ಉದಯರಶ್ಮಿ ದಿನಪತ್ರಿಕೆ
ಬದಾಮಿ: 2026–27ನೇ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಬಾಗಲಕೋಟೆ ನಗರದ ತುಂಗಳ ವಿಜ್ಞಾನ ಪದವಿ ಪೂರ್ವ ಕಾಲೇಜು ಜು.೧೮ ಬೆಳಿಗ್ಗೆ 10:30ಕ್ಕೆ
“ಅಂಕುರ” ಎಂಬ ಶೀರ್ಷಿಕೆಯಡಿ ಸ್ವಾಗತ ಕಾರ್ಯಕ್ರಮ ನವನಗರದ ಕಲಾಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮಹಾಭಾರತದ ವೀರ ಅಭಿಮನ್ಯುವಿನ*ಸ ಸಾಹಸಮಯ ಜೀವನಗಾಥೆಯನ್ನು ನಾಟಕ ರೂಪದಲ್ಲಿ ಮನಮೋಹಕವಾಗಿ ಪ್ರದರ್ಶಿಸಲಿದ್ದಾರೆಂದು ಕಾಲೇಜ್ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
