Author: editor.udayarashmi@gmail.com

ಬಸವನಬಾಗೇವಾಡಿ: ಇಡೀ ಜಗತ್ತಿಗೆ ಅನ್ನು ನೀಡುವ ರೈತ, ದೇಶದ ಗಡಿ ಕಾಯುವ ಸೈನಿಕ ಇರ್ವರು ಜಗತ್ತಿನ ಎರಡು ಕಣ್ಣುಗಳಿದ್ದಂತೆ. ಇವರು ಇಲ್ಲದೇ ಹೋದರೆ ಜನರು ನೆಮ್ಮದಿಯಿಂದ ಬದಕಲು ಸಾಧ್ಯವಿಲ್ಲ ಎಂದು ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಬಸವ ಭವನದಲ್ಲಿ ಪುರಸಭೆ, ಮಾಜಿ ಸೈನಿಕ ಹಾಗೂ ಅರೆಸೈನಿಕ ಸಂಘದ ಸಹಯೋಗದಲ್ಲಿ ಕಾರ್ಗಿಲ್ ರಜತ ಮಹೋತ್ಸವದಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ರೈತ ಬಿತ್ತನೆ ಕಾರ್ಯ ಮಾಡದೇ ಹೋದರೆ ಜನರಿಗೆ ಅನ್ನ ಸಿಗುವುದಿಲ್ಲ. ಅದೇ ರೀತಿ ಸೈನಿಕ ದೇಶದ ಗಡಿ ಕಾಯದೇ ಹೋದರೆ ದೇಶದಲ್ಲಿ ಶತ್ರುಗಳು ನುಸುಳಿ ದೇಶದ ಜನರ ಮೇಲೆ ದಾಳಿ ಮಾಡುತ್ತಾರೆ. ಇದರಿಂದಾಗಿ ಜನರ ಜೀವನ ಕಷ್ಟಕರವಾಗುತ್ತದೆ. ಅದಕ್ಕಾಗಿ ಇರ್ವರು ಜಗತ್ತಿನ ಎರಡು ಕಣ್ಣುಗಳೆಂದರೆ ತಪ್ಪಾಗಲಾರದು ಎಂದರು.ಜಗತ್ತಿನಲ್ಲಿಯೇ ಭಾರತೀಯ ಸೈನಿಕರ ಶೌರ್ಯ ಮೆಚ್ಚುವಂತಹದು. ಇಂತಹ ಸೈನಿಕ ಸಾಹಸದಿಂದ ೨೫ ವರ್ಷಗಳ ಹಿಂದೆ ಜರುಗಿದ ಕಾರ್ಗಿಲ್ ಯುದ್ಧಯಲ್ಲಿ ಭಾರತ ವಿಜಯಶಾಲಿಯಾಗಿ ಜಗತ್ತಿನಲ್ಲಿ ಕಂಗೊಳಿಸಿದೆ. ಹಿಂದೆ ನಡೆದ ಅನೇಕ…

Read More

ವಿಜಯಪುರದ ’ಡ್ರೀಮ್ಸ್ ಕಮ್ಸ್ ಟ್ರು’ ವತಿಯಿಂದ ಚಿತ್ರಕಲಾ ಸ್ಪರ್ಧೆ ವಿಜಯಪುರ: ನಗರದ ಡ್ರೀಮ್ಸ್ ಕಮ್ಸ್ ಟ್ರು ವತಿಯಿಂದ ವಿಜಯಪುರದ ಗಾಂಧೀ ವೃತ್ತದ ಬಳಿ ಇರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ನಂ.೬ ರಲ್ಲಿ `ನಮ್ಮೂರು ನಮ್ಮ ಶಾಲೆ’ ಎಂಬ ವಿಷಯಾಧಾರಿತ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.ಮಕ್ಕಳು ಉತ್ಸಾಹದಿಂದ ವಿಜಯಪುರದ ಐತಿಹಾಸಿಕ ಸ್ಮಾರಕಗಳ ಹಾಗೂ ತಮ್ಮ ಶಾಲೆಯ ಮಹತ್ವವನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು. ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು.ಕಾರ್ಯಕ್ರಮದ ರೂವಾರಿ ಹಾಗೂ ಡ್ರೀಮ್ಸ್ ಕಮ್ಸ್ ಟ್ರು ಸಂಸ್ಥೆಯ ಅಧ್ಯಕ್ಷ ಸರ್ಫರಾಜ್ ಮಿರ್ದೇ ಮಾತನಾಡಿ, ಮಕ್ಕಳು ಪ್ರತಿಭೆಯ ಆಗರ, ಪ್ರತಿಯೊಬ್ಬ ಮಗುವಿನಲ್ಲಿಯೂ ಪ್ರತಿಭೆ ಅಡಕವಾಗಿದೆ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವುದಕ್ಕಾಗಿ ಡ್ರೀಮ್ ಕಮ್ಸ್ ಟ್ರು ಅನೇಕ ಸಾಮಾಜಿಕ ಕಾರ್ಯಕ್ರಮ, ಸ್ಪರ್ಧಾ ಚಟುವಟಿಕೆಗಳನ್ನು ಆಯೋಜಿಸುತ್ತಿದೆ, ನಾವು ಇರುವ ಸ್ಥಳದ ಬಗ್ಗೆ, ನಾವು ಕಲಿಯುತ್ತಿರುವ ಶಾಲೆಯ ಬಗ್ಗೆ ಮಕ್ಕಳು ಸಮಗ್ರ ಜ್ಞಾನ ಹೊಂದಬೇಕಾಗಿರುವುದು ಅಗತ್ಯವಾಗಿದೆ, ಹೀಗಾಗಿ ಚಿತ್ರಕಲೆಯ ಮೂಲಕ ಅವರಲ್ಲಿ ಈ ಜ್ಞಾನ ಬಿತ್ತುವುದಕ್ಕಾಗಿ ಈ…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್ ಸ್ಟಾನ ಲಿ ಪ್ರಖ್ಯಾತ ಇಂಗ್ಲಿಷ್ ಕಾಮಿಕ್ ಪುಸ್ತಕಗಳ ಕರ್ತೃ. ಹಲವಾರು ಕಾಮಿಕ್ ಹೀರೋಗಳನ್ನು ಸೃಷ್ಟಿಸಿದ ಸ್ಟ್ಯಾನ್ಲಿಯನ್ನು ಒಂದು ದಿನ ಆತನ ಕಾಮಿಕ್ ಸರಣಿಯನ್ನು ಮುದ್ರಿಸುತ್ತಿದ್ದ ಮಾರ್ವೆಲ್ ಕಾಮಿಕ್ ನ ಪ್ರಕಾಶಕ ಆತನ ಆಫೀಸಿಗೆ ಬಂದು ಹೊಸದಾಗಿ ಮತ್ತೊಬ್ಬ ಕಾಮಿಕ್ ಹೀರೊನನ್ನು ಸೃಷ್ಟಿಸಲು ಕೇಳಿಕೊಂಡ.ಇದಕ್ಕೆ ಒಪ್ಪಿ ಯಾರನ್ನು ಹೊಸದಾಗಿ ಹೀರೋ ಮಾಡಬೇಕೆಂದು ಯೋಚಿಸುತ್ತಾ ತನ್ನ ಒರಗು ಕುರ್ಚಿಯಲ್ಲಿ ಹಿಂದಕ್ಕೆ ಒರಗಿದ ಸ್ಟಾನ್ ಲೀ ಗೆ ಗೋಡೆಯನ್ನು ಮೇಲೇರುತ್ತಾ ಹೊರಟ ಕೀಟವೊಂದು ಕಾಣಿಸಿತು. ಕೂಡಲೇ ಆ ಕೀಟವನ್ನೇ ಹೀರೋ ಆಗಿ ಚಿತ್ರಿಸಿದರೆ ಹೇಗೆ ಎಂಬ ಭಾವ ಲೀ ಯಲ್ಲಿ ಮೂಡಿತು.ಓರ್ವ ಮಧ್ಯಮ ವರ್ಗದ ಹರೆಯದ ಯುವಕ ತನ್ನೆಲ್ಲ ವೈಯುಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಲೇ, ದುಷ್ಟರೊಂದಿಗೆ ಹೋರಾಡುವ ಚಿತ್ರಣವನ್ನು ಕಲ್ಪಿಸಿಕೊಂಡ ಆತ ಮುಂದಿನ ಒಂದೆರಡು ದಿನಗಳಲ್ಲಿ ಮಾರ್ವೆಲ್ ಕಾಮಿಕ್ ನ ಪ್ರಕಾಶಕನಿಗೆ ಕರೆ ಮಾಡಿ ಕಥೆಯ ವಿವರಗಳನ್ನು ತಿಳಿಸಿದ. ಕೂಡಲೇ ಮಾರ್ವೆಲ್ ನ ಪ್ರಕಾಶಕ ಬೇಸರದಿಂದ…

Read More

ಕೆಂಭಾವಿ: ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಯಾದಗಿರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ, ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ -2024, ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪುರ, ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಪಾಟೀಲ, ಮುಖಂಡ ಭೀಮಣ್ಣ ಮೇಟಿ, ಹಾಸ್ಯ ಕಲಾವಿದ ಬಸವರಾಜ ಮಾಮನಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್, ಕಾರ್ಯದರ್ಶಿ ಮಹೇಶ ಕಲಾಲ ಹಾಗೂ ವಾರ್ತಾ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ, ಪಟ್ಟಣದ ಉತ್ಸಾಹಿ ಯುವಕ, ವಿಜಯ ಕರ್ನಾಟಕ ಪತ್ರಿಕೆ ವರದಿಗಾರ,‌ ಡಿ ಸಿ ಪಾಟೀಲ್ “ಜಿಲ್ಲಾ ಮಟ್ಟದ ಉತ್ತಮ ವರದಿಗಾರ ಪ್ರಶಸ್ತಿ” ಯನ್ನು ಸ್ವೀಕರಿಸಿದರು.ಈ ವೇಳೆ ಪತ್ರಕರ್ತರಾದ ಪವನ ಕುಲ್ಕರ್ಣಿ, ವಿಜಯಾಚಾರ್ಯ ಪುರೋಹಿತ, ಗುಂಡಭಟ್ಟ ಜೋಶಿ, ಗಿರೀಶ ಬ್ಯಾಕೋಡ್, ಹಿರಿಯರಾದ ಸಂಗಣ್ಣ ತುಂಬಗಿ, ನಂದಪ್ಪ ಕವಲ್ದಾರ, ಸೂಗುರಯ್ಯ ಇಂಡಿ, ಪರಶುರಾಮ ನಾರಾಯಣಕರ್, ಶಿಕ್ಷಕ ಬಂದೇನವಾಜ್ ನಾಲತವಾಡ, ದೇವು ಯಾಳಗಿ,…

Read More

ವಿಜಯಪುರ: ನಗರ ವಿಧಾನಸಭಾ ಮತಕ್ಷೇತ್ರದಲ್ಲಿರುವ ವಾರ್ಡ್ 29 ರ ವ್ಯಾಪ್ತಿಯ ಬಾರಾಕೋಟ್ರಿ ತಾಂಡಾದ ರೈಲ್ವೆ ಹಳಿಯ ಬಲಭಾಗದಲ್ಲಿ ವಾಸವಿರುವ ನಿವಾಸಿಗಳು ಮೂರು ದಶಕಗಳಿಂದ ಅನುಭವಿಸುತ್ತಿದ್ದ ವಿದ್ಯುತ್ ಸಮಸ್ಯೆಗೆ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಸೋಮವಾರ ಮುಕ್ತಿ ನೀಡಿದರು.ತಾಂಡಾದ ಮರಗಮ್ಮ ದೇವಿ ಗುಡಿ ಹತ್ತಿರ ಪೂಜೆ ಸಲ್ಲಿಸಿ, ವಿದ್ಯುತ್ ಕಂಬದಲ್ಲಿನ ಬಟನ್ ಒತ್ತಿ ದೀಪ ಬೆಳಗಿಸುವ ಮೂಲಕ ನಿರಂತರ ವಿದ್ಯುತ್ ವ್ಯವಸ್ಥೆಗೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ಜಮೀನಿಗೆ ನೀಡುವ ಅತ್ಯಲ್ಪ ವಿದ್ಯುತ್ ಪೂರೈಕೆಯಿಂದ ಕತ್ತಲೆಯಲ್ಲೇ ಬದುಕು ಸಾಗಿಸುತ್ತಿದ್ದ ಇಲ್ಲಿನ ನಿವಾಸಿಗಳಿಗೆ ವಿಜಯಪುರ ನಗರದಿಂದ ನಿರಂತರ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಮೂಲಕ ಕತ್ತಲೆಯ ಬದುಕಿನಿಂದ ಬೆಳಕಿಗೆ ತರುವ ಮಹತ್ತರ ಕಾರ್ಯ ಮಾಡಲಾಗಿದೆ ಎಂದರು.ಮಕ್ಕಳಿಗೆ ಓದಲು, ವೃದ್ದರಿಗೆ ಸಂಚಾರ ಮಾಡಲು, ಮಹಿಳೆಯರಿಗೆ ಸುರಕ್ಷತೆ ದೃಷ್ಟಿಯಿಂದ ನಿರಂತರ ವಿದ್ಯುತ್ ವ್ಯವಸ್ಥೆ ಅತ್ಯವಶ್ಯಕವಾಗಿತ್ತು. ಈಗ ಆ ಕಾಲ‌ ಕೂಡಿ ಬಂದಿದೆ ಎಂದು ತಿಳಿಸಿದರು.ಇದೇ ವೇಳೆ ಅತ್ಯಂತ ಖುಷಿಯಲ್ಲಿರುವ ತಾಂಡಾದ ನಿವಾಸಿಗಳು…

Read More

ವಿಜಯಪುರ: ನಗರದಲ್ಲಿ ಜಿಲ್ಲಾ ಕುರಬ ನೌಕರ ಸಂಘ ವಿಜಯಪುರ ಇವರಿಂದ ಪ್ರತಿ ವರ್ಷದಂತೆ ಈ ವರ್ಷವು ೨೦೨೩-೨೦೨೪ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ & ದ್ವಿತೀಯ ಪಿ.ಯು.ಸಿ. ಅತಿ ಹೆಚ್ಚು ಅಂಕ ಪಡೆದ ವಿಜಯಪುರ ಜಿಲ್ಲೆಯ ಎಲ್ಲ ಹಾಲುಮತ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಹೊಸದಾಗಿ ಸೇವೆಗೆ ಸೇರಿದ ನೌಕರರರಿಗೆ ಹಾಗೂ ವಯೋನಿವೃತ್ತಿ ಹೊಂದಿದ ನೌಕರರ ಅಭಿನಂದನಾ ಸಮಾರಂಭ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.ಹಾಲುಮತ ನೌಕರರ ಸಂಘ ಸಂಸ್ಥಾಪಕ ಚಂದ್ರಶೇಖರ ಬಗಲಿ ಮಾತನಾಡಿ, ಪ್ರತಿ ವರ್ಷವು ಜಿಲ್ಲಾ ಕುರುಬರ ಸಂಘದ ವತಿಯಿಂದ ಕುರುಬರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡುತ್ತಾ ಬಂದಿರುವುದು ಅತೀವ ಸಂತಸವನ್ನುಂಟು ಮಾಡಿದೆ. ಇಂತಹ ಪುರಸ್ಕಾರದಿಂದ ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುತ್ತದೆ. ಹಾಗೂ ಸಮಾದ ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿಯು ತಮ್ಮ ಶೈಕ್ಷಣಿಕ ಜೀವನದಲ್ಲಿ ಉನ್ನತ ಮಟ್ಟದಿಂದ ಉನ್ನತವಾದ ಹುದ್ದೆ ಅಲಂಕರಿಸಲು ಸಹಕಾರಿಯಾಗುತ್ತದೆ. ಹಾಗೂ ವಿದ್ಯಾರ್ಥಿಗಳು ಸಹ ಇಂದಿನ ಜಾಲತಾಣಗಳ ಕಡೆಗೆ ಹೆಚ್ಚಿನ ಗಮನ ನೀಡದೇ ತಮ್ಮ ಓದಿನ…

Read More

ವಿಜಯಪುರ: ಶಿಕ್ಷಣ ಕ್ಷೇತ್ರದಲ್ಲಿ ಕಲಿಯುವ ವಿದ್ಯಾರ್ಥಿಗಳು, ಶಿಕ್ಷಕರು, ನೀತಿ ನಿರೂಪಕರು ಮತ್ತು ಪಾಲುದಾರರ ನಡುವೆ ಸಂಯೋಗ ಮತ್ತು ನಾವಿನ್ಯತೆಯ ಮನೋಭಾವವನ್ನು ಬೆಳೆಸುವ ಗುರಿಯನ್ನು ಸಪ್ತಾಹ ಹೊಂದಿದೆ ಎಂದು ಬಂಜಾರಾ ಪ್ರೌಢ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ ಹೇಳಿದರು.ಸೋಮವಾರದಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರೌಢ ಶಾಲೆಯಲ್ಲಿ ಇಕೋಕ್ಲಬ್ ವತಿಯಿಂದ “ಶಿಕ್ಷಾ ಸಪ್ತಾಹ” ಕಾರ್ಯಕ್ರಮದಡಿಯಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಮಾತನಾಡಿದ ಅವರು. ಇದು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು, ಸವಾಲುಗಳನ್ನು ಚರ್ಚಿಸಲು ಮತ್ತು ಗುಣಮಟ್ಟದ ದೃಷ್ಟಿಕೋನವನ್ನು ತಳಮಟ್ಟದಲ್ಲಿ ಸಾಕಾರಾಗೊಳಿಸುವ ನಿಟ್ಟಿನಲ್ಲಿ ಮುಂದಿನ ಹಾದಿಯನ್ನು ರೂಪಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವಿಜ್ಞಾನ ಶಿಕ್ಷಕ ಆರ್.ಎನ್.ಬಕಾಟೆ ಮಾತನಾಡುತ್ತ. ಈ ಸಪ್ತಾಹದ ಅಂಗವಾಗಿ ಶಾಲೆಗಳಲ್ಲಿ ಮಕ್ಕಳ ಭವಿಷ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಗುರಿಯು ಪ್ರತಿ ದಿನವೂ ಒಂದು ನಿರ್ದಿಷ್ಟ ವಿಷಯದ ಮೇಲೆ ಕೇಂದ್ರೀಕರಿಸಿದ ಚಟುವಟಿಕೆಗಳನ್ನು ಸೇರಿಸುವ ಮೂಲಕ ಮಕ್ಕಳ ತಾರ್ಕಿಕ ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸುವುದು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾರ್ಯಕ್ರಮವನ್ನು…

Read More

ವಿಜಯಪುರ: ಭೀಮಸೇನಾ ಕರ್ನಾಟಕ ರಾಜ್ಯ ಸರಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘ (ರಿ) ಬೆಂಗಳೂರು ಜಿಲ್ಲಾ ಘಟಕ ವಿಜಯಪುರ ವತಿಯಿಂದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಉಪ ನಿರ್ದೇಶಕರು, ಪಶು ಸಂಗೋಪನಾ ಇಲಾಖೆಯ ಡಾ. ಅಶೋಕ ಗೊಣಸಗಿ ನೆರವೇರಿಸಿ ಮಾತನಾಡುತ್ತ, ಸರಕಾರದಿಂದ ಇರುವ ವಿದ್ಯಾರ್ಥಿ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳದೇ ವಿದ್ಯಾಭ್ಯಾಸ ಕಡೆಗೆ ಗಮನ ಹರಿಸಬೇಕೆಂದರು.ಅದ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಾವುಸಾಬ್ ಗವಾರಿ ವಹಿಸಿದ್ದರು.ಪ್ರಾಸ್ತಾವಿಕವಾಗಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮುದ್ದಣ್ಣ ಭೀಮನಗರ ಮಾತನಾಡಿ, ವಿದ್ಯಾರ್ಥಿಗಳಿಗೆ ವೃತ್ತಿ ಆಧಾರಿತ ಶಿಕ್ಷಣ, ತಾಂತ್ರಿಕ ಶಿಕ್ಷಣ ಕಲಿತು ಮುಂದೆ ಬರಬೇಕು. ಸರಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ಶೈಕ್ಷಣಿಕ ರಂಗದಲ್ಲಿಯೂ ಇನ್ನು ಹೆಚ್ಚು ಎತ್ತರಕ್ಕೆ ಬೆಳೆಯುವ ವಿಫುಲ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮದೇ ಆದ ಕೌಶಲ್ಯಗಳನ್ನು ಬಳಸಿಕೊಂಡು ಉನ್ನತವಾದ ಬದುಕನ್ನು ಕಟ್ಟಿಕೊಳ್ಳುವ ಎಲ್ಲ ಅವಕಾಶಗಳಿವೆ. ಆ…

Read More

ವಿಜಯಪುರ: ವಿದ್ಯಾರ್ಥಿಗಳು ತಮ್ಮ ಆಸಕ್ತಿ ಯಾವುದರಲ್ಲಿ ಇದೆ ಎಂಬುದನ್ನು ಅರಿತು ತಮ್ಮ ಗುರಿ ಮುಟ್ಟಲು ಸತತ ಪ್ರಯತ್ನ ಮಾಡಿದಾಗ ಮಾತ್ರ ಯಶಸ್ಸು ದೊರುಕುವುದು ಎಂದು ಸಮಾಜ ಸೇವೆಕ ಫಯಾಜ ಕಲಾದಗಿ ಹೇಳಿದರು.ಅವರು ನಗರದ ನ್ಯೂ ಬ್ರಿಲಿಯಂಟ್ ಶಾಲೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ಶ್ರೀ ಸಾಯಿ ಶಿಕ್ಷಣ ಸಂಸ್ಥೆ ವಿಜಯಪುರ, ಶ್ರೀ ಸ್ವಾಮಿ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಎನ್.ಎಸ್.ಎಸ್ ನಿಂದ ಕಲಿತಕೊಂಡಿದ್ದು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎನ್ಎಸ್ಎಸ್ ದಿಂದ ಪ್ರತಿಯೊಬ್ಬರಲ್ಲಿ ಶಿಸ್ತು ಸಂಯಮ ಬೆಳೆಯುವುದು. ದೇಶ ರಾಷ್ಟ್ರ ಅಭಿವೃದ್ಧಿ ಹೊಂದಬೇಕಾದರೆ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದರು.ಈ ಸಂದರ್ಭದಲ್ಲಿ ಸಾಯಿ ಶಿಕ್ಷಣ ಸಂಸ್ಥೆಯತ ಅಧ್ಯಕ್ಷರಾದ ಡಾ. ಬಿ.ಎಂ. ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್.ಎಸ್.ಎಸ್ ಇದು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದರ ಜೊತೆಗೆ ಬದುಕು ಯಾವ ರೀತಿ ಇರಬೇಕೆಂದು ತಿಳಿಸಿಕೊಡುತ್ತದೆ…

Read More