Author: editor.udayarashmi@gmail.com

ವಿಜಯಪುರ: ಯುವಜನೋತ್ಸವ- ೨೦೨೪ ಅಂಗವಾಗಿ ಆಗಸ್ಟ್ ೨೦ ರಂದು ಹೆಚ್.ಐ.ವಿ/ಏಡ್ಸ್ ನಿಯಂತ್ರಣ ಹಾಗೂ ರಕ್ತದಾನ ಜಾಗೃತಿ ಮೂಡಿಸಲು ೧೭ರಿಂದ ೨೫ ವರ್ಷದೊಳಗಿನ ಕಾಲೇಜು ವಿದ್ಯಾರ್ಥಿಗಳಿಗೆ ೫ಕೀ.ಮಿ ಮ್ಯಾರಾಥಾನ್ (ರೆಡ್ ರಿಬ್ಬನ್ ಓಟ) ಸ್ಪರ್ಧೆ ಆಯೋಜಿಸಲಾಗಿದೆ.ಅಂದು ಬೆಳಗ್ಗೆ ೬.೩೦ಕ್ಕೆ ಗೋಲಗುಂಬಜದಿಂದ ಪ್ರಾರಂಭವಾಗಿ, ಗಾಂಧಿ ವೃತ್ತ, ಶಿವಾಜಿ ವೃತ್ತ, ವಾಟರ್ ಟ್ಯಾಂಕ್, ಸೈನಿಕ ಶಾಲೆ ಮಾರ್ಗವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಡ್ಯಾಪ್ಕೋ ಕಚೇರಿಯವರೆಗೆ ಮ್ಯಾರಾಥಾನ್ (ರೆಡ್ ರಿಬ್ಬನ್ ಓಟ) ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ, ಮೆಡಲ್‌ಗಳನ್ನು ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ೧೨ನೇ ಶತಮಾನದ ಬಸವಾದಿ ಶರಣರ ಸಮಕಾಲೀನರಾದ ಶರಣ ನುಲಿಯ ಚಂದಯ್ಯ ಅವರ ವಚನಗಳಲ್ಲಿ ಕಾಯಕ ಹಾಗೂ ದಾಸೋಹ ಮಹತ್ವದ ಚಿಂತನೆಗಳು ಹಾಸುಹೊಕ್ಕಾಗಿವೆ. ಇವರ ಜೀವನಾದರ್ಶ ಹಾಗೂ ಅವರ ಚಿಂತನೆಗಳನ್ನು ನಮ್ಮ ಜೀವನದಲ್ಲ್ಲಿ ಅಳವಡಿಸಿಕೊಳ್ಳಬೇಕು. ಇವರ ತತ್ವಾದರ್ಶ ಎಂದೆಂದಿಗೂ ದಾರಿದೀಪವಾಗಿವೆ ಎಂದು ವಿಜಯಪುರ ತಹಶೀಲ್ದಾರ್ ಪ್ರಶಾಂತ ಚನಗೊಂಡ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸೋಮವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.ವಿಜಯಪುರ ಜಿಲ್ಲೆಯ ಶಿವಣಗಿಯರಾದ ಶರಣ ನುಲಿಯ ಚಂದಯ್ಯನವರು, ಕಾಯಕ ತತ್ವದ ಮಹತ್ವವನ್ನು ವಚನಗಳ ಮೂಲಕ ಸಾರಿ, ಭಾವಶುದ್ಧತೆಯಿಂದ ಕಾಯಕ ಮಾಡಬೇಕೆನ್ನುವ ನಿಟ್ಟಿನಲ್ಲಿ ಜೀವನ ನಡೆಸಿ ಮನುಕುಲದ ಉನ್ನತಿಗೆ ಶ್ರಮಿಸಿದ್ದಾರೆ. ಅವರ ವಿಚಾರಗಳನ್ನು ಅಳವಡಿಸಿಕೊಂಡು ಆದರ್ಶಮಯವಾದ ಜೀವನ ನಡೆಸಬೇಕು ಎಂದು ಹೇಳಿದರು.ಪ್ರವಾಸೊಧ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಅವರು ಮಾತನಾಡಿ, ಶರಣರ ಚಿಂತನೆಗಳ ಅಧ್ಯಯನ ಮಾಡುವ ಮೂಲಕ ಅವರ ಶರಣರ ವಚನಗಳು…

Read More

ವಿಜಯಪುರ: ಜಲಸಂಪನ್ಮೂಲ ಇಲಾಖೆ, ಕೃಷ್ಣಾ ಭಾಗ್ಯ ಜಲನಿಗಮ ನಿಯಮಿತ ಇವರ ಸಹಯೋಗದಲ್ಲಿ ಆ.೨೧ರಂದು ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರದಲ್ಲಿ ಕೃಷ್ಣೆಯ ಜಲಧಿಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಕನ್ನಡ ನಾಡಿನ ಪ್ರತಿಷ್ಠಿತ ಆಲಮಟ್ಟಿ ಆಣೆಕಟ್ಟೆಯಲ್ಲಿ ಗರಿಷ್ಠ ಮಟ್ಟಕ್ಕೆ ನೀರು ಸಂಗ್ರಹಣೆಯಾದ ಪ್ರಯುಕ್ತ ಅಂದು ಮಧ್ಯಾಹ್ನ ೧ ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ.ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ.ಶಿವಕುಮಾರ ಘನ ಉಪಸ್ಥಿತಿ ವಹಿಸಲಿದ್ದಾರೆ. ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ, ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆದ ಅಬಕಾರಿ ಖಾತೆ ಸಚಿವ ಆರ್.ಬಿ.ತಿಮ್ಮಾಪೂರ ಸೇರಿದಂತೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ವಿವಿಧ…

Read More

ಸಿಂದಗಿಯಲ್ಲಿ ಆಶಾ ಕಾರ್ಯಕರ್ತೆಯರ ತಾಲೂಕು ಸಮ್ಮೇಳನ ಉದ್ಘಾಟನೆ ಸಿಂದಗಿ: ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಜನರಿಗೆ ತಲುಪಿಸಬೇಕಿದೆ, ಹೀಗಾಗಿ ನಮ್ಮ ಆಶಾ ಕಾರ್ಯಕರ್ತೆಯರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಬೇಡಿಕೆಗಳು ಬೇಗ ಈಡೇರಲಿ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಎ.ಎ.ಮಾಗಿ ಹೇಳಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಆಶಾ ಕಾರ್ಯಕರ್ತೆಯರ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ಸೇವೆ ಇನ್ನಷ್ಟು ಉತ್ತಮವಾಗಿ ಜನರಿಗೆ ತಲುಪಲು ಸಹಕಾರಿಯಾಗಲಿ ಎಂದರು.ಈ ವೇಳೆ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಟಿ.ಮಲ್ಲಿಕಾರ್ಜುನ ಮಾತನಾಡಿ, ಆಶಾ ಕಾರ್ಯಕರ್ತೆಯರು ಯಾವುದೋ ಪಿಎಚ್‌ಸಿಯ ಆಧಾರ ಸ್ಥಂಭವಾಗದೇ ಅವರು ಇಡೀ ರಾಜ್ಯದ ಆರೋಗ್ಯ ಇಲಾಖೆಯ ಆಧಾರ ಸ್ತಂಭವಾಗಿದ್ದಾರೆ. ಕರೋನಾ ಸಂದರ್ಭದಲ್ಲಿ ತಮ್ಮ ಪ್ರಾಣವನೊತ್ತೆಯಿಟ್ಟು ಸೇವೆ ಸಲ್ಲಿಸಿದ್ದಾರೆ, ಅಲ್ಲದೇ ಆಶಾ ಕಾರ್ಯಕರ್ತೆಯರು ಬಂದ ಮೇಲೆ ಸಮಾಜದಲ್ಲಿ ನವಜಾತ ಶಿಶುಗಳ ಮತ್ತು ತಾಯಂದಿರ ಸಾವು ಗಣನೀಯ ಇಳಿಕೆ ಕಂಡು ಬಂದಿದೆ ಎಂದು ವಿಶ್ವ ಸಂಸ್ಥೆಯೇ ಹೇಳಿದೆ. ಆದರೆ ಆಶಾ ಕಾರ್ಯಕರ್ತೆಯರಿಗೆ ನಮ್ಮ ಸರಕಾರಗಳು ಸೂಕ್ತ ಸಂಬಳ ನೀಡುತ್ತಿಲ್ಲ. ಇದುವರೆಗೆ ಅಧಿಕಾರಕ್ಕೆ…

Read More

ಸಿಂದಗಿ ಪಟ್ಟಣದ ವಿವಿಧೆಡೆ ರಕ್ಷಾ ಬಂಧನ ಆಚರಣೆ ಸಿಂದಗಿ: ಭಾರತೀಯ ಸಂಸ್ಕೃತಿಯಲ್ಲಿ ಪ್ರತಿ ಬಾಂಧವ್ಯಕ್ಕೂ ಒಂದೊಂದು ಹಬ್ಬದ ನಂಟಿದೆ. ಅದರಂತೆ ಸಹೋದರ- ಸಹೋದರಿಯರ ಸಂಬಂಧ, ಪ್ರೀತಿಯ ಪ್ರತೀಕವಾದ ಹಬ್ಬ ರಕ್ಷಾ ಬಂಧನ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಹೇಳಿದರು.ಪಟ್ಟಣದ ನಾಗೂರ ಬಡಾವಣೆಯಲ್ಲಿರುವ ವಿದ್ಯಾನಿಕೇತನ ಹಾಗೂ ಪ್ರೇರಣಾ ಪ್ರಾಥಮಿಕ ಹಾಗೂ ರಾಂಪುರ ಪಿಎ ರಸ್ತೆಯ ಪ್ರೇರಣಾ ಪಬ್ಲಿಕ್ ಶಾಲೆಗಳಲ್ಲಿ ವಿದ್ಯಾರ್ಥಿನಿಯರು ರಾಖಿ ಕಟ್ಟಿ ಸಹೋದರತ್ವ ಸಾರುವ ಸಂಭ್ರಮದ ರಕ್ಷಾ ಬಂಧನ ಆಚರಿಸಿ ಮಾತನಾಡಿದ ಅವರು, ಪ್ರತಿ ವರ್ಷ ಶ್ರಾವಣ ಹುಣ್ಣಿಮೆಯಂದು ಆಚರಿಸಲ್ಪಡುವ ಈ ಹಬ್ಬವನ್ನು ಸಾಕಷ್ಟು ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಹೊಂದಿದೆ. ಅದಲ್ಲದೇ ಸಮಾಜದಲ್ಲಿ ಹೆಣ್ಣುಮಕ್ಕಳ ರಕ್ಷಣೆಯನ್ನು ಪ್ರತಿಬಿಂಬಿಸುವ ರಾಖಿವಾಗಿದೆ ಎಂದರು.ಈ ವೇಳೆ ಸಂಸ್ಥೆಯ ಪ್ರೇರಣಾ ಪ್ರೌಢಶಾಲೆಯ ಮುಖ್ಯಗುರುಮಾತೆ ಎಸ್.ಬಿ.ಅಸ್ಕಿ, ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ಎಮ್.ಪಿ.ಬುಕ್ಕಾ, ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ, ಸತೀಶ ಕುಲಕರ್ಣಿ, ಶಿಲ್ಪಾ ಪಾಟೀಲ ಸೇರಿದಂತೆ ಶಾಲೆಯ ಬೋಧಕ-ಬೋದಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.ಶ್ರೀಗುರು ಕೃಪಾ ಶಾಲೆ:ಸಿಂದಗಿ ಪಟ್ಟಣದ ಸೋಂಪುರ ರಸ್ತೆಯಲ್ಲಿರುವ…

Read More

ಸಿಂದಗಿ: ಕಾಲದ ಕದಡದ ನೆನಪುಗಳ ಪ್ರತಿಬಿಂಬವೇ ಭಾವಚಿತ್ರಗಳು. ಆ ದಿನಗಳ ಸಿಹಿ ನೆನಪುಗಳನ್ನು ಮೆಲುಕು ಹಾಕಲು ನೀಡುವ ಸಿಹಿ ನೆನಪುಗಳೇ ಭಾವಚಿತ್ರ ಎಂದು ಛಾಯಾಗ್ರಾಹಕ ರವಿ ಕುಂಟೋಜಿ ಹೇಳಿದರು.ಪಟ್ಟಣದ ಸಂಗಮೇಶ್ವರ ದೇವಾಸ್ಥಾನದಲ್ಲಿ ಸಿಂದಗಿ ಛಾಯಾಗ್ರಾಹಕರ ಸಂಘದ ವತಿಯಿಂದ ವಿಶ್ವ ಛಾಯಾಗ್ರಹಣ ದಿನವನ್ನು ಆಚರಣೆ ಮಾಡಿ ಮಾತನಾಡಿದ ಅವರು, ಈಗ ಪೋಟೋ ತೆಗೆಯಬೇಕೆಂದರೆ ಅತಿ ಸುಲಭದ ಕಾರ್ಯ. ಕೈಯಲ್ಲಿದ್ದ ಸ್ಮಾರ್ಟ್ ಫೋನ್ ಹಿಡಿದು ನೂರಾರು ಪೋಟೋ ತೆಗೆಯಬಹುದು. ಆದರೆ ಹಿಂದೊಮ್ಮೆ ಪೋಟೋ ತೆಗೆಯಿಸಿಕೊಳ್ಳುವುದು ಹಬ್ಬದ ಸಂಭ್ರಮ ಎಂದರು.ಈ ವೇಳೆ ಛಾಯಾಗ್ರಾಹಕರಾದ ಸಂದೀಪ ಪಾಟೀಲ, ಗುರು ಚಬನೂರ, ಅಲೋಕ ರೋಡಗಿ, ಗಂಗಾಧರ ಬಡಿಗೇರ, ಪರಶುರಾಮ ಗುಳ್ಳೂರು, ಶಂಕರ ಬಮ್ಮನಹಳ್ಳಿ, ಪುಟ್ಟು ಸಂಗಮ, ರಾಜೂ ಯಂಕಂಚಿ, ಹಾಜಿಲಾಲ, ವಿಶ್ವನಾಥ ಹಿರೇಮಠ, ಕೇದಾರ ಕುಂಟೋಜಿ, ಸುನೀಲ ಅಮರಗೊಂಡ ಸೇರಿದಂತೆ ಅನೇಕರಿದ್ದರು.

Read More

ವಿಜಯಪುರ: ನಗರದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್.ಸಿ.ಸಿ) ಆವರಣದಲ್ಲಿ ಸೋಮವಾರ ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮೀ ಕನ್ನೋಳ್ಳಿ ಅವರ ನೇತೃತ್ವದಲ್ಲಿ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ಅಂಗವಾಗಿ ರಾಖಿ ಕಟ್ಟಿ, ಸಿಹಿ ವಿತರಿಸಿ ಆಚರಿಸಲಾಯಿತು.ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ರಾಜೇಶ್ವರಿ ಪರ್ವತ್ನವರ, ಸುವರ್ಣ ಕುರ್ಲೆ, ಮೀತಾ ದೇಸಾಯಿ, ಗೀತಾ ಗಿಡವೀರ, ಭಾರತಿ ಪೋತ್ತಾರ, ಮಾನಂದಾ ಮನ್ನಾಪುರ್, ಮೀನಾ ಕುಂದನ್ಗಾರ್, ಲಕ್ಷ್ಮೀ ದಾಶ್ಯಾಳ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಪ್ರಧಾನ ಕಾರ್ಯದರ್ಶಿ ಪಾಪುಸಿಂಗ್ ರಜಪೂತ, ಎನ್.ಸಿ.ಸಿ ಮುಖ್ಯಸ್ಥ ಸುಬೇದಾರ್ ಮೇಜರ್ ಕುರಂದಾಲೆ, ನಾಯಕ್ ಸುಬೇದಾರ್ ತಾನಾಜಿ ಮತ್ತಿರರು ಇದ್ದರು.

Read More

ವಿಜಯಪುರ: ಸ್ವಾತಂತ್ರ‍್ಯ ಹೋರಾಟ ಅಖಂಡ ಭಾರತದ ಕಲ್ಪನೆ ತಂದುಕೊಟ್ಟಿದ್ದು, ಸ್ವಾತಂತ್ರ‍್ಯ ಕೇವಲ ಅಹಿಂಸೆಯಿಂದ ಬಂದದ್ದಲ್ಲ, ಶಸ್ತ್ರಾಸ್ತ್ರ ಹೋರಾಟಗಳ ಫಲ. ಅದುವೇ ನಮ್ಮಯ ಸ್ವಾತಂತ್ರ‍್ಯ ಎಂದು ವಿಶ್ರಾಂತ ಉಪನಿರ್ದೇಶಕ ಎಸ್.ಎಂ ಕಣಬೂರ ಅಭಿಪ್ರಾಯಪಟ್ಟರು.ಭಾನುವಾರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಸಾಪ ಜಿಲ್ಲಾ, ತಾಲೂಕಾ ಹಾಗೂ ನಗರ ಘಟಕಗಳ ಸಹಯೋಗದಲ್ಲಿ ಜರುಗಿದ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಚಿಂತನಾ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡುತ್ತಾ, ಇಂದಿನ ಇಂದಿನ ರಾಜಕೀಯ ಕೆಲವರ ಸ್ವತ್ತಾಗಿದ್ದು, ಇಂದಿನ ಶಿಕ್ಷಣ, ಆರೋಗ್ಯ ಕೇವಲ ಉಳ್ಳವರ ಪಾಲಾಗಿದ್ದು, ಮುಂಬರುವ ಸ್ವಾತಂತ್ರ‍್ಯದ ಶತಮಾನೋತ್ಸವದ ಒಳಗಾಗಿ ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರ ಸೌಲಭ್ಯಗಳು ಎಲ್ಲರಿಗೂ ಸಿಗುವಂತಾಗಬೇಕು ಎಂದರು.”ಸ್ವಾತಂತ್ರ‍್ಯದ ಅಮೃತ ಮಹೋತ್ಸವ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ ಮಾಧವ ಗುಡಿಯವರು ಮಾತನಾಡುತ್ತಾ, ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಿ ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕ ಸವಿನೆನಪಿಗಾಗಿ ಹಾಗೂ ದೇಶದ ಸ್ವಾತಂತ್ರ‍್ಯ ಹೋರಾಟಕ್ಕಾಗಿ ತ್ಯಾಗ ಬಲಿದಾನಗಳನ್ನು ನೀಡಿದ ಸ್ವಾತಂತ್ರ‍್ಯ ಹೋರಾಟಗಾರರನ್ನು ಸ್ಮರಿಸುವ…

Read More

ಅಫಜಲಪುರ: ಕೊನೆ ಉಸಿರಿನ ತನಕ ರಣಾಂಗಣದಲ್ಲಿಹೋರಾಟ ಮಾಡಿ ತನ್ನ ರಾಜ್ಯ ಮತ್ತು ಜನರನ್ನು ಕಾಪಾಡಿದ ಧೀರ ರಜಪೂತ ಅರಸ ಮಹಾರಾಣಾ ಪ್ರತಾಪ್ ಚರಿತ್ರೆ ಎಲ್ಲರಿಗೂ ತಿಳಿಯುವಂತಾಗಬೇಕೆಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ಸಿಂಗ್ ಹೇಳಿದರು.ಅವರು ತಾಲೂಕಿನ ದಣ್ಣೂರ ಗ್ರಾಮದಲ್ಲಿ ರಜಪೂತ ಸಮಾಜದವರು ನಿರ್ಮಿಸಿದ ಮಹಾರಾಣಾ ಪ್ರತಾಪ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡುತ್ತಾ, ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಪೈಕಿ ಮಹಾರಾಣಾ ಪ್ರತಾಪ್ ಸಿಂಹ ಬಹಳ ಶ್ರೇಷ್ಠ ಮತ್ತು ಅಗ್ರಗಣ್ಯ ಸ್ಥಾನದಲ್ಲಿದ್ದಾರೆ. ಅವರ ಆದರ್ಶಗಳ ಪಾಲನೆ ಮಾಡುವ ಮೂಲಕ ಅವರನ್ನು ಸದಾ ಸ್ಮರಿಸುವ ಕೆಲಸ ಆಗಬೇಕೆಂದು ನಮ್ಮ ಸರ್ಕಾರ ಸಮಾಜದ ಹಿತ ಕಾಯುವ ಕೆಲಸ ಮಾಡುತ್ತಿದೆ. ರಜಪೂತ ಸಮಾಜಕ್ಕೆ ಬೇಕಾದ ಸೌಲಭ್ಯಗಳಿಗಾಗಿ ಸಮಾಜಬಾಂಧವರು ಮುಖ್ಯಮಂತ್ರಿಗಳ ಬಳಿ ನಿಯೋಗ ಬಂದರೆ ಸೌಲಭ್ಯಗಳ ಈಡೇರಿಕೆಗಾಗಿ ಕೆಲಸ ಮಾಡಲಾಗುತ್ತದೆ ಎಂದರು.ಶಾಸಕ ಎಂ.ವೈ ಪಾಟೀಲ ಮಾತನಾಡುತ್ತಾ, ತಾಲೂಕಿನಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ಕೂಡ ಇರುವಷ್ಟು ಜನ ಒಗ್ಗಟ್ಟಿನಿಂದ ಇದ್ದು ತಮ್ಮತನ ತೋರಿರುವ ರಜಪೂತ ಸಮಾಜ ಎಲ್ಲರಿಗೂ ಮಾದರಿಯಾಗಿದ್ದೀರಿ. ನಿಮ್ಮ ಸಮಾಜದ ಏಳಿಗೆಗೆ…

Read More

ಅಫಜಲಪುರ: ೨ನೇ ಶ್ರೀಶೈಲ ಎಂದು ಖ್ಯಾತಿ ಪಡೆದಿರುವ ತಾಲೂಕಿನ ಸುಕ್ಷೇತ್ರ ಚಿನಮಳ್ಳಿಯ ಮಲ್ಲಿಕಾರ್ಜುನ ದೇವಾಲಯಕ್ಕೆ ಹೊಸದಾಗಿ ದ್ವಾರಬಾಗಿಲ ನಿರ್ಮಾಣವಾಗುತ್ತಿದ್ದು, ಚಿನ್ಮಯಗಿರಿಯ ವೀರ ಮಹಾಂತ ಶಿವಾಚಾರ್ಯರು, ಅಫಜಲಪುರದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ದ್ವಾರಬಾಗಿಲ ಕಾಮಗಾರಿಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ದೇವಸ್ಥಾನ ಕಮೀಟಿ ಅಧ್ಯಕ್ಷ ಕಲ್ಯಾಣರಾವ್ ಬಿರಾದಾರ ಹಸರಗುಂಡಗಿ, ಸದಸ್ಯರಾದ ಗುರುಲಿಂಗಯ್ಯ ಸ್ವಾಮಿ, ಮಲ್ಲಿನಾಥ ಬಿರಾದಾರ, ನಾಗರಾಜ ಮೇಳಕುಂದಿ, ಭೋಜರಾಯ ಪಾಟೀಲ, ಶ್ರೀಶೈಲ ಕೌದಿ, ಗುಂಡಪ್ಪ ಹೂಗಾರ, ಶರಣು ಗುಜ್ಜಾ, ನಿಂಗಣ್ಣ ವಳಕಟ್ಟಿ, ಶಾಮರಾವ್ ಪಾಟೀಲ, ಅಪ್ಪಾಸಾಬ ದೇವರಮನಿ, ಮಲ್ಲೇಶಿ ತಳವಾರ, ಸಿದ್ದು ಹೂಗಾರ, ಮಡಿವಾಳಪ್ಪ ಹೂಗಾರ, ಲಕ್ಷ್ಮಣಗೌಡ ಪಾಟೀಲ ಸಂಗಾಪುರ, ಶ್ರೀಮಂತ ಬೋಳಶೆಟ್ಟಿ, ಸಿದ್ದು ಮಾಹೂರ, ಹುಸೇನಸಾಬ ಮುಲ್ಲಾ, ಶೌಕತ ಅಲಿ ತಾಂಬೋಳಿ, ತಾಜುದ್ದಿನ್ ತಾಂಬೋಳಿ, ಶರಣು ತಳಕೇರಿ ಸೇರಿದಂತೆ ಅನೇಕರು ಇದ್ದರು.

Read More