Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಆಚರಿಸಲಾಯಿತು.ಈ ವೇಳೆ ಪ್ರಾಣೇಶ ಜೋಶಿ, ಕರ್ನಾಟಕ ಕೋ-ಆಫ್ ರೇಟಿವ್ ಬ್ಯಾಂಕಿನ ನಿರ್ದೇಶಕರುಗಳಾದ ಸತೀಶ ಓಸ್ವಾಲ್, ಸಂಗನಗೌಡ ಬಿರಾದಾರ, ರಕ್ಷಿತಾ ಬಿದಿರಕುಂದಿ, ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ, ಡಾ. ಎಸ್.ಬಿ.ವಡವಡಗಿ, ಪ್ರಭು ಎಸ್.ಕಡಿ, ಮಾಣಿಕಚಂದ ದಂಡಾವತಿ, ಸುಭಾಸ ಬಿದಿರಕುಂದಿ, ಪರಶುರಾಮ ಪವಾರ, ಬಸವರಾಜ ನಾಲತವಾಡ, ಜಿ.ಜೆ ಪಾದಗಟ್ಟಿ ಸೇರಿದಂತೆ ಹಲವರು ಇದ್ದರು
ಪುರಸಭೆ ಹಾಗೂ ಗ್ರಾ.ಪಂ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಸೂಚನೆ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದಲ್ಲಿ ಫ್ಲೆಕ್ಸ್ಗಳ ಬಳಕೆ ತಡೆಗಟ್ಟುವಿಕೆ, ಸ್ವಚ್ಛತೆ, ಸೌಂದರ್ಯೀಕರ ಹೆಚ್ಚಿಸುವಿಕೆ ತಾಲೂಕಿನ ಎಲ್ಲ ಗ್ರಾಮಗಳ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಿಪಡಿಸುವದು ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಗಮನ ಹರೆಸಬೇಕು ಎಂದು ಪುರಸಭೆ ಹಾಗೂ ಗ್ರಾ.ಪಂ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಸೂಚಿಸಿದರು.ಪಟ್ಟಣದ ಎಪಿಎಂಸಿಯಲ್ಲಿರುವ ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ಸಭಾಭವನದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಪಟ್ಟಣದಲ್ಲಿ ಅತಿಯಾದ ಫ್ಲೆಕ್ಸ್ಗಳ ಬಳಕೆಯಾಗಿದ್ದು ಈ ರೀತಿಯಾಗದಂತೆ ಹೈಕೋರ್ಟ್ ನಿರ್ದೇಶನ ನೀಡಿದ್ದರೂ ಯಾವುದೇ ಕ್ರಮವನ್ನೇಕೆ ವಹಿಸಿಲ್ಲ ಎಂದು ಇಲ್ಲಿನ ಪುರಸಭೆ ಮುಖ್ಯಾಧಿಕಾರಿಗೆ ತೀರ್ವ ತರಾಟೆಗೆ ತೆಗೆದುಕೊಂಡರು. ಶಾಲಾ ಕಟ್ಟಡಗಳು ಸೋರುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರುವ ಬಗ್ಗೆ ವಿವರಗಳನ್ನು ಸಲ್ಲಿಸುವಂತೆ ಬಿಇಓ ಅವರಿಗೆ, ತಾಲೂಕಿನ ಎಲ್ಲೆಡೆ ಕಸ ವಿಲೇವಾರಿ, ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ದೂರುಗಳ ಬಗ್ಗೆ, ಉತಾರಾ, ಖಾತಾ, ಬದಲಾವಣೆ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ (೧೪ ವಯೋಮಾನದೊಳಗಿನ ಬಾಲಕಿಯರ) ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದು ರಜತ ಪದಕ ಪಡೆದಿದ್ದಾರೆ.ರೋಚಕ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ನಾಲ್ಕು ಅಂಕಗಳ ಅಂತರದಲ್ಲಿ ಮಹಾರಾಷ್ಟ್ರ ತಂಡದ ಎದುರು ಸೋತಿತು. ರಜತ ಪದಕದೊಂದಿಗೆ ಟ್ರೋಫಿ ಪಡೆದರು.ಕರ್ನಾಟಕ ತಂಡದಲ್ಲಿ ಐವರು ಬಾಲಕಿಯರು ಸಮೀಪದ ಬೇನಾಳ ಆರ್.ಎಸ್. ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು, ಒಬ್ಬಾಕೆ ಸಮೀಪದ ಯಲಗೂರ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಇದ್ದಾರೆ.ಕರ್ನಾಟಕ ತಂಡದಲ್ಲಿನ ನಿಸರ್ಗಾ ಸಿದ್ದರಾಜು ರಾಷ್ಟ್ರ ಮಟ್ಟದ ಬೆಸ್ಟ್ ದಾಳಿಗಾರ್ತಿ (ಅಟ್ಯಾಕರ್ ) ಪ್ರಶಸ್ತಿ ಬಾಚಿಕೊಂಡಿದ್ದಾರೆ.ಇಲ್ಲಿಯವರೆಗೂ ವಿಜಯಪುರ ಜಿಲ್ಲೆಯ ಯಾವೊಬ್ಬ ಕ್ರೀಡಾಪಟು ರಾಷ್ಟ್ರ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ರಜತ ಪದಕ ಪಡೆದಿಲ್ಲ. ನಾನು ತರಬೇತಿಗೊಳಿಸಿದ ವಿದ್ಯಾರ್ಥಿನಿಯರು ಪಡೆದದ್ದು ನನಗೆ ಹೆಮ್ಮೆಯ ವಿಷಯ ಎಂದು ಬೇನಾಳ ಆರ್.ಎಸ್. ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎನ್.ಬಿ.ದಾಸರ ಹೇಳಿದರು.ಜಿಲ್ಲೆಯ ಬೇನಾಳ, ಮಣಗೂರು, ಮಸೂತಿ ಸೇರಿದಂತೆ ನಾನಾ ಶಾಲೆಗಳ…
ಲೇಖನ- ನಾಗಮಣಿ ಕುಮಾರಬೆಂಗಳೂರು ಉದಯರಶ್ಮಿ ದಿನಪತ್ರಿಕೆ ನಾನು ಮೊನ್ನೆ ಶಿವಮೊಗ್ಗಕ್ಕೆ ಹೋದಾಗ ದೂರದ ಪರಿಚಿತರೂ ಹಿರಿಯ ಮಹಿಳೆ ಒಬ್ಬರು ಸಿಕ್ಕರು, ಹಿಂದೆ ಪಾಪ ಬಹಳ ಕಷ್ಟ ಪಟ್ಟಿದ್ದರು, ಈಗ ಮಕ್ಕಳ ಕಾಲಕ್ಕೆ ಚೆನ್ನಾಗಿದ್ದಾರೆ ನೋಡಿ ಖುಷಿಯಾಯಿತು.ಅವರು ಹೇಳಿದ್ದು ಹೀಗೆಈಗ ಚೆನ್ನಾಗಿದ್ದೇವೆ. ಹಿಂದೆ ಒಂದು ಕಾಲದಲ್ಲಿ ಬಹಳ ಕಷ್ಟಪಟ್ಟೆವು ಈಗ ಮಕ್ಕಳ ವಿದ್ಯಾಭ್ಯಾಸ ಎಲ್ಲ ಚೆನ್ನಾಗಿ ಆಗಿದೆ, ಅವರೆಲ್ಲಾ ತಮ್ಮ ಪಾಡಿಗೆ ತಾವು ಚೆನ್ನಾಗಿದ್ದಾರೆ, ಹೊಟ್ಟೆ ಬಟ್ಟೆಗೆ ತೊಂದರೆ ಇಲ್ಲ, ಎಲ್ಲಾ ದೇವರ ದಯೆ ಎಂದು ಕೈ ಮುಗಿದರು. ಅದಕ್ಕೆ ನಾನು ಸರಿಯಮ್ಮ ಹಿಂದೆ ಬಹಳ ಕಷ್ಟ ಪಟ್ಟಿದ್ರಿ ಈಗೆಲ್ಲಾ ಚೆನ್ನಾಗಿದ್ದೀರಲ್ಲ ಅಷ್ಟೇ ಸಾಕು ಬಿಡಿ ಅಂದೆ.ಅದಕ್ಕೆ ಅವರು ನಿಮ್ಮಂತೆ ಎಲ್ಲರೂ ಖುಷಿ ಪಡಲ್ಲಮ ತುಂಬಾ ಹಂಗಿಸಿ ಮಾತಾಡುತ್ತಾರೆ. ಹಿಂದೆ ಹೇಗಿದ್ರೂ ಈಗ ನೋಡು ಹೇಗೆ ಆಡ್ತಾರೆ. ಅಲ್ಪಂಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿನಲ್ಲಿ ಕೊಡೆ ಹಿಡಿದಂಗೆ ಅಂತ ಮಾತಾಡ್ತಾರೆ.ಯಾಕಮ್ಮ ಕಷ್ಟ ಪಡೋರ್ ಕಷ್ಟ ಪಡುತ್ತಾನೆ ಇರಬೇಕಾ…? ಅವರು ದುಡಿದು ಸಂಪಾದನೆ ಮಾಡಿ…
ರಚನೆನಂದಿನಿ ಧರ್ಮರಾಜ್ ಉದಯರಶ್ಮಿ ದಿನಪತ್ರಿಕೆ ಆಲಿಸಿ, ಪಾಲಿಸೆನ್ನ ಮಗುವೆ ಎನ್ನದೊಂದು ವಿನಂತಿ,ನಿನ್ನ ಬಾಳ ನಗುವಿಗಾಗಿ ಮಾಡಬೇಕು ಈ ಸ್ತುತಿ, ಲೋಕದ ಗೊಡವೆಗಳಿಗೆ ಹಾಕಿಕೋ ಪರಿಮಿತಿ,ಲೋಲುಪತೆಯ ದಾರಿಯ ಮುಚ್ಚುವ ಛಾತಿ, ವಿದ್ಯೆಗೆ ವಿನಯದಿಂದ ಭೂಷಣದ ಪ್ರತೀತಿ,ನಡೆನುಡಿಯಲ್ಲಿ ಆವರಿಸಿದರೆ ನಿನಗೆ ನೀನೆ ಉನ್ನತಿ. ನಿನ್ನಯ ಗೆಲುವಿಗೆ ನೀನೇ ಸಾರಥಿ,ಆಗು ನೀ ಸರ್ವರಿಗೂ ಪ್ರೀತಿಯಿಂದ ಅಧಿಪತಿ. ಸದ್ವಿಚಾರಗಳ ಹರಿದು ಬರುವ ಮಾಹಿತಿ,ಹಂಚಬೇಕು ಪರಂಪರೆ ಸಂಸ್ಕೃತಿಯ ಜಾಗೃತಿ, ಬೆಳಕಿನೆಡೆಗೆ ತೆರೆದಾಗ ಕತ್ತಲೆಯ ಅವನತಿ,ಬಾನಂಗಳ ತಾರೆ ನೀ ಹೃದಯದಾ ಒಡತಿ.
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ, ಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಮುಂಜಾನೆಯ ಸಮಯ ಮಕ್ಕಳನ್ನು ಶಾಲೆಗೆ ಕಳಿಸುವ ಗಡಿಬಿಡಿಯಲ್ಲಿರುವ ಪತ್ನಿಗೆ ಪತಿ ಕೂಗಿದ್ದು ಕೇಳಿಸುವುದಿಲ್ಲ. ಇದು ಆತನ ಕೋಪಕ್ಕೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಪರಸ್ಪರ ಆರೋಪ ಹೊರಿಸುತ್ತಾ ಅವರಿಬ್ಬರೂ ಜಗಳ ಮಾಡುತ್ತಾರೆ. ಸಿಟ್ಟಿನಲ್ಲಿ ಸ್ನಾನ ಮಾಡದೆ ಬಟ್ಟೆ ಧರಿಸಿ ಹೊರ ಹೋಗುವ ಆತ, ಅಳುತ್ತಾ ಬೆಡ್ ರೂಮಿಗೆ ಹೋಗಿ ಬಾಗಿಲು ಹಾಕಿಕೊಳ್ಳುವ ಆಕೆ ಏನು ಮಾಡಬೇಕೆಂದು ತೋಚದೆ ಸುಮ್ಮನೆ ಕುಳಿತುಕೊಳ್ಳುವ ಮಕ್ಕಳು… ಇದು ಆಗಾಗ ಬಹುತೇಕ ಮನೆಗಳಲ್ಲಿ ಕಾಣುವ ದೃಶ್ಯ.ದಾರಿಯಲ್ಲಿ ಹೋಗುವಾಗ ಅಕಸ್ಮಾತಾಗಿ ತನ್ನ ಬೈಕಿಗೆಎದುರಾಗಿ ರಾಂಗ್ ಸೈಡ್ ನಲ್ಲಿ ಬಂದ ವ್ಯಕ್ತಿ ಸ್ವಲ್ಪದರಲ್ಲಿಯೇ ಅನಾಹುತವಾಗುವುದನ್ನು ತಪ್ಪಿಸಲು ಪ್ರಯತ್ನಿಸಿ ಪರಸ್ಪರ ದೋಷಾರೋಪಣೆ ಮಾಡುತ್ತಪರಿಸ್ಥಿತಿಗೆ ವಿಕೋಪಕ್ಕೆ ಹೋಗುವುದು. ಯಾವುದೋ ಒಂದು ಪಾರ್ಟಿಯಲ್ಲಿ ಕುಳಿತು ಬೇರೆಯವರ ಬಗ್ಗೆ ಹೀನಾಯವಾಗಿ ಮಾತನಾಡಿ ಅವರ ಚಾರಿತ್ರ್ಯ ವಧೆ ಮಾಡುವುದು.ಮೇಲಿನ ಎಲ್ಲ ಘಟನೆಗಳಿಗೆ ಕಾರಣವಾಗುವುದು ಒಂದು ಆಕಸ್ಮಿಕ ನಡೆ ಮತ್ತು ಅದಕ್ಕೆ ನಾವು…
ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆ: ಒಬ್ಬ ಸರ್ಕಾರಿ ನೌಕರನ ಯಶಸ್ಸು ಆತನ ನಗುವಿನಲ್ಲಿದೆ. ನೌಕರ ನಗುತ್ತಾ ನಗುತ್ತಾ ಕಚೇರಿ ಕಾರ್ಯವನ್ನು ಪ್ರಾರಂಭಿಸಿದರೆ ಇಡೀ ದಿನದ ಕಾರ್ಯ ಸಂತಸದಿಂದ ಮುಗಿಯುತ್ತದೆ ಎಂದು ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿಯ ಮುಖ್ಯಸ್ಥ ಎನ್. ಎಂ. ಬಿರಾದಾರ ಹೇಳಿದರು.ಬಾಗಲಕೋಟೆಯಲ್ಲಿ, ಖಜಾನೆ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಗಾರ ಹಾಗೂ ವಿವಿಧ ಸಿಬ್ಬಂದಿಗಳ ಸತ್ಕಾರ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಾಗಾರವನ್ನು ಪ್ರಾರಂಭಿಸಿದ ಖ್ಯಾತ ಉಪನ್ಯಾಸಕ ಎಸ್. ಎಚ್. ಸಾಗರವರು, ಒತ್ತಡದ ಬದುಕಿನಲ್ಲಿ ಕಾರ್ಯ ನಿರ್ವಹಣೆ ಮಾಡುವದು ಹೇಗೆ? ಎಂಬುದರ ಬಗ್ಗೆ ಸವಿಸ್ತಾರವಾಗಿ ಮಾತನಾಡುತ್ತಾ ಅನೇಕ ಉದಾಹರಣೆಗಳನ್ನು ನೀಡಿ ಕಾರ್ಯಾಗಾರದಲ್ಲಿ ಭಾಗಿಯಾದವರಿಗೆ ಮನವರಿಕೆ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಎಸ್. ಬಿ. ಕುಂಬಾರ, ಮುಖ್ಯ ಅತಿಥಿಗಳಾಗಿ ಸಿದ್ದರಾಮೇಶ್ವರ ಉಕ್ಕಲಿ, ಎಸ್. ವಾಯ್. ಚಿಕ್ಕನಗೌಡರ, ಉಪಸ್ಥಿತಿಯಲ್ಲಿ ಶಿವನಗೌಡ ಎಸ್ ಬಿರಾದಾರ ಮತ್ತು ಜಿಲ್ಲೆಯ ಸಮಸ್ತ ಖಜಾನೆ ಇಲಾಖೆಯ ಅಧಿಕಾರಿ ಸಿಬ್ಬಂಧಿಗಳು, ಸಂಘದ ಪಧಾಧಿಕಾರಿಗಳು, ಅನ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.ಶ್ರೀಶೈಲ ಕುಳ್ಳಲ್ಲಿ, ವಾಸುದೇವ ಹೂವನ್ನವರ ಕಾರ್ಯಕ್ರಮವನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ‘ಅಹಂಕಾರ ಬಿಟ್ಟಾಗ ಅತ್ಮ ಸಾಕ್ಷಾತ್ಕಾರ ವಾಗಲಿದೆ’ ಎಂದು ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಹಾಗೂ ಕಲಾವಿದರ ಸಂಘದ ಅಧ್ಯಕ್ಷ ದೊಡ್ಡಣ್ಣ ಹೇಳಿದರು.ಜಿಲ್ಲೆಯ ಚಡಚಣ ತಾಲ್ಲೂಕಿನ ಭಾವೈಕ್ಯತೆಯ ತಾಣ ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಶುಕ್ರವಾರ ಭೇಟಿ ನೀಡಿ, ನಂತರ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.’ಮೊಬೈಲ್ ಇದನ್ನ ಯಾವನೋ ಕಂಡು ಹಿಡಿದ್ದಾನೋ ಏನೋ, (ಮೊಬೈಲ್) ಇದು ಬಂದು ಈಗಿನ ಮಕ್ಕಳು ಓದುವುದನ್ನು ಬಿಡಿಸಿದೆ. ಈಗಲೂ ನನ್ನ ಮನೆಯಲ್ಲಿ ಅಪಾರ ಪುಸ್ತಕಗಳು ಇವೆ. ಈಗಲೂ ನಾವಿಬ್ಬರೂ ಪುಸ್ತಕ ಓದುತ್ತೇವೆ. ಆದರೆ ಮುಂದೊಮ್ಮೆ ನಮ್ಮಲ್ಲೇ ಪುಸ್ತಕ ಓದುವ ವ್ಯಕ್ತಿ ಬರಬಹುದು. ದೇವರು ಎಲ್ಲಿಯು ಹೋಗಿಲ್ಲ ಇಲ್ಲಿಯೇ ನಮ್ಮ ನಿಮ್ಮಲ್ಲೇ ಇದ್ದಾನೆ’ ಎಂದವರು ಈಗಲೂ ಕೂಡಾ ನಾನು ನನ್ನ ಪತ್ನಿ ಮನೆ, ಮಠಗಳಲ್ಲಿ ಕಸಗೂಡಿಸುತ್ತೇವೆ ಎಂದು ಹೇಳಿದರು.ಶ್ರೀಮಠದಲ್ಲಿ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿರವರು ಕಾರ್ಯ ಕೈಗೊಂಡ ಸಾಮಾಜಿಕ ಕ್ರಾಂತಿಯ ಕಾರ್ಯಗಳನ್ನು ಕಾರ್ಯ ರೂಪಕ್ಕೆ ತಂದಿದ್ದು ತುಂಬಾ ಶ್ಲಾಘನೀಯ ಎಂದು ಶ್ರೀಮಠದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ವಲಯದ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ವೀರಭದ್ರಪ್ಪ, ಗೌರವಾಧ್ಯಕ್ಷರಾಗಿ ಎಸ್. ಎನ್. ಪಡಶೆಟ್ಟಿ ಉಪಾಧ್ಯಕ್ಷರಾಗಿ ಬಶೀರಅಹ್ಮದ ನದಾಫ, ಕೋಶಾಧ್ಯಕ್ಷರಾಗಿ ಬಸವರಾಜ ಗಿರಿನಿವಾಸ ಇವರನ್ನು ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ ಶಡಶ್ಯಾಳ ಖಜಾಂಚಿ ಜುಬೇರ ಕೆರೂರ ಇವರುಗಳ ಹಿರಿತನದಲ್ಲಿ ನಗರ ವಲಯದ ಶಿಕ್ಷಕರ ಸಂಘದ ಸಂಘಟನಾ ಹಿತದೃಷ್ಟಿಯಿಂದ ನಗರ ಘಟಕವನ್ನು ಎಲ್ಲ ಪದಾಧಿಕಾರಿಗಳು ಹಾಗೂ ಹಿರಿಯ ಶಿಕ್ಷಕರ ಸಮ್ಮುಖದಲ್ಲಿ ಪುನಾರಚನೆ ಮಾಡಲಾಯಿತು.ನಿಕಟಪೂರ್ವ ಅಧ್ಯಕ್ಷ ಎಸ್. ಎನ್.ಪಡಶೆಟ್ಟಿ ಅವರು ಸಂಘದ ದಾಖಲೆಗಳನ್ನು ನೂತನ ಅಧ್ಯಕ್ಷ ವೀರಭದ್ರಪ್ಪ ಅವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷಿಣಿ ಎಸ್. ಎಸ್. ಪಾಟೀಲ, ಎನ್. ಎನ್. ಗಳವೆ ಜ್ಯೋತಿ ಹಿಪ್ಪರಗಿ, ಜಾವಿದ ಗರಡಿಮನಿ, ಕಾರ್ಯದರ್ಶಿ ಅಜೀಜ ಅರಳಿಮಟ್ಟಿ, ಶಕುಂತಲಾ ಹಿರೇಮಠ, ಮಂಜುನಾಥ ಆರೇಶಂಕರ, ನಗರ ವಲಯದ ಹಿರಿಯ ಮುಖ್ಯಗುರುಗಳು ಹಾಗೂ ಶಿಕ್ಷಕರು ಹಾಜರಿದ್ದು ನೂತನ ಅಧ್ಯಕ್ಷರಿಗೆ ಮತ್ತು ನೂತನವಾಗಿ ಜಿ. ಓ. ಸಿ. ಸಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಸಯ್ಯದ್ ಜುಬೇರ ಕೆರೂರ ಅವರನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣ ವಲಯ ವಿಜಯಪುರ ಹಾಗೂ ಶ್ರೀ ಶಾಂತವೀರ ಪ್ರೌಢ ಶಾಲೆ ಬಬಲೇಶ್ವರ ಇವರ ಸಹ ಯೋಗದಲ್ಲಿ ಟಾರ್ಗೆಟ್ 625 ವಿನೂತನ ಕಾರ್ಯಕ್ರಮದಲ್ಲಿ ಇಡಿ ರಾಜ್ಯದಲ್ಲಿಯೇ ಅತೀ ಹೆಚ್ಚು ಮಕ್ಕಳು 625 ಕ್ಕೆ 625 ಅಂಕಗಳನ್ನು ಪಡೆಯುವವರ ಸಂಖ್ಯೆ ನಮ್ಮ ವಿಜಯಪುರ ಗ್ರಾಮೀಣ ವಲಯದಿಂದ ಪಡೆಯುವಂತಾಗಲು ಈ ಕಾರ್ಯಾಗಾರ ಬಹಳಷ್ಟು ಸಹಕಾರಿಯಾಗಿದೆ, ತಾಲೂಕಿನ ಎಲ್ಲ 21 ಪರೀಕ್ಷೆ ಕೇಂದ್ರದದಲ್ಲಿ ಆಯಾ ಪ್ರೌಢ ಶಾಲೆಯ ಆಯ್ದ ಮಕ್ಕಳನ್ನು ಕರೆಸಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಸರಳ ವಿಧಾನದ ಮೂಲಕ 625 ಕ್ಕೆ 625 ಅಂಕ ಪಡೆಯುವಂತೆ ಉಪಯುಕ್ತವಾಗಿದೆ, ಈ ತಿಂಗಳ ಕೊನೆಗೆ ನುರಿತ ಸಂಪಂನ್ಮೂಲ ವ್ಯಕ್ತಿಗಳಿಂದ ಪ್ರಶ್ನೆ ಪತ್ರಿಕೆ ತಯಾರಿಸಿ ಈ ಮಕ್ಕಳಿಗೆ ಒಂದು ಪರೀಕ್ಷೆ ನಡೆಸಿ ಇದರಲ್ಲಿ ಅತೀ ಹೆಚ್ಚು ಅಂಕ ಪಡೆಯುವ ಮಕ್ಕಳಿಗೆ ಮುಂದಿನ ಪೆಬ್ರುವರಿ ತಿಂಗಳಿಂದ ರಾಜ್ಯ ಸಂಪಂನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಿ ಜಿಲ್ಲೆಯಲ್ಲಿಯೇ625 ಕ್ಕೆ 625 ಅಂಕ ಪಡೆಯುವವರ ಸಂಖ್ಯೆ…
