Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಟಕ್ಕಳಕಿ ಗ್ರಾಮದ ವೆಂಕಟೇಶ್ವರ ದೇವಾಲಯದಲ್ಲಿ ಪವರ್ ಗ್ರಿಡ್ ಕಂಪನಿಯು ಭ್ರಷ್ಟಾಚಾರ ತಡೆಗಟ್ಟುವಿಕೆಯ ಕುರಿತು ಈಚೆಗೆ ಜಾಗೃತ ತಿಳುವಳಿಕೆ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿತ್ತು.ಕಾರ್ಯಕ್ರಮವನ್ನು ವೆಂಕಟೇಶ್ವರ ದೇವಾಲಯದ ಕಮಿಟಿ ಅಧ್ಯಕ್ಷ ಕೃಷ್ಣ ಕುರಾಡಿಕರ ಉದ್ಘಾಟಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ಕುರಿತು ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಪವರ್ ಗ್ರಿಡ್ ಕಂಪನಿ ಹಮ್ಮಿಕೊಂಡಿರುವದು ಶ್ಲಾಘನೀಯ. ಪ್ರತಿಯೊಬ್ಬರೂ ಭ್ರಷ್ಟಾಚಾರದ ವಿರುದ್ಧ ಆಂದೋಲನದಲ್ಲಿ ಭಾಗಿಯಾಗುವ ಮೂಲಕ ಭ್ರಷ್ಟಾಚಾರವನ್ನು ತಡೆಗಟ್ಟಬೇಕಾದ ಅಗತ್ಯವಿದೆ ಎಂದರು.ಪವರ್ ಗ್ರಿಡ್ ಕಂಪನಿಯ ಕೋಟಾನಾಗೇಶ್ವರ ಮಾತನಾಡಿ, ಭ್ರಷ್ಟಾಚಾರದ ಹಾವಳಿಯನ್ನು ನಿರ್ಮೂಲನೆ ಮಾಡಲು ಜನರ ಸಹಕಾರ ತುಂಬಾ ಅಗತ್ಯವಿದೆ. ಯಾರೂ ಲಂಚ ಕೊಡಬಾರದು. ಯಾವುದೇ ಸರ್ಕಾರಿ ನೌಕರರು ಲಂಚ ಕೇಳಿದರೆ ಇಲ್ಲವೇ ಭ್ರಷ್ಟಾಚಾರದ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಒಂದು ವೇಳೆ ಯಾರಾದರೂ ಭ್ರಷ್ಟಾಚಾರದ ಕಿರುಕುಳಕ್ಕೆ ಒಳಗಾಗಿದ್ದರೆ ಇಲಾಖೆಯ ಮುಖ್ಯಸ್ಥರಿಗೆ ಅಥವಾ ಮುಖ್ಯ ಜಾಗೃತ ಅಧಿಕಾರಿ, ಪೊಲೀಸ್ ಅಽಕ್ಷಕರಿಗೆ ಕೇಂದ್ರ ತನಿಖಾ ಸಂಸ್ಥೆ ಮತ್ತು ಕಾರ್ಯದರ್ಶಿ ಕೇಂದ್ರ, ರಾಜ್ಯ ಜಾಗೃತ…
ಸಿಂದಗಿ & ದೇವರಹಿಪ್ಪರಗಿ ತಾಲೂಕಿನ ಶಾಲೆ-ಹಾಸ್ಟೆಲ್ ಗಳಿಗೆ ಭೇಟಿ | ಮಕ್ಕಳೊಂದಿಗೆ ಸಂವಾದ | ಆತ್ಮವಿಶ್ವಾಸ ಮೂಡಿಸುವಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಾಲೆ, ಅಂಗನವಾಡಿಗಳು ಹಾಗೂ ವಸತಿ ನಿಲಯಗಳ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ, ಮಕ್ಕಳಿಗೆ ಗುಣಮಟ್ಟದ ಆಹಾರವನ್ನು ನೀಡಿ, ಒಂದು ವೇಳೆ ಗುತ್ತಿಗೆದಾರರು ಕಳಪೆ ಮಟ್ಟದ ಆಹಾರ ಪೂರೈಸಿದರೆ ನಮ್ಮ ಕಾರ್ಯಾಲಯಕ್ಕೆ ಮಾಹಿತಿ ನೀಡಿ, ಅಂತಹ ಆಹಾರ ಪೂರೈಸಿದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಸಿಂದಗಿ ಹಾಗೂ ದೇವರಹಿಪ್ಪರಗಿ ತಾಲೂಕು ವ್ಯಾಪ್ತಿಯ ವಸತಿ ನಿಲಯ ಅಂಗನವಾಡಿ, ಹಾಗೂ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಯನ್ನು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.ತಿಳಗೋಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ದೇವರ ಹಿಪ್ಪರಿಗಿಯಲ್ಲಿರುವ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ ನಂತರ ಎಸ್ ಎಸ್…
ಲೇಖನ- ಜಯಶ್ರೀ .ಜೆ. ಅಬ್ಬಿಗೇರಿ.ಇಂಗ್ಲೀಷ್ ಉಪನ್ಯಾಸಕರು,ಬೆಳಗಾವಿ ಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಬದುಕಿನ ಸಪಾಟು ರಸ್ತೆಯಲ್ಲಿ ಎಷ್ಟೇ ವೇಗವಾಗಿ ಚಲಿಸುವ ಮನಸ್ಸಿದ್ದರೂ ಭಯವೆನ್ನುವುದು ಅಡೆತಡೆಯಂತೆ ಅಡ್ಡಗಟ್ಟುತ್ತದೆ. ಅಡೆತಡೆಯೆಂಬ ಏರಿ ದಾಟಿದ ಮೇಲೆಯೇ ಪರಿಮಳ ತುಂಬಿಕೊಂಡ ಜೀವನದ ಕಂಪು ಎಲ್ಲೆಲ್ಲೂ ಹರಡುವುದು. ಒಮ್ಮೆ ಮನದಲ್ಲಿ ಭಯ ಮೂಡಿದರೆ ಸಾಕು ಹದವಾದ ಲಯದಲ್ಲಿ ಸಾಗುತ್ತಿದ್ದ ಬದುಕು ಮುಗ್ಗರಿಸಿದಂತೆ ಆಗುತ್ತದೆ. ಭಯವೆಂಬುದು ಕತ್ತಲಲ್ಲಿ ಕರಿ ಬೆಕ್ಕನ್ನು ಹುಡುಕಿದಂತೆ. ಭಯದ ಭಯಕ್ಕೆ ಸಣ್ಣ ಪುಟ್ಟ ಆಸೆಗಳಿಗೂ ಕಡ್ಡಿ ಗೀರುವ ಪ್ರಸಂಗಗಳು ಬರುತ್ತವೆ. ಭಯವಿಲ್ಲದೇ ಬದುಕಬೇಕೆನ್ನುವ ಹಂಬಲ ಯಾರಿಗಿಲ್ಲ?ಭಯದ ಲೋಕವಿವಿಧ ವಯೋಮಾನದವರಿಗೆ ಭಯದ ಲೋಕಗಳು ಭಿನ್ನ ಭಿನ್ನ. ಇದರರ್ಥ ಭಯ ಎನ್ನುವುದು ಎಲ್ಲ ವಯಸ್ಸಿನಲ್ಲೂ ಇದ್ದದ್ದೇ ಅಂದಂಗಾಯ್ತು. ದಿಢೀರ್ ಹುಟ್ಟಿಕೊಳ್ಳುವ ಭಯ ಒಂದೆಡೆಯಾದರೆ, ಸದ್ದಿಲ್ಲದೇ ಸುಳಿವಿಲ್ಲದೇ ಬಾಲ್ಯದಿಂದಲೂ ಬೆನ್ನು ಹತ್ತಿ ಬಂದ ಭಯ ಮತ್ತೊಂದೆಡೆ. ಹೀಗೆ ಭಯ ಅಟ್ಟಾಡಿಸಿಕೊಂಡು ಹೊರಟರೆ ಮುಂದೆ ಹೇಗೆ ಎನ್ನುವ ತಲೆಬಿಸಿಯಲ್ಲಿ ಕಿರಿ ಕಿರಿ ಉಂಟಾಗುತ್ತದೆ. ಇದರ ಪರಿಣಾಮವಾಗಿ ಮನಸ್ಸು ಇನ್ನಿಲ್ಲದಂತೆ ಹಿಂಡಿ ಹಿಪ್ಪಿಯಾಗಿಸಲು…
ಕಲಾವಿದ ರಮೇಶ ಚವ್ಹಾಣ ರ “ನನ್ನ ಅಭಿವ್ಯಕ್ತಿ” ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ | ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಲಾವಿದರು ಸೃಜನಶೀಲರಾಗಿದ್ದರೆ ಮಾತ್ರ ಅವರಿಂದ ಸೃಜನಾತ್ಮಕ ಕಲಾಕೃತಿ ರಚನೆ ಸಾದ್ಯ ಎಂದು ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ಬುದವಾರ ಸಂಜೆ ಕ್ಯಾನವಾಸ ಆರ್ಟ್ ಫೌಂಡೇಶನ್ ಆಯೋಜಿಸಿದ ಕಲಾವಿದ ರಮೇಶ ಚವ್ಹಾಣ ಅವರ “ನನ್ನ ಅಭಿವ್ಯಕ್ತಿ” ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.ಕಲೆನಿಂತ ನೀರಾಗಬಾರದು. ಕಲಾವಿದ ನಿರಂತರವಾಗಿ ಕೃತಿ ರಚನೆಯಲ್ಲಿ ತೊಡಗಿದರೆ ಅತ್ಯಂತ ಸುಂದರ ಜೀವನ ಅವನದಾಗುತ್ತದೆ. ದೃಶ್ಯ ಕಲಾ ಪ್ರಕಾರಗಳಲ್ಲಿ ಹಲವಾರು ವಿಷಯಗಳಿದ್ದು, ಅದರಲ್ಲೂ ನವ್ಯಕಲೆಯು ಅತ್ಯಂತ ಕಷ್ಟದ ಕೆಲಸ. ಅದರಲ್ಲಿ ಸಿದ್ದಹಸ್ತರಾದ ಯುವ ಕಲಾವಿದ ರಮೇಶ ಚವ್ಹಾಣ ತಮ್ಮ ಕೆಲಸದಲ್ಲಿ ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಲಲಿತಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಬಿ. ನೀಲಮ್ಮ. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಬಜಂತ್ರಿ, ಹಿರಿಯ ಕಲಾವಿದರಾದ…
Udayarashmi kannada daily newspaper
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಅಮತೂರ ಸಕ್ಲಿಂಗ್ ಅಸೋಷಿಯಸನ್ ೧೫ ನೇ ಟೈಮ ರೋಡ್ ಚಾಂಪಿಯನ್ ಷಿಪ್ ಮತ್ತು ಮೈಸೂರು ಜಿಲ್ಲಾ ಅಮೆಚೂರ ಸೈಕ್ಲಿಂಗ್ ಅಸೋಷಿಯೇಶನ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ ೧೪ ವಯೋಮಾನದೊಳಗಿನ ಬಾಲಕಿಯರ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕರೀಷ್ಮಾ ಮಲೀಕ್ಸಾಬ ತಟಗಾರ ೧೦ ಕಿ.ಮೀ ಟಿ.ಟಿ ಸ್ಟೇಟ್ ರೋಡ್ ಸೈಕ್ಲಿಂಗ್ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ವಿದ್ಯಾರ್ಥಿಯ ಈ ಸಾಧನೆಗೆ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಎಲ್.ಚವ್ಹಾಣ್, ಕಾರ್ಯದರ್ಶಿ ರಾಜಶೇಖರ ಚವ್ಹಾಣ್, ಕಾರ್ಯಾಧ್ಯಕ್ಷ ಕೆ.ಜಿ.ರಾಠೋಡ, ಮುಖ್ಯ ಗುರುಗಳಾದ ಇ.ಡಿ.ಲಮಾಣಿ, ಎಂ.ಎಲ್.ಚವ್ಹಾಣ್ ಹಾಗೂ ಆಡಳಿತ ಮಂಡಳಿ, ಶಿಕ್ಷಕ ಸಿಬ್ಬಂದಿ ಹರ್ಷವ್ಯಕ್ತಪಡಿಸಿದ್ದಾರೆ.
ಲೇಖನ- ಡಾ.ಶಶಿಕಾಂತ ಪಟ್ಟಣಸಾಹಿತಿ ಮತ್ತು ಸಂಶೋಧಕರುರಾಮದುರ್ಗ – ಪುಣೆ ಉದಯರಶ್ಮಿ ದಿನಪತ್ರಿಕೆ ಮಾನವೀಯ ಮೌಲ್ಯಗಳ ಜೊತೆಗೆ ಸದಾ ಸಹೃದಯದ ಸ್ನೇಹ ಜೀವಿ ಶ್ರೀ ಜಿ ಬಿ ಸಾಲಕ್ಕಿ ಅವರದ್ದು. ಮಾತು ಕಠೋರ ಮನಸ್ಸು ಮೃದು ಬದುಕನ್ನು ಅತ್ಯಂತ ಗಾಢವಾಗಿ ಪ್ರೀತಿಸುವ ಸೃಜನಶೀಲ ಮನಸ್ಸಿನವರು. ಬಿಎಸೆನ್ನೆಲ್ ನಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡು ಕಾರ್ಮಿಕ ಸಂಘಟನೆ ಸಂಘರ್ಷ ಹೋರಾಟದ ಜೊತೆಗೆ ಸಾಹಿತ್ಯ ಪ್ರೇಮ ಆಧ್ಯಾತ್ಮಿಕ ಚಿಂತನೆ ಸಾಮಾಜಿಕ ಸೇವೆ ಅಗಮ್ಯವಾದದ್ದು. ಆಧ್ಯಾತ್ಮಿಕ ಚಿಂತನೆಯು ಆತ್ಮ, ಆತ್ಮ ಅಥವಾ ಆತ್ಮವನ್ನು ಆಲೋಚಿಸುತ್ತಿದೆ. ನಾವು ಈ ದೇಹವಲ್ಲ ಎಂದು ನಾವು ಅರಿತುಕೊಳ್ಳುತ್ತೇವೆ, ದೇಹವು ನಿರಂತರವಾಗಿ ಬದಲಾಗುತ್ತಿರುತ್ತದೆ. ಮೊದಲು ನಾವು ಹುಟ್ಟಿದಾಗ ಮಗು, ನಂತರ ನಾವು ಬೆಳೆಯುತ್ತೇವೆ, ನಾಳೆ ನಾವು ವಯಸ್ಸಾಗುತ್ತೇವೆ ಮತ್ತು ಅಂತಿಮವಾಗಿ ದೇಹವು ಸಾಯುತ್ತದೆ. ನಾವು ಆಲೋಚಿಸಿದಾಗ, ನಾವು ಈ ದೇಹವಲ್ಲ ಎಂದು ಆತ್ಮಾವಲೋಕನ ಮಾಡಿದಾಗ, ನಾವು ಆತ್ಮ ಎಂಬ ದಿವ್ಯ ಸತ್ಯವನ್ನು ತಿಳಿದುಕೊಳ್ಳುತ್ತೇವೆ. ಇದು ಆಧ್ಯಾತ್ಮಿಕ ಚಿಂತನೆ. ನೀವು ಏನಲ್ಲ, ನೀವು ದೇಹವಲ್ಲ, ನೀವು…
ಶ್ರೀಮಠದ ಪೀಠಾಧಿಪತಿ ಡಾ.ಶಿವಲಿಂಗೇಶ್ವರ ಗುರುಮುರುಗೇಂದ್ರ ಶ್ರೀಗಳಿಂದ ಡಿಸಿ ಟಿ.ಭೂಬಾಲನ್ ರಿಗೆ ಮನವಿ ಸಲ್ಲಿಕೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ವಿರಕ್ತಮಠವು ೧೨ನೇ ಶತಮಾನದ ಬಸವಣ್ಣನವರ ಕಾಲದ ಮಠವಾಗಿದ್ದು, ಇತಿಹಾಸವುಳ್ಳ ಶ್ರೀಮಠದ ಆಸ್ತಿ ಹೊಡೆಯಲು ಕೆಲವರು ಸಂಚು ರೂಪಿಸಿ ಮಠದ ಸರ್ವೇ ನಂ.೧೦೨೦ ೧ಎಕರೆ ೩೬ಗುಂಟೆ ಜಮೀನ ಪಹಣಿ ಉತಾರಿಯ ಋಣಗಳು ಕಾಲಂ ೧೧ರಲ್ಲಿ ೨೦೧೮-೧೯ನೆಯ ಸಾಲಿನಲ್ಲಿ ಅಕ್ರಮವಾಗಿ ಖಬರಸ್ಥಾನ ಸಿಂದಗಿ (ಸುನ್ನಿ) ವಕ್ಫ ಆಸ್ತಿ ಅಂತ ನಮೂದು ಮಾಡಿದ್ದಾರೆ. ಇದನ್ನು ತೆರವುಗೊಳಿಸಬೇಕು ಎಂದು ಸಿಂದಗಿ ಹಾಗೂ ಸಂಕ ವಿರಕ್ತಮಠದ ಶ್ರೀಮಠದ ಪಿಠಾಧಿಪತಿ ಡಾ.ಶಿವಲಿಂಗೇಶ್ವರ ಗುರುಮುರುಗೇಂದ್ರ ಶ್ರೀಗಳು ಹೇಳಿದರು.ಸಿಂದಗಿಯ ವಿರಕ್ತಮಠದ ಆಸ್ತಿ ಪಹಣಿಯಲ್ಲಿನ ವಕ್ಫ್ ಬೋರ್ಡ ತೆರವು ಮಾಡಲು ವಿಜಯಪುರದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಅಗತ್ಯ ಧಾಖಲೆಗಳೊಂದಿಗೆ ಮನವಿ ಸಲ್ಲಿಸಿ, ಶ್ರೀಮಠದ ಇತಿಹಾಸದ ಕುರಿತು ವಿವರಿಸಿದರು.ಹಿನ್ನೆಲೆ: ಸಿಂದಗಿ ವಿರಕ್ತಮಠವು ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರು ಶ್ರೀಮಠದ ಮಠವಾಗಿದ್ದು. ಈ ಮಠದ ಅಧಿನದಲ್ಲಿ ಸಿಂದಗಿ ವಿರಕ್ತಮಠ, ಸಂಕ ವಿರಕ್ತಮಠ, ಮುಚ್ಚಂಡಿ ವಿರಕ್ತಮಠ, ಚಿಕ್ಕೋಡಿ ತಾಲೂಕಿನ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾ ಭವನದಲ್ಲಿ ನ.೮ ರಂದು ಬೆಳಗ್ಗೆ ೧೦ ಗಂಟೆಗೆ ಮಹಾವಿದ್ಯಾಲಯದ ೨೦೨೪-೨೫ ನೇ ಶೈಕ್ಷಣಿಕ ವರ್ಷದ ಕ್ರೀಡಾ ಮತ್ತು ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಮ್ಮಿಕೊಂಡಿದೆ. ಸಾನಿಧ್ಯವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ವಹಿಸುವರು. ವಿಜಯಪುರದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಆರಕ್ಷಕ ಟಿ.ಮಲ್ಲೇಶ್ ಸಮಾರಂಭ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿಜಯಪುರದ ಎ.ಎಸ್.ಪಿ. ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಸ್.ಬೆಳಗಲಿ, ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ವಹಿಸುವರು. ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ ನಾಯಕೋಡಿ ಉಪಸ್ಥಿತಿ ಇರುವರು ಎಂದು ಮಹಾವಿದ್ಯಾಲಯದ ಸಾಂಸ್ಕ್ರತಿಕ ಚಟುವಟಿಕೆಗಳ ವಿಭಾಗದ ಕಾರ್ಯಾಧ್ಯಕ್ಷ ಡಾ.ಬಸವರಾಜ ಸಾಲವಾಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ತಾಂಬಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಬಾಲಕಿಯರು ಥ್ರೋಬಾಲ ಬೆಳಗಾವಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದು ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದ್ದಾರೆ.ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲಕಿಯರ ಥ್ರೋಬಾಲ ಕ್ರೀಡೆಯಲ್ಲಿ ಬೆಳಗಾವಿ ವಿಭಾಗ ಮಟ್ಟಕ್ಕೆ ಆಯ್ಕೆಗೊಂಡು ತಾಂಬಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಗೆ ಕೀರ್ತಿ ತಂದಿದ್ದಾರೆ. ಬಾಲಕಿಯರ ಸಾಧನೆಗೆ ಮುಖೋಪಾಧ್ಯಾಯ ಪಿ.ಕೆ.ಬಿರಾದಾರ, ಎಸ್.ಡಿ.ಎಮ್.ಸಿ ಅಧ್ಯಕ್ಷ ಸಿದಗೊಂಡ ಹಿರೇಕುರಬರ, ಎಸ್.ಡಿ.ಎಮ್.ಸಿ ಸದಸ್ಯರು, ಶಾಲೆಯ ದೈಹಿಕ ಶಿಕ್ಷಕ ಎಚ್.ಕೆ. ಮಾಳಗೊಂಡ, ಸಹಶಿಕ್ಷಕರು, ಗ್ರಾಮಸ್ಥರು ಅಭಿನಂದಿಸಿದರು.
