Author: editor.udayarashmi@gmail.com

ಆಲಮಟ್ಟಿ: ಆಲಮಟ್ಟಿ ಜಲಾಶಯದಿಂದ ಜಲಾವೃತಗೊಂಡ ಜಮೀನಿನ ಬೆಳೆ ಸಮೀಕ್ಷೆ ನಡೆಸಲು ತಹಶೀಲ್ದಾರ್ ಗೆ ಸೂಚಿಸಿದ್ದು, ಸರ್ಕಾರದಿಂದ ಅಗತ್ಯ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದರು.ಆಲಮಟ್ಟಿಯಲ್ಲಿ ಶನಿವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಈಗ ಜಲಾವೃತಗೊಂಡ ಜಮೀನಿನಲ್ಲಿ ಈಗಾಗಲೇ ಭೂಸ್ವಾಧೀನ ಜಮೀನು ಹೆಚ್ಚಿದೆ, ಕೆಲ ಪ್ರಮಾಣದಲ್ಲಿ ಖಾಸಗಿ ಜಾಗ ಇದೆ, ಆಲಮಟ್ಟಿ ಜಲಾಶಯದಿಂದ ೫ ಲಕ್ಷ ಕ್ಯುಸೆಕ್ ನೀರು ಬಿಟ್ಟಾಗ ಜಿಲ್ಲೆಯ ಕೃಷ್ಣಾ ತೀರದ ೧೭ ಗ್ರಾಮಗಳ ಜನವಸತಿ ಪ್ರದೇಶಕ್ಕೆ ನೀರು ನುಗ್ಗಲಿದೆ. ಸದ್ಯಕ್ಕೆ ಆಲಮಟ್ಟಿಯಿಂದ ೩ ಲಕ್ಷ ಕ್ಯುಸೆಕ್ ನೀರು ಬಿಟ್ಟ ಕಾರಣ ಅಪಾಯದ ಮುನ್ಸೂಚನೆ ಇಲ್ಲ ಎಂದರು. ಜನವಸತಿ ಪ್ರದೇಶಕ್ಕೆ ನೀರು ಹೊಕ್ಕರೆ, ಕಾಳಜಿ ಕೇಂದ್ರ ತೆರೆಯಲು ಶಾಲೆ, ಸಮುದಾಯ ಭವನವನ್ನು ಗುರುತಿಸಲಾಗಿದೆ, ಗ್ರಾಮ ಆಡಳಿತಾಧಿಕಾರಿಯ ಮೂಲಕ ಗ್ರಾಮಗಳಲ್ಲಿ ಡಂಗುರ ಸಾರಿಸಲಾಗಿದ್ದು, ನಿರಂತರ ಮುನ್ಸೂಚನೆ ನೀಡಲಾಗುತ್ತದೆ, ಮುನ್ಸೂಚನೆಗೆ ಜನ ಸ್ಪಂದಿಸಬೇಕು ಎಂದರು.೨೦೧೯ ರಲ್ಲಿ ಪ್ರವಾಹ ಸ್ಥಿತಿ ಉಂಟಾದಾಗ ಮಸೂತಿ ಗ್ರಾಮದ ಸುಮಾರು ೨೦ ಕ್ಕೂ ಅಧಿಕ ಮನೆಗಳು…

Read More

ಮುದ್ದೇಬಿಹಾಳ: ತನ್ನ ದೇಶಕ್ಕೆ ಮತ್ತು ದೇಶ ಕಾಯುವ ಸೈನಿಕರಿಗೆ ಗೌರವ ಕೊಡುವ ಜನತೆ ಇರುವವರೆಗೂ ಆ ದೇಶ ಎಂದಿಗೂ ಸೋಲುವದಿಲ್ಲ ಎಂದು ತಾಲೂಕಿನ ಢವಳಗಿ ಗ್ರಾಮದ ನಿವೃತ್ತ ನೌಕಾಪಡೆಯ ಪ್ರಥಮ ಮಹಿಳಾ ಅಧಿಕಾರಿ ಮತ್ತು ಸಧ್ಯ ಮಹಾರಾಷ್ಟ್ರ ಸಿವಿಲ್ ಡಿಫೆನ್ಸ್ ಅಧಿಕಾರಿಯಾಗಿ ಸೇವೆಯಲ್ಲಿರುವ ರಾಜೇಶ್ವರಿ ಕೋರಿ ಹೇಳಿದರು.ಪಟ್ಟಣದ ಹಳೆಯ ತಹಶೀಲ್ದಾರ ಕಚೇರಿಯ ಬಳಿ ಇರುವ ಸೈನಿಕ ಮೈದಾನದಲ್ಲಿ ಕಾರ್ಗಿಲ್ ವೀರಯೋಧರ ಸ್ಮಾರಕ ನಿರ್ಮಾಣ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೫ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಸಮಾರಂಭದ ಅತಿಥಿಯಾಗಿ ಅವರು ಮಾತನಾಡಿದರು.ಈ ವೇಳೆ ತಾಲೂಕಿನ ಬಳವಾಟ ಗ್ರಾಮದ ಲೆಫ್ಟಿನಂಟ್ ಕರ್ನಲ್ ಆಗಿ ಸೇವೆಯಲ್ಲಿರುವ ಶಿವಾನಂದ ಬಿರಾದಾರ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ನೀಡಿದ ವೀರಯೋಧ ದವಲಸಾಬ ಕಂಬಾರ ಅವರ ಸ್ಮಾರಕ ನಿರ್ಮಿಸಿದ ಸಮಿತಿಯವರ ದೇಶಪ್ರೇಮ ಮೆಚ್ಚುವಂಥದ್ದು. ದೇಶಕ್ಕಾಗಿ ಪ್ರಾಣ ನೀಡಿದ ವೀರ ಯೋಧರ ಕುಟುಂದವರು ಸರ್ಕಾರದಿಂದ ವಿವಿಧ ಯೋಜನೆಗಳನ್ನು ನೀಡಲಾಗುತ್ತದೆ. ಅವುಗಳ ಸದ್ಬಳಕೆಗೆಯಾಗಬೇಕು ಎಂದರು.ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿ ಗಡಿಯಲ್ಲಿ…

Read More

ಬಸವನಬಾಗೇವಾಡಿ: ಪಟ್ಟಣದ ನಂದಿ ಬಡಾವಣೆಯಲ್ಲಿರುವ ಹಡಪದ ಅಪ್ಪಣ್ಣ ಸಮುದಾಯ ಭವನದಲ್ಲಿ ಹಡಪದ ಸಮಾಜ ಬಾಂಧವರು ಶನಿವಾರ ಸಭೆ ಸೇರಿ ನೂತನವಾಗಿ ರಚಿಸಲಾದ ಹಡಪದ ಅಪ್ಪಣ್ಣ ಸೇವಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.ಹಡಪದ ಅಪ್ಪಣ್ಣ ಸೇವಾ ಸಮಿತಿ ಅಧ್ಯಕ್ಷರನ್ನಾಗಿ ಮಹಾಂತೇಶ ಹಡಪದ, ಉಪಾಧ್ಯಕ್ಷರನ್ನಾಗಿ ಮಹೇಶ ನಾಗೂರ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಹಡಪದ, ಖಜಾಂಚಿಯಾಗಿ ಮಲ್ಲು ಹಡಪದ, ಕಾರ್ಯದರ್ಶಿಯಾಗಿ ಬಸವರಾಜ ಮುತ್ತಗಿ, ಸಂಘಟನಾ ಕಾರ್ಯದರ್ಶಿಯಾಗಿ ರಾಜು ಹಡಪದ, ಸದಸ್ಯರಾಗಿ ನಾಗೇಶ ನಾಗೂರ, ಮಂಜುನಾಥ ಹಡಪದ, ಮಹಾಂತೇಶ ಹಡಪದ, ಸಂಜು ಹಡಪದ, ರವಿ ಹಡಪದ ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ಮಾಡಿತು. ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳನ್ನು ನಂತರ ಸಮಾಜದಿಂದ ಸನ್ಮಾನಿಸಲಾಯಿತು.ಸಭೆಯನ್ನು ಉದ್ದೇಶಿಸಿ ಸಮಾಜದ ಮುಖಂಡರಾದ ಗುರಲಿಂಗ ಹಡಪದ, ಸುಭಾಸ ಹಡಪದ, ಚನ್ನು ಹಡಪದ ಮಾತನಾಡಿ, ನೂತನವಾಗಿ ರಚಿಸಿರುವ ಹಡಪದ ಅಪ್ಪಣ್ಣ ಸೇವಾ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಸೇವೆ ಮಾಡುವ ಮೂಲಕ ಸಮಾಜದ ಸಂಘಟನೆ ಮಾಡುವ ಜೊತೆಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಸಮುದಾಯ ಭವನ ಇನ್ನಷ್ಟು…

Read More

ಬಸವನಬಾಗೇವಾಡಿ: ಜಿಲ್ಲೆಯಲ್ಲಿ ಬಂಥನಾಳ ಲಿಂ. ಸಂಗನಬಸವ ಸ್ವಾಮೀಜಿ, ಡಾ.ಫ.ಗು.ಹಳಕಟ್ಟಿ, ದಿ.ಬಿ.ಎಂ.ಪಾಟೀಲ ಅವರು ಬಿಎಲ್ಡಿಇ ಸಂಸ್ಥೆಯ ಕಟ್ಟುವ ಮೂಲಕ ಈ ಭಾಗದಲ್ಲಿ ಶಿಕ್ಷಣ ಕೈಂಕರ್ಯ, ಆರೋಗ್ಯ ಸೇವೆ, ಅನೇಕರಿಗೆ ಉದ್ಯೋಗ ನೀಡುವ ಮೂಲಕ ಜಿಲ್ಲೆಯ ಕಾಮಧೇನು ಕಲ್ಪವೃಕ್ಷದಂತೆ ತ್ರಿವಳಿ ಪುರುಷರು ಕಂಗೊಳಿಸುತ್ತಿದ್ದಾರೆ. ಇವರ ಮಾಡಿರುವ ಕಾರ್ಯ ಸದಾ ಸ್ಮರಣೀಯವಾಗಿದೆ ಎಂದು ಬಸವೇಶ್ವರ ಕಲಾ ಮತ್ತು ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವೀಂದ್ರಗೌಡ ಕೆ. ಹೇಳಿದರು.ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಂಥನಾಳದ ಲಿಂ. ಸಂಗನಬಸವ ಸ್ವಾಮೀಜಿ, ಡಾ.ಫ.ಗು.ಹಳಕಟ್ಟಿ, ದಿ.ಬಿ.ಎಂ.ಪಾಟೀಲ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಬಿಎಲ್ಡಿಇ ಸಂಸ್ಥೆಯ ಬಹುಎತ್ತರಕ್ಕೆ ಬೆಳೆಯುವಲ್ಲಿ ಈ ಮಹನೀಯರ ಪಾತ್ರ ಮರೆಯುವಂತಿಲ್ಲ. ಗ್ರಾಮೀಣ ಬಡ ಹಾಗೂ ಜನಸಾಮಾನ್ಯರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈ ಸಂಸ್ಥೆಯು ಎಲ್ಲ ರೀತಿಯಿಂದಲೂ ಸದಾ ನೆರವು ನೀಡುತ್ತಿದೆ. ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಜನರು ಸೇರಿದಂತೆ ಜಿಲ್ಲೆಯ ಜನರು ಇವರ…

Read More

ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾಗಿರುವ ಮೆಗಾಮಾರುಕಟ್ಟೆಯ ಕೊಲ್ಹಾರ ಮುಖ್ಯ ರಸ್ತೆಯಲ್ಲಿರುವ ಆವರಣ ಗೋಡೆಗೆ ಹೊಂದಿಕೊಂಡಂತೆ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ವಹಿವಾಟು ಮಾಡುತ್ತಿದ್ದ ವ್ಯಾಪಾರಿಗಳು ನಮಗೆ ಬೇರೆಡೆ ವ್ಯಾಪಾರ ಮಾಡಲು ಅವಕಾಶ ನೀಡುವಂತೆ ಟಿಪ್ಪು ಕ್ರಾಂತಿ ಸೇನೆಯ ನೇತೃತ್ವದಲ್ಲಿ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಶನಿವಾರವೂ ಮುಂದುವರಿಯಿತು.ಪಟ್ಟಣದ ಮಾರುತಿ ದೇವಸ್ಥಾನದ ಹತ್ತಿರದಿಂದ ನಾಗೂರ ಕ್ರಾಸ್ವರೆಗೆ ಇದ್ದ ಆವರಣಗೋಡೆಯನ್ನು ಪುರಸಭೆ ಅಧಿಕಾರಿಗಳು ಗುರುವಾರ ತೆರವುಗೊಳಿಸಿದ್ದರಿಂದ ನಾವು ಆವರಣಗೋಡೆ ಹೊಂದಿಕೊಂಡು ಹಲವಾರು ತಿಂಗಳುಗಳಿಂದ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವ ಮೂಲಕ ನಮ್ಮ ಜೀವನ ನಿರ್ವಹಣೆ ಮಾಡುವ ಮೂಲಕ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ. ಈಗ ದಿಢೀರ್ ಪುರಸಭೆಯ ಅಧಿಕಾರಿಗಳು ಆವರಣಗೋಡೆ ತೆರವು ಗೊಳಿಸಿದ್ದರಿಂದ ನಮ್ಮ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸಲಾಗಿದೆ. ಇದರಿಂದಾಗಿ ನಮ್ಮ ವ್ಯಾಪಾರ ನಿಂತು ಹೋಗಿದೆ. ಅಧಿಕಾರಿಗಳು ಕೂಡಲೇ ನಮಗೆ ವ್ಯಾಪಾರ ಮಾಡಲು ಜನನಿ ಬಿಡ ಪ್ರದೇಶದಲ್ಲಿ ಸ್ಥಳಾವಕಾಶ ಮಾಡಿಕೊಟ್ಟರೆ ನಾವು ಜೀವನ ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ. ನಮಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನಿನ್ನೆಯಿಂದ…

Read More

ಇಂಡಿ: ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರ ಜನ್ಮದಿನದ ಪ್ರಯುಕ್ತ ಶನಿವಾರ ಪಟ್ಟಣದ ಆರಾಧ್ಯ ದೈವ ಶ್ರೀ ಶಾಂತೇಶ್ವರ ದೇವಸ್ಥಾನದಲ್ಲಿ ಪಟ್ಟಣಶೆಟ್ಟಿ ಅಭಿಮಾನಿಗಳು ಹಾಗೂ ಹಿತೈಷಿಗಳು ವಿಶೇಷ ಪೂಜೆ ಸಲ್ಲಿಸಿ ಸಿಹಿಹಂಚಿ ಜನ್ಮದಿನ ಆಚರಿಸಿದರು.ಈ ಸಂದರ್ಭದಲ್ಲಿ ಶಾಂತು ಕಂಬಾರ, ಅನೀಲಗೌಡ ಬಿರಾದಾರ, ದೇವೇಂದ್ರ ಕುಂಬಾರ, ಸೋಮು ನಿಂಬರಗಿಮಠ, ಶಿವು ಬಗಲಿ, ಮಲ್ಲು ವಾಲಿಕಾರ, ಮಲ್ಲಿಕಾರ್ಜುನ ಬಿರಾದಾರ, ವಜ್ರ ಕಾಂತ ಕುಡಿಗನೂರ, ರಾಮಸಿಂಗ ಕನ್ನೊಳ್ಳಿ, ಅಶೋಕ ಅಕಲಾದಿ, ಶ್ರೀಕಾಂತ ಬಡಿಗೇರ, ಪ್ರಶಾಂತ ಲಾಳಸಂಗಿ, ಪಿ.ಸಿ. ಪೂಜಾರಿ, ಬಾಬುರಾವ್ ಶಿಂಧೆ, ಪ್ರಶಾಂತ ಗೌಳಿ, ಮಂಜುನಾಥ ದೇವರ ಸೇರಿದಂತೆ ಇನ್ನಿತರರು ಇದ್ದರು.

Read More

ತಾಳಿಕೋಟಿ: ಪಟ್ಟಣದ ನಿವಾಸಿ ಕುಮಾರಿ ಸಾಕ್ಷಿ ಗುರುಸಂಗಪ್ಪ ಕಟ್ಟಿ ಇವಳು ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದಿಂದ ಸ್ನಾತಕೋತರ ಪದವಿಯಾದ ಇತಿಹಾಸ ವಿಷಯದಲ್ಲಿ ಚಿನ್ನದ ಪದಕ ಪಡೆದು ತಾಳಿಕೋಟಿಯ ಕೀರ್ತಿ ಹೆಚ್ಚಿಸಿದ್ದಾಳೆ.ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರವಾದ ಕಲಬುರ್ಗಿಯ ವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಇವಳು ಅಧ್ಯಯನ ಕೇಂದ್ರಕ್ಕೆ ಪ್ರಥಮ ಸ್ಥಾನ ಹಾಗೂ ಇಡೀ ವಿಶ್ವವಿದ್ಯಾಲಯಕ್ಕೆ ಮೊದಲನೇ ಸ್ಥಾನ ಪಡೆಯುವುದರ ಮೂಲಕ ಇತಿಹಾಸ ವಿಷಯದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾಳೆ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿದ್ಯಾಲಯದ ಮುದ್ದೇನಹಳ್ಳಿಯಲ್ಲಿ ನಡೆದ ಘಟಕೋತ್ಸವ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಹರಿದಿಪ್ ಸಿಂಗ್ ಪುರಿ ಇವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.ಈ ಸಮಾರಂಭದಲ್ಲಿ ಶ್ರೀ ಸದ್ಗುರು ಮಧುಸೂದನ್ ಸಾಯಿಯವರು ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳಾದ ಬಿ ಎನ್. ನರಸಿಂಹಮೂರ್ತಿ ಅವರು ಉಪಸ್ಥಿತರಿದ್ದರು.

Read More

ಕಲಕೇರಿ: ಆದರ್ಶ ಶಿಕ್ಷಣ ಸಂಸ್ಥೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕಲಕೇರಿಯ ಸಂಯುಕ್ತ ಆಶ್ರಯದಲ್ಲಿ ಹದಿಹರೆಯದ ಆರೋಗ್ಯ ಶಿಕ್ಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಎಸ್ ಎಂ ಸಜ್ಜನ ಪ್ರಾಚಾರ್ಯರು ಪದವಿ ಮಹಾವಿದ್ಯಾಲಯ ಇವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಎಂ.ಡಿ ಮೋತಿಬಾಯಿ, ಡಾ.ಸಂತೋಷ ಟೆಂಗಳಿ, ಅಪ್ಪಸಾಬ ಮಾಂಗ ಶ್ರೀ ಫಾರೂಕ್ ವಲ್ಲಿ ಬಾಯಿ ಶ್ರೀಮತಿ ರೇಷ್ಮಾ ಮುಜಾವರ ಶ್ರೀ ಎಚ್ಎ ಮೊಮೀನ ವಹಿಸಿದ್ದರು.ಈ ಸಂದರ್ಭದಲ್ಲಿ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.ಈ ಸಂದರ್ಭದಲ್ಲಿ ಐ. ಸಿ. ಟಿ. ಸಿ ಆಪ್ತಸಮಾಲೋಚಕ ಡಾ. ಸಂತೋಷ ಟೆಂಗಳಿ ಮಾತನಾಡಿ, ಮಹಾಮಾರಿ ರೋಗವಾದ HIV/AIDs ಕುರಿತು ಅದು ಹರಡುವ ವಿಧಾನ ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಯುವ ಜನತೆ ಅದರಿಂದ ಯಾವ ರೀತಿ ದೂರ ಇರಬೇಕು ಎಂಬುದರ ಬಗ್ಗೆ ಹಾಗೂ ಲೈಂಗಿಕ ರೋಗದ ಸೋಂಕುಗಳ ಬಗ್ಗೆ ವಿವರಿಸಿದರು.ಆರ್ ಕೆ ಎಸ್ ಕೆ ಆಪ್ತ ಸಮಾಲೋಚಕ ಅಪ್ಪಸಾಬ ಮಾಂಗ ಮಾತನಾಡಿ, ಹದಿಹರೆಯದಲ್ಲಿ ಆಗುವ ದೈಹಿಕ ಮಾನಸಿಕ ಬದಲಾವಣೆಗಳು…

Read More

ಬಿ.ಎಲ್.ಡಿ.ಇ ಆಸ್ಪತ್ರೆಯ ಅಪಘಾತ ಮತ್ತು ತುರ್ತು ಚಿಕಿತ್ಸೆ ವಿಭಾಗದ ಕಟ್ಟಡ ಉದ್ಘಾಟನೆ & ಡಾ. ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶ್ರೀಗಳು, ಬಿ.ಎಂ.ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಸ್ಮರಣೆ ವಿಜಯಪುರ: ಶತಮಾನದ ಹಿಂದೆ ಈ ಭಾಗದ ಶರಣರು ಮತ್ತು ಮಹನೀಯರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಉತ್ತರ ಕರ್ನಾಟಕದ ಜನ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿಯಾಗಲು ಕಾರಣರಾಗಿದ್ದಾರೆ ಎಂದು ಬೆಳಗಾವಿ ಕೆ.ಎಲ್.ಇ ಸಂಸ್ಥೆಯ ಚೇರಮನ್ ಮತ್ತು ಕಾಹೆರ ಕುಲಾಧಿಪತಿ ಪ್ರಭಾಕರ ಬಿ. ಕೋರೆ ಹೇಳಿದ್ದಾರೆ.ಶನಿವಾರ ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಪಘಾತ ಮತ್ತು ತುರ್ತು ಚಿಕಿತ್ಸೆ ವಿಭಾಗದ ಕಟ್ಟಡ(ಟ್ರಾಮಾ ಸೆಂಟರ್ ಮತ್ತು ಎಮರ್ಜೆನ್ಸಿ ಮೆಡಿಸೀನ್) ಉದ್ಘಾಟಿಸಿದ ಅವರು, ಬಿ.ಎಲ್.ಡಿ.ಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಡಾ. ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ.ಎಂ.ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.19ನೇ ಶತಮಾನದ ಪ್ರಾರಂಭದಲ್ಲಿ ಶಿಕ್ಷಣ, ನೀರಾವರಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದ್ದ ಮುಂಬೈ ಕರ್ನಾಟಕದ…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್ ಒಲಂಪಿಕ್ ಕ್ರೀಡಾಕೂಟಗಳು 2024 ನನ್ನ ಮಗ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಇಂಗ್ಲಿಷ್ ನಲ್ಲಿ ಪಠ್ಯವೊಂದು ಇತ್ತು. ಆ ಪಠ್ಯದ ಒಂದು ವಾಕ್ಯ ಇಂದಿಗೂ ನನ್ನ ಮನಸ್ಸಿಗೆ ಅತ್ಯಂತ ಹತ್ತಿರವಾಗಿದೆ. ಬಹುಶಹ ಎಲ್ಲರ ಬದುಕಿಗೂ ಈ ವಾಕ್ಯ ಅನ್ವಯಿಸುತ್ತದೆ. ತುಸು ದೊಡ್ಡದಾಗಿದ್ದ ಆ ವಾಕ್ಯವನ್ನು ಒಂದು ವಾಕ್ಯದ ಉತ್ತರಕ್ಕಾಗಿ ನಾನು ಸರಳೀಕರಿಸಿ ಚಿಕ್ಕದಾಗಿಸಿದಾಗ ಪ್ರಾರಂಭದಲ್ಲಿ ಅದನ್ನು ಬರೆಯಲು ಒಪ್ಪದ ನನ್ನ ಮಗ ನಂತರ ನನ್ನ ಮಾವ ಮತ್ತು ಶಿಕ್ಷಕರು ನಾನು ಬರೆದ ರೀತಿಯೇ ಸರಿಯಾಗಿದೆ ಎಂದು ಹೇಳಿದಾಗ ಅದನ್ನು ಬರೆಯಲು ಒಪ್ಪಿಕೊಂಡ. ಆ ವಾಕ್ಯ ಹೀಗಿದೆ “ದ ಮೇನ್ ಮೋಟೋ ಆಫ್ ಒಲಂಪಿಕ್ ಗೇಮ್ಸ್ ಇಸ್ ನಾಟ್ ಟು ವಿನ್, ಬಟ್ ಟು ಪಾರ್ಟಿಸಿಪೇಟ್”. ಇದರ ಅರ್ಥ ಒಲಂಪಿಕ್ ಆಟಗಳ ಮುಖ್ಯ ಧ್ಯೇಯ ಇರುವುದು ಆಟದಲ್ಲಿ ಪಾಲ್ಗೊಳ್ಳುವುದರಲ್ಲಿಯೇ ಹೊರತು ಗೆಲ್ಲುವುದರಲ್ಲಿ ಅಲ್ಲ ಎಂದು. ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳು ಭಾಗವಹಿಸುವ ಒಲಂಪಿಕ್…

Read More