Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಆಲಮೇಲದಲ್ಲಿ ನಡೆದ ವಿರಾಟ ಹಿಂದೂ ಸಮ್ಮೇಳನ ಸಮಾವೇಶದಲ್ಲಿ ರಾಮಚಂದ್ರ ಏಡಕೆ ಅಭಿಮತ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಹಿಂದೂಸ್ಥಾನದಲ್ಲಿ ಬಿರುವರೆಲ್ಲರೂ ಹಿಂದೂಗಳೆ. ಈ ಹಿಂದೂ ಧರ್ಮ ನಾಶ ಮಾಡಲು ಸಾವಿರಾರು ವರ್ಷಗಳಿಂದ ನಿರಂತರವಾಗಿ ಪ್ರಯತ್ನಗಳು ಮಾಡಲಾಗಿದೆ ಆದರೂ ಹಿಂದೂ ಧರ್ಮ ನಾಶ ಮಾಡಲು ಆಗಿಲ್ಲ ಮುಂದೆಯು ಆಗೋದಿಲ್ಲ ಎಂದು ಉತ್ತರ ಕರ್ನಾಟಕ ಪ್ರಾಂತ ಸಹ ಬೌಧಿಕ ಪ್ರಮುಖ ರಾಮಚಂದ್ರ ಏಡಕೆ ಹೆಳಿದರು.ಪಟ್ಟಣದ ವಿರಾಟ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಹಮ್ಮಿಕೊಂಡ ಹಿಂದೂ ಸಮ್ಮೇಳನ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತ ಹೆಳಿದರು.ಹಿಂದೂ ಧರ್ಮ ನಾಶ ಮಾಡಲು ಹಿಂದೂಗಳ ಮೇಲೆ ನಡೆದಿರುವ ಅಕ್ರಮಗಳು ಹಿಂದೂ ಧರ್ಮದ ಇತಿಹಾಸ ತಿಳಿದುಕೊಳ್ಳಬೇಕು ಎಂದರು.ಹಿಂದೂ ಸಮಾಜಕ್ಕೆ ಸ್ವಾರ್ಥ ದೊಡ್ಡ ರೋಗವಾಗಿದೆ ತಮ್ಮ ಸ್ವಾರ್ಥಕ್ಕಾಗಿ ದೇಶ ಮತ್ತು ಧರ್ಮದ ಒಳಿತನ್ನೆ ಮರೆತು ಸ್ವಾರ್ಥಿಗಳಾಗುತ್ತಿದ್ದಾರೆ. ಭಾರತಿಯರು ಹಾವಾಡಿಗರು ಎಂದು ಅಗೌರವನ್ನು ಕಾಣುವದನ್ನು ದೂರ ಮಾಡಿದ್ದು ಸ್ವಾಮಿ ವಿವೇಕಾನಂದರು. ಅವರ ಜ್ಞಾನದಿಂದ ಜಗತ್ತಿಗೆ ಭಾರತಿಯರ ಸಂಸ್ಕಾರ ಜ್ಞಾನ ತೋರಿಸಿಕೊಟ್ಟಿದೆ ಎಂದರು.ತಾರಾಪೂರ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಗುರು…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಟಿಪ್ಪರ್ ಅಡಿ ಸಿಲುಕಿ ಬೈಕ್ ಸವಾರನೊಬ್ಬ ಮೃತಪಟ್ಟು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಜರುಗಿದೆ.ಪಟ್ಟಣದ ರಾಷ್ಟ್ರೀಯ ಹೆದ್ದಾರಿ ೫೦ರಲ್ಲಿ ಶುಕ್ರವಾರ ಮಧ್ಯಾನ್ಹ ಈ ಘಟನೆ ಜರುಗಿದೆ. ಘಟನೆಯಲ್ಲಿ ದೇವೂರ ತಾಂಡಾ ನಿವಾಸಿ ಅನೀಲ ಕೇಸು ರಾಠೋಡ(೩೫) ಸ್ಥಳದಲ್ಲಿಯೇ ಮೃತಪಟ್ಟರೆ, ಇನ್ನೊಬ್ಬ ಸವಾರ ಅವಿನಾಶ ಮನ್ನು ರಾಠೋಡ(೨೫) ತೀವೃವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಬೈಕ್ ಸವಾರರು ದೇವೂರ ತಾಂಡಾದಿಂದ ಪಡಗಾನೂರ ಗ್ರಾಮಕ್ಕೆ ತೆರಳುತ್ತಿದ್ದರೆನ್ನಲಾಗಿದೆ. ಇದೇ ಸಮಯದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಹೊರಟ ಟಿಪ್ಪರ(ಕೆ.ಎ.೨೮ ಎಎ ೫೭೨೪) ಒಮ್ಮೆಲೆ ಇಂಡಿ ಕಡೆಗೆ ತೆರಳಲು ಬಲಭಾಗಕ್ಕೆ ತಿರುಗಿಸಿದಾಗ ಅದರ ಚಕ್ರಗಳಡಿ ಸಿಲುಕಿ ಈ ದುರ್ಘಟನೆ ಸಂಭವಿಸಿದೆ.ಘಟನೆ ಜರುಗುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಕೂಡಲೇ ಆಗಮಿಸಿ ಜನರನ್ನು ನಿಯಂತ್ರಿಸಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿದರು. ನಂತರ ಪ್ರಕರಣ ದಾಖಲಿಸಿಕೊಂಡರು.ತಾಂಡಾ ನಿವಾಸಿ ಮೃತ ಅನೀಲ ಕುಟುಂಬದ ಒಬ್ಬನೇ ಮಗನಾಗಿದ್ದು ತಂದೆ, ತಾಯಿ ತೀರಿಹೋಗಿದ್ದಾರೆ. ಈಗ ಇವನ ನಿಧನದಿಂದ ಇವನ ಪತ್ನಿ, ಇಬ್ಬರು ಪುತ್ರರು ಹಾಗೂ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶ್ರೀ ಸದ್ಗುರು ಪತ್ತಿನ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ನೂತನವಾಗಿ ಬೆಳಗಾವಿಯ ಸಹಕಾರಿ ಸಂಘದ ಜಂಟಿ ನಿಬಂಧಕರಾಗಿ ಪದನ್ನೋತಿ ಹೊಂದಿದ ಕಲ್ಲಪ್ಪ ಓಬಣ್ಣಗೋಳ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಶ್ರೀ ಸದ್ಗುರು ಪತ್ತಿನ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಸಬರದ, ಚಂದ್ರಶೇಖರ ನಾಗರಬೆಟ್ಟ, ಸಂಗನಗೌಡ ಪಾಟೀಲ ಅಗಸಬಾಳ, ಆನಂದ ಶಾಬಾದಿ, ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ, ಮಲ್ಲು ಹಡಪದ, ಅಬ್ದುಲಗಪುರ ಭಾಗವಾನ, ಪಂಡಿತ ಯಂಪುರೆ, ಶಿವಾನಂದ ಬಡಾನೂರ, ಮಹಾಂತೇಶ ನೂಲಾನವರ ಸೇರಿದಂತೆ ಅನೇಕರು ಇದ್ದರು.
ಶಾಲೆಗೆ ಅಧಿಕಾರಿಗಳ ಭೇಟಿ | ಪರಿಶೀಲನೆ ಮಾಡಿ ಸ್ಪಷ್ಟನೆ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಆಲಬಾಳ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳ ಊಟದ ತಟ್ಟೆಗಳನ್ನು ಕೊಳಚೆ ನೀರಿನಲ್ಲಿ ತೊಳೆಯಲಾಗುತ್ತಿದೆ ಎಂಬ ಆರೋಪದ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸದರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪರಿಶೀಲನೆ ವೇಳೆ ಮಕ್ಕಳ ಊಟದ ತಟ್ಟೆಗಳನ್ನು ಕೊಳಚೆ ನೀರಿನಿಂದ ತೊಳೆಯಲಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಕೊಳಚೆ ನೀರಿನ ಬದಲಾಗಿ, ಫಿಲ್ಟರ್ ಯಂತ್ರದಿಂದ ಹೊರಹೋಗುವ ತ್ಯಾಜ್ಯ ನೀರನ್ನು ಪ್ರತ್ಯೇಕ ಪೈಪ್ ಮುಖಾಂತರ ತರಲಾಗಿದ್ದು, ಅದೇ ನೀರನ್ನು ತಟ್ಟೆ ತೊಳೆಯಲು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶಾಲಾ ಆವರಣದಲ್ಲಿ ಮಕ್ಕಳ ಊಟದ ತಟ್ಟೆಗಳನ್ನು ತೊಳೆಯಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಶಾಲೆಯಲ್ಲಿ ಮಕ್ಕಳಿಗೆ ಪ್ರತ್ಯೇಕ ಕುಡಿವ ನೀರಿನ ವ್ಯವಸ್ಥೆಯೂ ಲಭ್ಯವಿದೆ ಎಂದು ಪರಿಶೀಲನೆ ವೇಳೆ ತಿಳಿದುಬಂದಿದೆ. “ಈ ಸಂಬಂಧ ಸದರಿ ಶಾಲೆಯ ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನನ್ನವಳೆ ನನ್ನವಳೆ,ವಾಚನಾಲಯದ ಪುಸ್ತಕದಲ್ಲಿ ಮುಖ ಹುದುಗಿಸಿ ಕುಳಿತರೆ ಸಾಕು ಸಮಯ ಸರಿದಿದ್ದೇ ಗೊತ್ತಾಗುತ್ತಿರಲಿಲ್ಲ. ಎಮ್ ಎ ಕೊನೆ ವರ್ಷದ ಪರೀಕ್ಷೆ ಸಮೀಪಿಸುತ್ತಿದ್ದರಿಂದ ಎಂದಿಗಿಂತ ಓದು ಮತ್ತಷ್ಟು ಜೋರಾಗಿಯೇ ಇತ್ತು. ‘ಸ್ಸಾರಿ ತಮಗೆ ನನ್ನಿಂದ ಲೇಟ್ ಆಯಿತು ಅನಿಸುತ್ತೆ.’ ಎಂದು ಗ್ರಂಥಪಾಲಕರಿಗೆ ನುಡಿಯುತ್ತ ಸರಸರನೆ ದಾಪುಗಾಲು ಹಾಕುತ್ತ ಬಸ್ ಸ್ಟಾಪ್ ಮುಟ್ಟುವಷ್ಟರಲ್ಲಿ ಮಳೆಯ ತುಂತುರು ಹನಿಗಳು ಹಣೆಯನ್ನು ಮುತ್ತಿಕ್ಕಹತ್ತಿದವು. ಮಳೆ ಬರುವ ಯಾವುದೇ ಮುನ್ಸೂಚನೆ ಇರದಿದ್ದರೂ ವರುಣನ ಆಗಮನ ಒಂದು ತರಹ ಖುಷಿ ತಂದಿತ್ತು. ಮರುಕ್ಷಣವೇ ನೆನಪಾಯಿತು ಮಳೆ ಜೋರಾದರೆ ನನ್ನ ಬಳಿ ಛತ್ರಿ ಇಲ್ಲವೆಂದು. ಹೆಚ್ಚಾದರೆ ಏನಾಗುತ್ತೆ ಮಳೆರಾಯ ನನ್ನನ್ನು ಸ್ನಾನ ಮಾಡಿಸುತ್ತಾನೆ ಎನ್ನುತ್ತ ಸಣ್ಣ ಸಣ್ಣ ಮಳೆ ಹನಿಗಳಿಗೆ ಕೈ ಒಡ್ಡುತ್ತ ಮನದೊಳಗೆ ನಕ್ಕೆ. ಪುಣ್ಯಕ್ಕೆ ಮಿಂಚಿತು, ಗುಡುಗಿತು, ಆದರೆ ದಪ್ಪ ದಪ್ಪ ಹನಿಗಳು ಸುರಿಯಲಿಲ್ಲವೆಂದು ಖುಷಿ ಪಡುತ್ತ ಬಸ್ ಹತ್ತಿ ಕೂತೆ. ಮನೆಗೆ ಬಂದು ಬಿಸಿನೀರಿನಲ್ಲಿ ಮುಖ ತೊಳೆದು…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಪಾಲಕರು ತಮ್ಮ ಸಮಾನ ವಯಸ್ಕರೊಂದಿಗೆ ಮಾತನಾಡುವಾಗ ಮಕ್ಕಳೊಂದಿಗೆ ವಿಪರೀತ ಶಿಸ್ತಿನಿಂದ ಮತ್ತು ಕಠಿಣತೆಯಿಂದ ನಡೆದುಕೊಳ್ಳಬೇಕು ಎಂದು ಹೇಳುವುದನ್ನು ನಾವು ಬಹುತೇಕ ಕೇಳಿದ್ದೇವೆ.ಮಕ್ಕಳೊಂದಿಗೆ ಶಿಸ್ತಿನಿಂದ ನಡೆದುಕೊಳ್ಳಲು ನಾವು ಬಯಸಿದಾಗ ನಮ್ಮದೇ ಆದ ಕಿಲ ನಿಯಮಾವಳಿಗಳನ್ನು ಮಾಡಿಕೊಂಡು ಅವುಗಳನ್ನು ಮಕ್ಕಳು ಪಾಲಿಸಲಿ ಎಂದು ಅಪೇಕ್ಷಿಸುತ್ತೇವೆ, ಆಶಿಸ್ತುಕ್ರಮಗಳನ್ನು ಮಕ್ಕಳ ಮೇಲೆ ಒತ್ತಾಯಪೂರ್ವಕವಾಗಿ ಹೇರುತ್ತೇವೆ. ಅವುಗಳನ್ನು ಮಕ್ಕಳು ಪಾಲಿಸದೆ ಹೋದಾಗ ಅವರನ್ನು ದಂಡಿಸುತ್ತೇವೆ ಕಠಿಣವಾಗಿ ಮಾತನಾಡುತ್ತೇವೆ, ಆದರೆ ಅವರು ನಮ್ಮ ಮಕ್ಕಳು ನಮ್ಮದೇ ಪ್ರತಿರೂಪ. ಅತಿಯಾದ ಶಿಸ್ತು ಮಕ್ಕಳು ಪಾಲಕರ ವಿರುದ್ಧ ತಿರುಗಿ ಬೀಳುವಂತೆ ಮಾಡುತ್ತದೆ. ಅವರು ಪಾಲಕರ ಮಾತನ್ನು ಮೀರಬಹುದು. ವಿದ್ಯಾಭ್ಯಾಸದಲ್ಲಿ, ಆಟೋಟಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದು. ಆದರೆ ಇಲ್ಲಿ ಇನ್ನೊಂದು ಪದ ಇದೆ.. ಅದುವೇ ಬದ್ಧತೆ. ಬದ್ಧತೆ ಎಂದರೆ ಯಾವುದೇ ಒಂದು ವಿಷಯಕ್ಕೆ ದೃಢವಾಗಿ ಕಚ್ಚಿಕೊಂಡು ನಿಲ್ಲುವುದು, ನಿಲುವಿಗೆ ಬದ್ಧರಾಗುವುದು. ಇಂಥವರು ನನ್ನ ಜೊತೆಗಿದ್ದರೆ ನಾನು ಪರ್ವತವನ್ನೇ ಕಿತ್ತಿ ತರಬಲ್ಲೆ ಎಂಬ ಭಾವವನ್ನು ಮಕ್ಕಳಲ್ಲಿ…
ವಿಜಯಪುರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಿತಿ ಸಭೆ | ಜಿಲ್ಲಾಧಿಕಾರಿ ಡಾ.ಆನಂದ.ಕೆ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಕಾಲುವೆ ಜಾಲಗಳ ಮೂಲಕ ಕೆರೆ ತುಂಬಿಸುವ ಸಂದರ್ಭದಲ್ಲಿ ಕುಡಿಯುವ ನೀರು ಅನ್ಯ ಕಾರ್ಯಕ್ಕೆ ಬಳಕೆ ಹಾಗೂ ನೀರು ಪೋಲಾಗದಂತೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಸೂಚನೆ ನೀಡಿದರು.ಜಿಲ್ಲೆಯ ವಿವಿಧ ತಾಲೂಕಾ ತಹಶೀಲ್ದಾರ,ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ಗುರುವಾರ ಸಭೆ ನಡೆಸಿದ ಅವರು, ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು. ಲಭ್ಯವಿರುವ ನೀರನ್ನು ಸದ್ಭಳಕೆ ಮಾಡಿಕೊಂಡು ಮುಂದಿನ ಜೂನ್ವರೆಗೆ ಯಾವುದೇ ಸಮಸ್ಯೆಯಾಗದಂತೆ ನೀರನ್ನು ಕಾಯ್ದಿಟ್ಟುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.ಬೇಸಿಗೆಯಲ್ಲಿ ಯಾವುದೇ ನೀರಿನ ಅಭಾವವಾಗದಂತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ನೀರಿನ ಸಮಸ್ಯೆ ಉದ್ಭವಿಸಬಹುದಾದ ಸ್ಥಳಗಳ ಕುರಿತು ಮುಂಚಿವಾತವಾಗಿ ತಿಳಿದುಕೊಂಡು ಮಾಹಿತಿ ಸಲ್ಲಿಸಬೇಕು.…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದಲ್ಲಿ ವಿರಾಟ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಹಮ್ಮಿಕೊಂಡ ಹಿಂದೂ ಸಮ್ಮೇಳನ ಅಂಗವಾಗಿ ಗುರುವಾರ ನಡೆದ ಬ್ರಹತ್ ಶೋಭಾ ಯಾತ್ರೆ ಅದ್ದೂರಿಯಾಗಿ ಜರುಗಿತು.ಶೋಬಾಯಾತ್ರೆಯಲ್ಲಿ ಹಿಂದೂ ಧರ್ಮದ ರಾಜ ಮಾರಾಜರು, ಶರಣರು, ಸಂತರು, ಮಹಾನ ನಾಯಕರು ವಿವಿದ ಸಮಾಜದ ದೇವರ ಮೂರ್ತಿಗಳ ಭಾವ ಚಿತ್ರಗಳೊಂದಿಗೆ ಪಾಲ್ಗೊಂಡಿದ್ದು ವಿಶೇಷ ಆಕರ್ಷಣೆಯಾಗಿತ್ತು.ಶೋಭಾ ಯಾತ್ರೆಯಲ್ಲಿ ನಾಡ ದೇವಿ, ಭಾರತ ಮಾತೆ, ಛತ್ರಪತಿ ಶಿವಾಜಿ ಮಹಾರಾಜರು, ಮಹಾರಾಣ ಪ್ರತಾಪ್ ಸಿಂಹ, ಸಂಗೋಳ್ಳಿ ರಾಯಣ್ಣ, ಕಿತ್ತೂರ ರಾಣಿ ಚನ್ನಮ್ಮ, ಶರಣ ಅಣ್ಣ ಬಸವಣ್ಣ, ಡಾ. ಬಾಬಾ ಸಾಹೇಬ ಅಂಬೇಡ್ಕರ್, ಡೋಹರ ಕಕ್ಕಯ್ಯ, ಕ್ರಾಂತಿ ವೀರ ಬೆಳವಡಿ ಮಲ್ಲಣ್ಣ, ಮಡಿವಾಳ ಮಾಚಿದೇವ, ಜೇಡರ ದಾಸಿಮಯ್ಯ, ಜಗದ್ಗುರು ರೇಣುಕಾರ್ಯ, ನೋಲಿ ಚಂದಯ್ಯ, ವೀರ ದುರ್ಗಾದಾಸ ರಾಠೋಡ, ಅಂಬಿಗರ ಚೌಡಯ್ಯ, ಗಾಣದರೆವತೆ, ಮಹರ್ಷಿ ವಾಲ್ಮಿಕಿ, ಹೂಗಾರ ಮಾದಯ್ಯ, ಶ್ರೀರಾಮ, ಸ್ವಾಮಿ ವಿವೇಕಾನಂದ, ತುಳಜಾಪುರ ಅಂಬಾಭವಾನಿ, ವಿಶ್ವಕರ್ಮ, ಕೇತೇಶ್ವರ, ಜಗದ್ಗುರು ಶಂಕರಾಚಾರ್ಯ, ಸೇರಿದಂತೆ ಹಿಂದೂ ಧರ್ಮದ ಎಲ್ಲ ಸಮುದಾಯದ ರಾಜ ಮಾರಾಜರು,…
ಉದಯರಶ್ಮಿ ದಿನಪತ್ರಿಕೆ ಇಂಡಿ: ಮರಗೂರದ ಭೀಮಾಶಂಕರ ಕಾರ್ಖಾನೆಗೆ ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ನೇತೃತ್ವದ ಕಬ್ಬು ಪರಿಶೀಲನಾ ಸಮಿತಿ ಗುರುವಾರ ಭೇಟಿ ನೀಡಿತು.ಕಬ್ಬಿನ ತೂಕ, ಮಷಿನ ಮತ್ತು ಇಳುವರಿ ಪರಿಶೀಲಿಸಿತು. ಕಬ್ಬಿನ ತೂಕದ ಮಷೀನು ಡಿಜಿಟಲ್ ಮತ್ತು ಎರಡು ತೂಕದ ಮಷಿನ್ ಇರುವದನ್ನು ಪರಿಶೀಲಿಸಿತು.ಅದರಂತೆ ಕಬ್ಬಿನ ರಿಕವರಿ ರೈತರ ಸಮ್ಮುಖದಲ್ಲಿ ಪ್ರಯೋಗಾಲಯದಲ್ಲಿ ಖಚಿತ ಪಡಿಸಿಕೊಂಡಿತು.ಅದಲ್ಲದೆ ರೈತರಿಗೆ ಕಬ್ಬಿನ ತೂಕದ ಪಾವತಿ ವಿತರಣೆ ಯಾಗುತ್ತಿರುವ ಬಗ್ಗೆ ಪರಿಶೀಲಿಸಿದರು. ರೈತರಿಗೆ ತೂಕದಲ್ಲಿ ಯಾವದೇ ರೀತಿಯ ವ್ಯತ್ಯಾಸ ಆಗದಂತೆ ನೋಡಿಕೊಳ್ಳಲು ಕಾರ್ಖಾನೆ ಸಿಬ್ಬಂದಿಗೆ ಸೂಚಿಸಿತು. ಕಬ್ಬಿನ ಹಣ ನೀಡುವದನ್ನು ಸಮಿತಿ ಖಚಿತ ಪಡಿಸಿಕೊಂಡಿತು.ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ, ಆಹಾರ ನೀರಿಕ್ಷಕ ಎಸ್.ಎಸ್.ಕೋಳಿ, ಅಬಕಾರಿ ಅಧಿಕಾರಿ ಎನ್.ಎಚ್.ಹೂಗಾರ, ಪಿ.ಎಸ್.ಐ ಎಸ್.ಬಿ.ನವೀನಕೊರೆ, ತೂಕ ಮತ್ತು ಅಳತೆ ಅಧಿಕಾರಿ ರೇಣುಕಾ ಪಟ್ಟಣಶೆಟ್ಟಿ ರೈತ ಮುಖಂಡರಾದ ವಂಸತ ಭೈರಾಮಡಗಿ, ಜೆ.ಸಿ.ಬಿರಾದಾರ ಸೇರಿದಂತೆ ಮತ್ತಿತರರಿದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರದ ಆದರ್ಶ ವಿದ್ಯಾಲಯಕ್ಕೆ ೬ ನೇ ತರಗತಿಗೆ ೨೦೨೬-೨೭ ನೇ ಸಾಲಿನ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಪ್ರಾಚಾರ್ಯ ಎಸ್.ಜಿ.ಬನಸೋಡೆ ತಿಳಿಸಿದ್ದಾರೆ.ಆನ್ ಲೈನ್ ಅರ್ಜಿ ಪ್ರಾರಂಭ ಜ. ೨೩ ರಂದು, ಆನ್ ಲೈನ್ ಅರ್ಜಿ ಮುಕ್ತಾಯದ ದಿನ ೨೫ ಫೆ , ಪ್ರವೇಶ ಪರೀಕ್ಷೆ ದಿನಾಂಕ ಮಾರ್ಚ ೧೫, ಹಾಲ್ ಟಿಕೇಟ್ ಡೌನಲೋಡ ಮಾರ್ಚ ೧, ಫಲಿತಾಂಶ ಏಪ್ರೀಲ ೧೦ ರಂದು ಜರುಗಲಿವೆ.ಅರ್ಜಿ ಸಲ್ಲಿಸಲು ಮಗುವಿನ ಫೋಟೋ, ಪಾಲಕರ ಫೋನ್ ನಂ, ೫ ನೇ ತರಗತಿ ಶಾಲಾ ಮುಖ್ಯೋಪಾಧ್ಯಾಯರ ಫೋನ್ ನಂ, ಮಗುವಿನ ಎಸ್.ಎ.ಟಿ.ಎಸ್ ನಂಬರ, ಮಗುವಿನ ಜಾತಿ ಆದಾಯ ಪ್ರಮಾಣ ಪತ್ರ, ಮಗುವಿನ ಆಧಾರ ಕಾರ್ಡ, ವಿದ್ಯಾರ್ಥಿಯು ೫ ನೇ ತರಗತಿಯನ್ನು ಓದುತ್ತಿರುವ ಶಾಲೆಯ ತಾಲೂಕು ಮತ್ತು ಆದರ್ಶ ಶಾಲೆ ತಾಲೂಕು ವಿಭಿನ್ನವಾಗಿದ್ದರೆ ವಾಸಸ್ಥಳ, ಡೋಮಿಸೈಲ ಪ್ರಮಾಣ ಪತ್ರ ತರಬೇಕು ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
