ದೇಶದ ವಿವಿಧ ಭಾಗಗಳಿಂದ ಸೈಕಲ್ ಮೂಲಕ ಪಂಢರಪುರ ಕ್ಷೇತ್ರಕ್ಕೆ ಆಗಮಿಸಿದ ಸೈಕ್ಲಿಂಗ್ ಗ್ರುಪ್ ಸದಸ್ಯರು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಷಾಡ ಏಕಾದಶಿ ನಿಮಿತ್ತ ದೇಶದ ವಿವಿಧ ಭಾಗಗಳಿಂದ ಸೈಕಲ್ ಮೂಲಕ ಪಂಢರಪುರ ಕ್ಷೇತ್ರಕ್ಕೆ ಆಗಮಿಸುವ ಸೈಕಲ್ ವಾರಿ ಕಾರ್ಯಕ್ರಮ ವಿಶಿಷ್ಟ ಪೂರ್ಣವಾಗಿ ಜರುಗಿತು.
ಪಂಢರಪುರ ವಿಠೋಬಾ ದರ್ಶನಕ್ಕೆ ಪ್ರತಿವರ್ಷವೂ ಕಾಲುನಡಿಗೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವುದು ಸಂಪ್ರದಾಯ. ಆದರೆ ಕಳೆದ 2-3 ವರ್ಷಗಳಿಂದ ಕೆಲವು ಉತ್ಸಾಹಿ ಸೈಕ್ಲಿಂಗ್ ಸಂಘಟಕರು ಸೇರಿ ಆರಂಭಿಸಿದ ಸೈಕಲ್ ವಾರಿ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡ ಸೈಕ್ಲಿಂಗ್ ಗ್ರುಪ್ ಸದಸ್ಯರು ತಮ್ಮ ತಮ್ಮ ಸ್ಥಳಗಳಿಂದ ಸೈಕಲ್ ಸವಾರಿ ಮಾಡುತ್ತಾ ಪಂಢರಪುರಕ್ಕೆ ಆಗಮಿಸುವರು. ಅಲ್ಲಿ ಹಿಂದಿನ ರಾತ್ರಿಯೆ ಸೈಕ್ಲಿಂಗ್ ಸಮ್ಮೇಳನ ನಡೆಯುವದು. ಈ ಸಮ್ಮೇಳನದಲ್ಲಿ ವಿವಿಧ ಸೈಕ್ಲಿಸ್ಟ್ ಗಳು ವಿಚಾರ ಸಂಕಿರಣಗಳಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುವರು. ಮಾರನೆಯ ದಿನ ಬೆಳಿಗ್ಗೆ ಎಲ್ಲ ಸೈಕ್ಲಿಸ್ಟ್ಗಳು ತಮ್ಮ ಸೈಕಲ್ ಸವಾರಿ ಮೂಲಕ ನಗರ ಪ್ರದಕ್ಷಿಣೆ ಮಾಡಿ, ಸ್ಥಳೀಯ ಕ್ರೀಡಾಂಗಣದಲ್ಲಿ ಸಮಾವೇಶಗೊಂಡು ಸೈಕಲ್ ರಿಂಗನ್ ನಲ್ಲಿ (ವರ್ತುಲಾಕಾರದಲ್ಲಿ ಸೈಕಲ್ ತುಳಿಯುವದು) ಭಾಗವಹಿಸುವರು.
ಜುಲೈ 11 ಮತ್ತು 12 ರಂದು ನಡೆದ ಈ ಸೈಕಲ್ ವಾರಿಯಲ್ಲಿ ದೇಶದಾದ್ಯಂತ ಆಗಮಿಸಿದ 8 ಸಾವಿರ ಸೈಕ್ಲಿಸ್ಟ್ ಗಳು ಭಾಗವಹಿಸಿದ್ದರು. ವಿಜಯಪುರ ಸೈಕ್ಲಿಂಗ್ ಗ್ರುಪ್ 40 ಸದಸ್ಯರು ವಿಜಯಪುರಿಂದ ಪಂಢರಪುರದವರೆಗೆ 100ಕಿ.ಮೀ ಸೈಕಲ್ ಯಾತ್ರೆಯಲ್ಲಿ ಭಾಗವಹಿಸಿದ್ದರು.
ವಿಜಯಪುರ ಬಿ.ಎಂ.ಪಾಟೀಲ ವೃತ್ತದಿಂದ ಆರಂಭಗೊಂಡ ಸೈಕಲ್ ವಾರಿಗೆ ನಗರಾಭಿವñದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ ಚಾಲನೆ ನೀಡಿದ್ದರು. ಈ ಸಂದರ್ಭದಲ್ಲಿ ವಿಸಿಜಿ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಮಾತನಾಡಿ, ವಿಸಿಜಿಯ ಕ್ಯಾಲೇಂಡರ್ ನಲ್ಲಿ ಪಂಢರಪುರ ಸೈಕಲ್ ವಾರಿಯನ್ನು ಸೇರಿಸಲಾಗಿದ್ದು, ಪ್ರತಿ ವರ್ಷವೂ ಈ ಯಾತ್ರೆಯಲ್ಲಿ ಪ್ರತಿಯೊಬ್ಬ ಸೈಕ್ಲಿಸ್ಟ್ ಪಾಲ್ಗೊಳ್ಳಬೇಕು. ಬಸವ ಜಯಂತಿ 42ಕಿ.ಮೀ ರನ್ ಮತ್ತು ಡಿಸೆಂಬರ್ ಎರಡನೆಯ ರವಿವಾರ ನಡೆಯುವ ವೃಕ್ಷೋಥಾನ್ ವಿಸಿಜಿ ಪ್ರಮುಖ ಕಾರ್ಯಕ್ರಮಗಳಾಗಿವೆ ಎಂದರು.
ಕೋಟಿ ವೃಕ್ಷ ಅಭಿಯಾನ ಸಂಚಾಲಕ ಡಾ.ಮುರುಗೇಶ ಪಟ್ಟಣಶೆಟ್ಟಿ, ವಿಠ್ಠಲ ತೇಲಿ, ರಾಜಶೇಖರ ಸಜ್ಜನ, ಪ್ರಕಾಶ ಕನ್ನೂರ, ಶಾಂತಪ್ಪ ದೇಸಾಯಿ ಉಪಸ್ಥಿತರಿದ್ದರು.
ಸೈಕಲ್ ವಾರಿಯಲ್ಲಿ ಪಾಲ್ಗೊಂಡ ಸದಸ್ಯರು
ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ ನೇತೃತ್ವದಲ್ಲಿ ನಡೆದ ಸೈಕಲ್ ವಾರಿಯಲ್ಲಿ ಡಾ.ರವಿ ಚೌಧರಿ, ಡಾ.ಮಹಾಂತೇಶ ಜಾಲಗೇರಿ, ಡಾ.ರಾಜು ಯಲಗೊಂಡ, ಡಾ.ರವಿ ಸಂಖ, ಸೋಮಶೇಖರ ಸ್ವಾಮಿ, ವಿರೇಂದ್ರ ಗುಚ್ಚಟ್ಟಿ, ಅನೀಲ ಧಾರವಾಡಕರ, ಸಿದ್ದು ನಾಯ್ಕೋಡಿ, ಚಂದ್ರಹಾಸ ಬಣ್ಣದ, ಸಂತೋಷ ಸಜ್ಜನ, ಮಹೇಶ ಆಲಮೇಲ, ಮುರುಗೇಶ ಅಲಬಾಳ, ಅಂಬರೀಷ ಭೈರಗೊಂಡ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

