Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಜಿಲ್ಲಾಡಳಿತದಿಂದ ಒನಕೆ ಓಬವ್ವ ಜಯಂತಿ ಆಚರಣೆ | ಎಎಸ್ಪಿ ಶಂಕರ ಮಾರಿಹಾಳ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಚಿತ್ರದುರ್ಗದ ಕೋಟೆಯ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ವೀರ ವನಿತೆ ಒನಕೆ ಓಬವ್ವ ಅವರ ದೈರ್ಯ,ಸಾಹಸ ಹಾಗೂ ಸಮಯ ಪ್ರಜ್ಞೆಯಂತಹ ಆದರ್ಶಮಯ ವಿಚಾರಗಳನ್ನು ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಹೇಳಿದರು.ಸೋಮವಾರ ನಗರದ ಕಂದಗಲ್ಲ ಶ್ರೀ ಹನಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವೀರ ವಣನೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕೋಟೆ ರಕ್ಷಣೆಗಾಗಿ ತೋರಿದ ಧೈರ್ಯ ಇವರ ಸಾಹಸಮಯ ಚರಿತ್ರೆ ಯುವಪೀಳಿಗೆ ಅರಿಯಬೆಕು. ಇಂತಹ ಮಹನೀಯರ ಜಯಂತಿಗಳು ಆಚರಿಸುವ ಮೂಲಕ ಅವರ ಸಾಹಸಮಯ ಸಾಧನೆ ಸಮಾಜಕ್ಕೆ ತಿಳಿಹೇಳುವ ಉದ್ಧೇಶವಾಗಿದೆ ಎಂದು ಹೇಳಿದರು.ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಮಾತನಾಡಿ, ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿದ ದಿಟ್ಟ ಮಹಿಳೆಯಾಗಿದ್ದರು ಎಂದರು.ಡಾ.ಸುಜಾತಾ ಚಲವಾದಿ ಉಪನ್ಯಾಸ ನೀಡಿದರು.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವೃಕ್ಷೋಥಾನ್ ಹೆರಿಟೇಜ್ ರನ್-2024 ಅಂಗವಾಗಿ ಕೋರ್ ಕಮಿಟಿ ಮತ್ತು ವಿಜಯಪುರ ಸೈಕ್ಲಿಂಗ್ ಗ್ರುಪ್ ಪದಾಧಿಕಾರಿಗಳು ಇಂದು ರವಿವಾರ ಬೆಳಿಗ್ಗೆ ನಗರದಲ್ಲಿ ಜನಜಾಗೃತಿ ಜಾಥಾ ನಡೆಸಿದರು.ಡಾ. ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಸೈಕ್ಲಿಂಗ್ ಮತ್ತು ಓಟದಲ್ಲಿ ಪಾಲ್ಗೊಂಡ ನೂರಾರು ಯುವಕರು ಮತ್ತು ಮಕ್ಕಳು ಐತಿಹಾಸಿಕ ಗೋಳಗುಮ್ಮಟದಲ್ಲಿ ಸೇರಿ ವೃಕ್ಷೋಥಾನ್, ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಪರ ಘೋಷಣೆ ಹಾಕಿದರು. ಅಲ್ಲದೇ, ಡಿಸೆಂಬರ್ 22 ರಂದು ನಗರದಲ್ಲಿ ನಡೆಯಲಿರುವ ಹೆರಿಟೇಜ್ ರನ್ ನಲ್ಲಿ ಪಾಲ್ಗೊಳ್ಳುವಂತೆ ಪ್ರವಾಸಿಗರು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.ನಂತರ ಗೋಳಗುಮ್ಮಟದಿಂದ ತೆರಳಿ ಅಂಬೇಡ್ಕರ್, ಬಸವೇಶ್ವರ ಹಾಗೂ ಗಾಂಧಿ ಚೌಕ್ ಮೂಲಕ ಮರಳಿ ಜಿಲ್ಲಾ ಕ್ರೀಡಾಂಗಣಕ್ಕೆ ಜಾಥಾ ಮೂಲಕ ಆಗಮಿಸಿದರು.ಈ ಸಂದರ್ಭದಲ್ಲಿ ಡಾ. ಮಹಾಂತೇಶ ಬಿರಾದಾರ, ಡಾ.ಮುರುಗೇಶ ಪಟ್ಟಣಶೆಟ್ಟಿ, ಸಂಕೇತ ಬಗಲಿ, ವೀರೇಂದ್ರ ಗುಚ್ಚಟ್ಟಿ, ಅಪ್ಪು ಭೈರಗೊಂಡ, ಶಿವನಗೌಡ ಪಾಟೀಲ, ಅಶ್ಪಾಕ ಮನಗೂಳಿ, ಸೋಮಶೇಖರ ಸ್ವಾಮಿ, ಅನೀಲ ಧಾರವಾಡಕರ, ಸಂತೋಷ ಔರಸಂಗ, ಗುರುಶಾಂತ ಕಾಪಸೆ, ಶ್ರೀಕಾಂತ ಮಂತ್ರಿ,…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಇಂದಿನ ಒತ್ತಡದ ಬದುಕಿನಲ್ಲಿ ನಗುವು ಮಾಯವಾಗಿದ್ದು, ಆರೋಗ್ಯದ ಮೂಲವಾಗಿರುವ ನಗುವು ತರಿಸುವ ಮನರಂಜನಾ ಕಾರ್ಯಕ್ರಮಗಳು ಇಂದಿನ ಅವಶ್ಯಕವಾಗಿವೆ ಎಂದು ಚಿಮ್ಮಡ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.ಗ್ರಾಮದ ರಘುನಾಥ ಪ್ರೀಯ ಸಾಧು ಮಹಾರಾಜರ ಜಾತ್ರೆಯ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಅರುಣೋದಯ ಗ್ರಾಮೀಣಾಭಿವೃಧ್ಧಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶೃಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಅರುಣೋತ್ಸವ-೨೦೨೪’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಗು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯವನ್ನು ಸಮಸ್ಥಿತಿಯಲ್ಲಿಡಲು ಸಹಕಾರಿಯಾಗಿದೆ, ನಗುವಿನಿಂದ ಆಯುಷ್ಯವೃಧ್ದಿಯಾಗುತ್ತದೆ ಎಂದರು.ಕಾರ್ಯಕ್ರಮದ ಸಾನಿಧ್ಯವನ್ನು ಓಂಕಾರ ಮಹಾರಾಜರು ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಕಲ್ಲುಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ರಬಕವಿ-ಬನಹಟ್ಟಿ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ದುಂಡಪ್ಪಾ ಕರಿಗಾರ, ಸಂಗಮೇಶ ಬಾಬಾಗೌಡ ಪಾಟೀಲ, ನ್ಯಾಯವಾದಿ ಮಹೇಶ ಸಿಂಗಿ, ನಂದಕುಮಾರ, ಪಿಕೆಪಿಎಸ್ ಅಧ್ಯಕ್ಷ ಹಣಮಂತ ನೇಸೂರ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಅಶೋಕ ಮೋಟಗಿ, ಪ್ರಭು ಮುಧೋಳ, ಮಹಾಲಿಂಗ ಮಾಯಣ್ಣವರ, ರಾಜು ಬಗನಾಳ, ಗ್ರಾಮ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಸ್ವತಂತ್ರ ಮೊದಲ ಸೇನಾನಿ ಟಿಪ್ಪು ಸುಲ್ತಾನ್, ಅದಲ್ಲದೇ ಟಿಪ್ಪು ಸುಲ್ತಾನ್ ಜಾತ್ಯತೀತ ವ್ಯಕ್ತಿ, ಸ್ವಾತಂತ್ರ್ಯಕ್ಕೆ ಹೋರಾಡಿ ಮೈಸೂರಿನ ಹುಲಿ ಎಂದು ಖ್ಯಾತಿ ಪಡೆದಿದ್ದಾರೆ ಎಂದು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಜಾವೀದ್ ಮೋಮಿನ್ ಮಾತನಾಡಿದರು.ರವಿವಾರ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ ದಲ್ಲಿ ಯೂಥ್ ಕವರೇಜ್ ಅಸೋಸಿಯೇಷನ್ ಆಶ್ರಯದಲ್ಲಿ ಜರುಗಿದ ಟಿಪ್ಪು ಸುಲ್ತಾನ್ 274 ನೇ ಜಯಂತಿ ಅಂಗವಾಗಿ ಏರ್ಪಡಿಸಿರುವ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.ಅವರನ್ನು ಒಂದು ಧರ್ಮದ ಆಧಾರದ ಮೇಲೆ ನೋಡಿ ತಾರತಮ್ಯ ಮಾಡಬಾರದು. ಏನೇ ಭಿನ್ನಾಭಿಪ್ರಾಯಗಳಿದ್ದರೂ ಬದಿಗೊತ್ತಿ ವ್ಯಕ್ತಿತ್ವ, ಅವರ ತ್ಯಾಗ ಬಲಿದಾನ ವನ್ನು ಸ್ಮರಿಸಬೇಕಿದೆ. ಟಿಪ್ಪು ಸುಲ್ತಾನ್ ದೇಶಕ್ಕಾಗಿ ತನ್ನ ಮಕ್ಕಳನ್ನು ಬ್ರೀಟಿಷರಲ್ಲಿ ಒತ್ತೆ ಇಟ್ಟು ಹೋರಾಡಿದ ವೀರ. ಅಂತಹ ವೀರ ಸೇನಾನಿಯ ಜಯಂತಿಯನ್ನು ಮಾಡಬೇಕಾದದ್ದು ಸರ್ಕಾರದ ಕರ್ತವ್ಯ. ಆದರೆ, ಕೋಮುವಾದಿ ಬಿಜೆಪಿ ಸರ್ಕಾರ ಟಿಪ್ಪು ಸುಲ್ತಾನ್ನ ದೇಶಭಕ್ತಿಯನ್ನು ಮರೆಮಾಚಲು ಪ್ರಯತ್ನಿಸುತ್ತಿರುವುದು ಖಂಡನೀಯ. ಟಿಪ್ಪು ಸುಲ್ತಾನ್ ಸೌಹಾರ್ದ ಆಡಳಿತ, ಶೂರತನ ಎಂದಿಗೂ ಅಮರ ಎಂದು ಹೇಳಿದರು.ಶಾಂತಿ ಸಮಾಜ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಓವರ್ಟೇಕ್ ಮಾಡಲು ಹೋಗಿ ಮೂರು ಚಕ್ರದ ಪ್ಯಾಜೋ ಆಟೋವೊಂದು ಪಲ್ಟಿಯಾದ ಪರಿಣಾಮ ಆಟೋದಲ್ಲಿದ್ದ ಮಹಿಳೆಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿದ್ದು ಹಲವರಿಗೆ ಗಂಭೀರ ಗಾಯಗಳಾದ ಘಟನೆ ತಾಲೂಕಿನ ಅಮರಗೋಳ ಕ್ರಾಸ್ ಬಳಿ ಸಂಭವಿಸಿದೆ.ಮೃತ ದುರ್ದೈವಿಯನ್ನು ತಾಲೂಕಿನ ಕೊಳೂರು ಗ್ರಾಮದ ಮಾಲನಬಿ ಹವಾಲ್ದಾರ(೩೫) ಎಂದು ಗುರುತಿಸಲಾಗಿದೆ. ಅಟೋದಲ್ಲಿದ್ದ ಕೊಳೂರು ಗ್ರಾಮಸ್ಥರಾದ ವಸಂತಿ ಕತ್ತಿ, ಶರಣಮ್ಮ ಹಗಟಗಿ, ಲಾಲಮಾ ಮತ್ತೇದಾರ, ಬಸಮ್ಮ ತಾರನಾಳ, ಚನ್ನಮ್ಮ ತಂಗಡಗಿ, ನಿಂಗಮ್ಮ ಮಡಿವಾಳರ, ಶಂಕ್ರಮ್ಮ ಪಾಟೀಲ, ರೇಖಾ ಮಡಿವಾಳರ ಇವರಿಗೆ ಗಾಯಗಳಾದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಡಿಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಕಾರ್ಜುನ ತುಳಸಿಗೇರಿ, ಪಿಎಸ್ಐ ಸಂಜಯ ತಿಪರೆಡ್ಡಿ, ಕ್ರೆöÊಂ ಪಿಎಸ್ಐ ಆರ್.ಎಲ್.ಮನ್ನಾಬಾಯಿ ಮುಖ್ಯ ಪೇದೆಗಳಾದ ಎಂ.ಬಿ.ಹೂಗಾರ, ಎಸ್.ಜಿ.ಬನ್ನೆಟ್ಟಿ ಸಿಬ್ಬಂದಿಗಳಾದ ಬಿ.ಜೆ.ಕಾಸರ, ಮೌಲಾಲಿ ಮೊಕಾಶಿ ಭೇಟಿ ನೀಡಿ ಪರಿಶೀಲಿಸಿ ಶವವನ್ನು ಅಂಬುಲೆನ್ಸ್ ಮೂಲಕ ಮರಣೋತ್ತರ ಪರೀಕ್ಷೆಗೆ ರವಾನಿಸಿದರು.ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದ ಬಳಿಯ ಬಿಸಲದಿನ್ನಿ ಗ್ರಾಮದ ಜಮೀನೊಂದರಲ್ಲಿ ಈರುಳ್ಳಿ ಕೀಳುವ ಕೂಲಿ ಕೆಲಸಕ್ಕೆ ಹೋಗುವಾಗ ಟ್ಯಾಂಕರ್…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಭಕ್ತಿಯಲ್ಲಿ ಮೈಮರೆತ ವಿವಾಹಿತನ ಧೋತರಕ್ಕೆ ಬೆಂಕಿ ಹತ್ತಿ ಗಂಭೀರ ಗಾಯವಾದ ಘಟನೆ ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದಿದೆ.ಗಾಯಾಳು ಶರಣಗೌಡ ಅಗಸಬಾಳ ಎಂದು ತಿಳಿದು ಬಂದಿದೆ. ಗ್ರಾಮದ ದ್ಯಾಮಣ್ಣ ಮುತ್ಯಾನ ಕಟ್ಟೆಯಲ್ಲಿ ಭಕ್ತರಿಂದ ರವಿವಾರ ದೇವರಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಭಕ್ತಿಯಲ್ಲಿ ಮೈಮರೆತ ಶರಣಗೌಡ ನಮಸ್ಕರಿಸುವ ಸಂದರ್ಭ ಆತನ ಧೋತರಕ್ಕೆ ತಗುಲಿದ ಬೆಂಕಿ ಚಪ್ಪೆ, ಕಾಲು ಮತ್ತು ಕೈಗಳ ಕೆಲ ಭಾಗಕ್ಕೆ ಆವರಿಸಿಕೊಳ್ಳುತ್ತಿದ್ದಂತೆ ಸೇರಿದ್ದ ಜನ ಬೆಂಕಿಯನ್ನು ನಂದಿಸಿ ಆತನನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರವಾದ ಗಾಯಗಳಾಗಿರುವದರಿಂದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಲಕ್ಷ್ಮೀ ಚಿತ್ರಮಂದಿರದ ಹಿಂಬದಿ ಇರುವ ಶ್ರೀ ಅಂಬಾಭವಾನಿ ದೇವಸ್ಥಾನದ ೩ನೇ ವರ್ಷದ ವಾರ್ಷಿಕೋತ್ಸವವನ್ನು ರವಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ನಸುಕಿನ ಜಾವ ದೇವಿಗೆ ವಿಶೇಶ ಅಭಿಷೇಕ, ಮಹಾ ಮಂಗಳಾರುತಿ ನೆರವೇರಿಸಿ ದೇವಿಯ ಮೂರ್ತಿಯನ್ನು ಕಿಲ್ಲಾದಲ್ಲಿನ ಲಕ್ಷ್ಮೀ ಭಾವಿಗೆ ಕರೆದೊಯ್ದು ಪವಿತ್ರ ಗಂಗೆಯಲ್ಲಿ ದೇವಿಯ ಮೂರ್ತಿಗೆ ಸ್ನಾನಾಧಿ ಕಾರ್ಯಗಳನ್ನು ಮುಗಿಸಿ ವಿಶೇಷ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು. ಬಳಿಕ ಸತ್ಯನಾರಾಯಣ ಪೂಜೆ, ಮಹಾ ಮಂಗಳಾರುತಿ, ಸದ್ಭಕ್ತರಿಗೆ ಮಹಾಪ್ರಸಾದ ನೆರವೇರಿಸಿ ವಾರ್ಷಿಕೋತ್ಸವವನ್ನು ಸಂಪನ್ನಗೊಳಿಸಲಾಯಿತು.ಪೂಜಾಧಿ ಕಾರ್ಯಗಳನ್ನು ಪುರೋಹಿತರಾದ ಕಿಟ್ಟು ಅಗ್ನಿಹೋತ್ರಿ ಮತ್ತು ಪವನ ಕುಲಕರ್ಣಿ ನೆರವೇರಿಸಿದರು. ಪ್ರಮುಖರಾದ ಭರತ ಭೋಸಲೆ, ರಾಜೇಂದ್ರ ಭೋಸಲೆ, ಹಣಮಂತ ನಲವಡೆ, ಮಾರುತಿ ನಲವಡೆ, ಶಿವು ಬಿಜಾಪೂರ, ಸಚೀನ ಸಾಳುಂಕೆ, ಲೋಹಿತ ಘಾಟಗೆ, ಸಂತೋಷ ಚೌವ್ಹಾಣ, ಭೀಮಾಜಿ ಘಾಟಗೆ, ರಾಘವೇಂದ್ರ ಘಾಟಗೆ, ವಿಶ್ವನಾಥ ಸಿಂಧೆ, ರವಿ ನಲವಡೆ, ಕಿರಣ ದುದಾನಿ, ಅಣ್ಣಾಜಿ ಪವಾರ, ರಾಜು ಜಾಧವ, ಅಂಬಾಜಿ ಘಾಟಗೆ, ಗಣೆಶ ಘಾಟಗೆ, ತಾನಾಜಿ ಜಕತಾಪ, ರಾಹುಲ ಕನಸೆ,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ನ್ಯಾಯದಿಂದ ವಂಚಿತರಾಗುತ್ತಿರುವ ಮಹಿಳೆಯರು, ಹಿಂದುಳಿದ ವರ್ಗದವರು ಸೇರಿದಂತೆ ಬಡವರಿಗೆ ಕಾನೂನಿನ ನೆರವು ನೀಡುವ ಉದ್ದೇಶದಿಂದ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವನ್ನು ಪ್ರಾರಂಭಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಕರೆ ನೀಡಿದರು.ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಫಂಕ್ಷನ್ ಹಾಲ್ ನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನ್ಯಾಯಾಲಯಗಳು, ನ್ಯಾಯ ಮಂಡಳಿಗಳು ಸೇರಿದಂತೆ ವಿವಿಧ ಪ್ರಾಧಿಕಾರಗಳಲ್ಲಿರುವ ಪ್ರಕರಣಗಳನ್ನು ನಡೆಸಲು ನ್ಯಾಯವಾದಿಗಳ ಸಹಾಯ ಅವಶ್ಯ. ವಕೀಲರ ನೇಮಕ ಮಾಡಿಕೊಳ್ಳಲು ಆರ್ಥಿಕವಾಗಿ ದುರ್ಬಲರಿದ್ದಲ್ಲಿ ಅಂಥವರು ಕಾನೂನು ಸೇವಾ ಪ್ರಾಧಿಕಾರದ ಸೇವೆ ಪಡೆಯಬಹುದು. ಈ ಸೇವೆ ಪಡೆಯಲು ಪ್ರತೀ ನ್ಯಾಯಾಲಯಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದ ಕಚೇರಿಗೆ ಬೇಟಿ ನೀಡಿ ಸೇವೆ ಪಡೆಯಬಹುದು. ಪರಿಶಿಷ್ಟ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಇಲ್ಲಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಮತ್ತು ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಭೇಟಿ ನೀಡಿ ಪರಿಶೀಲಿಸಿದರು.ವಸತಿ ನಿಲಯದ ಆಡಳಿತದ ಬಗ್ಗೆ ವಿದ್ಯಾರ್ಥಿನಿಯರಿಗೆ ವಿಚಾರಿಸಿದ ಉಭಯ ನ್ಯಾಯಾಧೀಶರು ಯಾವತ್ತೂ ಕೋಣೆಗಳನ್ನು ಸ್ವಚ್ಛವಾಟ್ಟುಕೊಳ್ಳುವಂತೆ, ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಕಾಳಜಿ ಮತ್ತು ಸಮಯ ಕಳೆಯುವಂತೆ ಸಲಹೆ ನೀಡಿದರು. ಅಡುಗೆ ಕೋಣೆ ಸೇರಿದಂತೆ ಹಲವು ಕೋಣೆಗಳಲ್ಲಿ ಖುದ್ದು ತಿರುಗಾಡಿ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು. ಕುಡಿಯುವ ನೀರಿನ ಶುದ್ಧತೆ ಅಡುಗೆ ಶುಚಿತ್ವ ಕುರಿತ ಮಾಹಿತಿ ಪಡೆದು ವಿದ್ಯಾರ್ಥಿಗಳಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಸರಿಯಾಗಿ ತಲುಪಿಸುವಂತೆ ವಾರ್ಡನ್ ಗೆ ಸೂಚಿಸಿದರು.ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಣಿ ಬಿ.ಜಿ.ಮಠ, ವಾರ್ಡನ್ ಎಸ್.ಆರ್.ಬಿರಾದಾರ, ತಹಶೀಲ್ದಾರ ಕಚೇರಿಯ ಶಿರಸ್ತೇದಾರ ಎಂ.ಎ.ಬಾಗೇವಾಡಿ, ತಾಲೂಕು ಪಂಚಾಯತ ನ ನಿರ್ಮಲಾ ತೋಟದ, ನ್ಯಾಯವಾದಿಗಳ ಸಂಘದ ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ, ನ್ಯಾಯಾಲಯದ ಸಿಬ್ಬಂದಿಗಳಾದ ಅರವಿಂದ ಕುಂಬಾರ, ಮಹಾಂತೇಶ…
ವಿಭಾಗ, ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗೆ ಆಲಮಟ್ಟಿ ಸಕಲ ರೀತಿಯಿಂದ ಸಜ್ಜು ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಬೆಳಗಾವಿ ವಿಭಾಗ ಮತ್ತು ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗೆ ಆಲಮಟ್ಟಿಡ್ಯಾಂಸೈಟ್ ನ ಶಾಲಾ ಮೈದಾನ ಸಜ್ಜಾಗಿದ್ದು, ನ.೧೨ ರಂದು ವಿಭಾಗ ಮಟ್ಟ ಹಾಗೂ ನ.೧೪ ರಂದು ರಾಜ್ಯ ಮಟ್ಟದ ಸ್ಥರ್ಧೆಗಳು ನಡೆಯಲಿವೆ.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ೧೪ ವಯೋಮಾನ (ಪ್ರಾಥಮಿಕ ಶಾಲೆ)ದ ಬೆಳಗಾವಿ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ನ.೧೧ ರಂದು ೯ ಜಿಲ್ಲೆಗಳ ಕ್ರೀಡಾಪಟುಗಳು ಬರಲಿದ್ದು, ನ.೧೨ ರ ಬೆಳಿಗ್ಗೆ ೭.೩೦ ರಿಂದಲೇ ಸ್ಪರ್ಧೆಗಳು ಜರುಗಲಿವೆ. ಅದೇ ದಿನ ವಿಭಾಗ ಮಟ್ಟದ ಸ್ಪರ್ಧೆಗಳು ಪೂರ್ಣಗೊಳ್ಳಲಿವೆ.ರಾಜ್ಯ ಮಟ್ಟದ ಉದ್ಘಾಟನೆ:ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗೆ ರಾಜ್ಯದ ನಾನಾ ಭಾಗಗಳಿಂದ ನ,.೧೩ ರಂದು ಕ್ರೀಡಾಪಟುಗಳು ಆಗಮಿಸಲಿದ್ದು, ಆ ದಿನ ನೋಂದಣಿ ನಡೆಯಲಿದೆ. ೧೪ ವಯೋಮಾನದೊಳಗಿನ (ಪ್ರಾಥಮಿಕ ಶಾಲಾ ಹಂತ) ಹಾಗೂ ೧೭ ವಯೋಮಾನದೊಳಗಿನ (ಪ್ರೌಢಶಾಲಾ ಹಂತ) ಬಾಲಕ/ಬಾಲಕಿಯರ ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗಳು ನ.೧೩ ರಂದು ಸಂಜೆ…
