Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಅಥಣಿ: ತಾಲೂಕಿನ ಕಟಗೇರಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ವಿದ್ಯಾರ್ಥಿನಿ ಕುಮಾರಿ ಪ್ರಾರ್ಥನಾ ನಾಗಪ್ಪ ಬಿರಾದಾರ್ ಪಾಟೀಲ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯ ಸಾಧನೆ ಮಾಡಿದ್ದಾಳೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಓದಿ ಈ ಮಟ್ಟದ ಸಾಧನೆ ಮಾಡಿರುವ ಪ್ರಾರ್ಥನಾಳಿಗೆ ಈಗ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.ವಿದ್ಯಾರ್ಥಿನಿಯ ಈ ಅಮೋಘ ಸಾಧನೆಯ ವಿಷಯ ತಿಳಿಯುತ್ತಿದ್ದಂತೆಯೇ ಬೆಂಗಳೂರಿನಲ್ಲಿದ್ದ ಅಥಣಿ ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಪ್ರಾರ್ಥನಾಳಿಗೆ ದೂರವಾಣಿ ಕರೆ ಮಾಡಿ ಹಾರೈಸಿದರು.”ಗ್ರಾಮೀಣ ಭಾಗದ ಪ್ರತಿಭೆಗಳು ಈ ಮಟ್ಟಕ್ಕೆ ಬೆಳೆಯುತ್ತಿರುವುದು ಅಥಣಿ ತಾಲೂಕಿಗೆ ಹೆಮ್ಮೆಯ ವಿಷಯ. ಪ್ರಾರ್ಥನಾ ಅವರ ಈ ಸಾಧನೆ ಉಳಿದ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ,” ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಅಥಣಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜಿ ಅವರು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ, ಸಿಹಿ ತಿನ್ನಿಸಿ ಸತ್ಕರಿಸಿದರು.”ಸರ್ಕಾರಿ ಶಾಲೆಯ ವಿದ್ಯಾರ್ಥಿನಿ…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವುದು ಇಂದು ನಿನ್ನೆಯ ಮಕ್ಕಳ ಹವ್ಯಾಸವಲ್ಲ. ದುಬಾರಿ ಬೆಲೆಯ ಗ್ರಾಮ ಫೋನ್ ಗಳು ಮೊಟ್ಟ ಮೊದಲಿಗೆ ಚಾಲ್ತಿಯಲ್ಲಿ ಬಂದವು. ಕಹಳೆಯಾಕಾರದ ಗ್ರಾಮಫೋನ್ ನ ಮೇಲೆ ತಟ್ಟೆಯ ಆಕಾರದ ಹಾಡಿನ ಪ್ಲೇಟುಗಳನ್ನು ಇರಿಸಿ ಅದರ ಮೇಲೆ ವಿದ್ಯುತ್ತಿನ ಕನೆಕ್ಷನ್ ಹೊಂದಿರುವ ಕಡ್ಡಿಯನ್ನು ಇಟ್ಟೊಡನೆ ಸುಮಧುರವಾದ ಗೀತೆಗಳು ಮೊಳಗುತ್ತಿದ್ದವು. ಈ ಮೊದಲೇ ರೆಕಾರ್ಡಿಂಗ್ ಸ್ಟುಡಿಯೋಗಳಲ್ಲಿ ಧ್ವನಿ ಮುದ್ರಿಸಲ್ಪಟ್ಟ ಗೀತೆಗಳು ಗ್ರಾಮಫೋನ್ ತಟ್ಟೆಗಳ ಮೂಲಕ ನಮ್ಮ ಶ್ರವಣೇಂದ್ರಿಯಗಳಿಗೆ ಅಮೃತ ಸುಧೆಯನ್ನು ಉಣಿಸುತ್ತಿದ್ದವು. ಸುಮಾರು ಶತಮಾನಗಳ ಇತಿಹಾಸ ಇವಕ್ಕಿದೆ.ನಂತರ ಬಂದದ್ದು ರೇಡಿಯೋ.ಈ ಹಿಂದೆ ರೇಡಿಯೋ ತರಂಗಗಳ ಮೂಲಕ ಆಕಾಶವಾಣಿಯಲ್ಲಿ ನಮ್ಮ ಹಿರಿಯರು ಹಾಡು, ವಾರ್ತೆಗಳು, ಪ್ರದೇಶ ಸಮಾಚಾರ, ಹವಾಮಾನ ಮುನ್ಸೂಚನೆ, ಕೃಷಿ ಸಂಬಂಧಿತ ಸಲಹೆ ಸೂಚನೆಗಳು, ನಾಟಕ ಮಕ್ಕಳ ಕಾರ್ಯಕ್ರಮಗಳು, ಮನರಂಜನೆ ಮುಂತಾದ ಕಾರ್ಯಕ್ರಮಗಳನ್ನು ಕೇಳುತ್ತಿದ್ದರು. ಮತ್ತೆ ಕೆಲವು ಹಣ ಸಂದಾಯ ಮಾಡಿ ಕೇಳುವಂತಹ ರೇಡಿಯೋ ಕಾರ್ಯಕ್ರಮಗಳು ಕೂಡ ಇದ್ದವು.ಆಮೇಲೆ ಬಂದದ್ದು ಫೋನ್…

Read More

ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ಅರಣ್ಯ ಅಧಿಕಾರಿ ರಾಕೇಶ ಅರ್ಜುನವಾಡ ಸಲಹೆ ಉದಯರಶ್ಮಿ ದಿನಪತ್ರಿಕೆ ಅಥಣಿ: ಬಿಸಿಲಿನ ಬೇಗುದಿಗೆ ಕೃಷ್ಣ ನದಿಯಲ್ಲಿನ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಹಿಪ್ಪರಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಕೂಡಾ ತೀರಾ ಕಡಿಮೆಯಾಗಿರುವುದರಿಂದ ಅಲ್ಲಿರುವ ಜಲಚರ ಪ್ರಾಣಿಗಳು ನೀರಿನಿಂದ ಹೊರಗಡೆ ಬಂದು ವಲಸೆ ಹೋಗುತ್ತಿವೆ. ಆಹಾರವನ್ನು ಅರಸಿಕೊಂಡು ಮೊಸಳೆಗಳು ರೈತರ ಹೊಲ-ಗದ್ದೆಗಳಿಗೆ ನುಸುಳುತ್ತಿವೆ. ಇದರಿಂದ ನದಿ ಪಾತ್ರದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಬುಧವಾರ ಮುಂಜಾನೆ ನದಿ ಪಾತ್ರದಲ್ಲಿ ದೊಡ್ಡ ಮೊಸಳೆ ಕಂಡಿತ್ತು. ಗ್ರಾಮದ ರೈತರು ಮತ್ತು ಯುವಕರು ಒಗ್ಗೂಡಿ ಬಲೆ ಬೀಸಿ 12 ಅಡಿ ಉದ್ದದ ದೊಡ್ಡ ಮೊಸಳೆಯನ್ನು ಹಿಡಿದು ಹಗ್ಗದಿಂದ ಬಂಧಿಸಿ ವಾಹನದಲ್ಲಿ ಹಾಕಿಕೊಂಡು ಅಥಣಿಯ ಪ್ರಾದೇಶಿಕ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.ಶಿರಹಟ್ಟಿ ಗ್ರಾಮಸ್ಥರು ಒಗ್ಗಟ್ಟಿನಿಂದ ಹಿಡಿದಿರುವ ಈ ದೊಡ್ಡ ಗಾತ್ರದ ಮೊಸಳೆಯನ್ನು ಹಿಡಕಲ್ಲ್ ಜಲಾಶಯದ ನೀರಿನಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ ಎಂದು ಅರಣ್ಯ ಅಧಿಕಾರಿ ರಾಕೇಶ ಅರ್ಜುನವಾಡ ತಿಳಿಸಿದ್ದಾರೆ.ಕೃಷ್ಣಾ ನದಿಯಲ್ಲಿ ಹಾಗೂ ರೈತರ ಕಬ್ಬಿನ ತೋಟಗಳಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫-೨೦೨೬ ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಪ್ರತಿ ಕ್ವಿಂಟಾಲ್ ಗೆ ೮ ಸಾವಿರ ರೂ.ಗಳಂತೆ ಖರೀದಿಸಲಾಗುತ್ತಿದೆ. ಖರೀದಿ ಅವಧಿಯನ್ನು ಮೇ ೧೮ ರವರೆಗೆ ವಿಸ್ತರಿಸಲಾಗಿದೆ.ಈ ಹಿಂದೆ ಖರೀದಿ ಅವಧಿ ಮಾ. ೩೧ಕ್ಕೆ ಮುಕ್ತಾಯಗೊಂಡಿದ್ದು, ಸರ್ಕಾರದ ಆದೇಶದಲ್ಲಿ ತೊಗರಿ ಉತ್ಪನ್ನವನ್ನು ಖರೀದಿಸುವ ಅವಧಿಯನ್ನು ಮೇ ೧೮ ರವರೆಗೆ ವಿಸ್ತರಿಸಿ ಈ ಮೊದಲು ನೋಂದಾಯಿಸಿದ ರೈತರಿಂದ ಮಾತ್ರ ಖರೀದಿಸುವ ನಿರ್ದೇಶನವಿದೆ.ಹಾಗಾಗಿ ವಿಸ್ತರಿಸಲಾದ ದಿನಾಂಕದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕನಿಷ್ಠ ಬೆಂಬಲ ಬೆಲೆ ಕಾರ್ಯಪಡೆ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಜಿಲ್ಲೆಯ ಆಕ್ಸಫರ್ಡ್ ಶಾಲೆಯ ಸೌಜನ್ಯಾ ರಾಜ್ಯ, ಜಿಲ್ಲೆಗೆ ಪ್ರಥಮ | ಫಲಿತಾಂಶದಲ್ಲಿ ಗಣನೀಯ ಸುಧಾರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಶೇ.೯೪.೧೬ ರಷ್ಟಾಗಿದ್ದು, ಜಿಲ್ಲೆ, ಈ ಬಾರಿ ರಾಜ್ಯ ಮಟ್ಟದಲ್ಲಿ ಫಲಿತಾಂಶದಲ್ಲಿ ಗಣನೀಯ ಸುಧಾರಣೆ ಕಂಡಿದೆ.ಈ ಬಾರಿ ಜಿಲ್ಲೆಯ ಫಲಿತಾಂಶ ಶೇ. ೯೪.೧೬ ರಷ್ಟಾಗುವ ಮೂಲಕ ಉತ್ತಮ ಸಾಧನೆ ಮಾಡಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು ೩೮೪೨೩ ಮಕ್ಕಳ ಪೈಕಿ ೩೬೧೮೦ ಮಕ್ಕಳು ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.ಈ ವರ್ಷದ ಫಲಿತಾಂಶದಲ್ಲಿ ಗಣನೀಯ ಹೆಚ್ಚಳವಾಗಿದೆ.ಸೌಜನ್ಯಾ ರಾಜ್ಯ, ಜಿಲ್ಲೆಗೆ ಪ್ರಥಮ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸೌಜನ್ಯಾ ಬಸವರಾಜ ಕಂದಕೂರ ೬೨೫ಕ್ಕೆ ೬೨೫ ಅಂಕ ಗಳಿಸುವ ಮೂಲಕ ರಾಜ್ಯ ಕ್ಕೆ ಪ್ರಥಮ ಸ್ಥಾನ ಪಡೆದ ೭ ಮಕ್ಕಳ ಪೈಕಿ ಒಬ್ಬರಾಗಿದ್ದು, ತನ್ಮೂಲಕ ರಾಜ್ಯ ಹಾಗೂ ಮತ್ತು ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೆಶಕರಾದ ವೀರಯ್ಯ…

Read More

ಪುಣೆಯ ಬಸವ ತಿಳುವಳಿಕೆ & ಸಂಶೋಧನೆ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ & ಪದಾಧಿಕಾರಿಗಳಿಂದ ಒಕ್ಕೊರಲಿನ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಕ್ಕ ಮಹಾದೇವಿಯ ಅರೆಬೆತ್ತಲೆ ಪ್ರತಿಮೆ ಸ್ಥಾಪನೆ ಮಾಡಿರುವುದು ಸ್ತ್ರೀ ಕುಲಕ್ಕೆ ಅಗೌರವ, ಕೂಡಲೇ ಆ ಪ್ರತಿಮೆ ತೆರವುಗೊಳಿಸಿ, ಗೌರವ ತರುವ ರೀತಿಯಲ್ಲಿ ಅಕ್ಕಮಹಾದೇವಿ ಪ್ರತಿಮೆ ಸ್ಥಾಪಿಸಬೇಕು ಎಂದು ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಆಗ್ರಹಿಸಿದರು.ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಕ್ಕ ಮಹಾದೇವಿ ಬಟ್ಟೆಯನ್ನು ಉಡುವುದನ್ನು ಬಿಟ್ಟಿರಲೇ ಇಲ್ಲ, ಕೆಲವು ಸನಾತನಿಗಳ ಕುತಂತ್ರದಿಂದ ಅಕ್ಕಮಹಾದೇವಿ ಗೌರವಕ್ಕೆ ಚ್ಯುತಿ ಬರುವ ಕೆಲಸ ಮಾಡುತ್ತಿದೆ, ಹೀಗಾಗಿ ಕೂಡಲೇ ಅಕ್ಕಮಹಾದೇವಿ ಮಹಿಳಾ ವಿವಿ ಆವರಣದಲ್ಲಿರುವ ಪ್ರತಿಮೆಯನ್ನು ಸ್ಥಳಾಂತರಿಸಿ ಹೊಸ ಪ್ರತಿಮೆ ಸ್ಥಾಪಿಸಿ ಎಂದು ಒತ್ತಾಯಿಸಿದರು.ಬಸವ ಜನ್ಮ ಭೂಮಿಯಲ್ಲಿರುವ ಅಕ್ಕಮಹಾದೇವಿ ಮಹಿಳಾ‌ ವಿವಿಯಲ್ಲಿಯೇ ಬಸವ ಅಧ್ಯಯನ ಪೀಠ ಇಲ್ಲದಿರುವುದು ನೋವಿನ ಸಂಗತಿ, ಅನೇಕ ಬಾರಿ ಮನವಿ ಸಲ್ಲಿಸಿದರೂ ಸಹ ಸರ್ಕಾರ ಈ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಗುರುವಾರ ನಡೆದ ವೃತ್ತಿಪರ ಕೋರ್ಸ್ ಗಳ ಪ್ರವೇಶ ಪರೀಕ್ಷೆಯ ಮೊದಲ ದಿನ ಭೌತಶಾಸ್ತ್ರ ವಿಷಯದ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪರೀಕ್ಷಾ ಕೇಂದ್ರಗಳ ವ್ಯವಸ್ಥೆಗಳನ್ನು ಸಮಗ್ರವಾಗಿ ಅವಲೋಕಿಸಿದರು.ಪರೀಕ್ಷಾರ್ಥಿಗಳಿಗೆ ಕಲ್ಪಿಸಲಾದ ಕುಡಿಯುವ ನೀರು, ಸಮರ್ಪಕ ಬೆಳಕು ಮತ್ತು ಗಾಳಿ ವ್ಯವಸ್ಥೆ, ಆಸನದ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನಿಖರವಾಗಿ ಪರಿಶೀಲಿಸಿದರು. ಪರೀಕ್ಷಾ ಕೇಂದ್ರಗಳಲ್ಲಿ ಮೇಲ್ವಿಚಾರಕರು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿರುವುದು, ಅಭ್ಯರ್ಥಿಗಳು ನಿಯಮಾನುಸಾರ ಪರೀಕ್ಷೆಗೆ ಹಾಜರಾಗಿರುವುದು ಹಾಗೂ ಯಾವುದೇ ಲೋಪಗಳಿಗೆ ಅವಕಾಶ ಇಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಅವರು ಖಚಿತಪಡಿಸಿಕೊಂಡರು.ಸಿಸಿಟಿವಿ ನಿಗಾ ವ್ಯವಸ್ಥೆ, ಪ್ರವೇಶ ದ್ವಾರಗಳಲ್ಲಿ ಭದ್ರತಾ ತಪಾಸಣೆ ಹಾಗೂ ಪೊಲೀಸ್ ಬಂದೋಬಸ್ತ್ಗಳ ಕುರಿತು ಮಾಹಿತಿ ಪಡೆದು,ವ್ಯವಸ್ಥೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭೌತಶಾಸ್ತ್ರ ಪ್ರಮುಖ ವಿಷಯದ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಿಕ್ಕು ತೋರಿಸುವಂತಿವೆ. ಆದ್ದರಿಂದ ಪರೀಕ್ಷೆಗಳು ಸಂಪೂರ್ಣ ಪಾರದರ್ಶಕವಾಗಿ, ನ್ಯಾಯಬದ್ಧವಾಗಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆ-೧ರ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು ಪಟ್ಟಣದ ಪ್ರಕಾಶ ಚೌಧರಿ ಅವರ ಎಚ್‌ಟಿಕೆ ಚೌಧರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಪರೀಕ್ಷೆಗೆ ಕುಳಿತ ೪೫ ವಿದ್ಯಾರ್ಥಿಗಳಲ್ಲಿ ೩೧ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೧೪ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.ಶೃತಿ ಜೋಗೂರ ಶೇ.೯೮.೭, ಶಂಕ್ರೇಮ್ಮ ನಾಟಿಕಾರ ಶೇ.೯೮.೨, ಸ್ನೇಹಾಂಜಲಿ ನಾಯ್ಕೊಡಿ ಶೇ.೯೮.೨, ಮುತ್ತುರಾಜ ಕುಂಬಾರ ಶೇ.೯೮.೨, ಶರಥ ಅತನೂರ ಶೇ.೯೭.೯, ಮಲ್ಲನಗೌಡ ಧೂಮಗೊಂಡ ಶೇ.೯೭.೯, ಭುವನೇಶ್ವರಿ ಸಂಗೊಂಡ ಶೇ.೯೭.೮, ಸಂಗನಬಸು ಕ್ಯಾಗಾವಿ ಶೇ.೯೭.೩, ಗುರುರಾಜ ನಂದೂರ ಶೇ.೯೭.೩, ಭರತಸಜ್ಜನ ಶೇ.೯೬.೮, ಚೇತನ ಬಿರಾದಾರ ಶೇ.೯೬.೨, ಶಿವರಾಯ ಮೋಕಾಸಿ ಶೇ.೯೬.೨, ವರ್ಷಾ ಬಿರಾದಾಋ ಶೇ.೯೫.೮, ಅಂಬಿಕಾ ನಾವಿ ಶೇ.೯೫.೭, ಶರಣ ಮ್ಮ ಕುಂಬಾರ ಶೇ.೯೫.೨, ಅಜಯ ಅಂದೋಡಗಿ ಶೇ.೯೫, ಗಂಗಾಧರ ಪೂಜಾರಿ ಶೇ.೯೪.೯, ಶಿವರಾಜ ಕೆಂಚಗೊಂಡ ಶೇ.೯೪.೭, ಯಲ್ಲಾಲಿಂಗ ನಗನೂರ ಶೇ.೯೪.೬, ಶಂಕರಲಿಂಗ ಅರಳಗುಂಡಗಿ ಶೇ.೯೪.೧, ಲಕ್ಷ್ಮಿ ನಾವಿ ಶೇ.೯೩.೮ ಅಂಕಗಳನ್ನು ಪಡೆದು ಉತ್ತಮ ಸಾಧನೆ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆ-ರ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು ಪಟ್ಟಣದ ಪ್ರಕಾಶ ಚೌಧರಿ ಅವರ ಆಕ್ಷಫರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶೇ.೧೦೦ ರಷ್ಟಾಗಿದೆ. ಪರೀಕ್ಷೆಗೆ ಕುಳಿತ ೬೪ ವಿದ್ಯಾರ್ಥಿಗಳಲ್ಲಿ ೪೫ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೧೯ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ಅಮೃತಾ ದೊಡಮನಿ ಶೇ.೯೮.೭೨, ಸಾನಿಕಾ ಬಿರಾದಾರ ಶೇ.೯೮.೨೪, ಭೂಮಿಕಾ ಶಿವಣಗಿ ಶೇ.೯೭.೭, ಅಭಿಲಾಶಾ ಕೆರಕಿ ಶೇ.೯೭.೪, ಸಾಗರ ಸ್ಥಾವರಮಠ ಶೇ.೯೭.೪, ಸ್ನೇಹಾ ಜೋಗುರ ಶೇ.೯೭.೪, ಸಮರ್ಥ ಕಾಬಾ ಶೇ.೯೬.೯, ವರಪ್ರಸಾದ ಹೂಗಾರ ಶೇ.೯೬.೯, ವಿಜಯರೆಡ್ಡಿ ಬಿರಾದಾರ ಶೇ.೯೬.೯, ಸುನೀಲ ರೂಗಿ ಶೆ.೯೬.೬, ಅಪೂರ್ವಾ ಚುಂಚೂರ ಶೇ.೯೬.೪, ಅರ್ಪಿತಾ ಕತ್ತಿ ಶೇ.೯೬.೧, ಅಭಿಶೇಷ ಮಡಕೇಶ್ವರ ಶೇ.೯೬, ಗುರುಶಾಂತ ಕುಂಬಾರ ಶೇ.೯೫.೬, ಶಿವಕುಮಾರ ಹಿರೇಮಠ ಶೇ.೯೫.೩, ಶ್ರೀಗಿರಿ ಚಾವರ ಶೇ.೯೫.೩, ಲಕ್ಷಿö್ಮ ಚಿಂಚೊಳ್ಳಿ ಶೇ.೯೫.೨, ಸಮೀರ ಚವ್ಹಾಣ ಶೇ.೯೪.೮, ಸಂಗನಗೌಡ ಬಳವಟಿ ಶೇ.೯೪.೫, ಮಲ್ಲಿಕಾರ್ಜುನ ಕುಂಬಾರ ಶೇ.೯೪.೨, ಕಾರ್ತಿ ಚವ್ಹಾಣ ಶೇ.೯೪.೮, ಸೌಮ್ಯಶ್ರೀ ಕಲ್ಲೂರ ಶೇ.೯೪.೮, ಸಮರ್ಥ ಬಬಲೇಶ್ವರ ಶೇ.೯೩.೭, ಸಾಯಿಪ್ರಸಾದ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಹೊರವಲಯದ ಆಲಮೇಲ ರಸ್ತೆಯಲ್ಲಿರುವ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೧ರಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ-೧ರಲ್ಲಿ ೮೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ೫೬, ಪ್ರಥಮ ಶ್ರೇಣಿ ೨೬, ದ್ವಿತೀಯ ಶ್ರೇಣಿ ೦೨ ವಿದ್ಯಾರ್ಥಿಗಳು ಪಾಸಾಗಿದ್ದು, ಶಾಲೆಯ ಒಟ್ಟು ಫಲಿತಾಂಶ ಶೇ.೧೦೦ಕ್ಕೆ ೧೦೦ರಷ್ಟಾಗಿದೆೆ.ಅನುಸುಯಾ ಹಿರೇಮಠ ೬೨೫ ಅಂಕಗಳಿಗೆ ೬೧೫ (ಶೇ.೯೮.೪೦), ಅಂಕಗಳು ಪಡೆದು ಪ್ರಥಮ ಸ್ಥಾನ, ವೈಷ್ಣವಿ ರೇವೂರ ೬೧೩ (ಶೇ.೯೮.೦೮), ದ್ವಿತೀಯ, ಶಿವಾನಿ ಬಿರಾದಾರ ೬೦೮ (ಶೇ.೯೭.೨೮) ತೃತೀಯ, ಸಂಜೀವ ಬಮ್ಮಣ್ಣಿ ೬೦೬ (ಶೇ.೯೬.೯೬), ವೇದಾ ಬಾಗಲಕೋಟ ೬೦೬ (೯೬.೯೬%), ಅಪೇಕ್ಷಾ ಹುಗ್ಗಿ ೬೦೧ (೯೬.೯೬%), ಆದರ್ಶ ಚಾಂದಕವಟೆ ೫೯೯ (೯೫.೮೪%), ಪೂರ್ವಿ ಪಟ್ಟಣಶೆಟ್ಟಿ ೫೯೮ (೯೫.೬೮%), ಶ್ರೇಯಾ ಅಗಸರ ೫೯೮ (೯೫.೬೮%), ಸುಕೃತಾ ತೋಟದ ೫೯೮ (೯೫.೬೮%), ಪ್ರಜ್ವಲ ಕಂಗಾಳ ೫೯೭ (೯೫.೫೨%), ವಿಶ್ವಾಸ ಬಗಲಿ ೫೯೭ (೯೫.೫೨%),…

Read More