಿತ್ರರಾದ ಸಂಜಿವ ರೋಗಿ ಹಾಗೂ ಅಂಗನವಾಡಿ ಮೇಲ್ವಿಚಾರಕರು ಶ್ರೀಮತಿ ನೂತುನಾ ಬಿರಾದಾರ ಹಾಗೂ ಶ್ರೀಮತಿ ಪವಟೆ ಮಾನಂದಾ. ಹಸಿನಾ ನದಾಫ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

Read More

ದೇವರಹಿಪ್ಪರಗಿ: ಕೊಂಡಗೂಳಿ ಗ್ರಾಮದ ಶ್ರೀಸದ್ಗುರು ಸಮರ್ಥ ಚಂದ್ರಶೇಖರ ಶಿವಯೋಗಿಗಳ ಹಾಗೂ ಶ್ರೀಶಾಂತಾನಂದ ಸ್ವಾಮಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.ತಾಲ್ಲೂಕಿನ ಕೊಂಡಗೂಳಿ ಗ್ರಾಮದ ಸಿದ್ಧಾರೂಢಮಠದ ಶಾಂತಾಶ್ರಮದ ಆವರಣದಲ್ಲಿ ಭಾನುವಾರ ಶಿವಯೋಗಿಗಳು ಹಾಗೂ ಸ್ವಾಮೀಜಿಯವರ ಪುಣ್ಯಸ್ಮರಣೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು ದಿನಪೂರ್ತಿ ಜರುಗಿದವು.ಬೆಳಿಗ್ಗೆ ೧೦ ಗಂಟೆಗೆ ಆರಂಭಗೊಂಡ ಪಲ್ಲಕ್ಕಿಉತ್ಸವ ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿ ಮಧ್ಯಾನ ಆಶ್ರಮ ತಲುಪಿತು. ನಂತರ ಪೂಜ್ಯರ ಆಶ್ವಾರೂಢ ರಥ ಮೆರವಣಿಗೆ ಜರುಗಿತು. ಈ ಸಂದರ್ಭದಲ್ಲಿ ಕುಂಭ, ಕಳಶ ಹೊತ್ತ ಮಹಿಳೆಯರು ತಮ್ಮ ಭಕ್ತಿ ಭಾವ ಮೆರೆದರು. ಗೊಂಬೆಕುಣಿತ, ಡೊಳ್ಳು ಕುಣಿತ ಸಹಿತ ವಿವಿಧ ವಾಧ್ಯವೃಂದಗಳು ಜನರ ಗಮನ ಸೆಳೆದವು. ಸಾಯಂಕಾಲ ಶಿವಯೋಗಿಗಳ ಜನ್ಮಸ್ಥಳ ಗೋಟಖಂಡಕಿ ಗ್ರಾಮದಿಂದ ಕಳಶ ಆಗಮನ ಆಗುವುದರ ಮೂಲಕ ರಥೋತ್ಸವ ಆರಂಭಗೊಂಡಿತು. ತಳಿರು ತೋರಣ, ಬಾವುಟಗಳಿಂದ ಸಿಂಗಾರಗೊಂಡ ರಥವನ್ನು ಅಧಿಕವಾಗಿ ಮಹಿಳೆಯರೇ ಎಳೆದು ತಮ್ಮ ಭಕ್ತಿ ಸಮರ್ಪಿಸಿದರು.ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ೧೦ ದಿನಗಳ ಕಾಲ ಚಿಕ್ಕರೂಗಿಯ ಈರಣ್ಣಶಾಸ್ತ್ರಿ ಅವರಿಂದ…

Read More

ಮುದ್ದೇಬಿಹಾಳ: ಪಟ್ಟಣದ ವಾರ್ಡ ನಂ ೧೫ ರ ನಿವಾಸಿಗಳು ಕುಡಿಯುವ ನೀರು ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇಲ್ಲಿನ ಸಮಸ್ಯೆಗಳ ಕುರಿತು ವಾರ್ಡ ನ ಸದಸ್ಯರ ಪತಿಗೆ ಸಾಕಷ್ಟು ಬಾರಿ ಕರೆ ಮಾಡಿದರೂ ನಮ್ಮ ಕರೆ ಸ್ವೀಕರಿಸದಿದ್ದಾಗ ನಾವು ಅನಿವಾರ್ಯವಾಗಿ ಪುರಸಭೆಗೆ ಖಾಲಿ ಕೊಡಗಳನ್ನು ಹಿಡಿದು ಹೋಗಿದ್ದೆವು. ಆದರೆ ನಾವು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದೇವೆ, ಈ ವಾರ್ಡ ನ ಸದಸ್ಯರೇ ಅಲ್ಲ ಎಂದು ಈ ವಾರ್ಡನ ಸದಸ್ಯೆ ಮತ್ತು ಮಾಜಿ ಪುರಸಭೆ ಅಧ್ಯಕ್ಷರು ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದು ಖಂಡನೀಯ ಎಂದು ಕಳೆದ ಕೆಲ ದಿನಗಳ ಹಿಂದೆ ಪುರಸಭೆ ಎದುರು ಖಾಲಿ ಕೊಡಗಳನ್ನು ಹಿಡಿದು ದಿಢೀರ ಪ್ರತಿಭಟನೆ ನಡೆಸಿದ ನಿವಾಸಿಗಳು ಹೇಳಿದರು.ಪಟ್ಟಣದ ಕುಂಬಾರಗಲ್ಲಿರುವ ದ್ಯಾಮವ್ವ ದೇವಿ ದೇವಸ್ಥಾನದ ಎದುರು ಸೋಮುವಾರ ಸಂಜೆ ಯಾಸೀನ ಅತ್ತಾರ, ಸೊಹೇಲ್ ಚೌದರಿ, ಇಸ್ರಾಯಿಲ್ ಇಂಡಿಕಾರ, ಆಸೀಫ ನಿಡಗುಂದಿ, ಜಬ್ಬಾರ ಗೋಲಂದಾಜ ಸೇರಿದಂತೆ ಕೆಲ ನಿವಾಸಿಗಳು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.ನಾವು ೧೫ನೇ ವಾರ್ಡ ನ ಸದಸ್ಯರು.…

Read More

ವಿಜಯಪುರ: ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ೨೦೨೪-೨೫ನೇ ಸಾಲಿನ ಡಿಪ್ಲೋಮಾ ಕೋರ್ಸ್ಗಳಿಗೆ ಪ್ರವೇಶಾತಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಡಿಪಲೋಮಾ ಇನ್ ಟೂಲ್& ಡೈ ಮೆಕ್ಯಾನಿಕ್ ಇಂಜಿನಿಯರಿಂಗ್, ಡಿಪ್ಲೋಮಾ ಮೆಕಟ್ರಾನಿಕ್ಸ್ ಇಂಜಿನಿಯರಿಂಗ್, ಡಿಪ್ಲೋಮಾ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶಾತಿ ಪಡೆಯಬಹುದಾಗಿದೆ. ಆಸಕ್ತ ಅರ್ಹವಿದ್ಯಾರ್ಥಿಗಳು ಪ್ರವೇಶಾತಿಯ ಅರ್ಜಿಗಾಗಿ ಕೆಇಎ ವೆಬ್‌ಸೈಟ್ ನಲ್ಲಿರುವ ಅರ್ಜಿಯನ್ನು ಭರ್ತಿ ಮಾಡಿ ಜೂನ್ ೩ ರೊಳಗಾಗಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಕೂಡಲಸಂಗಮಕ್ಕೆ ಭೇಟಿ ನೀಡಿ ಅರ್ಜಿಯನ್ನು ಭರ್ತಿಮಾಡಿ ಸಂಬಂಧಿಸಿದ ಪ್ರಮಾಣಪತ್ರಗಳೊಂದಿಗೆ ಪ್ರವೇಶ ಪಡೆಯಬಹುದು.ಹೆಚ್ಚಿನ ಮಾಹಿತಿಗಾಗಿ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಕಾರ್ಯಲಯ, ಮತ್ತು ದೂರವಾಣಿ ಸಂಖ್ಯೆ: ೯೯೦೨೫೫೬೧೧೦, ೭೪೧೧೮೧೧೯೧೬ಕ್ಕೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಶುಪಾಲರಾದ ಸುರೇಶ ರಾಥೋಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಯಾದ ವಿಜಯಪುರ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳು ಕರ್ನಾಟಕ ರಾಜು ಉಚ್ಛ ನ್ಯಾಯಾಲಯವು ೨೦೨೪ ಎ.೨೩ ರಂದು ನೀಡಿರುವ ಆದೇಶದಂತೆ ರಾಜ್ಯ ವಕ್ಫ್ ಮಂಡಳಿಯ ಮಾದರಿ ನಿಯಮಾವಲಿ ನಮೂನೆ ನಂ-೪೨(ಬೈಲಾ)ನ್ನು ಅಂಗೀಕರಿಸಿಕೊಳ್ಳುವುದು ಕಡ್ಡಾಯವಾಗಿದೆ. ಈವರೆಗೂ ಮಾದರಿ ನಿಯಮಾವಳಿಯನ್ನು ಪಾಲಿಸದ ವಕ್ಫ್ ಸಂಸ್ಥೆಗಳು ಮಾದರಿ ನಿಯಮಾವಳಿಯ ನಮೂನೆ ನಂ.೪೨ನ್ನು ಸಂಬಂಧಪಟ್ಟ ದಾಖಲೆಗಳೊಂದಿಗೆ ವಿಜಯಪುರದ ವಕ್ಫ್ ಕಚೇರಿಯ ಮೂಲಕ ರಾಜ್ಯ ವಕ್ಫ್ ಮಂಡಳಿಯ ಅಂಗೀಕಾರಕ್ಕಾಗಿ ಅತೀ ಶೀಘ್ರ ಸಲ್ಲಿಸಬೇಕು ಎಂದು ವಿಜಯಪುರದ ಜಿಲ್ಲಾ ವಕ್ಫ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ೨೦೨೪-೨೫ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಾಕ್ಕಾಗಿ ನಾಲ್ಕನೇ ಹಂತದ ಆಫ್‌ಲೈನ್ ಮೂಲಕ ಅರ್ಜಿಯನ್ನುಯ ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿ/ತತ್ಸಮಾನ ಪರೀಕ್ಷೆ ಪಾಸದ ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಮೇ.೩೦ರ ಒಳಗಾಗಿ ಪ್ರವೇಶ ಬಯಸುವ ಸಂಸ್ಥೆಯ ಪ್ರಾಂಶುಪಾಲರಿಗೆ ಸಲ್ಲಿಸತಕ್ಕದ್ದು. ಮೇ.೩೦ ರಂದು ಅರ್ಹ ಮೆರೆಟ್ ಪಟ್ಟಿ ತಯಾರಿಸಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ಮೇ.೩೦ರ ಮರ್ಧಯಾಃನ ನಂತರ ಆಫ್‌ಲೈನ್ ಕೌನ್ಸ್ಲಿಂಗ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು. ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಮೂಲ ದಾಖಲಾತಿಗಳನ್ನು ಹಾಗೂ ಪ್ರವೇಶ ಶುಲ್ಕಗಳನ್ನು ಪ್ರವೇಶಾತಿ ಪಡೆಯಬಹುದು ಎಂದು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ೧೧೦ ಕೆವಿ ಇಂಡಿ ವಿದ್ಯುತ್ ವಿತರಣ ಕೇಂದ್ರದಲ್ಲಿ ಪರಿವರ್ತಕದ ಆಯಿಲ್ ಸೋರುವಿಕೆ ತಡೆಗಟ್ಟುವ ಕಾಮಗಾರಿ ಕೈಗೊಂಡಿರುವುದರಿಂದ ಮೇ.೨೯ ರಂದು ಬೆಳಗ್ಗೆ ೮ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ಸದರಿ ವಿದ್ಯುತ್ ವಿತರಣ ಕೇಂದ್ರದಿದ ಸರಬರಾಜು ಆಗುವ ೩೩ಕೆವಿ ತಾಂಬಾ ನಲ್ಲಿ ಮೇ.೩೦ರಂದು ಬೆಳಗ್ಗೆ ೮ ಗಂಟೆಯಿಂದ ಸಾಯಂಕಾಲ ೪ ಗಂಟೆಯವರೆಗೆ ೩೩ಕೆವಿ ನಾದ, ೩೩ ಕೆವಿ ತಡವಲಗಾ ವಿದ್ಯುತ್ ವಿತರಣಾ ಕೇಂದ್ರದ ಮಾರ್ಗಗಳ ಮೇಲೆ ಬರುವ ಎಲ್ಲಾ ೧೧ ಕೆವಿ ಮಾರ್ಗಗಳಲ್ಲಿ ವಿದ್ಯತ್ ವ್ಯತ್ಯಯ ಉಂಟಾಗಲಿದೆ.ಆದ ಕಾರಣ ನಾಗರೀಕರು ಹಾಗೂ ಗ್ರಾಹಕರು ಸಹಕರಿಸಬೇಕು ಎಂದು ಹೆಸ್ಕಾಂ ಇಂಡಿಯ ಕಾರ್ಯ ಮತ್ತು ಪಾಲನ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ೨೦೨೪-೨೫ ನೆಯ ಶೈಕ್ಷಣಿಕ ಸಾಲಿಗೆ ಈ ಕೆಳಗೆ ನಮೂದಿಸಿರುವ ಓಅಗಿಖಿ ನವದೆಹಲಿಯಿಂದ ಸಂಯೋಜನೆಯಾದ ೨ವರ್ಷದ ಮತ್ತು ೦೧ ವರ್ಷದ ಕೋರ್ಸಗಳಿಗೆ (ಎಲೆಕ್ಟಿçಷಿಯನ್, ಇ¯ಕ್ಟಾçನಿಕ್ ಮೆಕ್ಯಾನಿಕ್, ಮೆಕ್ಯಾನಿಕ್ ಎಲೆಕ್ಟಿçಕ್ ವೆಹಿಕಲ್, ಇಂಡಸ್ಟಿçಯಲ್ ರೋಬೋಟಿಕ್ಸ ಆಂಡ್ ಡಿಜಿಟಲ್ ಮ್ಯಾನುಫ್ಯಾಕ್ಟರಿಂಗ್ ಟೆಕ್ನಾಲಜಿ, ಜೋಡಣೆಗಾರ) ಪ್ರವೇ± ಆನ್‌ಲೈನ್ (ಛಿiಣe.ಞಚಿಡಿಟಿಚಿಣಚಿಞಚಿ.gov.iಟಿ) ಮೂಲಕ ಅರ್ಜಿಗಳನ್ನು ಆವ್ಹಾನಿಸಲಾಗಿದೆ. ಹಾಗೂ ಖುದ್ದಾಗಿ ಕಾಲೇಜಿನಲ್ಲಿ ಕೂಡ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಜೂನ್ ೩ ಕೊನೆಯ ದಿನವಾಗಿದೆ.ಮಹಿಳಾ ಅಭ್ಯರ್ಥಿಗಳಿಗೆ ಮೊದಲ ಆಧ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಾಲತವಾಡದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಅಥವಾ ದೂರವಾಣಿ ಮುಖಾಂತರ (೮೦೫೦೩೨೨೯೮೦ ,೯೯೮೬೧೨೩೮೯೩ , ೯೦೦೮೬೯೨೨೭೦ ) ಸಂಪರ್ಕಿಸಬಹುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಪೂಜಪ್ಪ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ರ ಮತ ಎಣಿಕೆಯು ಜೂನ್ ೪ರಂದು ನಗರದ ಸೈನಿಕ ಶಾಲೆಯಲ್ಲಿ ನಡೆಯಲಿದ್ದು, ಮತ ಎಣಿಕೆ ಕಾರ್ಯವನ್ನು ಶಾಂತಿ ಹಾಗೂ ಸುವ್ಯವಸ್ಥೆಯಿಂದ ನಡೆಸಲು ಅನೂಕೂಲವಾಗಲು ಹಾಗೂ ಯಾವುದೇ ಅಹಿತಕರ ಘಟನೆಗಳು ಜರಗದಂತೆ ನೋಡಿಕೊಳ್ಳಲು ಪ್ರಜಾಪ್ರತಿನಿಧಿ ಕಾಯ್ದೆ ೧೯೫೧ರ ಕಲಂ ೧೩೫ ಸಿ ಅಡಿಯಲ್ಲಿ ಜೂ. ೪ ರಂದು ಬೆಳಗ್ಗೆ ೬ ರಿಂದ ಜೂನ್ ೫ ರ ಬೆಳಗಿನ ೬ ಗಂಟೆಯವರೆಗೂ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಸಾಗಾಣಿಗೆ ಹಾಗೂ ಸಂಗ್ರಹವನ್ನು ನಿಷೇಧಿಸಿ “ಶುಷ್ಕ ದಿನ” ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಆದೇಶ ಹೊರಡಿಸಿದ್ದಾರೆ.

Read More