Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಆಲಮೇಲ: ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ತಾಲ್ಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಮುನ್ನ ಸರ್ವಾಧ್ಯಕ್ಷ ರ ಚನ್ನವೀರ ಶಾಸ್ತ್ರೀ ಹಿರೇಮಠ ಅವರ ಮೆರವಣಿಗೆ ನಡೆಯಿತು.ಈ ಮೆರವಣಿಗೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಹಾಂತೇಶ ಯಡ್ರಾಮಿ ಚಾಲನೆ ನೀಡಿದರು. ತೆರೆದ ವಾಹನದಲ್ಲಿ ಹಳೇ ವಿಭೂತಿಹಳ್ಳಿಯಿಂದ ಗ್ರಾಮದ ಪ್ರಮುಖ ರಸ್ತೆಯ ಮಾರ್ಗವಾಗಿ ಹೊಸ ವಿಭೂತಿಹಳ್ಳಿ ಗ್ರಾಮದ ಶ್ರೀ ಭಾಗ್ಯವಂತಿ ದೇವಿ ದೇವಸ್ಥಾನದ ಆವರಣದತ್ತ ಮೆರವಣಿಗೆ ಸಾಗಿತು.ಜನಪದ ಕಲಾ ತಂಡಗಳು, ಭಜನಾಮಂಡಳಗಳು, ದೊಳ್ಳು ಕುಣಿತ ತಂಡಗಳು ಮೆರವಣಿಗೆ ಉದ್ದಕ್ಕೂ ಸಾಗಿದವು.ವಿಭೂತಿ ಹಳ್ಳಿ ಗ್ರಾಮ ಸೇರಿದಂತೆ ತಾಲ್ಲೂಕಿನಾದ್ಯಂತ ಕನ್ನಡ ಪರ ಸಂಘಟನೆಗಳು, ಗ್ರಾಮದ ಪ್ರಮುಖರು,ಮಹಿಳೆಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸರ್ವಾಧ್ಯಕ್ಷ ರ ಮೆರವಣಿಯಲ್ಲಿ ಭಾಗವಹಿಸಿದ್ದರು.ಸಭಾಧ್ಯಕ್ಷರ ತೆರೆದ ವಾಹನವನ್ನು ವಿಶೇಷ ಅಲಂಕಾರ ಮಾಡಲಾಗಿತ್ತು. ವಿಭೂತಿಹಳ್ಳಿ ಗ್ರಾಮದಲ್ಲಿ ಇದೇ ಮೊದಲನೇ ಬಾರಿಗೆ ಸಮ್ಮೇಳನ ನಡೆಯುತ್ತಿದ್ದರಿಂದ ಗ್ರಾಮಸ್ಥರು ಸಂಭ್ರಮ ಪಟ್ಟರು. ಗ್ರಾಮದ ಪ್ರಮುಖ ಬೀದಿಗಳನ್ನು ಸ್ವಚ್ಛಗೊಳಿಸಿ ರಂಗೋಲಿಯಿಂದ ಶೃಂಗರಿಸಿದ್ದರು. ಯುವಕರು ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಬಸವನಾಡಿನ ನಡೆದಾಡುವ ದೇವರಾಗಿದ್ದ ಜ್ಞಾನಯೋಗಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಗುರುನಮನ ಜನೇವರಿ ೧ ಮತ್ತು ೨ ರಂದು ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಜರುಗುತ್ತಿದೆ. ಈ ಕಾರ್ಯಕ್ರಮದ ಕುರಿತು ಮಾಹಿತಿಯನ್ನು ನೀಡಲು ಡಿ.೨೧ ರಂದು ಬೆಳಗ್ಗೆ ೧೧ ಗಂಟೆಗೆ ಬಸವನಬಾಗೇವಾಡಿಯ ಬಸವ ಭವನದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.೨೧ ರಂದು ನಡೆಯುವ ಪೂರ್ವಭಾವಿ ಸಭೆಗೆ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ಹರ್ಷಾನಂದ ಸ್ವಾಮೀಜಿ, ಸ್ಥಳೀಯ ಉಭಯ ಮಠಗಳ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಆಗಮಿಸುವರು. ಈ ಪೂರ್ವಭಾವಿ ಸಭೆಗೆ ಬಸವನಾಡಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಪೂರ್ವಭಾವಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ ಇದ್ದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ನಾಡಿನಲ್ಲಿರುವ ಮಠಗಳ ದಾಸೋಹ ಹಸಿವು ನೀಗಿಸಿದರೆ ಅದರಡಿಯಲ್ಲಿರುವ ಶೈಕ್ಷಣಿಕ ಕೇಂದ್ರಗಳು ಲಕ್ಷಾಂತರ ವಿದ್ಯಾರ್ಥಿಗಳು ಭವಿಷ್ಯ ರೂಪಿಸುವ ಕೈಂಕರ್ಯ ಶ್ಲಾಘನೀಯ ಎಂದು ಗುಳೇದಗುಡ್ಡದ ನಿವೃತ್ತ ಪ್ರಾಧ್ಯಾಪಕ ಎಂ.ಪಿ.ನೀಲಕಂಠಮಠ ಹೇಳಿದರು.ಪಟ್ಟಣದ ಈರಕಾರ ಮುತ್ಯಾ ದೇವಸ್ಥಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕವು ಶನಿವಾರ ಹಮ್ಮಿಕೊಂಡಿದ್ದ ಉಪನ್ಯಾಸ ಮತ್ತು ಸನ್ಮಾನ ಸಮಾರಂಭದಲ್ಲಿ ದಾಸೋಹ ಮತ್ತು ಶೈಕ್ಷಣಿಕ ಕ್ರಾಂತಿಯಲ್ಲಿ ಮಠಗಳು ಕುರಿತು ಮಾತನಾಡಿದ ಅವರು, ೧೮೫೬ ರಲ್ಲಿ ಚಿತ್ರದುರ್ಗದ ಜಗದ್ಗುರುಗಳು, ಡೆಪ್ಯೂಟಿ ಚನ್ನಬಸಪ್ಪನವರು ಮೊದಲ ಘಟದಲ್ಲಿ ದಾಸೋಹ ಆರಂಭ ಮಾಡುವ ಜೊತೆಗೆ ಅಕ್ಷರ ದಾಸೋಹವನ್ನು ಆರಂಭಿಸಿದರು. ದ್ವಿತೀಯ ಘಟದಲ್ಲಿ ಧಾರವಾಡದ ಲಿಂಗಾಯತ ಅಭಿವೃದ್ಧಿ ಸಂಸ್ಥೆ, ಮೂರನೇ ಘಟಕದಲ್ಲಿ ಬಂಥನಾಳ ಶ್ರೀಗಳು, ಬಾಗಲಕೋಟದಲ್ಲಿ ಗುರುಬಸವ ಸ್ವಾಮೀಜಿ, ಸುತ್ತೂರು, ತುಮಕೂರು, ಭಾಲ್ಕಿ, ಗುಳೇದಗುಡ್ಡದ ಗುರುಸಿದ್ದೇಶ್ವರರು, ಧಾರವಾಡದ ಮುರಘಾಮಠ, ಹುಬ್ಬಳ್ಳಿಯ ಮೂರುಸಾವಿರ ಮಠ, ಗದಗದ ತೋಂಟದಾರ್ಯ ಮಠ ಸೇರಿದಂತೆ ಅನೇಕ ಮಠಗಳು ಈ ನಿಟ್ಟಿನಲ್ಲಿ ಕೈಂಕರ್ಯ ಮಾಡುತ್ತಿವೆ. ಸಾಲಿಮಠವು ಇದರಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂದರು.ವಿದ್ಯಾದಾನ,…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಿದ್ಯಾರ್ಥಿಗಳು ಶ್ರದ್ಧೆ, ನಂಬಿಕೆ, ಆತ್ಮವಿಶ್ವಾಸ ಇಟ್ಟುಕೊಳ್ಳುವ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡರೆ ವಿಜ್ಞಾನ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಳೇವಾಡ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಸಂಗಮೇಶ ಪೂಜಾರಿ ಹೇಳಿದರು.ಪಟ್ಟಣದ ಬಿಎಲ್ಡಿಇ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜ್ಞಾನ ಎಂದರೆ ಶಿಸ್ತು. ಇಂದು ವಿಜ್ಞಾನವೇ ಯುಗಧರ್ಮವಾಗಿದೆ. ವಿಜ್ಞಾನದಲ್ಲಿಯಾಗಿರುವ ಅನೇಕ ಸಂಶೋಧನೆಗಳಿಂದ ಜಗತ್ತು ಅಭಿವೃದ್ಧಿಯತ್ತ ಸಾಗುತ್ತಿದೆ. ವಿಜ್ಞಾನಧರ್ಮವನ್ನು ಇಟ್ಟುಕೊಂಡು ಧರ್ಮವನ್ನು ನೋಡಬೇಕು. ನಂಬಿಕೆ, ಶ್ರದ್ಧೆ ಇಟ್ಟುಕೊಂಡು ಇಡೀ ಸಮುದಾಯ ಬದುಕುತ್ತದೆ. ಜಗತ್ತಿನ ಅಭಿವೃದ್ಧಿಗೆ ವಿಜ್ಞಾನ ಪೂರಕವಾಗಿದೆ. ಧರ್ಮದಲ್ಲಿ ವಿಜ್ಞಾನ ಹೆಚ್ಚು ತರುವಂತಾಗಬಾರದು. ಅಕ್ಷರ ಕಲಿತವರು ರಾಕ್ಷಸರಾಗಬೇಕಾಗುತ್ತದೆ. ಮೌಲ್ಯಯುತವಾಗಲು ಸಾಧ್ಯವಾಗುವುದಿಲ್ಲ . ಪ್ರತಿಯೊಬ್ಬರೂ ಸಮಸ್ಯೆ ನಮ್ಮವು ಅಂದಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆಧುನಿಕತೆಯಲ್ಲಿ ಸಮಯ, ಹಣ, ಶ್ರಮ ಕಡಿಮೆಯಾಗುವಂತೆ ಮಾಡುವ ಕಡೆಗೆ ಹೆಚ್ಚು ಯುವಜನಾಂಗ…
ಕೈಗೆತ್ತಿಗೊಂಡ ೨೬೮೬ ಪ್ರಕರಣಗಳಲ್ಲಿ ಒಟ್ಟು ೧೬೯೫ ಪ್ರಕರಣಗಳು ರಾಜಿ ಸಂಧಾನ ಮೂಲಕ ಇತ್ಯರ್ಥ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಜರುಗಿತು. ಲೋಕ ಅದಾಲತ್ನಲ್ಲಿ ನಾಲ್ಕು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಒಟ್ಟು ೮೩೯೮ ಬಾಕಿಯಿರುವ ಪ್ರಕರಣಗಳಲ್ಲಿ ೨೬೮೬ ಪ್ರಕರಣಗಳನ್ನು ಕೈಗೆತ್ತಿಗೊಂಡು ಇದರಲ್ಲಿ ಒಟ್ಟು ೧೬೯೫ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಯಿತು.ಅವುಗಳಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ ಪ್ರಕರಣಗಳು, ಮೆಂಟೆನೆನ್ಸ್ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು, ಎಲ್ಎಸಿ ಇಸಿ ಪ್ರಕರಣಗಳು, ಎಂವಿಸಿ ಇಸಿ ಪ್ರಕರಣಗಳು, ಅಪರಾಧ ದಂಡ ಪ್ರಕರಣಗಳು ಹಾಗೂ ಅಬಕಾರಿ ಇಲಾಖೆಯ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಅಬಕಾರಿ ಪ್ರಕರಣಗಳು ಹಾಗೂ ಬ್ಯಾಂಕಿನ ಪ್ರಕರಣಗಳು ಒಟ್ಟು ಸೇರಿ ೩೬೧೪ ಪ್ರಕರಣಗಳಲ್ಲಿ ೨೭೬೧ ಪ್ರಕರಣಗಳು ರಾಜಿ ಸಂಧಾನದ ಮೂಲಕ ವಿವಿಧ ನ್ಯಾಯಾಽಶರು ಇತ್ಯರ್ಥಪಡಿಸಿದರು.ವಿಚ್ಛೇಧನ ಕೋರಿ ನ್ಯಾಯಾಲಯ ಮೆಟ್ಟಿಲೇರಿದ ಒಂದು…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಕಾನೂನಿನ ಅರಿವಿರಬೇಕು ಇದರಿಂದ ಅಪರಾದ ಪ್ರಕರಣದಲ್ಲಿ ಭಾಗಿಯಾಗುವುದು ತಪ್ಪುತ್ತದೆ ಎಂದು ಬನಹಟ್ಟಿ ಠಾಣಾಧಿಕಾರಿ ಶಾಂತಾ ಹಳ್ಳಿ ಹೇಳಿದರು.ಸ್ಥಳಿಯ ಸರಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಅಪರಾಧ ತಡೆ ಮಾಶಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಸಮಾಜದಲ್ಲಿ ಶಾಂತಿ, ನೆಮ್ಮದಿ ತರಲು ಪೋಲಿಸ್ ಇಲಾಖೆ ಹಗಲಿರುಳು ಶ್ರಮಿಸುತಿದ್ದು ಇದಕ್ಕೆ ಸಾರ್ವಜನಿಕರ ಸಹಕಾರವೂ ಅಷ್ಟೆ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ೧೮ ವರ್ಷ ವಯೋಮಾನ ಪೋರೈಸುವವರೆಗೂ ಯಾವುದೇ ವಾಹನ ಚಾಲನೆ ಮಾಡಬಾರದು, ಸಹಪಾಠಿ ವಿದ್ಯಾರ್ಥಿನಿಯರನ್ನು ಛೇಡಿಸುವುದಾಗಲಿ, ಹೆದರಿಸುವುದಾಗಲಿ ಮಾಡಿದಲ್ಲಿ ಪೋಸ್ಕೊದಂಥಹ ಕಠಿಣ ಕಾನೂನಿನ ಅಡಿ ಬಂಧಿತರಾಗಬೇಕಾಗುತ್ತದೆ, ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ಸರಕಾರಿ ನೌಕರಿಯಿಂದ ವಂಚಿತರಾಗಬೇಕಾಗುತ್ತದೆ ಅದಕ್ಕೆ ಒಳ್ಳೆಯ ನಡತೆ, ಕಾನೂನು ಪಾಲನೆ ಪ್ರತಿಯೊಬ್ಬರ ಅಗತ್ಯ ಎಂದು ಹೇಳಿದ ಅವರು ಇಲಾಖೆಯಿಂದ ಸಾರ್ವಜನಿಕರಿಗೆ ದೊರೆಯುವ ಹಲವಾರು ಸೌಲಭ್ಯ, ಹೊಸ ಯೋಜನೆಗಳ ಕುರಿತು ಮಾಹಿತಿ ನೀಡಿದರು ಹಾಗೂ ವಿದ್ಯಾರ್ಥಿನಿಯರು ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕೃಮಗಳ…
ಲೇಖನ:- ಕೆ.ಕೆ.ಕುಲಕರ್ಣಿವಿಜಯಪುರ ಉದಯರಶ್ಮಿ ದಿನಪತ್ರಿಕೆ ವಿದ್ವದ್ವರೈರ್ಮಣಿಪುರ ಸ್ಥಿತ ಭೂಸುರೇಂದ್ರೆö ||ಸಂಪ್ರಾರ್ಥ್ಯಮಾನ ಮನಿಶಂ ಶುಭ ಕೇಶವೇಶಮ್ ||೧೪ ನೇ ಶತಮಾನದ ಮಧ್ಯ ಭಾಗದಲ್ಲಿ ಆದ್ಯ ಮನೆತನದ ಹಿರಿಯರಾದ ಶೇಷಾದ್ರಿಗಳು ಪವಿತ್ರ ಕ್ಷೇತ್ರ ಕಂಚಿ-ಕುಂಬ ಕೋಣಗಳಿಂದ ವಲಸೆ ಬಂದು ವೃತ್ತಾಂತದಲ್ಲಿ ಬರುವ ಮಣಿಯೂರು, ಮಣಿಪುರ ಈಗಿನ ಅಫಜಲಪುರ ತಾಲೂಕಿನ ಹಿರೇಮಣೂರ ಗ್ರಾಮಕ್ಕೆ (ಕ್ರಿ.ಶ.೧೩೭೬ರಲ್ಲಿ) ಬಂದು, ಇಲ್ಲಿಯ ದ್ವೈತ ವೇದಾಂತ ಸ್ಥಾಪನಾಚಾರ್ಯರಾದ ಆನಂದತೀರ್ಥರ ಶಿಷ್ಯರಲ್ಲೊಬ್ಬರಾದ ಶ್ರೀ ಮಾಧವತೀರ್ಥರು ತಪಗೈದು ವೃಂದಾವನಸ್ಥರಾದ ತಾಣ. ಇದು ಬಹು ದೊಡ್ಡ ವಿದ್ಯಾಕೇಂದ್ರವು ಆಗಿತ್ತು.ಶೇಷಾದ್ರಿಗಳ ಸ್ವಪ್ನದಲ್ಲಿ ಕಾಣಿಸಿಕೊಂಡು ಮಣ್ಣೂರಿನಲ್ಲಿ ಅವರಿಂದ ಪ್ರತಿಷ್ಠಾಪಿತವಾದ ಚೆನ್ನಕೇಶವ ಮೂರ್ತಿಯೂ ದೃವಕರಾರ್ಚಿತ ಮೂರ್ತಿಯೆಂದು ಅತಿಹ್ಯವಿರುವುದು. ಶಂಖ ಚಕ್ರ ಗಧಾ ಪದ್ಮ ಧರಿಸಿದ, ಕೀರಿಟ ಕರ್ಣ ಕುಂಡಲಗಳಿಂದ ಸುಶೋಭಿತ, ಚತುರ್ಭುಜದ ದಿವ್ಯ ವಿಷ್ಣುವಿನ ೨೪ ರೂಪಗಳಲ್ಲಿ ಕೇಶವ ಎಂಬ ರೂಪವು ಪ್ರಥಮ ಸ್ಥಾನವಾಗಿದೆ. ಈ ಕೇಶವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹೋತ್ಸವ ಆಚರಿಸುತ್ತಾ ಬರಲಾಗುತಿದ್ದು, ಶ್ರೀ ಕೇಶವನು ಶೇಷಾದ್ರಿಗಳಿಗೆ ಅವರ ವಂಶಕರಿಗೆ ಆರಾಧ್ಯ ದೇವರು. ಮಣ್ಣೂರು ಪುರಾಣ ಪ್ರಸಿದ್ದವು ಜಾಗೃತ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಜಂತು ಹುಳುಗಳನ್ನು ಹೊಂದಿರುವ ಮಕ್ಕಳು ಅಪೌಷ್ಠಿಕತೆ ಮತ್ತು ರಕ್ತಹೀನತೆಯಿಂದ ಬಳಲುವ ಸಾಧ್ಯತೆಯಿದ್ದು ಕಡ್ಡಾಯವಾಗಿ ಮಾತ್ರೆ ಸೇವಿಸುವ ಮೂಲಕ ಜಂತು ಹುಳಗಳಿಂದ ಬರುವ ಕಾಯಿಲೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕೆಂದು ಚಿಮ್ಮಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೆ.ಎಸ್.ತಳ್ಳಿ ಹೇಳಿದರು.ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಮ್ಮಿಕೊಳ್ಳಲಾಗಿದ್ದ ಅಂತರ್ರಾಷ್ಟ್ರೀಯ ಜಂತುಹುಳು ಬಾಧೆ ನಿವಾರಣಾ ದಿನಾಚರಣೆ ಪ್ರಯುಕ್ರ ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆ ನೀಡಿ ಮಾತನಾಡಿದ ಅವರು, ಮಕ್ಕಳಲ್ಲಿ ಅಪೌಷ್ಠಿಕತೆ, ರಕ್ತಹೀನತೆಗೆ ಕಾರಣವಾಗುವ ಜಂತು ಹುಳುವಿನಿಂದ ರಕ್ಷಣೆ ನೀಡಲು ಅಂಗನವಾಡಿ ಕೇಂದ್ರ, ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಉಚಿತವಾಗಿ ಮಾತ್ರೆಗಳನ್ನು ನೀಡಲಾಗುತಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ಸೇವಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.ಸರಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯೆ ಶ್ರೀಮತಿ ಎಂ.ಎಸ್. ಜಿಟ್ಟಿ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಬಿ.ಎಂ. ಮಾದರ, ಸಹ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಉದಯರಶ್ಮಿ ದಿನಪತ್ರಿಕೆ ಜಯದೇವಿತಾಯಿ ಲಿಗಾಡೆಯವರು ಜನಿಸಿದ್ದು ಜೂನ್ 23 1912ರಲ್ಲಿ. ಜಯದೇವಿತಾಯಿ ಅವರ ಅಜ್ಜ ಶ್ರೀ ವಾರದ ಮಲ್ಲಪ್ಪನವರು ದಾನ ಧರ್ಮಗಳ ಮಹಾನ್ ವ್ಯಕ್ತಿ. ಅವರು ಮಹಿಳಾ ಜ್ಞಾನ ಮಂದಿರವನ್ನು ಸ್ಥಾಪಿಸಿ ಮಹಿಳಾ ವ್ಯಾಸಂಗಕ್ಕೆ ಅಗತ್ಯವಾದ ವಾತಾವರಣ ನಿರ್ಮಿಸಿದ್ದರು. ಈ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಕಾರ್ಯಕ್ರಮಗಳು ಬಾಲ್ಯದಿಂದಲೇ ಜಯದೇವಿ ತಾಯಿಯವರನ್ನು ಪ್ರಭಾವಿತಗೊಳಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾದವು. ಜಯದೇವಿತಾಯಿಯವರ ತಂದೆ ಚೆನ್ನಮಲ್ಲಪ್ಪನವರು, ತಾಯಿ ಸಂಗವ್ವನವರು ಸ್ವತ: ಹಾಡುಗಾರ್ತಿ. ಒಳ್ಳೆಯ ವಾಗ್ಮಿ, ಸೇವಾಕಾoಕ್ಷಿ , ಪ್ರಶಾಂತ ಸ್ವಭಾವಿ. ವಾರದವರ ಮಹಿಳಾ ಜ್ಞಾನ ಮಂದಿರಕ್ಕೆ ಯಾವಾಗಲೂ ಹೋಗುತ್ತಿದ್ದ ಸಂಗವ್ವನವರಲ್ಲಿ ಒಂದು ಸುಸಂಸ್ಕೃತ ನಡವಳಿಕೆ ಇತ್ತು. ಇವೆಲ್ಲದರ ಕೆನೆಗಟ್ಟಿದಂತೆ ಮಗಳು ಜಯದೇವಿ ಬೆಳೆದಳು.ಜಯದೇವಿತಾಯಿಯವರ ತವರು ಮನೆ ಹೆಸರು ಮಡಕಿ. ಶ್ರೀಮಂತ ಜೀವನವಾದರೂ ಮಗಳದು ನಿರಾಡಂಬರ ಜೀವನ. ಸೊಲ್ಲಾಪುರದಲ್ಲಿ ಕನ್ನಡ ಶಾಲೆಗಳು ಇರಲಿಲ್ಲವಾದ್ದರಿಂದ ಮರಾಠಿ ಶಾಲೆಯಲ್ಲಿ ಓದಬೇಕಾಯಿತು. ಆದರೆ ಮನೆಯಲ್ಲಿ ತಾಯಿಯ ಕೀರ್ತನೆ, ಬಡಜನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರಿದಂತೆ ವಿವಿಧ ರಾಜಕೀಯ ಮುಖಂಡರುಗಳು ವಿಜಯಪುರ ಜಿಲ್ಲೆಯ ಯುವ ಜನರ ಮತ ಪಡೆಯುವಗೋಸ್ಕರ ವಿಜಯಪುರ ಜಿಲ್ಲೆಗೆ ರಾಜಕೀಯ ಹಿತಾಸಕ್ತಿಗಾಗಿ ಈ ಹಿಂದೆ ತಪ್ಪಿ ಹೋಗಿರುವ 371 ಜೆ ಕಲ್ಯಾಣ ಕರ್ನಾಟಕ ಮೀಸಲಾತಿಯನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು. ಚುನಾವಣೆ ಮುಗಿದ ನಂತರ ಯಾವೊಬ್ಬ ಜನಪ್ರತಿನಿಧಿಗಳು ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಯಾಗಿರುವ 371ಜೆ ಬಗ್ಗೆ ಮಾತನಾಡದೇ ಜಿಲ್ಲೆಯ ಯುವ ಜನತೆಗೆ ಜನಪ್ರತಿನಿಧಿಗಳು ಅನ್ಯಾಯ ಎಸಗುತ್ತಿರುವುದು ಖಂಡನೀಯವಾದುದು ಕೂಡಲೇ ಬೆಳಗಾವಿಯಲ್ಲಿ ಜರುಗುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾಗಿರುವ 371ಜೆ ಮೀಸಲಾತಿ ಬಗ್ಗೆ ಪಕ್ಷಾತೀತವಾಗಿ ಧ್ವನಿ ಎತ್ತಿ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಲು ಮುಂದಾಗಬೇಕೆಂದು ಕರ್ನಾಟಕ ರಾಜ್ಯ ಪದವೀಧರ ಒಕ್ಕೂಟದ ಅಧ್ಯಕ್ಷ ಲಾಯಪ್ಪ ಇಂಗಳೆ ಹಾಗೂ ಕಾರ್ಯಾಧ್ಯಕ್ಷರಾದ ಕಲ್ಲಪ್ಪ ಶಿವಶರಣ ಅವರು ಜಂಟಿಯಾಗಿ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ವಿಜಯಪುರ ಜಿಲ್ಲೆಯು ನಂಜುಡಪ್ಪ…
