Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ವಾರ್ಷಿಕ ವಿಶೇಷ ಪ್ರಶಸ್ತಿಗೆ ನಗರದ ಹಿರಿಯ ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಪುರಸ್ಕೃತರಾಗಿದ್ದಾರೆ.ತೆಂಕಣ ಗಾಳಿ ಪತ್ರಿಕೆಯ ಸಂಪಾದಕರಾಗಿ ಕಳೆದ ಹಲವು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ, ಕೆಯುಡಬ್ಲ್ಯೂಜೆ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಅವರಿಗೆ ವಿಶೇಷ ಪ್ರಶಸ್ತಿ ಘೋಷಿಸಿದೆ.ತುಮಕೂರಿನಲ್ಲಿ ಜ.೧೮ ಮತ್ತು ೧೯ ರಂದು ನಡೆಯಲಿರುವ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಕೆಯುಡಬ್ಲ್ಯೂಜೆ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಇರುವೆ ಎಂಬತ್ತು ಕೋಟಿ ಜೀವರಾಶಿಗಳಲ್ಲಿ ಮಾನವ ಜನ್ಮ ಬಲು ದೊಡ್ಡದು, ಅರಿತು ನಡೆಯದಿದ್ದರೆ, ಅರವತ್ತು ಸಾವಿರ ವರ್ಷಗಳ ಕಾಲ ಕ್ರಿಮಿಕೀಟಗಳಾಗಿ ಜನಿಸುತ್ತವೆ ಎಂದು ಸಿಂಗನಹಳ್ಳಿ ರಾಮಲಿಂಗೇಶ್ವರ ಮಠದ ಪ್ರಣವಲಿಂಗ ಸ್ವಾಮಿಗಳು ಹೇಳಿದರುಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಸೋಮವಾರ ಸಂಜೆ ಜರುಗಿದ ಶಿವಾನುಭವ ಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಚನ್ನಬಸವ ಶಿವಾಚಾರ್ಯರು ಹಿರೇಮಠ ಸಂಸ್ಥಾನದಲ್ಲಿ ಆರಂಭಿಸಿದ ಅರಿವಿನ ಅಮೃತಧಾರೆ ಜನರನ್ನು ಜಾಗೃತಗೊಳಿಸಿ, ಜಗದೊಡೆಯನ ಸಾಮಿಪ್ಯ ಕರುಣಿಸಿ, ಸದ್ಭಕರನ್ನು ಕೈಹಿಡಿದು ಮುನ್ನಡೆಸುವ ಮಹಾ ಬೆಳಕು, ಗುರು ಹಿರಿಯರನ್ನು ಗೌರವಿಸುವ ಪರಂಪರೆ ನಮ್ಮದಾಗಬೇಕು ಎಂದವರು, ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಎನ್ನುತ್ತಾ ತಂದೆ ತಾಯಂದಿರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಸಹಬಾಳ್ವೆ ಸಮನ್ವಯತೆ, ಪಾಠ ಹೇಳಿ ಕೊಡಲಿ ಎಂದರು.ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಚನ್ನಬಸವ ಶಿವಾಚಾರ್ಯರು ಶ್ರೀಮಠದಲ್ಲಿ ಪ್ರತಿ ತಿಂಗಳು ಜರುಗುವ ಹುಣ್ಣಿಮೆಯ ಶಿವಾನುಭವ ಸದ್ಭಕ್ತರ ಬಾಳಲಿ ಬರುವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಮಹಾರಾಣಾ ಪ್ರತಾಪ್ ಸಿಂಗ್ ಮಾರ್ಗದ ರಸ್ತೆ ಅಭಿವೃದ್ಧಿ ಅಭಿವೃದ್ಧಿಪಡಿಸಿ ಅಳವಡಿಸಲಾದ ಬೀದಿ ದೀಪಗಳನ್ನು ಬೆಳಗಿಸುವ ಮೂಲಕ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಈಚೆಗೆ ಉದ್ಘಾಟಿಸಿದರು.ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಮಲ್ಲಿಕಾರ್ಜುನ ಗಡಗಿ, ಮುಖಂಡರಾದ ಪಾಂಡುಸಾಹುಕಾರ ದೊಡ್ಡಮನಿ, ಚಂದ್ರು ಚೌದರಿ ಸೇರಿದಂತೆ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ನಾನು ಸನ್ಯಾಸಿ ಆಗಬೇಕು, ನಾನು ಈ ಭಾರತದಲ್ಲಿ ಕ್ರಾಂತಿಕಾರಿಯಾಗಬೇಕು, ಭಾರತಕ್ಕಾಗಿ ನಾನು ಏನಾದರು ಮಾಡಬೇಕು. ಸಮಸ್ತ ಭಾರತವನ್ನು ಜಗತ್ತಿನ ಎದುರಿಗೆ ತೋರಿಸಬೇಕು ಎಂಬ ಆಸೆಯನ್ನು ಹೊತ್ತು ಸನ್ಯಾಸಿ ಆಗಲು ಹೋದವನನ್ನು ನೀನು ಸನ್ಯಾಸಿ ಆಗಬೇಡ ಬ್ರಿಟಿಷರ ಹುಟ್ಟಡಗಿಸುವ ಹೋರಾಟಗಾರನಗಬೇಕು ದಾರಿತಪ್ಪಿದ ಭಾರತದ ಯುವಕರಿಗೆ ದಾರಿದೀಪವಾಗಬೇಕು. ದೆಶದ ಒಳಗಡೆ ಸಂಘಟನೆ ಮಾಡುವದಕಿಂತ ದೇಶದ ಹೋರಗಡೆ ಸಂಘಟನೆ ಮಾಡಿ ಶತ್ರು ರಾಷ್ಟ್ರಗಳಿಗೆ ಹೋಗಿ ಅಲ್ಲಿ ಸಂಘಟನೆಮಾಡಿ ಸೈನ್ಯವನ್ನು ಕಟ್ಟಿ ಭಾರತಕ್ಕೆ ಬಂದು ಬ್ರೀಟಿಷ ಅಧಿಕಾರವನ್ನ ಹೋಡೆದೊಡಿಸಿ ಶಾಂತಿಯಿಂದ ಸ್ವಾತಂತ್ರ್ಯ ಇಲ್ಲಾ ಕ್ರಾಂತಿಯಿಂದ ಸ್ವಾತಂತ್ರ್ಯ ನಾನು ತೋರಿಸುತ್ತೆನೆ ಎಂದು ಜೈ ಹಿಂದ ಘೋಷಣೆ ಕೂಗಿದ ಅಖಂಡ ಭಾರತದ ಮೊಟ್ಟ ಮೊದಲ ಪ್ರಧಾನ ಮಂತ್ರಿ ನೇತಾಜಿ ಸುಭಾಷಚಂದ್ರ ಭೋಸರಿಗೆ ಆದರ್ಶ ಪ್ರಾಯರಾದವರು ಸ್ವಾಮಿ ವಿವೇಕಾನಂದರು ಎಂದು ಉಪನ್ಯಾಸಕಿ ಅಕ್ಷಯ ಗೋಖಲೆ ಹೇಳಿದರು.ಇವರು ಪಟ್ಟಣದಲ್ಲಿ ನಡೆದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಯುವಕ ಸಂಘ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ೧೬೨ನೇ ಜಂಯತೋತ್ಸವದ ಅಂಗವಾಗಿ ಉಪನ್ಯಾಸ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ರಕ್ತದಾನದಿಂದ ರಕ್ತದೊತ್ತಡ, ಮಧು ಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜತೆಗೆ ಆತ್ಮತೃಪ್ತಿ ಸಿಗುತ್ತದೆ ಎಂದು ಡಾ.ಶ್ರೀಶೈಲ ಪಾಟೀಲ (ಹೂವಿನಹಳ್ಳಿ) ಹೇಳಿದರು.ಪಟ್ಟಣದ ಪಟ್ಟಣ ಪಂಚಾಯತ ಆವರಣದಲ್ಲಿ ಶ್ರೀ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಯುವಕರ ಸೇವಾ ಸಂಘ ಆಲಮೇಲ ಇವರು ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 162ನೇ ಜಯಂತೋತ್ಸವದ ಅಂಗವಾಗಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪೂರ, ಅನುಗ್ರಹ ವ್ಹಿಜನ್ ಫೌಂಡೇಶನ್ ಟ್ರಸ್ಟ್ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಹಾಗೂ ಶ್ರೀ ಸಿದ್ಧೇಶ್ವರ ಬ್ಲಡ್ ಬ್ಯಾಂಕ್ ವಿಜಯಪೂರ ಇವರ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸಾ ಮತ್ತು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.ದಲಿತ ಯುವ ಮುಖಂಡ ಹರೀಶ ಎಂಟಮಾನ ಮಾತನಾಡಿ, ರಕ್ತದಾನ ಮಹಾದಾನ ಯುವ ತರುಣರೇ ತುಂಬಿರುವಂತಹ ಭಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗ ಬೇಕಾದರೆ ರಕ್ತದಾನ ಮಾಡಬೇಕು, ನಮ್ಮ ಒಂದೊಂದು ಹನಿರಕ್ತವು ಒಂದೊಂದು ಜೀವವನ್ನು ಬದುಕಿಸುತ್ತದೆ, ಇದರಿಂದ ಆರೋಗ್ಯವಂತ ಭಾರತ ನಿರ್ಮಾಣವಾಗುತ್ತದೆ ಎಂದರು.ಈ ಶಿಬಿರದಲ್ಲಿ 46 ಜನ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ತಾರಾಪೂರ ಗ್ರಾಮದಲ್ಲಿ ಸಮಸ್ತ ಭೋವಿ ಸಮಾಜದ ವತಿಯಿಂದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ 853 ನೇ ಜಯಂತೋತ್ಸವ ಆಚರಣೆ ಮಾಡಲಾಯಿತು.ಕಾರ್ಯಕ್ರಮವು ಗಾನಯೋಗಿ ಪಂಡಿತ ಪುಟ್ಟರಾಜರ ಗವಾಯಿಗಳ ಶಿಷ್ಯರಾದ ಶ್ರೀ ವೇದಮೂರ್ತಿ ಸಿದ್ದರಾಮಯ್ಯ ಶಾಸ್ತ್ರಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.ನೇತೃತ್ವ ಶ್ರೀ ವೇದಮೂರ್ತಿ ರೇವಣಸಿದ್ದಯ್ಯ ಹಿರೇಮಠ, ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಜೋಗುರ ಕೆಪಿಆರ್ ಶುಗರ್ ನಿರ್ದೇಶಕರು ಬಸಲಿಂಗಪ್ಪ ಕತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಡಣಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು ಫೋಟೋ ಪೂಜೆ ಸಾಬಗೌಡ ಭೋಗೊಂಡಿ ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಹರೀಶ್ ಯಂಟಮನ ಆಣವೀರ ಕತ್ತಿ ಭೋಗೇಶ ಮನಗೂಳಿ ಸುರೇಶ್ ಪೂಜಾರ್ ಸಂತೋಷ್ ಕ್ಷತ್ರಿ ಖಾಜಪ್ಪ ಜಮಾದಾರ ಬಸವರಾಜ್ ನಂದೂರ ಗ್ಯಾರೆಂಟಿ ಯೋಜನೆ ಸದಸ್ಯರು ಹಾಗೂ ಸಮಸ್ತ ಗ್ರಾಮಸ್ಥರು ಹಾಗೂ ಭೋವಿ ಸಮಾಜದ ಮುಖಂಡರು ಭಾಗಿಯಾದರು.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ಸುಕ್ಷೇತ್ರ ತಾರಾಪೂರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಮಕರ ಸಂಕ್ರಾಂತಿಯ ನಿಮಿತ್ಯವಾಗಿ ಶ್ರೀ ತಾರಕೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.ದೇವರಿಗೆ ಮಹಾ ರುದ್ರಾಅಭಿಷೇಕ, ಬಿಲ್ವಾರ್ಚನೆ, ಮಂಗಳಾರುತಿ, ಅಷ್ಟೋತ್ತರ ಶತನಾಮಾವಳಿ ಜರುಗಿತು .ನಂತರ ಮಹಾಪ್ರಸಾದ ವಿತರಣೆಯಲ್ಲಿ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿದರು.ಪಲ್ಲಕ್ಕಿ ಉತ್ಸವವು ಡೊಳ್ಳು, ಚಿಟ್ಟಹಲಿಗೆ, ಪಟಾಕಿಗಳನ್ನು ಸಿಡಿಸುತ್ತಾ ಭೀಮಾ ನದಿಯಲ್ಲಿ ಮುಳುಗಿ ಪುಣ್ಯ ಸ್ಥಾನವನ್ನು ಮಾಡಿ ಹಾಗೂ ಕುಂಭ ಕಳಸದೊಡನೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮೇಲಿನ ಗುಡಿಗೆ ಬಂದು ತಲುಪಿತು.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಪಥ ಬದಲಿಸುತ್ತಾನೆ. ಆದ್ದರಿಂದ, ಮಕರ ಸಂಕ್ರಾಂತಿಯನ್ನು ಉತ್ತರಾಯಣ ಸಂಕ್ರಮಣ ಎಂದೂ ಕರೆಯುತ್ತೇವೆ. ಮಕರ ಸಂಕ್ರಾಂತಿಯಂದು ದೇಗುಲಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಸಂಕ್ರಾಂತಿ ರೈತವರ್ಗದ ಜನರ ಹಬ್ಬ. ತಾವು ಬೆಳೆದ ದವಸ, ಧಾನ್ಯಗಳನ್ನು ಪೂಜಿಸುವ ಹಬ್ಬ. ಸಂಕ್ರಾಂತಿ, ಹೊಸ ಬೆಳೆಗಳು ಬೆಳೆದು ರೈತಾಪಿ ವರ್ಗಕ್ಕೆ ಸಿಗುವ ಕಾಲವಾಗಿದೆ ಎಂದು ಶ್ರೀಪದ್ಮರಾಜ ಮಹಿಳಾ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕ ಗಿರೀಶ ಎಸ್.ಕುಲಕರ್ಣಿ ಹೇಳಿದರು.ಸಿಂದಗಿ ಪಟ್ಟಣದ ಸಾರಂಗಮಠದ ಆವರಣದಲ್ಲಿ ಪೂಜ್ಯ ಶ್ರೀಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಸಾರಂಗಮಠ-ಗಚ್ಚಿನಮಠದ ವತಿಯಿಂದ ಹಮ್ಮಿಕೊಂಡ ೩೩೮ನೆಯ ಸದ್ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಕರ ಸಂಕ್ರಾಂತಿ ಹಬ್ಬದ ಮಹತ್ವವನ್ನು ಕುರಿತಾಗಿ ಮಾತನಾಡಿದ ಅವರು, ಮಕರ ಸಂಕ್ರಾಂತಿಯ ದಿನ ಪವಿತ್ರ ಸ್ನಾನಕ್ಕೆ ಬಹಳ ಮಹತ್ವ. ಅಂದು ಸಾಕಷ್ಟು ಜನ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಹಬ್ಬವನ್ನು ಆಚರಿಸುತ್ತಾರೆ. ಇದು ಶುದ್ಧೀಕರಣದ ಸಂಕೇತ. ಬರೀ ದೇಹವಷ್ಟೇ ಅಲ್ಲ, ಮನಸ್ಸನ್ನೂ ಶುದ್ಧೀಕರಿಸುವ ಸಂಕೇತವಾಗಿ ಪವಿತ್ರ ನದಿ ಸ್ನಾನಕ್ಕೆ ಮಹತ್ವವಿದೆ. ಮಕರ ಸಂಕ್ರಾಂತಿ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಜ೧೮ ಮತ್ತು ಜ೧೯ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಮ್ಮೇಳನದಲ್ಲಿ ಮತ, ಮಠಗಳ ಬೇಧವನ್ನು ಮರೆತು ಬ್ರಾಹ್ಮಣ ಎನ್ನುವ ಸಂಕಲ್ಪ ತೊಟ್ಟು ಭಾಗವಹಿಸಬೇಕು ಎಂದು ತಾಲೂಕಿನ ಹಿರೇಮುರಾಳ ಗ್ರಾಮದ ವಿಪ್ರ ಸಮಾಜದ ಪ್ರಮುಖರಾದ ಕೃಷ್ಣ ಜೋಶಿ ಕರೆ ನೀಡಿದರು.ತಾಲೂಕಿನ ಹಿರೇಮುರಾಳ ಗ್ರಾಮದ ವಿಪ್ರಸಮಾಜ ಬಾಂಧವರಿಗೆ ಸಮ್ಮೇಳನದ ಆಮಂತ್ರಣ ಸ್ವೀಕರಿಸಿ ಅವರು ಮಾತನಾಡಿದರು.ಈ ಸಮಾವೇಶದ ಉದ್ದೇಶ ಪರೋಪಕಾರ, ಪರಸ್ಪರ ಸಹಕಾರ ಮತ್ತು ಸಂಸ್ಕೃತಿ ಬೆಳೆಸುವದಾಗಿದೆ. ಸಮಾಜದ ಎಲ್ಲ ಬಾಂಧವರು ಭಾಗಿಯಾದಲ್ಲಿ ಹೊಸ ವಿಚಾರಗಳನ್ನು ತಿಳಿದುಕೊಳ್ಳಬಹುದು. ಪಂಡಿತರ ನುಡಿಗಳನ್ನು ಕೇಳಬಹುದು. ಸಮಾಜದ ಜೀರ್ಣೋದ್ದಾರವಾದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಸಾಕಷ್ಟು ಅನುಕೂಲವಾಗುವದು. ಹಾಗಾಗಿ ಪ್ರತಿಯೊಬ್ಬರೂ ಭಾಗಿಯಾಗಿ ಎಂದರು.ಅಜಿತ ಜೋಶೀಯವರು ಮಾತನಾಡಿ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಉತ್ತಮ ಸಂದೇಶ ಮತ್ತು ಆಚಾರ ವಿಚಾರಗಳನ್ನು ಪಡೆಯಬಹುದು. ಶಕ್ತಿ ಪ್ರದರ್ಶಿಸಬಹುದು ಎಂದರು.ಹುನಗುಂದ ನ ಪ್ರಶಾಂತ ದೇಸಾಯಿ ವಕೀಲರು ಸಮಾಜ ಬವಾಂಧವರಿಗೆ ಆಮಂತ್ರಣ ನೀಡಿದರು. ಪ್ರದೀಪ ಚೌಥಾಯಿ, ಪ್ರಸನ್ನಕುಮಾರ ಜಗೀರದಾರ,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರೈತರನ್ನು ಅಕ್ರಮ ಬಂಧನದಲ್ಲಿರಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ, ಗೋವುಗಳ ಕೆಚ್ಚಲನ್ನು ಕೊಯ್ದ ರಾಕ್ಷರನ್ನು ರಕ್ಷಿಸುತ್ತಿರುವ ಕಾಂಗ್ರೇಸ್ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ, ಈ ಆಕ್ರೋಷದ ಪ್ರತಿಧ್ವನಿ ಕೇಳಿಸಿದ್ದು ಪಟ್ಟಣದ ಪೊಲೀಸ್ ಠಾಣೆಯಲ್ಲಿ.ಚಾಮರಾಜಪೇಟೆಯಲ್ಲಿ ನಡೆದಿದೆ ಎನ್ನಲಾದ ಹಸುವಿನ ಕೆಚ್ಚಲು ಕೊಯ್ದ ಪ್ರಕರಣದ ಕುರಿತು ಸ್ಥಳೀಯ ಶಾಸಕ ಸಿ.ಎಸ್.ನಾಡಗೌಡರು ಯಾವುದೇ ಧ್ವನಿ ಎತ್ತಿಲ್ಲ ಎಂದು ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಅವರ ನಿವಾಸದ ಎದುರು ಸೆಗಣಿ ಬಳೆದು ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಆಕ್ರೋಷ ಹೊರಹಾಕಿದ್ದಕ್ಕೆ ಪೊಲೀಸರು ಕೆಲ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಕೂಡಲೇ ಅವನನ್ನು ಬಿಡುಗಡೆಗೊಳಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಮತ್ತು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ತಮ್ಮ ಕಾರ್ಯಕರ್ತರನ್ನು ಬಿಡುಗಡೆಗೊಳಿಸುವಂತೆ ಹೋರಾಟ ನಡೆಸಿದರು.ಈ ವೇಳೆ ಪಿಎಸ್ಐ ಸಂಜಯ ತಿಪರೆಡ್ಡಿ ಮತ್ತು ಮಾಜಿ ಶಾಸಕ ನಡಹಳ್ಳಿ ಅವರ ಮಧ್ಯೆ ಕೆಲ ಹೊತ್ತು ವಾಹ್ವಾದ ನಡೆಯಿತು. ಕಾರ್ಯಕರ್ತರನ್ನು ಬಿಡೋವರೆಗೂ ಇಲ್ಲಿಂದ ಕದಲೋದಿಲ್ಲ ಎಂದು…
