Author: editor.udayarashmi@gmail.com

ಕಲಕೇರಿಯಲ್ಲಿ ಕಾಯಕ ನಿಧಿ ವಿವಿದೋದ್ದೇಶಗಳ ಸ್ವಸಹಾಯ ಸಂಘದಿಂದ ಟೈಲರ‍್ಸ್ ದಿನಾಚರಣೆ ಮತ್ತು ಹೊಸ ಕಾರ್ಡ ವಿತರಣೆ ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ವಲಯ ಸಮಿತಿ ಕಲಕೇರಿ ಇದರ ಅಡಿಯಲ್ಲಿ ಕಾಯಕ ನಿಧಿ ವಿವಿದೋದ್ದೇಶಗಳ ಸ್ವಸಹಾಯ ಸಂಘದ ವತಿಯಿಂದ ಗ್ರಾಮದ ಶ್ರೀ ಗುರು ಮರುಳಾರಾಧ್ಯ ಹಿರೇಮಠದಲ್ಲಿ ಟೈಲರ‍್ಸ್ ದಿನಾಚರಣೆ ಮತ್ತು ಹೊಸ ಕಾರ್ಡ ವಿತರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಸಿ ಮಾತನಾಡಿದ ಸಂಘದ ಶಾಂತಯ್ಯ ವೀ. ಹಿರೇಮಠ ಅವರು, ವೃತ್ತಿ ಬದುಕಿನ ಭದ್ರತೆಯ ಕಳವಳದ ನಡುವೆಯೂ ಕೂಡಾ ನಾಳಿನ ನಮ್ಮ ಭವಿಷ್ಯದೆಡೆಗೆ ಈ ಹೃದಯ ಕಾತರಿಸುತ್ತಿದೆ, ಈ ಸಂಘಟನೆಯ ನಡುವಿನಿಂದ ಬಂದಾನೊಬ್ಬ ಕಲಾವಿದ, ಬರಿದಾದ ನಮ್ಮ ವೃತ್ತಿ ಬದುಕಿನ ಅಂಗಳದ ಮೇಲೆ ಭರವಸೆಯ ನವ ಚಿತ್ತಾರ ಬಿಡಿಸಿ ನಮ್ಮೆಲ್ಲರ ಬದುಕನ್ನು ಹಸನಗೊಳಿಸಿಯಾನು ಎಂಬ ಸಂತಸದಲಿ ಮತ್ತೆ ಈ ದಿನವನ್ನು ಪ್ರೀತಿಯಿಂದ ಸ್ವಾಗತಿಸೋಣ ಎಂದರು.ನೋವಿರಲಿ ನಲಿವಿರಲಿ ಕಷ್ಟವಿರಲಿ ಸುಖವಿರಲಿ ಸಂಘಟನೆ ಎನ್ನುವ ತೇರನ್ನು ಜೊತೆಯಾಗಿ ಎಳೆಯೋಣ, ಇಂದೋ ನಾಳೆಯೋ ತೇರನೆಳೆದ…

Read More

ಇಂಡಿಯಲ್ಲಿ ’ಭೀಮಾಂತರಂಗ’ ಕೃತಿ ಲೋಕಾರ್ಪಣೆ ಮಾಡಿದ ಶಾಸಕ ಯಶವಂತರಾಯಗೌಡ ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ಇಂಡಿ: ಭೀಮಾ ನದಿಗೆ “ಭೀಮಾ ತೀರದ ಹಂತಕರು” ಎಂದು ವಿಕಾರತೆ ಹುಟ್ಟು ಹಾಕುವ ಭಾವನೆ ಹುಟ್ಟು ಹಾಕುವ ಪದ ಬಳಕೆ ಬೇಡ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.ಅವರು ಶನಿವಾರ ಪಟ್ಟಣದ ಕರ್ನಾಟಕ ಬಿಈಡಿ ಮಹಾವಿದ್ಯಾಲಯದಲ್ಲಿ ಭೀಮಾಂತರಂಗ ಸಾಹಿತ್ಯಿತ ಸಾಂಸ್ಕೃತಿಕ ಜಗಲಿ ವತಿಯಿಂದ ನಡೆದ ಭೀಮಾಂತರಂಗ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.ಭೀಮಾ ತೀರದಲ್ಲಿ ಅನೇಕ ಯುಗ ಪುರುಷರು, ಸಾಹಿತಿಗಳು, ಸಮಾಜದ ಚಿಂತಕರು ಕಾರ್ಯ ಮಾಡಿದ್ದಾರೆ. ಮಾಡುತ್ತಿದ್ದಾರೆ. ಭೀಮಾತೀರ ನಮ್ಮ ಅಂತರಂಗದ ಶಬ್ದವಾಗಬೇಕು.ಭೀಮಾ ಭಾಗದ ಸಾಹಿತ್ಯದ ಹಿರಿಮೆ ಗರಿಮೆ ಜನರಿಗೆ ತಲುಪಿಸುವ ಕಾರ್ಯವಾಗಬೇಕಾಗಿದೆ. ಈ ದಿಸೆಯಲ್ಲಿ ಭೀಮಾಂತರಂಗ ಜಗುಲಿ ಮಾಡುತ್ತಿರುವ ಕಾರ್ಯ ಪ್ರಶಂಸನೀಯ.ಭೀಮಾಂತರಂಗ ಸಾಹಿತ್ಯವನ್ನು ಯುವ ಜನಾಂಗಕ್ಕೆ ತಲುಪಿಸುವ ಸ್ಪೂರ್ತಿಸುವ ಕಾರ್ಯ ಮಾಡುತ್ತಿದ್ದು ಮತ್ತು ಭೀಮಾ ನದಿ ಒಳ್ಳೆಯ ಇತಿಹಾಸ ಪರಂಪರೆ ಹೊಂದಿದ್ದು ಭಾವನಾತ್ಮಕವಾಗಿ ಭೀಮೆಗೆ ಕೆಟ್ಟ ಪದಗಳನ್ನು ಬಳಕೆ ಬೇಡ. ಈ ದಿಶೆಯಲ್ಲಿ ಎಲ್ಲರೂ ಕೆಲಸಮಾಡಬೇಕಾಗಿದೆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಶನಿವಾರ ನ್ಯಾಯಾಲಯಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತನ್ನು ಏರ್ಪಡಿಸಲಾಗಿತ್ತು.ಎರಡು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು ೭೭೭೧ ಬಾಕಿ ಇರುವ ಪ್ರಕರಣಗಳ ಪೈಕಿ ೨೩೭೦ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪ್ರಕರಣಗಳಲ್ಲಿ ಒಟ್ಟು ೧೯೭೯ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಅದರಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೆಂಟೇನೆನ್ಸ್ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು, ಎಲ್‌ಎಸಿ ಇಪಿ, ಎಮ್‌ವಿಸಿ ಇಪಿ ಪ್ರಕರಣಗಳು, ಅಪರಾಧ ದಂಡ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು. ಮತ್ತು ಪೂರ್ವದಾವೆ ಪ್ರಕರಣಗಳಲ್ಲಿ, ಟ್ರಾಫಿಕ್ ಚಲನ್ ಪ್ರಕರಣಗಳು, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಹಾಗೂ ಬ್ಯಾಂಕಿನ ಪ್ರಕರಣಗಳು ಹೀಗೆ ಒಟ್ಟು ೧೮೬೬ ಪ್ರಕರಣಗಳಲ್ಲಿ ೮೯೭ ಪ್ರಕರಣಗಳು ರಾಜಿ ಸಂಧಾನದ ಮೂಲಕ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ…

Read More

ಮುದ್ದೇಬಿಹಾಳ ನ್ಯಾಯಾಲಯದಲ್ಲಿ ರಾಜಿ ಸಂಧಾನ ಮೂಲಕ ಇತ್ಯರ್ಥವಾದ ಕೌಟುಂಬಿಕ ಕಲಹ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕೌಟುಂಬಿಕ ಕಲಹದಡಿ ಒಂದು ಮಗುವಿನ ಸಮೇತ ದೂರವಾಗಿದ್ದ ದಂಪತಿಯನ್ನು ಮತ್ತೆ ಒಂದುಗೂಡಿಸಿದ ಘಟನೆ ಪಟ್ಟಣದ ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಕಿರಿಯ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಳಗಿಡದ ಅವರ ನೇತೃತ್ವದಲ್ಲಿ ನಡೆಯಿತು.ಕಳೆದ ಎರಡು ವರ್ಷಗಳಿಂದ ದಂಪತಿಗಳ ಮಧ್ಯೆ ಭಿನ್ನಾಭಿಪ್ರಾಯ ಮೂಡಿ ಇಲ್ಲಿನ ಕಿರಿಯ ಶ್ರೇಣಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯದ ಅಡಿ ಪ್ರಕರಣ ದಾಖಲಾಗಿತ್ತು. ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಳಗಿಡದ ಅವರು ದಂಪತಿ ಹಾಗೂ ಅವರ ಸಂಬಂಧಿಕರು ಮತ್ತು ವಕೀಲರೊಂದಿಗೆ ಸಮಾಲೋಚಿಸಿ ರಾಜಿ ಸಂಧಾನದ ನಡೆಸಿದರು.ದಂಪತಿಗಳು ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಅನ್ಯೂನ್ಯವಾಗಿ ಜೀವನ ನಡೆಸುವದಾಗಿ ಒಪ್ಪಿದ ಕಾರಣ ಕಾನೂನು ಸೇವಾ ಸಮಿತಿಯ ವತಿಯಿಂದ ನ್ಯಾಯಾಲಯದಲ್ಲಿ ದಂಪತಿಗಳಿಗೆ ಹೂಮಾಲೆ ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಿ, ಸಿಹಿ ಹಂಚಿ ಲೋಕ್…

Read More

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ “ಮಹಿಳಾ ಸಾಂಸ್ಕೃತಿಕ ಹಬ್ಬ” ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳೆಯರಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟರೆ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಾಧ್ಯ. ಮಹಿಳೆ ಒಂದೇ ಕ್ಷೇತ್ರ ಅಲ್ಲದೇ ಹಲವಾರು ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಇಂದು ಇಡೀ ವಿಶ್ವದಲ್ಲೇ ಅಗ್ರಸ್ಥಾನ ಪಡೆದುಕೊಂಡಿದ್ದಾಳೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶನಿವಾರ ಆಯೋಜಿಸಿದ್ದ “ಮಹಿಳಾ ಸಾಂಸ್ಕೃತಿಕ ಹಬ್ಬ-೨೦೨೫” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳಾ ವಿಶ್ವವಿದ್ಯಾನಿಲಯ ಮಹಿಳೆಯರ ಶಕ್ತಿಯನ್ನು ಗುರುತಿಸುವ ಹಾಗೂ ಅವರ ಸೌಭಾಗ್ಯವನ್ನು ಬೆಳೆಸುವ ಪ್ರಮುಖ ಕೇಂದ್ರವಾಗಿದೆ. ಇದು ಕೇವಲ ಶಿಕ್ಷಣ ನೀಡುವ ಕೇಂದ್ರವಷ್ಟೇ ಅಲ್ಲ, ಮಹಿಳೆಯರಲ್ಲಿ ಆತ್ಮವಿಶ್ವಾಸ, ಸ್ವಾಯತ್ತತೆ ಮತ್ತು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಹೊರತಾಗಿ ತಿಳುವಳಿಕೆ ಹೆಚ್ಚಿಸುವ ಪುಸ್ತಕ ಓದಲು ಪ್ರೇರಣೆ ನೀಡಬೇಕಿದೆ ಎಂದು ವಿಜಯಪುರ ಡಯಟ್ ಉಪನ್ಯಾಸಕ, ಲೇಖಕ ನಾರಾಯಣ ಬಾಬಾನಗರ ಹೇಳಿದರು.ಇಂಡಿ ತಾಲ್ಲೂಕಿನ ನಿಂಬಾಳ ಕೆ. ಡಿ. ಗ್ರಾಮದ ಅವರಾದಿ ವಸ್ತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಸ ಸಂವಹನ ಸಂಘಟನೆ ಆಯೋಜಿಸಿದ್ದ ಗ್ರಂಥಗಳ ವಿತರಣೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಮೋಬೈಲ್, ಟಿವಿ ಗಳ ಮಧ್ಯದಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸಬೇಕಿದೆ ಎಂದರು. ಸರಸ ಸಂವಹನ ಸಂಘಟನೆ ಯು ಕಳೆದ ಹಲವಾರು ವರ್ಷಗಳಿಂದ ಸರಕಾರಿ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ ಮಾಡುವ ಕಾರ್ಯ ಮಾಡುತ್ತಿದೆ, ಶಾಲೆ ಕಾಲೇಜುಗಳಲ್ಲಿ ಉಪನ್ಯಾಸ, ಸಂವಾದ ಗಳ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತಿದೆ ಎಂದರು.ಶ್ರೀ ಗುರುದೇವ ತಪೋವನದ ಪೂಜ್ಯ ಶ್ರೀ ತೇಜೋಮಯಾನಂದ ಸ್ವಾಮಿಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ, ಇಂದಿನ ಮಕ್ಕಳಲ್ಲಿ ವಿದ್ಯೆಯ ಜೊತೆಗೆ ಸಂಸ್ಕಾರ ನೀಡುವ ಕಾರ್ಯ ಶಾಲೆಗಳಲ್ಲಿ ಆಗಬೇಕಿದೆ, ಆಶ್ರಮದ ಹತ್ತಿರ ದಲ್ಲಿಯೇ ಇರುವ…

Read More

ಭರವಸೆ ಈಡೇರಿಸಿದ ಸಿಎಂ ಸಿದ್ದರಾಮಯ್ಯ ರಿಗೆ ಕೆಯುಡಬ್ಲ್ಯೂಜೆ ಧನ್ಯವಾದ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ತುಮಕೂರಿನಲ್ಲಿ ನಡೆದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ನೀಡಿದ್ದ ಭರವಸೆಯಂತೆಬಜೆಟ್‌ನಲ್ಲಿ ಪತ್ರಕರ್ತರಿಗೆ ಮುಖ್ಯಮಂತ್ರಿ ಮಾಧ್ಯಮ ಸಂಜೀವಿನಿ ಆರೋಗ್ಯ ಯೋಜನೆ ಘೊಷಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಧನ್ಯವಾದ ತಿಳಿಸಿದ್ದಾರೆ.ಪತ್ರಕರ್ತರಿಗೆ ಪ್ರತ್ಯೇಕ ಹೆಲ್ತ್ ಸ್ಕೀಂ ತರಬೇಕು ಎನ್ನುವುದು ಬಹಳ ವರ್ಷಗಳ ಹೋರಾಟ. ಈ ನಿಟ್ಟಿನಲ್ಲಿ ಯೋಜನೆ ಪ್ರಪ್ರಥಮ ಬಾರಿಗೆ ೋಷಣೆಯಾಗಿದೆ. ಇದನ್ನು ಸ್ವಾಗತಿಸೋಣ ಎಂದು ಹೇಳಿದ್ದಾರೆ.ಇದೇ ಸಂದರ್ಭದಲ್ಲಿ ನಿವೃತ್ತ ಪತ್ರಕರ್ತರ ಮಾಸಾಶನವನ್ನು 12 ಸಾವಿರದಿಂದ 15 ಸಾವಿರಕ್ಕೆ ಮತ್ತು ಅವಲಂಬಿತರಿಗೆ 6 ಸಾವಿರದಿಂದ 7500ಕ್ಕೆ ಹೆಚ್ಚಳ ಮಾಡಿರುವುದಕ್ಕೂ ಧನ್ಯವಾದ ತಿಳಿಸಿದ್ದಾರೆ.ಸಂಘದ ಹಕ್ಕೊತ್ತಾಯಕ್ಕೆ ಸ್ಪಂದಿಸಿ ಈ ನಿಟ್ಟಿನಲ್ಲಿ ಬೇಡಿಕೆ ಈಡೇರಿಸಲು ಸಹಕಾರ ನೀಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಾದ ಕೆ.ವಿ.ಪ್ರಭಾಕರ್ ಅವರಿಗೂ ಧನ್ಯವಾದ ತಿಳಿಸಿದ್ದಾರೆ.ಯೋಜನೆ ವಿಸ್ತರಿಸಲಿ:ಆರೋಗ್ಯ ಯೋಜನೆಯನ್ನು ಮಾಧ್ಯಮ ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ಸೀಮಿತ ಮಾಡದೇ, ಮುಂದೆ ವಾರ್ತಾ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಐತಿಹಾಸಿಕ ವಿಜಯಪುರ ನಗರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಲಿಗೆ ಹಬ್ಬ (ಹಲಿಗೆ ಸ್ಪರ್ಧೆ) ಯನ್ನು ಶ್ರೀ ರಾಮನವಮಿ ಉತ್ಸವ ಸಮಿತಿಯ ವತಿಯಿಂದ ಸಮಿತಿಯ ಅಧ್ಯಕ್ಷ ಉಮೇಶ ವಂದಾಲ ನೇತೃತ್ವದಲ್ಲಿ ಹಲ್ಲಿಗೆ ಬಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಮಾರ್ಚ ೧೦ ರಂದು ಹಲಿಗೆ ಹಬ್ಬಸ್ಪರ್ಧಾಗಳು ಹೆಸರು ನೊಂದಾಯಿಸಿಕೊಳ್ಳಲು ಉಮೇಶ ವಂದಾಲ ಕರೆ ನೀಡಿದ್ದಾರೆ.ಉತ್ತರ ಕರ್ನಾಟಕದ ಐತಿಹಾಸಿಕ ಹಬ್ಬಗಳಲ್ಲಿ ಒಂದಾದ ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ಪ್ರತಿಯೊಂದು ಹಳ್ಳಿ ನಗರಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಪ್ರತಿ ಓಣಿಗಳಲ್ಲಿ ಹಲಿಗೆಯ ಬಾರಿಸುವ ಸಾಂಪ್ರದಾಯ ನಡೆದುಕೊಂಡು ಬಂದಿದ್ದು ಇತ್ತೀಚಿನ ದಿನಗಳಲ್ಲಿ ಈ ಸಂಪ್ರದಾಯವು ನಶಿಸಿ ಹೊರಟಿರುವುದು ವಿಪರ್ಯಾಸವೇ ಸರಿ. ಇಂದಿನ ಆಧುನಿಕತೆಯ ಭರಾಟೆಯಲ್ಲಿ ಯುವ ಪೀಳಿಗೆಗೆ ಹಬ್ಬಗಳ ಬಗೆಗಿನ ಪ್ರೀತಿ ಮತ್ತು ಉತ್ಸಾಹ ಕಡಿಮೆಯಾಗದಿರಲೆಂದು ಮತ್ತು ನಮ್ಮ ಸಂಸ್ಕೃತಿ ಹಬ್ಬಗಳು ಉಳಿಯಬೇಕೆಂಬ ಸದುದ್ದೇಶದಿಂದ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.ದಿನಾಂಕ : ೧೦.೦೩.೨೦೨೫ರಂದು ಸಾಯಂಕಾಲ ನಾಲ್ಕು ಗಂಟೆಗೆ ನಗರದ ಶಿವಾಜಿ ವೃತ್ತದಲ್ಲಿ ಏರ್ಪಡಿಸಲಾಗಿದ್ದು ಎಲ್ಲಾ ಸಾರ್ವಜನಿಕರು ಹಾಗೂ ಹಲ್ಲಿಗೆಯ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕಿನ ಕತಕನಹಳ್ಳಿ ಗ್ರಾಮದ ಮಾತೋಶ್ರೀ ಶಂಕ್ರೆಮ್ಮಾ ತಾಯಿ ಪ್ರಾಥಮಿಕ ಶಾಲೆಯಲ್ಲಿ ೭ ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಇತ್ತೀಚೆಗೆ ಜರುಗಿತು.ಕಾರ್ಯಕ್ರಮದ ಅದ್ಯಕ್ಷ ಸ್ಥಾನ ಸಂಸ್ಥೆಯ ನಿರ್ದೇಶಕ ಬಸವರಾಜ ಅರಕೇರಿ ವಹಿಸಿದ್ದರು.ಮುಖ್ಯ ಅತಿಥಿ ಎಕ್ಸಲಂಟ್ ಪಿ ಯು ಕಾಲೇಜಿನ ಉಪಪ್ರಾಚಾರ್ಯ ಮಂಜುನಾಥ ಜುನಗೊಂಡ ಮಾತನಾಡಿ, ಇಂದಿನ ಸ್ಪರ್ದಾಜಗತ್ತಿನಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಸರಕಾರಿ ಹುದ್ದೆಯಲ್ಲಿ ನೇಮಕಾತಿ ಆಗಬೇಕು ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಅದ್ಬುತವಾಗಿರಬೇಕು ಈ ಸ್ಪರ್ದಾಜಗತ್ತಿನ ಸ್ಪರ್ದಾ ಪರೀಕ್ಷೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿ ಜೀವನದಲ್ಲಿ ಏನಾದರು ಒಳ್ಳೆಯ ಸಾಧನೆ ಮಾಡಲು ಈ ಚಿಕ್ಕ ವಯಸ್ಸಿನಿಂದಲೆ ಗುರಿಯನ್ನು ಇಟ್ಟುಕೊಳ್ಳಬೇಕು. ನಿಮ್ಮ ಬಗ್ಗೆ ತಂದೆ ತಾಯಿ ಕಾಣುವ ಒಳ್ಳೆಯ ಆಸೆ ಆಕಾಂಕ್ಷೆಗಳನ್ನು ಈಡೇರಿಸಬೇಕು. ತಾಯಿ ಯಾವಾಗಲು ತಮ್ಮ ಬಗ್ಗೆ ಒಳ್ಳೆಯ ಕನಸು ಕಾಣುತ್ತಿರುತ್ತಾಳೆ. ಆ ಕನಸು ತಾವು ಈಡೇರಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.ಶಾಲೆಯ ಮುಖ್ಯಗುರು ಅರವಿಂದ ಪವಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು.ವೇದಿಕೆಯಲ್ಲಿ ಪ್ರಮುಖರಾದ ಅಪ್ಪಾಸಾಹೇಬ ಕೊಟ್ಯಾಳ, ಶರಣಪ್ಪ ಬಬಲೇಶ್ವರ, ಸಾಹೇಬಗೌಡ ಬಿರಾದಾರ,…

Read More

ಸಾಮಾಜಿಕ ಛಾಫು ಬಿತ್ತಿ ಮರೆಯಾದ ಬನಹಟ್ಟಿಯ ಹಿರಿಯ ಚೇತನ ಉದಯರಶ್ಮಿ ದಿನಪತ್ರಿಕೆ ವರದಿ: ಗುಲಾಬಚಂದ ಜಾಧವಚಿಕ್ಕಪಡಸಲಗಿ: ಸರಳ, ಸಜ್ಜನಿಕೆಯ ಸತ್ಕಾರ್ಯಗಳಿಂದ ತಮ್ಮದೇ ವಿಶೇಷ ಛಾಪು ಮೂಡಿಸಿ ಶಿಸ್ತು, ಬದ್ದತೆಗೆ ಹೆಸರುವಾಸಿಯಾಗಿದ್ದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದ ಹಿರಿಯ ಚೇತನ, ಜವಳಿ ಕ್ಷೇತ್ರಕ್ಕೆ ಹೊಸ ಭಾಷ್ಪ ಬರೆದು ಅಸ್ತಂಗತರಾದ ಅಮೂಲ್ಯ ಜೀವ ರತ್ನ ನಿಂಗಪ್ಪ ರಾಚಪ್ಪ ಹೊನವಾಡ ಈಗ ಬರೀ ನೆನಪು !ಆದರ್ಶತನದ ಬೆಸುಗೆಯಲ್ಲಿ ಇಡೀ ಜೀವಪಥ ಸಾಗಿಸಿಕೊಂಡ ಬಂದ ನಿಂಗಪ್ಪ ಹೊನವಾಡ ಸಾವಲ್ಲೂ ಮಾನವೀಯತೆ ಮೆರೆದಿದ್ದಾರೆ. ಮೃತರು ಬಾಗಲಕೋಟೆ ಬಿವಿವಿ ನೇತ್ರ ಭಂಡಾರ ಮತ್ತು ಪಾರದರ್ಶಕ ಪಟಲ ಜೋಡಣಾ ಕೇಂದ್ರಕ್ಕೆ ನೇತ್ರದಾನದ ವಾಗ್ದಾನ ಮಾಡಿದ್ದಾರೆ. ಈ ಬಗ್ಗೆ ಕೇಂದ್ರದವರು ಕೃತಜ್ಞತೆಯ ಪತ್ರವನ್ನು ನೀಡಿ ಶ್ಲಾಘಿಸಿದ್ದಾರೆ. ಮತ್ತೊಬ್ಬರಿಗೆ ದೃಷ್ಟಿ ಭಾಗ್ಯ ನೀಡಿ ಮರೆಯಾಗಿರುವ ನಿಂಗಪ್ಪ ಹೊನವಾಡ ನೇಕಾರಿಕೆ ರಂಗದ ಪ್ರೇರಕ.ಜವಳಿ ಕ್ಷೇತ್ರದ ಮಾಣಿಕ್ಯರಾಗಿದ್ದರು. ತಮ್ಮ 93 ನೇ ಮುಸ್ಸಂಜೆಯ ಇಳಿವಯಸ್ಸಿನಲ್ಲಿ ಗುರುವಾರ ಬೆಳಗಿನ ಜಾವ ಇಹಲೋಕ ತ್ಯಜಿಸಿದರು. ಅವರ ಜೀವನ ರಂಗ ಶ್ರೇಷ್ಠ…

Read More