Author: editor.udayarashmi@gmail.com

ಲೇಖನ- ವಿಶ್ವಪ್ರಕಾಶ ಟಿ. ಮಲಗೊಂಡeditortkm@gmail.com – 6366520266ಉಪ ಸಂಪಾದಕರುಅಪರಾಧಕ್ಕೆ ಸವಾಲು ದಿನಪತ್ರಿಕೆ ಉದಯರಶ್ಮಿ ದಿನಪತ್ರಿಕೆ ಕ್ರೀಡೆ ಎನ್ನುವುದು ಶಿಸ್ತು, ಸಂಯಮ ಮತ್ತು ಸೌಹಾರ್ದತೆಯ ಸಂಕೇತ. ಆದರೆ ಇಂದು ಅದೇ ಕ್ರೀಡೆಯನ್ನು ಬಂಡವಾಳ ಮಾಡಿಕೊಂಡಿರುವ ಬೆಟ್ಟಿಂಗ್ ದಂಧೆಕೋರರು ಯುವಜನತೆಯ ಬದುಕನ್ನು ಜೂಜಿನ ಅಡ್ಡೆಯನ್ನಾಗಿ ಮಾಡುತ್ತಿದ್ದಾರೆ. ಅಲ್ಪಾವಧಿಯಲ್ಲಿ ಕೋಟ್ಯಧಿಪತಿಗಳಾಗುವ ಆಮಿಷವೊಡ್ಡಿ, ಮಧ್ಯಮ ವರ್ಗದ ಕುಟುಂಬಗಳ ನೆಮ್ಮದಿಯನ್ನು ಈ ಬೆಟ್ಟಿಂಗ್ ಮಾಫಿಯಾ ನುಂಗಿ ಹಾಕುತ್ತಿದೆ. ಈಗ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಯ ಭವಿಷ್ಯ ಅಂಧಕಾರಕ್ಕೆ ದೂಡಲ್ಪಡುವುದರಲ್ಲಿ ಸಂದೇಹವಿಲ್ಲ.ಬೆಂಗಳೂರು ಪೊಲೀಸರಿಗೆ ನಮ್ಮದೊಂದು ಆಗ್ರಹ ಇತ್ತೀಚೆಗೆ ನಡೆದ ಆರ್‌ಸಿಬಿ (RCB) ಪಂದ್ಯಗಳ ವೇಳೆ ಬೆಂಗಳೂರು ಪೊಲೀಸ್ ಇಲಾಖೆ ವಹಿಸಿದ ಕಟ್ಟುನಿಟ್ಟಿನ ಕ್ರಮ ಮತ್ತು ಶಿಸ್ತು ನಿಜಕ್ಕೂ ಮಾದರಿ. ಲಕ್ಷಾಂತರ ಅಭಿಮಾನಿಗಳ ಸಾಗರವಿದ್ದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾವಲು ಕಾಯ್ದ ಪೊಲೀಸರ ಕಾರ್ಯವೈಖರಿಗೆ ನಮ್ಮದೊಂದು ಬಿಗ್ ಸೆಲ್ಯೂಟ್. ಆದರೆ, ಮೈದಾನದ ಹೊರಗಿನ ಶಿಸ್ತಿನಷ್ಟೇ ಮುಖ್ಯವಾದುದು ಆನ್‌ಲೈನ್‌ನಲ್ಲಿ ಹಗಲು-ರಾತ್ರಿ ನಡೆಯುತ್ತಿರುವ ಬೆಟ್ಟಿಂಗ್ ದಂಧೆಯನ್ನು ಬುಡಸಮೇತ ಕಿತ್ತೊಗೆಯುವುದು. ಬೆಟ್ಟಿಂಗ್ ದಂಧೆಯ ಮಾಸ್ಟರ್‌ಮೈಂಡ್‌ಗಳ ಮೇಲೆ…

Read More

ಉದಯರಶ್ಮಿ ದಿನಪತ್ರಿಕೆ ಜೇರಟಗಿ: ಭಾರತದ ನಂಬರ್ 1 ಎಲೆಕ್ಟ್ರಿಕ್ ಸ್ಕೂಟರ್ ಈಗ ಜೇವರಗಿ ತಾಲೂಕಿನ ಜೇರಟಗಿಯಲ್ಲಿ ಎ.೦೨ ರಂದು ಬಿಡುಗಡೆಯಾಗಲಿದೆ.ಅಂದು ಜೇರಟಗಿಯ ಹಳ್ಳಿ ಮೋಟಾರ್ಸ್ ಶೋರೂಂ ನಲ್ಲಿ ನಡೆಯುವ ಸಮಾರಂಭದಲ್ಲಿ ಪರಿಸರಸ್ನೇಹಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಈ ಕ್ರಾಂತಿಕಾರಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ಅತಿಥಿಗಳಾಗಿ ಶ್ರೀಮತಿ ಶ್ವೇತಾ ಅಜಯ್ ಸಿಂಗ್ ಜಿ ಹಾಗೂ ಬಾಹ್ಯಾಕಾಶ ತಂತ್ರಜ್ಞಾನಿ – ISRO ವಿಜ್ಞಾನಿ ಶ್ರೀಮತಿ ಪದ್ಮಾ ಕೃಷ್ಣ ಕುಲಕರ್ಣಿ ಆಗಮಿಸುತ್ತಿದ್ದಾರೆ. ಸ್ಥಳೀಯ ಗಣ್ಯರೂ ಸಹ ಪಾಲ್ಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಬೇಕೆಂದು ಹಳ್ಳಿ ಮೋಟರ್ಸ್ ಮಾಲಿಕ ಸುನೀಲ ಹಳ್ಳಿ ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.ಬಾಹ್ಯಾಕಾಶದ ವೇಗ, ಭೂಮಿಯ ಮೇಲಿನ ಭರವಸೆಯಾಗಿರುವ ನಿಮ್ಮ ನೆಚ್ಚಿನ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಬುಕಿಂಗ್‌ಗಾಗಿ ಸಂಪರ್ಕಿಸಲು ಹಳ್ಳಿ ಮೋಟಾರ್ಸ್, ಜೇರಟಗಿ ಸಂಪರ್ಕ ಸಂಖ್ಯೆಗಳು: 6363328245, 9731234123, 9845672129

Read More

ದೇವರನಿಂಬರಗಿಯ ಸ್ವಯಂಭೂ ಶ್ರೀ ಬಲಭೀಮ ದೇವರ ಜಾತ್ರೆ ವೈಭವ | ಭಕ್ತಿ, ಪರಂಪರೆ ಮತ್ತು ಭಾವೈಕ್ಯದ ಪ್ರತೀಕ | ಚೈತ್ರ ಮಾಸದಲ್ಲಿ ಭಕ್ತರ ಮಹಾಪೂರ ಉದಯರಶ್ಮಿ ದಿನಪತ್ರಿಕೆ ವರದಿ: ರಾಜಶೇಖರ ಡೋಣಜಮಠಚಡಚಣ: ತಾಲೂಕಿನ ದೇವರನಿಂಬರಗಿ ಗ್ರಾಮದ ಸ್ವಯಂಭೂ ಶ್ರೀ ಬಲಭೀಮ ದೇವರ ಜಾತ್ರೆ ಚೈತ್ರ ಮಾಸದ ಪಾಡ್ಯದಿಂದ ದವನದ ಹುಣ್ಣಿಮೆ(ಚೈತ್ರ ಪೌರ್ಣಿಮೆ)ಯವರೆಗೆ ಅತಿ ವಿಜೃಂಭಣೆಯಿಂದ ನಡೆಯುತ್ತಿದ್ದು, ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿದೆ, ಭಕ್ತರ ಮಹಾಪೂರವೇ ಹರಿದು ಬರುತ್ತದೆ, ಜಾತ್ರೆ ಅವಧಿಯಲ್ಲಿ ರಾಮನವಮಿ, ಹನುಮ ಜಯಂತಿ, ಏಕಾದಶಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷವಾಗಿ ಏಕಾದಶಿ ದಿನದಂದು“ಮೊಸರು ಗಡಿಗೆ” ಒಡೆಯುವ ಸಂಪ್ರದಾಯವು ಊರ ಗೌಡರ ಮನೆತನದಿಂದ ಹಿಂದಿನಿಂದಲೂ ಪಾರಂಪರ್ಯವಾಗಿ ನಡೆದುಕೊಂಡು ಬಂದಿರುವ ಪ್ರಮುಖ ಆಚರಣೆ ಆಗಿದೆ.ಈ ದೇವಸ್ಥಾನದಲ್ಲಿ ಪೂಜೆ ಪದ್ಧತಿಗೂ ವಿಶೇಷ ಮಹತ್ವವಿದೆ. ಹೂಗಾರ ಮನೆತನದವರು ಪ್ರತಿದಿನ ಸೂರ್ಯೋದಯ ಹಾಗೂ ಸೂರ್ಯಾಸ್ತ ಸಮಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಮಧ್ಯಾಹ್ನ ಮತ್ತು ರಾತ್ರಿ 10 ಗಂಟೆಗೆ ವೇಳೆ ಬ್ರಾಹ್ಮಣ ಅರ್ಚಕರು ಪೂಜೆಯನ್ನು ನೆರವೇರಿಸುತ್ತಾರೆ. ಪ್ರತಿದಿನ ರಾತ್ರಿ…

Read More

ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಕ್ರಾಂತಿಕಾರಿಗಳ ಸಾಲಿನಲ್ಲಿ ಚಾಪೆಕರ್ ಸಹೋದರರ ಹೆಸರು ಅಜರಾಮರವಾಗಿದೆ.ಈ ಮೂರು ಮಂದಿ ಚಾಪೆಕರ್ ಸಹೋದರರು ದೇಶಕ್ಕಾಗಿ ನಗುನಗುತ್ತಲೇ ನೇಣುಗಂಬಕ್ಕೆ ಏರಿದ್ದರು. ಇದೇ ರೀತಿ ಅದೊಂದು ದಿನ ದಾಮೋದರ ಚಾಪೆಕರ್ ಅವರನ್ನು ಸರವರಾ ಜೈಲಿನಲ್ಲಿ ನೇಣಿಗೇರಿಸಲು ಬ್ರಿಟೀಷರು ಕರೆದುಕೊಂಡು ಬಂದಿದ್ದರು. ದಾಮೋದರ ಚಾಪೆಕರರು ಮಾತ್ರ ಆ ದಿನ ನಗು ಮುಖದಿಂದ ಮತ್ತು ಆನಂದದಿಂದಿದ್ದರು. ಅವರ ಕೈಯಲ್ಲಿ ಭಗವದ್ಗೀತೆಯ ಪುಸ್ತಕವಿದ್ದು, ಅವರು ಭಗವದ್ಗೀತೆಯನ್ನು ಓದುತ್ತಲೇ ನೇಣಿನ ಶಿಕ್ಷೆಗಾಗಿ ಸಿದ್ಧರಾಗಿದ್ದರು. ನೇಣುಗಂಬಕ್ಕೆ ಏರುವ ಸಮಯವಾದರೂ ಬ್ರಿಟೀಷ್ ಅಧಿಕಾರಿಗಳು ಅವರನ್ನು ನೇಣು ಕಂಬಕ್ಕೆ ಕರೆದೊಯ್ಯಲು ಬರಲೇ ಇಲ್ಲ. ಚಾಪೇಕರರು ಜೈಲಿನ ಕೋಣೆಯಲ್ಲಿ ಬ್ರಿಟೀಷ್ ಜೈಲು ಅಧಿಕಾರಿಗಳ ಆಗಮನಕ್ಕಾಗಿ ಕಾಯುತ್ತಾ ಇದ್ದರು.ಕೊನೆಗೂ ಐದು ನಿಮಿಷ ತಡವಾಗಿ ಜೈಲಧಿಕಾರಿಗಳು ದಾಮೋದರ ಬಳಿಗೆ ಬಂದರು. ಬ್ರಿಟೀಷ್ ಜೈಲು ಅಧಿಕಾರಿಗಳ ಈ ಬೇಜವಾಬ್ದಾರಿಯನ್ನು ನೋಡಿದಂತಹ ದಾಮೋದರ ಚಾಪೇಕರ್ ಕೋಪಗೊಂಡರು. ಅವರು ಅತ್ಯಂತ ಚಾಣಾಕ್ಷತನದಿಂದ ಬ್ರಿಟೀಷ್ ಜೈಲು…

Read More

ಲೇಖನ- ರಶ್ಮಿ ಕೆ. ವಿಶ್ವನಾಥ್ಮೈಸೂರು ಉದಯರಶ್ಮಿ ದಿನಪತ್ರಿಕೆ “ನಗುವಿರಲಿ ಅಳುವಿರಲಿಎರಡನ್ನು ನಂಬೆನಗೆ ನಂಜುಅಳು ಮಂಜುಇದ್ದಿತು ಎಂಬೆ “ಎಂದು ವರಕವಿ ದ. ರಾ. ಬೇಂದ್ರೆ ಅವರು ಒಂದು ಕಡೆ ಹೇಳುವ ಹಾಗೆ, ಇದೇ ಪರಿಸ್ಥಿತಿ ಈಗಿನ ಒಬ್ಬಂಟಿ ಜೀವಗಳನ್ನು ಕಾಡುತ್ತಿದೆ.ಯಾರನ್ನು ನಂಬಬೇಕೋ ಯಾರನ್ನು ನಂಬಬೇಡವೋ ಯಾವುದು ಬೇಕು ಯಾವುದು ಬೇಡಾ ಹೀಗೆ ಸಾಗುತ್ತದೆ ತೊಳಲಾಟಗಳ ತುಡಿತ. ಒಂಟಿ ಜೀವಗಳ ಜೀವನ ಹೇಗಿರಬಹುದೆಂಬುದನ್ನು ನಾವು ಕಲ್ಪಿಸಿಕೊಳ್ಳಬೇಕಾಗಿಲ್ಲ. ನಮ್ಮ ಸುತ್ತ ಮುತ್ತಲೇ ಹಲವಾರು ಉದಾಹರಣೆಗಳು ಕಾಣಸಿಗುತ್ತವೆ.ಎಲ್ಲರನ್ನು ಹೊಂದಿಕೊಂಡು ಹೊಂದಿಸಿಕೊಂಡು ಹೋಗುವ ಮನಸುಗಳಿದ್ದರೆ ಒಂಟಿತನ ಸ್ವಲ್ಪವಾದರೂ ಕರಗೀತು.ಆದರೆ ಹೆಚ್ಚು ಶಿಸ್ತು, ನೇರ ನಡೆ ಅಥವಾ ಜಗಳುಗಂಟಿತನ ಇವಾವುದೇ ಇದ್ದರೂ ಇಂತವರಿಗೆ ಜೀವನ ಸಾಗಿಸೋದು ಬಹಳ ಕಷ್ಟ.ಅಲ್ಲೊಂದು ಅಜ್ಜಿ ಇದ್ದಾರೆ. ದೊಡ್ಡ ಮನೆ. ಅದರಲ್ಲಿ ಅವರೊಬ್ಬರೆ. ಶಿಸ್ತಿನ ಸಿಪಾಯಿ. ಅಷ್ಟೇ ಜಿಪುಣಿ ಕೂಡಾ. ಪತಿ ಮರಣ ಹೊಂದಿದ್ದಾರೆ. ಒಂದೇ ಊರಿನಲ್ಲಿರುವ ಮಕ್ಕಳು ಮಾತನಾಡಿಸುತ್ತಿಲ್ಲ. ‘ಕೆಲಸಕ್ಕೆ ಬರುವವರು ಏನಾದರು ಪ್ಲ್ಯಾನ್ ಮಾಡಿ ಕಳ್ಳತನ ಮಾಡಿಬಿಟ್ಟರೆ?’ ಎಂಬ ಭಯದಲ್ಲಿ “ನನ್ನ ಮೊಮ್ಮಗ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಿಕಾ ರಂಗದ ಪಾತ್ರ ಅತ್ಯಂತ ದೊಡ್ಡದು ಎಂದು ಅಭಿಪ್ರಾಯಪಟ್ಟ ಗದಗ-ಶಿರಹಟ್ಟಿ-ಬಾಳೆಹೋಸೂರ ಸಂಸ್ಥಾನದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು, ‘ಅಪರಾಧಕ್ಕೆ ಸವಾಲು’ ಕನ್ನಡ ದಿನಪತ್ರಿಕೆಯ ಸಂಪಾದಕ ಹಾಗೂ ಹಿರಿಯ ಪತ್ರಿಕೋದ್ಯಮಿ ಟಿ. ಕೆ. ಮಲಗೊಂಡ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.ತಾಲೂಕಿನ ಕಡಣಿ ಗ್ರಾಮದಲ್ಲಿ ಮಾರ್ಚ್ 27ರಂದು ಜರುಗಿದ ಶ್ರೀ ಭೋಗಲಿಂಗೇಶ್ವರ ಜಾತ್ರಾ ಮಹೋತ್ಸವದ ವೇದಿಕೆಯಲ್ಲಿ ಟಿ ಕೆ ಮಲಗೊಂಡ ಅವರ ಸುದೀರ್ಘ ಪತ್ರಿಕಾ ಸೇವೆ ಹಾಗೂ ಸಾಮಾಜಿಕ ಕಾಳಜಿಯನ್ನು ಗುರುತಿಸಿ ಶ್ರೀಗಳು ಶಾಲು ಹೊದಿಸಿ ಗೌರವಿಸಿದರು.

Read More

ಅಥಣಿ ಪೊಲೀಸರ ಭರ್ಜರಿ ಕಾರ್ಯಾಚರಣೆ | ನಿರಂತರ ಕಾರ್ಯಾಚರಣೆಯಿಂದ ಮೊಬೈಲಗಳ ಪತ್ತೆ ಉದಯರಶ್ಮಿ ದಿನಪತ್ರಿಕೆ ಅಥಣಿ: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿರುವ ಮೊಬೈಲ್ ಫೋನ್‌ಗಳು ಕಳೆದುಹೋಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು, ಅತ್ಯಾಧುನಿಕ CEIR (ಸಿ.ಇ.ಐ.ಆರ್) ಪೋರ್ಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್ (IPS), ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್. ಬಿ. ಬಸರಗಿ ಹಾಗೂ ಅಥಣಿ ಉಪವಿಭಾಗದ ಡಿವೈಎಸ್‌ಪಿ ಪ್ರಶಾಂತ್ ಜಿ. ಮುನ್ನೊಳ್ಳಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಕಳೆದ ಎರಡು ವರ್ಷಗಳಲ್ಲಿ ಕಾಣೆಯಾಗಿದ್ದ ಮೊಬೈಲ್‌ಗಳನ್ನು ಪತ್ತೆಹಚ್ಚಲು ನಿರಂತರ ಕಾರ್ಯಾಚರಣೆ ನಡೆಸಿ ಮೊಬೈಲಗಳನ್ನು ಪತ್ತೆಹಚ್ಚಿ.ದಿನಾಂಕ: 27-03-2026 ರಂದು ಪತ್ತೆಯಾದ 110 ಮೊಬೈಲ್ ಫೋನ್‌ಗಳನ್ನು ಅಥಣಿ ಪೊಲೀಸ್ ಸಮುದಾಯ ಭವನದ ಆವರಣದಲ್ಲಿ ಆಯಾ ವಾರಸುದಾರರಿಗೆ ಹಿಂದಿರುಗಿಸಲಾಗಿದೆ.ಠಾಣಾವಾರು ಪತ್ತೆಯಾದ ಮೊಬೈಲ್‌ಗಳ ವಿವರ:

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ನಗರದ ಓಲೆಮಠದ ಆಶ್ರಯದಲ್ಲಿ ಶ್ರದ್ಧಾ ಭಕ್ತಿಯಿಂದ ಅದ್ದೂರಿಯಾಗಿ ಹಾಗೂ ವಿಜೃಂಭಣೆಯಿಂದ ಏಪ್ರಿಲ್ 15 ರಿಂದ 20 ರವರೆಗೆ ಬಸವ ಜಯಂತಿ ಕಾರ್ಯಕ್ರಮ ಮತ್ತು ಓಲೆಮಠದ ಜಾತ್ರಾ ಮಹೋತ್ಸವವನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಓಲೆಮಠದ ಆನಂದ ದೇವರು ತಿಳಿಸಿದ್ದಾರೆ.ಓಲೆಮಠದ ಸಭಾಂಗಣದಲ್ಲಿ ಬುಧವಾರ ಸಂಜೆ ವಿವಿಧ ಸಮಾಜಗಳ ಮುಖಂಡರು ಹಾಗೂ ಶ್ರೀಮಠದ ಸದ್ಭಕ್ತರ ಪೂರ್ವಭಾವಿ ಸಭೆ ನಡೆಯಿತು. ಸಭೆಯ ಸಾನ್ನಿಧ್ಯ ವಹಿಸಿ ಎಲ್ಲರ ಸಲಹೆ, ಸೂಚನೆಗಳನ್ನು ಸ್ವೀಕರಿಸಿದ ಬಳಿಕ ಅವರು ಈ ಮಾಹಿತಿ ನೀಡಿದರು.ಏಪ್ರಿಲ್ 15 ರಿಂದ 19 ರವರೆಗೆ ಪ್ರತಿದಿನ ಒಬ್ಬರಂತೆ ಒಟ್ಟು ಐದು ಮಂದಿ ಹಿರಿಯ ಸಾಹಿತಿಗಳನ್ನು ಆಹ್ವಾನಿಸಿ, ಪ್ರಮುಖ ಪೂಜ್ಯರ ಸಾನ್ನಿಧ್ಯದಲ್ಲಿ ಹಾಗೂ ಗಣ್ಯರ ಸಮ್ಮುಖದಲ್ಲಿ ಬಸವ ತತ್ವದ ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗುವುದು.ಈ ಉಪನ್ಯಾಸ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಸ್ಥಳೀಯ ಬಸವ ಕೇಂದ್ರ ಹಾಗೂ ಬಸವ ಸಮಿತಿ ವಹಿಸಲಿದ್ದು, ಪ್ರತಿದಿನದ ಮಹಾಪ್ರಸಾದ ಹಾಗೂ ಇತರ ಸೇವೆಗಳನ್ನು ವಿವಿಧ ಸಮಾಜಗಳು, ಸಂಘ-ಸಂಸ್ಥೆಗಳು ಮತ್ತು ಗಣ್ಯರು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದಿನಾಂಕ: 27/03/2026 ರಂದು ಬಂಜಾರ ಸಂಸ್ಕ್ರತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು, 2025ರ ಸಂತ ಸೇವಾಲಾಲ್ ಪ್ರಶಸ್ತಿ, 2025ರ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜಯಪುರ ಜಿಲ್ಲೆಯ ಮಹಾಲ್ ಐನಾಪೂರ ತಾಂಡಾ ಎಲ್ ಆರ್ ನಾಯಕ ನಗರದ ಕಲಾಶ್ರೀ ವಸಂತ ಎಲ್ ಚವ್ಹಾಣ ಅವರಿಗೆ 2025ನೇ ಸಾಲೀನ ವಾರ್ಷಿಕ ಪ್ರಶಸ್ತಿಯನ್ನು ಪಡೆದಿರುವ ಇವರಿಗೆ ಡಾ.ಸುರೇಖಾ ಜಿ ರಾಠೋಡ, ಸದಸ್ಯರು ಬಂಜಾರಾ ಸಂಸ್ಕ್ರತಿ ಮತ್ತು‌ ಭಾಷಾ ಅಕಾಡೆಮಿ ಬೆಂಗಳೂರು ಇವರು ಗೌರವಿಸಿ, ಸನ್ಮಾನಿಸಿ ಅಭಿನಂದನೆಗಳನ್ನು‌ ಸಲ್ಲಿಸಿದ್ದಾರೆ.

Read More