Author: editor.udayarashmi@gmail.com

ವಿಜಯಪುರ: ಗ್ರಾಮ ಪಂಚಾಯತಿಗಳಲ್ಲಿ ನಡೆಯುವ ಅವ್ಯವಹಾರ ಹಾಗೂ ಭ್ರಷ್ಟಾಚಾರಗಳನ್ನು ಹಾಗೂ ಅಭಿವೃದ್ದಿ ಕಾಮಗಾರಿಗಳನ್ನು ಅನುಷ್ಟಾನಗೊಳಿಸುವಂತೆ ಮತ್ತು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸಂಗಮೇಶ ಎಸ್. ದಾಶ್ಯಾಳ ಮಾತನಾಡಿ, ಸರಕಾರವು ಗ್ರಾಮ ಪಂಚಾಯತಿಗಳಿಂದ ಗ್ರಾಮಗಳ ಅಭಿವೃದ್ದಿ ಆಗಲೆಂದು ನೈರ್ಮಲೀಕರಣ ಹಾಗೂ ನೀರು ನಿರ್ವಹಣೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ರೂಪಗೊಳಿಸಿತು. ಆದರೆ ಯಾವುದೂ ಸರಿಯಾಗಿ ಅನುಷ್ಠಾನೊಂಡಿಲ್ಲ. ಹೆಚ್.ಕೆ.ಪಾಟೀಲ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ಯ ಸಚಿವರಾಗಿದ್ದಾಗ ಅವರು ಪಂಚಾಯತಿಗಳಲ್ಲಿ ಭ್ರಷ್ಟಾಚಾರ ನಡೆಯಬಾರದು ಎಂಬ ನಿಟ್ಟಿನಲ್ಲಿ ಒಳ್ಳೆಯ ಯೋಜನೆಗಳನ್ನು ಬೆಳಕಿಗೆ ತಂದಿದ್ದರು. ಅದರೆ ಆ ಯೋಜನೆಗಳು ಪೈಲುಗಳಲ್ಲಿ ಹುದುಗಿಕೊಂಡು ಸರಕಾರದ ಪ್ರತಿ ನಿಧಿಗಳು, ಜನರಿಗೆ ಅನ್ಯಾಯ ಮಾಡಿದ್ದಾರೆ. ಇದಕ್ಕೆ ಉನ್ನತ ಶ್ರೇಣಿಯ ಅಧಿಕಾರಿಗಳು, ಜನಪ್ರತಿನಿಧಿಗಳು ತಲೆಕೆಡಿಸಿಕೊಂಡಿಲ್ಲ. ಈ ಮನವಿಗೆ ಜಿಲ್ಲಾಡಳಿತವು ಸ್ಪಂದಿಸದೇ ಹೋದಲ್ಲಿ ಕಾನೂನು ರಿತ್ಯ ಹೋರಾಟ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.ಈ ಸಮಯದಲ್ಲಿ ಪಿಂಟು ಗೊಬ್ಬೂರ, ಮಕದಸ್ ಇನಾಮದಾರ, ರಿಯಾಜ…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ ಸುನೀತಾ ವಿಲಿಯಮ್ಸ್…. ಹೆಸರನ್ನು ಕೇಳಿದೊಡನೆ ಹೌದಲ್ವೇ! ಆಕೆ ಇನ್ನೂ ಬಾಹ್ಯಾಕಾಶದಿಂದ ಮರಳಿ ಬಂದಿಲ್ಲ ಎಂಬ ವಿಚಾರ ಥಟ್ಟನೆ ಮನಸ್ಸಿಗೆ ಬಂದು ಕೊಂಚ ಕಸಿವಿಸಿಯನ್ನು ಉಂಟುಮಾಡುತ್ತದೆ, ಮನ ಕೇಡನ್ನು ಶಂಕಿಸಿ ಗಾಬರಿಗೊಳ್ಳುತ್ತದೆ, ಎದೆ ಬಡಿತ ಹೆಚ್ಚಾಗುತ್ತದೆ. 2003 ಫೆಬ್ರುವರಿ ಒಂದರಂದು ಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಮರಳುತ್ತಿದ್ದ ಸಂದರ್ಭದಲ್ಲಿ ನೌಕೆಯ ಉಷ್ಣ ನಿರೋಧಕ ಕವಚಕ್ಕೆ ಆದ ಹಾನಿಯಿಂದಾಗಿ ಭಾರತೀಯ ಮೂಲದ ಕಲ್ಪನಾ ಚಾವ್ಲಾ ಸೇರಿದಂತೆ ಏಳು ಜನ ಗಗನಯಾನಿಗಳು ಮೃತಪಟ್ಟದ್ದು ನೆನಪಾಗುತ್ತದೆ. ಅದರಲ್ಲೂ ಭಾರತೀಯ ಮೂಲದ ಕಲ್ಪನಾ ಚಾವ್ಲಾಳ ದುರಂತ ಅಂತ್ಯದ ನೆನಪಾಗಿ ಮನ ನಡುಗುತ್ತದೆ. ಮರುಕ್ಷಣವೇ ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಮರಳಿ ಬರಲಿ ಎಂದು ಮನ ಹಾರೈಸುತ್ತದೆ.ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಅವರ ತಂದೆ ಗುಜರಾತ್ ನ ಮೆಹಸಾನಾ ಜಿಲ್ಲೆಯವರು. ಅಮೆರಿಕಾದ ಒಹಾಯೋ ರಾಜ್ಯದಲ್ಲಿ ನೆಲೆಸಿರುವ ಅವರಿಗೆ 1965 ಸೆಪ್ಟೆಂಬರ್ 19 ರಂದು ಸುನೀತಾ ವಿಲಿಯಮ್ಸ್ ಜನಿಸಿದಳು. ತನ್ನ ಸಾಂಪ್ರದಾಯಿಕ…

Read More

ತಿಕೋಟಾ: ತಾಲೂಕು ವ್ಯಾಪ್ತಿಯ ಬಾಬಾನಗರ ಗ್ರಾಮದ ಸರಕಾರಿ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶೇಠ ತಾಪಿದಾಸ ತುಳಸಿದಾಸ ವಜ್ರದಾಸ್ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇವರು ಕೊಡಮಾಡಿದ ಸ್ಮಾರ್ಟಬೋರ್ಡ್ ಉದ್ಘಾಟನಾ ಸಮಾರಂಭ ಜರುಗಿತು.ವಿಶ್ವನಾಥ ಸಿಂದಗಿ ಅವರು ಸ್ಮಾರ್ಟಬೋರ್ಡ್ ಉದ್ಘಾಟನೆ ಮಾಡಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ನಗರ ಪ್ರದೇಶದ ಮಕ್ಕಳ ಹಾಗೇ ಅತ್ಯುತ್ತಮ ಶಿಕ್ಷಣ ಪಡೆಯಲು ಸ್ಮಾರ್ಟಬೋರ್ಡ್ ದೇಣಿಗೆಯಾಗಿ ನೀಡಿರುವುದು ಶ್ಲಾಘನೀಯ ಕಾರ್ಯ. ಇದರ ಸದುಪಯೋಗವನ್ನು ಸರಿಯಾಗಿ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಶಾಲೆಯ ಮುಖ್ಯ ಗುರು ಎಸ್.ಐ.ಬಾಗಲಕೋಟೆ ಅವರು ಪ್ರಸ್ತಾವಿಕವಾಗಿ ಮಾತನಾಡಿದರು, ಎ.ಎಮ್.ಚಮಕೇರಿ ಶಿಕ್ಷಕರು ಗೌರವ ಸಮರ್ಪಣೆ ನಡೆಸಿಕೊಟ್ಟರು, ಜೆ.ಎನ್.ಬಾಗಲಕೋಟೆ ಅವರು ವಂದಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಸಾಹಿರಾಬಾನು ಏಳಾಪುರ ಅವರು ವಹಿಸಿಕೊಂಡಿದ್ದರು.ವೇದಿಕೆಯ ಮೇಲೆ ಎಸ್.ಐ ರುದ್ರಗೌಡರ, ಎಸ್.ಬಿ.ಬಿರಾದಾರ, ಬಿ.ಎಸ್.ಕುಮಟಗಿ, ಸೇರಿದಂತೆ ಎಸ್.ಡಿ.ಎಂ.ಸಿ & ಗ್ರಾಮ ಪಂಚಾಯತಿ ಸದಸ್ಯರು, ಶಾಲಾ ಶಿಕ್ಷಕರು, ಮಕ್ಕಳು ಹಾಜರಿದ್ದರು.

Read More

ಚಡಚಣ: ಜನಪದ ಸಂಸ್ಕೃತಿ ಅರಳುವುದು ಸಂದರ್ಭಾನುಸಾರ, ತರಬೇತಿಯಿಂದಲ್ಲ. ಒಬ್ಬ ವ್ಯಕ್ತಿ ಶಕ್ತಿವಂತನೊ, ಕಲಾವಿದನೋ, ಜಾಣನೋ, ಜನಸೇವಕನೋ ಎಂದು ಗೊತ್ತಾಗುವುದು ಅವನಿಗೆಂದೆ ನಿರ್ದಿಷ್ಟವಾಗಿರುವ ಸಂದರ್ಭದಲ್ಲಿ ಮಾತ್ರ. ಶಿಷ್ಟ ಸಮಾಜದಂತೆ ಜನಪದ ಸಮಾಜದಲ್ಲಿ ಕಲಾವಿದ, ಪೈಲ್‌ವಾನ್, ಸಮಾಜ ಸುಧಾರಕ ಎಂದು ಪ್ರತ್ಯೇಕ ಇರುವುದಿಲ್ಲ. ದಿನನಿತ್ಯದ ಅವನ ಕೆಲಸದ ಜೊತೆಯಲ್ಲೇ ಅವನ ವಿಶೇಷವೆಂಬ ನೈಪುಣ್ಯ ಇರುತ್ತದೆ. ಕಲಾವಿದನಂತೆಯೆ ಜನಪದ ವೈದ್ಯರೂ ಕೂಡಾ ಸಂದರ್ಭಾನುಸಾರವಾಗಿ ರೋಗಿಯನ್ನು ಉಪಚರಿಸುತ್ತಿದ್ದರು. ಅವರು ಪ್ರತ್ಯೇಕ ಕಾಣಿಸಿಕೊಳ್ಳುವಿಕೆಯಲ್ಲಿ ಸಿಗುವುದಿಲ್ಲ. ಜನಪದ ದೇವತೆಗಳ ಪೂಜಾರಿಗಳನ್ನು ಗಮನಿಸಿ. ಅವರು ಶಿಷ್ಟ ದೇವತೆಗಳ ಪೂಜಾರಿ ಅಥವಾ ಪುರೋಹಿತರ ಥರ ಕಾಣಿಸುವುದಿಲ್ಲ. ಇಂಥವರು ಸಮಾಜದ ಹೊರಗೆ ಇಲ್ಲ, ಹೊರೆಯೂ ಅಲ್ಲ ಎಂದು ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ. ಎಸ್. ಮಾಗಣಗೇರಿ ಅಭಿಪ್ರಾಯಪಟ್ಟರು.ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾನಪದ ಸಂಸ್ಕೃತಿಯ ಪ್ರಮುಖ ಅಂಶವೆಂದರೆ ಮಾತನಾಡುವ ಪದ ಅಥವಾ ಭಾಷೆ, ಸಮಾಜದೊಳಗಿನ ಪ್ರಮುಖ…

Read More

ಬಸವನಬಾಗೇವಾಡಿ: ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಲು ಸರ್ಕಾರ ಪ್ರತಿಭಾ ಕಾರಂಜಿ ಎಂಬ ಕಾರ್ಯಕ್ರಮ ಜಾರಿಗೆ ತಂದಿದೆ. ಈ ಕಾರ್ಯಕ್ರಮದ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ತಾಲೂಕು, ಜಿಲ್ಲಾ, ರಾಜ್ಯ ಮಟ್ಟಕ್ಕೆ ಹೋಗುವಂತೆ ನಿರ್ಣಾಯಕರು ತಮ್ಮ ನಿರ್ಣಯ ನೀಡಬೇಕೆಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಹೇಳಿದರು.ತಾಲೂಕಿನ ಅಂಬಳೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಪಂಚಾಯತ, ಕ್ಷೇತ್ರಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಾಧಿಕಾರಿಗಳ ಕಾರ್ಯಾಲಯ ಮತ್ತು ನರಸಲಗಿ ಸಮೂಹ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನರಸಲಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಶಿಕ್ಷಕ ಬಾಂಧವರು, ಪಾಲಕರು ಸೂಕ್ತ ಅವಕಾಶ,ಪ್ರೇರಣೆ ನೀಡುವದು ಅಗತ್ಯವಿದೆ ಎಂದ ಅವರು, ಸರ್ಕಾರ ಶಿಕ್ಷಣಕ್ಕೆ ಬಹಳ ಒತ್ತು ನೀಡುತ್ತಿದೆ.ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ,ಶೂ-ಸಾಕ್ಸ್, ಬಟ್ಟೆ , ಬಿಸಿಯೂಟ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಇದರ ಸದುಪಯೋಗವಾಗುವ ಮೂಲಕ…

Read More

– ಬಸವರಾಜ ನಂದಿಹಾಳಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ)ದೇವರ ಐತಿಹಾಸಿಕ ಜಾತ್ರಾಮಹೋತ್ಸವ ಆ.೨೬ ರಿಂದ ೩೦ ರವರೆಗೆ ಐದು ದಿನಗಳ ಕಾಲ ನಡೆಯುವ ಹಿನ್ನೆಲೆಯಲ್ಲಿ ಬಸವೇಶ್ವರ ದೇವಾಲಯದ ಅಂತರಾಷ್ಟ್ರೀಯ ಶಾಲೆಯ ಪಕ್ಕದಲ್ಲಿರುವ ಸ್ಥಳೀಯ ಗಣ್ಯ ವ್ಯಾಪಾರಸ್ಥ ಅನಿಲ(ಭರತು) ಅಗರವಾಲ ಅವರ ಜಮೀನಿನಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ವಿವಿಧ ಮಳಿಗೆಗಳ ವ್ಯಾಪಾರಸ್ಥರು ಗುರುವಾರ ತಮ್ಮ ತಮ್ಮ ಮಳಿಗೆಗಳನ್ನು ಹಾಕಲು ಭರದಿಂದ ಸಿದ್ಧತೆ ಕೈಗೊಂಡಿದ್ದು ಕಂಡುಬಂದಿತ್ತು.ಈ ಜಾಗೆಯಲ್ಲಿ ಮಳಿಗೆಗಳಿಗೆ ಜನರು ಬರಲು ವಿವಿಧೆಡೆ ರಸ್ತೆ ವ್ಯವಸ್ಥೆ ಮಾಡಲಾಗಿದೆ. ಜಮೀನಿನಲ್ಲಿ ಗರಸು ಹಾಕಿ ರಸ್ತೆ ಮಾಡಲಾಗಿದೆ. ಇದರಿಂದಾಗಿ ಮಳೆ ಬಂದರೂ ರಾಡಿಯಾಗುವ ಪ್ರಮೇಯ ಇರುವುದಿಲ್ಲ. ಸುವ್ಯವಸ್ಥಿತ ಮಳಿಗೆಗಳನ್ನು ಹಾಕಲು ವ್ಯವಸ್ಥೆ ಮಾಡಲಾಗಿದೆ.ಬಸವೇಶ್ವರ ಜಾತ್ರಾ ಉತ್ಸವ ಸಮಿತಿ, ಬಸವೇಶ್ವರ ಸೇವಾ ಉತ್ಸವ ಸಮಿತಿ ಪದಾಧಿಕಾರಿಗಳು ಜಾತ್ರೆಗೆ ಹಾಕಲಾಗುವ ತಾತ್ಕಲಿಕ ಮಳಿಗೆಗಳಿಗೆ ಭರತು ಅಗರವಾಲ ಜಮೀನಿನಲ್ಲಿ ಮಳಿಗೆ ಹಾಕುವವರಿಗೆ ಹಂಚಿಕೆ ಮಾಡಿದ್ದರಿಂದಾಗಿ ತಮ್ಮ ತಮ್ಮ ಮಳಿಗೆಗಳನ್ನು ಹಾಕುವ ಸಿದ್ಧತೆ ಕೈಗೊಂಡಿದ್ದಾರೆ. ಮಧ್ಯಾನ್ಹ, ಸಂಜೆ ಬಂದ ಮಳೆಯು ಮಳಿಗೆ ಹಾಕಲು ಅವಕಾಶ…

Read More

ಬಸವನಬಾಗೇವಾಡಿ: ಪಟ್ಟಣದ ಉತ್ತರಾದಿ ಮಠದಲ್ಲಿ ಕಲಿಯುಗದ ಕಾಮಧೇನು, ಕಲ್ಪವೃಕ್ಷ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವದಂಗವಾಗಿ ಗುರುವಾರ ಉತ್ತರಾರಾಧನೆ ನಿಮಿತ್ತ ಬೆಳಗ್ಗೆ ಸುಪ್ರಭಾತ, ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಮಹಾಪಂಚಾಮೃತ ಅಭಿಷೇಕ, ಬೃಂದಾನವನದ ಅಲಂಕಾರ ಪೂಜೆ, ಸತ್ಯನಾರಾಯಣ ಪೂಜೆ, ತೀರ್ಥ ಪ್ರಸಾದ ಜರುಗಿತು. ಮಧ್ಯಾನ್ಹ ಸಂಭ್ರಮದಿಂದ ಪಲ್ಲಕ್ಕಿ ಉತ್ಸವ ಜರುಗಿತು.ಪೂಜಾ ಕಾರ್ಯಕ್ರಮದಲ್ಲಿ ವಾದಿರಾಜಆಚಾರ್ಯ ಯಜುರ್ವೇದಿ, ರಾಮಾಚಾರ್ ಜೋಶಿ, ವಸಂತಆಚಾರ್ಯ ಇಂಗಳೇಶ್ವರ, ವಸಂತ ಕುಲಕರ್ಣಿ, ಶ್ರೀಧರಆಚಾರ್ಯ ಚಿಮ್ಮಲಗಿ, ಆನಂದಆಚಾರ್ಯ ಚಿಮ್ಮಲಗಿ, ವಿಠ್ಠಲಆಚಾರ್ ಜೋಶಿ, ರಾಮಾಚಾರಿ ಯಜುರ್ವೇದಿ, ಯಲಗೂರೇಶಆಚಾರ್ಯ ಯಜುರ್ವೇದಿ, ಅನಂತ ಕುಲಕರ್ಣಿ, ಅಜಿತ ಉಮರ್ಜಿ, ನಾರಾಯಣ ಕುಲಕರ್ಣಿ ಇತರರು ಇದ್ದರು.

Read More

ಬಸವನಬಾಗೇವಾಡಿ: ಪಟ್ಟಣದ ಗೌರಿ-ಶಂಕರ ಗುಡಿ ಹತ್ತಿರವಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೂರು ದಿನಗಳ ಕಾಲ ರಾಘವೇಂದ್ರ ಸ್ವಾಮಿಗಳ ೩೫೩ ನೇ ರಾಯರ ಆರಾಧನಾ ಮಹೋತ್ಸವ ಸಂಭ್ರಮದಿಂದ ಜರುಗಿತು.ಮೊದಲ ದಿನ ಪೂರ್ವಾ ಆರಾಧನೆ, ಎರಡನೇ ದಿನ ಮಧ್ಯಾ ಆರಾಧನೆ, ಕೊನೆ ದಿನವಾದ ಗುರುವಾರ ಉತ್ತಾರಾರಾಧನೆಯಂಗವಾಗಿ ಬೆಳಗ್ಗೆ ಅಷ್ಟೋತ್ತರ, ರಾಯರ ಬೃಂದಾವನ ಅಲಂಕಾರ ಪೂಜೆ, ಸತ್ಯನಾರಾಯಣ ಪೂಜೆ, ಮಧ್ಯಾನ್ಹ ರಥೋತ್ಸವ, ಮಹಾಪ್ರಸಾದ, ಸಂಜೆ ಪಲ್ಲಕ್ಕಿ ಉತ್ಸವ, ಪ್ರವಚನ ಭಜನೆ ಭಕ್ತಿಪೂರ್ವಕ ಸಡಗರ, ಸಂಭ್ರಮದಿಂದ ಜರುಗಿತು.ರಾಯರ ರಥೋತ್ಸವದಲ್ಲಿ ಭಜನಾ ಪದಗಳನ್ನು ಭಕ್ತರು ಸುಶ್ರಾವ್ಯವಾಗಿ ಹಾಡಿದರು. ಭಜನಾ ಪದಗಳಿಗೆ ನೃತ್ಯ ಸೇವೆ ಮಾಡುವ ಮೂಲಕ ರಾಯರಿಗೆ ಭಕ್ತಿ ಸಮರ್ಪಿಸಿದರು.ರಥೋತ್ಸವದಲ್ಲಿ ರಾಯರ ಮಠದ ಅಧ್ಯಕ್ಷ ಅನಿಲ ಹಣಮಂತರಾಯ ಕುಲಕರ್ಣಿ, ಮಧುಕರ ಚೌಧರಿ, ಮುಕುಂದ ದೇಶಪಾಂಡೆ, ಅನಿಲ ದೇಶಪಾಂಡೆ, ವಿಠ್ಠಲ ಕುಲಕರ್ಣಿ, ಶಿರಿಷ್ ಇಂಗಳೇಶ್ವರ, ಬಂಡಾಚಾರ್ಯ ಇಂಗಳೇಶ್ವರ, ವಿಠ್ಠಲ ದೇಶಪಾಂಡೆ, ರಮೇಶ ಇನಾಮದಾರ,ವಿನಾಯಕ ದೇಶಪಾಂಡೆ, ಸಂಜೀವ ದೇಶಪಾಂಡೆ, ಸಂಜೀವ ಕುಲಕರ್ಣಿ, ರವಿಚಂದ್ರ ಜೋಶಿ, ಭಾರತಿ ಕುಲಕರ್ಣಿ, ಪುಷ್ಪಾ ಕುಲಕರ್ಣಿ, ನಾಗವೇಣಿ…

Read More

ವಿಜಯಪುರ: ವಿಜಯಪುರ ನಗರ ವ್ಯಾಪ್ತಿಯಲ್ಲಿನ ವಾರ್ಡ ಸಂ.೧ ರಿಂದ ೩೫ ರವರೆಗಿನ ಖಾಸಗಿ ಮಾಲೀಕತ್ವದ ಖಾಲಿ ನಿವೇಶನಗಳ ಮಾಲೀಕರು-ಸಾರ್ವಜನಿಕರು ತಮ್ಮ ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.ಖಾಲಿ ನಿವೇಶನಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮಾಲೀಕರ ಜವಾಬ್ದಾರಿಯಾಗಿರುತ್ತದೆ. ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ ೧೯೭೬ರ ಕಲಂ ೨೫೬, ೨೫೭, ೩೩೨, ೩೩೩, ೩೩೪ ಮತ್ತು ೩೩೫ರಡಿಯಲ್ಲಿ ಖಾಲಿ ನಿವೇಶನಗಳಲ್ಲಿ ಕಸದ ರಾಶಿ, ಕಟ್ಟಡ ಭಗ್ನಾವಶೇಷಗಳನ್ನು ಸುರಿಯುವುದರಿಂದ ನಿವೇಶನಗಳಲ್ಲಿ ಕಸ ಗಿಡಕಂಟಿ ಬೆಳೆದು ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯಾಗುತ್ತದೆ ಹಾಗೂ ಸ್ವಚ್ಛ ಪರಿಸರಕ್ಕೆ ಧಕ್ಕೆ ಉಂಟಾಗುತ್ತದೆ. ಈ ಕುರಿತು ಪಾಲಿಕೆಯಿಂದ ಹಲವು ಬಾರಿ ನಿವೇಶನ ಮಾಲೀಕರಿಗೆ ಸೂಚನೆ ನೀಡಲಾಗಿದ್ದರೂ ಸಹ ಆದೇಶ ಪಾಲನೆ ಮಾಡದೇ, ಶುಚಿತ್ವ ಕಾಪಾಡಿಕೊಳ್ಳದಿರುವ ಕುರಿತು ಸಾಕಷ್ಟು ದೂರುಗಳು ಪಾಲಿಕೆಗೆ ಸಲ್ಲಿಕೆಯಾಗಿವೆ ಎಂದು ಅವರು ತಿಳಿಸಿದ್ದಾರೆ.ಪಾಲಿಕೆ ವತಿಯಿಂದ ವಾರ್ಡವಾರು ಮುಖ್ಯ ರಸ್ತೆಗಳ ಸ್ವಚ್ಛತೆ, ವೃತ್ತಗಳ ಸ್ವಚ್ಛತೆ, ಹಾಗೂ ವಾರ್ಡಗಳಲ್ಲಿನ ಕಸದ ರಾಶಿಗಳನ್ನು ಸ್ವಚ್ಛಗೊಳಿಸುವ ಕಾರ್ಯಗಳನ್ನು ಕೈಗೊಳ್ಳಲಾಗುವುದು. ನಗರದ ಸಾರ್ವಜನಿಕರು ವರ್ತಕರು,…

Read More