Author: editor.udayarashmi@gmail.com

ಮೋರಟಗಿ: ದಿನನಿತ್ಯ ಯೋಗಾಭ್ಯಾಸ ಮಾಡುವದರಿಂದ ಮಾನಸಿಕ ಶಾಂತಿ ಮತ್ತು ಆರೋಗ್ಯಕರ ಬದುಕು ರೂಡಿಸಿಕೊಳ್ಳಲು ಸಾಧ್ಯ ಎಂದು ತಾಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ಸಿದ್ದರಾಮ ಅಂಕಲಗಿ ಹೇಳಿದರು.ಅಂತಾರಾಷ್ಟ್ರೀಯ ಯೋಗದಿನಾಚರಣೆ ಪ್ರಯುಕ್ತ ಗ್ರಾಮದ ಶ್ರೀ ಕೆರೆಸಿದ್ದೇಶ್ವರ ಅಮೃತ ಸರೋವರದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.೫ ಸಾವಿರ ವರ್ಷಗಳ ಸುದೀರ್ಘ ಇತಿಹಾಸದ ಯೋಗವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಹಿರಿಮೆ ನಮ್ಮ ಭಾರತ ದೇಶಕ್ಕೆ ಸಲ್ಲುತ್ತದೆ ಯುವ ಪೀಳಿಗೆಗೆ ಯೋಗದ ಮಹತ್ವ ತಿಳಿಸುವುದು ಅವಶ್ಯವಿದೆ ಯುವಕರು ಕೆಟ್ಟ ವ್ಯಸನಗಳನ್ನು ಬಿಟ್ಟು ಯೋಗಕ್ಕೆ ಮುಂದಾಗಬೇಕು ಎಂದರು.ನಂತರ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಚಕ್ರವರ್ತಿ ಮಾತನಾಡಿ, ಜಂಜಾಟದ ಬದುಕಿನಲ್ಲಿ ಒತ್ತಡದ ಜೀವನ ನಡೆಸುತ್ತಿರುವ ನಮ್ಮೆಲರಿಗೂ ಯೋಗ ಸಹಕಾರಿಯಾಗಿದ್ದು, ಯೋಗದಿಂದ ಏಕಾಗ್ರತೆ, ಆತ್ಮವಿಶ್ವಾಸ,ರೋಗ ನಿರೋದಕ ಶಕ್ತಿ ವೃದ್ಧಿಸುವ ಜೊತೆಗೆ ಮಾನಸಿಕ ಖಿನ್ನತೆ ಮತ್ತು ದುಶ್ಚಟಗಳಿಂದ ದೂರವಿರಬಹುದು ಪ್ರತಿಯೊಬ್ಬ ಪಾಲಕರು ಯೋಗವನ್ನು ಅರಿತು ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಸಜ್ಜಾಗಬೇಕು ಎಂದರು.ನಂತರ ತಾಲೂಕು ನರೇಗಾ ಐ ಈ ಸಿ…

Read More

ಮುದ್ದೇಬಿಹಾಳ: ನಿರಂತರ ಯೋಗದಿಂದ ರೋಗ ಸಮಾಪ್ತಿಯಾಗಲಿದೆ ಎಂದು ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಬಿ.ವಾಯ್.ಕವಡಿ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿರುವ ವಿಶ್ವಯೋಗ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯ ಅತಿಥಿ ಸ್ಥಾನ ವಹಿಸಿ ಅವರು ಮಾತನಾಡಿದರು.ಭಾರತೀಯ ಜ್ಞಾನ ಪರಂಪರೆಯಲ್ಲಿ ಯೋಗಕ್ಕೆ ಹೆಚ್ಚು ಮಹತ್ವ ನೀಡಿರುವುದು ಗಮನಿಸಬೇಕಾಗಿದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಅದರ ನಿರ್ವಹಣೆ ನಿರಂತರವಾಗಿ ನಡೆಯಬೇಕಾಗಿದೆ. ಪತಂಜಲಿ ಮಹರ್ಷಿಗಳು ಮನುಷ್ಯನ ಉದ್ಧಾರಕ್ಕಾಗಿಯೆ ಯೋಗವನ್ನು ನೀಡಿದ್ದಾರೆ ಎಂದು ಹೇಳಿದರು.ಸಂಸ್ಥೆಯ ಕಾರ್ಯದರ್ಶಿ ಪ್ರಭು ಕಡಿ, ಸಂಸ್ಥೆಯ ಅಧ್ಯಕ್ಷ ಬಿ.ಪಿ,ಕುಲಕರ್ಣಿ, ಪ್ರಾಥಮಿಕ ವಿಭಾಗದ ಮುಖ್ಯ ಗುರುಮಾತೆ ಸರಸ್ವತಿ ಮಡಿವಾಳರ ಮಾತನಾಡಿದರು.ಪ್ರೌಢ ಶಾಲೆ ಮುಖ್ಯಗುರು ರಾಮಚಂದ್ರ ಹೆಗಡೆ ಅಗ್ನಿಹೋತ್ರ ನೆರವೇರಿಸಿ ಬಾರತೀಯ ಜ್ಞಾನ ಪರಂಪರೆಯ ಹಿನ್ನಲೆಯಲ್ಲಿ ಪ್ರಾಸ್ತವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಕ ಬಿ.ಟಿ.ಭಜಂತ್ರಿ ಸೂರ್ಯ ನಮಸ್ಕಾರದೊಂದಿಗೆ ವಿವಿಧ ಆಸನಗಳನ್ನು ಮಾಡಿಸಿದರು. ಸಂಸ್ಥೆಯ ನಿರ್ದೇಶಕರಾದ ಸುಭಾಸ ಬಿದಿರಕುಂದಿ, ಆಂಗ್ಲ ಮಾಧ್ಯಮ ಮುಖ್ಯಗುರುಮಾತೆ ರಂಜಿತಾ ಹೆಗಡೆ, ಉಪನ್ಯಾಸಕರಾದ ವಿ.ವಿ.ಪಾಟೀಲ್, ಎಸ್.ಬಿ.ಹೂಗಾರ, ಶಿಕ್ಷಕರಾದ ಮಂಜುನಾಥ ಪಡದಾಳಿ, ಶಾಹಿನ…

Read More

ಮುದ್ದೇಬಿಹಾಳ: ತಾಲೂಕಿನ ಜಟ್ಟಗಿ ವಿದ್ಯುತ್ ಉಪಕೇಂದ್ರದಲ್ಲಿ ಕಾಮಗಾರಿ ಕೈಗೊಳ್ಳುತ್ತಿರುವದರಿಂದ ಜೂ೨೪ ರಂದು ಬೆಳಿಗ್ಗೆ ೮ ರಿಂದ ಸಂಜೆ ೬:೩೦ ರ ವರೆಗೆ ೧೧೦ ಕೆವಿ ಉಪಕೇಂದ್ರ ಹಿರೇಮುರಾಳ, ೧೧೦ ಕೆವಿ ಕೆ.ಎನ್ ಸೋಲಾರ ಮುದ್ದೇಬಿಹಾಳ, ೧೧೦ ಕೆವಿ ಕೊಳೂರು, ಬಾಲಾಜಿ ಶುಗರ್ಶ ಹಾಗೂ ೧೧೦ ಕೆವಿ ಮುದ್ದೇಬಿಹಾಳದ ಉಪಕೇಂದ್ರದಿಂದ ಹೊರಹೋಗುವ ೩೩ ಕೆವಿ ಉಪಕೇಂದ್ರಗಳಾದ ಢವಳಗಿ, ತಂಗಡಗಿ ಮತ್ತು ನಾಲತವಾಡ ಹೀಗೆ ಎಲ್ಲ ಉಪಕೇಂದ್ರಗಳಿಂದ ಹೊರಹೊಮ್ಮುವ ಎಲ್ಲ ೧೧ ಕೆವಿ ಮಾರ್ಗಗಳು, ಪಟ್ಟಣದ, ನಿರಂತರ ಜ್ಯೋತಿ, ನೀರು ಸರಬರಾಜು, ಕೃಷಿ ನೀರಾವರಿ ಹಾಗೂ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವದಿಲ್ಲ. ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ನ ಕಾರ್ಯನಿರ್ವಾಹಕ ಅಭಿಯಂತರ ಆರ್.ಎನ್.ಹಾದಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ಕೆಲ ಗ್ರಾಮಗಳನ್ನು ಹೊರತು ಪಡಿಸಿದರೆ ಬಹುತೇಕ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಕಾರಹುಣ್ಣಿಮೆಯಂಗವಾಗಿ ಸಂಜೆ ಎತ್ತುಗಳನ್ನು ಓಡಿಸುವ ಮೂಲಕ ಕರಿ ಹರಿದು ರೈತಬಾಂಧವರು, ಜನರು ಸಂಭ್ರಮಿಸಿದರು.ತಾಲೂಕಿನ ಕಾನ್ನಾಳ, ಸೋಲವಾಡಗಿ, ಹೂವಿನಹಿಪ್ಪರಗಿ, ನರಸಲಗಿ, ಕುದರಿಸಾಲವಾಡಗಿ, ನಾಗೋಡ,ಬೂದಿಹಾಳ, ಯರನಾಳ, ನಂದಿಹಾಳ ಪಿಯು, ಹುಣಶ್ಯಾಳ ಪಿಬಿ, ದಿಂಡವಾರ, ಇವಣಗಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಕಾರಹುಣ್ಣಿಮೆಯಂಗವಾಗಿ ಎತ್ತುಗಳನ್ನು ಓಡಿಸುವ ಮೂಲಕ ಕರಿ ಹರಿದು ಜನರು ಸಂಭ್ರಮಿಸಿದರು.ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಕಾರಹುಣ್ಣಿಮೆಯಂಗವಾಗಿ ಕರಿ ಹರಿಯುವ ಸಂಪ್ರದಾಯವಿಲ್ಲ. ಕಾರಹುಣ್ಣಿಮೆ ದಿನದಂದು ಮಳೆ-ಬೆಳೆ ಕುರಿತು ಭವಿಷ್ಯ ಕೇಳಲು ಗುಂಡು ಎತ್ತುವ ಸಂಪ್ರದಾಯ ಮಾತ್ರವಿದೆ. ಸಂಪ್ರದಾಯದಂತೆ ಶುಕ್ರವಾರ ಸಂಜೆ ಮಳೆ-ಬೆಳೆ ಕುರಿತು ಗುಂಡು ಎತ್ತುವ ಮೂಲಕ ರೈತರು ಭವಿಷ್ಯ ತಿಳಿದುಕೊಂಡರು. ಮನಗೂಳಿ ಪಟ್ಟಣದ ಮಾಮಲ್ಲಪ್ಪ ತಪಶೆಟ್ಟಿ ಅವರು, ನಮ್ಮಲ್ಲಿ ಮೊದಲಿನಿಂದಲೂ ಕರಿ ಹರಿಯುವ ಸಂಪ್ರದಾಯವಿಲ್ಲ. ಕಾರಹುಣ್ಣಿಮೆಯ ದಿನದಂದು ಮಳೆ-ಬೆಳೆ ಹೇಗಾಗುತ್ತದೆ ಎಂದು ತಿಳಿದುಕೊಳ್ಳಲು ಏಳು ಜನರು ಸೇರಿ ಹಿರಿಯರ ಕಾಲದಿಂದಲೂ ಇರುವ ಗುಂಡನ್ನು ಎತ್ತಿ ತಿಳಿದುಕೊಳ್ಳುತ್ತಾರೆ.…

Read More

ಮುದ್ದೇಬಿಹಾಳ: ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಎ.ಸಿ.ಕೆರೂರ ರವರ ನೇತೃತ್ವದಲ್ಲಿ ಮಕ್ಕಳಿಗೆ ಯೋಗ ಅಭ್ಯಾಸವನ್ನು ಮಾಡಿಸಲಾಯಿತು. ತಡಾಸನ, ಉತ್ಕಟಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ವೀರಭದ್ರಾಸನ, ವಜ್ರಾಸನ, ಪದ್ಮಾಸನ, ಭುಜಂಗಾಸನ, ಉಷ್ಟ್ರಾಸನ, ಧನುರಾಸನ, ಹಾಲಾಸನ, ಬದ್ಧಕೋನಾಸನ, ಸೂರ್ಯ ನಮಸ್ಕಾರ ಆಸನಗಳನ್ನು ಮಾಡಿಸಿದರು.ಈ ವೇಳೆ ಶಾಲೆಯ ಮುಖ್ಯಗುರು ಎಸ್.ವಿ .ಹಿರೇಮಠ, ಕೆ.ಎಸ್.ಚೆಟ್ಟಿ, ರೇಣುಕವ್ವ ಎಸ್.ಬಿ. ತಬ್ಬಸುಮ್ ಕಾಜಿ, ತಬಸುಮ್ ನಾಗರಬಾವಡಿ, ಸಂತೋಷ್ ಬಿದರಿ, ಮಹಾನಂದ ಹತ್ತರಿಕಿಹಾಳ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Read More

ಮುದ್ದೇಬಿಹಾಳ: ಪಟ್ಟಣದ ಸಂತ ಕನಕದಾಸ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.ಯೋಗ ಗುರುಮಾತೆಯರಾದ ಪ್ರೇಮಾ ಗುಡದಿನ್ನಿ ಮತ್ತು ಹೇಮಾ ಪಾಟೀಲ ಶಾಲೆಯ ಕಾರ್ಯದರ್ಶಿ ಬಿ.ಎಸ್.ಮೇಟಿ, ಪ್ರೌಢ ಶಾಲೆಯ ಮುಖ್ಯ ಗುರುಗರು ಬಿ.ಎಸ್.ಪಣೇದಕಟ್ಟಿ, ಪ್ರಾಥಮಿಕ ಶಾಲೆಯ ಮುಖ್ಯ ಗುರುಗುರು ಎಮ್.ಎನ್.ಯರಝರಿ, ಶಿಕ್ಷಕರುಗಳಾದ ಗೋಪಾಲ ಹೂಗಾರ, ಎಮ್.ಸಿ.ಕಬಾಡೆ ಸೇರಿದಂತೆ ಮತ್ತೀತರರು ಇದ್ದರು.

Read More

ಇಂಡಿ: ನಿರಂತರ ಯೋಗ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗುವ ಜತೆಗೆ, ದೇಹದಲ್ಲಿ ಉಲ್ಭಣಿಸುವ ಕಾಯಿಲೆಗಳಿಂದ ಮುಕ್ತಿ ಹೊಂದಬಹುದು ಎಂದು ವಿಶ್ವ ಭಾರತಿ ವಿದ್ಯಾ ಕೇಂದ್ರದ ಶಿಕ್ಷಣ ಸಮೂಹದ ಅಧ್ಯಕ್ಷ ವಿ.ಜಿ.ಕಲ್ಮನಿ ಹೇಳಿದರು.ಶುಕ್ರವಾರ ತಾಲೂಕಿನ ಹಿರೇಬೇವನೂರು ಗ್ರಾಮದ ವಿಶ್ವ ಭಾರತಿ ವಿದ್ಯಾ ಕೇಂದ್ರದಲ್ಲಿ ಹಮ್ಮಿಕೊಂಡ ವಿಶ್ವ ಯೋಗ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಯೋಗಾಸಾನ ಮಾಡುವುದರಿಂದ ಹಲವು ಲಾಭಗಳಿವೆ. ಮನಸ್ಸು ನಮ್ಮ ಹತೋಟಿಗೆ ಬರುತ್ತದೆ. ನಾವು ಇಚ್ಛಿಸುವ ಉತ್ತಮ ಕರ‍್ಯಗಳು ಫಲಿಸುತ್ತದೆ. ಹಿಂದೆ ಋಷಿ ಮುನಿಗಳು ಯೋಗ ಹಾಗೂ ತಪಸ್ಸಿನ ಶಕ್ತಿಯನ್ನು ಪಡೆದು ಹೆಚ್ಚು ಕಾಲ ಆರೋಗ್ಯವಂತರಾಗಿ ಬದುಕುತ್ತಿದ್ದರು. ದೇಹವನ್ನು ದಂಡಿಸುವ ಮೂಲಕ ಆರೋಗ್ಯವನ್ನು ಪಡೆದುಕೊಳ್ಳುತ್ತಿದ್ದರು. ಯೋಗಭ್ಯಾಸ ನಮ್ಮ ದೇಶದ ಸಂಸ್ಕೃತಿಯಾಗಿದೆ. ಇತ್ತಿಚಿನ ದಿನಗಳಲ್ಲಿ ಪಾಶ್ಚಿಮಾತ್ಯರು ಯೋಗ ಹಾಗೂ ಪ್ರಕೃತಿ ಚಿಕಿತ್ಸೆಗೆ ಹೆಚ್ಚು ಒತ್ತು ನೀಡಿ ಅರೋಗ್ಯವಂತ ಜೀವನ ನಡೆಸಲು ಮುಂದಾಗಿದ್ದಾರೆ ಎಂದರು.ಮುಂಜಾನೆ ಯೋಗಾಭ್ಯಾಸ ಮಾಡುವುದರಿಂದ ದೈನಂದಿನ ಚಟುವಟಿಕೆಗಳಿಗೆ ಉಲ್ಲಾಸ ಸಿಗುತ್ತದೆ. ಯೋಗದ ವಿವಿಧ ಆಸನಗಳನ್ನು ಹಾಕುವ ಮೂಲಕ…

Read More

ಇಂಡಿ: ಪ್ರಸಕ್ತ ೨೦೨೪-೨೫ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲು ಭಿಮಾ(ವಿಮಾ) ಯೋಜನೇಯನ್ನು ಇಂಡಿ ತಾಲೂಕಿನಾದಂತ ಅನುಷ್ಟಾನಗೊಳಿಸಲಾಗಿದೆ ಎಂದು ಇಂಡಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.ಆದ್ದರಿಂದ ಅಧಿಸೂಚಿಸಲಾದ ಬೆಳೆಗಳಿಗೆ ಮಾತ್ರ ವಿಮಾ ಕಂತು ಕಟ್ಟಬೇಕು. ಅದನ್ನು ಹೊರತು ಪಡಿಸಿ ಅನ್ಯ ಬೆಳೆಗಳಿಗೆ ಅನ್ವಯವಾಗುವುದಿಲ್ಲ. ಕಾರಣ ಇಚ್ಛೆ ಉಳ್ಳ ಭೂಮಿ ಹೊಂದಿದ ರೈತರು ಪಹಣಿ ಪತ್ರಿಕೆ(ಆರ್‌ಟಿಸಿ), ಬ್ಯಾಂಕ್ ಪಾಸ್ ಬುಕ್, ಆಧಾರ ಸಂಖ್ಯೆಯೊಂದಿಗೆ ಎಫ್‌ಆಯ್‌ಡಿ( ಫ್ರೂಟ್ಸ್ ಐಡಿ) ಹೊಂದಿರುವ ರೈತರು ತಮ್ಮ ಹತ್ತಿರದ ಬ್ಯಾಂಕ್, ಗ್ರಾಮ ಒನ್ ಕೇಂದ್ರ ಹಾಗೂ ಸಿಎಸ್‌ಸಿ( ಕಾಮನ್ ಸರ್ವಿಸ್ ಸೇಂಟರ್)ಗಳಲ್ಲಿ ನಿಗದಿತ ಅವಧಿಯೊಳಗಾಗಿ ವಿಮಾ ಮಾಡಿಸಿಕೊಳ್ಳಬೇಕು.ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ತಾಲೂಕಿನ ಬೆಳೆಗಳಾದ ತೊಗರಿ ಗ್ರಾಮ ಪಂಚಾಯತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳಾದ ಮುಸುಕಿನ ಜೋಳ, ಸಜ್ಜೆ, ಹೆಸರು, ಉದ್ದು, ಸೂರ್ಯಕಾಂತಿ, ಹತ್ತಿ, ಶೇಂಗಾ, ಹುರುಳಿ, ಈರುಳ್ಳಿ, ಟೋಮ್ಯಾಟೊ, ಕೆಂಪು ಮೆಣಸಿನಕಾಯಿ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಧಿಸೂಚಿಸಲಾಗಿದೆ.ನೊಂದಣಿ…

Read More

ಇಂಡಿ: ಯೋಗ ಮಾಡುವದರಿಂದ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ದಿಯಾಗುತ್ತದೆ. ಯೋಗಭ್ಯಾಸವು ಮನುಷ್ಯನನ್ನು ಆಸ್ಪತ್ರೆಯಿಂದ ದೂರ ಇರಿಸುತ್ತದೆ. ದೈಹಿಕ ಮತ್ತು ಮಾನಸಿಕ ನೆಮ್ಮದಿ ದೊರೆತು ಉಲ್ಲಾಸಮಯ ಜೀವನ ಸಾಗಿಸಲು ನೆರವಾಗುತ್ತದೆ. ಹಾಗಾಗಿ ಯೋಗವು ಮನುಷ್ಯನ ದೇಹ ಮತ್ತು ಆರೊಗ್ಯಕ್ಕೆ ಅತ್ಯವಶ್ಯವಾಗಿದೆ ಎಂದು ಯೋಗ ಗುರು ಬಿ.ಎಸ್.ಪಾಟೀಲ ಹೇಳಿದರು.ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯ ಹಾಗೂ ಬಸವರಾಜೇಂದ್ರ ಸತ್ಸಂಗ ಸಮಿತಿ ಇಂಡಿ ಇವರ ಸಹಯೋಗದೊಂದಿಗೆ ಯೋಗಾಸನ ಮಾಡುವ ಮೂಲಕ “ಅಂತರಾಷ್ಟ್ರೀಯ ಯೋಗ” ದಿನಾಚರಣೆಯಲ್ಲಿ ಮಾತನಾಡಿದರು. ಸುರ್ಯನಮಸ್ಕಾರ, ಶಿರ್ಶ್ಯಾಸನ, ಮಯೂರಾಸನ, ಹಲಾಸನ, ಅರ್ಧಕಟಿ ಚಕ್ರಾಸನ ಮುಂತಾದ ಆಸನಗಳು, ಧ್ಯಾನ ಮತ್ತು ಪ್ರಾಣಾಯಾಮ ಮಾಡಿ ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಯೋಗ ಮಾಡಬೇಕೆಂದು ನುಡಿದರು.ಪ್ರಾಂಶುಪಾಲ ಡಾ.ಎಸ್.ಬಿ.ಜಾಧವ, ಸಹಾಯಕ ಪ್ರಾಧ್ಯಾಪಕರಾದ ಡಾ.ವಿಶ್ವಾಸ ಕೋರವಾರ, ಜಾವೇದ ತಾಂಬೋಳಿ, ಎನ್ನೆಸ್ಸೆಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಪಿ.ಕೆ.ರಾಠೋಡ, ಸ್ಕೌಟ್ಸ್ & ಗೈಡ್ಸ್ ಘಟಕದ ಸಂಯೋಜಕ ಡಾ.ಶ್ರೀಕಾಂತ ರಾಠೋಡ ಮಾತನಾಡಿದರು.ವೇದಿಕೆಯಲ್ಲಿ ಬಸವರಾಜೇಂದ್ರ ಸತ್ಸಂಗ ಸಮಿತಿಯ ಅಧ್ಯಕ್ಞ…

Read More

ವಿಜಯಪುರ: ನಗರದ ಮಲಿಕ್ ಮೈದಾನ ತೋಪ ಆವರಣದಲ್ಲಿ ಕೆಬಿಎಂಪಿಎಸ್ ನಂ 3 ಶಾಲೆಯ ಶಿಕ್ಷಕರು ಹಾಗೂ ವಿಧ್ಯಾರ್ಥಿಗಳು ವಿಶ್ವ ಯೋಗ ದಿನಾಚರಣೆ ಆಚರಿಸಿದರು.ಯೋಗಾಭ್ಯಾಸ ಮಾಡಿಸುವದರೊಂದಿಗೆ ಮಕ್ಕಳಿಗೆ ಯೋಗದ ಮಹತ್ವ ಹಾಗೂ ಆಹಾರ ಪದ್ಧತಿಯ ಬಗ್ಗೆ ತಿಳಿವಳಿಕೆಯನ್ನು ಕೊಡಲಾಯಿತು.ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಹಾಗೂ ಶಾಲಾ ಸಿಬ್ಬಂದಿ ಇದ್ದರು.

Read More