Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಮಹಿಳಾ ಸಬಲೀಕರಣ, ಶಿಕ್ಷಣ ಸಮಾಜ ಸೇವೆಯನ್ನು ಗುರುತಿಸಿ ಪಟ್ಟಣದ ರಾಜೇಶ್ವರಿ ಕ್ಷತ್ರಿ ಅವರಿಗೆ ಈ ವರ್ಷದ ಮಹಿಳಾ ಸಾಧಕಿ ಮತ್ತು ಸಾಲೋಟಗಿ ಗ್ರಾಮದ ಸವಿತಾಬಾಯಿ ಸೋಮಣ್ಣ ಕರೂರ ಇವರಿಗೆ ಕೃಷಿ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗಿದೆ ಎಂದು ಐಡಿಯಾ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶೈಲಜಾ ತೆಲ್ಲೂರ ಹೇಳಿದರು.ನಗರದ ಐಡಿಯಾ ಪಿಯು ಮಹಾವಿದ್ಯಾಲಯದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪ್ರಶಸ್ತಿ ನೀಡಿ ಮಾತನಾಡಿದರು.ಪೂಜಾ ಏಳಗಿ, ಪ್ರತಿಭಾ ಬುರಕುಲೆ, ವಿದ್ಯಾಶ್ರೀ ಪಾಟೀಲ, ಶ್ಯಾಮಲಾ ಬಗಲಿ, ಮಹಾದೇವಿ ಸಂಖ, ಸಂಪದಾ ದೇಶಪಾಂಡೆ, ಪುನಮ ಕಟ್ಟಿಮನಿ, ಸವಿತಾ ರೂಪನೂರ, ಕವಿತಾ ಮಹೀಂದ್ರಕರ, ಪ್ರತಿಭಾ, ಅಸುಷಾ, ಶೋಭಾ ಹಿರೇಮಠ, ಶಕುಂತಲಾ ಐಡಿಯಾ ಸಂಸ್ಥೆಯ ಅಧ್ಯಕ್ಷ ಸಿದ್ದಪ್ಪ ಖೇಡ, ಅನೀಲ ಪ್ರಸಾದ ಏಳಗಿ, ಪ್ರಭು ಹೊಸಮನಿ, ಶ್ರೀಶೈಲ ಅರ್ಜುಣಗಿ ಕಾಲೇಜಿನ ಆಡಳಿತ ಮಂಡಳಿ ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಮಾ.೮ ರಿಂದ೧೦ ರವರೆಗೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.ಎರಡನೇ ದಿನವಾದ ಸೋಮವಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಹಾಗೂ ಶ್ರೀ ಸಿದ್ದೇಶ್ವರ ರಕ್ತ ನಿಧಿ ಸಂಸ್ಥೆ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಭಾಗವಹಿಸಿರುವ ಸ್ವ-ಸಹಾಯ ಗುಂಪುಗಳ ಮಹಿಳೆಯರು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು. ಅಂದಾಜು ೨೫ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.ಇದೇ ವೇಳೆ ಸುಮಾರು ೮೦ಕ್ಕೂ ಹೆಚ್ಚು ಜನ ಸ್ವ-ಸಹಾಯ ಸಂಘದ ಮಹಿಳೆಯರು, ಸಾರ್ವಜನಿಕರು ಹಾಗೂ ಸಿಬ್ಬಂದಿ ಸೇರಿದಂತೆ ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ರಕ್ತದ ಗುಂಪು, ರಕ್ತದೊತ್ತಡ, ಸಕ್ಕರೆ ಪ್ರಮಾಣ ಹಾಗೂ ವಿವಿಧ ತಪಾಸಣೆಗಳಿಗೊಳಪಟ್ಟರು. ಸಾರ್ವಜನಿಕರಿಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಪ್ರಿಲ್ ೫ರಂದು ಬಾಬು ಜಗಜೀವನ ರಾಮ ಅವರ ಜಯಂತಿ ಹಾಗೂ ಏಪ್ರಿಲ್ ೧೪ರಂದು ಡಾ.ಬಿ.ಆರ್.ಅಂಬೇಡ್ಕರ ಅವರ ಜಯಂತಿ ಪ್ರಯುಕ್ತ ೨೦೨೬-೨೭ನೇ ಸಾಲಿನ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನದ ಅವಧಿಯನ್ನು ಮಾ.೧೨ರವರೆಗೆ ವಿಸ್ತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಜನಾಂಗದವರ ಶ್ರೇಯಸ್ಸಿಗಾಗಿ, ಗಣನೀಯ ಸೇವೆ ಸಲ್ಲಿಸಿರುವ ವ್ಯಕ್ತಿಗಳು, ಪ್ರೋತ್ಸಾಹಿಸಿ, ಗುರುತಿಸಿ ಗೌರವಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಅರ್ಜಿ ನಮೂನೆಯನ್ನು ಸಮಾಜ ಕಲ್ಯಾಣ ಇಲಾಖೆಯ ವಿಜಯಪುರ ಉಪ ನಿರ್ದೇಶಕರ ಕಚೇರಿ ಹಾಗೂ ಆಯಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆಯಬಹುದು. ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಮಾರ್ಚ್೧೨-೨೦೨೬ರೊಳಗಾಗಿ ಕಚೇರಿ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರ ಸೇರಿದಂತೆ ಎಲ್ಲ ಗ್ರಾಮಗಳಲ್ಲೂ ರಂಗ ಪಂಚಮಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಬೆಳಿಗೆ ೮ ಗಂಟೆಯಿಂದಲೇ ಬಾಲಕರು ಯುವಕರು ಬಣ್ಣ ಆಡಲು ಪ್ರಾರಂಭಿಸಿದರು.ನಂತರ ೧೧ ಗಂಟೆಗೆ ಹಿರಿಯರು ಕಿರಿಯರು ಎಲ್ಲರೂ ಸೇರಿ ಬಣ್ಣವನ್ನು ಆಡ ತೊಡಗಿದರು.ಅಣುಕು ಶವ ಯಾತ್ರೆ, ಜಾನಪದ ಹೋಳಿ ಹಾಡುಗಳು ಹಲಗೆ ಕುಣಿತ ಸೇರಿ ಅನೇಕ ಮನರಂಜನೆ ನಡೆದವು.ನಗರದ ಕೃಷಿ ಮಾರುಕಟ್ಟೆ, ಬಸ್ ನಿಲ್ದಾಣ, ಸಿಂದಗಿ ವಿಜಯಪುರ ರಸ್ತೆ ಸೇರಿದಂತೆ ನಗರದ ಎಲ್ಲ ಕಡೆ ಬಣ್ಣ ಎರಚುವದು ಸಾಮಾನ್ಯವಾಗಿತ್ತು.ಅನೇಕ ಕಡೆ ಬ್ಯಾರೆಲು ಬಕೇಟುಗಳಲ್ಲಿ ಬಣ್ಣ ಎರಚಿಸಿದರು. ಯುವಕರು ಮಕ್ಕಳು ಪಿಚಕಾರಿ ಮೂಲಕ ಬಣ್ಣ ಎರಚಿದರು. ಮುಖಕ್ಕೆ ಬಣ್ಣ ಹಚ್ಚುವದು ಎಲ್ಲ ಕಡೆ ಸಾಮಾನ್ಯವಾಗಿತ್ತು.ಗಣ್ಯರಾದ ಕಾಸುಗೌಡ ಬಿರಾದಾರ, ಬಾಳು ಮುಳಜಿ, ಅನೇಕ ವೈದ್ಯರು, ವ್ಯಾಪಾರಿಗಳು ರೈತರು ಬಣ್ಣ ಆಡಿ ಸಂತೋಷ ಪಟ್ಟರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ವಿದ್ಯಾರ್ಥಿಗಳು ರಾಣಿ ಚೆನ್ನಮ್ಮ ಸಂಗೊಳ್ಳಿ ರಾಯಣ್ಣನಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಂಡು ತಮ್ಮ ಜೀವನದಲ್ಲಿ ಮುಂದುವರಿಯಬೇಕು ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದರು.ಅವರು ನಗರದ ಶರಣು ವಿದ್ಯಾವರ್ಧಕ ಸಂಸ್ಥೆಯ ವೀರರಾಣಿ ಕಿತ್ತೂರು ಚೆನ್ನಮ್ಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಾಂತೇಶ್ವರ ಸಂಸ್ಕೃತ ಪಾಠ ಶಾಲೆಯ 16ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಇಂದಿನ ಯುವ ಜನಾಂಗ ಪಾಶ್ಚಿಮಾತ್ಯ ದೇಶಗಳ ಆಚರಣೆಗಳ ಬಗ್ಗೆ ಮೊರೆ ಹೋಗುತ್ತಿರುವುದು ದುರಂತ. ನಮ್ಮ ದೇಶಕ್ಕೆ ದೊಡ್ಡ ಇತಿಹಾಸವಿದೆ. ದೇಶದ ಸ್ವತಂತ್ರಕ್ಕಾಗಿ ಅಂದಾಜು ಮೂರು ಲಕ್ಷ 50,000 ಜನ ಪ್ರಾಣ ಕಳೆದುಕೊಂಡಿದ್ದಾರೆ. ಅಂತಹವರ ಪ್ರಾಣತ್ಯಾಗದ ಬಗ್ಗೆ ನಾವೆಲ್ಲಾ ಸ್ಮರಿಸಬೇಕು. ನಾವೆಲ್ಲ ವಿದೇಶಿ ಮೋಹಕ್ಕೆ ಒಳಗಾಗದೆ ಭಾರತೀಯ ಸಂಸ್ಕೃತಿಯನ್ನು ಅಪ್ಪಿಕೊಳ್ಳಬೇಕು ಎಂದರು.ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರಿನಲ್ಲಿ, ಹಿಂಡಿಯವರು ಶಾಲೆ ತೆರೆದಿದ್ದು ಸಂತಸ ತಂದಿದೆ. ಇಂಡಿ ನಾಗರಿಕರು ಅವರಿಗೆ ಸಹಕಾರ ನೀಡಬೇಕು ಎಂದು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕಿನ ಕತಕನಹಳ್ಳಿಯ ಮಾತೋಶ್ರೀ ಶಂಕ್ರೆಮ್ಮಾತಾಯಿ ಪ್ರಾಥಮಿಕ ಶಾಲೆಯ ೫ ನೇ ವರ್ಗದ ಒಟ್ಟು ೨೧ ವಿದ್ಯಾರ್ಥಿಗಳು ೨೦೨೫-೨೬ ನೇ ಶೈಕ್ಷಣಿಕ ವರ್ಷದ ಅಖಿಲ ಭಾರತೀಯ ಸೈನಿಕ ಶಾಲೆಯ ಪ್ರವೇಶ ಪೂರ್ವ ಪರೀಕ್ಷೆಗೆ ಕುಳಿತು, ಒಟ್ಟು ೧೪ ವಿದ್ಯಾರ್ಥಿಗಳು ಉತ್ತಮ ಅಂಕಗಳು ಪಡೆದು ಅಮೋಘ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ವಿದ್ಯಾರ್ಥಿಗಳಾದ ಸದಾಶಿವ ರವಿ ಬಗಲಿ (೨೪೩), ಪ್ರದೀಪ ಸೀತಾರಾಮ ವಿಧಾತೆ (೨೧೪), ಶ್ರೀನಿಧಿ ಭೀಮಾಶಂಕರ ವಾಲಿಕಾರ (೧೯೧), ಭೀಮರಾಯ ಪ್ರಕಾಶ ಬಗಲಿ (೧೮೩), ಗುರುರಾಜ ರಮೇಶ ಕೊಟ್ಯಾಳ (೧೭೨), ವಿನಾಯಕ ಯಲ್ಲಪ್ಪ ಜೈನಾಪೂರ (೧೬೩), ಈ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳು ಪಡೆದು ಸೈನಿಕ ಶಾಲೆಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ರಾಜಕೀಯ ಸೇರಿದಂತೆ ವಿಜ್ಞಾನ ತಂತ್ರಜ್ಞಾನ ಮತ್ತು ಪ್ರತಿ ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ ಎಂದು ತಡವಲಗಾ ಸರಕಾರಿ ಆಸ್ಪತ್ರೆ ವೈದ್ಯಾಥಿಕಾರಿ ಡಾ|| ಶ್ರೀಮತಿ ಕಿರಣ ಗಜಾಕೋಶ ಹೇಳಿದರು.ಇಂಡಿಯ ಸ್ಟೇಷನ್ದ ಸರಕಾರಿ ಶಾಲೆಯಲ್ಲಿ ಆಯೋಜಿಸಿದ ಕೃಷಿವಿಜ್ಞಾನ ಕೇಂದ್ರ ಮತ್ತು ಪ್ಯಾರಾದೀಪ ಪಾಸ್ಪೇಟ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು.ದಂತ ವೈದ್ಯೆ ಡಾ|| ಅರುಣಾ ಕದಮ ಮಾತನಾಡಿ ಮಹಿಳೆಯರು ಶಾಂತ ಶಕ್ತಿವಂತಳು, ಅವಳು ಪ್ರತಿ ಮನೆಯ ಬೆಳಕು, ಮಕ್ಕಳನ್ನು ಬೆಳೆಸುತ್ತಾಳೆ, ಉದ್ಯೋಗವನ್ನು ನಿರ್ವಹಿಸುತ್ತಾಳೆ, ಅವಳು ಶತಮಾನದ ಸಂಕೋಲೆಯನ್ನು ದಾಟಿ ಮುಂದೆ ಸಾಗಿದ್ದಾಳೆ ಅರ್ಥಿಕ ಸ್ವಾವಲಂಬಿ ಯಾಗಿದ್ದಾಳೆ ಎಂದರು.ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ವೀಣಾ ಚಂದಾವರಿ, ಪ್ಯಾರಾದೀಪ ಪಾಸ್ಪೇಟ್ ಸಾವಯುವ ಗೊಬ್ಬರದ ಸಂದೀಪ ಬಿರಾದಾರ, ಜೀವ ವಿಮೆಯ ಮಲ್ಲಿಕಾರ್ಜುನ ಕಂಬಳಿ, ಮುಖ್ಯ ಗುರುಗಳು ಹೊಸಮನಿ ಮತ್ತು ಜಹೀದಾ ಹುಂಡೆಕರ ಮಾತನಾಡಿದರು.ಜೀವ ವಿಮೆಯ ಪ್ರತಿನಿಧಿಗಳು, ಪಾಸ್ಪೇಟ್ ಗೊಬ್ಬರದ ಸಿಬ್ಬಂದಿ ಮತ್ತಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಮಕ್ಕಳಿಗೆ ಕೇವಲ ಶಿಕ್ಷಣ ನೀಡುವುದಕ್ಕಿಂತಲೂ ಉತ್ತಮ ಸಂಸ್ಕಾರಗಳನ್ನು ಬೆಳೆಸುವುದು ಪಾಲಕರು ಮತ್ತು ಶಿಕ್ಷಕರ ಪ್ರಮುಖ ಜವಾಬ್ದಾರಿ ಎಂದು ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ದೇವರು ಹೇಳಿದರು.ಪಟ್ಟಣದ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ನಡೆದ 121ನೇ ಶಾಲಾ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಮಾತನಾಡಿ, ಈ ಕೆಜಿಎಸ್ ಶಾಲೆ ಈಗ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಪರಿವರ್ತನೆಯಾಗಿದ್ದು, ಮುಂದಿನ ದಿನಗಳಲ್ಲಿ ಹೆಮ್ಮರದಂತೆ ಬೆಳೆಯುತ್ತಾ ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲಿದೆ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಎನ್.ಎ. ಬನಸೋಡೆ ಮಾತನಾಡಿದರು. ವರದಿ ವಾಚನವನ್ನು ಆರ್.ಎಚ್. ನಾವಿ ನೆರವೇರಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ರೂಪಾ ಗಿಡ್ಡಪ್ಪಗೋಳ, ರಾಜಮಾ ನದಾಫ್, ಅಶೋಕ ಗಿಡ್ಡಪ್ಪಗೋಳ, ಲಕ್ಷ್ಮೀ ಜಿಡ್ಡಿಬಾಗಿಲ,…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ನಾಡಿನ ಪ್ರತಿಯೊಂದು ಹಳ್ಳಿ ಪಟ್ಟಣ ನಗರ ಪ್ರದೇಶಗಳಲ್ಲಿ ಸಂಗೀತ ಲೋಕದ ಜ್ಞಾನ ಪಡೆಯಲು ಹೊಸ ಹೊಸ ಪ್ರತಿಭೆಗಳು ಉದಯಿಸಬೇಕು ಎಂದು ಕನಸು ಕಂಡಂತೆ ವಿಶ್ವಕ್ಕೆ ಗಾಯನ ಲೋಕವನ್ನಷ್ಟೆ ಅಲ್ಲದೆ ಸಂಗೀತ ಕ್ಷೇತ್ರದಲ್ಲಿ ಪ್ರತಿಭಾನ್ವಿತ ವಿವಿಧತೆಯ ಕಲಾವಿದರನ್ನು ಪರಿಚಯಿಸಿದ ಮಹಾನ್ ದೈವಿಶಕ್ತಿಯ ಪುರುಷರು ಗುರು ಪುಟ್ಟರಾಜ ಗವಾಯಿಗಳು ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.ಕೊಲ್ಹಾರ ತಾಲೂಕ ಜಾನಪದ ಪರಿಷತ್ ಹಾಗೂ ಕಲಾವಿದರ ಬಳಗದವರು ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದ ಕಂಬಿ ಮಂಟಪದ ಆವರಣದಲ್ಲಿ ಹಮ್ಮಿಕೊಂಡ ಗದುಗಿನ ವಿರೇಶ್ವರ ಪುಣ್ಯಾಶ್ರಮದ ಹಿಂದಿನ ಪೀಠಾಧಿಕಾರಿಗಳಾದ ಪಂಡಿತ ಪುಟ್ಟರಾಜ ಗವಾಯಿವರ ಜನ್ಮ ದಿನೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಆದುನಿಕ ಜಗತ್ತಿನಲ್ಲಿ ಹಿಂದಿನ ತಲೆಮಾರಿನ ಹಳೇ ಕಾಲದ ಭಜನೆ, ಕೀರ್ತನೆ, ಹರಿದಾಸ ಪುರಾಣ ಪ್ರವಚನ ಆಧುನಿಕ ಶೈಲಿಯ ಸಂಗೀತ ವಾದ್ಯಗಳ ಶಿಕ್ಷಣ ಕಲಿಯುವದರ ಜೊತೆಗೆ ಗಾಯನ ಲೋಕದಲ್ಲಿ ಮಾತ್ರವಲ್ಲದೇ ಇನ್ನೀತರ ಕಲೆಯನ್ನು ಉಳಿಸಿಕೊಂಡು ಮುಂದಿನ ಕಲೆಯನ್ನು ಆರಾಧಿಸುವ ಆಸಕ್ತ…
ಹಲಸಂಗಿ ದರೋಡೆ ಪ್ರಕರಣ ಭೇದಿಸಿದ ಪೊಲೀಸರಿಗೆ ಚಡಚಣ ಹಾಗೂ ಇಂಡಿ ಸರಾಫ್ ವ್ಯಾಪಾರಿಗಳಿಂದ ಸನ್ಮಾನ ಉದಯರಶ್ಮಿ ದಿನಪತ್ರಿಕೆ ಚಡಚಣ: ಹಲಸಂಗಿ ಗ್ರಾಮದಲ್ಲಿ ಜನೇವರಿ 26 ರಂದು ನಡೆದಿದ್ದ ಭೂಮಿಕಾ ಜ್ಯುವೆಲ್ಲರಿ ಬಂಗಾರದ ಅಂಗಡಿ ಮಾಲಿಕ ಮಹಾರುದ್ರ ಕಂಚಗಾರ ಅವರ ದರೋಡೆ ಪ್ರಕರಣವನ್ನು ಅತಿ ಕಡಿಮೆ ಸಮಯದಲ್ಲಿ ಭೇದಿಸಿ ಕಳುವಾದ ಬಂಗಾರವನ್ನು ವಶಪಡಿಸಿಕೊಂಡ ಚಡಚಣ ಹಾಗೂ ಇಂಡಿ ತಾಲೂಕಿನ ಪೊಲೀಸ್ ಇಲಾಖೆಯ ಕಾರ್ಯವನ್ನು ಸಾರ್ವಜನಿಕರು ಪ್ರಶಂಸಿಸಿದರು. ಈ ಸಂಬಂಧ ಇಬ್ಬನಿ ಹೊಟೇಲನ ಸಭಾಭವನದಲ್ಲಿ ಆಯೋಜಿಸಿದ ಶೌರ್ಯ ಮತ್ತು ಸಾಹಸ ಪುರಸ್ಕಾರ ಸನ್ಮಾನ ಸಮಾರಂಭದಲ್ಲಿ ಶ್ರೀ ವಿಶ್ವಕರ್ಮ ಚಡಚಣ ಹಾಗೂ ಇಂಡಿ ತಾಲೂಕಿನ ಪದಾಧಿಕಾರಿಗಳು ಹಾಗೂ ಎಲ್ಲ ಚಿನ್ನಾಭರಣ ವ್ಯಾಪಾರಸ್ಥರು ಪೊಲೀಸರ ಸೇವೆಯನ್ನು ಶ್ಲಾಘಿಸಿದರು.ಈ ವೇಳೆ ಶ್ರೀ ವಿಶ್ವಕರ್ಮ ಚಡಚಣ ತಾಲೂಕಾಧ್ಯಕ್ಷ ಸೋಮಶೇಖರ ಬಡಿಗೇರ ಮಾತನಾಡಿ, ಕಡಿಮೆ ಸಮಯದಲ್ಲಿ ಕಳುವಾದ ಬಂಗಾರವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿರುವುದು ಕರ್ನಾಟಕದಲ್ಲಿಯೇ ಮಾದರಿಯಾಗಿದೆ. ಪೊಲೀಸರ ಈ ಕಾರ್ಯವನ್ನು ಮರೆಯಲಿಕ್ಕಾಗುವದಿಲ್ಲ ಪೊಲೀಸ್ ಇಲಾಖೆಯವರು ಬ್ರಹ್ಮದೇವರಂತೆ ಭೂಮಿಕಾ ಜ್ಯುವೆಲ್ಲರಿ ಕುಟುಂಬಸ್ಥರಿಗೆ ಎರಡನೇ…
