ವಿಜಯಪುರದಲ್ಲಿ ಶಾಸಕ ಹಾಗೂ ಜೆಎಸ್ಎಸ್ ಆಸ್ಪತ್ರೆಯ ಸಂಸ್ಥಾಪಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೆಟ್ರೋ ನಗರದಲ್ಲಿ ಒದಗಿಸಲಾಗಿರುವ ಆರೋಗ್ಯ ಸೇವೆಗಳನ್ನು ವಿಜಯಪುರದ ಜೆಎಸ್ಎಸ್ ಆಸ್ಪತ್ರೆಯಲ್ಲಿಯೇ ಒದಗಿಸಲಾಗುತ್ತಿದ್ದು, ಅದರ ಭಾಗವಾಗಿ ಅತ್ಯಾಧುನಿಕ ನವಜಾತ ಶಿಶುಗಳ ತೀವ್ರ ನಿಗಾ ಘಟಕ, ದಂತಗಳ ಆರೋಗ್ಯಕ್ಕೆ ಸಂಬಂಧಿಸಿದ ಮ್ಯಾಕ್ಸಿಲೋಫಿಷಿಯಲ್ ಶಸ್ತ್ರಚಿಕಿತ್ಸೆ ಸಹ ಜೆಎಸ್ಎಸ್ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಹಾಗೂ ಜೆಎಸ್ಎಸ್ ಆಸ್ಪತ್ರೆಯ ಸಂಸ್ಥಾಪಕ ಬಸನಗೌಡ ಪಾಟೀಲ ಯತ್ನಾಳ ಪ್ರಕಟಿಸಿದರು.
ಜೆಎಸ್ಎಸ್ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗುತ್ತಿರುವ ಆರೋಗ್ಯ ಸೇವೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರಣೆ ನೀಡಿದ ಅವರು, ವಿಜಯಪುರದಲ್ಲಿ ಎನ್ಐಸಿಯು ಘಟಕವನ್ನು ಆಧುನಿಕ ಸ್ಪರ್ಶದೊಂದಿಗೆ ಆರಂಭಿಸಲಾಗಿದ್ದು, ನವಜಾತ ಶಿಶುಗಳಿಗಳಿಗೆ ಸಕಲ ಆರೋಗ್ಯ ಸೌಲಭ್ಯಗಳು ದೊರಕಲಿವೆ, ೨೪ ಗಂಟೆಗಳ ನಿಯೋನೇಟಾಲಜಿಸ್ಟ್, ಮಲ್ಟಿಪಾರಾ ಮಾನಿಟರ್, ಬಬಲ್ ಸಿಪಿಎಪಿ ಸೌಲಭ್ಯ ಸೇರಿದಂತೆ ವೈದ್ಯಕೀಯ ರಂಗದಲ್ಲಿ ಅದರಲ್ಲೂ ನವಜಾತ ಶಿಶುಗಳ ಆರೋಗ್ಯ ರಕ್ಷಣೆಯಲ್ಲಿ ಆಧುನಿಕ ಸ್ಪರ್ಶ ನೀಡಲಾಗಿದೆ ಎಂದರು.
ದಂತಗಳ ಆರೋಗ್ಯ ಸೇವೆ ಒದಗಿಸುವಲ್ಲಿಯೂ ಜೆಎಸ್ಎಸ್ ಮುನ್ನಡೆ ಇರಿಸಿದೆ, ಅತ್ಯಾಧುನಿಕ ದಂತ ಹಾಗೂ ಮ್ಯಾಕ್ಸಿಪಿಫೇಷಿಯಲ್ ಶಸ್ತçಚಿಕಿತ್ಸೆ ಸಹ ಇಲ್ಲಿ ಆರಂಭಿಸಲಾಗಿದೆ, ದೊಡ್ಡ ಮಹಾನಗರಗಳಲ್ಲಿ ಲಭ್ಯವಿದ್ದ ಈ ಚಿಕಿತ್ಸೆ ಈಗ ವಿಜಯಪುರದಲ್ಲಿಯೇ ಲಭ್ಯವಿದೆ ಎಂದರು.
೨೪*೭ ಟ್ರಾಮಾ ಸೆಂಟರ್ ಸಹ ಕಾರ್ಯನಿರ್ವಹಿಸುತ್ತಿದ್ದು, ರಾಷ್ಟಿçÃಯ ಹೆದ್ದಾರಿಗಳ ಅಫಘಾತ ಪೀಡಿತರಿಗೆ ಪಿ.ಎಂ. ರಾಹತ್ ಯೋಜನೆಯಡಿಯಲ್ಲಿ ಅರ್ಹರಿಗೆ ಉಚಿತ ಚಿಕಿತ್ಸೆ ಸಹ ಒದಗಿಸಲಾಗುತ್ತಿದೆ ಎಂದು ಶಾಸಕರು ವಿವರಿಸಿದರು.
ಲಕ್ಷ್ಮೀಪುತ್ರಿ ಸುರಕ್ಷಾ ಯೋಜನೆ
ಸಾಮಾಜಿಕ ಸೇವೆಯನ್ನೂ ಸಹ ಗಮನದಲ್ಲಿರಿಸಿಕೊಂಡು ಅನೇಕ ರೀತಿಯ ಸೌಲಭ್ಯಗಳನ್ನು ಆಸ್ಪತ್ರೆಯಿಂದ ಒದಗಿಸಲಾಗುತ್ತಿದೆ, ಶ್ರೀ ಸಿದ್ದೇಶ್ವರ ಲೋಕ ಕಲ್ಯಾಣ ಟ್ರಸ್ಟ್ ಸಹಯೋಗದಲ್ಲಿ ಲಕ್ಷ್ಮೀಪುತ್ರಿ ಸುರಕ್ಷಾ ಯೊಜನೆಯನ್ನು ಆಸ್ಪತ್ರೆಯಲ್ಲಿ ಅನುಷ್ಠಾನಗೊಳಿಸಿದ್ದು, ಹೆಣ್ಣು ಮಗು ಜನಿಸಿದವರಿಗೆ ಉಚಿತ ಆಸ್ಪತ್ರೆ ಸೇವೆಗಳು, ಅಗತ್ಯ ಔಷಧಿಗಳು, ವಿವಿಧ ತಪಾಸಣೆಗಳನ್ನು ಉಚಿತವಾಗಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಯತ್ನಾಳ ವಿವರಿಸಿದರು.
ಖಾಸಗಿ ವೈದ್ಯಕೀಯ ಕಾಲೇಜ್ಗೆ ಆರಂಭ
ಶ್ರೀ ಸಿದ್ದೇಶ್ವರ ಸಂಸ್ಥೆಯಿಂದ ಖಾಸಗಿ ವೈದ್ಯಕೀಯ ಕಾಲೇಜ್ ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ೨೦೨೮ ರವೇಳೆಗೆ ಮೊದಲ ಬ್ಯಾಚ್ ಆರಂಭಿಸುವ ನಿಟ್ಟಿನಲ್ಲಿ ತಯಾರಿ ಭರದಿಂದ ಕೈಗೊಳ್ಳಲಾಗುತ್ತಿದೆ, ಖಾಸಗಿ ವೈದ್ಯಕೀಯ ಕಾಲೇಜ್ಗೆ ಬೇಕಾದ ಪೂರಕ ಸೌಲಭ್ಯ, ಆಸ್ಪತ್ರೆ ಎಲ್ಲವೂ ಲಭ್ಯವಿವೆ, ಹೆಚ್ಚುವರಿಯಾಗಿ ಎಲ್.ಎಚ್. ಬಿದರಿ ಅವರ ಆಸ್ಪತ್ರೆ ಸಹ ನಮಗೆ ಪೂರಕ ಸೇವೆ ಒದಗಿಸುವ ನಿಟ್ಟಿನಲ್ಲಿ ಒಡಂಬಡಿಕೆ ಮಾಡಿಕೊಂಡಿದೆ, ಹೀಗಾಗಿ ಶೀಘ್ರದಲ್ಲಿ ವೈದ್ಯಕೀಯ ಕಾಲೇಜ್ ಆರಂಭಿಸಲಾಗುವುದು ಎಂದು ಯತ್ನಾಳ ಪ್ರಕಟಿಸಿದರು.
ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸರ್ಕಾರ ಮಾಡುವುದಿಲ್ಲ. ಪಿಪಿಪಿ ಮಾದರಿಯಿಂದ ನಮಗೆ ಲಾಭ ಇಲ್ಲ. ಆದರೂ, ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡಲಾಯಿತು. ನಮ್ಮದೇ ಸ್ವಂತ ಕಾಲೇಜು ಮಾಡಿದರೆ, ನಮಗೆ ಹೆಚ್ಚು ಅನುಕೂಲವಾಗಲಿದೆ, ಪಿಪಿಪಿ ಮಾದರಿಯಾದರೆ ಸರ್ಕಾರ ಹೇಳಿದಂತೆ ನಾವು ಕೇಳಬೇಕಾಗುತ್ತದೆ. ಹೀಗಾಗಿ ೨೦೨೮ಕ್ಕೆ ಮೊದಲ ಬ್ಯಾಚ್ ಆರಂಭಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು. ೫೦೦ ಕೋಟಿ ರೂ. ವೆಚ್ಚದಲ್ಲಿ ಎಲ್ಲ ಸೌಲಭ್ಯಗಳನ್ನು ಮಾಡಿಕೊಳ್ಳಲಾಗುತ್ತದೆ ಎಂದರು.

