ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದಿನಾಂಕ: 27/03/2026 ರಂದು ಬಂಜಾರ ಸಂಸ್ಕ್ರತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು, 2025ರ ಸಂತ ಸೇವಾಲಾಲ್ ಪ್ರಶಸ್ತಿ, 2025ರ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜಯಪುರ ಜಿಲ್ಲೆಯ ಮಹಾಲ್ ಐನಾಪೂರ ತಾಂಡಾ ಎಲ್ ಆರ್ ನಾಯಕ ನಗರದ ಕಲಾಶ್ರೀ ವಸಂತ ಎಲ್ ಚವ್ಹಾಣ ಅವರಿಗೆ 2025ನೇ ಸಾಲೀನ ವಾರ್ಷಿಕ ಪ್ರಶಸ್ತಿಯನ್ನು ಪಡೆದಿರುವ ಇವರಿಗೆ ಡಾ.ಸುರೇಖಾ ಜಿ ರಾಠೋಡ, ಸದಸ್ಯರು ಬಂಜಾರಾ ಸಂಸ್ಕ್ರತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು ಇವರು ಗೌರವಿಸಿ, ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

