Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವಿಜಯಪುರ ತಾಲೂಕಿನ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗಕ್ಕೆ ಸಂಬಂಧಿಸಿದಂತೆ ಏ.೧೮ರಂದು ಮಧ್ಯಾಹ್ನ ೩.೩೦ಗಂಟೆಗೆ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗದ ಕಛೇರಿಯಲ್ಲಿ ರೈತರು ಹಾಗೂ ಗ್ರಾಹಕರೊಂದಿಗೆ ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕೆ ಗ್ರಾಹಕರ ಸಂವಾದ ಸಭೆ ಆಯೋಜಿಸಲಾಗಿದೆ.ಹೆಸ್ಕಾಂ ಗ್ರಾಮೀಣ ಉಪ ವಿಭಾಗದ ಕಛೇರಿಗೆ ಒಳಪಡುವ ಗ್ರಾಮಗಳ ಗ್ರಾಹಕರು ಹಾಗೂ ಸಾರ್ವಜನಿಕರು ಸಂವಾದ ಸಭೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿಜಯಪುರ ಗ್ರಾಮೀಣ ಉಪ ವಿಭಾಗದ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಅಕ್ರಮ ಕಟ್ಟಡ ಆರೋಪ | ಹುಣಸೂರು ಎಸಿ ಕಾವ್ಯರಾಣಿ ಸೂಚನೆ ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ತಾಲೂಕಿನ ಮೈಸೂರು ಮಾನಂದವಾಡಿ ರಸ್ತೆ ಮಾರ್ಗ ಬರುವ ಮಗ್ಗೆ- ಮಳಲಿ ಗ್ರಾಮಗಳ ಮಧ್ಯೆ ನಿರ್ಮಾಣವಾಗುತ್ತಿರುವ ಹೋಟೆಲ್ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಹುಣಸೂರು ಉಪವಿಭಾಗಧಿಕಾರಿ ಕಾವ್ಯರಾಣಿ ತಾಕೀತು ಮಾಡಿದ್ದಾರೆ.ಸಾರ್ವಜನಿಕರಿಂದ ದೂರುಗಳ ಕೇಳಿಬಂದ ಹಿನ್ನೆಲೆ ಅಧಿಕಾರಿಗಳ ಜೊತೆ ಗುರುವಾರ ಸ್ಥಳಕ್ಕೆ ಬಂದ ಕಾವ್ಯರಾಣಿ. ಕಟ್ಟಡ ಕಾಮಗಾರಿ ಪರಿಶೀಲಿಸಿ, ಕೂಡಲೇ ಕಾಮಗಾರಿ ಸ್ಥಗಿತಕ್ಕೆ ಆದೇಶಿಸಿದರು. ಕಟ್ಟಡ ಮಾಲೀಕ ಲಕ್ಷ್ಮಿಪ್ರಸಾದ್ ಎಂಬುವರಿಗೆ ಕರೆಮಾಡಿ, ತತ್ ಕ್ಷಣವೇ ಕಾಮಗಾರಿ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಇದು ಸೂಕ್ಷ್ಮಪರಿಸರ ವಲಯ ವ್ಯಾಪ್ತಿಗೆ ಒಳಪಟ್ಟಿದ್ದು, ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಈ ಸಂಬಂಧ ಎರಡು ಬಾರಿ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಅಷ್ಟಾದರೂ ಕೂಡ ಕಾಮಗಾರಿ ಮುಂದುವರೆಸಿರುವುದು ಕಾನೂನು ಬಾಹಿರ. ಕಟ್ಟಡ ಕಾಮಗಾರಿ ಸಂಬಂಧ ದಾಖಲೆಗಳು ಇದ್ದರೆ ಪ್ರಾದೇಶಿಕ ಆಯುಕ್ತರ ಕಛೇರಿಯಿಂದ ಅನುಮತಿ ಪಡೆದು ಕಟ್ಟಡ ಕಾಮಗಾರಿ ಮುಂದುವರೆಸಿ ಎಂದು ಸೂಚನೆ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಮಿರಗಿ ಹಳ್ಳ ಮತ್ತು ಗೋಳಸಾರ ಗ್ರಾಮಕ್ಕೆ ಕೃಷ್ಣಾ ಕಾಲುವೆ ಮುಖಾಂತರ ನೀರು ಹರಿಸಿ ನೀರಿನ ತೊಂದರೆ ತಪ್ಪಿಸಬೇಕೆಂದು ಆಗ್ರಹಿಸಿ ಇಂದು ಗ್ರಾಮದ ರೈತರು ಆಡಳಿತ ಸೌಧ ಎದುರು ಪ್ರತಿಭಟನೆ ನಡೆಸಿದರು.ಕರವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ ಮಾತನಾಡಿ ಮಿರಗಿ ಹಳ್ಳಕ್ಕೆ ಕೃಷ್ಣಾ ಕಾಲುವೆ ನೀರು ಹರಿಸಿದರೆ ಮಿರಗಿ, ಗೋಳಸಾರ, ನಾದ ಸಂಗೋಗಿ, ಶಿರಶ್ಯಾಡ ಈ ಎಲ್ಲ ಗ್ರಾ.ಪಂ ಗಳಿಗೆ ಕುಡಿಯುವ ನೀರಿನ ಅನುಕೂಲವಾಗುತ್ತದೆ ಕಾರಣ ಕಾಲುವೆ ಮುಖಾಂತರ ಹಳ್ಳಕ್ಕೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.ರೈತ ಮುಖಂಡ ಶ್ರೀಶೈಲ ಮದರಿ ಮಾತನಾಡಿದರು.ಪ್ರತಿಭಟನೆಯಲ್ಲಿ ಬಸವರಾಜ ಖಸ್ಕಿ, ಭೀಮಣ್ಣ ಅವಟಿ, ಬಸವರಾಜ ಭಂಥನಾಳ, ಶಿವಲಿಂಗಪ್ಪ ರೋಡಗಿ, ಯಲ್ಲಪ್ಪ ಗಾಳಿ, ಶಿವಾನಂದ ಕಲಶೆಟ್ಟಿ, ರವಿಕಾಂತ ರೋಡಗಿ, ಭೀಮರಾಯ ಹಳ್ಳಿ, ಕಾಂತಪ್ಪ ಗಡೆಕರ, ಸುರೇಸ ಪಾಟೀಲ, ನಾಮದೇವ ಸಾಳುಂಕೆ, ಅಶೋಕ ಆನೂರ, ಶಿವಲಿಂಗಪ್ಪ ರೋಡಗಿ ಮತ್ತಿತರಿದ್ದರು.ತಹಸೀಲ್ದಾರ ಬಿ.ಎಸ್.ಕಡಕಬಾವಿ ಇವರಿಗೆ ಮನವಿ ಸಲ್ಲಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರದ ಉಪನೋಂದಣಾಧಿಕಾರಿಗಳ ಕಾರ್ಯಾಲಯದ ಅಧಿಕಾರಿ ಅಂಜಲಿ ಸಿ. ಅವರ ವರ್ತನೆಗೆ ಸಾರ್ವಜನಿಕರು ಬೇಸತ್ತಿದ್ದಾರೆ.ಸಾರ್ವಜನಿಕರು ತಮ್ಮ ಖಾತೆ ಬದಲಾವಣೆ ಸೇರಿದಂತೆ ಇನ್ನಿತರ ಕಾರ್ಯಕ್ಕಾಗಿ ಉಪನೋಂದಣಾಧಿಕಾರಿಗಳ ಬಳಿ ಹೋದರೆ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಸಾಕಷ್ಟು ನಾಗರಿಕರು ಆರೋಪಿಸಿದ್ದಾರೆ.ಬುಧವಾರ ಸೊನಕನಳ್ಳಿ ಗ್ರಾಮದ ಭೀಮಾಶಂಕರ ವಿಲಾಸ ವಾಲೀಕಾರ ಎಂಬ ರೈತ ತಮ್ಮ ಜಮೀನಿನ ಪಹಣಿಯಲ್ಲಿ ಭೋಜಾ ದಾಖಲು ಮಾಡಿಸಲು ಆನ್‌ಲೈನ್ ಅಪ್ಲಿಕೇಶನ್ ಹಾಕುವ ಸಂದರ್ಭದಲ್ಲಿ ಗ್ರಾಮದ ಹೆಸರು ಸೊನಕನಹಳ್ಳಿ ಬದಲಾಗಿ ಬೆನಕನಹಳ್ಳಿ ಎಂದು ದಾಖಲಾಗಿತ್ತು. ಅದನ್ನು ತಿದ್ದುಪಡಿ ಮಾಡಲು ಉಪನೋಂದಣಾಧಿಕಾರಿಗಳ ಕಚೇರಿಗೆ ತೆರಳಿ ಅಲ್ಲಿದ್ದ ಉಪನೋಂದಣಾಧಿಕಾರಿ ಅಂಜಲಿ ಸಿ ಅವರನ್ನು ಆನ್‌ಲೈನ್ ಹಾಕುವಾಗ ಈ ತಪ್ಪಾಗಿದೆ ಇದಕ್ಕೆ ತಿದ್ದುಪಡಿ ಹೇಗೆ ಮಾಡಬೇಕೆಂದು ಕೇಳಿದಾಗ ಆತನೊಂದಿಗೆ ಅಸಭ್ಯ, ಅಶ್ಲೀಲ ಪದಗಳಿಂದ ಮಾತನಾಡಿದ್ದಾರೆ. ಅಲ್ಲದೆ ಆನ್‌ಲೈನ್ ಅಪ್ಲಿಕೇಶನ್ ಹಾಕಿದ್ದು ಆನ್‌ಲೈನ್ ಅಂಗಡಿಯವನೂ ಸಹ ಕಚೇರಿಗೆ ತೆರಳಿ ಹೀಗೆ ತಪ್ಪಾಗಿದೆ ಮೇಡಂ ಅದನ್ನು ತಿದ್ದುಪಡಿ ಮಾಡಲು ನಿಮ್ಮಲ್ಲಿ ಅವಕಾಶವಿದೆ ಮಾಡಿಕೊಡಿ ಎಂದು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಇಂದು ಕೃಷಿ ಗೊಬ್ಬರ ದಾಸ್ತಾನು ಮಳಿಗೆಗಳಿಗೆ ಕೃಷಿ ಉಪ ನಿರ್ದೇಶಕ ಚಂದ್ರಕಾAತ ಪವಾರ ಇವರ ನೇತೃತ್ವದಲ್ಲಿ ಭೇಟಿ ನೀಡಿದರು.ಎ.ಸಿ.ಧನಶೆಟ್ಟಿ, ಶಾಂತು ಧನಶೆಟ್ಟಿ ಮತ್ತು ಪ್ರಕಾಸಗೌಡ ಬಿರಾದಾರ ಇವರ ಮಳಿಗೆಗಳಿಗೆ ಭೇಟಿ ನೀಡಿದರು.ತಾಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ ಸಂಗ್ರಹವಿದೆ. ಸರಿಯಾದ ದರಕ್ಕೆ ಗೊಬ್ಬರ ನೀಡಬೇಕು. ದರ ಪಟ್ಟಿ ಪ್ರಕಟಿಸಬೇಕು. ಅವಧಿ ಮುಗಿದ ಗೊಬ್ಬರ ನೀಡಬಾರದು. ಅಂತಹ ಪ್ರಕರಣ ರೈತರಿಂದ ಬಂದರೆ ಕ್ರಮ ಕೈಕೊಳ್ಳಲಾಗುವದು.ಸರಕಾರ ನಿಗದಿ ಪಡಿಸಿದ ದರಕ್ಕೆ ಕೃಷಿ ಪರಿಕರ ನೀಡಬೇಕು. ಸ್ಟಾಕು ಲಗ್ತಿಸಬೇಕು ಎಂದರು.ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ, ಕೃಷಿ ಅಧಿಕಾರಿ ಮಹಾಂತೇಶ ಶೆಟ್ಟೆನ್ನವರ ಮತ್ತಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆಗೆ ಒಂದು ಟಿಎಂಸಿ ನೀರು ಹರಿಯ ಬಿಡಲಾಗಿದೆ ಎಂದು ಇಂಡಿಯ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ತಿಳಿಸಿದ್ದಾರೆ.ವಿಭಾಗೀಯ ಆಯುಕ್ತರು ಕಲಬುರಗಿ ವಿಭಾಗ ಇವರು ಬೆಳಗಾವಿ ವಿಭಾಗೀಯ ಆಯುಕ್ತರ ಕೋರಿಯ ಮೇರೆಗೆ ನಾರಾಯಣ ಜಲಾಶಯದಿಂದ ಒಂದು ಟಿ.ಎಂ.ಸಿ ನೀರನ್ನು ಹರಿಸಿದ್ದಾರೆ.ಕೆಬಿಜೆಎನ್‌ಎಲ್ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ, ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು ಮತ್ತು ನಾಗಠಾಣದ ಶಾಸಕ ವಿಠ್ಠಲ ಕಟಕದೊಂಡ ಇವರ ಪ್ರಯತ್ನದಿಂದ ನೀರು ಪಡೆಯಲಾಗಿದೆ.ನೀರು ಈಗಾಗಲೇ ಏ. ೧೧ ರಿಂದ ಕೃಷ್ಣಾ ಕಾಲುವೆಯಲ್ಲಿ ಹರಿಯುತ್ತಿದ್ದು ಒಂದು ಟಿಎಂಸಿ ಹೆಚ್ಚುವರಿ ನೀರಿನಿಂದ ಏ. ೨೩ ರ ವರೆಗೆ ನೀರು ಕಾಲುವೆಯಲ್ಲಿ ಹರಿಯುತ್ತದೆ ಮತ್ತು ಈ ನೀರು ಕೇವಲ ಕುಡಿಯಲು ಮತ್ತು ಜನ ಜಾನುವಾರುಗಳು ಮಾತ್ರ ಉಪಯೋಗಿಸಲು ತಿಳಿಸಿದ್ದಾರೆ.ಇಂದು ಕೃಷ್ಣಾ ಕಾಲುವೆ ಮೇಲೆ ಕಂದಾಯ ಉಪವಿಬಾಗಾಧಿಕಾರಿಗಳು ಬೇಟಿ ನೀಡಿ ಸಾಲೋಟಗಿಯಿಂದ ಮಾವಿನಹಳ್ಳಿಯ ವರೆಗೆ ಕಾಲುವೆಯನ್ನು ವಿಕ್ಷಿಸಿದರು.ಇಒ ಭೀಮಾಶಂಕರ ಕನ್ನೂರ ಹೆಸ್ಕಾಂ ಎಇಇ ಎಸ್.ಆರ್.ಮೆಂಡೆಗಾರ, ಕೆಬಿಜೆಎನ್‌ಎಲ್ ಭೀರಪ್ಪ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಚವಡಿಹಾಳ ಗ್ರಾಮದ ಶ್ರೀ ಭಾಗ್ಯವಂತಿ ಪದವಿಪೂರ್ವ ಮಹಾವಿದ್ಯಾಲಯದ ಕಲಾ ವಿಭಾಗದ ವಿದ್ಯಾರ್ಥಿನಿ ಸರಸ್ವತಿ ಶಿವರಾಜ ನಿಡೋಣಿ ಪಿಯು ಪರೀಕ್ಷೆಯಲ್ಲಿ ೫೮೮ ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಮತ್ತು ಜಿಲ್ಲೆಗೆ ೮ ನೆಯ ಸ್ಥಾನ ಪಡೆದಿದ್ದಾಳೆ.ಅವಳ ತಂದೆ ಶಿವರಾಯ ಮತ್ತು ತಾಯಿ ವಿಮಲಾ ಇಬ್ಬರೂ ಬೇರೆ ರೈತರ ಹೊಲದಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇರಲು ಸ್ವಂತ ಮನೆಯಿಲ್ಲ. ಮನೆಯಲ್ಲಿ ಕಡು ಬಡತನ, ಸರಸ್ವತಿ ಶಾಲೆಗೆ ಚಪ್ಪಲ ಇಲ್ಲದೆ ಹೋಗಿರುವ ಪ್ರಸಂಗ ಹೆಚ್ಚು.ಶಾಲೆ ತೋಟದಿಂದ ಮೂರು ಕಿಮಿ ದೂರದಲ್ಲಿದೆ. ಪ್ರತಿದಿನ ನಡೆದುಕೊಂಡು ಹೋಗುತ್ತಿದ್ದಳು.ಬೆಳಗ್ಗೆ ಶಾಲೆ ೯ ಗಂಟೆಯಿಂದ ೫ ಗಂಟೆಯ ವರೆಗೆ ನಂತರ ೫ ಗಂಟೆಯಿಂದ ೮ ಗಂಟೆಯ ವರೆಗೆ ವಿಶೇಷ ತರಗತಿಗೆ ಹೋಗುತ್ತಿದ್ದಳು. ನಂತರ ಮನೆಯಲ್ಲಿ ಬಂದು ೧೦ ಗಂಟೆಯ ವರೆಯ ಅಭ್ಯಾಸ ಮಾಡುತ್ತಿದ್ದಳು. ಹೊಲದಲ್ಲಿ ವಿದ್ಯುತ್ ೧೦ ಗಂಟೆಯ ವರೆಗೆ ಮಾತ್ರ ಇರುವದರಿಂದ ೧೦ ಗಂಟೆಗೆ ಮಲಗಿ ನಂತರ ಬೆಳಿಗ್ಗೆ ೫…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಶೈಕ್ಷಣಿಕ ವಲಯ ವ್ಯಾಪ್ತಿಗೊಳಪಟ್ಟ ಸಾಯಿ ಖಾಸಗಿ ಪ್ರೌಢಶಾಲೆಯಲ್ಲಿ ಎಐ ಟೀಚರ್ ಗಮನ ಸೆಳೆಯುತ್ತಿದೆ.ತಾಲೂಕಿನಲ್ಲಿಯೇ ಖಾಸಗಿ ಶಾಲೆ ವಿದ್ಯಾರ್ಥಿಗಳ ಬೋಧನೆಗೆ ಎಐ ಟೀಚರ್ ಆದಿತಿ ಯನ್ನು ಪರಿಚಯಿಸುವ ದಿಟ್ಟ ಹೆಜ್ಜೆ ಇಟ್ಟಿದೆ.ಸಾಯಿ ಶಾಲೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ ಶಿಕ್ಷಕಿ ಕಾರ್ಯ ನಿರ್ವಹಣೆ ಸಜ್ಜಾಗಿದ್ದು ಏ.೧೨ ರಂದು ವಿದ್ಯುಕ್ತ ಚಾಲನೆ ನೀಡಲಾಗಿದೆ.ನೀತಿ ಆಯೋಗ ಪ್ರಾರಂಭಿಸಿದ ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆಯಡಿ ನಿರ್ಮಿಸಿಲಾದ ಆದಿತಿ ಸಾಂಪ್ರದಾಯಿಕ ಬೋಧನಾ ವಿಧಾನಗಳನ್ನು ಕ್ರಾಂತಿಗೊಳಿಸುವ ಗುರಿ ಹೊಂದಿರುವ ಹಲವಾರು ವೈಶಿಷ್ಟಗಳನ್ನು ಹೊಂದಿದೆ. ೨೦ ಭಾಷೆಗಳನ್ನು ಮಾತನಾಡುವ ಮತ್ತು ಪ್ರಶ್ನೆಗಳನ್ನು ನಿಭಾಯಿಸುವ ಸಾಮಥ್ಯದೊಂದಿಗೆ ಆದಿತಿ ಪ್ರತಿ ವಿದ್ಯಾರ್ಥಿಗೆ ಕಲಿಕೆಯ ಅನುಭವ ನೀಡುತ್ತದೆ. ಸೀರೆಯಲ್ಲಿ ಕಂಗೊಳಿಸಿದ ಆದಿತಿ ಎಐ ಶಿಕ್ಷಕಿ ವಿದ್ಯಾರ್ಥಿಗಳ ಸಂವಾದ ನಡೆಸುತ್ತದೆ. ಕೈ ಕುಲುಕುತ್ತದೆ. ವಿದ್ಯಾರ್ಥಿಗಳಿಗೆ ಬಹುಬೇಗ ಇಷ್ಟವಾಗುತ್ತದೆ. ಮಗು ಯಾವದೇ ಪ್ರಶ್ನೆ ಕೇಳಿದರೂ ಎಐ ಶಿಕ್ಷಕಿ ಥಟ್ ಅಂತ ಉತ್ತರ ಹೇಳುತ್ತದೆ. ವಿಶೇಷವಾಗಿ ಇಂಗ್ಲೀಷ್ ಕಲಿಕೆಗೆ ಹೆಚ್ಚು ಪೂರಕವಾಗಲಿದೆ.ಎಜುಕೇಷನ್ ಕನ್ಸಲಟನ್ಸಿಯವರ ಜೊತೆಗೆ ಒಪ್ಪಂದ ಮಾಡಿಕೊಂಡು ಬೆಂಗಳೂರಿನಿಂದ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ಸಿಂದಗಿ ಶಾಖೆಯ ವತಿಯಿಂದ ಸಿಂದಗಿ ನಗರದ ಮೂರು ಪ್ರಮುಖ ಆಸ್ಪತ್ರೆಯಲ್ಲಿ ಹಳ್ಳಿಗಳಿಂದ ಬಂದ ರೋಗಿಗಳಿಗೆ ಮತ್ತು ಹಸಿದವರಿಗ ಹಾಗೂ ಬಸ್ ನಿಲ್ದಾಣದಲ್ಲಿ ರಾತ್ರಿಯ ಹೊತ್ತು ಪ್ರಯಾಣ ಮಾಡುವ ನೂರ, ಐವತ್ತು ಪ್ರಯಾಣಿಕರಿಗೆ ಸಂಜೆಯ ಊಟ ವಿತರಿಸಲಾಯಿತು.ಹಸಿವು ಮುಕ್ತ ಸಮಾಜವೆಂದರೆ ಎಲ್ಲರಿಗೂ ಆಹಾರ ಲಭ್ಯವಾಗುವ ಸಮಾಜವಾಗಬೇಕು. ಇದು ಮೂಲಭೂತ ಮಾನವ ಹಕ್ಕು. ನಾವು ಒಟ್ಟಾಗಿ ಕೆಲಸ ಮಾಡಿದರೆ, ಹಸಿವನ್ನು ನಿರ್ಮೂಲನೆ ಮಾಡಬಹುದು.ಪ್ರತಿ ಊಟವೂ ಒಂದು ಉಡುಗೊರೆ. ಹಸಿದವರಿಗೆ ಊಟ ನೀಡುವುದು ನಮ್ಮ ಕರ್ತವ್ಯ. ನಾವು ಆಹಾರವನ್ನು ವ್ಯರ್ಥ ಮಾಡಬಾರದು. ಬದಲಿಗೆ ಅದನ್ನು ಅಗತ್ಯವಿರುವವರಿಗೆ ಹಂಚಬೇಕು. ಹಸಿವು ಮುಕ್ತ ಸಮಾಜಕ್ಕಾಗಿ, ನಾವು ಒಗ್ಗಟ್ಟಾಗಿ ನಿಲ್ಲೋಣ ಎಂದು ಮೌಲಾನಾ ದಾವೂದ ನದ್ವಿ ಹೇಳಿದರು.ಇದೇ ರೀತಿ ಮೌಲಾನಾ ಕಲೀಮುಲ್ಲಾಹ ನದ್ವಿ ಹಸಿದವರಿಗೆ ಊಟ ನೀಡುವ ಸೇವೆಯು ಬಹಳ ಶ್ರೇಷ್ಠವಾದ ಕೆಲಸ. ಇದು ನಮ್ಮ ಸಮಾಜದಲ್ಲಿ ಬಡತನ ಮತ್ತು ಹಸಿವಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂಬ…

Read More