Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಸಿಂದಗಿಯ ವಿವಿಧ ತಾಲೂಕಾ ಕಚೇರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೋಮವಾರ ಭೇಟಿ ನೀಡಿ ತಾಲೂಕಾ ಆಡಳಿತದ ಕಾರ್ಯನಿರ್ವಹಣೆಯ ಪ್ರಗತಿ ಪರಿಶೀಲನೆ ನಡೆಸಿದರು.ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಆಧಾರ ನೊಂದಣಿ, ಕಂದಾಯ ಗ್ರಾಮಗಳ ಮಾಹಿತಿ, ಭೂಮಿ ಪ್ರಗತಿ, ಮೋಜಣಿ ಕಡತ, ದಾಖಲೆಗಳನ್ನು ಆಧಾರದೊಂದಿಗೆ ಜೋಡಣೆಯ ಪ್ರಗತಿ ಮಾಹಿತಿ, ಜಾತಿ-ಆದಾಯ ಪ್ರಮಾಣ ಪತ್ರಗಳ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿದರು.ಸಿಂದಗಿ ಉಪನೊಂದಣಾಧಿಕಾರಿಗಳ ಕಚೇರಿ ಹಾಗೂ ಪುರಸಭೆ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಸುಧಾರಣೆಗೆ ಸಲಹೆ-ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಅಫಜಲಪುರ: ಪಟ್ಟಣದ ಸ್ವರಸಾಧನ ಸಂಗೀತ ಪಾಠಶಾಲೆಯಲ್ಲಿ ಗುರುಪೂರ್ಣಿಮೆ ಆಚರಿಸಲಾಯಿತು.ಕಾರ್ಯಕ್ರಮವನ್ನು ಮೃತ್ಯಂಜಯ ಸ್ವಾಮಿಕಳ್ಳಿಮಠ ಉದ್ಘಾಟಿಸಿ ಮಾತನಾಡುತ್ತಾ ಸಂಗೀತಕ್ಕೆ ಎಲ್ಲರನ್ನು ಸೇಳೆಯುವ ಶಕ್ತಿ ಇದೆ. ಅದಕ್ಕೆ ದೇಶ, ಭಾಷೆಯ ಗಡಿ ಇಲ್ಲ. ಪಂಡಿತ ಪುಟ್ಟರಾಜ್ ಕವಿ ಗವಾಯಿಗಳು ದೇಶಾದ್ಯಂತ ಲಕ್ಷಾಂತರ ಶಿಷ್ಯರಿಗೆ ಸಂಗೀತವನ್ನು ಧಾರೆ ಎರೆದು ಬದುಕು ರೂಪಿಸಿದ್ದಾರೆ. ಅವರ ನೆನಪಿನಲ್ಲಿ ಗುರುಪೂರ್ಣಿಮೆಯಂದು ಸ್ಮರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.ಬಸವ ಅನುಯಾಯಿ ಅಮೃತರಾವ್ ಪಾಟೀಲ ಮಾತನಾಡುತ್ತಾ ಸಂಗೀತ ಎನ್ನುವುದು ನಮ್ಮ ಮನಸ್ಸಿನ ಮೇಲಾಗುವ ದಾಳಿ ತಡೆದು ಮುದ ನೀಡುವ ಮಾದಕತೆಯಾಗಿದೆ. ಸಂಗೀತ ಬರೀ ಕಲೆಯಲ್ಲ ಇದೊಂದು ಬದುಕು ಕಟ್ಟಿಕೊಡುವ ಸಾಧನವಾಗಿದೆ. ಪಂಡಿತ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಕಲಿತ ಅನೇಕ ಅಂಧ, ಅನಾಥ ಮಕ್ಕಳು ಇಂದು ಸಂಗೀತ ಸೇವೆ ಸಲ್ಲಿಸುವ ಮೂಲಕ ಜೀವನ ನಡೆಸುತ್ತಿದ್ದಾರೆ ಇದಕ್ಕೆಲ್ಲ ಪಂಡಿತ ಪುಟ್ಟರಾಜ ಗವಾಯಿಗಳ ಕೊಡುಗೆಯಾಗಿದೆ ಇಂದು ಅವರನ್ನು ಸ್ಮರಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು. ಸಂಗೀತ ಪಾಠ ಶಾಲೆಯ ಶಿಕ್ಷಕ ಸಂತೋಷ ಕಾಮಶೇಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವರ ಸಾಧನ ಪಾಠ ಶಾಲೆಯ…
ಅಫಜಲಪುರ: ತಾಲೂಕಿನ ಆನೂರ ಗ್ರಾಮ ಪಂಚಾಯಿತಿಯಲ್ಲಿ ಹಡಪದ ಅಪ್ಪಣ್ಣ ಶರಣರ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಗ್ರಾ.ಪಂ ಅಧ್ಯಕ್ಷ ನಿಂಗಣ್ಣ ಕಲಶೆಟ್ಟಿ ಪೂಜೆ ಸಲ್ಲಿಸಿದರು.ಅವರು ನಂತರ ಮಾತನಾಡುತ್ತಾ ಹಡಪದ ಅಪ್ಪಣ್ಣ ಶರಣರು ಕಾಯಕನಿಷ್ಠರಾಗಿದ್ದು ಸಮಾಜ ಸುಧಾರಣೆಗಾಗಿ ಸಾಕಷ್ಟು ಶ್ರಮಿಸಿದ್ದಾರ. ಅವರು ಕೇವಲ ಒಂದು ಜಾತಿಗೆ ಸೀಮಿತರಾದ ಶರಣರಲ್ಲ ಹೀಗಾಗಿ ಅವರ ವಿಚಾರಗಳನ್ನು ಎಲ್ಲರೂಪಾಲಿಸುವಂತಾಗಬೇಕು ಎಂದರು.ಈ ಸಂದರ್ಭದಲ್ಲಿ ಪ್ರಮುಖರಾದ ಮನೋಹರ ಹಿಪ್ಪರಗಿ, ಮಲ್ಲಣಗೌಡ ಪಾಟೀಲ, ಬಸವರಾಜ ಖ್ಯಾದಾಗೋಳ, ಹಣಮಂತ ನಾವಿ, ಬಸವರಾಜ ನಾವಿ, ಶ್ರೀಶೈಲ ದೇವರಮನಿ, ರಾಜು ಉಮ್ಮನಗೋಳ, ಬಸವರಾಜ ಉಮ್ಮನಗೋಳ, ಚಂದ್ರಕಾಂತ ಭೂಸನೂರ, ದತ್ತು ಭಾಸಗಿ ಸೇರಿದಂತೆ ಅನೇಕರು ಇದ್ದರು.
ಅಫಜಲಪುರ: ಗುರು ಪೂರ್ಣಿಮೆ ಪ್ರಯುಕ್ತ ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ಗುರುಸ್ತೋತ್ರ ಪಾರಾಯಣ ಮಆಡಲಾಯಿತು.ಪಟ್ಟಣದ ಶಂಕರ ಮಠದ ಕಾರ್ಯದರ್ಶಿ ಪಾಂಡುರಂಗ ಮೋಹರೀರ ಮಾತನಾಡುತ್ತಾ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದೊಡ್ಡವರು ಹೇಳಿದ್ದು ನಿಜಕ್ಕೂ ಸತ್ಯವಾದ ಮಾತಾಗಿದೆ. ನಾವು ಎಷ್ಟು ದೊಡ್ಡ ಸ್ಥಾನಕ್ಕೆ ಏರಿದರೂ ಕೂಡ ಅದಕ್ಕೆ ಕಾರಣ ಗುರುಗಳಾಗಿರುತ್ತಾರೆ ಎಂದ ಅವರು ಗುರುಸ್ಮರಣೆ ಮಾಡುವುದು ನಿಜಕ್ಕೂ ಪುಣ್ಯದ ಕೆಲಸ ಎಂದರು.ನಂತರ ಅಷ್ಟೋತ್ತರ ಪಾರಾಯಣ ಹಾಗೂ ಗುರುಸಪಾರ್ಯ ಸ್ತೋತ್ರಗಳ ಪಾರಾಯಣ ನಡೆಯಿತು.ಈ ಸಂದರ್ಭದಲ್ಲಿ ಮಠದ ಅರ್ಚಕರಾದ ದತ್ತಂಭಟ್ ಪುರೋಹಿತ, ಶಿವಭಟ್ ಪುರೋಹಿತ, ಶಾರದಾ ಭಜನಾ ಮಂಡಳಿ ಅಧ್ಯಕ್ಷೆ ನಂದಾ ಕುಲಕರ್ಣಿ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಆನಂದ ಆಲಮೇಲಕರ, ಹಣಮಂತ್ರಾವ ಕುಲಕರ್ಣಿ, ದತ್ತಾತ್ರೇಯ ಕುಲಕರ್ಣಿ, ಸುಧೀರ ಆಲಮೇಲಕರ, ಮುರಾರಿ ಕುಲಕರ್ಣಿ, ಡಾ. ರಾಜೇಶ ಆಲಮೇಲಕರ, ರಾಘವೇಂದ್ರ ಚಿನವಾರ, ಅಚ್ಯುತ್ ಕುಲಕರ್ಣಿ, ಕಲ್ಯಾಣಿ ಚಿನವಾರ, ಪವನ ಅಲಬಾಳ ಸೇರಿದಂತೆ ಅನೇಕರು ಇದ್ದರು.
ಅಫಜಲಪುರ: ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಗುರುಪೂರ್ಣಿಮೆ ಸಂಭ್ರಮದಲ್ಲಿ ದತ್ತಾತ್ರೇಯರ ಭಕ್ತರು ದರ್ಶನ ಪಡೆದು ಮಿಂದೆದ್ದರು.ಪ್ರತಿವರ್ಷ ನಡೆಯುವ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ನಾನಾ ಭಾಗಗಳಿಂದ ಬರುವ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಂಡರು. ದೇವಸ್ಥಾನದಲ್ಲಿ ನಸುಕಿನ ೩ ಗಂಟೆಗೆ ಕಾಕಡಾರತಿ, ಲಗುನ್ಯಾಸಪೂರ್ವಕ ರುದ್ರಾಭಿಷೇಕ, ಗುರುಪಾದುಕೆಗಳಿಗೆ ಕೇಸರ ಲೇಪನ ಸೇವೆ ನಡೆಯಿತು. ಬಳಿಕ ವ್ಯಾಸಪೂಜೆಯನ್ನು ದೇವಸ್ಥಾನದ ಪ್ರಾಂಗಣದಲ್ಲಿ ವಿಪ್ರಬಾಂಧವರು ನಡೆಸಿಕೊಟ್ಟರು. ನಂತರ ಬಂದ ಭಕ್ತರಿಗೆ ಅನ್ನದಾನ ನಡೆಯಿತು. ಸಾಯಂಕಾಲ ಪಲ್ಲಕ್ಕಿ ಸೇವೆ ನಡೆಯಿತು.ಈ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಮಹಾರಾಷ್ಟ್ರ, ಸೀಮಾಂಧ್ರ, ತೆಲಂಗಾಣ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಯ ಭಕ್ತರು ಆಗಮಿಸಿ ದತ್ತಾತ್ರೇಯ ಮಹಾರಾಜರ ದರ್ಶನಾಶಿರ್ವಾದ ಪಡೆದು ಪುನೀತರಾದರು. ಅಲ್ಲದೆ ಗ್ರಾಮದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಖ್ಯ ರಸ್ತೆಯಿಂದ ದೇವಸ್ಥಾನದ ವರೆಗೆ ಸರತಿ ಸಾಲಿನಲ್ಲಿ ನಿಂತು ದತ್ತ ಮಹಾರಾಜರ ದರ್ಶನ ಪಡೆದುಕೊಳ್ಳುವಂತಾಯಿತು.ಇನ್ನು ಗುರುಪೂರ್ಣಿಮೆ ಪ್ರಯುಕ್ತ ದೂರದೂರದಿಂದ ಬಂದಂತ ಸಾವಿರಾರು ಭಕ್ತರು ತಮ್ಮ ವಾಹನಗಳ…
ಚಡಚಣ: ರೇವತಗಾಂವ ಗ್ರಾಮದ ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗ ರವಿವಾರದಂದು ಕಡ್ಲಿಗರ ಹುಣ್ಣಿಮೆಯ ನಿಮಿತ್ತ ದಹಿ ಹಂಡೆ(ಮೊಸರು ಗಡಿಗೆ) ಒಡೆಯುವ ಕಾರ್ಯ ಸಂಭ್ರಮದಿಂದ ನಡೆಯಿತು.ಶ್ರೀ ಸದ್ಗುರು ಸಿಂಹಗಢ ಮಹಾರಾಜರ ದಹಿ ಹಂಡೆ(ಮೊಸರು ಗಡಿಗೆ)ಯನ್ನು ಹೊತ್ತುಕೊಂಡು ವಿವಿಧ ವಾದ್ಯ ವೈಭವಗಳೊಂದಿಗೆ ಕನ್ನಡ ಹಾಗೂ ಮರಾಠಿ ಭಜನೆಗಳನ್ನು ಹಾಡುತ್ತ, ಜೈ ಘೋಷ್ಯಗಳನ್ನು ಕೂಗುತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತ ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗ ಆಗಮಿಸಿ ಅರ್ಧ ಗಂಟೆ ದೇವರ ನಾಮಸ್ಮರಣೆಯನ್ನು ಮಾಡುವುದರ ಮೂಲಕ ದಹಿ ಹಂಡೆ(ಮೊಸರು ಗಡಿಗೆ) ಒಡೆಯಲಾಯಿತು. ಮಕ್ಕಳು, ಯುವಕರು ಹಾಗೂ ಹಿರಿಯರು ದಹಿ ಹಂಡೆ(ಮೊಸರು ಗಡಿಗೆ)ಯ ಚೂರುಗಳನ್ನು ಆಯ್ದುಗಳಲು ಮುಗಿಬಿದ್ದಿದರು. ಕಾರಣ ಆ ಚೂರುಗಳನ್ನು ಮೊಸರು ಕಡಿಯುವ ಸ್ಥಳದ ಕೆಳಭಾಗ ಇಲ್ಲವೆ ದನದ ಕೊಟ್ಟಿಗೆಯಲ್ಲಿ ಹೂತು ಹಾಕಿದರೆ ಆ ಮನೆಯಲ್ಲಿ ಹೈನುಗಾರಿಕೆ ವೃದ್ಧಿಯಾಗುವುದೆಂಬ ನಂಬಿಕೆ.ದಹಿ ಹಂಡೆ ಹಿನ್ನಲೆ: ಗೋಕುಲದಲ್ಲಿ ಶ್ರೀಕೃಷ್ಣ ಗೋಪಿಕಾ ಸ್ತ್ರೀಯರು ಮಾಡಿದ ದಹಿ ಹಂಡೆ ಕಾರ್ಯಕ್ರಮ, ಶ್ರೀ ಕೃಷ್ಣನ ಅವತಾರಿ ಶ್ರೀ ಪಂಢರಪುರದ ಪಾಂಡುರಂಗನ ಆಷಾಢ ಏಕಾದಶಿಗೆ…
ವಿಜಯಪುರ: ಮುಧೋಳದಲ್ಲಿ ಜುಲೈ ೨೧ ರಂದು ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ ಕಮತಗಿ ಇವರ ವತಿಯಿಂದ ಜರುಗಿದ “ಕವಿ ಚಕ್ರವರ್ತಿ ರನ್ನ ಸಾಹಿತ್ಯ ಸಂಭ್ರಮ” ಕಾರ್ಯಕ್ರಮದಲ್ಲಿ ವಿಜಯಪುರದ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಹಾಗೂ ಸಾಹಿತಿ ಪ್ರೊ. ಸಿದ್ದು ಸಾವಳಸಂಗ ಇವರಿಗೆ “ಕವಿಚಕ್ರವರ್ತಿ ರನ್ನ ಪ್ರಶಸ್ತಿ” ಯನ್ನು ಪ್ರದಾನ ಮಾಡಲಾಯಿತು. ಸದರಿ ಕಾರ್ಯಕ್ರಮದಲ್ಲಿ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಎಂ. ರಮೇಶ ಹಾಗೂ ಇತರ ಸಾಹಿತಿಗಳು ಉಪಸ್ಥಿತರಿದ್ದರು.
ಇಂಡಿ: ಸಾರ್ವಜನಿಕವಾಗಿ ದುಷ್ಟರನ್ನು, ಗುಂಡಾಗಳನ್ನು ಪೋಷಿಸುತ್ತಿರುವ ಹೊರ್ತಿ ಠಾಣಾ ಪಿ ಎಸ್ ಐ ಅವರನ್ನು ಅಮಾನತಿಗೆ ಆಗ್ರಹಿಸಿ ರೈತ ಮುಖಂಡ ಅಣ್ಣಪ್ಪ ಖೈನೂರ ಅವರ ನೇತೃತ್ವದಲ್ಲಿ ನೂರಾರು ಜನರು ಸೇರಿ ಪೋಲೀಸ್ ಠಾಣೆಯ ಆವರಣದಲ್ಲಿ ಪ್ರತಿಭಟನೆ ನಡೆಸಿರುವ ಘಟನೆ ಸೋಮವಾರ ನಡೆದಿದೆ.ತಾಲ್ಲೂಕಿನ ಹೊರ್ತಿ ಗ್ರಾಮದಲ್ಲಿರುವ ಪೋಲಿಸ್ ಠಾಣೆ ನೊಂದವರ, ಬೆಂದವರ ನ್ಯಾಯ ಒದಗಿಸುವ ದೇವಾಲಯ ಆಗಬೇಕಾಗಿತ್ತು. ಆದರೆ ಠಾಣಾ ಪಿಎಸ್ಐ ಹಣದ ದಾಹದಿಂದ ತಮ್ಮ ವ್ಯಾಪ್ತಿಯಲ್ಲಿ ಬರುವ ಸುಮಾರು 22 ಹಳ್ಳಿಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುತ್ತಿದ್ದು, ಈ ಬಾಗದಲ್ಲಿ ಕೆಟ್ಟ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ರೈತ ಮುಖಂಡ ಅಣ್ಣಪ್ಪ ಖೈನೂರ ಆರೋಪಿಸಿ ಮಾತನಾಡಿದರು.ಪ್ರತಿ ಹಳ್ಳಿ, ಗ್ರಾಮದಲ್ಲಿ ಗುಂಡಾಗಳನ್ನು ತಯಾರಿಸುವುದು, ಕಿರಾಣಿ ಅಂಗಡಿ ಹಾಗೂ ಪಾನಶಾಪ್ ಗಳಲ್ಲಿ ಮದ್ಯ ಮಾರುವುದು, ಹಾಗೆ ಒಸಿ, ಮಟಕಾ ಇಸ್ಪೆಟ್ ಅಡ್ಡೆಗಳಂತಹ ಅಕ್ರಮ ಚಟುವಟಿಕೆಗಳಿಗೆ ಸಹಕಾರ ನೀಡಿ ದುಷ್ಟರ ಜೊತೆಯಲ್ಲಿ ಕೈ ಗೂಡಿಸುವ ಕೆಟ್ಟ ಕೆಲಸ ಮಾಡುತ್ತಿದ್ದಾರೆ. ಅದರಂತೆ ಚಡಚಣ ಗ್ರಾಮದಂತೆ, ಹೊರ್ತಿ ಗ್ರಾಮದಲ್ಲಿಯೂ…
ಬಸವನಬಾಗೇವಾಡಿ: ತಾಲೂಕಿನ ಯಂಭತ್ನಾಳ ಗ್ರಾಮದಲ್ಲಿ 12ನೇ ಶತಮಾನದ ಕಾಯಕಶರಣ ಹಡಪದ ಅಪ್ಪಣ್ಣನವರ ಜಯಂತಿಯನ್ನು ಭಾನುವಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಕ ಶಿವಾನಂದ ಮಂಗಾನವರ, ಹಡಪದ ಅಪ್ಪಣ್ಣನವರು 12ನೇ ಶತಮಾನದ ಕಾಯಕ ಶರಣದಲ್ಲಿ ಪ್ರಮುಖರಾದವರು. ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಲ್ಯಾಣದಲ್ಲಿ ನಡೆದ ಅನುಭವ ಮಂಟಪದಲ್ಲಿ ಸಮಾಜದಲ್ಲಿರುವ ಓರೆ ಕೋರೆಗಳನ್ನು ತಿದ್ದಲು ತಮ್ಮ ಹರಿತವಾದ ಲೆಕ್ಕಣಿಕೆಯಿಂದ 250 ಸರಳವಾದ ವಚನಗಳನ್ನು ಬರೆದಿದ್ದಾರೆ. ಅವರು ಬರೆದಂತೆ ನಡೆದುಕೊಂಡವರು. ಇವರ ಸಂದೇಶ ಅರಿತುಕೊಂಡು ಮುನ್ನಡೆಯಬೇಕೆಂದರು.ಈ ಸಂದರ್ಭದಲ್ಲಿ ಶರಣು ಮಾತಾಳಿ, ಮಲ್ಲಿಕಾರ್ಜುನ ಹಡಪದ,ಶಿವು ಮಂಗಾನವರ, ಶಿವಲಿಂಗಪ್ಪ ಬಾಲಪ್ಪಗೋಳ, ಶರಣಯ್ಯ ಹಿರೇಮಠ, ಗ್ರಾಮಸ್ಥರು ಇದ್ದರು.
ಬಸವನಬಾಗೇವಾಡಿ: ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಮೀಸಲಾತಿ ಮಸೂದೆಯನ್ನು ಹಿಂದೆ ಪಡೆದಿರುವುದು ರಾಜ್ಯ ಸರ್ಕಾರದ ದೌರ್ಬಲ್ಯದ ಸಂಕೇತವಾಗಿದೆ. ಕನ್ನಡದ ಅಸ್ಮಿತೆ ಬಗ್ಗೆ ಮಾತನಾಡುವ ರಾಜ್ಯ ಸರ್ಕಾರ ಪಟ್ಟ ಭದ್ರತಾ ಶಕ್ತಿಗಳ ಒತ್ತಡದಿಂದಾಗಿ ತಾತ್ಕಾಲಿಕವಾಗಿ ಹಿಂದೆ ಪಡೆದಿರುವುದಾಗಿ ಹೇಳಿರುವುದು ದುರಂತದ ಸಂಗತಿ ಆಗಿದೆ. ಬೆಂಗಳೂರಿನಲ್ಲಿ ಈಗಾಗಲೇ ಅನ್ಯ ರಾಜ್ಯದ ಜನ ಹೆಚ್ಚಾಗತೊಡಗಿದ್ದರಿಂದ ಕನ್ನಡಿಗರೇ ಅಲ್ಪಸಂಖ್ಯಾತರಾಗಿದ್ದಾರೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸರೋಜಿನಿ ವರದಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಲೋಚಿಸಬೇಕು. ಮಾತೆತ್ತಿದರೆ ನುಡಿದಂತೆ ನಡೆಯುತ್ತೇವೆ ಎಂದು ಹೇಳುವ ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು ಕನ್ನಡಿಗರಿಗೆ ನ್ಯಾಯ ಒದಗಿಸಬೇಕು. ಕನ್ನಡ ಅಶ್ಮಿತೆ ಬಗ್ಗೆ ಮಾತನಾಡುವ ಎಲ್ಲಾ ಪಕ್ಷದ ರಾಜಕಾರಣಿಗಳು, ಜನಪ್ರತಿನಿಧಿಗಳು ರಾಜ್ಯ ಸರ್ಕಾರಕ್ಕೆ ಕನ್ನಡಿಗರಿಗೆ ನ್ಯಾಯ ಸಿಗುವಂತಾಗಲು ಒತ್ತಾಯಿಸಬೇಕೆಂದು ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
