Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಂಜನೇಯ ಸ್ವಾಮಿಯು ಮಹಾದೇವನ ಅವತಾರ, ಅಷ್ಟ ಸಿದ್ಧಿ ಮತ್ತು ನವ ನಿಧಿಯನ್ನು ಹೊಂದಿರುವವನು. ಶಾಶ್ವತವಾದ ಶಕ್ತಿ, ನಿಷ್ಠೆ ಮತ್ತು ಭಕ್ತಿಯನ್ನು ಹೊಂದುತ್ತಾ ಶ್ರೀ ರಾಮನನ್ನು ಒಲಿಸಿಕೊಂಡವನು. ನಾವೆಲ್ಲರೂ ಹನುಮ ಜಯಂತಿಯನ್ನು ಯಾವುದೇ ಜಾತಿ-ಮತ-ಪಂಥಗಳ ಬೇಧವಿಲ್ಲದೇ ಶ್ರದ್ಧೆ, ಭಕ್ತಿ-ಭಾವ ಮತ್ತು ಸಾಮರಸ್ಯತೆಯಿಂದ ಆಚರಿಸೋಣ ಎಂದು ಹಿರಿಯ ಹಿಂತಕ ದ್ರುವ ಕುಲಕರ್ಣಿ ಹೇಳಿದರು.ನಗರದ ಅಥಣಿ ರಸ್ತೆಯಲ್ಲಿರುವ ಎನ್.ಜಿ.ಓ ಕಾಲನಿಯಲ್ಲಿ ಜೈ ಶ್ರೀ ಹನುಮಾನ ಮಂದಿರದಲ್ಲಿ ಆಯೋಜಿಸಿದ್ದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಜೀವನ ನಿರ್ವಹಣೆ, ಮತ್ತು ಸಂಸಾರ ನೌಕೆಯನ್ನು ನಡೆಸುವಲ್ಲಿಯೇ ತಮ್ಮ ಜೀವನ ಸಾಗಿಸುತ್ತಿರುವ ಮನೆ ಹಿರಿಯರು, ಮಹಿಳೆಯರು, ಮಕ್ಕಳ ಮನದಲ್ಲಿ ಕೀರ್ತನೆ, ಹರಿಕಥೆ, ಮಹಾಭಾರತ, ರಾಮಾಯಣದ ಧಾರ್ಮಿಕ ಮತ್ತು ಸಾಂಸ್ಕೃತಿಕ-ಸಂಸ್ಕಾರ, ನಡೆ-ನುಡಿ, ಆಚಾರ-ವಿಚಾರ ಮತ್ತು ಮೌಲ್ವಿಕ ವೈಚಾರಿಕ ವಿಷಯಗಳ ಬಗೆಗೆ ಅರಿವು ಮೂಡಿಸಬೇಕಾಗಿದೆ ಎಂದರು. ಬಿ.ಎಲ್..ಡಿ.ಇ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಡಾ. ಜ್ಯೋತಿ ಖೊದ್ನಾಪೂರ ಮಾತನಾಡಿ, ಅಧ್ಯಾತ್ಮ ಮತ್ತು ವಿಜ್ಞಾನ ಎರಡು ಒಂದೇ ನಾಣ್ಯದ ಮುಖಗಳಿದ್ದಂತೆ. ನಮ್ಮ ಋಷಿ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಮಾತೋಶ್ರೀ ಹೇಮಾವತಿ ಹೆಗ್ಗಡೆ ಅಮ್ಮನವರ ಎಪ್ರೀಲ್ 02 ರಂದು ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಚಡಚಣ ಹಾಗೂ ಇಂಡಿ ತಾಲೂಕಿನ ನಿರ್ಗತಿಕರು ಹಾಗೂ ಹಿರಿಯ ಮಹಿಳೆಯರ ಮನೆ ಮನೆಗೆ ಹೋಗಿ ಹಣ್ಣು ಹಂಪಲು ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಿನ ಯೋಜನಾಧಿಕಾರಿ ನಟರಾಜ ಎಲ್.ಎಂ ಅವರು, ಮಾತೋಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸಾದ “ವಾತ್ಸಲ್ಯ” ಕಾರ್ಯಕ್ರಮವು ನಿರ್ಗತಿಕರು ಹಾಗೂ ವಯೋವೃದ್ಧರಿಗೆ ನೆರವಾಗುವ ಉದ್ದೇಶದಿಂದ ಜಾರಿಗೆ ತರಲಾಗಿದ್ದು, ಇದು ಅತ್ಯಂತ ಮಾನವೀಯ ಸೇವೆಯಾಗಿದೆ ಎಂದು ಹೇಳಿದರು.ಇಂಡಿ ಹಾಗೂ ಚಡಚಣ ತಾಲೂಕುಗಳಲ್ಲಿ ಒಟ್ಟು 128 ನಿರ್ಗತಿಕರಿಗೆ ಪ್ರತಿ ತಿಂಗಳು ₹1000 ಮಾಶಾಸನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೀಡಲಾಗುತ್ತಿದೆ. ಜೊತೆಗೆ 5 ಜನರಿಗೆ ಮನೆ ನಿರ್ಮಾಣ ಕಾರ್ಯವೂ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ಮಹಾಂತೇಶ್ ವಿ.ಎ., ಗಣ್ಯರಾದ ವಿಕಾಸ್ ಪಾಟೀಲ, ಡಾ. ರಾಮಕೃಷ್ಣ ಕುಲಕರ್ಣಿ, ಸಮನ್ವಯ ಅಧಿಕಾರಿ…
ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರ ಸೇರಿದಂತೆ ತಾಲೂಕಿನಲ್ಲಿ ಹನುಮಾನ ಭಕ್ತರು ಶ್ರದ್ದೆ ಮತ್ತು ಭಕ್ತಿಯಿಂದ ಹನುಮ ಜಯಂತಿ ಆಚರಿಸಿದರು.ನಗರದ ಹಿರೇಇಂಡಿ, ಮಹಾವೀರ ವೃತ್ತದಲ್ಲಿರುವ ಅಗಸಿ ಹನುಮಾನ ಮಂದಿರ, ಕೆಈಬಿ ಹನುಮಾನ ದೇವಸ್ಥಾನ, ಪಂಚಾಯತ ರಾಜ ಆವರಣದಲ್ಲಿರುವ ಹನುಮಾನ ಮಂದಿರ, ಆರೋಗ್ಯ ಇಲಾಖೆಯಲ್ಲಿರುವ ಹನುಮಾನ ಮಂದಿರ,ಮಲ್ಲಿಕಾರ್ಜುನ ದೇವಸ್ಥಾನ , ಸಿಂದಗಿ ರಸ್ತೆ ಸೇರಿದಂತೆ ಇತರೆ ಎಲ್ಲ ಕಡೆಗೂ ಹನುಮ ಜಯಂತಿ ಆಚರಿಸಲಾಯಿತು.ದೇಶಪಾಂಡೆ ತಾಂಡಾ, ಸಾಲೋಟಗಿ ಗ್ರಾಮದ ಮೂರು ಕಡೆ, ಆಳೂರ, ಇಂಗಳಗಿ ಅಗರಖೇಡ ಸೇರಿದಂತೆ ತಾಲೂಕಿನ ಅನೇಕ ಕಡೆ ಹನುಮ ಜಯಂತಿ ಆಚರಿಸಲಾಯಿತು.ಎಲ್ಲ ಕಡೆ ಬೆಳಗ್ಗೆ ಆರತಿ, ಅಭಿಷೇಕ, ಪೂಜೆ ಅಲಂಕಾರ ಪಾಲಕಿ ಮೆರವಣೆಗೆ , ತೊಟ್ಟಿಲು ಹಾಕುವ ಕಾರ್ಯಕ್ರಮ ಜೊತೆಗೆ ಅನ್ನ ಪ್ರಸಾದ ವಿತರಣೆ ನಡೆಯಿತು.
ಲೇಖನ- ರಶ್ಮಿ ಕೆ. ವಿಶ್ವನಾಥ್ಮೈಸೂರು ಉದಯರಶ್ಮಿ ದಿನಪತ್ರಿಕೆ ಆಮಂತ್ರಣವಿದ್ದ ಕಾರ್ಯಕ್ರಮದಲ್ಲಿ ಹೋಗಿ ಕುಳಿತಿರುವಾಗ, ನಡೆಯಲಾರದೆ ಊರುಗೋಲಿನ ಸಹಾಯದಿಂದ ನಡೆದು ಒಳಬಂದ ಮಹಿಳೆಯ ಕಡೆಗೆ ನನ್ನ ಕಣ್ಣು ಹರಿಯದೆ ಇರಲಿಲ್ಲ. ದೊಡ್ಡದೊಂದು ಮೈಸೂರು ಸಿಲ್ಕ್ ಸೀರೆ, ಅದಕ್ಕೊಪ್ಪುವ ಕುಪ್ಪಸ, ಕಾಸ್ಟ್ಲಿ ಪುಟಾಣಿ ಬ್ಯಾಗೂ, ದೊಡ್ಡದೊಂದು ಚಿನ್ನದ ಬಳೇ.. ಎಲ್ಲವೂ ಇದೆ. ಆದರೆ ಆಕೆಯ ದಡೂತಿ ದೇಹದ ಭಾರವನ್ನು ಆಕೆಯ ಕಾಲು ಭರಿಸಲಾಗುತ್ತಿಲ್ಲ. ‘ವಾಕಿಂಗ್ ಸ್ಟಿಕ್’ ಆಕೆಯ ಕಾಲಿನ ಸಂಗಾತಿಯಾಗಿ ನಡೆಸುತ್ತಿದೆ. ‘ಇಷ್ಟು ಚಿಕ್ಕ ಕಾರ್ಯಕ್ರಮಕ್ಕೆ ಇಷ್ಟೊಂದು ಆಡಂಬರ ಬೇಕಿತ್ತಾ? ಅನ್ನಿಸಿತು ನನಗೆ. ತಕ್ಷಣವೆ ‘ಹಣವಂತರು. ಪಾಪ! ಇರುವ ಹಣದ ಸದ್ವಿನಿಯೋಗ ಮಾಡಿಕೊಳ್ಳಲೇಬೇಕಲ್ಲಾ.. ಜೊತೆಗೆ ಪ್ರತಿಷ್ಠೆಯ ಪ್ರಶ್ನೆ ಬೇರೆ’ ಎಂದುಕೊಂಡವಳೇ ಸುಮ್ಮನಾದೆ. ವಿಷಯ ಅಷ್ಟೇ ಅಲ್ಲ. ಅದು ನಾ ಮೊದಲೇ ಯಾವಾಗಲೋ ನೋಡಿದ್ದ ಮುಖ.ಹೌದು ಇದು ಅದೇ ಮುಖ.ನಾ ಚಿಕ್ಕವಳಿದ್ದಾಗ ನೋಡಿದ್ದ ಮುಖ. ಬೀಗರ ಔತಣಕ್ಕೆ ಇನ್ವಿಟೇಶನ್ ಕೊಟ್ಟು ಕರೆದಿದ್ದರು. ಟೀಚರ್ ಆಗಿದ್ದ ಅಂಟಿಗೆ ರಜಾ ಇಲ್ಲದ ಕಾರಣ, ರಜೆಗೆಂದು ಅವರ ಮನೆಗೆ ಬಂದಿದ್ದ…
ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಆಂಗ್ಲ ಭಾಷಾ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಮನೆಯ ಮುಂದಿನ ಹೂದೋಟದಲ್ಲಿ ಶತಪಥ ಹಾಕುತ್ತ ಒಂಭತ್ತು ಗಂಟೆಗೆ ರ್ತಿನಿ ಅಂದವರು ಒಂಭತ್ತು ಹೊಡೆದು ಅರ್ಧ ತಾಸಾದರೂ ಇನ್ನೂ ಪತ್ತೆ ಇಲ್ಲ ಆಸಾಮಿ ನನ್ನ ಇವತ್ತಿನ ಮುಂದಿನ ಕೆಲಸ ಎಲ್ಲಾ ಉಲ್ಟಾ ಪಲ್ಟಾ ಆಗ್ತಾವ ಪೆಂಡಿಂಗ್ ಉಳಿತಾವ. ಟೈಂ ಸೆನ್ಸ್ ಇಲ್ಲ ಇವರಿಗೆ. ಇಂಥವರನ ನಂಬಿದರ ಉದ್ಧಾರ ಆದಂಗ ಎಂದು ಬಾರದೇ ಇರುವವರಿಗೆ ಸಹಸ್ರ ನಾಮಾರ್ಚನೆಯನ್ನು ವಟ ವಟಿಸುವಿಕೆಯಲ್ಲಿ ಸಲ್ಲಿಸುತ್ತ ನಮ್ಮ ಟೈಮ್ನ್ನು ಧಾರಾಳವಾಗಿ ಹಾಳು ಮಾಡೋದು ನಮಗೆ ಗೊತ್ತೇ ಆಗುವುದಿಲ್ಲ. ಬದುಕಿರುವವರೆಗೆ ಎಲ್ಲವನ್ನೂ ಗಳಿಸಬೇಕು ಅನುಭವಿಸಬೇಕು ಎನ್ನುವ ಹಟ ನಮ್ಮದು. ಸಾಯುವದಕ್ಕೆ ಮುನ್ನ ಒಂದೆರಡು ದೊಡ್ಡ ಬಂಗಲೆ. ಬಂಗಲೆ ಮುಂದೆ ಐದಾರು ಉದ್ದನೆಯ ಕಾರು ಬ್ಯಾಂಕ್ನಲ್ಲಿ ಬಿಗ್ ಬ್ಯಾಲನ್ಸ್ ಪದವಿ ಬಿರುದು ಸನ್ಮಾನ ಒಟ್ಟಿನೊಳಗೆ ನಮ್ಮ ಸಿರಿವಂತಿಕೆ ನಾಲ್ಕು ಜನರ ಬಾಂiÀiಲ್ಲಿರಬೇಕೆಂದು ಬೆಳಿಗ್ಗೆ ಬೇಗ ಎದ್ದು ರಾತ್ರಿ ಎಷ್ಟು ಹೊತ್ತಾದರೂ ಮನೆ ಸೇರುವುದಿಲ್ಲ. ಏನನ್ನೋ ಗಳಸ್ತಿವಿ ಅಂತ…
ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ್ ಎಮ್ ಇಟ್ಟಿಜಮಖಂಡಿ: ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಎರಡ್ಮೂರು ತಿಂಗಳು ಕಬ್ಬಿನ ಟ್ರ್ಯಾಕ್ಟರ್ ಗಳ ಓಡಾಟ ಜೋರಾಗಿತ್ತು ಆದ್ರೆ ಈಗ ಕಾರ್ಖಾನೆಗಳೆಲ್ಲ ಬಂದಾಗಿ ಕಬ್ಬಿನ ಟ್ರ್ಯಾಕ್ಟರ್ ಗಳ ಓಡಾಟ ಬಂದಾಗಿದ್ದು ಸಧ್ಯ ಎಲ್ಲೆಡೆ ಜೋಳದ ಕಣಿಕೆ ಹೊತ್ತ ಟ್ರ್ಯಾಕ್ಟರ್ಗಳ ಓಡಾಟ ಹೆಚ್ಚಾಗಿದೆ. ಕಬ್ಬಿನ ಟ್ರ್ಯಾಕ್ಟರ್ಗಳು ಸಕ್ಕರೆ ಕಾರ್ಖಾನೆಗಳತ್ತ ಮುಖಮಾಡುತ್ತಿದ್ದವು, ಕಣಿಕೆ ಹೊತ್ತ ವಾಹನಗಳು ಒಣಬೇಸಾಯ ಪ್ರದೇಶಗಳಿಂದ ಕಬ್ಬು ಬೆಳೆ ಪ್ರದೇಶಗಳತ್ತ ಹೋಗುತ್ತಿವೆ.ನೆರೆ ರಾಜ್ಯಕ್ಕೂ ಸಾಗಣೆ : ಬಾಗಲಕೋಟೆˌ ಹುನಗುಂದ, ಬಾದಾಮಿ ಮತ್ತು ವಿಜಯಪೂರ ಜಿಲ್ಲೆಯ ಬಹುತೇಕ ತಾಲೂಕುಗಳ ಭಾಗದಲ್ಲಿ ಬೆಳೆದ ಬಿಳಿಜೋಳದ ಕಣಿಕೆ ಬೀಳಗಿ, ಮುಧೋಳ ಮತ್ತು ಜಮಖಂಡಿ ತಾಲೂಕಿನ ಗ್ರಾಮಗಳಿಗೆ ಬರುತ್ತಿದೆ. ಅಷ್ಟಾದರೆ ಪರವಾಗಿಲ್ಲ. ಬಾಗಲಕೋಟೆ ಮತ್ತು ವಿಜಯಪೂರ ಜಿಲ್ಲೆಯ ಕಣಿಕೆ ಅಕ್ಕಪಕ್ಕದ ಜಿಲ್ಲೆ ಮತ್ತು ನೆರೆಯ ಮಹಾರಾಷ್ಟ್ರಕ್ಕೂ ಸಾಗಣೆ ಆಗುತ್ತಿದೆ. ರಾಜ್ಯ ಹೆದ್ದಾರಿಗಳ ಮೇಲೆ ಕಣಿಕೆ ಸಾಗಣೆ ಜೋರಾಗಿದೆ. ಟ್ರ್ಯಾಕ್ಟರ್ ಟೇಲರ್ˌ ಲಾರಿˌ ಚಕ್ಕಡಿಯಲ್ಲೂ ಕಣಿಕೆ ಸಾಗಣೆ ದೃಶ್ಯ ಕಾಣಬಹುದಾಗಿದೆ.ಹೆಚ್ಚಿದ ಬೇಡಿಕೆ: ಬಾಗಲಕೋಟೆ ಜಿಲ್ಲೆಯ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಶ್ರೀ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಕಿವಿ, ಮೂಗು, ಗಂಟಲು ವಿಭಾಗದಿಂದ ಅಲರ್ಜಿ ಕ್ಷೇತ್ರದ ಹೊಸ ಒಳನೋಟಗಳು ಕುರಿತು ನಿರಂತರ ವೈದ್ಯಕೀಯ ಶಿಕ್ಷಣ(CME) ಮತ್ತು ಕಾರ್ಯಾಗಾರ ಏಪ್ರಿಲ್ 4 ರಂದು ಶನಿವಾರ ನಡೆಯಲಿದೆ.ಬಿ.ಎಲ್.ಡಿ.ಇ ಆಸ್ಪತ್ರೆಯ ಟ್ರಾಮಾ ಸೆಂಟರ್ನ 2ನೇ ಮಹಡಿಯ ಮಿನಿ ಆಡಿಟೋರಿಯಂನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ಅಲರ್ಜಿ ತಜ್ಞೆ ಡಾ. ಗಾಯತ್ರಿ ಪಂಡಿತ, ಡಾ. ಶೃತಿ ಮಂಜುನಾಥ ಮತ್ತು ಹುಬ್ಬಳ್ಳಿ ಚಿಕ್ಕಮಕ್ಕಳ ತಜ್ಞ ಡಾ. ಬಾಹುಬಲಿ ಇಂಗಳೆ ಅವರು ಅಲರ್ಜಿ ಮತ್ತು ಇಮ್ಯುನಾಲಜಿ ಕ್ಷೇತ್ರದಲ್ಲಿನ ವಿನೂತನ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.ಅಲ್ಲದೇ, ಬಿ. ಎಲ್. ಡಿ. ಇ ಪಲ್ಮನಾಲಜಿಸ್ಟ್ ವಿಭಾಗದ ಡಾ. ಕೀರ್ತಿವರ್ಧನ ಕುಲಕರ್ಣಿ ಅವರು ಅಸ್ಥಮಾ ಕುರಿತು ಉಪನ್ಯಾಸ ನೀಡಲಿದ್ದಾರೆ.ಅಲರ್ಜಿ ಸಂಬಂಧಿತ ರೋಗಗಳ ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆ ಕುರಿತ ಮಾಹಿತಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ವೈದ್ಯರು ಹಾಗೂ ಆರೋಗ್ಯ ಕ್ಷೇತ್ರದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಯುವ ಮುಖಂಡ ನಂದು ಗಡಗಿ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೆಂದ್ರ ಅವರ ನಾಯಕತ್ವವನ್ನ ಒಪ್ಪಿಕೊಂಡು ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಹಾಗೂ ವಿಜಯಪುರ ನಗರ ಮಂಡಲ ಅಧ್ಯಕ್ಷರಾದ ಸಂದೀಪ್ ಪಾಟೀಲ್ ಸಮ್ಮುಖದಲ್ಲಿ ಬಾಗಲಕೋಟೆ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲಾದ ಹಿರಿಯ ನಾಯಕರು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು.ದೇಶದ ಪ್ರಧಾನಿ ಮೋದಿ ಅವರ ನಾಯಕತ್ವ ಹಾಗೂ ವಿಜಯೆಂದ್ರ ಅವರ ನಾಯಕತ್ವ ಹಾಗೂ ತತ್ವ ಸಿದ್ದಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಬಂದಿದ್ದೇನೆ. ಜಿಲ್ಲೆಯಲ್ಲಿ ಪಕ್ಷದ ಬೆಳೆವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನಂದು ಗಡಗಿ ತಿಳಿಸಿದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ವಿಠ್ಠಲ ಮಂದಿರದಲ್ಲಿ ಚಿದಂಬರ ಸೇವಾ ಸಮಿತಿಯಿಂದ ಹನುಮಾನ ಜಯಂತಿಯನ್ನು ಭಕ್ತಿ ಭಾವದೊಂದಿಗೆ ಆಚರಿಸಲಾಯಿತು.ಬುಧವಾರ ಬೆಳಿಗ್ಗೆ ಹನುಮಾನ ಜಯಂತಿ ನಿಮಿತ್ಯ ಚಿದಂಬರ ಸೇವಾ ಸಮಿತಿಯ ಪದಾಧಿಕಾರಿಗಳು ಸೇರಿ ವಿವಿಧ ಹೂವು, ಹಾರ, ತಳಿರು ತೋರಣಗಳಿಂದ ಸಿಂಗರಿಸಿ ಹನುಮಾನ ಜಯಂತಿಗೆ ಚಾಲನೆ ನೀಡಿದರು. ಶ್ರೀಪಾದಭಟ್ ಹಾಗೂ ಅಶೋಕಭಟ್ ಜೋಷಿ ನೇತೃತ್ವದಲ್ಲಿ ಪಂಚಾಮೃತದೊಂದಿಗೆ ಅಭಿಷೇಕಗೈದು, ಅಷ್ಟೋತ್ತರ ಸಹಿತ ಎಲ್ಲ ವಿಧಿವಿಧಾನಗಳನ್ನು ಶಾಸ್ತೋಕ್ತವಾಗಿ ನೆರವೇರಿಸಿ ಭಕ್ತಿ ಸಮರ್ಪಿಸಲಾಯಿತು. ತದನಂತರ ಮಹಿಳೆಯರೆಲ್ಲ ಸೇರಿ ಬಾಲ ಹನುಮನ ಕುರಿತಾದ ಭಕ್ತಿಗೀತೆಗಳ ಗಾಯನದ ಮೂಲಕ ತೊಟ್ಟಿಲೋತ್ಸವ ನೆರವೇರಿಸಿದರು. ನಂತರ ಅಭಿಷೇಕ, ಪಾನಕ, ಕೋಸಂಬರಿ ವಿತರಣೆ ಕಾರ್ಯಕ್ರಮ ಜರುಗಿತು. ಆನಂತರ ಬಂದ ಭಕ್ತಾದಿಗಳಿಗೆಲ್ಲ ಮಹಾಪ್ರಸಾದ ವಿತರಿಸಲಾಯಿತು.ಸಮಿತಿ ಅಧ್ಯಕ್ಷ ನರೇಂದ್ರ ನಾಡಗೌಡ, ಉಪಾಧ್ಯಕ್ಷ ವೆಂಕಟೇಶ ಕುಲಕರ್ಣಿ, ಪಾಂಡುರಂಗ ದೇಶಪಾಂಡೆ, ಚಿದಂಬರ ಕುಲಕರ್ಣಿ, ಗುರುರಾಜ ಕುಲಕರ್ಣಿ, ಪ್ರಮೋದ ನಾಡಗೌಡ, ಶರತ ನಾಡಗೌಡ, ದತ್ತಾತ್ರೇಯ ದೇಶಪಾಂಡೆ, ಶ್ರೀನಿವಾಸ ಕುಲಕರ್ಣಿ, ಆನಂದ ನಾಡಗೌಡ, ಶ್ರೀನಿವಾಸ ಪಾಟೀಲ, ಶ್ರೀಧರ ನಾಡಗೌಡ, ಸಹಿತ ಮಹಿಳೆಯರು, ಮಕ್ಕಳು…
