Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಿತ್ಯದ ಬದುಕಿಗೆ ಉತ್ತಮ ಸಂಸ್ಕಾರ ದೊರೆಯಲು ಪುರಾಣದಂತಹ ಆದರ್ಶ ಕಥೆಗಳು ಬಹಳಷ್ಟು ಅಗತ್ಯವಾಗಿವೆ ಎಂದು ಪ್ರಥಮ ದರ್ಜೆ ಗುತ್ತಿಗೇದಾರ ಶಂಕರಗೌಡ ಹೊಸಮನಿ ಹೇಳಿದರು.ತಾಲೂಕಿನ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದಲ್ಲಿ ಲಿಂ.ರುದ್ರಮುನಿ ಶಿವಾಚಾರ್ಯರ ೪೭ನೇ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಮಾನವನ ಮಾನವೀಯ ಮೌಲ್ಯಗಳು ಅಭಿವೃದ್ಧಿಯಾಗಲು ಶರಣರ, ದಾರ್ಶನಿಕರ, ಸಂತರ ಪುಣ್ಯಕಥೆಗಳು ಅಗಾಧವಾಗಿ ಕಾರ್ಯನಿರ್ವಹಿಸುತ್ತವೆ. ಇಂತಹ ಕಥೆಗಳ ಸಾರ ಪ್ರತಿಯೊಬ್ಬರು ಆಲಿಸಿ ಮಾನವ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.ಈ ವೇಳೆ ದಕ್ಷಿಣ ಸೋಲಾಪೂರದ ಮಾಳಕವಠೆ ಶ್ರೀಮಠದ ಡಾ.ಪಂಚಾಕ್ಷರಿ ಶಿವಾಚಾರ್ಯರು ಆಶೀರ್ವಚನ ನೀಡಿ, ಮಾಣವ ಜನ್ಮಕ್ಕೆ ಬಂದ ನಾವುಗಳೆಲ್ಲ ಮಹಾತ್ಮರು, ಶರಣ ಸತ್ಪುರಷರು ತೊರಿದ ದಾರಿ ಅನುಸರಿಸಬೇಕು. ಅವರು ಬದುಕಿನ ದಿನಗಳ ಬೆಳಕಿನಲ್ಲಿ ನಡೆದು ನಮ್ಮ ಜೀವನ ಪಾನವ ಮಾಡಿಕೊಳ್ಳಬೇಕು ಎಂದು ಹೇಳಿದರು.ಬೆಳಗಿನ ಜಾವ ಅಭಿನವ ರುದ್ರಮುನಿ ಶಿವಾಚಾರ್ಯರ, ಚಿದಾನಂದ ಶಾಸ್ತ್ರಿಗಳ, ಸಂತೋಷ ಶಾಸ್ತ್ರಿಗಳ, ಶಂಭುಲಿಂಗ ಶಾಸ್ತ್ರಿಗಳು, ಶರಣಯ್ಯ ಶಾಸ್ತ್ರಿಗಳ, ಶಂಕರಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಮಹಾರುದ್ರ, ಗಣಹೋಮ, ಶಿವದೀಕ್ಷೆ ಹಾಗೂ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ಕೊರತೆಯಾಗದಂತೆ, ಮಾದರಿಯಾಗುವಂತೆ ಅರ್ಥಪೂರ್ಣವಾಗಿ ಆಚರಿಸೋಣ ಎಂದು ವಿಜಯಪುರ ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹೇಳಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಜರುಗಿದ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸಮ್ಮೇಳನದಲ್ಲಿ ಪಕ್ಷಾತೀತವಾಗಿ ಹಾಗು ಜಾತ್ಯತೀತವಾಗಿ ಎಲ್ಲರೂ ಭಾಗವಹಿಸೋಣ. ನಿಮ್ಮೋಂದಿಗೆ ನಾವು ಇದ್ದೇವೆ ಯಾವುದೇ ಕಾರಣಕ್ಕೂ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು, ತಾಲ್ಲೂಕಾಧ್ಯಕ್ಷರು ಎದೆಗುಂದದೆ ಸಮ್ಮೇಳನದ ರೂಪುರೇಷೆಗಳನ್ನು ಸಿದ್ಧಪಡಿಸಲಿ ಎಂದರು.ಕಸಾಪ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ ಮಾತನಾಡಿ, ನಾಡು-ನುಡಿ. ನೆಲ-ಜಲ. ಸಂಸ್ಕೃತಿ – ಪರಂಪರೆ ಕುರಿತು ಗೋಷ್ಠಿಗಳನ್ನು ಏರ್ಪಡಿಸುತ್ತೇವೆ. ಸ್ಥಳೀಯರಿಗೆ ಪ್ರಾಧ್ಯಾನ್ಯತೆ ನೀಡುತ್ತೇವೆ. ತಾಲ್ಲೂಕಿನ ಎಲ್ಲ ಸ್ವಾಮೀಜಿಗಳು ಸಮ್ಮೇಳನದಲ್ಲಿ ಸಾನ್ನಿಧ್ಯ ವಹಿಸುತ್ತಾರೆ. ಎಲ್ಲರ ಸಹಕಾರ, ಸಲಹೆ ಅತ್ಯಗತ್ಯ ಎಂದು ಹೇಳಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಪಿ.ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಇದೇ ಡಿಸೆಂಬರ್ ೨೭ ಶುಕ್ರವಾರ ದಂದು ದೇವರಹಿಪ್ಪರಗಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಗೌರವಾನ್ವಿತ ಮುಖಂಡರಿಗೆ ಹಾಗು ಹಿರಿಯರೊಂದಿಗೆ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕಾಗಿದ್ದು ಹಾಗೂ ಪಡೆಯಬೇಕಾಗಿದ್ದು ಇಂದು ಅತೀ ಅಗತ್ಯವಾಗಿದೆ ಎಂದು ಬಾಲಗಾಂವ ಗುರುದೇವಾಶ್ರಮದ ಅಮೃತಾನಂದ ಶ್ರೀಗಳು ಹೇಳಿದರು.ತಾಲ್ಲೂಕಿನ ಮಣೂರ ಗ್ರಾಮದ ಶ್ರೀವೆಂಕಟೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ಅಂಗವಾಗಿ ಶುಕ್ರವಾರ ಜರುಗಿದ ಧರ್ಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಇಂದು ಯುವಜನತೆ ಪ್ಯಾಷನ್ ಹೆಸರಲ್ಲಿ ದಾರಿ ತಪ್ಪುತ್ತಿದೆ. ಹಣೆಗೆ ವಿಭೂತಿ, ಕುಂಕುಮ ಹಚ್ಚುವಂತ ನಮ್ಮ ಪರಂಪರೆ ಪ್ಯಾಷನ್ ಆಗಲಿ, ಇಂದು ನಾವು ಮಾಡುವ ನಮ್ಮ ಕಾರ್ಯಗಳಿಂದಲೇ ಪ್ರತಿಫಲ ಪಡೆಯುತ್ತಿದ್ದೇವೆ. ನಮ್ಮ ಅಗತ್ಯತೆಗಳಿಗೆ ಜಗದ ಪರಿಸರ ಮಲೀನಗೊಳಿಸಿ ಸ್ವಚ್ಛತೆಗಾಗಿ ಹೊಸ ಅವಿಷ್ಕಾರಗಳಿಗೆ ಅಣಿಯಾಗುತ್ತಿದ್ದೇವೆ. ನೆನಪಿರಲಿ ನಮ್ಮೇಲ್ಲ ರೋಗಗಳಗೆ ಶುದ್ಧಗಾಳಿಯೇ ಸಿದ್ಧ ಔಷಧ ಎಂದು ಮನುಷ್ಯನ ಮನಸ್ಥಿತಿಗಳ ಕುರಿತು ವಿವರಿಸಿ, ಸುಂದರ ಶಾಂತಿಮಯ ಜೀವನಕ್ಕಾಗಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪೂಜೆ, ಧ್ಯಾನ, ತಪಗಳಂತಹ ಆಧ್ಯಾತ್ಮೀಕ ಆಚರಣೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ವೀರಗೋಟ ಅಡವಿಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಮಾನವ ಮೂಲತಃ ಸ್ವಾರ್ಥಿ, ತನ್ನ ಉಳಿವಿಗಾಗಿ ಜಗವನ್ನೇ ದುರುಪಯೋಗ ಪಡಿಸಿಕೊಂಡು ಇಡೀ ಜೀವಿಸಂಕುಲದಲ್ಲಿ ಅತ್ಯಂತ ದುಃಖಿಯಾಗಿ ಕಾಣುತ್ತಿದ್ದಾನೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಭಗವದ್ಗೀತೆ ಭಗವಂತ ಕೊಟ್ಟ ಹಾಲು. ಅದು ಅತ್ಯಂತ ಪೌಷ್ಠಿಕವಾಗಿದ್ದು, ಭಗವಂತನ ಮಕ್ಕಳಾದ ನಮಗೆಲ್ಲ ತಾಯಿಯ ಹಾಲಿದ್ದಹಾಗೆ. ಇವತ್ತು ಕಲಬೆರಿಕೆ ಹಾಲನ್ನ ಕುಡಿದು ನಮ್ಮ ಆರೋಗ್ಯವನ್ನು ಸಾಕಷ್ಟು ಹಾಳು ಮಾಡಿಕೊಂಡಿದ್ದೇವೆ ಎಂದು ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಯತಿವರೇಣ್ಯ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದರು.ಪಟ್ಟಣದ ಶ್ರೀ ರಾಘವೇಂದ್ರ ಮಂಗಲ ಕಾರ್ಯಾಲಯದಲ್ಲಿ ರವಿವಾರ ಭಗವದ್ಗೀತಾ ಅಭಿಯಾನ ತಾಲೂಕು ಸಮೀತಿ ಮತ್ತು ಶ್ರೀ ರಾಘವೇಂದ್ರ ಮಠದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗವದ್ಗೀತಾ ಅಭಿಯಾನ ಜಾಗೃತಿ ಕಾರ್ಯಮದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.ಕಲಬೆರೆಕೆ ಹಾಲುಗಳಿಂದ ನಮ್ಮ ಬದುಕು ಹಾಳಾಗುತ್ತಿದೆ. ಸಧ್ಯ ಶುದ್ಧ ವಿಚಾರ ಶುದ್ಧ ಹಾಲಿನ ಮೂಲಕ ಆರೋಗ್ಯವಂತರಾಗುವ ಅವಶ್ಯಕತೆ ನಮಗೆಲ್ಲ ಇದೆ. ಹಾಗಾಗಿ ಭಗವದ್ಗೀತೆ ಎಂಬ ಹಾಲನ್ನ ಎಲ್ಲರು ಕುಡಿಯಿರಿ. ಸಾಧ್ಯವಾದಷ್ಟು ಜನಕ್ಕೆ ಕುಡಿಸಿ ಸಮಾಜವನ್ನು ಪುಷ್ಠವನ್ನಾಗಿಸಿ ಎನ್ನುವದು ನಮ್ಮ ಕಳಕಳಿ ಎಂದರು.ಈ ಬಾರಿಗೆ ಭಗವದ್ಗೀತಾ ಜಯಂತಿ ಡಿ.೧೧ ರಂದು ಬಂದಿದೆ. ಆದಿನ ಸಮಗ್ರ ಭಗವದ್ಗೀತೆ ಪಠಣ ಮಾಡುವ ರೂಢಿ ನಮಗೆ ಬರಬೇಕು. ದೇವಸ್ಥಾನಗಳಲ್ಲಿ,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಯುಕೆಪಿಯ ನ್ಯಾಯವಾದಿ ಎನ್.ಜಿ.ಗುರಿಕಾರ ಅವರುವಿಜಯಪುರ ನ್ಯಾಯಾಲಯದ ವಿಶೇಷ ಸರ್ಕಾರಿ ವಕೀಲರಾಗಿ ನೇಮಕರಾದ ಪ್ರಯುಕ್ತ ಅವರಿಗೆ ಇಲ್ಲಿನ ನ್ಯಾಯವಾದಿಗಳು ಸನ್ಮಾನಿಸಿ ಗೌರವಿಸಿದರು.ಈ ವೇಳೆ ನ್ಯಾಯವಾದಿಗಳಾದ ಎಂ.ಬಿ.ಪಾಟೀಲ, ವಿ.ಜಿ.ಮದರಕಲ್ಲ, ಎಸ್.ಸಿ.ಹಿರೇಮಠ, ಎಸ್.ಜಿ.ಅಂಗಡಿ, ಎನ್.ಬಿ.ಮುದ್ನಾಳ, ಐ.ಕೆ.ಸಾಸನೂರ, ಎನ್.ಆಯ್.ಕೇಸಾಪೂರ, ಎಚ್.ಎಚ್.ಬಡಿಗೇರ, ಜಿ.ಎಸ್.ಬಿಜ್ಜೂರ, ಎಸ್.ಎನ್.ಬಳೂತಿ ಸೇರಿದಂತೆ ಮತ್ತೀತರರು ಇದ್ದರು.
ಸಾವಿಲ್ಲದ ಶರಣರು ಲೇಖನ- ಡಾ.ಶಶಿಕಾಂತ.ಪಟ್ಟಣರಾಮದುರ್ಗ, ಮೊ:9552002338 ಉದಯರಶ್ಮಿ ದಿನಪತ್ರಿಕೆ ಸತ್ಯ ಸಮತೆ ಶಾಂತಿ ಪ್ರೀತಿಗೆ ಶರಣರು ತಮ್ಮನ್ನೇ ಬಲಿದಾನ ಮಾಡಿಕೊಂಡರು. ಬಸವಣ್ಣನವರ ನೇತೃತ್ವದಲ್ಲಿ ನಡೆದ ಈ ಆಂದೋಲನದಲ್ಲಿ ದಲಿತ ದಂಪತಿಗಳಾದ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ ಎಂಬ ಪುಣ್ಯ ಸತಿ ಪತಿಗಳು ಕಲ್ಯಾಣದ ಮಹಾ ಮನೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡರು.ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯಾ. ದಂಪತಿಗಳು ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಅಮರೇಶ್ವರ ಗ್ರಾಮದವರು. ಇದನ್ನು ಗುಡುಗುಂಟಿ ಅಮರೇಶ್ವರ ಎಂತಲೂ ಕರೆಯುತ್ತಾರೆ.ಬಡ ದಂಪತಿಗಳು ಬಸವಣ್ಣನವರ ಕೀರ್ತಿ ವಾರ್ತೆಗೆ ಮರುಳಾಗಿ ಕಲ್ಯಾಣದ ಶರಣ ಚಳುವಳಿಯಲ್ಲಿ ಪಾಲ್ಗೊಳ್ಳಲು ಅವರಿಬ್ಬರೂ ಕಲ್ಯಾಣಕ್ಕೆ ಬರುತ್ತಾರೆ.”ಆಯ” ಎಂದರೆ ಕೂಲಿ. ಇಲ್ಲಿಯವರೆಗೆ ಎಲ್ಲ ವಚನ ಸಂಪುಟ, ಶರಣ ಚರಿತಾಮೃತ ,ಶರಣರ ಚರಿತ್ರೆ ಶೂನ್ಯ ಸಂಪಾದನೆಯಲ್ಲಿ , ಆಯ ಅಂದರೆ – ಆಯ್ದುಕೊಳ್ಳುವುದು ಅಂತ ದಾಖಲೆಯಾಗಿದೆ. ಅದು ಸಂಪೂರ್ಣ ತಪ್ಪು. ಕಾಯಕಕ್ಕೆ ಎಲ್ಲಕ್ಕಿಂತ ಹೆಚ್ಚಿನ ಮಹತ್ವ ಕೊಟ್ಟವರು ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯಾ ಶರಣ ದಂಪತಿಗಳು. ರಸ್ತೆಯಲ್ಲಿ ಬಿದ್ದ ಕಾಳುಗಳನ್ನು ಹೆಕ್ಕಿ…
ಭಾರತದ ಕಿರಿಯ ವಯಸ್ಸಿನ ಪೈಲೆಟ್ ಆಗಿ ಆಯ್ಕೆಯಾದ ಸಾಧಕಿ ಕು.ಸಮೈರಾ ಹುಲ್ಲೂರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉದಯರಶ್ಮಿ ದಿನಪತ್ರಿಕೆ ಬಬಲೇಶ್ವರ: ಭಾರತದ ಕಿರಿಯ ವಯಸ್ಸಿನ ಪೈಲೆಟ್ ಆಗಿ ಆಯ್ಕೆಯಾಗಿರುವ ವಿಜಯಪುರದ ಸಾಧಕಿ ಕುಮಾರಿ ಸಮೈರಾ ಹುಲ್ಲೂರವರ ನಿವಾಸಕ್ಕೆ ಭೇಟಿ ನೀಡಿದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಸರಕಾರದ ಪರವಾಗಿ ಸಾಧಕಿ ಸಮೈರಾ ಹುಲ್ಲೂರ ಅವರನ್ನು ಸನ್ಮಾನಿಸಿ, “ವಿಜಯಪುರ ಸಾಧಕರ ತವರೂರು ಬಸವ ನಾಡಿನ ಈ ನೆಲದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊರತೆ ಇಲ್ಲ, ಈಗ ಅಂಥ ಸಾಧಕರ ಪಟ್ಟಿಗೆ ಸೇರುವುದರ ಮೂಲಕ ಅತೀ ಕಿರಿಯ ವಯಸ್ಸಿನ ಪೈಲೆಟ್ ಆಗಿ ಆಯ್ಕೆಯಾಗಿರುವ ಕುಮಾರಿ ಸಮೈರಾ ಹುಲ್ಲೂರ್ ಸಾಧನೆ ವಿದ್ಯಾರ್ಥಿನಿಯರಿಗೆ ಮಾದರಿಯಾದದ್ದು, ಸಾಧಿಸಬೇಕೆಂಬ ದೃಢಸಂಕಲ್ಪ ಇರುವವರು ಯಾವ ಎತ್ತರಕ್ಕೆ ಬೇಕಾದರೂ ಹಾರಬಲ್ಲರು, ಏರಬಲ್ಲರು ಎನ್ನುವುದನ್ನು ಸಮೈರಾ ತೋರಿಸಿಕೊಟ್ಟಿದ್ದಾಳೆ. ಅವಳನ್ನು ನಾಡಿನ ಜನತೆ ಪರವಾಗಿ ಅಭಿನಂದಿಸಿ, ಸನ್ಮಾನಿಸಲು ಕರ್ನಾಟಕ ಬಾಲ ವಿಕಾಸ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಣಿಯಾದ ಫಲಾನುಭವಿಗಳಿಗೆ ವೇಲ್ಡಿಂಗ್ ಕಿಟ್, ರೋಡ್ ನಿರ್ಮಾಣ ಕಿಟ್ ಮತ್ತು ಟೈಲ್ಸ್ ಲೇಯರ್ ಟೂಲ್ ಕಿಟ್ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.ಫಲಾನುಭವಿಯ ಚಾಲ್ತಿಯಲ್ಲಿರುವ ಕಾರ್ಮಿಕ ಗುರುತಿನ ಚೀಟಿ, ಆಧಾರ ಕಾರ್ಡ ಮತ್ತು ಭಾವಚಿತ್ರಗಳನ್ನೊಂಗೊಂಡ ದಾಖಲೆಗಳನ್ನು ದಿನಾಂಕ: ೨೧-೧೨-೨೦೨೪ರೊಳಗಾಗಿ ಕಾರ್ಮಿಕ ನಿರೀಕ್ಷಕರ ಕಚೇರಿ, ೧ನೇ ವೃತ್ತ, ಕಲ್ಯಾಣ ಸಮುದಾಯ ಭವನ, ಸಿಂದಗಿ ನಾಕಾ ಅಲ್ಲಾಪೂರ ಓಣಿ ವಿಜಯಪುರದಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಪರಿಶೀಲಿಸಿ ಜೇಷ್ಠತಾ ಆಧಾರದ ಮೇರೆಗೆ ವಿತರಿಸಲಾಗುವುದು ವಿಜಯಪುರ ಕಾರ್ಮಿಕ ನಿರೀಕ್ಷಕರ ಪ್ರಕಟಣೆ ತಿಳಿಸಿದೆ.
ಮೊದಲ ದಿನದಿಂದಲೇ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಮೊದಲ ದಿನದಿಂದಲೇ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು, ವಿಧಾನಸಭೆ ಸಭಾಪತಿಗಳಾದ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿದ್ದಾರೆ.ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗಗಳ ಅಭಿವೃದ್ಧಿ ಹಾಗೂ ಸ್ಥಾನಮಾನಗಳ ಹಂಚಿಕೆಯಲ್ಲಿ ಪ್ರಾದೇಶಿಕ ತಾರತಮ್ಯವನ್ನು ನಿವಾರಿಸುವುದು ಅತ್ಯವಶ್ಯವಿದೆ. ಆದರೆ, ಪ್ರತಿ ಬಾರಿ ಅಧೀವೇಶನ ಜರುಗಿದಾಗ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಕೊನೆಯ ದಿನಗಳಲ್ಲಿ ಚರ್ಚೆಗೆ ಅವಕಾಶ ನೀಡುತ್ತಿದ್ದರಿಂದ, ಕೊನೆಯ ದಿನಗಳಲ್ಲಿ ಶಾಸಕರ ಹಾಜರಾತಿ ಕಡಿಮೆಯಾಗಿ ಚರ್ಚೆಯೇ ನಡೆಯುವುದಿಲ್ಲ.ಆದ್ದರಿಂದ, ಸಮಗ್ರ ಉತ್ತರ ಕರ್ನಾಟಕದ ನೀರಾವರಿ ಯೋಜನೆ, ರೈತರ ಸಮಸ್ಯೆಗಳು, ಕೈಗಾರಿಕೆಗಳು, ಶೈಕ್ಷಣಿಕ ಇತ್ಯಾದಿಗಳ ಅಭಿವೃದ್ಧಿಯ ಕುರಿತು ಅಧಿವೇಶನದ ಪ್ರಾರಂಭಿಕ ಹಂತದಲ್ಲಿಯೇ ಚರ್ಚೆಗೆ ಅವಕಾಶ ಕಲ್ಪಿಸಿ, ಆದ್ಯತೆ ನೀಡಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಚಡಚಣ: ಆಲೋಚನೆಗಳ ವಿನಿಮಯ ಮತ್ತು ಕಾರ್ಯಕ್ರಮಗಳು, ಸೇವೆಗಳು ಮತ್ತು ಚಟುವಟಿಕೆಗಳ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಪಟ್ಟಣದ ಶ್ರೀ ಸಂಗಮೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಬಿ.ರಾಠೋಡ ಹೇಳಿದರು.ಎರಡೂ ಮಹಾವಿದ್ಯಾಲಯಗಳ ಒಡಂಬಡಿಕೆಯ ಪ್ರಕಾರ ಕನ್ನಡ ವಿಭಾಗ ಆಯೋಜಿಸಿದ ಕಾರ್ಯಕ್ರಮದಲ್ಲಿ ಇಂಡಿ ಪಟ್ಟಣದ ಜಿ.ಆರ್. ಗಾಂಧಿ ಕಲಾ ಹಾಗೂ ವೈ.ಎ. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಕಾಲೇಜಿಗೆ ಭೇಟಿ ನೀಡಿದ ಪ್ರಯುಕ್ತ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ. ಎಸ್. ಮಾಗಣಗೇರಿ ಮಾತನಾಡಿ, ವಿದ್ಯಾರ್ಥಿ ಮತ್ತು ಶಿಕ್ಷಕರ ವಿನಿಮಯ ಕಾರ್ಯಕ್ರಮವು ಜಾಗತಿಕ ಪೌರತ್ವವನ್ನು ಬೆಳೆಸಲು, ಅಂತರ್ ಸಾಂಸ್ಕೃತಿಕ ತಿಳುವಳಿಕೆಯನ್ನು ಉತ್ತೇಜಿಸಲು ಮತ್ತು ಹೆಚ್ಚುತ್ತಿರುವ ಅಂತರ ಸಪರ್ಕಿತ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಕೌಶಲ್ಯ ಮತ್ತು ದೃಷ್ಟಿಕೋನಗಳನ್ನು ಬೇಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು. ಇಂಡಿ ಪಟ್ಟಣದ ಜಿ.ಆರ್. ಗಾಂಧಿ ಕಲಾ ಹಾಗೂ ವೈ.ಎ. ಪಾಟೀಲ…
