Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ವಿಪತ್ತು ನಿರ್ವಹಣಾ ಕೋಶ ಹಾಗೂ ಎನ್ಟಿಪಿಸಿ ಇವರ ವತಿಯಿಂದ ಎನ್ಟಿಪಿಸಿಯಲ್ಲಿ ಫೆ.೧೮ರಂದು ಅಗ್ನಿ ಅವಘಢಗಳಲ್ಲಿ ಜಾಗೃತಿ ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತ ಅಣುಕು ಪ್ರದರ್ಶನ ಯಶಸ್ವಿಯಾಗಿ ನಡೆಸಲಾಯಿತು.ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರ ಮಾರ್ಗದರ್ಶನದಲ್ಲಿ ಅಣುಕು ಪ್ರದರ್ಶನವನ್ನು ನಡೆಸಲಾಗಿದ್ದು, ಅಪಾಯದ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಈ ಅಣುಕು ಪ್ರದರ್ಶನದಲ್ಲಿ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಉಪಸ್ಥಿತರಿದ್ದು, ಅಣುಕು ಪ್ರದರ್ಶನವನ್ನು ವೀಕ್ಷಿಸಿದರು. ಎನ್ಟಿಪಿಸಿ ಅಧಿಕಾರಿಗಳು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೆ.ಪಿ.ಟಿ.ಸಿ.ಎಲ್ ವತಿಯಿಂದ ೧೧೦ ಕೆ.ವ್ಹಿ ಕಾಖಂಡಕಿಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿದ್ದು, ಸ್ಥಾವರ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಮಮದಾರಪುರ-೧ ಹಾಗೂ ರೋಣಿಹಾಳ, ಮಮದಾಪುರ-೨ರ ಮಾರ್ಗಗಳ ೧೧೦ ಕೆ.ವ್ಹಿ, ಮಮದಾಪುರ, ೧೧೦ ಕೆ.ವ್ಹಿ ದೇವರಗೆಣ್ಣೂರು, ೧೧೦ ಕೆ.ವ್ಹಿ ಬೆಳ್ಳುಬ್ಬಿ, ೧೧೦ ಕೆ.ವ್ಹಿ ಶಿರಬೂರ, ೧೧೦ ಕೆ.ವ್ಹಿ ಕಂಬಾಗಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ ಎಲ್ಲಾ ೩೩ ಕೆ.ವ್ಹಿ ಹಾಗೂ ೧೧ ಕೆ.ವ್ಹಿ ವಿದ್ಯುತ್ ಮಾರ್ಗಗಳಿಗೆ ದಿನಾಂಕ ೨೧-೦೨-೨೦೨೫ ಹಾಗೂ ೨೨-೦೨-೨೦೨೫ಕ್ಕೆ ಬೆಳಿಗ್ಗೆ ೬ ರಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಎಲ್ಲ ಐ ಪಿ ಫೀಡರಗಳಿಗೆ ೩ ರಿಂದ ೪ ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುವುದು.ದಿನಾಂಕ:೨೧-೦೨-೨೦೨೫ ರಂದು ೧೧೦ ಕೆ.ವ್ಹಿ ಮಮದಾಪುರ, ೧೧೦ ಕೆ.ವ್ಹಿ ಬೆಳ್ಳುಬ್ಬಿ, ೧೧೦ ಕೆ.ವ್ಹಿ ಕಂಬಾಗಿ ಹಾಗೂ ೧೧೦ ಕೆ.ವ್ಹಿ ಬಬಲೇಶ್ವರ, ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ ಎಲ್ಲಾ ೩೩ ಕೆ.ವ್ಹಿ ಹಾಗೂ ೧೧ ಕೆ.ವ್ಹಿ ವಿದ್ಯುತ್ ಮಾರ್ಗಗಳಿಗೆ ದಿನಾಂಕ: ೨೨-೦೨-೨೦೨೫…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಜಿಲ್ಲೆಯ ೧೩ ತಾಲೂಕುಗಳಲ್ಲಿ ಮಾರ್ಚ ೦೧ ರಿಂದ ಮಾರ್ಚ್ ೨೦ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸಸೂತ್ರವಾಗಿ ಹಾಗೂ ವ್ಯವಸ್ಥಿತವಾಗಿ ಜರುಗಿಸುವಂತೆ ನೋಡಿಕೊಳ್ಳಲು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಅವರು ಸೂಚಿಸಿದರು.ನಗರದ ದರಬಾರ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯ ಆಲಮೇಲ, ಬಬಲೇಶ್ವರ, ಬಸವನ ಬಾಗೇವಾಡಿ, ವಿಜಯಪುರ, ಚಡಚಣ, ದೇವರಹಿಪ್ಪರಗಿ, ಇಂಡಿ, ಕೋಲ್ಹಾರ, ಮುದ್ದೇಬಿಹಾಳ, ನಿಡಗುಂದಿ, ಸಿಂದಗಿ, ತಾಳಿಕೋಟಿ ಹಾಗೂ ತಿಕೋಟಾ ತಾಲೂಕಿನಲ್ಲಿ ಒಟ್ಟು ೬೩ ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ಒಟ್ಟು ೩೪,೪೧೧ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಯಾವುದೇ ಲೋಪವಾಗದೆ ವ್ಯವಸ್ಥಿತವಾಗಿ, ಸುಸೂತ್ರವಾಗಿ ಪರೀಕ್ಷೆ ನಡೆಯುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.ಪರೀಕ್ಷೆ ಕೇಂದ್ರ ಹಾಗೂ ಕೊಠಡಿಗಳಲ್ಲಿ ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸುವ ಸಿಬ್ಬಂದಿಗಳ ಮೇಲೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು. ಪರೀಕ್ಷೆ ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರದ ನಿರ್ದೇಶನದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ ನಂ.೨೧, ೧೨ ಹಾಗೂ ೪ನೇ ವಾರ್ಡಗಳಲ್ಲಿ ಅಧಿಕೃತ, ಅನಧಿಕೃತ ಕಟ್ಟಡಗಳ ಹಾಗೂ ನಿವೇಶನಗಳಿಗೆ ಎ ಖಾತೆ ಮತ್ತು ಬಿ ಖಾತೆ ಮಾಡುವ ಕುರಿತು ಫೆ.೨೧ ಹಾಗೂ ೨೨ ರಂದು ಎರಡು ದಿನಗಳ ಕಾಲ ಇ-ಆಸ್ತಿ ಆಂದೋಲನ ಹಮ್ಮಿಕೊಂಡಿದ್ದು, ಸದರಿ ವಾರ್ಡಗಳಲ್ಲಿನ ಆಸ್ತಿ ಮಾಲೀಕರು ತಮ್ಮ ಕಟ್ಟಡ-ನಿವೇಶನಗಳಿಗೆ ಸಂಬಂಧಿಸಿದ ದಾಖಲಾತಿ ಪತ್ರಗಳನ್ನು ಅಭಿಯಾನ ನಡೆಯುವ ಸ್ಥಳದಲ್ಲಿ ನೀಡಿ ಇ-ಖಾತಾ ನಮೂನೆ ೨/೩ನ್ನು ಪಡೆಯಬಹುದಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ ಅವರು ತಿಳಿಸಿದ್ದಾರೆ.ಸಲ್ಲಿಸಬೇಕಾದ ದಾಖಲೆಗಳು (ಎ ರಜಿಸ್ಟರ್ನಲ್ಲಿ ದಾಖಲಿಸಿ ಆಸ್ತಿ ಇ-ಖಾತಾ ಪಡೆಯಲು) : ೧) ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೊಂದಾಯಿತ ಮಾರಾಟ ಪತ್ರ/ ದಾನ ಪತ್ರಗಳು ವಿಭಾಗ ಪತ್ರಗಳು/ ಸಕಾರ ಅಥವಾ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ ಕಂದಾಯ ಇಲಾಖೆಯಿಂದ ೯೪೪ ಸಿಸಿ ಅಡಿ ನೀಡಲಾದ ಹಕ್ಕು ಪತ್ರ ೨) ಸ್ವತ್ತಿನ ಮಾಲೀಕರ…
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಾಲ್ಯದಲ್ಲಿಯೇ ಸೈನ್ಯ ಕಟ್ಟಿದ ಕೀರ್ತಿ ಶಿವಾಜಿ ಮಹಾರಾಜರವರದ್ದು, ಅವರ ಧೈರ್ಯ, ಸ್ಥೈರ್ಯ, ಸಾಹಸ ಹಾಗೂ ಮಹಾತ್ವಾಕಾಂಕ್ಷಿ ಗುಣಗಳನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕುಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವತಿಯಿಂದ ಬುಧವಾರ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು, ಶಿವಾಜಿ ಮಹಾರಾಜರು, ತಾಯಿಯ ಮಾರ್ಗದರ್ಶನದಿಂದ ಅಪ್ರತಿಮ ವ್ಯಕ್ತಿತ್ವವನ್ನು ರೂಪಿಸಿಕೊಂಡರು ಎಂದು ಹೇಳಿದರು.ಶಿವಾಜಿ ಮಹಾರಾಜರು ಉತ್ತಮ ಆಡಳಿತಗಾರರಾಗಿದ್ದರು. ಗೆರಿಲ್ಲಾ ಯುದ್ದ ಕೌಶಲ್ಯ ಸೈನ್ಯದಲ್ಲಿ ಅಳವಡಿಸಿಕೊಂಡಿದ್ದ ಅವರ ಧೈರ್ಯ-ಸಾಹಸ, ಉತ್ತಮ ಆಡಳಿತ ಇಂದಿನ ಪಿಳಿಗೆಗೆ ಪ್ರೇರಣಾದಾಯಕವಾಗಿದೆ ಎಂದು ಅವರು ಹೇಳಿದರು.ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಉಪನ್ಯಾಸ ನೀಡಿದ ಡಾ. ಆನಂದ ಕುಲಕರ್ಣಿ ಅವರು ಶಿವಾಜಿ ಮಹಾರಾಜರ ಮಹಾನ ವ್ಯಕ್ತಿತ್ವ ದಾರ್ಶನಿಕ ವಿಚಾರಧಾರೆಗಳು,…
ಇಂದಿನಿಂದ (ಫೆ.೨೦ ರಿಂದ ಫೆ.೨೫ ರವರೆಗೆ) ಮಳ್ಳಿ ಗ್ರಾಮದೇವತೆ ಚೌಡೇಶ್ವರಿ, ನಾಗರಳ್ಳಿಯ ಗ್ರಾಮದೇವತೆ ದ್ಯಾವಮ್ಮನ ಅದ್ಧೂರಿ ಜನಪದ ಜಾತ್ರೆ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಡಾ. ಸಂತೋಷ ನವಲಗುಂದಮಳ್ಳಿ ಉದಯರಶ್ಮಿ ದಿನಪತ್ರಿಕೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಿಂದ ೧೨ ಕಿ.ಮೀ ದೂರದಲ್ಲಿರುವ, ಶಹಾಪುರ-ಸಿಂದಗಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮಳ್ಳಿ ಗ್ರಾಮವು ಶ್ರಿ ಚೌಡೇಶ್ವರಿ ಜಾತ್ರೆಯ ಉತ್ಸವಕ್ಕಾಗಿಯೇ ಪ್ರಸಿದ್ಧಿ ಪಡೆದಿದೆ. ಮಳ್ಳಿಯಿಂದ ಕೂಗಳತೆಯಲ್ಲಿರುವ ಚಿಕ್ಕ ಗ್ರಾಮ ನಾಗರಳ್ಳಿ. ಇಲ್ಲಿ ದ್ಯಾವಮ್ಮ ದೇವಿ ನೆಲೆಸಿದ್ದಾಳೆ. ಈ ಎರಡೂ ಊರುಗಳು ‘ಸಹೋದರ ಗ್ರಾಮಗಳೆಂದೆ’ ಹೆಸರು ಪಡೆದಿವೆ. ಸಗರನಾಡಿನಲ್ಲಿಯೇ ವೈಶಿಷ್ಟತೆಯಿಂದ ಜರುಗಲಿರುವ ಜಾತ್ರೆ ಎಂದರೆ ಮಳಲಿ(ಮಳ್ಳಿ)ಯ ಶ್ರೀ ಚೌಡೇಶ್ವರಿ ಜಾತ್ರೆ ಹಾಗೂ ನಾಗರಳ್ಳಿ ದ್ಯಾವಮ್ಮ ದೇವಿಯ ಉತ್ಸವ ಪ್ರತಿ ಎರಡು ವರ್ಷಕ್ಕೊಮ್ಮೆ ಶಿವರಾತ್ರಿ ಅಮವಾಸ್ಯೆಯ ಹಿಂದಿನ ಶುಕ್ರವಾರದಂದು ಜಾತ್ರೆ ನಡೆಯುತ್ತದೆ. ಐದು ದಿನಗಳ ಕಾಲ ವಿಜೃಂಭಣೆಯಿಂದ ಜರುಗುವ ಜಾತ್ರೆಯಲ್ಲಿ ನಾಡಿನ ನಾನಾ ಮೂಲೆಗಳಿಂದ ಭಕ್ತಸಾಗರವೇ ಹರಿದು ಬರುತ್ತದೆ. ನಾಳೆ ಗುರುವಾರ( ಫೆ.೨೦) ದಿಂದ ಪ್ರಾರಂಭವಾಗುವ ಜಾತ್ರೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇದೇ ಫೆ.21 ಹಾಗೂ 22 ರಂದು ಎರಡು ದಿನಗಳ ಕಾಲ ಜೈವಿಕ ವಿಜ್ಞಾನದ ಗಡಿಗಳು : ಸಂಶೋಧನೆ, ನಾವೀನ್ಯತೆ ಮತ್ತು ಸಹಯೋಗದ ಕುರಿತು ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.ನಗರದ ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗ ಹಾಗೂ ಕಲಬುರಗಿ ಖಾಜಾ ಬಂದೇನವಾಜ್ ವಿಶ್ವವಿದ್ಯಾಲಯ ಹಾಗೂ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಸಹಯೋಗಲ್ಲಿ ವಿಜಯಪುರದ ಎಸ್.ಬಿ.ಕಲಾ ಹಾಗೂ ಕೆ. ಸಿ. ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆಯಲಿರುವ ರಾಷ್ಟ್ರೀಯ ಸಮ್ಮೇಳನವನ್ನು ದಿ.21 ರಂದು ಬೆಳಿಗ್ಗೆ 10 ಗಂಟೆಗೆ ಹಿಟ್ನಳ್ಳಿ ಕೃಷಿ ವಿವಿ ಡಿನ್ ಡಾ.ಅಶೋಕ ಸಜ್ಜನ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.ಬಿ.ಎಲ್.ಡಿ ಸಂಸ್ಥೆಯ ಪ್ರೊ. ವಾಯ್. ಎಂ. ಜಯರಾಜ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಡಾ. ರಾಘವೇಂದ್ರ ಕುಲಕರ್ಣಿ ಹಾಗೂ ಪ್ರೊ.ವಿ.ಎಸ್.ಬಗಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್ ಎಂ ಮಿರ್ದೆ, ಆಯ್.ಕ್ಯೂ.ಎ.ಸಿ ನಿರ್ದೇಶಕ ಡಾ. ಪಿ. ಎಸ್. ಪಾಟೀಲ, ಡಾ. ಸಯ್ಯದ್ ಅಬ್ರಾರ್ ಹಾಗೂ ಡಾ. ರಾಮಚಂದ್ರ ನಾಯಕ್ ಎಂ ಉಪಸ್ಥಿತರಿರಲಿದ್ದಾರೆ.ಅದರಂತೆ…
ಲೇಖನಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಗಾಜಿನ ಲೋಟವು ಅರ್ಧ ಖಾಲಿಯಾಗಿದೆ ಅಥವಾ ಅರ್ಧ ತುಂಬಿದೆ ಎನ್ನುವ ಸಕಾರಾತ್ಮಕ ಚಿಂತನೆಗೆ ಕುರಿತಾದ ಹಳೆಯ ಪ್ರಶ್ನೆಗೆ ನಾವು ಹೇಗೆ ಉತ್ತರಿಸುತ್ತೇವೆ ಎನ್ನುವುದು ಜೀವನದ ಮೇಲಿನ ದೃಷ್ಟಿಕೋನವನ್ನು ತೋರಿಸುತ್ತದೆ. ಆಶಾವಾದಿಯೇ, ನಿರಾಶಾವಾದಿಯೇ ಎಂಬುದನ್ನು ಪ್ರತಿಬಿಂಬಿಸಬಹುದು. ವಿನಸ್ಟನ್ ಚರ್ಚಿಲ್ ಅವರ ಮಾತೊಂದು ಹೀಗಿದೆ: ‘ನಿರಾಶಾವಾದಿ ಪ್ರತಿ ಅವಕಾಶದಲ್ಲೂ ಕಷ್ಟವನ್ನು ನೋಡುತ್ತಾನೆ. ಆಶಾವಾದಿ ಪ್ರತಿ ಕಷ್ಟದಲ್ಲೂ ಅವಕಾಶವನ್ನು ನೋಡುತ್ತಾನೆ.’ ಈ ತೆರನಾದ ಚಿಂತನೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ವಾಸ್ತವವಾಗಿ ಆಶಾವಾದ ಮತ್ತು ನಿರಾಶಾವಾದದಂತಹ ವ್ಯಕ್ತಿತ್ವ ಗುಣಲಕ್ಷಣಗಳು ಆರೋಗ್ಯ ಮತ್ತು ಯೋಗಕ್ಷೇಮದ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರಬಹುದು ಎಂದು ಕೆಲವು ಅಧ್ಯಯನಗಳು ತೋರಿಸುತ್ತವೆ. ನಮ್ಮ ಆಲೋಚನೆ ಚೆನ್ನಾಗಿದ್ದರೆ ನಮ್ಮ ಸುತ್ತಲಿನ ವಾತಾವರಣವೂ ಚೆನ್ನಾಗಿ ಇರುತ್ತದೆ. ಎಂಬ ವಿಚಾರ ಸರ್ವವೇದ್ಯ. ಹಾಗಾದರೆ ಆಲೋಚನೆಗಳು ಅದ್ಹೇಗೆ ನಮ್ಮ ಕಣ್ತೆರೆಸುತ್ತವೆ ನೋಡೋಣ ಬನ್ನಿ.ಧನಾತ್ಮಕ ಚಿಂತನೆನಮ್ಮ ಬಳಿ ಏನಿದೆಯೋ ಅದನ್ನು ನೋಡಿದಾಗ, ನಮ್ಮ ಜೀವನದ ಅಗತ್ಯಗಳಿಗಿಂತ ಹೆಚ್ಚೇ ನಮ್ಮ ಬಳಿ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ ಇಂಗಳಗಿ ಚುನಾವಣೆ ಯಾದಿಯಲ್ಲಿ ಸಾಕಷ್ಟು ಅಕ್ರಮವೆಸಗಲಾಗಿದೆ ಎಂದು ಸಂಘದ ಅ ವರ್ಗದ ಸದಸ್ಯ ಆನಂದ ಪವಾರ್ ಸೇರಿದಂತೆ ಹಲವರು ಆರೋಪಿಸಿದ್ದಾರೆ.ಮಂಗಳವಾರ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಿಮ ಶೇರುದಾರರ ಪಟ್ಟಿಯಲ್ಲಿ ಅಪೂರ್ಣ ಶೇರ್ ಹೊಂದಿದ ಸದಸ್ಯರ ಹೆಸರು ಸಹ ಇವೆ. ಅಲ್ಲದೆ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮೂರಕ್ಕಿಂತ ಹೆಚ್ಚು ಸಹಿ ಮಾಡಿದ್ದರೂ ಸಹ ಅಂತಹವರ ಹೆಸರುಗಳನ್ನು ಕೈ ಬಿಡಲಾಗಿದೆ. ಅಚಿತಿಮ ಯಾದಿಯಲ್ಲಿನ ಸದಸ್ಯತ್ವ ಸಂಖ್ಯೆ ಹಾಗೂ ಸಂಘದ ಗಣಕಯಂತ್ರದಲ್ಲಿನ ಸದಸ್ಯತ್ವ ಸಂಖ್ಯೆಗಳನ್ನು ಪರಿಶೀಲಿಸಿದಾಗ ಎರಡೂ ಸಹ ಬೇರೆ-ಬೇರೆ ಇವೆ. ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷರ ಕುಮ್ಮಕ್ಕಿನಿಂದ ಸಂಘದ ಮುರ್ಕಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ವಾಘಮೋರೆ ದೊಡ್ಡ ಪ್ರಮಾಣದ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿದರು.ಚುನಾವಣೆ ಪ್ರಕ್ರಿಯೆ ಫೆ. ೧೫ ರಿಂದ ಆರಂಭವಾಗಿದ್ದು ಅದಕ್ಕಿಂತಲೂ ಒಂದು ದಿನ ಮುಂಚೆಯೇ ನೋಟಿಸ್ ಭೋರ್ಡಿಗೆ ಅರ್ಹ ಮತದಾರರ ಯಾದಿ…
ಆಕ್ಸಫರ್ಡ ಐಐಟಿ ಒಲಂಪಿಯಾಡ್ ಶಾಲೆಯ ವಾರ್ಷಿಕೋತ್ಸವದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪಾಲಕರು ತಮ್ಮ ಕನಸುಗಳಿಗೆ ಅನುಗುಣವಾಗಿ ಮಕ್ಕಳನ್ನು ಓದಿಸುವುದಕ್ಕಿಂತ ಮಕ್ಕಳ ಕನಸುಗಳಿಗೆ ಪ್ರೋತ್ಸಾಹ ನೀಡಿ ಪೋಷಿಸಬೇಕು. ಆಗ ಮಾತ್ರ ಉತ್ತಮವಾದ ಫಲಿತಾಂಶ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಒತ್ತಾಯದ ಶಿಕ್ಷಣ ಯಾವತ್ತಿಗೂ ನಿರರ್ಥಕವಾಗುತ್ತದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.ನಗರದ ಆಕ್ಸಫರ್ಡ ಐಐಟಿ ಒಲಂಪಿಯಾಡ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು; ಇಂದಿನ ದಿನಗಳಲ್ಲಿ ಪಾಲಕರು ಮಕ್ಕಳು ಹೀಗೆ ಆಗಬೇಕು, ಹಾಗೆ ಆಗಬೇಕು ಎನ್ನುವ ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರುವ ಕಾರ್ಯ ಮಾಡುತ್ತಿರುವುದರಿಂದ ಮಕ್ಕಳ ಭವಿಷ್ಯದ ಮೇಲೆ ಗೊಂದಲದ ಕಾರ್ಮೋಡ ಮುಸುಕುತ್ತಿದೆ. ತನ್ನಲ್ಲಿ ಅಡಗಿರುವ ಪ್ರತಿಭೆಯನ್ನು ಬದಿಗೊತ್ತಿ ಹೆತ್ತವರ ಆಸೆಯನ್ನು ಈಡೇರಿಸುವುದಕ್ಕೆ ಹೆಣಗುವ ಮಕ್ಕಳು ಯಶಸ್ಸಿನ ಹಾದಿಯಲ್ಲಿ ಸಾಗುವುದಕ್ಕಿಂತ ಅದರ ವಿರುದ್ಧ ದಿಕ್ಕಿನೆಡೆಗೆ ಮುಖ ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಪಾಲಕರು ಮಕ್ಕಳನ್ನು ಇಂಜಿನಿಯರ್ ಆಗು, ಡಾಕ್ಟರ್ ಆಗು ಎಂದು ಒತ್ತಡವನ್ನು ಹೇರದೇ ನೀನು ಏನಾಗಬೇಕೆಂದು ಬಯಸುತ್ತಿಯಾ ಹೇಳು…
