ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಬಸವೇಶ್ವರ ಜಾತ್ರಾಮಹೋತ್ಸವ ಆಗಷ್ಟ್ ೩೦ ರಂದು ನಡೆಯಲಿರುವದರಿಂದ ಆಗಷ್ಟ್ ೫ ರಂದು ಸಂಜೆ ೫ ಗಂಟೆಗೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಸೋಮನಗೌಡ (ಅಪ್ಪುಗೌಡ) ಪಾಟೀಲ ಮನಗೂಳಿ ಅವರ ಅಧ್ಯಕ್ಷತೆಯಲ್ಲಿ ಜಾತ್ರಾಮಹೋತ್ಸವದ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಈ ಸಭೆಗೆ ಪಟ್ಟಣದ ಎಲ್ಲ ಗುರು-ಹಿರಿಯರು,ವಿವಿಧ ಸಂಘ-ಸಂಸ್ಥೆಯಗಳ ಪದಾಧಿಕಾರಿಗಳು, ಎಲ್ಲ ಸರ್ಕಾರಿ-ಖಾಸಗಿ ಕಾರ್ಯಾಲಯಗಳ ಸಿಬ್ಬಂದಿ, ಯುವ ಸಮೂಹ ಆಗಮಿಸಿ ಸಲಹೆ-ಸೂಚನೆ ನೀಡಿ ಜಾತ್ರಾಮಹೋತ್ಸವದ ಯಶಸ್ವಿಗೆ ಕೈಜೋಡಿಸಬೇಕೆಂದು ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
