ವಿಜಯಪುರದಲ್ಲಿ ನಾಟಕ ಅಕಾಡೆಮಿ ವತಿಯಿಂದ ’ಪ್ರಥಮ ಪಲ್ಲವ’ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಾಟಕ ಅಕಾಡೆಮಿ ವಿಜಯಪುರ ವತಿಯಿಂದ ’ಪ್ರಥಮ ಪಲ್ಲವ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಬಿಎಲ್ಡಿಇ ಕಾಲೇಜ್ ಅಸಿಸ್ಟೆಂಟ್ ಪ್ರೊಫೆಸರ್ ಡಾ.ರಂಜಿತಾ ಕೆ.ಆರ್.ಮಲ್ಲಣ್ಣ ಮಾತನಾಡಿ, ಭರತನಾಟ್ಯ ಸಂಗೀತ ಸಾಹಿತ್ಯ ಕಲೆಗಳಿಂದ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್ ಗೀಳನ್ನು ಹೆಚ್ಚಿಸುತ್ತಿದ್ದು ಅಂತವುಗಳಿಗೆ ಕಡಿವಾಣ ಹಾಕಿ ಪಾಲಕರು ತಮ್ಮ ಮಕ್ಕಳನ್ನು ಇಂತಹ ಭರತನಾಟ್ಯ ಕಲೆ ಸಾಹಿತ್ಯ, ಸಂಗಿತ, ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದರ ಜೊತೆಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಂದೆ ತಾಯಿಯ ಪಾತ್ರ ದೊಡ್ಡದು ಎಂದರು.
ಜಿಲ್ಲಾ ಯುವ ಪರಿಷತ್ತಿನ ಅಧ್ಯಕ್ಷ ಶರಣು ಸಬರದ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಯುವಕರು ಯುವತಿಯರು ಆತ್ಮಹತ್ಯೆಗಳಿಗೆ ಶರಣಾಗುತ್ತಿದ್ದು, ಜೊತೆಗೆ ಡ್ರಗ್ಸ್ ವ್ಯಸನಿಗಳಾಗುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳ ಚಲನವಲನ ಮೇಲೆ ನಿಗಾ ಇಡುವುದರ ಜೊತೆಗೆ ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ಅಭ್ಯಾಸದ ಜೊತೆಗೆ ಭರತನಾಟ್ಯ ಸಂಗೀತ ಗಾಯನ ಕಲೆ, ಸಂಸ್ಕೃತಿಕ. ಸಾಹಿತ್ಯ ದಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಭಾಗಿಯಾಗಿಸಬೇಕು. ಅಂದಾಗ ಮಾತ್ರ ಇಂದಿನ ಯುವಸಮೋಹ ದಿಂದ ಸ್ವಚ್ಛ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಆಯೋಜಕರಾದ ಶ್ರೀಮತಿ ಲಕ್ಷ್ಮಿ ತೆರದಾಳಮಠ. ವಿದುಷಿ ಸುಭಿದಾ ದೇಶಪಾಂಡೆ, ನಾಗಶ್ರೀ ಕುಲಕರ್ಣಿ, ಪ್ರಾಚಾರ್ಯರಾದ ವಿಜಯಲಕ್ಷ್ಮಿ ಪಟೇಲ್, ನಿವೃತ್ತ ಬಿಇಓ ರವಿ ಕೊಣ್ಣೂರ್, ರಾಹುಲ್ ಜಿ., ಕುಮಾರಿ ರಕ್ಷಾ ಮುಚ್ಚಂಡಿ, ರೇಷ್ಮೆ ಜಿ, ಗೌರಿ ಜೋಶಿ ಭರತನಾಟ್ಯ ಪ್ರದರ್ಶಿಸಿದರು.

