ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ವತಿಯಿಂದ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಹ.ಮ. ಪೂಜಾರ್ ಗುರುಗಳಿಗೆ ಅಭಿಮಾನ ಪೂರ್ವಕವಾಗಿ ಸನ್ಮಾನಿಸಿ ಮಾತನಾಡಿದ ಹಿರಿಯ ಮಕ್ಕಳ ಸಾಹಿತಿ ಪ. ಗು. ಸಿದ್ದಾಪುರವರು, ಹ. ಮ. ಪೂಜಾರ ಗುರುಗಳಿಗೆ 21ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಬಯಸದೇ ಬಂದ ಭಾಗ್ಯವಾಗಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿಯ ನಂತರ ಸಿಂದಗಿಯಎಚ್. ಜಿ. ಕಾಲೇಜಿನಲ್ಲಿ ದಿನಾಂಕ 21 ಮತ್ತು 22 ರಂದು ನಡೆಯಲಿರುವ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಸಂಗಮದ ಎಲ್ಲ ಸದಸ್ಯರಿಗೆ ಹರ್ಷವನ್ನುಂಟು ಮಾಡಿದೆ ಎಂದರು.
ಹ.ಮ. ಪೂಜಾರ್ ಗುರುಗಳು ವಯೋಸಹಜ ತೊಂದರೆಗಳಿದ್ದರೂ ಮಾನಸಿಕವಾಗಿ ಚೈತನ್ಯವನ್ನು ಹೊಂದಿದ್ದಾರೆ. ಶೀಘ್ರದಲ್ಲಿಯೇ ಅವರ ಅವರ ಅಭಿನಂದನಾ ಗ್ರಂಥದ ಸಿದ್ಧತೆ ನಡೆಯಲಿ ಎಂದು ಸಲಹೆ ನೀಡಿದರು.
ಸನ್ಮಾನಕ್ಕೆ ಉತ್ತರವಾಗಿ ಸಮ್ಮೇಳನದ ಸರ್ವಾಧ್ಯಕ್ಷರಾದ ಹ.ಮ. ಪೂಜಾರ ಗುರುಗಳು, ಸಂಗಮದ ಸದಸ್ಯರೆಲ್ಲರೂ ನನ್ನ ಆತ್ಮೀಯ ಬಂಧುಗಳು ನಿಮ್ಮೆಲ್ಲರ ಆತ್ಮೀಯ ಸನ್ಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ನಾನು ನಿರಂತರ ಮಾಡುತ್ತಾ ಬಂದಿದ್ದೇನೆ ಇದು ನನ್ನ ಹವ್ಯಾಸವಾಗಿದೆ ಎಂದರು.
ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷರಾದ ಎ.ಆರ್. ಹೆಗ್ಗನ ದೊಡ್ಡಿ ಅವರು ಮಾತನಾಡುತ್ತಾ, ಸಂಗಮದ ಸದಸ್ಯರೆಲ್ಲರೂ ಸೇರಿ ಹ.ಮ. ಪೂಜಾರ ಗುರುಗಳ ಸರ್ವಾಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಭ್ರಮಿಸೋಣ ಎಂದರು. ಸಮ್ಮೇಳನದ ನಂತರ ಹ.ಮ. ಪೂಜಾರ ಅಭಿನಂದನ ಗ್ರಂಥ ಕುರಿತು ಅವರ ಶಿಷ್ಯಬಳಗ, ಮಕ್ಕಳ ಸಾಹಿತ್ಯ ಬಳಗ, ಸಾಹಿತಿಗಳು, ಅಭಿಮಾನಿಗಳು, ಹಿತೈಷಿಗಳ ಸಭೆ ಕರೆದು ಚರ್ಚಿಸಿ ಅಭಿನಂದನಾ ಗ್ರಂಥದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಡಾ ಜಿ ಎಸ್ ಭೂಸಗೊಂಡ, ಅರವಿಂದ್ ಸಿದ್ದಾಪುರ, ಬಗಲಿ ಶಿಕ್ಷಕರು, ಮಕ್ಕಳ ಸಾಹಿತಿಗಳಾದ ಶಿವಕುಮಾರ್ ಶಿವಶಿoಪಿ ಎಸ್ ಎಸ್ ಸಾತಿಹಾಳ್, ಸಿದ್ದು ಬ್ಯಾಕೋಡ, ವಿಜಯ ಪೂಜಾರ, ರಾಜು ಪೂಜಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

