ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ವಿಜಯಪುರ ನಗರದಲ್ಲಿ ಪ್ರಥಮ ಕಿತ್ತೂರು ಕರ್ನಾಟಕ ಜಾಂಬುರೇಟ್ ಆಯೋಜನೆ ಮಾಡುವ ಉದ್ದೇಶದಿಂದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಇವರ ಅಧ್ಯಕ್ಷತೆಯಲ್ಲಿ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಹಾಗೂ ರಾಜ್ಯ ಪ್ರಧಾನ ಆಯುಕ್ತ ಭಾರತ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಇವರ ಮಾರ್ಗದರ್ಶನದಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಭೆ ಜರುಗಿತು.
ಈ ಪ್ರಥಮ ಪ್ರಥಮ ಕಿತ್ತೂರು ಕರ್ನಾಟಕ ಜಾಂಬುರೇಟ್ (ಕಾರ್ಯಕ್ರಮ)ದಲ್ಲಿ ರಾಜ್ಯದ ಎಂಟು ಜಿಲ್ಲೆಗಳ ಒಳಗೊಂಡ ಸುಮಾರು ನಾಲ್ಕು ಸಾವಿರ ಸ್ಕೌಟ್ಸ್ ಮತ್ತು ಗೈಡ್ಸ್ ಪಾಲ್ಗೊಳ್ಳುತ್ತಿದ್ದು, ಈ ಕಾರ್ಯಕ್ರಮವು ೨೦೨೪ರ ಡಿಸೆಂಬರ್ ೧೪ ರಿಂದ ೧೮ ರವರೆಗೆ ವಿಜಯಪುರ ನಗರದ ಬಿ.ಎಲ್.ಡಿ.ಈ. ಸಂಸ್ಥೆಯ ನ್ಯೂ ಕ್ಯಾಂಪಸ್, ಸೋಲಾಪುರ ರೋಡ, ಇಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಈ ಐದು ದಿನಗಳ ಕಾರ್ಯಕ್ರಮದಲ್ಲಿ ಕಿತ್ತೂರು ಕರ್ನಾಟಕ ಜಾಂಬೂರೇಟದಲ್ಲಿ ಚಿತ್ರಕಲಾ ಸ್ಪರ್ಧೆ, ಉತ್ತರ ಕರ್ನಾಟಕದ ಜಾನಪದ ಜಾತ್ರೆ, ಫ.ಗು. ಹಳಕಟ್ಟಿಯವರ ವಚನ ಕಮ್ಮಟ, ಮಕ್ಕಳಿಗೆ ಕರಕುಶಲ ಚಟುವಟಿಕೆಗಳು, ಸಾಹಸಮಯಿ ಚಟುವಟಿಕೆಗಳು, ಯೋಗ, ವಿವಿಧ ಆಯಾ ಜಿಲ್ಲೆಯ ವೇಷ-ಭೂಷಣಗಳು ಹಾಗೂ ಜಿಲ್ಲಾವಾರು ಆಹಾರ ಪದ್ದತಿ, ವಿಜಯಪುರ ನಗರದಲ್ಲಿ ಸ್ವಚ್ಚತಾ ಕಾರ್ಯಕ್ರಮ, ಪಥಸಂಚಲನ, ವಸ್ತು ಪ್ರದರ್ಶನ, ಕೃಷಿ ಚಟುವಟಿಕೆ, ವಿಜಯಪುರ ನಗರದ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ, ಸರ್ವಧರ್ಮ ಪ್ರಾರ್ಥನೆ, ಶಿಬಿರಾಗ್ನಿ ಕಾರ್ಯಕ್ರಮ, ಬ್ಯಾಂಡ್ ಕಾರ್ಯಕ್ರಮ ಇನ್ನು ಹಲವಾರು ಕಾರ್ಯಕ್ರಮಗಳು ಹಮ್ಮಿಕೊಂಡಿರುವುದಾಗಿ ಸಭೆಗೆ ರಾಜ್ಯ ಸಂಘಟನಾ ಆಯುಕ್ತೆ ಮಂಜುಳಾ ಇವರು ಸವಿಸ್ತಾರವಾಗಿ ಸಭೆಯಲ್ಲಿ ಪ್ರಸ್ತುತಪಡಿಸಿದರು.
ಸಭೆಯಲ್ಲಿ ವಿಜಯಪುರ ಜಿಲ್ಲೆಯ ಪ್ರಧಾನ ಆಯುಕ್ತ ಸಿದ್ದಣ್ಣ ಸಕ್ರಿ, ವಿಜಯಪುರ ಜಿಲ್ಲೆಯ ಅಧ್ಯಕ್ಷ ಡಾ.ಸತೀಶ್ ಜಿಗಜಿನ್ನಿ, ಖಜಾಂಚಿ ಸಹಜಾನಂದ ದಂಧರಗಿ, ಸಹ ಕಾರ್ಯದರ್ಶಿ ಶರಣು ಸಬರದ ಸಾ.ಶಿ.ಇ. ಉಪನಿರ್ದೇಶಕ ಎಚ್. ನಾಗೂರ, ಪಿ.ಯು ಉಪ ನಿರ್ದೇಶಕ ಹೊಸಮನಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರತಿನಿಧಿ ಶೀತಲರಾಣಿ, ಗೈಡ್ ವಿಭಾಗದ ಆಯುಕ್ತೆ ಶ್ರೀಮತಿ ವಿದ್ಯಾವತಿ ಅಂಕಲಗಿ, ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ ಶೆಡಶ್ಯಾಳ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟ ಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಬೋಳಸೂರ, ಶ್ರೀ ಎಸ್ ಎಸ್ ಬೊಮ್ಮನಹಳ್ಳಿ, ಪಿ ಎಸ್ ಕುಂಬಾರ್, ಪೂಜೆಪ್ಪ ಪೂಜಾರಿ, ಕಾಳಪ್ಪನವರ, ಸೋಂಪುರ್, ಶ್ರೀ ಎಸ್. ಎಸ್ ಹುಬ್ಬಳ್ಳಿ, ಅಶೋಕ್ ಚಳ್ಳಗಿ, ರಾಜಶೇಖರ್ ಖೇಡಿಗಿ, ಗುಂಡು ಚೌಹಾಣ್, ಉಮ್ರಾಣಿ, ಶ್ರೀಮತಿ ಪಿ.ಎಸ್. ಅವಟಿಗೇರ, ಶ್ರೀಮತಿ ಆರ್.ಎಸ್. ಹನಗಂಡಿ, ಕನ್ನೂರ ಇನ್ನಿತರರು ಉಪಸ್ಥಿತರಿದ್ದರು.

