ಇಂಡಿಯಲ್ಲಿ ಸಂಸದ ಜಿಗಜಿಣಿಗಿ ವಿರುದ್ಧ ಪ.ಜಾತಿ ಬಲ ಸಮಾಜ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಬಲ ಸಮಾಜ ಮತದಾನ ಮಾಡಿಲ್ಲವೆಂದು ಬಲ ಸಮಾಜಕ್ಕೆ ಸಂಸದ ರಮೇಶ್ ಜಿಗಜಿಣಿಗಿ ಅವರು ಅವಮಾನ ಮಾಡಿದ್ದಾರೆ. ಅದು ಅವರ ರಾಜಕೀಯಕ್ಕೆ ಶೋಭೆ ತರುವಂತದಲ್ಲ. ಅದಲ್ಲದೆ ಹಳ್ಳಿಯಲ್ಲಿ ಅಣ್ಣ ತಮ್ಮ ಎಂದು ಸೌಹಾರ್ದತೆಯಿಂದ ಬಾಳ್ವೆ ಮಾಡುವ ನಮ್ಮ ಜನರಲ್ಲಿ ಬಲ, ಎಡ ಎಂದು ಒಡಕು ಭಾವನೆ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ತಾಲ್ಲೂಕಿನ ಡಿ ಎಸ್ಎಸ್ ಸಾಗರ ಬಣದ ಸಂಚಾಲಕ ರಮೇಶ್ ನಿಂಬಾಳಕ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಬಲ ಸಮಾಜಕ್ಕೆ ಕ್ಷಮೆಯಾಚಿಸಲು ಆಗ್ರಹಿಸಿದರು.
ಶುಕ್ರವಾರ ಪಟ್ಟಣದ ಖಾಸಗಿ ಹೋಟೆಲ್ ಯೊಂದರಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆ ನಡೆದ ಬಿಜೆಪಿ ಸಭೆಯಲ್ಲಿ ಪತ್ರಕರ್ತರು ಸಂಸದ ರಮೇಶ್ ಜಿಗಜಿಣಿಗೆ ಅವರಿಗೆ ಕೇಳಿದ ಪ್ರಶ್ನೆಗೆ ಬಲ ಸಮಾಜದವರು ನನ್ನ ರಾಜಿನಾಮೆ ಕೇಳಲು ಅವರಿಗೇನು ಅರ್ಹತೆ ಇದೆ. ಅವರೇನು ನನಗೇನು ಮತ ಹಾಕಿದ್ದಾರೇನು ಎಂದು ಬಲ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಮಾತನಾಡಿದರು.
1983 ರಿಂದ 1994 ರವರೆಗೆ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುತ್ತಾ ಬಂದಿರುತ್ತವೆ. ಇನ್ನೂ ವಿಧಾನ ಸಭಾ ಚುನಾವಣೆಯಲ್ಲಿ 4 ಬಾರಿ, ಲೋಕಸಭಾ ಚುನಾವಣೆಯಲ್ಲಿ 3 ಬಾರಿ ಮತ ಚಲಾಯಿಸಿದ್ದೆವೆ. ಮೊಟ್ಟ ಮೊದಲು ಬಳ್ಳೊಳ್ಳಿ ಮೀಸಲು ಕ್ಷೇತ್ರದಲ್ಲಿ ಬಲ ಸಮಾಜದ ಮದಪ್ಪ ಕನ್ನೂರ ( ಹಾವಿನಾಳ) ಅವರಿಗೆ ಸೂಚಿಸಲಾಯಿತು. ಆದರೆ ಈ ಕ್ಷೇತ್ರದ ಟಿಕೆಟ್ ನನಗೆ ಬೇಡ, ನಮ್ಮವರೆಯಾದ ರಮೇಶ್ ಜಿಗಜಿಣಿಗಿ ಟಿಕೆಟ್ ನೀಡಬೇಕೆಂದು ಒಪ್ಪಿಗೆ ಸೂಚಿಸಿ ಹಗಲು ರಾತ್ರಿ ಶ್ರಮಿಸಿ ಜಿಗಜಿಣಿಗಿ ಅವರನ್ನ ಶಾಸಕರನ್ನಾಗಿ ಮಾಡಿದ್ದಾರೆ. ಆದರೆ ಬಲ ಸಮಾಜದ ನಾಯಕನ ತ್ಯಾಗ ಮತ್ತು ಶ್ರಮ ಮರೆತ್ತಿದ್ದಾರೆ ಎನ್ಸುತ್ತೆ ಎಂದು ಕಿಡಿಕಾರಿದರು.
ಈ ಹಿಂದೆ ಲೋಕಸಭಾ ಚುನಾವಣೆಗೆ ಸುನೀತಾ ಚವ್ಹಾಣ, ಪ್ರಕಾಶ ರಾಠೋಡ, ಬಲ ಸಮಾಜದ ಕೆ. ಶಿವರಾಮ ಸ್ಪರ್ಧಿಸಿದರೂ ಅವರನ್ನು ಬಿಟ್ಟು ರಮೇಶ್ ಜಿಗಜಿಣಿಗಿ ಅವರಿಗೆ ಮತ ನೀಡುವ ಮೂಲಕ ಗೆಲುವಿನಲ್ಲಿ ಶ್ರಮಿಸಿದ್ದೆವೆ ಎಂದು ಹೇಳಿದರು.
ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಸಂವಿಧಾನದ ಅಡಿಯಲ್ಲಿ ಇರುವಂತಹ ಮೀಸಲು ಕ್ಷೇತ್ರ ಹೊರತುಪಡಿಸಿ ಸಾಮನ್ಯ ಕ್ಷೇತ್ರದಲ್ಲಿ ಗೆದ್ದು ತೋರಿಸಲಿ, ಆಗ ನಾವು ಒಪ್ಪಿಕೊಳ್ಳುತ್ತೆವೆ. ಆದರೆ ಈ ಕೂಡಲೇ ವಾರದಲ್ಲಿ ಹೇಳಿದ ಮಾತು ವಾಪಸ್ ಪಡೆದು, ಬಲ ಸಮಾಜಕ್ಕೆ ಕ್ಷೇಮೆಯಾಸಿಬೇಕು ಇಲ್ಲವಾದರೆ ತಾಲ್ಲೂಕು, ಜಿಲ್ಲಾಧಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಧರೆಪ್ಪ ಮಂದೆವಾಲಿ, ರಾಮಚಂದ್ರ ದೊಡಮನಿ, ಪರಮೇಶ ಇಂಗಳೇಶ್ವರ, ಲಕ್ಷ್ಮಣ ದೊಡ್ಡ ಮನಿ, ಗಡ್ಡೆಪ್ಪ ಹರಿಜನ, ಚಿಕ್ಕಯ್ಯ ಕಟ್ಟಿಮನಿ, ಕೇದಾರ ಹರಿಜನ, ರಾಜು ಸಾಲೋಟಗಿ ಸೇರಿದಂತೆ ಉಪಸ್ಥಿತರಿದ್ದರು.

