Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹೆಸ್ಕಾಂ ವಿಯಪುರ ಇವರಿಂದ ಏಪ್ರಿಲ್ ೨೨ ರಂದು ಬಬಲೇಶ್ವರ ಉಪ ವಿಭಾಗದ ಇಐಪಿ ಪೀಡರ್, ಏ.೨೩ ರಂದು ಗ್ರಾಮೀಣ ವಿಜಯಪುರ ಉಪ ವಿಭಾಗದ ಇಐಪಿ ಪೀಡರ್‌ಗಳು ಹಾಗೂ ಏ.೨೪ರಂದು ತಿಕೋಟಾ ಉಪ ವಿಭಾದ ಇಐಪಿ ಪೀಡರ್‌ಗಳ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಅಂದು ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ಇಐಪಿ ಮಾರ್ಗಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕಾರಣ ಗ್ರಾಹಕರು ಹೆಸ್ಕಾಂನೊಂದಿಗೆ ಸಹಕರಿಸುವಂತೆ ಹೆಸ್ಕಾಂ ವಿಯಪುರದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೬ನೇ ಸಾಲಿನ ಸಿಇಟಿ ಪ್ರವೇಶ ಪರೀಕ್ಷೆಗಳು ಏ. ೨೨ ರಿಂದ ೨೪ ರವರೆಗೆ ಜಿಲ್ಲೆಯ ೩೦ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷಾ ಕಾರ್ಯಗಳಲ್ಲಿ ಯಾವುದೇ ಲೋಪವಾಗದಂತೆ ಸುಸೂತ್ರವಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರು ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ಸಿಇಟಿ ಪರೀಕ್ಷೆಗೆ ಸಂಬಂಧಿಸಿದ ಪರೀಕ್ಷಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರೀಕ್ಷೆಯು ಎರಡು ಅವಧಿಯಲ್ಲಿ ನಡೆಯಲಿದ್ದು, ಜಿಲ್ಲೆಯ ಒಟ್ಟು ೩೦ ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ೧೩,೩೫೯ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಯಾವುದೇ ಸಮಸ್ಯೆ ಬಾರದ ರೀತಿಯಲ್ಲಿ ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳು ಮುಂಜಾಗ್ರತೆಯಿಂದ ಪರೀಕ್ಷಾ ನಿಯಮಗಳನ್ವಯ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.ಪ್ರತಿ ಪರೀಕ್ಷಾ ಕೇಂದ್ರಕ್ಕೆ ಓರ್ವ ವೀಕ್ಷಕರಂತೆ ಒಟ್ಟು ೩೦ ವೀಕ್ಷಕರನ್ನು ನೇಮಿಸಿದೆ. ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲಾದ ವೀಕ್ಷಕರು ಪರೀಕ್ಷೆ ಪ್ರಾರಂಭವಾಗುವ ಸಮಯಕ್ಕಿಂತ ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಓರ್ವ ಉಪ ಮುಖ್ಯ ಅಧಿಕ್ಷಕರು,ಓರ್ವ…

Read More

ಹೆಚ್ ಡಿ ಕೋಟೆ ಸ್ಮಾರ‍್ಟ್ ಸಿಟಿ ಮಾಡಲು ಶಾಸಕ ಅನಿಲ್ ಚಿಕ್ಕಮಾದು ಪ್ರಯತ್ನ ಉದಯರಶ್ಮಿ ದಿನಪತ್ರಿಕೆ ಹೆಚ್.ಡಿ.ಕೋಟೆ: ವನ-ಜಲ ಸಂಪತ್ತಿನ ಜೊತೆಗೆ ಸಫಾರಿಯಿಂದ ವಿದೇಶಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಹೆಚ್ ಡಿ ಕೋಟೆ ತಾಲೂಕಿನಲ್ಲಿ ಜನರ ಜೀವನ ಶೈಲಿ ಇನ್ನು ಬದಲಾಗಿಲ್ಲ. ಗ್ರಾಮೀಣ ಪ್ರದೇಶಗಳೇ ಸುತ್ತುವರೆದಿರುವ ಹಿನ್ನೆಲೆ ಪಟ್ಟಣ ಕೂಡ ಹಳ್ಳಿ ವಾತಾವರಣದಿಂದ ಹೊರಬಂದಿಲ್ಲ. ಇದನ್ನು ಮನಗಂಡಿರುವ ಶಾಸಕ ಅನಿಲ್ ಚಿಕ್ಕಮಾದು ಪಟ್ಟಣಕ್ಕೆ ಆಧುನಿಕ ಟಚ್ ಕೊಡಲು ಮುಂದಾಗಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ, ಹೈಟೆಕ್ ಪಾರ‍್ಕ್ ನಿರ‍್ಮಾಣಕ್ಕೆ ಮುಂದಾಗಿದ್ದಾರೆ.ಮಂಗಳವಾರದ ಸಂತೆಗಷ್ಟೇ ಸೀಮಿತವಾಗಿದ್ದ ಪಟ್ಟಣದ ಸಂತೇಮಾಳ ಮೈದಾನ ಸ್ಥಳಾಂತರ ಮಾಡಿ, ಅಲ್ಲಿ ಪಾರ‍್ಕ್ ಮಾಡುವ ಆಸೆಯಿದ್ದು, ಅಂದಾಜು ೧೦ ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸುವುದಾಗಿ ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.ಪಟ್ಟಣದ ವಿವಿಧೆದೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ೬ವರೆ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಹೆಚ್ ಡಿ ಕೋಟೆ ಪಟ್ಟಣವನ್ನು ದಾವಣಗೆರೆ, ಹುಬ್ಬಳಿ-ಧಾರವಾಡ, ತುಮಕೂರು ಮಾದರಿಯಲ್ಲಿ ಸ್ಮಾರ‍್ಟ್ ಸಿಟಿ ಮಾಡುವುದಾಗಿ…

Read More

ಬೆಂಗಳೂರಿನಲ್ಲಿ ನಡೆದ ನ್ಯಾಯಾಂಗ ಅಧಿಕಾರಿಗಳ 22ನೇ ದ್ವೈವಾರ್ಷಿಕ ರಾಜಮಟ್ಟದ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಅಭಿಮತ ಬೆಂಗಳೂರು: ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ಪ್ರವೇಶವನ್ನು ಸುಧಾರಿಸಬೇಕೆನ್ನುವ ಬಲವಾದ ಅಗತ್ಯವಿದೆ. ದಕ್ಷಿಣ ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯದ ಪೀಠ ಸ್ಥಾಪನೆಯಾದರೆ ನ್ಯಾಯವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಬಹು ದೊಡ್ಡ ಹೆಜ್ಜೆಯನ್ನು ಇರಿಸಿದಂತಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಬೆಂಗಳೂರಿನ ಜಿಕೆವಿಕೆಯ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ನಡೆದ ನ್ಯಾಯಾಂಗ ಅಧಿಕಾರಿಗಳ 22ನೇ ದ್ವೈವಾರ್ಷಿಕ ರಾಜಮಟ್ಟದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರಸಕ್ತ ಕಾಲಘಟ್ಟದಲ್ಲಿ ಕಾನೂನು ಮತ್ತು ತಂತ್ರಜ್ಞಾನವು ಪ್ರತ್ಯೇಕ ಕ್ಷೇತ್ರಗಳಾಗಿ ಉಳಿದಿಲ್ಲ. ಈಗ ಮುಂದುವರೆದು ನ್ಯಾಯಾಂಗ ಕ್ಷೇತ್ರಕ್ಕೆ ಕೃತಕ ಬುದ್ಧಿಮತ್ತೆಯ ಪ್ರವೇಶವಾಗಿದೆ. ಅದರಿಂದಾಗಿ ಆಡಳಿತ, ಹಕ್ಕುಗಳು ಮತ್ತು ನ್ಯಾಯದ ಸ್ವರೂಪವನ್ನು ರೂಪಿಸುವ ಪರಸ್ಪರ ಸಂಬಂಧ ಹೊಂದಿರುವ ಶಕ್ತಿಗಳ ನಡುವೆ ನಿರ್ಣಾಯಕ ಹಂತದಲ್ಲಿ ನಾವು ಇಂದು ನಿಂತಿದ್ದೇವೆ. ಈ ಪಯಣದಲ್ಲಿ ನ್ಯಾಯಾಂಗಕ್ಕೆ ಅದರ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಗೌರವಿಸುತ್ತಲೇ ಅದಕ್ಕೆ ಬೆಂಬಲ ನೀಡುವುದು, ಸಕ್ರಿಯಗೊಳಿಸುವುದು ಮತ್ತು ಬಲಪಡಿಸುವುದು ಆಡಳಿತದ ಪಾತ್ರ. ನ್ಯಾಯಾಂಗ…

Read More

ಕಲ್ಶಾಣದೇಶ್ವರ ಜಾತ್ರೆ | ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ | ಮಾಗಣಗೇರಿಯ ಏಕಾಕ್ಷರ ಶಿವಾಚಾರ್ಯ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಾನವ ಇತರರಿಗೆ ಆಸರೆಯಾಗಿ ಬದುಕಬೇಕು. ಇತರರಿಗೆ ಬೇಸರವಾಗುವಂತಿದ್ದರೆ ಅದು ನಶ್ವರದ ಬದುಕಾಗಿರುತ್ತದೆ ಎಂದು ಯಡ್ರಾಮಿ ತಾಲೂಕಿನ ಸುಕ್ಷೇತ್ರ ಮಾಗಣಗೇರಿಯ ರುದ್ರಮುನೇಶ್ವರ ಹಿರೇಮಠದ ಪಟ್ಟಾಧ್ಶಕ್ಷ ಏಕಾಕ್ಷರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಸಿಂದಗಿ ತಾಲೂಕಿನ ಸುಕ್ಷೇತ್ರ ಹೊನ್ನಳ್ಳಿ ಬ್ರಹ್ಮದೇವನಮಡು ಗ್ರಾಮದ ಕಲ್ಯಾಣದೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಹಮ್ಮಿಕೊಂಡ ಶ್ರೀದೇವಿ ಹಾಗೂ ೩೫೧ ಮುತೈದಿಯರಿಗೆ ಉಡಿ ತುಂಬುವ ಕಾಯಕ್ರಮದಲ್ಲಿ ಸಮ್ಮುಖ ವಹಿಸಿ ಮಾತನಾಡಿದ ಅವರು, ಮಾನವನ ಜನ್ಮದಿಂದ ಜಗತ್ತಿಗೆ ಉಪಯೋಗವಾಗಬೇಕು. ಇದಕ್ಕೆ ನಿದರ್ಶನವೇ ಶ್ರೀಮಠದ ಲಿಂಗೈಕ್ಯ ವೀರಘಂಟಯ್ಶ ಸ್ವಾಮೀಜಿ. ಇವರ ಸತ್ಯ ಸನ್ಮಾರ್ಗವು ಮನುಕುಲಕ್ಕೆ ದಾರಿದೀಪವಾಗಿದೆ. ಸಂಪತ್ತಿನ ಬೆನ್ನು ಹತ್ತದೇ ಸದ್ವಿಚಾರಗಳು, ನಡೆ ನುಡಿಯಲ್ಲಿ ಭಿನ್ನವಿಲ್ಲದಂತೆ ಬದುಕಿದ್ದೇ ಆದಲ್ಲಿ ದೈವಾನುಗ್ರಹ ಸದಾ ಇರುತ್ತದೆ. ವಿಕೃತಿಯಾಗಿ ಯಾರು ಬದುಕುತ್ತಾರೋ ಅವರು ಮಣ್ಣಲ್ಲಿ ಮಣ್ಣಾಗುತ್ತಾರೆ. ಇಂತಹ ಬದುಕು ನಿರರ್ಥಕವಾಗಿರುತ್ತದೆ. ಈ ಬದುಕು ಎಂಬ ಮೂರಕ್ಷರದ ಪದಕ್ಕೆ ಸದ್ಗುರುವಿನ ಆಶೀರ್ವಾದ…

Read More

41 ಡಿಗ್ರಿ ಸೆಲ್ಸಿಯಸ್ ದಾಟಿದ ಉಷ್ಣಾಂಶ | ನದಿಯಲ್ಲಿ ಈಜಿನ ಮೊರೆಹೋದ ಯುವಕರು | ಕಾದು ಕೆಂಡದಂತಾಗುವ ಭೂಮಿ ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ್ ಎಮ್ ಇಟ್ಟಿಜಮಖಂಡಿ: ದಿನದಿಂದ ದಿನಕ್ಕೆ ಬಿಸಿಲಿನ ಧಗೆ ಹೆಚ್ಚುತ್ತಿದೆ. ಅಧಿಕ ತಾಪಮಾನದಿಂದ ಭೂಮಿ ಕಾದು ಕೆಂಡದಂತಾಗಿದೆ. ಇದರಿಂದ ಸಾರ್ವಜನಿಕರು, ರೈತರು ತತ್ತರಿಸಿ ಹೋಗಿದ್ದಾರೆ. ಬಿಸಿಲಾಘಾತ ತಡೆದುಳ್ಳಲು ಗ್ರಾಮೀಣ ಪ್ರದೇಶದ ಯುವಕರು ತಮ್ಮೂರಿನ ನದಿಯಲ್ಲಿ ಈಜಿನ ಮೊರೆ ಹೋಗಿದ್ದಾರೆ.ಮಳೆಗಾಲದಲ್ಲಿ ಮಳೆ ಸುರಿದು ಭೂತಾಯಿ ಒಡಲು ತಂಪಾಗಿರುತ್ತೆ. ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಆದರೆ ಬಿರು ಬೇಸಿಗೆಯಲ್ಲಿ ವರುಣನ ದರ್ಶನವಿಲ್ಲದ ಕಾರಣ ಉರಿವ ಸೂರ್ಯನ ತಾಪ ತಡೆದುಕೊಳ್ಳುವುದು ಕಷ್ಟವಾಗಿದೆ. ಎಲ್ಲೇ ಕುಂತರು-ನಿಂತರೂ ಮನಸ್ಸಿಗೆ ನೆಮ್ಮದಿ ಇಲ್ಲದಾಗಿದೆ. ತಂಪಾದ ನೆರಳಿಗಾಗಿ ಹಂಬಲಿಸುವಂತಾಗಿದೆ.ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಶ್ರಮಬಿಂದು ಸಾಗರದ ಕೃಷ್ಣಾ ನದಿ ಪಾತ್ರದ, ತಾಪಮಾನ ಏರಿಕೆಯಿಂದ ನಲುಗಿರುವ ಜನ ಈಜಿನ ಮೊರೆ ಹೋಗಿದ್ದಾರೆ. ಈ ನದಿಯಲ್ಲಿ ನಿತ್ಯ ಬೇರೆ ಬೇರೆ ಗ್ರಾಮಗಳ ನೂರಾರು ಯುವಕರು ಈಜಲು ಬರುತ್ತಾರೆ. ಆಲಗೂರ, ಹಿರೇಪಡಸಲಗಿ, ನಾಗನೂರ, ಕವಟಗಿ,…

Read More

ಲೇಖನ.- ಶಿಲ್ಪಾ ಮೃತ್ಯುಂಜಯ ಮಿಣಜಿಗಿಶಿಕ್ಷಕರು, ಕೆ. ಇ. ಬೋರ್ಡ್ಸೆಂಟ್ರಲ್ ಸ್ಕೂಲ.ಧಾರವಾಡ ಉದಯರಶ್ಮಿ ದಿನಪತ್ರಿಕೆ ಬಸವಣ್ಣನವರ ವಚನಗಳು ಕೇವಲ ಸಾಹಿತ್ಯವಲ್ಲ, ಅವು ಬದುಕನ್ನು ತಿದ್ದುವ ದಿವ್ಯ ಮಂತ್ರಗಳು.12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರರಾದ ಬಸವಣ್ಣನವರು ಕನ್ನಡ ಸಾಹಿತ್ಯಕ್ಕೆ ನೀಡಿದ ‘ವಚನ’ಗಳ ಮಹತ್ವವನ್ನು ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ.ಬಸವೇಶ್ವರ ವಚನಗಳ ಮಹತ್ವಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12ನೇ ಶತಮಾನವನ್ನು ‘ವಚನ ಕ್ರಾಂತಿಯ ಯುಗ’ ಎಂದು ಕರೆಯಲಾಗುತ್ತದೆ. ಸಾಮಾನ್ಯ ಜನರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಉನ್ನತ ಜೀವನದರ್ಶನವನ್ನು ನೀಡಿದವರು ಬಸವಣ್ಣನವರು. ಅವರ ವಚನಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಬಹುಷಃ ಮಾನವರಾದ ನಾವು ವಚನಗಳು ಮತ್ತು ಅವುಗಳ ಅರ್ಥಗಳನ್ನು ಚನ್ನಾಗಿ ತಿಳಿದುಕೊಂಡರೆ ಯಾವ ನ್ಯಾಯಾಲಯವು ಇರುತ್ತಿರಲಿಲ್ಲ ಅನಿಸುತ್ತದೆ. ಸರಳ ಭಾಷೆಯಲ್ಲಿ ಮೂಡಿವೆಅಂದಿನ ಕಾಲದಲ್ಲಿ ಧಾರ್ಮಿಕ ಮತ್ತು ತಾತ್ವಿಕ ಜ್ಞಾನವು ಸಂಸ್ಕೃತ ಭಾಷೆಗೆ ಸೀಮಿತವಾಗಿತ್ತು. ಬಸವಣ್ಣನವರು ಈ ಜ್ಞಾನವನ್ನು ಪಂಡಿತರ ಮಠದಿಂದ ಸಾಮಾನ್ಯ ಜನರ ಅಂಗಳಕ್ಕೆ ತಂದರು. ಆಡುಭಾಷೆಯಾದ ಕನ್ನಡದಲ್ಲಿ ವಚನಗಳನ್ನು ರಚಿಸುವ ಮೂಲಕ, ಪ್ರತಿಯೊಬ್ಬರಿಗೂ ತತ್ವಜ್ಞಾನ ಸುಲಭವಾಗಿ ತಲುಪುವಂತೆ…

Read More

ಲೇಖನಮಲ್ಲಪ್ಪ. ಸಿದ್ರಾಮ ಖೊದ್ನಾಪೂರ(ತಿಕೋಟಾ)ವಿಜಯಪುರ ಮಹಾಮಾನವತಾವಾದಿ ಬಸವಣ್ಣನವರು ೧೨ ನೇಯ ಶತಮಾನದ ಮಹಾನ್ ಕ್ರಾಂತಿಕಾರಿ, ಸಮಾಜ ಸುಧಾರಕ ಮತ್ತು ತತ್ವಜ್ಞಾನಿಯಾಗಿದ್ದರು. ಅವರು ತನ್ನ ವಚನಗಳ ಮೂಲಕ ಸಮಾಜದಲ್ಲಿನ ಜಾತಿ, ಲಿಂಗ ತಾರತಮ್ಯ ಮತ್ತು ಮೌಢ್ಯತೆಗಳನ್ನು ಕಠೋರವಾಗಿ ವಿರೋಧಿಸುತ್ತಾ, ಸಮಾನತೆ ಮತ್ತು ಕಾಯಕ ನಿಷ್ಠೆಯನ್ನು ಬೋಧಿಸಿದ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದರು. ಧರ್ಮದ ಮೂಲ ಎಂಬ ಸಂದೇಶ ಸಾರುತ್ತಾ, ಸಾಮಾಜಿಕ ಜಾಗೃತಿ ಮೂಡಿಸುತ್ತಾ, ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದವರು. ಸುಮಾರು ೯೦೦ ವರ್ಷಗಳ ಹಿಂದೆಯೇ ಸಾಮಾಜಿಕ ಕಾನೂನು, ಸಂವಿಧಾನ, ಪ್ರಜಾಪ್ರಭುತ್ವ, ಸಮ ಸಮಾಜದ ನಿರ್ಮಾಣ, ಆರ್ಥಿಕತೆ, ಶಿಕ್ಷಣ ಮತ್ತು ಜ್ಞಾನ-ವಿಜ್ಞಾನದ ಪರಿಕಲ್ಪನೆಯಲ್ಲಿಯೇ ಅನುಭವ ಮಂಟಪವನ್ನೇ ಸ್ಥಾಪಿಸಿದ್ದರು.ಸಮಾನತೆಯ ಹರಿಕಾರರಾಗಿ ಬಸವಣ್ಣ ಅನುಭವ ಮಂಟಪ ಸ್ಥಾಪಿಸಿ, ಅಲ್ಲಮ ಪ್ರಭುಗಳು, ಮಡಿವಾಳ ಮಾಚಯ್ಯ, ನೂಲಿಯ ಚಂದಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಮಡಿವಾಳ ಮಾಚಯ್ಯ, ಮೋಳಿಗೆ ಮಾರಯ್ಯ, ಅಂಬಿಗೇರ ಚೌಡಯ್ಯ, ಅಕ್ಕ ಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಅವರಂತಹ ಎಲ್ಲ ಬಸವಾದಿ ಶರಣರೆಲ್ಲರೂ ಒಂದೆಡೆ ಸೇರಿಸಿ ಜಾತಿ, ಮತ, ಲಿಂಗಗಳ ಭೇದವನ್ನು…

Read More

ಲೇಖನ.*- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಚೆಂದದ ಚಂದನಾಪೂರ್ಣ ಚಂದಿರನಂತೆ ಹೊಳೆಯುವ ನಿನ್ನ ಮುಖ, ಆ ಮುಖದಲ್ಲಿ ಬೆಳದಿಂಗಳಿನಂತೆ ಬೆಳಗುವ ನಗು ಕಾಣಲು ಕಾದು ಕುಳಿತ ಅದೆಷ್ಟೋ ದಿನಗಳು ಕಣ್ಣ ಮುಂದಿವೆ. ಆ ನಗುಮೊಗದಲ್ಲಿ ಮಲ್ಲಿಗೆಯ ಹೂಗಳು ಅರಳಿದಂತೆ ಕಾಂತಿಯುಕ್ತ ಕಂಗಳು ನನ್ನನ್ನು ಕರೆದಂತೆ ಭಾಸವಾಗುತ್ತದೆ. ಹಂಸದಂತಹ ನಡಿಗೆ ಕಾರ್ಮೋಡದಂತೆ ಕಪ್ಪಾದ ಸೊಂಪಾದ ಕೂದಲು, ಬೆನ್ನ ತುಂಬ ಹರಡಿದ ಕೇಶರಾಶಿ ನೋಡುವುದೇ ಚಂದ. ನಿನ್ನನ್ನು ನೋಡುವುದೆಂದರೆ ಕಣ್ಣಿಗೊಂದು ಹಬ್ಬವೇ ಸರಿ. ನಿನ್ನನ್ನು ಕಂಡ ಅರಸಿಕನೂ ರಸಿಕನಾಗಿ ಬಿಡುತ್ತಾನೆದಿನ್ನು ನಿನ್ನ ಮಾತುಗಳೋ ವೀಣೆಯ ನಾದದಂತೆ ಮಧುರ ಮಧುರ. ಒಂದೇ ಮಾತಿನಲ್ಲಿ ಹೇಳುವುದಾದರೆ ನನಗಾಗಿ ಆಗಸದಿಂದ ಇಳಿದ ರತಿ ನೀನು. ಮೊದಲ ನೋಟದಲ್ಲೇ ನಿನ್ನಲ್ಲಿ ಕಳೆದು ಹೋದೆ ನಾನು. ಮನದಲ್ಲಿನ ಪ್ರೀತಿ ದಿನೇ ದಿನೇ ಚಿಗುರೊಡೆದಿದೆ. ಪುಟ್ಟ ಪುಟ್ಟ ಎಲೆಗಳಿಂದ ಕೂಡಿದ ಬಳ್ಳಿಯಾಗಿದೆ. ಬೆಳೆಯುತ್ತ ಬೆಳೆಯುತ್ತ ಬಳ್ಳಿಯ ನೆತ್ತಿಯ ಮೇಲಿನ ಮೊಗ್ಗಾಗಿದೆ. ಮೊಗ್ಗು ಹಿಗ್ಗಿ ಹಿಗ್ಗಿ ಈಗ ಹೂವಾಗಿದೆ. ಮನದ ಮೂಲೆಯಲ್ಲಿನ…

Read More