ಹಿರಿಯ ಪತ್ರಕರ್ತರಾದ ಫಿರೋಜ ರೋಜಿನದಾರ, ದಾನಪ್ಪ ಸೂರಗೊಂಡ, ರಶ್ಮಿ ಪಾಟೀಲ, ಚಿದಂಬರ ಕುಲಕರ್ಣಿ, ಸಂಜಯಕುಮಾರ ಕೊಂಡಗೂಳಿ, ಬಾಬು ತಡ್ಲಗಿ ಡಾ.ಸಂತೋಷ ನವಲಗುಂದ ಸೇರಿದಂತೆ ೨೦ ಸಾಧಕರಿಗೆ ಪ್ರಶಸ್ತಿಯ ಗರಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ೨೦೨೬ ನೇ ಸಾಲಿನ
ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು ಜಿಲ್ಲೆಯ ಒಟ್ಟು ೧೬ ಜನ ಪತ್ರಕರ್ತರು ಮತ್ತು ಇತರೆ ವಿಭಾಗದಿಂದ ನಾಲ್ವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಾರ್ಷಿಕ ಪ್ರಶಸ್ತಿ ಪುರಸ್ಕೃತರು
ವಿಜಯಪುರದ ಫಿರೋಜ ರೋಜಿನದಾರ (ಇಂಡಿಯನ್ ಎಕ್ಸ್ಪ್ರೆಸ್), ದಾನಪ್ಪ ಸೂರಗೊಂಡ (ಕ್ರಾಂತಿಧ್ವನಿ), ರಶ್ಮಿ ಪಾಟೀಲ (ಕನ್ನಡ ಕಹಳೆ), ಚಿದಂಬರ ಕುಲಕರ್ಣಿ (ಕರ್ನಾಟಕ ಹೆರಾಲ್ಡ್), ಸಂಜಯಕುಮಾರ ಕೊಂಡಗೂಳಿ (ಸಂಜಯ ವಾಣಿ), ಬಾಬು ತಡ್ಲಗಿ (ಇಂಡಿಯಾ ಟುಡೆ & ಆಜ್ ತಕ್), ಸಿಂದಗಿಯ ವಿವೇಕಾನಂದ ಶಾಬಾದಿ (ಪ್ರಜಾ ಪ್ರಗತಿ), ತಿಕೋಟಾದ ಡಾ.ಸಂತೋಷ ನವಲಗುಂದ (ಉದಯರಶ್ಮಿ), ಬಸವನ ಬಾಗೇವಾಡಿಯ ವಾಸುದೇವ ಮ್ಯಾಗೇರಿ (ಉದಯಕಾಲ), ಚಡಚಣದ ಸುಬ್ರಹ್ಮಣ್ಯ ಸಂಗಮ (ಉದಯವಾಣಿ), ಮುದ್ದೇಬಿಹಾಳದ ಸಿದ್ದಪ್ಪ ಚಲವಾದಿ (ವಿಜಯವಾಣಿ), ಆಲಮೇಲದ ಅಬ್ದುಗನಿ ದೇವರಮನಿ (ವಾರ್ತಾ ಭಾರತಿ), ಕಲಕೇರಿಯ ಯಲಗೂರಪ್ಪ ವಡ್ಡೊಡಗಿ (ಸಂಯುಕ್ತ ಕರ್ನಾಟಕ), ನಿಡಗುಂದಿಯ ಚಂದ್ರಶೇಖರ ಬಳ್ಳಾರಿ (ಕನ್ನಡಮ್ಮ), ಕೊಲ್ಹಾರದ ಮಲ್ಲಿಕಾರ್ಜುನ ಗಣಿ (ಸಂಯುಕ್ತ ಕರ್ನಾಟಕ), ಇಂಡಿಯ ಜಹಾಂಗೀರ ದೇಸಾಯಿ (ಸಿದ್ದವಾಣಿ) ಹೀಗೆ ಒಟ್ಟು ೧೬ ಜನ ಪತ್ರಕರ್ತರು ಆಯ್ಕೆಯಾಗಿದ್ದಾರೆ.
ಜಾಹಿರಾತು ವಿಭಾಗದಿಂದ ಕಿರಣ ಕಡಿವಾಲ (ವಿಜಯ ಕರ್ನಾಟಕ), ಶ್ರೀಧರ ಜಾಧವ (ವಿಜಯವಾಣಿ), ವಿತರಕರ ವಿಭಾಗದಿಂದ ನಿಂಗಪ್ಪ ಅವಟಿ ಹಾಗೂ ಮುದ್ರಣ ವಿಭಾಗದಿಂದ ದೇವರಹಿಪ್ಪರಗಿಯ ಸೋಮನಾಥ ನಡಗೇರಿ ಅವರನ್ನು ಹಿರಿಯ ಪತ್ರಕರ್ತರನ್ನೊಳಗೊಂಡ ಪ್ರಶಸ್ತಿ ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ.
ಪ್ರಶಸ್ತಿ ಪುರಸ್ಕೃತರಿಗೆ ಜುಲೈ ೧೯ ರವಿವಾರ ನಗರದ ಕಂದಗಲ್ ಹಣಮಂತ್ರಾಯ ರಂಗಮಂದಿರದಲ್ಲಿ ಕಾನಿಪ ಸಂಘದ ಜಿಲ್ಲಾ ಘಟಕ ಆಯೋಜಿಸಲಾದ ’ಪತ್ರಿಕಾ ದಿನಾಚರಣೆ’ ಯಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದೆಂದು ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಹಾಗೂ ರಾಜ್ಯ ಕಾರ್ಯಕಾರಿ ಸದಸ್ಯ ಪ್ರಕಾಶ ಬೆಣ್ಣೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


